Connect with us

Hassan

ಶತಾಯುಷಿ 101 ವರ್ಷದ ನಂಜಮ್ಮನವರಿಂದ ಮತದಾನ

Published

on

ಆಲೂರು : ತಾಲೂಕಿನ ಚಿಕ್ಕಕಣಗಾಲು ಗ್ರಾಮದ ಮತಗಟ್ಟೆ ಸಂಖ್ಯೆ 35 ರಲ್ಲಿ ಶತಾಯುಷಿ 101 ವರ್ಷದ ನಂಜಮ್ಮ ಕೋಂ ಲೇಟ್ ರಾಮೇಗೌಡ ಎಂಬುವರು ಉತ್ಸಾಹದಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದರು. ಬಳಿಕ ಮಾತನಾಡಿದ ಅವರು, ದೇವೇಗೌಡರು ಒಳ್ಳೆಯ ಜನ, ಹಳ್ಳಿಯ ಜನರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾರೂ ಅವರಿಗೆ ಮೋಸ ಮಾಡಬೇಡಿ ಮತಹಾಕಿ, ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಆಶಿಸಿದರು

Continue Reading
Click to comment

Leave a Reply

Your email address will not be published. Required fields are marked *

Hassan

ಅಕ್ರಮ ಮರಳು ಗಣಿಗಾರಿಕೆ

Published

on

ಆಲೂರು: ಅಕ್ರಮ ಮರಳು ಗಣಿಗಾರಿಕೆ, ಮರಳು ಸಾಗಾಟ ನಡೆಯುತ್ತಿದ್ದರೂ, ಗಣಿ ಇಲಾಖೆ ಅಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು ಮೌನವಾಗಿದ್ದಾರೆ. ಇವರ ಈ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಇವರ ಈ ಮೌನ ಕಂಡಾಗ ಪರೋಕ್ಷವಾಗಿ ಇವರು ಇದನ್ನು ಬೆಂಬಲಿಸುವಂತೆ ಕಾಣುತ್ತಿದೆ. ಆದ್ದರಿಂದ ಮರಳು ಮಾಫಿಯಾದವರು ನೀಡುವ ‘ಮಾಮೂಲಿ’ ಇವರನ್ನೆಲ್ಲ ಮೌನವಾಗಿರುವಂತೆ ಮಾಡಿತ್ತಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ

ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ವ್ಯಾಪ್ತಿಯ ಎಂಬಲ್ಲಿ ಬರುವ ಹೇಮಾವತಿ ನದಿಯಲ್ಲಿ ಜೆಸಿಬಿ ಯಂತ್ರ ಬಳಸಿ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ರಾಜಾರೋಷವಾಗಿ ಕೊಳ್ಳೆ ಹೊಡೆಯುತ್ತಿದ್ದರೂ, ಅಧಿಕಾರಿಗಳು ಮೌನ ವಹಿಸುತ್ತಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ.

ಹೇಮಾವತಿ ನದಿ ದಡದಲ್ಲಿ ಹೇರಳವಾಗಿ ಮರಳು ಸಂಪತ್ತಿದ್ದು, ಜೆಸಿಬಿ ಯಂತ್ರ ಹಾಗೂ ದೋಣಿಯ ಮೂಲಕ ಕಾರ್ಮಿಕರನ್ನು ಬಳಸಿಕೊಂಡು ಮರಳು ಲೂಟಿ ಮಾಡಲಾಗುತ್ತಿದೆ. ಇಲ್ಲಿ ಹಗಲು ಮತ್ತು ರಾತ್ರಿ ಅಕ್ರಮವಾಗಿ ನದಿಯ ಗರ್ಭ ಸೀಳಿ ಅವೈಜ್ಞಾನಿಕವಾಗಿ ಮರಳು ತೆಗೆಯಲಾಗುತ್ತಿದೆ. ಈ ಮರಳಿಗೆ ಉತ್ತಮ ಬೆಲೆಯಿದ್ದು, ದಿನನಿತ್ಯ 25ರಿಂದ 30 ಲಾರಿ ಮರಳನ್ನು ಯಾವುದೇ ದಾಖಲೆ ಪತ್ರಗಳಿಲ್ಲದೆ, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ತಾಲೂಕುಗಳಿಗೆ ಸಾಗಿಸಲಾಗುತ್ತದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಇಲ್ಲಿ ನದಿಯಲ್ಲಿ ಸುಮಾರು ಅರ್ಧ ಕಿಮೀ. ತನಕ ಮರಳು ತೆಗೆಯಲಾಗಿದ್ದು, ಇದಕ್ಕಾಗಿ ನದಿಯ ಬದಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ. ರಸ್ತೆಗಾಗಿ ಪ್ರಕೃತಿದತ್ತವಾಗಿ ಹರಿಯುವ ನದಿ ನೀರನ್ನು ತಡೆ ಹಿಡಿಯಲಾಗಿದೆ.

ಮರಳು ಮಾಫಿಯಾಕ್ಕೆ ಮೌನವಾದರಾ ಅಧಿಕಾರಿಗಳು?: ಪ್ರತಿ ವರ್ಷ ಮಳೆ ಕಡಿಮೆಯಾದ ಬಳಿಕ ಮರಳು ಮಾಫಿಯ ತನ್ನ ಕಾರ್ಯ ಚಟುವಟಿಕೆ ಆರಂಭಿಸುತ್ತಿದ್ದು, ಇಲ್ಲಿ ಕಳೆದೆರಡು ತಿಂಗಳಿನಿಂದ ಮರಳು ಅಕ್ರಮವಾಗಿ ಸಾಗಾಣಿಕೆ ನಡೆಸಲಾಗುತ್ತಿದೆ. ಪ್ರಾಕೃತಿಕ ಸಂಪತ್ತನ್ನು ಅಪೋಶನ ತೆಗೆದುಕೊಳ್ಳುವಂತೆ ಲೂಟಿ ಮುಂದುವರೆಸಿರುವ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Continue Reading

Hassan

ಇಂದು ದೇವರಾಜೇಗೌಡರನ್ನು ಕೋರ್ಟ್‌‌‌ಗೆ ಕರೆತಂದಿದ್ದ ಎಸ್‌ಐಟಿ ತಂಡ

Published

on

ಹಾಸನ : ಪೆನ್‌ಡ್ರೈವ್ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿಗೆ ಅಂತ್ಯ ಹಿನ್ನೆಲೆ

ಇಂದು ದೇವರಾಜೇಗೌಡರನ್ನು ಕೋರ್ಟ್‌‌‌ಗೆ ಕರೆತಂದಿದ್ದ ಎಸ್‌ಐಟಿ ತಂಡ

ಇನ್ನೂ ಎರಡು ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಎದುರು ಮನವಿ ಮಾಡಿದ್ದ ಎಸ್ಐಟಿ ಟೀಂ

ಎರಡು ದಿನ ಎಸ್‌ಐಟಿ ವಶಕ್ಕೆ ನೀಡಿ ಹಾಸನದ ಐದನೇ ಅಧಿಕ ಸಿವಿಲ್ ನ್ಯಾಯಾಲಯ

ಮೇ.20 ಸಂಜೆ 5 ಗಂಟೆಯವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿದ ನ್ಯಾಯಾಲಯ

ನಿನ್ನೆ ಕೋರ್ಟ್‌ನಿಂದ ಹೊರ ಬರುವ ವೇಳೆ ಹೇಳಿಕೆ ನೀಡಿದ್ದ ದೇವರಾಜೇಗೌಡ

ಇಂದು ಕೋರ್ಟ್ ಬಳಿ ಬಿಗಿ ಪೊಲೀಸ್ ಭದ್ರತೆ

Continue Reading

Hassan

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ

Published

on

ಹಾಸನ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ

ಇಬ್ಬರು ಲಾರಿ ಚಾಲಕರಿಗೆ ಗಂಭೀರ ಗಾಯ

ಲಾರಿನಲ್ಲಿ ಸಿಲುಕಿಕೊಂಡು ನರಳಾಡುತ್ತಿರುವ ಓರ್ವ ಚಾಲಕ

ಹಾಸನ ತಾಲ್ಲೂಕಿನ, ಹೆಗ್ಡಿಹಳ್ಳಿ ಗ್ರಾಮದ ಬಳಿ ಘಟನೆ

ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್

ಡ್ರೈವರ್ ಸೀಟ್‌ನಲ್ಲಿ ಸಿಲುಕಿಕೊಂಡಿರುವ ಲಾರಿ ಚಾಲಕ

ಚಾಲಕನನ್ನು ಲಾರಿಯಿಂದ ಹೊರಗೆ ತರಲು ಹರಸಾಹಸಪಡುತ್ತಿರುವ ಪೊಲೀಸರು

ಲಾರಿಯಲ್ಲಿ ಸಿಲುಕಿಕೊಂಡಿರುವ ಚಾಲಕ‌ನ ದೇಹದ ಅರ್ಧಭಾಗ

ಲಾರಿಯಿಂದ ಹೊರಬರಲಾರದೆ ನರಳಾಡುತ್ತಿರುವ ಚಾಲಕ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Trending

error: Content is protected !!