Chamarajanagar
ಕೆಎಸ್ ಆರ್ ಟಿ ಸಿ ಬಸ್ ಮುಂಭದಿ ಟೈಯರ್ ಬ್ಲಾಸ್ಟ್ ತಪ್ಪಿದ ಭಾರಿ ಅನಾಹುತ…
ಯಳಂದೂರು ಪಟ್ಟಣದ ಸಂತೆ ಮೊಳೆ ಸರ್ಕಾಲಿನಲ್ಲಿ ಕೆ.ಎಸ್. ಆರ್. ಟಿ. ಸಿ ಯ ಮುಂಬದಿಯ ಟೈರ್ ಬ್ಲಾಸ್ಟ್ ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಹೋಗುವುದು ಕೆ ಎ 10 ಎಫ್ 0248 ಇವತ್ತು ಕೊಳ್ಳೇಗಾಲ ಘಟಕದ ಬಸ್
ಕೊಳ್ಳೇಗಾಲ ಘಟಕದಲ್ಲಿ ಕೆಟ್ಟು ಹೋಗಿರುವ ಬಸ್ಸುಗಳನ್ನು ಕೊಟ್ಟು ಒಂದು ವರ್ಷಕ್ಕೊಮ್ಮೆ ಟೈರ್ ಗಳನ್ನು ಬದಲಾಯಿಸಿ ಮಾಡುವುದು ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಹೋಗುವ ಬಸ್ಸುಗಳಲ್ಲಿ ಒಂದು ಬಾರಿ ನೋಡಿ ಗೆ 120 ಜನಗಳು ತುಂಬಿ ಹೋಗುವುದು ಅದರಿಂದ ಟೈರ್ ಬ್ಲಾಸ್ಟ್ ಆಗಿದೆ ಎಂದು ಸಾರ್ವಜನಿಕರು ತಿಳಿಸಿದರು
Chamarajanagar
ಯಳಂದೂರು ತಾಪಂ ವತಿಯಿಂದ 15ನೇ ರಾಷ್ಟ್ರೀಯ ಮತದಾನ ದಿನಾಚರಣೆ
ಯಳಂದೂರು ಜನವರಿ 25
ಯಳಂದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 15ನೇ ರಾಷ್ಟ್ರೀಯ
ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾದ ಆರ್ಕಶ್ ಎಂ ರವರು 15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯ ತಿಳಿಸಿ ಈಗಿನ ಯುವಕರಿಗೆ ಮತದಾನದ ಅರಿವು ಅಗತ್ಯ 18 ವಯಸ್ಸು ಮೀರಿದವರು ಮಾತ ದಾರರಗೆ ನೋಂದಣಿ ಮಾಡುವುದು ಅಗತ್ಯ, ಎಂದು
ತಿಳಿಸಿದರು,
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ಚುನಾವಣೆ ಸಂದರ್ಭದಲ್ಲಿ ನಿಮ್ಮ ಮತ ವನು ಮಾರಿಕೊಳ್ಳಬೇಡಿ , ಯುವಕರು ಹೆಚ್ಚಿನ ಪ್ರಮಾಣದಲ್ಲಿ ಒಂದಾಯಿಸಬೇಕು, ರಾಷ್ಟ್ರೀಯ ಮತದಾನ ದ ಬಗ್ಗೆ ತಿಳಿಸಿದರು,
ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳದ ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಸಾಹಯಕ ನಿರ್ದೇಶಕ ರಾದ ಗುರು ಮಲ್ಲು, ಭೂ ದಾಖಲೆಗಳ ನಿರ್ದೇಶಕ ರಾದ ಉಮೇಶ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಹನೂರು, ಸಾಹಯಕ ಪ್ರಾದ್ಯಾಪಕರದ ಶ್ವೇತ ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತೇಷ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗೇಂದ್ರ, ಶಾಲೆಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು
Chamarajanagar
ಗಿರಿಜನರು ಸಮಾಜದ ಮುಖ್ಯವಾಹಿನಿಗೆ ಬಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕು: ಟಿ ಹಿರಲಾಲ್
ಚಾಮರಾಜನಗರ: ಗಿರಿಜನರು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹಿರಲಾಲ್ ಕರೆ ನೀಡಿದರು.
ಕೆರೆದಿಂಬ ಪೋಡಿನಲ್ಲಿ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ವಿಭಾಗದ ವತಿಯಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಬೆಂಕಿ ಅರಿವು ಮತ್ತು ಹಸಿರು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಬರುವ ಪೋಡುಗಳ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ 13 ಗಿರಿಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪಡೆದ ಅಂಕಗಳ ಆಧಾರದ ಮೇಲೆ 10 ಸಾವಿರ ರೂ, 7,000 ಮತ್ತು 5000 ಚೆಕ್ಕನ್ನು ವಿತರಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಶ್ರೀಪತಿ ಬಿ,ಎಸ್.ಮಾತನಾಡಿ, ಅರಣ್ಯ ಮತ್ತು ಗಿರಿಜನರ ನಡುವೆ ಅವಿನಾಭಾವ ಸಂಬಂಧವಿದ್ದು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಹಕರಿಸುವಂತೆ ತಿಳಿಸಿದರು.
ಗಿರಿಜನರು ಪೂಜ್ಯನಿಯ ಭಾವನೆಯಿಂದ ಅರಣ್ಯ ಮತ್ತು ವನ್ಯಜೀವಿಯನ್ನು ಗೌರವಿಸುತ್ತಿದ್ದು, ಅರಣ್ಯ ಇಲಾಖೆಯ ಉತ್ತಮ ಸಹಕಾರದಿಂದ ಅರಣ್ಯ ಮತ್ತು ವನ್ಯಜೀವಿಯನ್ನು ಸಂರಕ್ಷಿಸಬೇಕೆಂದು ಹೇಳಿದರು.
ಮಾದೇಗೌಡ ಮಾತನಾಡಿ, ಗಿರಿಜರು ಶಿಕ್ಷಣವನ್ನು ಶ್ರದ್ಧೆಯಿಂದ ಕಲಿತು ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಗಿರಿಜನರ ಮುಗ್ಧತೆಯನ್ನು ಬಳಸಿಕೊಂಡು ಹಣ ಹಾಗೂ ಇತರ ಆಮಿಷಗಳನ್ನು ಒಡ್ಡಿ ಯಾವುದೇ ಅರಣ್ಯ ಅಪರಾಧಗಳಲ್ಲಿ ಪಾಲ್ಗೊಳ್ಳುವಂತೆ ಯಾರಾದರೂ ಪ್ರೇರೇಪಿಸಿದಲ್ಲಿ ಇಲಾಖೆಯವರಿಗೆ ಮಾಹಿತಿಯನ್ನು ನೀಡುವಂತೆ ತಿಳಿಸಿದರು
ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ವಾಸು.ಬಿ.ಎಸ್ ನಾಗೇಂದ್ರ ನಾಯಕ್, ಪ್ರಮೋದ್, ಗಿರಿಜನ ಮುಖಂಡರಾದ ಬೊಮ್ಮಯ್ಯ, ಕೇತೇಗೌಡ, ಉಪವಲಯ ಅರಣ್ಯ ಅಧಿಕಾರಿ ಭಾನುಪ್ರಕಾಶ್, ಮೂರ್ತಿ, ಅನಂತರಾಮು, ಗಣೇಶ್ ಪ್ರಸಾದ್, ಮುಖ್ಯಪೇದೆ ನಂಜುಂಡ, ರಾಚಪ್ಪ ಕೆರೆದಿಂಬ ಮತ್ತು ಗೊಂಬಗಲ್ಲು ಮುಖಂಡರು ಅರಣ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
Chamarajanagar
ಅಂಬಳೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಶಂಕುಸ್ಥಾಪನೆ
ಯಳಂದೂರು: ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ಅಂದಾಜು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಶಂಕುಸ್ಥಾಪನೆಗೆ ಶುಕ್ರವಾರ (ಜ.24) ಶಾಸಕ ಎ.ಆರ್ ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸಿದರು
ಜಿಲ್ಲಾ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ವಿ. ಚಂದ್ರು‚ ನಿರ್ಮಿತಿ ಕೇಂದ್ರ ಇಂಜಿನಿಯರ್ ನಂದಿಶ್, ಗ್ರಾ.ಪಂ ಅಧ್ಯಕ್ಷ ನಂಜುಂಡಸ್ವಾಮಿ ಉಪಾಧ್ಯಕ್ಷೆ ಮಹದೇವಮ್ಮ ತಾ.ಪಂ ಇಒ ಉಮೇಶ್ ಅಗರ ಲಿಂಗರಾಜ್ ಹಾಗೂ ಪಿಡಿಒ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
-
Mysore23 hours ago
ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
-
Mysore8 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Kodagu10 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Mysore6 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu10 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Kodagu7 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-
State23 hours ago
ಬೆಂಗಳೂರು ಅರಮನೆ ಮೈದಾನದ ಜಾಗಕ್ಕೆ ಟಿ.ಡಿ.ಆರ್ ವಿತರಿಸುವುದು ರಾಜ್ಯದ ಹಿತಾಸಕ್ತಿಗೆ ಪ್ರತಿಕೂಲ: ಎಚ್.ಕೆ ಪಾಟೀಲ
-
Mysore7 hours ago
ಮತದಾನದ ಮಹತ್ವ ಸಾರಲು ಪರಿಣಾಮಕಾರಿ ಜನ ಜಾಗೃತಿ ಕಾರ್ಯಕ್ರಮ ಆಯೋಜನೆ ಅವಶ್ಯಕ ಬಿ.ಜಿ.ದಿನೇಶ್