Health
ಈ ಲಕ್ಷಣಗಳು ಕಂಡು ಬಂದರೆ ಅದು ಶ್ವಾಸಕೋಶ ಕ್ಯಾನ್ಸರ್ : ಆರಂಭದಲ್ಲೇ ಪತ್ತೆ ಹಚ್ಚಿ ಜೀವ ಉಳಿಸಿಕೊಳ್ಳಿ

Lung Cancer Symptoms – ಯಾವುದೇ ಒಂದು ರೋಗ ಬಂದರೆ ಅದನ್ನು ನಾವು ಆರಂಭದ ಹಂತದಲ್ಲೇ ಕಂಡುಕೊಂಡಲ್ಲಿ ಸುಲಭವಾಗಿ ಮತ್ತು ವೇಗವಾಗಿ ಅದಕ್ಕೆ ಉಪಾಯ ಕಂದುಕೊಳ್ಳಬಹುದು. ಇದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು.
ಈ ಲೇಖನದಲ್ಲಿ ನಾವು ಶ್ವಾಸಕೋಶ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳು ಯಾವವು? ಶ್ವಾಶಕೋಶ ಕಾಯಿಲೆಗಳನ್ನು ಹೇಗೆ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಿದ್ದೇವೆ.
ಶ್ವಾಸಕೋಶ ಕಾಯಿಲೆಗಳ ಪ್ರಮುಖ ಲಕ್ಷಣಗಳು :
* ಎದೆ ನೋವು
* ವಿಪರೀತ ಕೆಮ್ಮು
* ಕಫದಲ್ಲಿ ರಕ್ತ
* ಉಸಿರಾಟದ ತೊಂದರೆ
* ಧ್ವನಿಯಲ್ಲಿ ಒಂಟಿತನ
* ಉಬ್ಬಸ
* ಹಸಿವು ಆಗದೇ ಇರುವುದು
* ದೇಹದ ತೂಕ ಕಡಿಮೆ ಆಗುವುದು
ಈ ಮೇಲಿನ ಯಾವುದಾದರೂ ಲಕ್ಷಣಗಳು ನಿಮಗೆ ಕಂಡು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಸರಿಯಾದ ಮಾಹಿತಿ ತಿಳಿದುಕೊಳ್ಳಿ.
ಶ್ವಾಸಕೋಶ ಕಾಯಿಲೆಯ ಅಪಾಯಗಳನ್ನು ಕಡಿಮೆ ಮಾಡುವುದು ಹೇಗೆ?
* ಪ್ರಮುಖವಾಗಿ ಧೂಮಪಾನ ಮಾಡುವವರು ಧೂಮಪಾನವನ್ನು ತಿಳಿಸಬೇಕು ಏಕೆಂದರೆ ಇದರಿಂದ ಲಂ ಕ್ಯಾನ್ಸರ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
* ಮಾಲಿನ್ಯಕಾರಕಗಳಿಂದ ದೂರವಿರಬೇಕು
* ಆರೋಗ್ಯಕರ ಹಾಗೂ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸಬೇಕು.
* ನಿಯಮಿತವಾಗಿ ವ್ಯಾಯಾಮ ಮಾಡಿ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
ನೆನಪಿಡಿ: ನಾವು ಯಾವುದೇ ಒಂದು ಅಮೂಲ್ಯ ಜೀವವನ್ನು ಉಳಿಸಲು ರೋಗ ಬಾರ್ದಂತೆ ತಡೆಗಟ್ಟುವುದು ಮತ್ತು ಅದನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಪ್ರಮುಖವಾಗಿರುತ್ತದೆ.
Health
ಜಂಕ್ ಫುಡ್ ತ್ಯೆಜಿಸಿ, ಪೌಷ್ಟಿಕ ಆಹಾರ ಸೇವಿಸಿ : ಎಸ್.ಡಿ.ಬೆನ್ನೂರ್

ಶ್ರೀರಂಗಪಟ್ಟಣ : ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಅಗತ್ಯವಾಗಿದ್ದು ಹಾಗಾಗಿ ಜಂಕ್ ಫುಡ್ ತ್ಯಜಿಸಿ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಹುಲಿಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ”ದಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ “ಪೌಷ್ಠಿಕ ಆಹಾರದ ಮಹತ್ವ ಹಾಗೂ ವೈಯಕ್ತಿಕ ಅರೋಗ್ಯದ ಬಗ್ಗೆ” ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ದೇಹದ ಬೆಳವಣಿಗೆಗೆ,ಮಾಸ ಖಂಡಗಳ ನಿರ್ಮಾಣಕ್ಕೆ,ರಕ್ತ ಉತ್ಪಾದನೆಗೆ, ಮೂಳೆಗಳ ತಯಾರಿಗೆ ಹಾಗೂ ಉತ್ತಮ ಅರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯವಾಗಿ ಬೇಕು. ರಕ್ತ ಹೀನತೆಯಿಂದ ನಾನಾ ಖಾಯಿಲೆಗಳು ಬರುತ್ತವೆ ಮತ್ತು ಕಲಿಕೆಯಲ್ಲಿ ಗ್ರಹಿಕಾ ಶಕ್ತಿ ಕಡಿಮೆಯಾಗಿ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ರಕ್ತ ಹೀನತೆ ಅಲಕ್ಷ ಬೇಡ ಕಬ್ಬಿಣಾಂಶ ಕೊರತೆಯಿಂದ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ ಇದರಿಂದ ಸುಸ್ತು,ಆಯಾಸ ಆಗುತ್ತದೆ ಆದ್ದರಿಂದ ಸಕ್ಕರೆ,ಜ್ಯೂಸ್,ತಂಪು ಪಾನೀಯಗಳು, ಸಿಹಿ ತಿಂಡಿ, ಖರಿದ ಮತ್ತು ಎಣ್ಣೆ ಪದಾರ್ಥಗಳು ತಿನ್ನದಿರುವುದು ಒಳ್ಳೆಯದು. ಹಾಲು ಮತ್ತು ಹಾಲಿನ ಉತ್ಪನ್ನಗಳು,ಮಾಂಸ, ಮೀನು ಮತ್ತು ಮೊಟ್ಟೆ ಮಿತವಾಗಿ ಬಳಸಬೇಕು. ತರಕಾರಿ ಮತ್ತು ಹಣ್ಣುಗಳು ನಿಯಮಿತವಾಗಿ ಸೇವಿಸಿ ಚಪಾತಿ, ಅನ್ನ, ರಾಗಿ ಮುದ್ದೆ ದವಸ ಮತ್ತು ಧಾನ್ಯಗಳನ್ನು ಹೆಚ್ಛಾಗಿ ತೆಗೆದು ಕೊಳ್ಳಬಹುದಾದ ಆಹಾರಗಳಾಗಿವೆ. ಆದ್ದರಿಂದ ದಿನನಿತ್ಯ ಪೌಷ್ಟಿಕ ಆಹಾರ ತಪ್ಪದೇ ಸೇವನೆ ಮಾಡಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.
ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ ಟಿ ಜ್ಯೋತಿ ಮಕ್ಕಳಿಗೆ ವೈಯಕ್ತಿಕ ಶುಚಿತ್ವದ ಕುರಿತು ಹಾಗೂ ಕೈ ತೊಳೆಯುವ ವೈಜ್ಞಾನಿಕ ವಿಧಾನಗಳ ಕುರಿತು ಆರೋಗ್ಯ ಶಿಕ್ಷಣ ನೀಡಿದರು. ಈ ವೇಳೆ ಗ್ರಂಥಾಲಯ ಮೇಲ್ವಿಚಾರಕಿ ಪುಷ್ಪಲತಾ,
ಸಮುದಾಯ ಆರೋಗ್ಯ ಅಧಿಕಾರಿ ಉಷಾ, ಆಶಾ ಕಾರ್ಯಕರ್ತೆ ಜ್ಯೋತಿ ಉಪಸ್ಥಿತರಿದ್ದರು.
Health
ತೋಟಗಾರಿಕೆ ಇಲಾಖೆಯಲ್ಲಿ ಯುವಕರಿಗೆ ಶಿಷ್ಯವೇತನದ ಜೊತೆಗೆ ಉಚಿತ 10 ತಿಂಗಳ ತರಬೇತಿ : ಅರ್ಜಿ ಅಹ್ವಾನ

Free Training by Horticulture Department : ರಾಜ್ಯ ತೋಟಗಾರಿಕೆ ಇಲಾಖೆಯು 2025 – 26 ನೇ ಸಾಲಿಗೆ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ವೈಜ್ಞಾನಿಕವಾಗಿ ಉತ್ತಮ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹಾಗೂ ಆರ್ಥಿಕವಾಗಿ ಸಬಲರಾಗಲು ಅವಶ್ಯವಿರುವ ತರಬೇತಿಯನ್ನು ಯುವಕರಿಗೆ ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಿದೆ.
ಉಚಿತ ತರಬೇತಿ ಯೋಜನೆಯ ವಿವರ :
ಈ ಉಚಿತ ತರಬೇತಿಯನ್ನು ಒಟ್ಟು 10 ತಿಂಗಳ ಅವಧಿಯವರೆಗೆ ನೀಡಲಾಗುವುದು. ತರಬೇತಿಯು ಮೇ 02, 2025 ರಿಂದ ಆರಂಭವಾಗಲಿದೆ. ವಿಶೇಷವೇನೆಂದರೆ ಈ ಉಚಿತ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ 1,750ರೂ. ಶಿಷ್ಯವೇತನವನ್ನು ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ತೋಟಗಾರಿಕೆ ಇಲಾಖೆಯ ಈ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು ಕೇವಲ ರೈತರ ಮಕ್ಕಳಿಗೆ ಮಾತ್ರ ಅವಕಾಶವಿದೆ. ಅದೇ ರೀತಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಹಾಗೂ 18 ರಿಂದ 30 ವರ್ಷದ ವಯೋಮಿತಿಯಲ್ಲಿರಬೇಕು. ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವಾಗ?
ಅರ್ಜಿ ಸಲ್ಲಿಸಲು ನೀವು ಅರ್ಹತೆ ಹೊಂದಿದ್ದಲ್ಲಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಫಾರಂ ಪಡೆದು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ, ” ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಧಾರವಾಡ ಕಚೇರಿಗೆ” ಸಲ್ಲಿಸಬೇಕು.
ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣ : https://horticulturedir.karnataka.gov.in/
Health
ಕಡಿಮೆ ದರಕ್ಕೆ ಸಿಗುತ್ತದೆ ಎಂದು ಈ ಎಣ್ಣೆಯನ್ನು ಅಡುಗೆ ಮಾಡಲು ಬಳಸಿದರೆ ಕ್ಯಾನ್ಸರ್, ಶುಗರ್ ಬರುವುದು ಖಂಡಿತ

Effects of Refined Oil in food : ಅನೇಕ ಜನರು ಅಡುಗೆ ಮಾಡಲು ಕಡಿಮೆ ದರಕ್ಕೆ ಸಿಗುತ್ತದೆ ಅಥವಾ ಅದರ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿ ಸಂಸ್ಕರಿಸಿದ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ಈ ಲೇಖನದಲ್ಲಿ ಸಂಸ್ಕರಿಸಿದ ಎಣ್ಣೆ ಎಂದರೇನು? ಯಾವೆಲ್ಲಾ ಸಂಸ್ಕರಿಸಿದ ಎಣ್ಣೆಯ ಅಡಿಯಲ್ಲಿ ಬರುತ್ತವೆ? ಹಾಗಿದ್ದರೆ ಅಡುಗೆ ಮಾಡಲು ಯಾವ ಎಣ್ಣೆ ಬಳಸಿದರೆ ಉತ್ತಮ ಎಂದು ಈ ಲೇಖನದಲ್ಲಿ ತಿಳಿಸಳಿದ್ದೇವೆ.
ಸಂಸ್ಕರಿಸಿದ ಎಣ್ಣೆ ಎಂದರೇನು?
ನೈಸರ್ಗಿಕ ತೈಲದ ಸಂಸ್ಕರಿತ ರೂಪವೆ ಸಂಸ್ಕರಿಸಿದ ತೈಲ ಅಥವಾ ಇಂಗ್ಲಿಷ್ ನಲ್ಲಿ ಇದನ್ನು Refined Oil ಎಂದು ಕರೆಯಲಾಗುತ್ತದೆ. ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ಉದ್ದೇಶದಿಂದ ನೈಸರ್ಗಿಕ ತೈಲವನ್ನು ಹಲವಾರು ರಾಸಾಯನಿಕಗಳೊಂದಿಗೆ ಸಂಸ್ಕರಿಸಿ, ದೀರ್ಘಾವಧಿಯ ಜೀವಿತಾವಧಿಯೊಂದಿಗೆ ವಾಸನೆ-ಮುಕ್ತ & ಸುವಾಸನೆ-ಮುಕ್ತ ತೈಲವಾಗಿ ಇದನ್ನು ತಯಾರಿಸಲಾಗುತ್ತದೆ.
ಸಂಸ್ಕರಣೆಯ ಮಾಡುವ ಪ್ರಕ್ರಿಯೆಯಲ್ಲಿ ಇದಕ್ಕೆ ಅಧಿಕ ತಾಪಮಾನ ಕೊಡುವುದರಿಂದ ಅದರಲ್ಲಿರುವ ಎಲ್ಲಾ ಮೌಲ್ಯವಾದ ಅಂಶಗಳು ಕಳೆದು ಹೋಗುತ್ತವೆ. ಜೊತೆಗೆ ಇದರಲ್ಲಿ ಕೆಟ್ಟ LDL ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಗಳು ಹಾಗೂ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದಾದ ಟ್ರಾನ್ಸ್ ಕೊಬ್ಬಿನ ಪ್ರಮಾಣಗಳನ್ನು ಹೆಚ್ಚಿಸುತ್ತದೆ.
ಸಂಸ್ಕರಿಸಿದ ಎಣ್ಣೆಗೆ ಉದಾಹರಣೆಗಳು :
• ಸೂರ್ಯಕಾಂತಿ ಎಣ್ಣೆ
• ಅಕ್ಕಿ ಹೊಟ್ಟು ಎಣ್ಣೆ
• ಸೋಯಾ ಬೀನ್ ಎಣ್ಣೆ
• ಕಡಲೆಕಾಯಿ ಎಣ್ಣೆ ಹಾಗೂ ಮುಂತಾದವು
ಇದರಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬಿರಲಿದೆ?
ಸಂಸ್ಕರಿಸಿದ ಎಣ್ಣೆಯನ್ನು ದಿನನಿತ್ಯ ಸೇವಿಸಿದಂತೆ ನಿಯಮಿತ ಕ್ಯಾನ್ಸರ್, ಶುಗರ್ ಸೇರಿದಂತೆ ಹಲವಾರು ಅರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.
ಆದ್ದರಿಂದ ನೀವು ಅಡುಗೆ ಮಾಡಲು ಈ ಕೆಳಗಿನ ಎಣ್ಣೆಗಳನ್ನು ಬಳಸಬಹುದು :
• ಕೋಲ್ಡ್ ಪ್ರೆಸ್ ಎಣ್ಣೆಗಳು –
ಎಳ್ಳೆಣ್ಣೆ, ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ ಮುಂತಾದವು..
ವಿ. ಸೂ : ಈ ಮೇಲಿನ ಲೇಖನವು ಕೇವಲ ಮಾಹಿತಿ ನೀಡುವ ಉದ್ದೇಶವಾಗಿದ್ದು, ನಿಮ್ಮ ಆರೋಗ್ಯಕ್ಕೆ ಸಂಬಂದಿಸಿದ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಇದಕ್ಕೆ ಸಂಬಂದಿಸಿದ ಪರಿಣಿತರ ಸಹಾಯ ಪಡೆದು ನಿರ್ಧಾರ ತೆಗೆದುಕೊಳ್ಳಿ.
-
Hassan12 hours ago
ಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಭಟನೆ: ಪಕ್ಷಗೋಸ್ಕರ ಕೆಲಸ ಮಾಡಿದವರಿಗೆ ಸ್ಥಾನ ನೀಡುವಂತೆ ಕಯುಮ್ ಆಗ್ರಹ
-
Hassan14 hours ago
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸೈಯದ್ ತಾಜಿಂ ಬೃಹತ್ ಪ್ರತಿಭಟನೆ.
-
Hassan10 hours ago
ಹಾಸನ: ದುರ್ನಾಥ ಬೀರುತ್ತಿರುವ ರಜತಾ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆ
-
Hassan15 hours ago
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
-
Hassan13 hours ago
ಹಾಲುವಾಗಿಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ
-
Chikmagalur17 hours ago
ರೈತನ ಮೇಲೆ ಕಾಡಾನೆ ದಾಳಿ, ಬದುಕುಳಿದ ರೈತ ಫಿಲಿಪ್
-
Kodagu10 hours ago
ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ
-
Manglore11 hours ago
ಧರ್ಮಸ್ಥಳ ಪ್ರಕರಣ- ಕಾಡಿನಲ್ಲಿ ಶೋಧನೆ ನಡೆಸಿ ತೆರಳಿದ ಎಸ್ಐಟಿ ತಂಡ