Agriculture
ಅಡಿಕೆಯ ತಾಯಿ ಮರವನ್ನು ಆಯ್ಕೆ ಮಾಡುವುದು ತುಂಬ ಸುಲಭ!!

ಅಡಿಕೆ ಒಂದು ವಾಣಿಜ್ಯ ಬೆಳೆಯಾಗಿದೆ ನಮ್ಮ ಕರ್ನಾಟಕದ ಅನೇಕ ಸ್ಥಳಗಳು ಅಡಿಕೆ ಬೆಳೆಗೆ ಹೆಸರುವಾಸಿಯಾಗಿದೆ . ಒಂದು ಸಸ್ಯ ಸದೃಢವಾಗಿ ಉತ್ತಮವಾಗಿ ಇಳುವರಿ ನೀಡುವಂತೆ ಬೆಳೆಯಬೇಕಾದರೆ ಉತ್ತಮ ಬೀಜವನ್ನು ಆಯ್ಕೆ ಮಾಡಿರಬೇಕು. ಹಾಗೆ ಅಡಿಕೆಯ ಬಿತ್ತನೆ ಗೋಟುಗಳು ಅಥವಾ ಬೀಜದ ಗೋಟುಗಳ ಆಯ್ಕೆ ಬಹಳ ಮುಖ್ಯವಾದದ್ದು. ಬಹಳ ಎಚ್ಚರವಹಿಸಿ ಬೀಜದ ಗೋಟುಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೇಗೆ ಮಾಡುವುದು ಎಂಬುದನ್ನು ನೋಡೋಣ.
ಕೆಲ ಗಿಡಗಳು ಫಸಲಿಗೆ ಬರುವಷ್ಟರಲ್ಲಿ ಇದ್ದಕ್ಕಿದ್ದಂತೆ ಒಣಗಿ ಹೋಗುತ್ತವೆ. ಕೆಲವು ಬೆಳವಣಿಗೆಯಾಗದೆ ಕುಂಠಿತಗೊಂಡಿರುತ್ತವೆ . ಎರಡು ಸಮಸ್ಯೆ ಬಾರದಿದ್ದರೆ ಗಿಡಗಳು ಉದ್ದವಾಗಿ ಬೆಳೆಯುತ್ತಾ ಫಸಲು ಬಿಡದೇ ನಿಂತುಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಶೇಕಡ ತೊಂಬತ್ತರಷ್ಟು ಇದಕ್ಕೆ ಕಾರಣ ಬೀಜದ ಗೋಟುಗಳ ಆಯ್ಕೆಯ ಸಮಸ್ಯೆಯಿಂದ ಈ ರೀತಿ ಉಂಟಾಗುತ್ತದೆ.
ಸಾಮಾನ್ಯವಾಗಿ ಒಂದು ಅಡಿಕೆ ಗಿಡದ ಆರ್ಥಿಕ ವಯಸ್ಸು ಮೂವತ್ತು ವರ್ಷಗಳು. ನಾವು ಬೀಜದ ಗೋಟುಗಳನ್ನು ಆಯ್ಕೆ ಮಾಡುವಾಗ ಅಡಿಕೆ ಗಿಡಕ್ಕೆ ಕನಿಷ್ಠ ಅರ್ಧದಷ್ಟು ಎಂದರೆ 25 ವರ್ಷ ಮೇಲ್ಪಟ್ಟ ಗಿಡಗಳಲ್ಲಿ ಬೀಜದ ಗೋಟುಗಳನ್ನು ಆಯ್ಕೆ ಮಾಡಬೇಕಾಗುತ್ತದೆ.. 25 ವರ್ಷ ಮೇಲ್ಪಟ್ಟ ಮರಗಳಲ್ಲೇ ಗೋಟುಗಳನ್ನು ಆಯ್ಕೆ ಮಾಡಬೇಕು ಏಕೆ ? ಏಕೆಂದರೆ ಅಡಿಕೆಗೆ ಸಂತಾನ ಅಭಿವೃದ್ಧಿಗೆ ಯೋಗ್ಯವಾದ ಹಂತ ಬರುವುದು ಕನಿಷ್ಠ 20 ವರ್ಷದ ಮೇಲೆ ಈ ಕಾರಣದಿಂದ ಈ ಹಂತದಲ್ಲಿ ಬೀಜಗಳನ್ನು ಆಯ್ಕೆ ಮಾಡುವುದು ಸೂಕ್ತ. ಒಂದು ವೇಳೆ ಕಡಿಮೆ ವಯಸ್ಸಿನ ಗಿಡಗಳಲ್ಲಿ ಬೀಜದ ಗೋಟುಗಳನ್ನು ಹಾರಿಸಿದರೆ, ಅದರ ಮುಂದಿನ ಪೀಳಿಗೆ ಮಧ್ಯಮ ವಯಸ್ಸಿನಲ್ಲಿ ನಾಶವಾಗುತ್ತದೆ.
25 ವರ್ಷ ಮೇಲ್ಪಟ್ಟ ಗಿಡಗಳಲ್ಲಿ ಅಡಿಕೆಯ ಒಂದು ಗೋನೆ ಅಥವಾ ಕಂಕ್ಕಿಯಲ್ಲಿ ಕನಿಷ್ಠ 250ರಿಂದ 300 ಅಡಿಕೆ ಕಾಯಿಗಳು ಇರುವಂತಹ ಮರಗಳು ಬೀಜದ ಗೋಟಿಗೆ ಯೋಗ್ಯವಾಗಿರುತ್ತವೆ . ಜೊತೆಗೆ ಕಂಕ್ಕಿಯಲ್ಲಿ ಕಡಿಮೆ ನಾರಿನ ಗೊಂಚಲು, ಮತ್ತು ಕಂಕ್ಕಿಗಳು ಉದ್ದವಾಗಿ ದೀರ್ಘವಾಗಿ ಚಾಚಿಕೊಂಡಿರಬೇಕು . ಕಂಕ್ಕಿಯ ಬುಡದಿಂದ ತುದಿಯವರೆಗೂ ಅಡಿಕೆ ಕಾಯಿ ಕಚ್ಚಿರಬೇಕು. ಇಂಥಹ ಮರಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ನವೆಂಬರ್-ಡಿಸೆಂಬರ್ ತಿಂಗಳಿಗೆ ನಮಗೆ ಬೀಜದ ಗೋಟುಗಳು ದೊರೆಯುತ್ತವೆ. ಅಡಿಕೆ ಮರದ ಮೊದಲ ಕಂಕ್ಕಿಯಿಂದ ಮತ್ತು ಕೊನೆಯ ಕಂಕ್ಕಿ ಇಂದ ಬೀಜದ ಗೋಟುಗಳನ್ನು ತೆಗೆದು ಕೊಳ್ಳಬಾರದು. ಉಳಿದ ಕಂಕ್ಕಿಗಳಿಂದ ಗೋಟುಗಳನ್ನು ಆರಿಸುವುದು ಸೂಕ್ತ, ಏಕೆಂದರೆ ಮೊದಲ ಮತ್ತು ಕೊನೆಯ ಕಂಕ್ಕಿಯಲ್ಲಿ ಕೂಳೆ ಕಾಯಿಗಳು ಅಥವಾ ನಾಟಿಗೆ ಯೋಗ್ಯವಲ್ಲದ ಕಾಯಿಗಳು ಇರುವುದರಿಂದ ಇವು ಸೂಕ್ತವಲ್ಲ. ಇಲ್ಲಿ ಮುಖ್ಯವಾಗಿ ನೆನಪಿಡಬೇಕಾದ ಅಂಶ ವೆಂದರೆ, ಬೀಜದ ಗೋಟು ಗಳನ್ನು ಕೇಳುವ ಮುನ್ನ ಗೋಟುಗಳು ಗಾಡ ಹಳದಿ ಬಣ್ಣದಿಂದ ಕೂಡಿದ್ದು, ಮರದಿಂದ ಉದುರುತ್ತಿರುವ ಬೇಕು. ಆಗ ಅವು ಬಿತ್ತನೆಗೆ ತಯಾರಿದೆ ಎಂದು ಅರ್ಥ. ಬೀಜದ ಗೋಟಿನ ಕಟಾವಿನ ನಂತರ ಅವುಗಳನ್ನು ಬೇರ್ಪಡಿಸಬೇಕಾಗುತ್ತದೆ. ಒಂದು ಅಡಿಕೆ ಗಿಡ ದಲ್ಲಿ ಮೂರರಿಂದ 4 ತರಹದ ಅಡಿಕೆ ಕಾಯಿಗಳ ದೊರೆಯುತ್ತದೆ. ಗುಂಡಗಿರುವ ಕಾಯಿ, ಕೋಲು ಕಾಯಿ, ಮಾಣ ಗಾಯಿ, ಕಾಯಿ ಗಳಿರುತ್ತವೆ. ಇದರಲ್ಲಿ ಗುಂಡಗಿನ , ಸಿಪ್ಪೆ ತೆಳುವಿರುವ, ಸಾಮಾನ್ಯ ಗಾತ್ರದ ಅಡಿಕೆಯನ್ನು ಬೀಜದ ಗೋಟನ್ನಾಗಿ ಆರಿಸಿಕೊಳ್ಳಬೇಕಾಗುತ್ತದೆ.
ಕನಿಷ್ಟ ಒಂದು ಮರದಿಂದ ಒಟ್ಟಾರೆ 400 ರಿಂದ 500 ಬೀಜದ ಗೋಟುಗಳು ದೊರೆಯುತ್ತವೆ. ಈ ರೀತಿ ಆರಿಸಿಕೊಂಡ ಗೋಟುಗಳನ್ನು ಎರಡರಿಂದ ಮೂರು ದಿನ ನೆರಳಿನಲ್ಲಿ ನೆಲದ ಮೇಲೆ ಒಣಗಿಸಬೇಕು. ನಂತರ ಬೀಜದ ಅಡಿಕೆ ಗೋಟುಗಳು ನಾಟಿ ಮಾಡಲು ಯೋಗ್ಯವಾಗಿರುತ್ತದೆ.
Agriculture
25 ಲಕ್ಷದವರೆಗೆ ಸಾಲ ಮತ್ತು ಅದಕ್ಕೆ 35% ಸಬ್ಸಿಡಿ : ಕೇಂದ್ರ ಸರ್ಕಾರದ ಈ ಯೋಜನೆಯಡಿ ಯಾರಿಗೆ ಸಿಗಲಿದೆ ಈ ಸೌಲಭ್ಯ?

PMEGP Scheme | How to apply? – ಕೇಂದ್ರ ಸರ್ಕಾರವು ಹೊಸದಾಗಿ ಸ್ವಂತ ಉದ್ಯಮ ಆರಂಭಿಸುವ ಯುವ ಜನತೆಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಆದರೆ ಹಲವು ಜನರಿಗೆ ಈ ಯೋಜನೆಗಳ ಮಾಹಿತಿ ತಿಳಿದಿರುವುದೇ ಇಲ್ಲ. ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರದ ಒಂದು ಉತ್ತಮ ಯೋಜನೆಯ ಬಗ್ಗೆ ತಿಳಿಸಲಿದ್ದೇವೆ.
ಯಾವುದು ಈ ಯೋಜನೆ?
ಈ ಯೋಜನೆಯ ಹೆಸರು ” ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ “. ಈ ಯೋಜನೆಯನ್ನು 2008 ಆಗಸ್ಟ್ 15ರಂದು ಅಂದಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರು ಜಾರಿಗೋಳಿಸಿದ್ದರು. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಹೊಸದಾಗಿ ಸ್ವಂತ ಉದ್ಯಮ ಆರಂಭಿಸುವವರಿಗೆ ಆರ್ಥಿಕ ಸಹಾಯ ಮಾಡುವುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಬ್ಯಾಂಕಗಳು ನಿಮ್ಮ ಯೋಜನಾ ಮೊತ್ತದ ಗರಿಷ್ಟ 90% ನಿಂದ 95% ವರೆಗಿನ ಹಣವನ್ನು ಮಂಜೂರು ಮಾಡುತ್ತವೆ. ನೀವು ಪಡೆದ ಸಾಲದ ಮೊತ್ತದ ಮೇಲೆ PMEGP ಯೋಜನೆಯ ಅಡಿಯಲ್ಲಿ 15% ನಿಂದ 35% ನವರೆಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಹಾಗಿದ್ದರೆ ಈ ಯೋಜನೆಗೆ ಅರ್ಜಿ ಯಾರು ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು? ಯಾವ ದಾಖಲೆಗಳು ಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು?
ಕನಿಷ್ಠ 8ನೇ ತರಗತಿ ಪಾಸಾದಂತಹ 18 ವರ್ಷದ ಮೇಲಿನ ಭಾರತೀಯ ಪ್ರಜೆಗಳಾಗಿರಬೇಕು. ಈ ಮೊದಲು ಉದ್ಯಮ ಆರಂಭಿಸಲು ಸರ್ಕಾರದಿಂದ ಯಾವುದೇ ರೀತಿಯ ಲಾಭ ಪಡೆದುಕೊಂಡಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವಂತಹ ಅವಶ್ಯಕ ದಾಖಲೆಗಳು :
ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅರ್ಹರಿದ್ದರೆ ಈ ಕೆಳಗಿನ ದಾಖಲಾತಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
1. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
2. ಶೈಕ್ಷಣಿಕ ಪ್ರಮಾಣಪತ್ರ
3. ವಿವರವಾದ ಯೋಜನಾ ವರದಿ
4. ಜಾತಿ ಪ್ರಮಾಣಪತ್ರ
5. ಗ್ರಾಮೀಣ ಪ್ರಮಾಣ ಪತ್ರ (ಅನ್ವಯವಾದಲ್ಲಿ ಮಾತ್ರ)
ಅರ್ಜಿ ಹೇಗೆ ಸಲ್ಲಿಸಬೇಕು?
ಅರ್ಹತೆ ಹೊಂದಿರುವ ಅಭ್ಯರ್ಥಿಗಳು PMEGP ಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ನೋಂದಣಿ ಮಾಡಿಕೊಂಡು ಬೇಕಾಗುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
PMEGP ಅಧಿಕೃತ ಜಾಲತಾಣ –
https://www.kviconline.gov.in/pmegpeportal/pmegphome/index.jsp
Agriculture
ಆರ್ ಬಿ ಐ ನಿಂದ ರೈತರಿಗೆ ಗುಡ್ ನ್ಯೂಸ್ : ಅಡಮಾನ ಇಲ್ಲದೆ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

Loan for farmers upto 2 lakh without Surity – ದೇಶದ ರೈತರಿಗೆ ಮೇಲಾಧಾರ – ಮುಕ್ತ ಕೃಷಿ ಸಾಲದ ಮಿತಿಯನ್ನು ಏರಿಸಲಾಗಿದೆ. ಈ ಮೊದಲು ₹1.6 ಲಕ್ಷ ರೂ. ವರೆಗೆ ಇದ್ದ ಸಾಲದ ಮಿತಿಯನ್ನು ₹2.0 ಲಕ್ಷ ರೂ. ಗೆ ಏರಿಸಲಾಗಿದೆ. ಈ ನಿರ್ಧಾರವನ್ನು ಜನವರಿ 01, 2025 ರಿಂದಲೇ ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.
ಈ ಹೊಸ ಉಪಕ್ರಮದ ಮೂಲ ಉದ್ದೇಶವೇನು?
ಕೃಷಿ ವಲಯದ ಅಧಾಯವನ್ನು ಬೆಂಬಲಿಸಲು ಮತ್ತು ಹೆಚ್ಚಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಿನ ಸಮಯದಲ್ಲಿ ಆಗಿರುವ ಹಣದುಬ್ಬರ (Inflation) ಮತ್ತು ಹೆಚ್ಚುತ್ತಿರುವ ಕೃಷಿ ಒಳಹರಿವಿನ ವೆಚ್ಚಕ್ಕೆ ರೈತರಿಗೆ ಸಹಾಯವಾಗುವಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರಿಂದ ರೈತರಿಗೆ ಆರ್ಥಿಕ ನೆರವು ಸಿಗಲಿದೆ.
ಈ ಉಪಕ್ರಮದಿಂದ ದೇಶದ 86% ಕ್ಕಿಂತಲೂ ಹೆಚ್ಚು ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಪ್ರಯೋಜನ ಸಿಗಲಿದೆ. ಆರ್ ಬಿಐ ನ ಈ ಹೊಸ ಮಾರ್ಗಸೂಚಿಯು ದೇಶದ ಪ್ರತಿಯೊಬ್ಬ ರೈತನಿಗೂ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರವು ವ್ಯಾಪಾಕ ಪ್ರಚಾರ ಕೈಗೊಳ್ಳಲಿದೆ.
ಇದರಿಂದ ಕೃಷಿ ವಲಯದಲ್ಲಿ ಹೆಚ್ಚಿನ ಹೂಡಿಕೆ, ರೈತರ ಜೀವನ ಅಭಿವೃದ್ಧಿಗೊಳ್ಳಲಿದೆ. ಮುಂದಿನ ವರ್ಷ ಅಂದರೆ, ಜನವರಿ 01, 2025ರಿಂದ ದೇಶಾದ್ಯಂತ ಇದು ಜಾರಿಯಾಗಲಿದ್ದು ಇದರ ಲಾಭ ಪಡೆಯಲು ರೈತರು ತಮ್ಮ ಬ್ಯಾಂಕ್ ಗಳಿಗೆ ಭೇಟಿ ನೀಡಿ ಇದರ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
Agriculture
ಜೀವನೋಪಾಯಕ್ಕಾಗಿ ಮಾಡಿರುವ ಭೂ ಒತ್ತುವರಿದಾರರು ಆತಂಕಪಡುವ ಅಗತ್ಯ ಇಲ್ಲ

ಚಿಕ್ಕಮಗಳೂರು: ಜೀವನೋಪಾಯಕ್ಕಾಗಿ ಮಾಡಿರುವ ಭೂ ಒತ್ತುವರಿದಾರರು ಆತಂಕಪಡುವ ಅಗತ್ಯ ಇಲ್ಲ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.ಇಂದು ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ಸಮಸ್ಯೆ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಲೋಕಸಭೆ ಮಾಜಿ ಸದಸ್ಯ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ತಾವೂ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೇ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿದ್ದೀವೆ ಎಂದು ಹೇಳಿದರು.
ಬಹಳಷ್ಟು ಉಹಾಪೋಹಗಳು ಭೂ ಒತ್ತುವರಿ ಬಗ್ಗೆ ಹರಿದಾಡುತ್ತಿದ್ದು, ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಅಪಪ್ರಚಾರ ಮಾಡುತ್ತಾ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ಒತ್ತುವರಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಿ ಆದೇಶಿಸಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನವನ್ನು ನೀಡಿದ್ದಾರೆ. ಜತೆಗೆ ಕಾನೂನಿನ ಚೌಕಟ್ಟಿನಡಿಯಲ್ಲಿ ಅರ್ಹ ಪ್ರಕರಣಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಒತ್ತುವರಿ ಸಮಸ್ಯೆ ಬಹಳಷ್ಟು ವರ್ಷಗಳ ಸಮಸ್ಯೆಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಜನಸಂಖ್ಯೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಯಾಗಿದೆ. ಇದರಿಂದ ಜೀವನೋಪಾಯಕ್ಕಾಗಿ ಒತ್ತುವರಿಯೂ ನಡೆದಿದೆ. ಅರಣ್ಯವೂ ಕ್ಷೀಣಿಸಿದೆ ಎಂದು ತಿಳಿಸಿದರು.
-
State20 hours ago
ಬೆಂಗಳೂರು ನಮ್ಮ ಮೆಟ್ರೋ ನೇಮಕಾತಿ : ಟ್ರೈನ್ ಆಪರೇಟರ್ ಹುದ್ದೆಗಳ ಭರ್ತಿ
-
Kodagu19 hours ago
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ
-
National - International20 hours ago
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ
-
Kodagu22 hours ago
ಮಾನವ-ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ
-
State22 hours ago
ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ: ಬಸವರಾಜ ಬೊಮ್ಮಾಯಿ
-
Hassan24 hours ago
ಗಮನಸೆಳೆದ ತಿಂಗಳ ಮಾಮನ ತೇರು: ಚಂದ್ರನಿಗೆ ಮದುವೆ ಮಾಡಿದ ನಿವಾಸಿಗಳು
-
Mysore24 hours ago
ನನಗೆ ಸಿಎಂ ಹುದ್ದೆ ಕೊಟ್ಟರೆ ನಿರ್ವಹಿಸುವೆ: ಶಾಸಕ ತನ್ವೀರ್ ಸೇಠ್
-
Hassan23 hours ago
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು