Chamarajanagar
ಯಳಂದೂರುಪಟ್ಟಣದಲ್ಲಿರುವ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 154ನೇ ಗಾಂಧಿ ಜಯಂತಿ ಜೊತೆಗೆ ಶ್ರಮದಾನ ಮಾಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಪ್ರಯುಕ್ತ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಹಾತ್ಮ ಗಾಂಧಿಯವರು ದೇಶ ಪ್ರೇಮಿ ಅಹಿಂ ಸಾವಾದದ ತತ್ವ ಸತ್ಯಾಗ್ರಹವನ್ನು ಆಗ್ರಹಿಸಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ ತಂದುಕೊಟ್ಟ ದೇಶ ಪ್ರೇಮಿವಾಗಿ ಮೆರೆದು ಚರಿತ್ರೆಯನ್ನು ತಿಳಿಸಲಾಯಿತು. ದೇಶಕ್ಕೆ ಮೂಲ ಮಂತ್ರವನ್ನು ಪಠಿಸಿದ ದೇಶಿಯತೆಯನ್ನು. ಹರಡಿದ ಮಹಾತ್ಮ ಗಾಂಧಿ ಚರಿತ್ರೆ ಅಜರಾಮರ ದೇಶ ನಮಗೇನು ಮಾಡಿತು ಎನ್ನುವುದಕ್ಕಿಂತ ದೇಶಕ್ಕೆ ಏನು ಮಾಡಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಪ್ರಭಾರ ಪ್ರಾಂಶುಪಾಲರಾದ ಎಲ್ ಮಹೇಶ್ ರವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರು ಮಹಾತ್ಮ ಗಾಂಧೀಜಿಯಂತಿ ನಿಮಿತ ಒಂದು ಗಂಟೆಯ ಕಾಲ ಶ್ರಮದಾನ ಮಾಡಿದರು ಕಾಲೇಜಿನ ಸುತ್ತಮುತ್ತ ಪರಿಸರವನ್ನು ಶುದ್ಧಗೊಳಿಸಲು ಯಿತು ವಿದ್ಯಾರ್ಥಿಗಳೆಲ್ಲ ಈ ಕಾರ್ಯಕ್ರಮದಲ್ಲಿ ಉತ್ಸಾಹಕರಾಗಿ ಭಾಗವಹಿಸಿದರು
ಈ ಸಂದರ್ಭದಲ್ಲಿ ಪ್ರಭಾರ ಎಲ್ ಮಹೇಶ್. ಉಪ ಪ್ರಾಂಶುಪಾಲರಾದ ನಂಜುಂಡಯ್ಯ. ಉಪನ್ಯಾಸಕರ ಜಿ ಸ್ಟೀವನ್. ನಾಗರಾಜು. ಅಜಯ್ ಕುಮಾರ್. ರೋಹಿತ್ ಶರ್ಮಾ. ಪುಷ್ಪಲತಾ. ಸಿಬ್ಬಂದಿ ವರ್ಗ ಹಾಗೂ. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಡಿಗೆ ಸಹಾಯಕರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
Chamarajanagar
ಹನೂರು ಪಟ್ಟಣದ ವಾಸಿ ದರ್ಶನ್ ರವರ ಮೆದುಳು ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ

ಹನೂರು : ಪಟ್ಟಣದ ವಾಸಿ ದರ್ಶನ್ ರವರ ಮೆದುಳು ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹನೂರು ಪಟ್ಟಣದ ನಿವಾಸಿಗಳಾದ ಶಶಿ ಮತ್ತು ಸುಶೀಲಾ ದಂಪತಿ ಪುತ್ರ ದರ್ಶನ್ ರಸ್ತೆ ಅಪಘಾತವಾದ ಹಿನ್ನಲೆ
ಮೈಸೂರಿನ ಖಾಸಗಿ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದರು ಎನ್ನಲಾಗಿದೆ ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಮೂಲಕ ದರ್ಶನ್ ತನ್ನ ಸಾವಿನಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಮೈಸೂರಿನ ಅಪೋಲೋ ಆಸ್ಪತ್ರೆಗೆ ದರ್ಶನ್ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ ನಾಶಗಳು, ಪಿತ್ತಕೋಶ(ಲಿವರ್), ಮೂತ್ರಪಿಂಡ(ಕಿಡ್ನಿ), ಕಣ್ಣು, ದಾನ ಮಾಡಿದ್ದಾರೆ.
Chamarajanagar
ಯಳಂದೂರುಇಂದು ಕಾಲೇಜಿನ ಸಭಾಂಗಣದಲ್ಲಿ ಸಂತ ಕವಿಕನಕದಾಸರ ಜಯಂತಿ ಕಾರ್ಯಕ್ರಮ

ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಳಂದೂರುಇಂದು ಕಾಲೇಜಿನ ಸಭಾಂಗಣದಲ್ಲಿ ಸಂತ ಕವಿಕನಕದಾಸರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಅವರು ಅಧ್ಯಕ್ಷತೆ ವಹಿಸಿದ್ದರು ಇಂದಿನ ಕಾರ್ಯಕ್ರಮವನ್ನು ಕುರಿತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಮಹಂತೇಶ್ ಅವರು ಕನಕದಾಸರ ಜೀವನ ಚರಿತ್ರೆ ಅವರ ಸಾಹಿತ್ಯ ಸೇವೆ ಮತ್ತು ಭಾರತೀಯ ಸಂತ ಪರಂಪರೆಯಲ್ಲಿ ಕನಕದಾಸರ ಸ್ಥಾನ ಶ್ರೇಷ್ಠವಾದದ್ದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಅಲ್ಲದೆ ತಿಮ್ಮಪ್ಪನಾಯಕನಾಗಿದ್ದ ಕನಕದಾಸರು ಕನಕ ನಾಯಕರ ಬಗ್ಗೆ ಆನಂತ್ರದ ಅವರ ಜೀವನ ಮತ್ತು ಅವರ ಸಾಧನೆಗಳನ್ನು ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದ ಅವರು
ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಪುರಂದರದಾಸರಿಗೆ ಯಾವ ಮಟ್ಟದ ಶ್ರೇಷ್ಠತೆಯು ಅಷ್ಟೇ ಶ್ರೇಷ್ಠತೆಯು ಕನಕದಾಸರಿಗೂ ಲಭ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ನುಡಿದರು ಸಾಮಾಜಿಕವಾಗಿ ತನ್ನನ್ನೇ ಸಮಾಜಕ್ಕೆ ಒಟ್ಟಿಕೊಂಡ ಕನಕದಾಸರು ಸಾಕಷ್ಟು ತರತಮಗಳಿಗೆ ಒಳಗಾದರೂ ಎದೆಗೊಂದದೆ ವ್ಯಾಸರಾಯರ ಶ್ರೇಷ್ಠ ಶಿಷ್ಯ ಪರಂಪರೆಯಲ್ಲಿ ಅಗ್ರಗಣ್ಯರಾಗಿ ರೂಪಗೊಂಡದ್ದು ನಿಜಕ್ಕೂ ಪ್ರಾಚಸ್ಮರಣೀಯ ಎಂದು ತಿಳಿಸಿದರು
ನಳಚರಿತ್ರೆ ಮೋಹನತರಂಗಿಣಿ ರಾಮಧಾನ್ಯ ಚರಿತೆಕೀರ್ತನೆಗಳು ಊಹಾಭೋಗಗಳು ಮುಂಡಿಗೆಗಳು ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಮಾತ್ರವಲ್ಲ ಇಡೀ ದಾಸ ಸಂತತಿಯಲ್ಲಿ ಅಗ್ರಗಣ್ಯ ದಾಸವರೇಣ್ಯರೆನಿಸಿ ಕೀರ್ತಿಗೆ ಭಾಜನರಾದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಕನಕದಾಸರು ಭಾರತೀಯ ಸಂತ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟವಾದ ದಾಸರಾಗಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಆತ್ಮ ಯಾವ ಕುಲ ಜೀವ ಯಾವ ಕುಲ’ ಜಲವೇ ಸಕಲ ಕುಲಕ್ಕೆ ತಾಯಲ್ಲವೇ
ಜಲದ ನೆಲೆಯ ನೀನಾದರೂ ಬಲ್ಲಿರಾ ‘
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ‘
ಇತ್ಯಾದಿ ಕೀರ್ತನೆಗಳಲ್ಲದೆ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಅವರ ಸಲ್ಲಿಸಿದ ಸೇವೆ ಅನನ್ಯವಾಗುವುದು ಎಂದು ತಿಳಿಸಿದರು ಸಾಮಾನ್ಯ ಪಾಳೇಗಾರನಾಗಿದ್ದನಾಯಕನಾಗಿ ಅನಂತರ ಕನಕದಾಸರಾಗಿ ಪರಿವರ್ತನೆ ಹೊಂದಿದ್ದೆ ಒಂದು ವಿಸ್ಮಯದ ಸಂಗತಿ ಎಂಬ ಅಂಶವನ್ನು ತಿಳಿಸಿದರು.ಎಲ್ಲ ಕಾಲಕ್ಕೂ ಸಲ್ಲಬಹುದಾದ ಅವರ ರಾಮಧಾನ್ಯ ಚರಿತೆ ಅಂದಿನ ಕಾಲದ ಅದ್ಭುತ ಕಲಾಕೃತಿಗಳಲ್ಲಿ ಒಂದು ಎಂದು ತಿಳಿಸಿದರು
ರಾಗಿ ಮತ್ತು ಭತ್ತವನ್ನು ಕಾವ್ಯದ ವಸ್ತುವನ್ನಾಗಿಸಿ ಅದರ ಹಿನ್ನೆಲೆಯಲ್ಲಿ ಸಮಾಜದಲ್ಲಿದ್ದ ಮೇಲು-ಕೀಳು ತರತಮ ಭಾವಗಳಿಗೆ ಆ ಕೃತಿಯ ಮೂಲಕ ಅವರು ಕೊಟ್ಟ ಸಂದೇಶ ಅತ್ಯಂತ ವಿಶೇಷವಾದದ್ದು ಎಂಬ ಅಂಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಎಲ್ಲರೂ ಎಲ್ಲ ಕಾಲಕ್ಕೂ ಓದಲೇಬೇಕಾದ ಅವರ ಸಾಹಿತ್ಯದ ಅನನ್ಯತೆಯನ್ನು ನಾವು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳುವ ಮೂಲಕ ಕನಕ ಜಯಂತಿಯ ಶುಭಾಶಯಗಳು
ಕೋರಿದರು.ಐಕ್ಯೂ ಎಸಿ ಸಂಚಾಲಕರಾದ ವಿಕಾಸ್ ರವರು ಕಾರ್ಯಕ್ರಮವನ್ನು
ಅಚ್ಚುಕಟ್ಟಾಗಿ ನಿರೂಪಿಸಿದರು ಮತ್ತು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ
ತೆರೆ ಎಳೆಯಲಾಯಿತು
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ವೇತಾ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಾಕ್ಷಾಯಿಣಿ ಕನ್ನಡ ವಿಭಾಗದ ಮುಖ್ಯಸ್ಥರಾದ
ಶ್ರೀಮತಿ ಪದ್ಮಹಾಗೂ ಅಧ್ಯಾಪಕರಾದ ಪುಷ್ಪ ಕುಮಾರ್ ಕಚೇರಿ ಸಿಬ್ಬಂದಿಗಳು ಎಲ್ಲರೂ ಹಾಜರಿದ್ದರು
Chamarajanagar
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿಗಳನ್ನು ಸದುಪಯೋಗಪಡಿಸಿಕೊಳ್ಳಿ – ನೋಡಲ್ ಅಧಿಕಾರಿ ಮಲ್ಲಿಕಾರ್ಜುನ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿಗಳ ಸದುಪಯೋಗಪಡಿಸಿಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಯನ್ನು ನಿರ್ಮಾಣ ಮಾಡಬೇಕು ಎಂದು ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.
ಅವರು ಹೊನ್ನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು 15ನೇ ಹಣಕಾಸು ಮತ್ತು 2024- 25 ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ಮಾಹಿತಿಗಳನ್ನು ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ನರೇಗಾ ಸಂಯೋಜಕ ನಾರಾಯಣ ಮಾತನಾಡಿ ಗ್ರಾಮ ಪಂಚಾಯತಿ ವತಿಯಿಂದ ಒಟ್ಟು 233 ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 216 ತೋಟಗಾರಿಕೆ ಇಲಾಖೆ ವತಿಯಿಂದ ಆರು ರೇಷ್ಮೆ ಇಲಾಖೆ ವತಿಯಿಂದ ಒಂದು ಪಿ ಆರ್ ಐ ಡಿ ಇಲಾಖೆ ವತಿಯಿಂದ ಆರು ಕೃಷಿ ಇಲಾಖೆಯಿಂದ 2 ಅರಣ್ಯ ಇಲಾಖೆಯಿಂದ 2 ಕಾಮಗಾರಿಗಳನ್ನು ಮಾಡಲಾಗಿದೆ. ಇದಕ್ಕಾಗಿ ಒಟ್ಟು ಕೂಲಿ ಮೊತ್ತ
78,94,854 ರೂಪಾಯಿಗಳು , ಸಾಮಗ್ರಿ ಮೊತ್ತ 27, 29,412 ರೂಪಾಯಿಗಳು ಸೇರಿದಂತೆ ಒಟ್ಟು 1,06,24,266 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು. ಇದಕ್ಕಾಗಿ 25549 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.
ಕಡತ ನೀಡದೆ ಇರುವುದು, ಅಧಿಕೃತ ವೋಚರ್ಸ್ ಒದಗಿಸದೆ ಇರುವುದು ,ಮಾಸ್ಟರ್ ರೋಲ್ ಇಲ್ಲದಿರುವುದು ,ರಾಜಧನ ಜಮೆ ಮಾಡದೆ ಇರುವುದು ಮತ್ತು ನಾಮಫಲಕ ಇಲ್ಲದಿರುವುದು ಸೇರಿದಂತೆ ಒಟ್ಟು 38 ಪ್ರಕರಣಗಳಿಗೆ ವಸುಲಾತಿ ಮತ್ತು 127 ಪ್ರಕರಣಗಳಿಗೆ ಆಕ್ಷೇಪಣೆ ಸೇರಿದಂತೆ ಒಟ್ಟು 37,43,825 ರೂಪಾಯಿಗಳನ್ನು ಆಕ್ಷೇಪಣ ಮೊತ್ತದಲ್ಲಿ ಇರಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ರೂಪೇಶ್, ಉಪಾಧ್ಯಕ್ಷ ಎಚ್ ಬಿ ನಾಗರಾಜು, ಸದಸ್ಯರಾದ ರಾಧಾ, ಇಂದಿರಾ, ಆರ್ ಪುಟ್ಟ ಬಸವಯ್ಯ, ನೇತ್ರ, ಭಾಗ್ಯಮ್ಮ, ಕುಮಾರಸ್ವಾಮಿ, ಪಿಡಿಒ ನಿರಂಜನ್, ಸಾಮಾಜಿಕ ಅರಣ್ಯ ಇಲಾಖೆಯ ಸಂಪತ್, ರೇಷ್ಮೆ ಇಲಾಖೆಯ ಸತ್ಯಪಾಲ್, ತೋಟಗಾರಿಕೆ ಇಲಾಖೆಯ ಶಿವರಂಜಿನಿ, ಗ್ರಾಪಂ ಸಿಬ್ಬಂದಿ ಮಹಾದೇವಸ್ವಾಮಿ ,ಮಹದೇವಮ್ಮ ಸೇರಿದಂತೆ ಆಶಾ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು
ವರದಿ : ಸೈಯದ್ ಮುಷರಫ್
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Hassan2 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Mysore6 days ago
ಗೃಹಲಕ್ಷ್ಮಿ : 1,18,000 ರೂಪಾಯಿ ಹಣ ನಾಡದೇವತೆ ತಾಯಿ ಚಾಮುಂಡೇಶ್ವ ದೇಗುಲಕ್ಕೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.