Chamarajanagar
ಕನಕರಂತವರು ಎಲ್ಲ ಸಮಸ್ಯೆಗಳಿಗೆ ಮದ್ದಾಗಬಲ್ಲರು : ಡಾ ತ್ರಿವೇಣಿ
ಕನಕದಾಸರು ನಡೆದಂತಹ ದಾರಿಯಲ್ಲಿ ನಡೆಯುವಂತಹ ಒಂದು ಸಣ್ಣ ಮಾರ್ಗವನ್ನು ಕಂಡುಕೋಬಹುದು ನಮ್ಮ ಬದುಕು
ತುಂಬಾ ವಿಪ್ರವಗಳಿಂದ ಕೂಡಿದೆ ಸಾಮಾಜಿಕವಾಗಿ ಅಸಮಾನತೆಯ ತಾಂಡವಾ ಆಡ್ತಾ ಇದೆ ಇಂತಹ ಸಂದರ್ಭದಲ್ಲಿ ಕನಕರಂತವರು ನಮ್ಮ ಎಲ್ಲ ಸಮಸ್ಯೆಗಳಿಗೆ ಮದ್ದಾಗಬಲ್ಲರು ಎಂದು ಮುಖ್ಯ ಭಾಷಣಕರಾರಾದ ಡಾ ತ್ರಿವೇಣಿ ತಿಳಿಸಿದರು .
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರು
ಒಬ್ಬ ವೀರ ಒಬ್ಬ ಶೂರ ಹಾಗೆ ಆ ವೀರತ್ವದಲ್ಲಿ ನಡೆಯುವಂತಹ ಅನೇಕ ಯುದ್ಧದ ಘೋರತೆಯನ್ನು ನೋಡಿ ಇನ್ನು ಯುದ್ಧವೇ ಬೇಡ ಮನುಷ್ಯನ ಪರವಾಗಿ ಯೋಚನೆ ಮಾಡಬೇಕು. ದಾಸರಾಗಿ ಭಕ್ತಿಯ ಒಂದು ಮಾರ್ಗದಲ್ಲಿ ನಡೆದಿದ್ದು ಒಂದು ದೊಡ್ಡ ಯೋಚನೆ ಮಾಡಿದ್ರಾ ಅಂತ ನೋಡೋದಾದ್ರೆ ಆ ನನ್ನಂತ ಪಾಠ ಮಾಡುವ ಮೇಷ್ಟ್ರು ತಲೆತಗ್ಗಿಸಬೇಕು ಅಂತ ಅನ್ಸುತ್ತೆ ಕನಕದಾಸರ ದೊಡ್ಡ ವೈಚಾರಿಕ ನಿಲುವು ಇಂತಹ ನಮ್ಮನ್ನ ಬೇರೆಯದೇ ಆದಂತಹ ದೇವರ ಪರಿಕಲ್ಪನೆಗೆ ತಂದು ನಿಲ್ಲಿಸಿ ಅದಕ್ಕೆ ಒಬ್ರು ಪೂಜೆ ಮಾಡುವವರು ಬೇಕು ಅವರು ತುಂಬಾ ಶ್ರೇಷ್ಠವಾದಂತವರು ಅವರ ಮುಖೇನ ನಾವು ದೇವರನ್ನ ಕಾಣ್ತೀವಿ ಬಯಲು ಆಲಯದೊಳಗ ಆಲಯದೊಳಗೆ ಬಯಲು ಅಂತ ಅವರೇ ಪ್ರಶ್ನೆ ಆ ಮೂಲಕ ದೇವಸ್ಥಾನದ ಒಳಗಡೆ ಬಂದಿಯಾಗಿದ್ದಂತಹ ದೇವರಿಗೆ ಬಿಡುಗಡೆ ಕಲ್ಪಿಸಿದಂತಹ ಒಂದು ಧರ್ಮದ ಪರಿಕಲ್ಪನೆಗೆ ಬದಲಾಗಿ ಜನಸಾಮಾನ್ಯರಿಗೆ ಅರ್ಥವಾಗುವ ತರಹ ಜನಸಾಮಾನ್ಯರಿಗೆ ಎಟುಕುವ ತರಹ ದೇವರು ಧರ್ಮ ಪೂಜೆ ಭಕ್ತಿಯನ್ನು ನಮ್ಮ ಮಟ್ಟಕ್ಕೆ ತಳಕ್ಕೆ ತಂದು ನಿಲ್ಲಿಸಿದಂತಹ ಮಹಾಚೇತನ ಅವರದು. ಹಾಗಾಗಿ ಕನಕದಾಸರು ಅಪ್ಪಟ ಜನಪದ ಆ ಕಾರಣಕ್ಕೆ ನಮ್ಮ ನಿಮ್ಮ ನಡುವೆ ಎಲ್ಲಾ ಎಷ್ಟು ಶತಮಾನಗಳು ಕಳೆದರೂ ಇವತ್ತು ಜೀವಂತವಾಗಿ ಇದ್ದಾರೆ. ಕನಕದಾಸರು ಉಡುಪಿಯ ಕೃಷ್ಣ ತನ್ನ ಮೂಲ ಸ್ಥಾನವನ್ನೇ ಬಿಟ್ಟು ಈ ಕಡೆ ತಿರುಗಿದ ಆ ಕಾರಣಕ್ಕಾಗಿ ಕನಕದಾಸರಿಗೆ ಗೋಡೆ ಹೊಡೆದು ದರ್ಶನ ಕೊಟ್ಟ ಅಂತೆಲ್ಲ ನಾವು ಕಥೆಗಳನ್ನು ಕೇಳಿದ್ದೇನೆ. ಕನಕದಾಸರು ಎಲ್ಲ ಸಾಮಾನ್ಯ ಜನರಿಗೂ ಕೃಷ್ಣ ದಕ್ಕುವ ಹಾಗೆ ಮಾಡಿದರು ಇನ್ನೊಂದು ಕನಕದಾಸರ ಮಹತ್ವ ವಿವಾಹ ವಿಚ್ಛೇದನಗಳಿಗೆ ಅದನ್ನು ತಡೆಯುವ ದೊಡ್ಡ ಮಾರ್ಗವಾಗಿ ನಮ್ಮ ಕನಕದಾಸರು ರಾಮಚರಿತೆಯನ್ನು ಬರಿತಾರೆ ಆ ಮೂಲಕ ಎಲ್ಲರೂ ಬಾಂಧವ್ಯದಿಂದ ಬದುಕಬೇಕು ದಾಂಪತ್ಯದ ಸವಿ ಏನು, ದಾಂಪತ್ಯದ ಉದ್ದೇಶ ಏನು ಹೇಳುವಂತಹ ಒಂದು ಮಹತ್ವದ ಸಂಗತಿ ಎಂದು ತಿಳಿಸಿದರು.

ಶಾಸಕ ಎ.ಆರ್ ಕೃಷ್ಣಮುರ್ತಿ ಮಾತನಾಡಿ ಕನಕದಾಸರ ಕೀರ್ತನೆಗಳು ಇಂದಿನ ಸಂದರ್ಭದಲ್ಲಿ ಪ್ರಸ್ತುತ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ,ಉಪಾಧ್ಯಕ್ಷ ಶಾಂತಮ್ಮ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೊಂಡೇಗೌಡ ,ತಹಶೀಲ್ದಾರ್ ಆರ್ ಜಯಪ್ರಕಾಶ್,
ಬಿ. ಇ.ಓ ಮಾರಯ್ಯ ,ಮುಖ್ಯಾಧಿಕಾರಿ ಮಹೇಶ್ ಕುಮಾರ್, ಮುಖಂಡರಾದ ಮಲ್ಲೂ ,ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
Chamarajanagar
ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ನಾಮಫಲಕ ಉದ್ಘಾಟನೆ
ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನೂತನವಾಗಿ ನೊಂದಣಿಯಾದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ನಾಮಫಲಕ ಉದ್ಘಾಟನೆಯನ್ನು ಗ್ರಾಮದ ಯಜಮಾನರು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಯಜಮಾನರು, ಗ್ರಾಮ ಪಂಚಾಯಿತಿ ಸದಸ್ಯರು, ಬೌದ್ಧವಿಹಾರದ ಉಪಾಸಕರು, ಗ್ರಾಮದ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
Chamarajanagar
ಕಠಿಣ ಶ್ರಮದಿಂದ ಗೆಲುವು ಖಚಿತ: ಡಾ. ಶಾಂತರಾಜು
ಚಾಮರಾಜನಗರ: ಕಠಿಣ ಪರಿಶ್ರಮದಿಂದ ಕ್ರೀಡೆಯನ್ನು ಅಭ್ಯಾಸ ಮಾಡಿದರೆ ಗೆಲುವು ಖಚಿತವಾಗಲಿದೆ ಎಂದು ಚಾ.ನಗರ ವಿವಿ ದೈಹಿಕ ಶಿಕ್ಷಣದ ನಿರ್ದೇಶಕ ಡಾ.ಶಾಂತರಾಜು ಸಲಹೆ ನೀಡಿದರು.
ಚಾ.ನಗರ ವಿವಿಯ ಆವರಣದಲ್ಲಿ ಕ್ರೀಡಾಪಟುಗಳಿಗೆ ಶುಭ ಹಾರೈಸಿ ಮಾತನಾಡಿದರು. ಡಿ.10 ರಿಂದ 14 ರ ವರೆಗೆ ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯದ ತಂಡವು ಭಾಗವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಯ ಹಣಕಾಸು ಅಧಿಕಾರಿ ನಾಗೇಶ್ ಮಾತನಾಡಿ ಕ್ರೀಡಾಪಟುಯಲ್ಲಿ ಸೋಲು ಗೆಲುವು ಸಹಜ ಆದರೆ ಭಾಗವಹಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಂಡದ ತರಬೇತುದಾರ ಜಯಶಂಕರ್, ಪುಟ್ಟರಾಜು, ತಂಡದ ಮ್ಯಾನೇಜರ್ ಡಾ.ಶಂಕರ್, ಕ್ರೀಡಾ ಸಲಹಾ ಸಮಿತಿ ಸದಸ್ಯ ಜಿ ಬಂಗಾರು, ತಂಡದ ನಾಯಕ ಕಿರಣ್, ಕ್ರೀಡಾ ವಿದ್ಯಾರ್ಥಿಗಳಾದ ರಾಹುಲ್, ಅಭಿ, ವಿಕಾಸ್, ಯಶವಂತ್ ನಾಯಕ್, ಕಾರ್ತಿಕ್ ಯಶವಂತ್, ಮಹದೇವಪ್ರಸಾದ್, ಸಿದ್ದರಾಜು, ಸಂಜಯ್, ಪ್ರವೀಣ್ ಇತರ ವಿದ್ಯಾರ್ಥಿಗಳು ಹಾಜರಿದ್ದರು.
Chamarajanagar
ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯಲ್ಲಿ ಅಂಬೇಡ್ಕರ್ ರವರ 69 ನೇ ಪರಿನಿರ್ವಾಣ ದಿನ
ಚಾಮರಾಜನಗರ: ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿದೆ. ಅಂಬೇಡ್ಕರ್ ಅವರನ್ನು ದೇಶದ ಮೂಲೆ ಮೂಲೆಗಳಲ್ಲಿ ನೆನೆಯುತ್ತಾರೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಮಾದಯ್ಯ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ 69 ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಮುಂದೆ ಕ್ಯಾಂಡಲ್ ಬೆಳಗಿಸಿ ನಮನ ಸಲ್ಲಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಅರಿತರೆ ಉತ್ತಮ ವಿದ್ಯಾಥಿಯಾಗಬಹುದು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರುದ್ರಮೂರ್ತಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರತ್ನಮ್ಮ, ದೈಹಿಕ ಶಿಕ್ಷಕ ರಂಗಸ್ವಾಮಿ, ಕುಮಾರ್ ಯಶ್ ಪಾಲ್, ಪರಶಿವಮೂರ್ತಿ ಮಂಜುಳ ಹಾಗೂ ಇತರರು ಉಪಸ್ಥಿತರಿದ್ದರು.
-
State8 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
Hassan5 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
State21 hours agoSSLC ಪಾಸ್ ಆದವರಿಗೆ ಸರ್ಕಾರಿ ನೌಕರಿ ಚಾನ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ…
-
Chikmagalur23 hours agoವಿದ್ಯಾರ್ಥಿಗಳಿಗೆ ಉಚಿತ ಪಠ್ಯ ನೋಟ್ ಪುಸ್ತಕ ವಿತರಣೆ, ಮುಂದಿನ ಶೈಕ್ಷಣಿಕ ವರ್ಷದಿಂದ ಅನುಷ್ಠಾನ: ಮಧು ಬಂಗಾರಪ್ಪ
-
Mysore22 hours agoನಾಳೆಯಿಂದ ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಥೈರಾಯ್ಡ್ ತಪಾಸಣೆ
-
National21 hours agoಪಲಾಶ್ ಮುಚ್ಚಲ್ರೊಂದಿಗೆ ಮದುವೆ ಮುಂದೂಡಿದ ನಂತರ ಮೊದಲ ಪೋಸ್ಟ್ ಹಂಚಿಕೆಕೊಂಡ ಸ್ಮೃತಿ ಮಂದಾನ
-
Hassan8 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Chikmagalur10 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
