Connect with us

Hassan

ಅವ್ವ ದತ್ತಿ ಪ್ರಶಸ್ತಿಗೆ ಲೇಖಕ ಸಾಹಿತಿ ಹಾಗೂ ಶಿಕ್ಷಕ ಪರಮೇಶ್ ಮಡಬಲು ಆಯ್ಕೆ

Published

on

ಆಲೂರು:ಎಂ.ವಿ.ತ್ಯಾಗರಾಜ್ ಅಭಿನಂದನಾ ಸಮಿತಿ ಹಾಗೂ ಸುಮಂಗಲಿ ಸೇವಾಶ್ರಮ ಬೆಂಗಳೂರು ವತಿಯಿಂದ 2025 ನೇ ಸಾಲಿಗೆ ಕೊಡಮಾಡುವ “ಮಾಪಮ್ಮ ಎಸ್ ಹೊಸಮನಿ ಅವ್ವ ದತ್ತಿ ರಾಜ್ಯ ಪ್ರಶಸ್ತಿಗೆ” ಎಂ.ಜಿ.ಪರಮೇಶ್ ಮಡಬಲು ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ‘ಅವ್ವ’ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪರಮೇಶ್ ಅವರು ಪ್ರಸ್ತುತ ಹೊಳೆನರಸೀಪುರ ತಾಲೂಕು ಶಾಲಾ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಲೇಖನಗಳು, ವೈಜ್ಞಾನಿಕ ಲೇಖನಗಳು,ವಿಮರ್ಶಾ ಲೇಖನಗಳು ಹಾಗೂ ಕವನ ಕವಿತೆಗಳನ್ನು ಬರೆದಿದ್ದಾರೆ. ಇವರು ಈಗಾಗಲೇ ಹತ್ತು ಮೌಲ್ಯಯುತ ಕೃತಿಗಳನ್ನು ಹೊರತಂದಿದ್ದಾರೆ.ಈ ಮೇಲಿನ ಸಾಹಿತ್ಯಾತ್ಮಕ ಕಾರ್ಯ ವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇದೇ ಮೇ 10 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ್ ತಿಳಿಸಿದ್ದಾರೆ.

ವರದಿ ಸತೀಶ್ ಚಿಕ್ಕಕಣಗಾಲು

Continue Reading

Hassan

ರಕ್ತ ಸಿಕ್ತ ಕಾರಿನಲ್ಲಿದ್ದ ವ್ಯಕ್ತಿಯ ಮೃ*ತ ದೇಹ ಪತ್ತೆ

Published

on

ನಾಪತ್ತೆ ಯಾಗಿರುವ ಸಂಪತ್ ಗಾಗಿ ತೀವ್ರ ಕಾರ್ಯಾಚರಣೆ
ಕೊಡಗು ಮತ್ತು ಹಾಸನ ಪೊಲೀಸರ ಹುಡುಕಾಟ – ಕೊನೆಗೂ ಮೃ*ತ ದೇಹ ಪತ್ತೆ

ಸಕಲೇಶಪುರ ತಾಲ್ಲೂಕು ಯಸಳೂರು
ಹೋಬಳಿ ಮಾಗೇರಿಯ ಸಮೀಪ ಕಲ್ಲಹಳ್ಳಿ ಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ರಕ್ತ ಸಿಕ್ತ ವಾದ ಕಾರು ನಿಲ್ಲಿಸಿ ಮತ್ತೊಂದು ಕಾರಿನಲ್ಲಿ ಶನಿವಾರ ಬೆಳಗಿನ ಜಾವ ಪರಾರಿ ಯಾದ ಘಟನೆ ಅಂತ್ಯ ಕಂಡಿದೆ. ಅವರ ಮೃತ ದೇಹ ಪತ್ತೆ ಆಗಿದೆ.

ಈ ಗ್ರಾಮಕ್ಕೆ ತೋಟದ ಕೆಲಸಕ್ಕೆ ಜನ ಕರೆತಂದ ಕಾರಿನ ಚಾಲಕ ಅಪರಿಚಿತ ಕಾರನ್ನು ರಕ್ತಾ ಸಿಕ್ತ ಆಗಿರುವ ಮಾಹಿತಿ ಯನ್ನು ಗ್ರಾಮಸ್ತ ರಿಗೆ ತಿಳಿಸಿದ್ದರು ನಂತರ ಯಸಳೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ
ಇದಕ್ಕೆ ಸಂಬಂಧಪಟ್ಟಂತೆ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಯಸಲೂರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಸ್ಥಳ ಪರೀಶೀಲನೆ ನಡೆಸಿದ್ದಾರೆ ಇದಕ್ಕೆ ತನಿಖೆ ಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸಹ ಸ್ಥಳಕ್ಕೆ ಬಂದು ಮಹಜರ್ ಮಾಡಿ ತನಿಖೆ ಚುರುಕು ಗೊಳಿಸಿದ್ದಾರೆ .

ಘಟನೆಯ ತನಿಖೆ ಮುಂದುವರಿದಂತೆ
ಈ ಕಾರು ಕೊಡಗಿನ ಕುಶಾಲನಗರದ ಉದ್ಯಮಿಯಾದ ಜಾನ್ ರವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

ಜಾನ್ ರವರ ಹತ್ತಿರ ಕುಶಾಲನಗರದಲ್ಲಿ ವಾಸವಿರುವ
ಸೋಮವಾರಪೇಟೆ ತಾಲ್ಲೂಕು ಕಕ್ಕೆ ಹೊಳೆ ಜಂಗ್ಸನ್ ನಿವಾಸಿ ಯಾದ ಸಂಪತ್ (ಶಂಭು) ರವರು ಶನಿವಾರ ತೆಗೆದು ಕೊಂಡು ಬಂದಿರುತ್ತಾರೆ ಎಂದು ತಿಳಿದು ಬಂದಿದೆ.

ಆದರೆ ಇಲ್ಲಿಯ ತನಕ ಸಂಪತ್ ಮೊಬೈಲ್ ಸ್ವಿಚ್ ಆಫ್ ಅಗಿದ್ದು ಯಾವುದೇ ಮಾಹಿತಿ ಲಭ್ಯ ವಾಗಿರಲಿಲ್ಲ
ಮೊಬೈಲ್ ಗಳಲ್ಲಿ ಬಂದಿರುವ ಕೊನೆಯ ಕರೆಗಳ ಮಾಹಿತಿಗಳನ್ನು ಕಲೆ ಹಾಕಲಾಗಿತ್ತು. ಜೊತೆಗೆ ಈ ಹಿಂದೆ ನಡೆದ ಗಲಾಟೆ ಘರ್ಷಣೆ ಯ ಎದುರಾಳಿಗಳನ್ನು ಪೊಲೀಸರು ವಿಚಾರಣೆ ನಡೆಸಿದರು.

ಇದರಲ್ಲಿ ಕೆಲವು ಜನರೂ ಊರು ಬಿಟ್ಟಿದ್ದು ಇನ್ನೂ ಕೆಲವರು ವಿಚಾರಣೆಗೆ ಸಹಕರಿಸಿದ್ದಾರೆ.
ಇನ್ನು ಕೆಲವರು ಪೋಲಿಸ್ ಕರೆಗಳನ್ನು ಉತ್ತರಿಸಿ ಫೋನ್ ಸ್ವಿಚ್ ಆಫ್ ಮಾಡಿ ಮನೆಗೆ ಬಾರದೆ ತಲೆಮರೆಸಿಕೊಂಡಿದ್ದಾರೆ ಎಂದು.
ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಯಸಳುರು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿವರ್ಗ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ಪ್ರದೇಶದ ಸುತ್ತ ಮುತ್ತ ಹುಡುಕಾಟ ನಡೆಸಿದ ಬಳಿಕ ಮೃತ ದೇಹ ಪತ್ತೆ ಆಗಿದೆ.

ಮಾಗೇರಿ ಗ್ರಾಮ ಅರಣ್ಯ ಪ್ರದೇಶಕ್ಕೇ ಹೊಂದಿಕೊಂಡಂತೆ ಇದೆ. ಅವರ ತೋಟ ಗದ್ದೆ ಗಳ ನಡುವೆ ಮನೆ ಕಟ್ಟಿ ಕೊಂಡು ವಾಸ ವಾಗಿದ್ದಾರೆ.ಪ್ರವಾಸಿ ತಾಣಗಳು ಇರುವುದರಿಂದ ಹಲವು ಹೋಮ್ ಸ್ಟೆ ಗಳು ತಲೆ ಎತ್ತಿವೆ ಅಪರಿಚಿತ ಜನರು ಬರುವುದರಿಂದ ಈ ರೀತಿಯ ಘಟನೆಗಳು ಹೆಚ್ಚೂ ಆಗುತ್ತಿರುವುದರಿಂದ
ಗ್ರಾಮಸ್ಥರು ಭಯದ ವಾತಾವರಣ ದಲ್ಲಿ ಬದುಕಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನೆಟ್ ಸಮಸ್ಯೆ ಇರುವುದರಿಂದ ಈ ಭಾಗದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ಸಂಭವಿಸಿದರೆ
ಎಮರ್ಜೆನ್ಸಿ ಟೂಲ್ ನಂಬರ್ ಗೆ ಕೂಡ ಕಾಲ್ ಮಾಡಲು ಸಾಧ್ಯ ವಾಗುವುದಿಲ್ಲ
ದಯವಿಟ್ಟು ಇಲ್ಲಿ ಇರುವ ಬಿಎಸ್ಎನ್ಎಲ್ ನೆಟ್ವರ್ಕ್ ಓಪನ್ ಮಾಡಿ ಜನರ ಅನುಕೂಲಕ್ಕೆ ಅನುವು ಮಾಡಿ ಕೊಡಿ .ಅಧಿಕಾರಿಗಳು ಈಗಾಗಲೆ ನೆಟ್ವರ್ಕ್ ಓಪನ್ ಆಗಿದೆ ಎಂದು ಹೇಳುತ್ತಾರೆ ಆದರೆ ಇಲ್ಲಿಯ ಯಾವುದೇ ಜನರಿಗೂ ನೆಟ್ ವರ್ಕ್ ಸಿಗುತ್ತಿಲ್ಲ ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು
ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು
ಜನರು ಮನವಿ ಮಾಡಿದ್ದಾರೆ.

ಜೊತೆಗೆ ಕೂಡಲೇ ಈ ಭಾಗದಲ್ಲಿ ಇರುವ ಹೋಮ್ ಸ್ಟೆ ಮತ್ತು ಸಾರ್ವಜನಿಕ ಪ್ರದೇಶಗಳಿಗೆ ಸಿಸಿ ಕ್ಯಾಮೆರಾ ಗಳ ಅಳವಡಿಕೆ ಕಡ್ಡಾಯ ಪಡಿಸಬೇಕೆಂದು ಗ್ರಾಮಸ್ಥರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ

ಈ ಹಿಂದೆ ಮಾಗೇರಿ ಸಮೀಪ ಹಿಜ್ಜಿನಹಳ್ಳಿ ಗ್ರಾಮದ ಹತ್ತಿರ ಒಂದೂ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು ಆದರೆ ಇಲ್ಲಿಯ ವರೆಗೆ ಇದರ ಮಾಹಿತಿ ಇಲ್ಲ.

ಜೊತೆಗೆ ಕೂಡಲೇ ಈ ಭಾಗದಲ್ಲಿ ಇರುವ ಹೋಮ್ ಸ್ಟೆ ಮತ್ತು ಸಾರ್ವಜನಿಕ ಪ್ರದೇಶಗಳಿಗೆ ಸಿಸಿ ಕ್ಯಾಮೆರಾ ಗಳ ಅಳವಡಿಕೆ ಕಡ್ಡಾಯ ಪಡಿಸಬೇಕೆಂದು ಗ್ರಾಮಸ್ಥರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಪೋಲೀಸ್ ತನಿಖೆ ಇಂದ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

Continue Reading

Hassan

CBSE ಫಲಿತಾಂಶ: ಅನ್‌ಮೋಲಿಕಾ ಸಿಂಗ್ ವಿದ್ಯಾರ್ಥಿನಿ ಶೇ 95.06 ಪಡೆದು ಶಾಲೆಗೆ ಪ್ರಥಮ

Published

on

2024-25ನೇ ಸಾಲಿನ 10ನೇ ತರಗತಿಯ CBSE ಫಲಿತಾಂಶವು ಪ್ರಕಟವಾಗಿದ್ದು, ನಗರದ ವಿದ್ಯಾನಗರದಲ್ಲಿರುವ ನೇತಾಜಿ ಪಬ್ಲಿಕ್ ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ 100ಕ್ಕೆ 100ರಷ್ಟು ಫಲಿತಾಂಶ ದೊರೆತಿದೆ. ಅನ್‌ಮೋಲಿಕಾ ಸಿಂಗ್ ವಿದ್ಯಾರ್ಥಿನಿ ಶೇ 95.06 ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ತಂದುಕೊಟ್ಟಿದ್ದಾರೆ.

ಶೇ 90ರಷ್ಟನ್ನು 05 ವಿದ್ಯಾರ್ಥಿಗಳು ಗಳಿಸಿದ್ದಾರೆ.
ಶೇ 80ರಷ್ಟನ್ನು 07 ವಿದ್ಯಾರ್ಥಿಗಳು ಗಳಿಸಿದ್ದಾರೆ.
ಶೇ 70ರಷ್ಟನ್ನು 14 ವಿದ್ಯಾರ್ಥಿಗಳು ಗಳಿಸಿದ್ದಾರೆ.


ಶೇ 60ರಷ್ಟನ್ನು 08 ವಿದ್ಯಾರ್ಥಿಗಳು ಗಳಿಸಿದ್ದಾರೆ.
ಶೇ 50ರಷ್ಟನ್ನು 14 ವಿದ್ಯಾರ್ಥಿಗಳು ಗಳಿಸಿದ್ದಾರೆ.
ಶಾಲೆಗೆ ಒಳ್ಳೆಯ ಫಲಿತಾಂಶ ದೊರಕಲು ಶ್ರಮಿಸಿದ, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳ ನಿರಂತರ ಪರಿಶ್ರಮಕ್ಕೆ ದೊರೆತ ಫಲವಾಗಿದೆ ಎಂದು ಶಾಲೆಯ ಚೇರ್ಮನ್ ರಾದ ಕರ್ನಲ್ ಕೆ. ಎಸ್. ನಟೇಶ್‌ರವರು ಅಭಿನಂದಿಸಿದರು. ಶಾಲೆಯ ಪ್ರಾಂಶುಪಾಲರಾದ ಡಾ. ಬಿ. ನಿರುಪಮಾರವರು ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂಧಿಸಿ ಶಿಕ್ಷಕರ ಪರಿಶ್ರಮ ಹಾಗೂ ಪೋಷಕರ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

Continue Reading

Hassan

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ತಜ್ಞರ ಸಮಿತಿ ಮಾಡಿದ್ದೇವೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

Published

on

HASSAN-BREAKING

ಹಾಸನ : ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ತಜ್ಞರ ಸಮಿತಿ ಮಾಡಿದ್ದೇವೆ

ಈಗಾಗಲೇ ತಜ್ಞರ ವರದಿ ಬಂದಿದೆ

ಎರಡು ಸಾವಿರ ಎಕರೆ ಪ್ರದೇಶದಲ್ಲಿ ಸಾಫ್ಟ್ ರಿಲೀಸ್ ಸೆಂಟರ್ ಮಾಡಲು ವಿಸ್ತೃತ ವರದಿ ತರಿಸಿಕೊಳ್ಳಲಾಗುತ್ತಿದೆ

ಆದಷ್ಟು ಬೇಗ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುತ್ತೇವೆ

ಮುಖ್ಯಮಂತ್ರಿಗಳು ಚರ್ಚಿಸಲು ಸಭೆ ಕರೆದಿದ್ದರು ಅನಿವಾರ್ಯ ಕಾರಣಗಳಿಂದ‌ ಮುಂದೂಡಲಾಗಿದೆ

ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ

ಕೊಟ್ಟ ಮಾತಿನಂತೆ ನಡೆಸಿದ್ದೇವೆ, ಉತ್ತಮ ಆಡಳಿತ ನೀಡಿದ್ದೇವೆ

ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ

ಮುಂದೆ ಇನ್ನೂ ಉತ್ತಮವಾಗಿ ಆಡಳಿತ ಮಾಡುತ್ತೇವೆ

ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಮಾರ್ಗದರ್ಶನಲ್ಲಿ ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಆಡಳಿತ ಕೊಡುತ್ತಿದ್ದೇವೆ

Continue Reading

Trending

error: Content is protected !!