Chikmagalur
ಮರಗಳನ್ನು ಕಡಿದು ಸುತ್ತುಪಟ್ಟಿ ಸಾಯಿಸುತ್ತಿದ್ದ ಆರೋಪಿಗಳ ವಿರುದ್ಧ ಸ್ಥಳ ಮಹಜರು ಕ್ರಮ

NR ಪುರ- ಬಾಳೆಹೊನ್ನೂರು – ಚಿಕ್ಕಗ್ರಹಾರ ಅರಣ್ಯ ಇಲಾಖೆ ವ್ಯಾಪ್ತಿಯ ಕರ್ಕೇಶ್ವರ ಗ್ರಾಮದ ಸರ್ವೇ ನಂ 199 ರಲ್ಲಿ ಅರಣ್ಯ ನಾಶ ಮಾಡಿ ಮರಗಳಿಗೆ ಸುತ್ತುಪಟ್ಟಿ ಕಡಿದು ಸಾಯಿಸುತ್ತಿದ್ದ ಆರೋಪಿಗಳ ವಿರುದ್ಧ ಗ್ರಾಮಸ್ಥರು ಸಮ್ಮುಖದಲ್ಲಿ ಸ್ಥಳ ತನಿಖೆಯ ಮಹಜರು ಕ್ರಮ
NR ಪುರ- ಬಾಳೆಹೊನ್ನೂರು – ಚಿಕ್ಕಗ್ರಹಾರ ಅರಣ್ಯ ಇಲಾಖೆ ವ್ಯಾಪ್ತಿಯ ಕರ್ಕೇಶ್ವರ ಗ್ರಾಮದ ಸರ್ವೇ ನಂ 199 ರಲ್ಲಿ ದಟ್ಟ ಅರಣ್ಯದ ಸೊಪ್ಪಿನ ಬೆಟ್ಟವಿದ್ದು ಈ ಜಾಗವನ್ನು ಒತ್ತುವರಿ ಮಾಡಿ ಅರಣ್ಯ ನಾಶ ಮಾಡಿ ಮರಗಳಿಗೆ ಸುತ್ತುಪಟ್ಟಿ ಕಡಿದು ಸಾಯಿಸುತ್ತಿದ್ದ ದೂರಿನ ಮೇರೆಗೆ ಮೇಲ್ಪಾಲ್ ಅರಣ್ಯ ಅಧಿಕಾರಿಗಳು ಈ ಹಿಂದೆ 9 ಜನರ ಮೇಲೆ ದೂರು ದಾಖಲಾಗಿದ್ದು ಅಂತಿಮವಾಗಿ ದಿನಾಂಕ 12 -05 -2025 ಕೊಪ್ಪ Df ನಂಧಿಶ್ ರವರ ಆದೇಶದ ಮೇರೆಗೆ NR ಪುರ RFO ಆದರ್ಶ, ಮೇಲ್ಪಾಲ್ ಅರಣ್ಯ ಅಧಿಕಾರಿ ಬೀರೇಶ್ ಹಾಗು ಸಿಬ್ಬಂದಿ & ಸ್ಥಳೀಯ ಮುಖಂಡರುಗಳಾದ ಸತೀಶ್ ಕೆಸವತ್ತಿ,ನಾರಾಯಣ ಪೂಜಾರಿ,ಕೃಷ್ಣಮೂರ್ತಿ,ಪತ್ರಕರ್ತರರಾದ ರವೀಂದ್ರ & ಗ್ರಾಮಸ್ಥರು ಸಮ್ಮುಖದಲ್ಲಿ ಸ್ಥಳ ತನಿಖೆಯ ಮಹಜರು ಕ್ರಮ ಜರುಗಿಸಿದ್ದು.ಆರೋಪಿಗಳಿಗೆ ಕಾನೂನು ರೀತಿ ಕ್ರಮ ಜರಿಗಿಸುವದಾಗಿ ಹೇಳಿ ಇನ್ನು ಮುಂದೆ ಒತ್ತುವರಿ, ಮರ ಕಡಿತಲೆ,ಸುತ್ತುಪಟ್ಟಿ ಕಡಿಯದಂತೇ ಎಚ್ಚರಿಕೆ ನೀಡಿದ್ದಾರೆ
Chikmagalur
ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಇನ್ನೊಂದು ಎಚ್ಚರಿಕೆಯ ಘಟನೆ ಬೆಳಕಿಗೆ ಬಂದಿದೆ.
ಅಜ್ಜಂಪುರ ತಾ.ಪಂಚಾಯಿತಿಯಲ್ಲಿ ತಾಂತ್ರಿಕ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಿಬಾಯಿ, ಕೃಷಿ ಹೊಂಡ ಕೊರೆಸುವ ಸಲುವಾಗಿ ರೈತನೊಬ್ಬನಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಖಚಿತವಾಗಿದೆ.
ನಾಗವಂಗಲದ ಕೃಷಿಕನೊಬ್ಬರಿಂದ 5500 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವೆಂಕಿಬಾಯಿಯನ್ನು ಬಂಧಿಸಿದ್ದಾರೆ.
ತಾ.ಪಂ. ಕಚೇರಿಯೊಳಗೇ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ವೆಂಕಿಬಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್ಪಿ ಜೆ.ಜೆ. ತಿರುಮಲೇಶ್ ನೇತೃತ್ವದಲ್ಲಿ ಸ್ಥಳೀಯ ತಂಡ ನಡೆಸಿತ್ತು.
Chikmagalur
ಪದವೀಧರರು ಸ್ವತಂತ್ರ್ಯವಾಗಿ ಬದುಕುವುದನ್ನು ಕಲಿಯಿರಿ : ಸ್ವಾಮೀಜಿ

ಚಿಕ್ಕಮಗಳೂರು, ಮೇ.೧೨:- ಪದವೀಧರರು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು. ಪಾಲಕರು ಹಾಗೂ ಸಮಾಜದ ಒಳಿತನ್ನು ಬಯಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಶ್ರೀ ಆದಿಚು ಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.
ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಬಿ.ಇ., ಎಂ.ಟೆಕ್., ಎಂಬಿಎ ಅಂ ತಿಮ ವ?ದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆದಿಚುಂಚನಗಿರಿ ವಿಶ್ವ ವಿದ್ಯಾಲಯದಿಂದ ಪದವಿ ಪಡೆದು ಹೊಸ ಪ್ರಪಂಚ ಪ್ರವೇಶಿಸುತ್ತಿರುವ ಪದ ವೀಧರರ ನಿಜವಾದ ಜೀವನ ಈಗ? ಆರಂಭವಾಗಲಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳು ವುದನ್ನು ಕಲಿತುಕೊಳ್ಳಬೇಕು. ನಿಮ್ಮ ಮೇಲೆ ಪೋ?ಕರು ಸಾಕ? ನಿರೀಕ್ಷೆಯಿದೆ ಎಂದರು.
ಪದವಿ ಅಭ್ಯಾಸಿಸುವ ವೇಳೆಯಲ್ಲಿ ವಿದ್ಯಾರ್ಥಿಗಳು ಅನೇಕ ತುಂಟಾಟಗಳ ನಡುವೆಯು ಅಂತಿಮ ವಾ ಗಿ ಸಮಾಜದ ಮುಖ್ಯವಾಹಿನಿಗೆ ಧಾವಿಸಿದ್ದೀರಿ. ಇದೀಗ ಬದುಕು ಕಟ್ಟಿಕೊಳ್ಳುವ ಸಮಯವಾಗಿದೆ. ಕಳೆದ ಸಮಯ ಹಿಂತಿರುಗಿಬಾರದು. ಹಾಗಾಗಿ ಮುಂದಿನ ಭವಿಷ್ಯ ರೂಪಿಸುವ ಉದ್ಯೋಗದತ್ತ ದಾಪು ಹಾಕಬೇಕಿ ದೆ ಎಂದು ತಿಳಿಸಿದರು.
ಶಿಕ್ಷಕರು ಹಾಗೂ ಪಾಲಕರ ಕನಸನ್ನು ಈಡೇರಿಸುವ ಮುಖ್ಯ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ. ಹಲವಾರು ಕಂಪನಿಗಳಲ್ಲಿ ದೈಹಿಕ ಸಾಮರ್ಥ್ಯ, ಆವಭಾವ ನೋಡಿ ಉದ್ಯೋಗ ನೀಡುವುದಿಲ್ಲ, ಪ್ರತಿಭೆ ಎನ್ನು ವುದು ಮನದಟ್ಟಾಗಿದ್ದರೆ ಕಂಪನಿಗಳು ತಾನಾಗಿಯೇ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದರು.
ಇದೀಗ ರಾಷ್ಟ್ರವು ಯುದ್ಧದ ಕರಿಮೋಡದಿಂದ ನಿರಾಳವಾಗಿದೆ. ಗಡಿಯಲ್ಲಿ ಸೈನಿಕರ ನಿರಂತರ ಪರಿಶ್ರ ಮದಿಂದ ದೇಶ ಸುರಕ್ಷತವಾಗಿದೆ. ಅಲ್ಲದೇ ದೇಶಕ್ಕಾಗಿ ಪ್ರಾಣತೆತ್ತ ಯೋಧರು ದೇಶದ ಅಸ್ಮತೆ, ಸಾವಭೌ ಮತ್ವದ ಪ್ರತೀಕವಾಗಿರುವ ಕಾರಣ ದೊಡ್ಡದೊಂದು ನಮನ ಎಲ್ಲರೂ ಸಲ್ಲಿಸಬೇಕು ಎಂದು ಹೇಳಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಸತತ ನಾಲ್ಕುವರ್ಷಗಳಿಂದ ಕಾಲೇಜಿನಲ್ಲಿ ತಾಂತ್ರಿಕ ವ್ಯಾಸಂಗ ವನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದ ಅವರು ಉದ್ಯೋಗಕ್ಕೆ ತೆರಳಿದರೂ ಜೀವಭಾಷೆ ಕನ್ನಡವಾಗಿರಬೇಕು. ಆಂಗ್ಲಭಾಷೆ ಬದುಕಿನ ಒಂದು ಭಾಗವಾಗಿ ರಬೇಕು ಎಂದು ತಿಳಿಸಿದರು.
ದೇಶ-ವಿದೇಶಗಳಲ್ಲಿ ಹಲವಾರು ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನಕ್ಕೆ ಪೂರ ಕವಾದ ಆದಿಚುಂಚನಗಿರಿ ಮಠವು ನಾಡುಕಂಡ ಅದ್ಬುತ ಮಠಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮಠದ ಬಾಲಗಂಗಾಧರನಾಥ ಶ್ರೀಗಳ ಆರ್ಶೀವಾದ, ನಿರ್ಮಲನಾಥನಂದ ಸ್ವಾಮೀಜಿ ನೇತೃತ್ವದಲ್ಲಿ ಇನ್ನ ಷ್ಟು ಹೆಚ್ಚು ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಪದವಿ ಪೂರೈಸಿ ಮುಖ್ಯವಾಹಿನಿಗೆ ಬರುತ್ತಿರುವ ಹಾದಿ ಸುಲಭದ್ದಲ್ಲ. ಕಲ್ಲು-ಮುಳ್ಳಿನಿಂದ ಕೂಡಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಪ್ರತಿಭೆ ಎಂಬುದು ಜನನದಲ್ಲೇ ಇರಲಿದೆ. ಅನಾವರಣಗೊಳಿಸುವ ಕಾರ್ಯಕ್ಕೆ ಪಾಲಕರು ನೀರೆರೆದು ಪೋಷಿ ಸಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಎನ್.ಕೆ.ಲೋಕನಾಥ್ ಮಾತನಾಡಿ ವಿದ್ಯಾಭ್ಯಾಸದ ಕಲಿಕೆಯ ಕ್ಷಣಗಳು ಅತ್ಯುತ್ತಮವಾಗಿದ್ದು ಹಲವಾರು ಅವಕಾಶ ಸಿಗಲಿರುವ ಕಾರಣ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳ ಬೇಕು. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಸೀಮಿತರಾಗದೇ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೂ ಪೂರಕವಾಗಿ ರಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ, ಮಂಗಳೂರು ಶಾಖೆಯ ಧರ್ಮಪಾಲನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್, ಎಐಟಿ ಕಾಲೇಜು ಪ್ರಾಂಶು ಪಾಲ ಡಾ|| ಸಿ.ಟಿ.ಜಯದೇವ, ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಎಂ. ಸತ್ಯನಾರಾಯಣ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ|| ವೀರೇಂದ್ರ, ಡಾ|| ಸಂಪತ್ ಮತ್ತಿತರರಿದ್ದರು.
Chikmagalur
ಚಿಕ್ಕಮಗಳೂರು : ರಾಜ್ಯದಲ್ಲಿ ಮುಂದುವರೆದ ಗೋವುಗಳ ಮೇಲಿನ ದೌರ್ಜನ್ಯ

ಚಿಕ್ಕಮಗಳೂರು : ರಾಜ್ಯದಲ್ಲಿ ಗೋವುಗಳ ಮೇಲಿನ ದೌರ್ಜನ್ಯ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ನಡೆದಿದೆ.
ಚೌಳಹಿರಿಯೂರಿನ ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಅವರಿಗೆ ಸೇರಿದ 20 ಹಸುಗಳನ್ನು ಬೇರೆ ಕಡೆ ಸಾಗಿಸಲು ಪ್ರಯತ್ನಿಸಿದ್ದಾರೆ.
ಆದರೆ ಪ್ರಯತ್ನ ವಿಫಲಗೊಂಡಿದ್ದರಿಂದ ಒಂದು ಹಸುವಿನ ಕೆಚ್ಚಲು ಕತ್ತರಿಸಿ ಪರಾರಿಯಾಗಿದ್ದಾರೆ. ಇದರಿಂದಾಗಿ ಹಸು ಸಾವನ್ನಪ್ಪಿದೆ. ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
Mysore23 hours ago
ಸಾಲಿಗ್ರಾಮದ\ ರೈತರ ಕುಂದು ಕೊರತೆ ಸಭೆ
-
Hassan23 hours ago
CBSE ಫಲಿತಾಂಶ: ಅನ್ಮೋಲಿಕಾ ಸಿಂಗ್ ವಿದ್ಯಾರ್ಥಿನಿ ಶೇ 95.06 ಪಡೆದು ಶಾಲೆಗೆ ಪ್ರಥಮ
-
Hassan24 hours ago
ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ತಜ್ಞರ ಸಮಿತಿ ಮಾಡಿದ್ದೇವೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ
-
Mandya24 hours ago
ರಾಜ್ಯ ಕಾಂಗ್ರೆಸ್ ಸರ್ಕಾರ ಜನ ಪರವಾಗಿ ಕೆಲಸ ಮಾಡುತ್ತಿದೆ : ರಮೇಶ್ ಬಂಡಿಸಿದ್ದೇಗೌಡ
-
Mysore24 hours ago
ಕಾಳಸಂತೆಗೆ ಕಡಿವಾಣ ಹಾಕಿ : ನಿತಿನ್ ವೆಂಕಟೇಶ್
-
Mysore23 hours ago
ಒಳ ಮೀಸಲು ಸಮೀಕ್ಷೆ, ನಾನಾ ಗೊಂದಲ: ಎನ್. ಭಾಸ್ಕರ್
-
Kodagu5 hours ago
ಸಹೋದರರ ಮೇಲೆ ಗುಂಡಿನ ದಾಳಿ.
-
Mysore24 hours ago
ಪ್ರಕ್ಷುಬ್ಧ ವಿಶ್ವಕ್ಕೆ ಬುದ್ದರ ಕರುಣೆ, ಮೈತ್ರಿ ದಿವ್ಯೌಷಧ: ಎನ್ ಭಾಸ್ಕರ್