Connect with us

National

ನಾಳೆ ಜಿಎಸ್‌ಟಿ ಇಳಿಕೆ: ಅಗತ್ಯ ವಸ್ತುಗಳ ಬೆಲೆ ದರ ಇಳಿಕೆ ಯಾವುದಕ್ಕೆ ಎಷ್ಟು?

Published

on

ಬೆಂಗಳೂರು: ಸಾರ್ವಜನಿಕರಿಗೆ ನಾಳೆಯಿಂದ ಡಬ್ಬಲ್ ಸಂಭ್ರಮ. ದಸರಾ  ಜೊತೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಶಾಂಪೂ, ಪೇಸ್ಟ್ ನಿಂದ ಎಲೆಕ್ಟ್ರಾನಿಕ್ಸ್, ಆಟೋ ಮೊಬೈಲ್‌ವರೆಗೂ ಜಿಎಸ್‌ಟಿ ಸ್ಲ್ಯಾಬ್  ಪರಿಷ್ಕರಣೆಯಾಗಿದೆ. ಪರಿಣಾಮ ಕೆಲ ವಸ್ತುಗಳ ಮೇಲಿದ್ದ ತೆರಿಗೆ 12%ನಿಂದ 5% ಹೋದರೆ ಕೆಲ ದುಬಾರಿ ವಸ್ತುಗಳ ಬೆಲೆ 28% ನಿಂದ 18% ಇಳಿಕೆಯಾಗಿದೆ.

ಸೆ.22 ರಿಂದ ಇಳಿಕೆ ಯಾಕೆ?

ಸೆಪ್ಟೆಂಬರ್‌ ಮೊದಲ ವಾರದಲ್ಲಿ ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಪರಿಷ್ಕರಣೆ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದ್ದವು.

2017ರಲ್ಲಿ ಜಾರಿಯಾದ ಜಿಎಸ್‌ಟಿಯಲ್ಲಿ 0, 5%, 12%, 18%, 28% ಅಡಿಯಲ್ಲಿ ವಸ್ತುಗಳ ಮೇಲೆ ತೆರಿಗೆ ಹಾಕಲಾಗುತ್ತಿತ್ತು. ಆದರೆ ಈಗ 12% ಮತ್ತು 28% ಸ್ಲ್ಯಾಬ್‌ ಅನ್ನು ತೆಗೆಯಲಾಗಿದ್ದು ಈ ಪಟ್ಟಿಯಲ್ಲಿದ್ದ ಬಹುತೇಕ ವಸ್ತುಗಳನ್ನು 5% ಮತ್ತು 18% ಶಿಫ್ಟ್‌ ಮಾಡಲಾಗಿದೆ. ಇದರ ಜೊತೆ ಐಷಾರಾಮಿ ವಸ್ತುಗಳು (ತಂಬಾಕು, ಐಷಾರಾಮಿ ಕಾರುಗಳು ಇತ್ಯಾದಿ) ಮೇಲೆ 40% ತೆರಿಗೆ ಹಾಕಲಾಗುತ್ತದೆ.

ತೆರಿಗೆ ಪರಿಷ್ಕರಣೆಯಾದ ದರಗಳು ಸೆ.22 ರಿಂದ ಜಾರಿಗೆ ಬರಬೇಕು ಎಂಬ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್‌ ತೆಗೆದುಕೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಾದ್ಯಂತ 99% ರಷ್ಟು ವಸ್ತುಗಳ ಬೆಲೆ ಇಳಿಕೆಯಾಗಲಿದೆ.

ಅಗತ್ಯ ವಸ್ತುಗಳ ಹಳೆದರ – ಹೊಸದರ – ಉಳಿತಾಯ 

  • ಲಕ್ಸ್ ಸೋಪ್(75ಗ್ರಾಂ) – 96 – 85 – 11
  • ಶಾಂಪೂ (340 ಎಂಎಲ್) – 490 – 435 – 55
  • ಲೈಫ್ ಬಾಯ್ ಸೋಪ್(75ಗ್ರಾಂ) – 68 – 60 – 8
  • ಲ್ಯಾಕ್ ಮೀ ಕಾಂಪ್ಯಾಕ್ಟ್ – 675 – 599 – 76
  • ಟೂತ್‌ಪೇಸ್ಟ್(150 ಗ್ರಾಂ) – 145 – 129 – 24
  • ನೆಸ್ಕೆಫೆ (45ಗ್ರಾಂ) – 265 – 235 – 30
  •  ನೆಸ್ಕೆಫೆ ಗೋಲ್ಡ್(100 ಗ್ರಾಂ) – 850 – 755 – 95
  • ಹಾರ್ಲಿಕ್ಸ್ ಉಮೆನ್(400ಗ್ರಾಂ) – 320 -284 – 36
  • ಸೆರ್ಲ್ಯಾಕ್ (350ಗ್ರಾಂ) – 295 – 265 – 30
  • ಹಾರ್ಲಿಕ್ಸ್ (200 ಗ್ರಾಂ) – 130 -110 – 20
  • ಬೂಸ್ಟ್ (200 ಗ್ರಾಂ) – 124 -110 -14
  • ಕಿಸಾನ್ ಕೆಚಪ್ (850 ಗ್ರಾಂ) – 100 – 93 – 7
  • ಬ್ರೂ ಕಾಫಿ (75 ಗ್ರಾಂ) – 300 – 270 – 30

ಹಾಲಿನ ಉತ್ಪನ್ನಗಳು (ಕೆಎಂಎಫ್‌) ಎಷ್ಟು ಇಳಿಕೆ?

ಅಗತ್ಯ ವಸ್ತುಗಳ – ಹಳೆದರ – ಹೊಸದರ – ಉಳಿತಾಯ

  • ಗುಡ್ ಲೈಫ್‌(1 ಲೀಟರ್) – 70 – 68- 2
  • ಚೀಸ್ (1 ಕೆ.ಜಿ) – 480 – 450 – 30
  • ಚೀಸ್ ಸಂಸ್ಕರಣೆ (1ಕೆ.ಜಿ) – 530 – 497 – 33
  • ಐಸ್ ಕ್ರೀಂ (1000 ಎಂಎಲ್) – 200 – 178 – 22
  • ತುಪ್ಪ (1000 ಎಂಲ್) – 650 – 610 – 40
  • ಬೆಣ್ಣೆ (500 ಗ್ರಾಂ) – 305 – 286 – 19
  • ಪನೀರ್ (1 ಕೆಜಿ) – 425 – 408 – 17

ಅಮುಲ್ ಉತ್ಪನ್ನಗಳು ದರ ಎಷ್ಟು ಇಳಿಕೆ?

ವಸ್ತುಗಳು – ಹಳೆದರ – ಹೊಸದರ – ಉಳಿತಾಯ

  • ಅಮುಲ್ ಟಬ್ ವೆನಿಲ್ಲಾ ಮ್ಯಾಜಿಕ್ (1ಲೀ) – 195 – 135 – 60
  • ಕುಲ್ಫಿ ಪಂಜಾಬಿ (60ಮಿಲೀ) – 15 – 10 – 5
  • ಅಮುಲ್ ಡಾರ್ಕ್ ಚಾಕೊಲೇಟ್ (150ಗ್ರಾಂ) – 200 – 180 – 20
  •  ಸಕ್ಕರೆ ರಹಿತ ಕುಕೀಸ್‌ನ (450ಗ್ರಾಂ) – 250 – 225 -25
  • ಅಮುಲ್ ಬೆಣ್ಣೆ (500 ಗ್ರಾಂ) – 305 ರೂ – 285 -20
  • ಅಮುಲ್ ತಾಜಾ ಟೋನ್ಡ್ ಮಿಲ್ಕ್ (1 ಲೀಟರ್ ಯುಹೆಚ್‌ಟಿ) – 77 – 75 – 2
  • ಅಮುಲ್ ಗೋಲ್ಡ್ (1 ಲೀಟರ್ ಯುಹೆಚ್‌ಟಿ) – 83 – 80 – 3
  •  ಪನೀರ್ (200 ಗ್ರಾಂ) – 99 – 95 – 5

 

Continue Reading

National

ಮಲಯಾಳಂ ನಟ ಮೋಹನ್‌ ಲಾಲ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಣೆ

Published

on

ನವದೆಹಲಿ: ಮಲಯಾಳಂ ಖ್ಯಾತ ನಟ ಮೋಹನ್ ಲಾಲ್‌ಗೆ  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು   ಘೋಷಿಸಲಾಗಿದೆ. ಸೆ.23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್‌ಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಘೋಷಣೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವೂ, ಮೋಹನ್ ಲಾಲ್ ಅವರ ಸಿನಿಮೀಯ ಪ್ರಯಾಣವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದೆ.

ಮೋಹನ್ ಲಾಲ್ ಅವರು ಕಳೆದ 45 ವರ್ಷಗಳಿಂದಲೂ ಸಿನಿಮಾ ರಂಗದಲ್ಲಿದ್ದಾರೆ. ಆರಂಭದ ಸುಮಾರು 25 ಸಿನಿಮಾಗಳಲ್ಲಿ ಮೋಹನ್ ಲಾಲ್ ವಿಲನ್ ಪಾತ್ರಗಳಲ್ಲಿಯೇ ನಟಿಸಿದರು. ಮೋಹನ್ ಲಾಲ್ ವಿಲನ್ ಆಗಿ ಜನಪ್ರಿಯರಾದ ಬಳಿಕ 1984ರಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಗುವ ಮೂಲಕ ಮೋಹನ್‌ ಲಾಲ್ ನಾಯಕನಾಗಿಯೇ ಮುಂದುವರೆದರು. 1980 ರಿಂದ ಈ ವರೆಗೆ ಮೋಹನ್ ಲಾಲ್ ಅವರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ. 1986ರಲ್ಲಿ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸಿದ್ದರು.

ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್, ಮಲಯಾಳಂ ಮಾತ್ರವೇ ಅಲ್ಲದೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಭಾಜನರಾದ ಮಲಯಾಳಂ ಚಿತ್ರರಂಗದ ಎರಡನೇ ಕಲಾವಿದರು ಮೋಹನ್ ಲಾಲ್. 2004ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ನೀಡಲಾಗಿತ್ತು. ಮೋಹನ್ ಲಾಲ್ ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

2024ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಿಥುನ್ ಚಕ್ರವರ್ತಿ ಅವರಿಗೆ ನೀಡಿ ಗೌರವಿಸಲಾಗಿತ್ತು. 2019ರಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಲಾಗಿತ್ತು. ಇದೀಗ 2023ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣದ ಮತ್ತೊಬ್ಬ ಸೂಪರ್ ಸ್ಟಾರ್ ಆಗಿರುವ ಹಾಗೂ ಅತ್ಯದ್ಭುತ ನಟರಾಗಿರುವ ಮೋಹನ್ ಲಾಲ್ ಅವರಿಗೆ ಘೋಷಿಸಲಾಗಿದೆ. ಮೋಹನ್ ಲಾಲ್ ಅವರು ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಮೋಹನ್ ಲಾಲ್ ಅವರಿಗೆ ಶುಭಾಶಯ ಕೋರಿದ್ದಾರೆ.

 

Continue Reading

National

ಪ್ರಪಂಚದಲ್ಲಿ ಯಾರು ಶತ್ರುಗಳಿಲ್ಲ, ಅವಲಂಬನೆಯೇ ದೊಡ್ಡ ಶತ್ರು : ಪ್ರಧಾನಿ ಮೋದಿ

Published

on

ಗಾಂಧಿನಗರ: ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದ್ದು, ನಮಗೆ ಈ ಪ್ರಪಂಚದಲ್ಲಿ ಯಾರೂ ಶತ್ರುಗಳಿಲ್ಲ . ಆದರೆ  ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಗುಜರಾತ್‌ನ ಭಾವನನಗರದಲ್ಲಿ ಇಂದು ನಡೆದ ಸಮುದ್ರ ಸೆ ಸಮೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ 34,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಳಿಕ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕಾ ಅಧ್ಯಕ್ಷ ಟ್ರಂಪ್‌ ಶೇ. 50% ಸುಂಕ ನೀತಿಗೆ ಗುದ್ದು ನೀಡಿದರು. ಆತ್ಮನಿರ್ಭರ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ, ಭಾರತದಲ್ಲೇ ತಯಾರಾದ ಉತ್ಪನ್ನ ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.

ಇಂದು ಭಾರತ ವಿಶ್ವಬಂಧು ಭಾವನೆಯಿಂದ ಮುಂದುವರಿಯುತ್ತಿದೆ. ಹಾಗಾಗಿ ಜಗತ್ತಿನಲ್ಲಿ ನಮಗೆ ಯಾವುದೇ ದೊಡ್ಡ ಶತ್ರು ಇಲ್ಲ. ಆದರೆ  ಇತರರ ಮೇಲಿನ ಅವಲಂಬನೆಯೇ ನಮಗೆ ದೊಡ್ಡ ಶತ್ರು. ಆದ್ದರಿಂದ ನಾವು ಒಟ್ಟಾಗಿ ಈ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದರು.

ವಿದೇಶಿ ಅವಲಂಬನೆ ಹೆಚ್ಚಾದಷ್ಟು ದೇಶದ ವೈಫಲ್ಯ ಹೆಚ್ಚಾಗುತ್ತದೆ. ಹೀಗಾಗಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಾವು ದೇಶದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆತ್ಮನಿರ್ಭರವಾಗಬೇಕು. ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಇತರ ದೇಶಗಳ ಮೇಲೆ ಬಿಡಬಾರದು. ಭವಿಷ್ಯದ ಪೀಳಿಗೆಯನ್ನು ಪಣಕ್ಕಿಡಬಾರದು. 140 ಕೋಟಿ ದೇಶವಾಸಿಗಳ ಭವಿಷ್ಯವನ್ನ ನಾವು ಇತರರಿಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಒಂದು ರಾಷ್ಟ್ರ – ಒಂದು ದಾಖಲಾತಿ ಎಂಬ ಹೊಸ ಸುಧಾರಣೆ ಜಾರಿ

ಈ ಸಂದರ್ಭದಲ್ಲಿ  ಭಾರತೀಯ ಬಂದರುಗಳ ದಾಖಲಾತಿಗೆ ಸಂಬಂಧಿಸಿದ ಸುಧಾರಣೆಗಳನ್ನು ಪರಿಚಯಿಸುವುದಾಗಿ ಹೇಳಿದ ಅವರು, ಶೀಘ್ರದಲ್ಲೇ ಭಾರತೀಯ ಬಂಧರುಗಳಿಗೆ ಒಂದು ರಾಷ್ಟ್ರ – ಒಂದು ದಾಖಲಾತಿ ಎಂಬ ಹೊಸ ಸುಧಾರಣೆ ತರಲಿದ್ದೇವೆ. ಇದು ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.

ಇನ್ನು ಭಾರತದಲ್ಲಿ ತಯಾರಿಸಬೇಕಾದ ವೈವಿಧ್ಯಮಯ ಉತ್ಪನ್ನಗಳ ಬಗ್ಗೆ ಮಾತನಾಡಿದ ಅವರು, ಚಿಪ್‌ ಆಗಲಿ ಶಿಪ್‌ ಆಗಲಿ ನಾವು ಎಲ್ಲವನ್ನೂ ಭಾರತದಲ್ಲೇ ತಯಾರಿಸಬೇಕು. ಅದಕ್ಕಾಗಿ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾವು ದೇಶದ ಸಂಪತನ್ನು ಕಾಪಾಡಿಕೊಳ್ಳಲು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಇದೇ ವೇಳೆ ಭಾರತದಲ್ಲಿ ಉಕ್ಕಿನಿಂದ ತಯಾರಿಸಿದ ಐಎನ್‌ಎಸ್ ವಿಕ್ರಾಂತ್‌ ಉಲ್ಲೇಖಿಸಿ ಮಾತನಾಡಿದ ಅವರು, ಸ್ವಾವಲಂಬನೆಯ ಅಗಾಧ ಸಾಮರ್ಥ್ಯಕ್ಕೆ ಉದಾಹರಣೆ ನೀಡಿದರು. ಭಾರತ 40ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪರಿಚಯಿಯಿಸಿದೆ ಎಂದು ತಿಳಿಸಿದರು.

Continue Reading

National

ಭಾರತ-ಅಮೆರಿಕಾ ವ್ಯಾಪಾರ ಚರ್ಚೆಗೆ ಮತ್ತೊಂದು ವೇದಿಕೆ ಸಿದ್ಧ: ಅಮೆರಿಕಾ ಆಧ್ಯಕ್ಷ ಟ್ರಂಪ್‌ ಭಾರತಕ್ಕೆ ಆಗಮನ

Published

on

ನವದೆಹಲಿ: ಭಾರತ ಹಾಗೂ ಅಮೆರಿಕ  ನಡುವಿನ ವ್ಯಾಪಾರ ಚರ್ಚೆಗೆ  ಮತ್ತೊಮ್ಮೆ ವೇದಿಕೆ ಸಿದ್ಧವಾಗಿದ್ದು, ಅಮೆರಿಕಾ ಆಧ್ಯಕ್ಷ ಟ್ರಂಪ್‌ ಇಂದು ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ.

ಅಮೆರಿಕದ ವ್ಯಾಪಾರ ಪ್ರತಿನಿಧಿಯಾಗಿರುವ ಬ್ರೆಂಡನ್ ಲಿಂಚ್, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆಗಾಗಿ ಇಂದು ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ನೇಮಕವಾದ ನಂತರ ಭಾರತ ಅಮೆರಿಕದ ನಡುವಿನ ವ್ಯಾಪಾರ ಮಾತುಕತೆ ಆರಭವಾಗಿತ್ತು. ಆದರೆ ಕೃಷಿ ಮತ್ತು ಹಾಲಿನ ಉತ್ಪನ್ನ ಮಾರಾಟಕ್ಕೆ ಅಮೆರಿಕ ಬಹಳ ಪಟ್ಟು ಹಿಡಿದಿತ್ತು. ಅಮೆರಿಕದ ಈ ಬೇಡಿಕೆಗೆ ಭಾರತದ ಮಣಿದಿರಲಿಲ್ಲ.

ಮಾತುಕತೆ ವಿಫಲವಾದ ಬೆನ್ನಲ್ಲೇ ಟ್ರಂಪ್‌ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ 25% ತೆರಿಗೆ ವಿಧಿಸಿದ್ದರು. ಇದಾದ ಬಳಿಕ ರಷ್ಯಾದಿಂದ  ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ ಶೇ. 25% ಸುಂಕ ಹೇರಿದ್ದಾರೆ. ಪರಿಣಾಮ ಈಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ಕೆಲ ವಸ್ತುಗಳಿಗೆ ಶೇ.50% ಸುಂಕ ವಿಧಿಸಲಾಗಿದೆ.

ಸುಂಕ ಹೇರಿದಕ್ಕೆ ಅಮೆರಿಕದಲ್ಲಿ ಭಾರೀ ಟೀಕೆ ಬರುತ್ತಿದ್ದಂತೆ ಟ್ರಂಪ್‌ ತನ್ನ ವರಸೆ ಬದಲಾಯಿಸಿದ್ದಾರೆ. ಭಾರತವನ್ನು ಡೆಡ್‌ ಎಕಾನಮಿ ಎಂದು ಕರೆದಿದ್ದ ಟ್ರಂಪ್‌ ಈಗ ಪ್ರಧಾನಿ ನರೇಂದ್ರ ಮೋದಿ  ನನ್ನ ಸ್ನೇಹಿತ. ಅವರ ಜೊತೆ ಮಾತನಾಡಲು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಎರಡು ಬಾರಿ ಮೋದಿ ನನ್ನ ಸ್ನೇಹಿತ ಎಂದು ಕರೆಯುವ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ್ದರು.

ಇನ್ನೊಂದು ಕಡೆ ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ನವೆಂಬರ್‌ ವೇಳೆಗೆ ಭಾರತ ಅಮೆರಿಕದ ಮಧ್ಯೆ ವ್ಯಾಪಾರ ಮಾತುಕತೆ ಅಂತಿಮವಾಗಬಹುದು ಎಂದು ಈ ಹಿಂದೆ ತಿಳಿಸಿದ್ದರು.

Continue Reading

Trending

error: Content is protected !!