Education
ಪದವೀಧರರಿಗೆ ಗುಡ್ ನ್ಯೂಸ್ : 8283 ಹುದ್ದೆಗಳ ನೇಮಕಾತಿಗೆ SBI ಅರ್ಜಿ ಆಹ್ವಾನ.
ನವಂಬರ್ 17 2023 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ನೇಮಕಾತಿ 2023 ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
ಕ್ಲರಿಕಲ್ ಕೆಡರ್ ನಲ್ಲಿ ಜೂನಿಯರ್ ಅಸೋಸಿಯೇಟ್ (ಗ್ರಾಹಕರ ಬೆಂಬಲ ಮತ್ತು ಮಾರಾಟ) ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ sbi.co ಗಮನಿಸಬಹುದು.
ಈ ನೇಮಕಾತಿ ಡ್ರೈವ್ ಕ್ಲೆರಿಕಲ್ ಕೇಡರ್ ನಲ್ಲಿ ಜೂನಿಯರ್ ಅಸೋಸಿಯೇಟ್ 8283 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ನೋಂದಣಿ ಪ್ರಕ್ರಿಯೆ ನವೆಂಬರ್ 17ರಂದು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 7.2023 ರಂದು ಕೊನೆಗೊಳ್ಳುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿಯ ಆರಂಭಿಕ ದಿನಾಂಕ ನವೆಂಬರ್ 17-2023
ಅಪ್ಲಿಕೇಶನ್ ಕೊನೆಯ ದಿನಾಂಕ ಡಿಸೆಂಬರ್ 07-2023
ಪೂರ್ವಭಾವಿ ಪರೀಕ್ಷೆ ಜನವರಿ 23
ಮುಖ್ಯ ಪರೀಕ್ಷೆ ಫೆಬ್ರವರಿ 2024

ಅರ್ಹತೆಯ ಮಾನದಂಡ
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ ಇಂಟಿಗ್ರೇಟೆಡ್ ಡಿಗ್ರಿ (IDD) ಪ್ರಮಾಣ ಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಐಡಿಡಿ ಪಾಸ್ ಮಾಡುವ ದಿನಾಂಕ ಡಿಸೆಂಬರ್ 31-2023 ರಂದು ಅಥವಾ ಅದಕ್ಕಿಂತ ಮೊದಲು ಎಂದು ಖಚಿತ ಪಡಿಸಿಕೊಳ್ಳಬೇಕು ವಯಸ್ಸಿನ ಮಿತಿ 20 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆ ಆನ್ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ) ಮತ್ತು ನಿರ್ದಿಷ್ಟ ಪಡಿಸಿದ ಸ್ಥಳೀಯ ಭಾಷೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ನೂರು ಅಂಕಗಳಿಗೆ ಆಬ್ಜೆಕ್ಟಿವ್ ಪರೀಕ್ಷೆಗಳನ್ನು ಒಳಗೊಂಡಿರುವ ಆನ್ಲೈನ್ ಪೂರ್ವಭಾವಿ ಪರೀಕ್ಷೆಯನ್ನು ಆನ್ಲೈನ್ ನಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯು ಒಂದು ಗಂಟೆ ಅವಧಿಯ ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ, ಇಂಗ್ಲಿಷ್ ಭಾಷೆ ಸಂಖ್ಯಾತ್ಮಕ ಸಾಮರ್ಥ್ಯ ಮತ್ತು ತಾರ್ಕಿಕ ಸಾಮರ್ಥ್ಯ.
ಅರ್ಜಿ ಶುಲ್ಕ
ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ 750ರೂ. OBC/EWS ವರ್ಗಕ್ಕೆ, SC/ ST / PwBD / ESM / DESM ಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ
Education
Power Sprayer ಸಬ್ಸಿಡಿ ಯೋಜನೆ: ಕೇವಲ ರೂ.1,781 ಪಾವತಿಸಿ ಪವರ್ ಸ್ಪ್ರೇಯರ್ ಪಡೆಯಿರಿ.
ಕರ್ನಾಟಕ ರಾಜ್ಯ ಸರ್ಕಾರ ರೈತ ಬಂಧುಗಳಿಗೆ ಸಂತಸದ ಸುದ್ದಿ ನೀಡಿದ್ದು, ಸಹಾಯಧನ (ಸಬ್ಸಿಡಿ) ಯೋಜನೆಯಡಿ ಪವರ್ ಸ್ಪ್ರೇಯರ್ ಪಡೆಯುವ ಅವಕಾಶ ಲಭ್ಯವಾಗಿಸಿದೆ. ಈ ಯೋಜನೆಯಡಿ ಕೇವಲ, ರೂ.1,781/- ಪಾವತಿಸಿ ಯಂತ್ರವನ್ನು ಪಡೆಯಬಹುದಾಗಿದೆ.
ಯೋಜನೆಯ ಉದ್ದೇಶ:
ರೈತರಿಗೆ ಸ್ಪ್ರೇಯಿಂಗ್ ಕೆಲಸವನ್ನು ಸುಲಭಗೊಳಿಸಿ, ಸಮಯ ಮತ್ತು ಶ್ರಮ ಉಳಿಸಲು ಈ ಪವರ್ ಸ್ಪ್ರೇಯರ್ ಸಬ್ಸಿಡಿ ಯೋಜನೆ ರೂಪಿಸಲಾಗಿದೆ. ಯಂತ್ರದ ಸಹಾಯದಿಂದ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಸಮವಾಗಿ ಮತ್ತು ವೇಗವಾಗಿ ಸಿಂಪಡಿಸಬಹುದು.
ಸಹಾಯಧನದ ವಿವರಗಳು:
ಸಾಮಾನ್ಯ ವರ್ಗದ ರೈತರಿಗೆ:
ಪೂರ್ಣ ದರ: ₹10,219/-
ಸಬ್ಸಿಡಿ: ₹4,688/-
ರೈತನಿಂದ ಪಾವತಿ: ₹5,531/-
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ರೈತರಿಗೆ: ಪೂರ್ಣ ದರ: ₹9,375/-
ಸಬ್ಸಿಡಿ: ₹8,438/-
ರೈತನಿಂದ ಪಾವತಿ:₹1,781/-
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್
3. ಜಮೀನಿನ ಪಹಣಿ/RTC
4. ರೇಷನ್ ಕಾರ್ಡ್
5. ಪಾಸ್ಪೋರ್ಟ್ ಸೈಸ್ ಫೋಟೋ
6. ಬಾಂಡ್ ಪೇಪರ್
7. ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ:
ರೈತ ಬಂಧುಗಳು ಸಮೀಪದ ರೈತ ಸಂಪರ್ಕ ಕೇಂದ್ರ (Raita Samparka Kendra)ಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆಯಬಹುದು.ಅಥವಾ ಆನ್ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.
ಎಲ್ಲಾ ದಾಖಲೆಗಳೊಂದಿಗೆ ಪೂರ್ಣ ಮಾಹಿತಿಯನ್ನು ಸಲ್ಲಿಸಿದ ಬಳಿಕ, ಸಹಾಯಧನ ಅನುಮೋದನೆ ದೊರೆಯುತ್ತದೆ.
ಸೂಚನೆಗಳು:
1.ಸಬ್ಸಿಡಿ ಲಭ್ಯತೆ ನಿಮ್ಮ ಜಿಲ್ಲೆಯ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಅನುದಾಯ ಮಿತಿಯ ಮೇಲೆ ಅವಲಂಬಿತವಾಗಿರುತ್ತದೆ.
2.ಯಂತ್ರದ ಕಂಪನಿ ಹಾಗೂ ಮಾದರಿಗಳ ಪ್ರಕಾರ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.
3.ಅರ್ಜಿಯ ವೇಳೆಗೆ ಅಧಿಕೃತ ದೃಢೀಕರಣ ಪತ್ರಗಳನ್ನು ಮಾತ್ರ ಸಲ್ಲಿಸುವುದು ಅತ್ಯಂತ ಅಗತ್ಯ.
ರಾಜ್ಯ ಸರ್ಕಾರ ನೀಡುತ್ತಿರುವ ಈ ಪವರ್ ಸ್ಪ್ರೇಯರ್ ಸಹಾಯಧನ ಯೋಜನೆಯು ರೈತರ ಶ್ರಮವನ್ನು ಕಡಿಮೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿ ಮಾಹಿತಿ ಪಡೆದು ತಕ್ಷಣ ಅರ್ಜಿ ಸಲ್ಲಿಸಿ.
Education
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) – 2025 ಅರ್ಜಿ ಆಹ್ವಾನ : ಹೊಸ ನಿಯಮ ತಿದ್ದುಪಡಿ ಪ್ರಕಟ!
ಈ ಬಾರಿ TET ನಿಯಮದಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಗಿದ್ದು, ಶಿಕ್ಷಕ ವೃತ್ತಿಗೆ ಆಸಕ್ತರಾಗಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶವಾಗಿದೆ.
ಪರೀಕ್ಷೆಯ ಕುರಿತು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 8ನೇ ತರಗತಿವರೆಗೆ ಶಿಕ್ಷಕರ ನೇಮಕಾತಿಗೆ ಅಗತ್ಯವಾದ ಅರ್ಹತಾ ಪರೀಕ್ಷೆಯಾಗಿದೆ. ಪ್ರತೀ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಈ ಪರೀಕ್ಷೆಯನ್ನು ಆಯೋಜಿಸುತ್ತದೆ.
ಪ್ರಮುಖ ತಿದ್ದುಪಡಿ: ಹಿಂದಿನ ಅಧಿಸೂಚನೆಯಲ್ಲಿ 1ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಪದವಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ B.Ed ಓದುತ್ತಿರಬೇಕು ಅಥವಾ ಪಾಸಾಗಿರಬೇಕು ಎಂಬ ನಿಯಮ ಅನಿವಾರ್ಯವಾಗಿತ್ತು.ಆದರೆ ಈಗ ಈ ನಿಯಮವನ್ನು ಹಿಂಪಡೆಯಲಾಗಿದ್ದು, ಈ ಶರತ್ತು ಇದೀಗ ಕೈಬಿಡಲಾಗಿದೆ, ಹಾಗಾಗಿ ಪೂರ್ವ ನಿಯಮದಂತೆ ಅಭ್ಯರ್ಥಿಗಳಿಗೆ ಹೆಚ್ಚು ಸಡಿಲಿಕೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-11-2025
ಪರೀಕ್ಷೆಯ ದಿನಾಂಕ: 07-12-2025
ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ(https://schooleducation.karnataka.gov.in/cacell/en) ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಬಹುದು.
TET ಹೊಸ ನಿಯಮ ತಿದ್ದುಪಡಿಯಿಂದ ಹೆಚ್ಚು ಅಭ್ಯರ್ಥಿಗಳಿಗೆ ಅವಕಾಶ ದೊರೆತಿದೆ. ಹಾಗೂ ಶಿಕ್ಷಕರಾಗುವ ಕನಸನ್ನು ಸಾಕಾರಗೊಳಿಸಲು ಇದು ಉತ್ತಮ ಅವಕಾಶವಾಗಿದೆ.
Education
ಬ್ಯಾಂಕ್ ಖಾತೆಗಳಲ್ಲಿ ಹೊಸ ಅಧ್ಯಾಯ: ಕುಟುಂಬದ ಭದ್ರತೆಗೆ ನಾಲ್ಕು ನಾಮನಿರ್ದೇಶಿತರ ಅವಕಾಶ
ಬ್ಯಾಂಕ್ ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ ಸಿಗಲಿದೆ. ಈಗಿನವರೆಗೆ ಖಾತೆಗಳಲ್ಲಿ ಒಬ್ಬರ ನಾಮನಿರ್ದೇಶನಕ್ಕೆ ಮಾತ್ರ ಅವಕಾಶವಿತ್ತು, ನವೆಂಬರ್ 1, 2025ರಿಂದ ನಾಲ್ಕು ಜನರ ತನಕ ನಾಮನಿರ್ದೇಶಿತರನ್ನು ನೇಮಿಸಲು ಅವಕಾಶ ದೊರೆಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಇಲಾಖೆ ಪ್ರಕಟಿಸಿದೆ.
ಹೊಸ ನಿಯಮದ ಉದ್ದೇಶ :
ಖಾತೆದಾರರು ನಿಧನರಾದ ನಂತರ ಬ್ಯಾಂಕ್ ಹಣ ಅಥವಾ ಠೇವಣಿಗಳ ಹಕ್ಕು ಹಂಚಿಕೆಯಲ್ಲಿ ಅನಾವಶ್ಯಕ ತೊಂದರೆಗಳು, ಕಾನೂನು ವಿವಾದಗಳು ಉಂಟಾಗದಂತೆ ತಡೆಯುವುದು.
ಹೊಸ ನಾಮನಿರ್ದೇಶನ ವ್ಯವಸ್ಥೆ ಹೇಗಿರಲಿದೆ?
* ಖಾತೆದಾರರು ಗರಿಷ್ಠ ನಾಲ್ಕು ಜನರನ್ನು ನಾಮನಿರ್ದೇಶಿತರಾಗಿ ನಿಗದಿಪಡಿಸಬಹುದು.
* ಪ್ರತಿ ನಾಮನಿರ್ದೇಶಿತನಿಗೂ ಶೇಕಡಾವಾರು ಹಂಚಿಕೆ (ಉದಾ: 40%, 30%, 20%, 10%) ನಿಗದಿಪಡಿಸಬಹುದು.
* ಬ್ಯಾಂಕ್ ಲಾಕರ್ ಅಥವಾ ಸುರಕ್ಷಿತ ವಸ್ತುಗಳ ನಾಮನಿರ್ದೇಶನದ ಸಂದರ್ಭಗಳಲ್ಲಿ ಕ್ರಮಬದ್ಧ ನಾಮನಿರ್ದೇಶನ (successive nomination) ವ್ಯವಸ್ಥೆ ಅನ್ವಯಿಸುತ್ತದೆ.
* ಖಾತೆದಾರರು ಬಯಸಿದಾಗ ನಾಮನಿರ್ದೇಶನದ ಹೆಸರು ಅಥವಾ ಪ್ರಮಾಣ ಬದಲಾಯಿಸಲು ಅವಕಾಶವಿದೆ.
ಈ ನಿಯಮ ಜಾರಿಗೆ ಆಗುವ ದಿನಾಂಕ : 1/11/2025
ಬ್ಯಾಂಕ್ ಖಾತೆಗಳಿಗೆ ನಾಲ್ಕು ನಾಮನಿರ್ದೇಶನ ಅವಕಾಶ ನೀಡುವ ಹೊಸ ನಿಯಮ ಗ್ರಾಹಕರಿಗೆ ಭದ್ರತೆ, ಪಾರದರ್ಶಕತೆ ಮತ್ತು ವಿಶ್ವಾಸದ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರತಿ ಖಾತೆದಾರರೂ ತಮ್ಮ ನಾಮನಿರ್ದೇಶನ ಮಾಹಿತಿಯನ್ನು ತಕ್ಷಣ ನವೀಕರಿಸಿಕೊಳ್ಳಬೇಕು.
-
Hassan3 hours agoಎಲೈಟ್ ಸಂಸ್ಥೆಯ ನಾಗರಾಜ್ಗೆ ’ಕರ್ನಾಟಕ ಗುರುರತ್ನ ಪ್ರಶಸ್ತಿ-2025’
-
Mysore10 hours agoಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಏಕವಚನ ಬಳಕೆ: ಸಿಎಂ ವಿರುದ್ಧ ಹೇಮಾ ನಂದೀಶ್ ಅಸಮಾಧಾನ
-
Manglore33 minutes agoದ.ಕ.ಜಿಲ್ಲೆಯಲ್ಲಿ ಪ್ರತೀಕಾರದ ಕೊಲೆಗೆ ಕುಮ್ಮಕ್ಕು: 16 ಇನ್ಸ್ಟ್ಗ್ರಾಮ್ ಪೇಜ್ಗಳ ವಿರುದ್ಧ FIR ದಾಖಲು
-
Hassan4 hours agoNOC ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಿ: ಆರ್. ಮರಿಜೋಸೆಫ್ ಆಗ್ರಹ
-
Hassan4 hours agoಈ ಶಿಕ್ಷಕ ಎಣ್ಣೆದಾಸ, ಆತನ ಹೆಂಡತಿ ಮಕ್ಕಳ ಪಾಲಿಗೆ ರಾಕ್ಷಸಿ: ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರಿಂದ ಆಗ್ರಹ
-
Hassan6 hours agoಸೊಪ್ಪಿನಹಳ್ಳಿಯಲ್ಲಿ ಪ. ಜಾತಿ ಕುಟುಂಬಗಳಿಂದ ರಸ್ತೆ ತಡೆ: ರಸ್ತೆ ಬಿಡಿಸಿಕೊಡಲು ಆಗ್ರಹಿಸಿ ಭೀಮ್ ಆರ್ಮಿ ತಹಸೀಲ್ದಾರ್ ಗೆ ಮನವಿ
-
Mandya1 hour agoಅಕ್ರಮ ಖಾತೆ ಮಾಡಿದ್ದಾರೆಂದು ಆರೋಪಿಸಿ ಶವವಿಟ್ಟು ಪ್ರತಿಭಟನೆ ನಡೆಸಿದ ಕುಟುಂಬಸ್ಥರು
-
Mysore7 hours agoಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು
