Chikmagalur
ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನದ ಹಣತೆ ಹಚ್ಚಿದವರು: ಸಿ.ಟಿ.ರವಿ
 
																								
												
												
											ಚಿಕ್ಕಮಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತೀಯತೆಯ ವಿರುದ್ಧ ಖಡ್ಗವನ್ನು ಹಿಡಿಯಲಿಲ್ಲ. ಬದಲಾಗಿ ಜನರ ಹೃದಯದಲ್ಲಿ ಜ್ಞಾನದ ಹಣತೆಯನ್ನು ಹಚ್ಚಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ವಸ್ತುಗಳು ಪಂಚಭೂತಗಳಿಂದಾಗಿವೆ. ಮನುಷ್ಯ ದೇವರ ಸೃಷ್ಟಿಯಾಗಿದ್ದು, ದೇವರು ಜಾತಿಯನ್ನು ಸೃಷ್ಟಿಸಲಿಲ್ಲ. ಜನ್ಮದಿಂದ ಬ್ರಾಹ್ಮಣನಾಗಿದ್ದರೂ ಗುಣಗ್ರಾಹಿಯಾಗಿರದಿದ್ದರೆ ಆತ ಶೂದ್ರನೇ ಆಗುತ್ತಾನೆ. ಶೂದ್ರನಾಗಿದ್ದು, ವಿದ್ವತ್ತನ್ನು ಗಳಿಸಿದ್ದರೆ ಆತ ಶ್ರೇಷ್ಠ ವಿದ್ವಾಂಸನಾಗುತ್ತಾನೆ ಎಂದು ಹೇಳಿದರು.
ನಾರಾಯಣ ಗುರುಗಳು ಕೆಳಜಾತಿಯಲ್ಲಿ ಹುಟ್ಟಿದ್ದರೂ ಸಂಸ್ಕೃತ, ಮಲಯಾಳಂ, ತಮಿಳು ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಿ ಬ್ರಹ್ಮಶ್ರೀಗಳಾದರು. ಯಾವುದೇ ಮಹಾನುಭಾವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಹಾಗೆ ಸೀಮಿತಗೊಳಿಸಿದರೆ ಆ ಜಾತಿಗೆ ಅಪಚಾರ ಮಾಡಿದಂತಾಗುತ್ತದೆ. ದೇವರನಾಡು ಎಂದೇ ಹೆಸರಾದ ಕೇರಳದಲ್ಲಿ ಮತಾಂತರ ಮಾಯಾಜಾಲವಾಗಿ ಹಬ್ಬಿಕೊಂಡಿದ್ದ ಸಂದರ್ಭದಲ್ಲಿ ಕೆಳ ವರ್ಗದವರು ಮತಾಂತರಗೊಳ್ಳದಂತೆ ಪಾರು ಮಾಡಿದವರೇ ನಾರಾಯಣ ಗುರುಗಳು ಎಂದು ತಿಳಿಸಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ಸಂಸ್ಕಾರವಂತ ದೇಶ ನಮ್ಮದು. ಶೋಷಿತ ಸಮಾಜದ ಗುರುಗಳು ಬುದ್ಧ, ಬಸವ, ಅಂಬೇಡ್ಕರರಂತೆ ವಿಶ್ವ ಕ್ರಾಂತಿ ಮಾಡಿದರು. ವಿವಿಧತೆಯಲ್ಲಿ ಏಕತೆ ಇರುವ, ಸಂಸ್ಕಾರವಿರುವ ದೇಶವೆಂದರೆ ಅದು ಭಾರತ. ಒಟ್ಟು ಕುಟುಂಬದಲ್ಲಿ ಒಗ್ಗಟ್ಟು, ಸಾಮರಸ್ಯವಿರುತ್ತದೆ ಎಂದು ಕೂಡು ಕುಟುಂಬದ ಬಗ್ಗೆ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಸಾಹಿತಿ ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಮಹನೀಯರ ಜೀವನ, ಸಾಧನೆ ಮೆಲುಕು ಹಾಕುವುದರ ಮೂಲಕ ನಮ್ಮ ಬದುಕನ್ನು ಉನ್ನತೀಕರಿಸಿಕೊಳ್ಳುವುದೇ ಆಗಿದೆ. ಭರತ ಭೂಮಿಯಲ್ಲಿ ಸಮಾಜದ ಅನಿಷ್ಠ, ಅಂಟು ಜಾಢ್ಯಗಳಾದ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ, ಸಾಮಾಜಿಕ ಅನ್ಯಾಯ ತುರಿಯಾವಸ್ಥೆಯಲ್ಲಿದ್ದಾಗ ಬಸವ, ಬುದ್ಧ, ಅಂಬೇಡ್ಕರ್ ಅವುಗಳನ್ನು ನಿವಾರಿಸಲು ಶ್ರಮಿಸಿದರು. ಅದೇ ಸಾಲಿನಲ್ಲಿ ನಿಲ್ಲುವವರು ನಾರಾಯಣ ಗುರುಗಳು ಎಂದು ಹೇಳಿದರು.

ಬ್ರಹ್ಮಶ್ರೀ ಎಂದರೆ ಬ್ರಹ್ಮಜ್ಞಾನವನ್ನು ಪಡೆದವರು ಎಂದು ಅರ್ಥ. ಯಾವಾಗ ಜಗತ್ತಿನಲ್ಲಿ ಅಧರ್ಮ, ಅಶಾಂತಿ ತಾಂಡವವಾಡುತ್ತೊ ಆಗ ಜಗತ್ತನ್ನು ಉದ್ಧರಿಸಲು ಮಹಾತ್ಮರು ಜನಿಸುತ್ತಾರೆ. ನಾರಾಯಣ ಗುರುಗಳು ಜನರ ಮನಸ್ಸಿನಲ್ಲಿ ಉತ್ಪತ್ತಿಯಾದ ಜಾತೀಯತೆಯ ಕಸವನ್ನು ಗುಡಿಸುವ ಕೆಲಸ ಮಾಡಿದರು. ವಿಧವೆಯ ಕಣ್ಣೀರನ್ನು ಒರೆಸದ, ಹಸಿದವರಿಗೆ ಅನ್ನವನ್ನು ನೀಡದ ಧರ್ಮ ಧರ್ಮವಲ್ಲ, ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಪ್ರತಿಪಾದಿಸಿ ಶೋಷಿತ ವರ್ಗದವರಿಗೂ ದೇವರಿದ್ದಾನೆ ಎಂದು ತೋರಿಸಿಕೊಡುವ ಮೂಲಕ ಅನೇಕ ದೇವಾಲಯಗಳನ್ನು ನಿರ್ಮಿಸಿದರು.
ಶಂಕರಾಚಾರ್ಯರ ಅದ್ವೈತ ಸಿದ್ಧಾಂತವನ್ನು ಅನುಸರಿಸಿ ಅದ್ವೈತ ಗುರು ಎಂದೆನಿಸಿದ್ದಾರೆ. ಯೋಗದಲ್ಲಿ ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲೂ ಏಸುವಿನಂತಿದ್ದವರು ನಾರಾಯಣ ಗುರುಗಳು ಎಂದು ಹೇಳಿದರು.

ಶ್ರೀ ನಾರಾಯಣ ಗುರು ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಗುಣಶೇಖರ್, ಜಿಲ್ಲಾ ಬಿಲ್ಲವ ಸಂಘದ ಮಹಿಳಾ ಅಧ್ಯಕ್ಷರಾದ ಪ್ರಮಿಳಾ ವಿಜಯ, ಜಿಲ್ಲಾ ನಾರಾಯಣ ಗುರು ಸಮಿತಿ ಮಹಿಳಾ ಅಧ್ಯಕ್ಷೆ ಶಶಿಕಲಾ ಅಶೋಕ್, ಕೆ.ಸಿ.ಶಾಂತಕುಮಾರ್, ವಾಸು ಪೂಜಾರಿ, ರಾಜಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Chikmagalur
ಮದ್ದೂರು ಕಲ್ಲು ತೂರಾಟ ಪ್ರಕರಣ| ಮತಾಂಧರು, ಮುಸ್ಲಿಂ ಮತಾಂಧರು ಕಲ್ಲು ತೂರಾಟ ಮಾಡಿದ್ದಾರೆ: ಸಿ.ಟಿ.ರವಿ
 
														ಚಿಕ್ಕಮಗಳೂರು : ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮತಾಂಧರು, ಮುಸ್ಲಿಂ ಮತಾಂಧರು ಕಲ್ಲು ತೂರಾಟ ಮಾಡಿದ್ದಾರೆ. ಕಳೆದ ವರ್ಷ ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿ, 30ಕ್ಕೂ ಹೆಚ್ಚು ಅಂಗಡಿಗಳನ್ನು ಟಾರ್ಗೆಟ್ ಮಾಡಿದರು. ಸರ್ಕಾರ ಮುಂಜಾಗ್ರತೆ ವಹಿಸಬೇಕಿತ್ತು, ಜಿಲ್ಲಾಡಳಿತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಿತ್ತು. ಯಾವುದನ್ನು ಮಾಡದೇ ಕಿಡಿಗೇಡಿಗಳ ಮೇಲೆ ಕ್ರಮಕೈಗೊಳ್ಳದೇ ಶಾಂತಿಯಿಂದ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿಗಳೇ ಈದ್ ಮಿಲಾದ್ ಭಾಷಣದಲ್ಲಿ ಒಂದು ಮಾತನ್ನು ಹೇಳಿದ್ದರು, ಇಸ್ಲಾಂ ಅಂದರೆ ಶಾಂತಿ, ಮಹಮ್ಮದ್ ಪೈಗಂಬರ್ ಅಂದ್ರೆ ಶಾಂತಿ ಧೂತ ಅಂದಿದ್ದರು. ನಿಮ್ಮ ದೃಷ್ಟಿಯಲ್ಲಿ ದಲಿತ ಶಾಸಕನ ಮನೆ ಸುಟ್ಟಿದ್ದು, ಠಾಣೆ ಸುಟ್ಟಿದ್ದು,ಕೆ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿದ್ದು ಶಾಂತಿ ದೂತರು ಮಾಡಬೇಕಾದ ಕರ್ತವ್ಯವೆಂದು ಭಾವಿಸಿದ್ದರಾ? ಅಲ್ಲದೇ ಸಾಗರದಲ್ಲಿ ಗಣೇಶ ಮೆರವಣಿಗೆ ಮೇಲೆ ಚಿಕ್ಕ ಮಕ್ಕಳು ಉಗುಳಿದರು, ಮಕ್ಕಳು ದೇವರು ಎಂದು ಭಾವಿಸುತ್ತೇವೆ. ಮಕ್ಕಳ ಹೃದಯದಲ್ಲಿ ದ್ವೇಷದ ವಿಷ ಬೀಜ ಬಿತ್ತಿದ್ದವರು ಯಾರು..? ಅವರ ತಂದೆ ತಾಯಿಗಳ ಅಥವಾ ಅವರ ಮದ್ರಸಾದಲ್ಲಿ ನಡಿತಾ ಇದೇಯಾ.. ಮತೀಯಾ ಗ್ರಂಥಗಳಲ್ಲಿ ಹೇಳಿ ಕಂಠಪಾಟ ಮಾಡಿಸ್ತಾರಾ..? ಇದು ಶಾಂತಿ ಧೂತರು ಮಾಡುವ ಕೆಲಸವೇ..? ಶಾಂತಿ ಧೂತರೇ ಭಾರತ ವಿಭಜನೆಗೆ ಮತ್ತು ಲಕ್ಷಾಂತರ ಮರಣಕ್ಕೆ ಕಾರಣವಾದರು ಎಂದು ವಾಗ್ದಾಳಿ ನಡೆಸಿದರು.
ಜಾಗತಿಕ ಭಯೋತ್ಪಾದನೆ ಶೇಕಡ. 90ರಷ್ಟು ಕೊಡುಗೆ ನೀಡುತ್ತ ಇರುವಂತವರು ಇದನ್ನೇ ನೀವು ಶಾಂತಿ ಎನ್ನುವುದಾದರೇ ಸ್ಮಶಾನದ ಶಾಂತಿ ಆಗುತ್ತದೆ. ಇದು ನೆಮ್ಮದಿ ಕೊಡುವಂತಹ ಬದುಕನ್ನು ಅರಳಿಸುವಂತಹ ಶಾಂತಿ ಆಗಲ್ಲಾ? ಇದೇ ಶಾಂತಿ ಧೂತರು ನಗು ನಗುತ್ತಾ ಇದ್ದ ಬುದ್ದನ ವಿಗ್ರಹವನ್ನ ಪಿರಂಗಿ ಇಟ್ಟು ಉಡಾಯಿಸಿದರು. ನಿಮಗೆ ಸತ್ಯ ಹೇಳೋಕೆ ಧೈರ್ಯ ಇಲ್ವಾ..? ಓಟಿನ ಆಸೆಗೆ ಎಲ್ಲಾವನ್ನು ಒಪ್ಕೊಂಡು ಕಲ್ಲು ತೂರಾಟವನ್ನು ಮಾಡಿದವರನ್ನೆ ಪ್ರಶಂಸಿಸಿ. ಠಾಣೆಗೆ ಬೆಂಕಿ ಇಟ್ಟವರಿಗೆ ಶಾಂತಿಯ ಪಟ್ಟ ಕಟ್ಟಿದ್ರೆ, ನಿಮಗೂ ಸತ್ಯಕ್ಕೂ ಸಂಬಂಧವಿಲ್ಲದಂತಾಗುತ್ತದೆ ಎಂದು ಕಿಡಿಕಾರಿದರು.

ಸರ್ಕಾರದ ನಡೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ನೀತಿಯದ್ದು, ಹಿಂದೂಗಳಿಗೆ ಸುಣ್ಣ ಮುಸಲ್ಮಾನರಿಗೆ ಬೆಣ್ಣೆ. ಮೈಕ್ ಹಾಕಿದರೆ ಕಂಡಿಷನ್, ಡ್ಯಾನ್ಸ್ ಮಾಡಿದ್ರೆ ಕೇಸ್ ಇದು ಕೆಟ್ಟ ಪರಂಪರಗೆ ಕಾರಣ ಆಗಿದೆ. ಕಲ್ಲು ತೂರಾಟ ಮಾಡಿದವರ ಹಿಂದೆ ಯಾರಿದ್ದಾರೆ ..? ಎಲ್ಲಿ ಟ್ರೈನಿಂಗ್ ಪಡೆದಿದ್ದಾರೆ ಅನ್ನೋದು ಗೊತ್ತಾಬೇಕಲ್ವಾ? ಧರ್ಮಸ್ಥಳಕ್ಕೆ ಪ್ರಕರಣದಲ್ಲಿ ಎಸ್ ಐಟಿ ಮಾಡಿದ್ರಲ್ವಾ,ಸಾಗರದಲ್ಲಿ ಮಕ್ಕಳ ಹೃದಯದಲ್ಲಿ ವಿಷ ಬೀಜ ಬಿತ್ತಿದ್ದವರ ಬಗ್ಗೆ ತನಿಖೆ ಆಗಲಿ. ಇದರ ಬಗ್ಗೆ ಎಸ್.ಐ.ಟಿ. ಮಾಡಿ ಸತ್ಯವನ್ನ ಅನಾವರಣಗೊಳಿಸಿ. ಶಾಂತಿಧೂತರು ಯಾರು,ಮತಾಂಧರು ಯಾರು ಜಗತ್ತಿನಲ್ಲಿ ಹಿಂಸೆ ಹರಡುತ್ತಿರುವವರು ಯಾರೆಂದು ಗೊತ್ತಾಗುತ್ತದೆ ಎಂದು ತಿಳಿಸಿದರು.
Chikmagalur
ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಅಸಹಜ ಸಾ*ವು ಪ್ರಕರಣ: ಕೊಪ್ಪ ಬಂದ್ಗೆ ಕರೆ
 
														ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿನಿಯರ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಪ್ಪ ಬಂದ್ ಗೆ ಕರೆ ನೀಡಲಾಗಿದೆ.

ಕೊಪ್ಪದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 2023 ರಲ್ಲಿ ಅಮೂಲ್ಯ ಹಾಗೂ 2025ರಲ್ಲಿ ಶಮಿತಾ ಅನುಮಾನಸ್ಪದವಾಗಿ ಶೌಚಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಈ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸೆಪ್ಟೆಂಬರ್ 11 ರ ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ಕೊಪ್ಪ ಬಂದ್ ಹಾಗೂ ಮುಖ್ಯ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ಕರೆ ನೀಡಲಾಗಿದೆ.
Chikmagalur
ಚಿಕ್ಕಮಗಳೂರಿನಲ್ಲಿ ಚಿನ್ನದ ನಿಕ್ಷೇಪ ? ಶೋಧ ಕಾರ್ಯಕ್ಕೆ ಅನುಮತಿ ನೀಡಲು ಪರಿಸರ ಇಲಾಖೆ ಚಿಂತನೆ
 
														ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಚಿನ್ನದ ನಿಕ್ಷೇಪದ ಶೋಧನೆಗೆ ಅನುಮತಿ ಕೋರಿರುವ ಬಗ್ಗೆ ವರದಿಯಾಗಿದೆ. ಸುಮಾರು 10,000 ಎಕರೆ ಪ್ರದೇಶದಲ್ಲಿ ಈ ಶೋಧನೆ ನಡೆಯಲಿದ್ದು, ಅದರಲ್ಲಿ 5,600 ಎಕರೆ ಅರಣ್ಯ ಪ್ರದೇಶಕ್ಕೆ ಸೇರಿದ್ದು, 3,600 ಎಕರೆ ಕೃಷಿ ಭೂಮಿಗೆ ಸೇರಿದೆ. ದಾಖಲೆಗಳ ಪ್ರಕಾರ, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಈಗಾಗಲೇ ಕಂಪನಿಗೆ ಪರಿಶೋಧನೆಗಾಗಿ ಸಂಯೋಜಿತ ಪರವಾನಗಿಯನ್ನು ನೀಡಿದೆ.

ಕಳೆದ ವರ್ಷ ಟೆಂಡರ್ ಪಡೆದ ಆರಮ್, ನಿಕ್ಷೇಪಗಳ ಪ್ರಮಾಣ ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು 100 ಬೋರ್ಹೋಲ್ಗಳನ್ನು ಕೊರೆಯಲು ಪ್ರಸ್ತಾಪಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ವರದಿಯ ಪ್ರಕಾರ, ಈ ಪ್ರದೇಶದಲ್ಲಿ ಹಿಂದಿನ ಸಮೀಕ್ಷೆಗಳು ಪ್ರತಿ ಟನ್ಗೆ 19 ಗ್ರಾಂ ನಿಂದ ಗರಿಷ್ಠ 80 ಗ್ರಾಂ ವರೆಗೆ ಚಿನ್ನದ ಮೌಲ್ಯವನ್ನು ಸೂಚಿಸಿವೆ. ಹೊಸೂರಿನ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊನ್ನುಹಟ್ಟಿಯಿಂದ ಚಿನ್ನದ ಹಳೆಯ ಕೆಲಸಗಳು ವರದಿಯಾಗಿವೆ ಎಂದು ಕಂಪನಿ ಗಮನಿಸಿದೆ. ಆದರೆ, ದಟ್ಟವಾದ ಮತ್ತು ಪ್ರವೇಶಿಸಲಾಗದ ಅರಣ್ಯ ಪ್ರದೇಶದಿಂದಾಗಿ ಬೆಲ್ಟ್ನಲ್ಲಿರುವ ಶಿಲಾ ಪದರಗಳನ್ನು ಅಧ್ಯಯನ ಮಾಡುವುದು ಗಣನೀಯ ತೊಂದರೆಯಿಂದ ಆವೃತವಾಗಿದೆ ಎಂದು ಔರಮ್ ಒಪ್ಪಿಕೊಂಡಿದೆ.
- 
																	   Mysore4 hours ago Mysore4 hours agoಬಾನು ಮುಷ್ತಾಕ್ ಕ್ಷಮೆ ಕೇಳಿದರೆ ಪಿಐಎಲ್ ವಾಪಸ್: ಪ್ರತಾಪ್ ಸಿಂಹ 
- 
																	   Kodagu7 hours ago Kodagu7 hours agoಸೋಮವಾರಪೇಟೆ: ತಾಲೂಕು ಆಸ್ಪತ್ರೆಯ ನರ್ಸ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ 
- 
																	   Manglore4 hours ago Manglore4 hours agoಮಂಗಳೂರು: ಎಸ್ಐಟಿ ಕಚೇರಿಗೆ ಆಗಮಿಸಿದ ಕೇರಳದ ಯೂಟ್ಯೂಬರ್ ಮನಾಫ್ 
- 
																	   Hassan3 hours ago Hassan3 hours agoಹೊಳೆನರಸೀಪುರದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದ, ಸುಳ್ಳು ದಾಖಲೆ, ಸುಳ್ಳು ಸಾಕ್ಷಿ : ನಟರಾಜು ಆರೋಪ 
- 
																	   Hassan9 hours ago Hassan9 hours agoಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಮ್ಮ ದೇವಿಯ ಅದ್ದೂರಿ ವಿಸರ್ಜನೆ 
- 
																	   Kodagu1 hour ago Kodagu1 hour agoಸೆ.11 ಕ್ಕೆ “ವಿಷಪೂರಿತ ಹಾವುಗಳು : ಗುರುತಿಸುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ 
- 
																	   National23 hours ago National23 hours ago5 ವರ್ಷದಲ್ಲಿ BCCI ಬ್ಯಾಂಕ್ ಬ್ಯಾಲೆನ್ಸ್ 20 ಸಾವಿರ ಕೋಟಿ ರೂ.ಗೂ ಹೆಚ್ಚಳ 
- 
																	   Mysore7 hours ago Mysore7 hours agoಮಹಾನಗರ ಪಾಲಿಕೆಯಿಂದ ಇ-ಖಾತಾ ವಿತರಣೆ 

 
											 
											 
											 
											 
											