Connect with us

Agriculture

ಅಡಿಕೆಯ ತಾಯಿ ಮರವನ್ನು ಆಯ್ಕೆ ಮಾಡುವುದು ತುಂಬ ಸುಲಭ!!

Published

on

ಅಡಿಕೆ ಒಂದು ವಾಣಿಜ್ಯ ಬೆಳೆಯಾಗಿದೆ ನಮ್ಮ ಕರ್ನಾಟಕದ ಅನೇಕ ಸ್ಥಳಗಳು ಅಡಿಕೆ ಬೆಳೆಗೆ ಹೆಸರುವಾಸಿಯಾಗಿದೆ . ಒಂದು ಸಸ್ಯ ಸದೃಢವಾಗಿ ಉತ್ತಮವಾಗಿ ಇಳುವರಿ ನೀಡುವಂತೆ ಬೆಳೆಯಬೇಕಾದರೆ ಉತ್ತಮ ಬೀಜವನ್ನು ಆಯ್ಕೆ ಮಾಡಿರಬೇಕು. ಹಾಗೆ ಅಡಿಕೆಯ ಬಿತ್ತನೆ ಗೋಟುಗಳು ಅಥವಾ ಬೀಜದ ಗೋಟುಗಳ ಆಯ್ಕೆ ಬಹಳ ಮುಖ್ಯವಾದದ್ದು. ಬಹಳ ಎಚ್ಚರವಹಿಸಿ ಬೀಜದ ಗೋಟುಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೇಗೆ ಮಾಡುವುದು ಎಂಬುದನ್ನು ನೋಡೋಣ.

ಕೆಲ ಗಿಡಗಳು ಫಸಲಿಗೆ ಬರುವಷ್ಟರಲ್ಲಿ ಇದ್ದಕ್ಕಿದ್ದಂತೆ ಒಣಗಿ ಹೋಗುತ್ತವೆ. ಕೆಲವು ಬೆಳವಣಿಗೆಯಾಗದೆ ಕುಂಠಿತಗೊಂಡಿರುತ್ತವೆ . ಎರಡು ಸಮಸ್ಯೆ ಬಾರದಿದ್ದರೆ ಗಿಡಗಳು ಉದ್ದವಾಗಿ ಬೆಳೆಯುತ್ತಾ ಫಸಲು ಬಿಡದೇ ನಿಂತುಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಶೇಕಡ ತೊಂಬತ್ತರಷ್ಟು ಇದಕ್ಕೆ ಕಾರಣ ಬೀಜದ ಗೋಟುಗಳ ಆಯ್ಕೆಯ ಸಮಸ್ಯೆಯಿಂದ ಈ ರೀತಿ ಉಂಟಾಗುತ್ತದೆ.

ಸಾಮಾನ್ಯವಾಗಿ ಒಂದು ಅಡಿಕೆ ಗಿಡದ ಆರ್ಥಿಕ ವಯಸ್ಸು ಮೂವತ್ತು ವರ್ಷಗಳು. ನಾವು ಬೀಜದ ಗೋಟುಗಳನ್ನು ಆಯ್ಕೆ ಮಾಡುವಾಗ ಅಡಿಕೆ ಗಿಡಕ್ಕೆ ಕನಿಷ್ಠ ಅರ್ಧದಷ್ಟು ಎಂದರೆ 25 ವರ್ಷ ಮೇಲ್ಪಟ್ಟ ಗಿಡಗಳಲ್ಲಿ ಬೀಜದ ಗೋಟುಗಳನ್ನು ಆಯ್ಕೆ ಮಾಡಬೇಕಾಗುತ್ತದೆ.. 25 ವರ್ಷ ಮೇಲ್ಪಟ್ಟ ಮರಗಳಲ್ಲೇ ಗೋಟುಗಳನ್ನು ಆಯ್ಕೆ ಮಾಡಬೇಕು ಏಕೆ ? ಏಕೆಂದರೆ ಅಡಿಕೆಗೆ ಸಂತಾನ ಅಭಿವೃದ್ಧಿಗೆ ಯೋಗ್ಯವಾದ ಹಂತ ಬರುವುದು ಕನಿಷ್ಠ 20 ವರ್ಷದ ಮೇಲೆ ಈ ಕಾರಣದಿಂದ ಈ ಹಂತದಲ್ಲಿ ಬೀಜಗಳನ್ನು ಆಯ್ಕೆ ಮಾಡುವುದು ಸೂಕ್ತ. ಒಂದು ವೇಳೆ ಕಡಿಮೆ ವಯಸ್ಸಿನ ಗಿಡಗಳಲ್ಲಿ ಬೀಜದ ಗೋಟುಗಳನ್ನು ಹಾರಿಸಿದರೆ, ಅದರ ಮುಂದಿನ ಪೀಳಿಗೆ ಮಧ್ಯಮ ವಯಸ್ಸಿನಲ್ಲಿ ನಾಶವಾಗುತ್ತದೆ.

25 ವರ್ಷ ಮೇಲ್ಪಟ್ಟ ಗಿಡಗಳಲ್ಲಿ ಅಡಿಕೆಯ ಒಂದು ಗೋನೆ ಅಥವಾ ಕಂಕ್ಕಿಯಲ್ಲಿ ಕನಿಷ್ಠ 250ರಿಂದ 300 ಅಡಿಕೆ ಕಾಯಿಗಳು ಇರುವಂತಹ ಮರಗಳು ಬೀಜದ ಗೋಟಿಗೆ ಯೋಗ್ಯವಾಗಿರುತ್ತವೆ . ಜೊತೆಗೆ ಕಂಕ್ಕಿಯಲ್ಲಿ ಕಡಿಮೆ ನಾರಿನ ಗೊಂಚಲು, ಮತ್ತು ಕಂಕ್ಕಿಗಳು ಉದ್ದವಾಗಿ ದೀರ್ಘವಾಗಿ ಚಾಚಿಕೊಂಡಿರಬೇಕು . ಕಂಕ್ಕಿಯ ಬುಡದಿಂದ ತುದಿಯವರೆಗೂ ಅಡಿಕೆ ಕಾಯಿ ಕಚ್ಚಿರಬೇಕು. ಇಂಥಹ ಮರಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ನವೆಂಬರ್-ಡಿಸೆಂಬರ್ ತಿಂಗಳಿಗೆ ನಮಗೆ ಬೀಜದ ಗೋಟುಗಳು ದೊರೆಯುತ್ತವೆ. ಅಡಿಕೆ ಮರದ ಮೊದಲ ಕಂಕ್ಕಿಯಿಂದ ಮತ್ತು ಕೊನೆಯ ಕಂಕ್ಕಿ ಇಂದ ಬೀಜದ ಗೋಟುಗಳನ್ನು ತೆಗೆದು ಕೊಳ್ಳಬಾರದು. ಉಳಿದ ಕಂಕ್ಕಿಗಳಿಂದ ಗೋಟುಗಳನ್ನು ಆರಿಸುವುದು ಸೂಕ್ತ, ಏಕೆಂದರೆ ಮೊದಲ ಮತ್ತು ಕೊನೆಯ ಕಂಕ್ಕಿಯಲ್ಲಿ ಕೂಳೆ ಕಾಯಿಗಳು ಅಥವಾ ನಾಟಿಗೆ ಯೋಗ್ಯವಲ್ಲದ ಕಾಯಿಗಳು ಇರುವುದರಿಂದ ಇವು ಸೂಕ್ತವಲ್ಲ. ಇಲ್ಲಿ ಮುಖ್ಯವಾಗಿ ನೆನಪಿಡಬೇಕಾದ ಅಂಶ ವೆಂದರೆ, ಬೀಜದ ಗೋಟು ಗಳನ್ನು ಕೇಳುವ ಮುನ್ನ ಗೋಟುಗಳು ಗಾಡ ಹಳದಿ ಬಣ್ಣದಿಂದ ಕೂಡಿದ್ದು, ಮರದಿಂದ ಉದುರುತ್ತಿರುವ ಬೇಕು. ಆಗ ಅವು ಬಿತ್ತನೆಗೆ ತಯಾರಿದೆ ಎಂದು ಅರ್ಥ. ಬೀಜದ ಗೋಟಿನ ಕಟಾವಿನ ನಂತರ ಅವುಗಳನ್ನು ಬೇರ್ಪಡಿಸಬೇಕಾಗುತ್ತದೆ. ಒಂದು ಅಡಿಕೆ ಗಿಡ ದಲ್ಲಿ ಮೂರರಿಂದ 4 ತರಹದ ಅಡಿಕೆ ಕಾಯಿಗಳ ದೊರೆಯುತ್ತದೆ. ಗುಂಡಗಿರುವ ಕಾಯಿ, ಕೋಲು ಕಾಯಿ, ಮಾಣ ಗಾಯಿ, ಕಾಯಿ ಗಳಿರುತ್ತವೆ. ಇದರಲ್ಲಿ ಗುಂಡಗಿನ , ಸಿಪ್ಪೆ ತೆಳುವಿರುವ, ಸಾಮಾನ್ಯ ಗಾತ್ರದ ಅಡಿಕೆಯನ್ನು ಬೀಜದ ಗೋಟನ್ನಾಗಿ ಆರಿಸಿಕೊಳ್ಳಬೇಕಾಗುತ್ತದೆ.

ಕನಿಷ್ಟ ಒಂದು ಮರದಿಂದ ಒಟ್ಟಾರೆ 400 ರಿಂದ 500 ಬೀಜದ ಗೋಟುಗಳು ದೊರೆಯುತ್ತವೆ. ಈ ರೀತಿ ಆರಿಸಿಕೊಂಡ ಗೋಟುಗಳನ್ನು ಎರಡರಿಂದ ಮೂರು ದಿನ ನೆರಳಿನಲ್ಲಿ ನೆಲದ ಮೇಲೆ ಒಣಗಿಸಬೇಕು. ನಂತರ ಬೀಜದ ಅಡಿಕೆ ಗೋಟುಗಳು ನಾಟಿ ಮಾಡಲು ಯೋಗ್ಯವಾಗಿರುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Agriculture

ಮೆಕ್ಕೆಜೋಳಕ್ಕೆ ₹3,000 ಕನಿಷ್ಠ ಬೆಂಬಲ ಬೆಲೆ ಬೇಕು ಇಲ್ಲದಿದ್ದರೆ ಕಬ್ಬು ಬೆಳೆಗಾರರಂತೆ ಹೋರಾಟ : ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ

Published

on

ಬೆಂಗಳೂರು :  ಮೆಕ್ಕೆಜೋಳ ಬೆಳೆಗಾರರ ಹಿತಾಸಕ್ತಿಗಾಗಿ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಎಚ್ಚರಿಸಿದ್ದಾರೆ. ಸರ್ಕಾರವು ಮೆಕ್ಕೆಜೋಳಕ್ಕೆ ₹3,000 ಕನಿಷ್ಠ ಬೆಂಬಲ ಬೆಲೆ (MSP) ನಿಗದಿ ಮಾಡದಿದ್ದರೆ, ಕಬ್ಬು ಬೆಳೆಗಾರರಂತೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿನ್ನೆಲೆ:
ಇತ್ತೀಚಿನ ವರ್ಷಗಳಲ್ಲಿ ಮೆಕ್ಕೆಜೋಳದ ಮಾರುಕಟ್ಟೆ ಬೆಲೆ ನಿರಂತರ ಕುಸಿತ ಕಂಡಿದ್ದು, ರೈತರು ನಷ್ಟದ ಬಲೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ₹3,000 MSP ನೀಡುವುದು ನ್ಯಾಯಸಮ್ಮತ ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿವೆ.

“ರೈತರ ದುಡಿಮೆ ಗೌರವಿಸಲ್ಪಡಬೇಕು. ಸರ್ಕಾರವು ಮೆಕ್ಕೆಜೋಳದ ಬೆಲೆ ಸ್ಥಿರಪಡಿಸದಿದ್ದರೆ, ಕಬ್ಬು ಬೆಳೆಗಾರರ ಶೈಲಿಯ ಹೋರಾಟ ಅನಿವಾರ್ಯವಾಗಲಿದೆ. ರೈತರ ಹಿತಕ್ಕಾಗಿ ನಾವು ಹೋರಾಟಕ್ಕೆ ಸಿದ್ಧರಾಗಿದ್ದೇವೆ,” ಎಂದು ರೇಣುಕಾಚಾರ್ಯ ಅವರು ಹೇಳಿಕೆ ನೀಡಿದ್ದಾರೆ.

ಮುಖ್ಯ ಬೇಡಿಕೆಗಳು:
ಮೆಕ್ಕೆಜೋಳಕ್ಕೆ ಕನಿಷ್ಠ ₹3,000 MSP ನಿಗದಿ
ರೈತರಿಗೆ ಸಮಯಕ್ಕೆ ಸರಿಯಾದ ಪಾವತಿ ಖಾತರಿ
ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರಗಳ ಸಂಖ್ಯೆಯ ಹೆಚ್ಚಳ

ರೈತರ ಶ್ರಮಕ್ಕೆ ನ್ಯಾಯ ದೊರಕಿಸಲು ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ರೈತ ನಾಯಕರ ಸ್ಪಷ್ಟ ಸಂದೇಶ. ಸರ್ಕಾರದ ನಿರ್ಧಾರವನ್ನು ಎದುರು ನೋಡುತ್ತಿರುವ ರೈತರ ನಂಬಿಕೆ ಈಗ ಸರ್ಕಾರದ ಮುಂದಿನ ಹೆಜ್ಜೆಯ ಮೇಲೆ ಅವಲಂಬಿತವಾಗಿದೆ.

Continue Reading

Agriculture

ಸಕ್ಕರೆ ಕಾರ್ಖಾನೆಗಳ ಕಬ್ಬು ದರ ನಿಗದಿ: ರೈತರಿಗೆ ಸಿಹಿ ಸುದ್ದಿ : ಅಂತಿಮ ದರ ಪ್ರಕಟಣೆ

Published

on

ಇತ್ತೀಚಿಗೆ ನಡೆದ ಪ್ರತಿಭಟನೆಯ ಫಲವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ನಡುವೆ ಚರ್ಚೆ ನಡೆದಿದ್ದು, ರಾಜ್ಯ ಸರ್ಕಾರವು ಕಬ್ಬಿಗೆ ಹೊಸ ದರ ನಿಗದಿ ಮಾಡುವುದರ ಮೂಲಕ ರಾಜ್ಯದ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಎಷ್ಟು ಹೆಚ್ಚಳ?

ಹೊಸ ದರದ ಪ್ರಕಾರ, ಪ್ರತಿ ಟನ್‌ ಕಬ್ಬಿಗೆ ₹3,300 ನಿಗದಿ ಮಾಡಲಾಗಿದೆ. ಹಿಂದಿನ ದರವಾದ ₹3,200 ಗೆ ಹೋಲಿಸಿದರೆ ₹100ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಕಾರ್ಖಾನೆಗಳು ₹50 ಹೆಚ್ಚುವರಿ ಪಾವತಿಸಲಿದ್ದು, ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ಮತ್ತೊಂದು ₹50 ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಇಳುವರಿ ಪ್ರಮಾಣವನ್ನು ಆಧರಿಸಿ ದರ ನಿಗದಿ ಮಾಡಲಾಗಿದ್ದು, ಶೇ.10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ಮತ್ತು ಶೇ.11.25 ಇಳುವರಿ ಪ್ರಮಾಣದ ಕಬ್ಬಿಗೆ ₹3,300 ದೊರೆಯಲಿದೆ. ಸಾಗಣೆ ಮತ್ತು ಕಟಾವು ವೆಚ್ಚಗಳನ್ನು ಹೊರತುಪಡಿಸಿ ಈ ದರ ನೀಡಲಾಗುತ್ತದೆ.

ಈ ನಿರ್ಧಾರದಿಂದ ರಾಜ್ಯದ ಕಬ್ಬು ರೈತರಿಗೆ ಆರ್ಥಿಕ ನೆರವಾಗಲಿದ್ದು, ಸಕ್ಕರೆ ಕಾರ್ಖಾನೆಗಳು ಸಹ ರೈತರೊಂದಿಗೆ ಸಹಕಾರದ ಮನೋಭಾವದಿಂದ ಕೆಲಸ ಮಾಡಲಿವೆ ಎಂದು ಸರ್ಕಾರ ಆಶಾಭಾವನೆ ವ್ಯಕ್ತಪಡಿಸಿದೆ

Continue Reading

Agriculture

ರೈತರಿಗೆ ಸಿಹಿ ಸುದ್ದಿ : ಬೆಳೆ ನಷ್ಟ ಪರಿಹಾರ ದರ ಪರಿಷ್ಕರಣೆಗೆ ಸರ್ಕಾರದ ನಿರ್ಧಾರ

Published

on

Crop Loss Compensation Increase : ಕರ್ನಾಟಕ ರಾಜ್ಯದಲ್ಲಿ ಒಟ್ಟು ಅಂದಾಜು 5.20 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದ್ದು, SDRF ಮಾರ್ಗ ಸೂಚಿಯ ಪ್ರಕಾರ ಸದ್ಯಕ್ಕೆ ನೀಡುತ್ತಿರುವ ಪರಿಹಾರವು ರೈತರಿಗೆ ಸಾಲುವುದಿಲ್ಲ ಎಂಬ ಅಭಿಪ್ರಾಯದ ಹಿನ್ನಲೆಯಲ್ಲಿ ಸರ್ಕಾರವು ಪರಿಹಾರ ಮೊತ್ತ ಪರಿಷ್ಕರಣೆಗೆ ನಿರ್ಧಾರ ತೆಗೆದುಕೊಂಡಿದೆ.

ಈ ನಿರ್ಧಾರವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವರ್ಷ ಉತ್ತಮ ಮುಂಗಾರು ಮಳೆ ಆದ ಕಾರಣ ರೈತರು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿದ್ದರು. ಆದರೆ ಇದರ ಮಧ್ಯೆ ಮೂರರಿಂದ ನಾಲ್ಕು ವಾರ ಸರಿಯಾದ ಮಳೆ ಬರೆದ ಕಾರಣ ಹಲವಾರು ಕಡೆಯಲ್ಲಿ ಬೆಳೆ ಒಣಿಗಿದ್ದವು.

ಇದರಿಂದಾಗಿ ರೈತರು ಮರು ಬಿತ್ತನೆ ಮಾಡಿದರು. ಇದರ ಬೆನ್ನಲ್ಲೇ ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಅತಿವೃಷ್ಟಿ ಮಳೆಯಾದ ಕಾರಣ ರಾಜ್ಯದ್ಯಂತ ಹಲವಾರು ಕಡೆ ವ್ಯಾಪಕ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತರು ನಷ್ಟ ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದರಿಂದಾಗಿ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಪರಿಹಾರ ಮೊತ್ತ ಪರಿಷ್ಕರಣೆ ಅಂತಿಮ ಯಾವಾಗ?

ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ನಷ್ಟದ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಗರಿಷ್ಠ 10 ದಿನದ ಒಳಗಾಗಿ ಸಮೀಕ್ಷೆ ಕಾರ್ಯ ಮುಗಿಸಿ ವರದಿ ಸಲ್ಲಿಸಲು ಸರ್ಕಾರ ಆದೇಶ ನೀಡಿದೆ. ಇದರ ನಂತರ ಪರಿಷ್ಕೃತ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.

Continue Reading

Trending

error: Content is protected !!