Mandya
ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ ರೇವಣ್ಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
ಮಂಡ್ಯ: ಪೆನ್ ಡ್ರೈವ್ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್ ಡಿ ರೇವಣ್ಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಹಾಸನದಲ್ಲಿ ಪೆನ್ ಡೈನ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹರಿಬಿಡಲಾಗಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂತಹ ಕೃತ್ಯದ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿಯ ಚಿತ್ರಗಳು ಮತ್ತು ದೃಶ್ಯಗಳ ಮೂಲಕ ಮಹಿಳೆಯರ ಘನತೆ ಮತ್ತು ಖಾಸಗಿ ಬದುಕಿನ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಿಡಿ ಕಾರಿದರು.
ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್ ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ನೋಡಿದರೆ ಜನಪ್ರತಿನಿಧಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಣುತ್ತಿದೆ. ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾದವಾಗುತ್ತದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ವಾಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿರುವುದು ಅತ್ಯಂತ ಹೀನ ಕೃತ್ಯವಾಗಿದೆ.
ಆದ್ದರಿಂದ ಕೃತ್ಯ ಎಸಗಿದವರಷ್ಟೇ ಅಲ್ಲದೆ ಬಹಿರಂಗ ಪಡಿಸಿದವರೂ ಶಿಕ್ಷಾರ್ಹವೇ ಆಗಿದ್ದು, ಹಾಗಾಗಿ ಪತ್ತೆ ಹಚ್ಚಿ ಸತ್ಯವನ್ನು ಬಹಿರಂಗ ಪಡಿಸಬೇಕು ಮತ್ತು ಇಂತಹ ಹೀನ ಕೃತ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡಿದವರನ್ನೂ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾಋಉ ಒತ್ತಾಯಿಸಿದರು.
ದೂರು ದಾಖಲಿಸಲು ಸಿದ್ಧವಿರುವ ಮಹಿಳೆಯರಿಗೆ ಮಾಜಿ ಶಾಸಕ ಸಾ.ರಾ.ಮಹೇಶ್ ಬೆದರಿಕೆ ಹಾಕುತಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇವರ ವಿರುದ್ಧವೂ ಸಹ ಕಾನೂನು ಕ್ರಮ ಜರುಗಿಸಬೇಕು.
ಪ್ರಕರಣ ಕುರಿತು ವಿಶೇಷ ತನಿಖಾ ತಂಡ ಸೂಕ್ತ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಮುಂದಾಗಬೇಕು,
ಪ್ರಕರಣದ ತನಿಖೆಗೆ ಜನಸ್ನೇಹಿ ಹಾಗೂ ಮಹಿಳಾ ಪರ ಸಂವೇದನೆ ಹೊಂದಿರುವ ಪೋಲೀಸ್ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು, ಪ್ರಕರಣಕ್ಕೆ ನೇಮಕವಾಗಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರನ್ನು ನೇಮಿಸಿ ತನಿಖೆ ಚುರುಕುಗೊಳಿಸಿ ಆದಷ್ಟು ಬೇಗ ಸತ್ಯಾಂಶ ಬಯಲು ಗೊಳಿಸಿ ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಸಾಕ್ಷಿ ನಾಶವಾಗದಂತೆ ಎಚ್ಚರವಹಿಸಬೇಕು. ಧರ್ಮಸ್ಥಳದ ಸೌಜನ್ಯ ಪ್ರಸರಣದಲ್ಲಿ ಪ್ರಾಥಮಿಕ ತನಿಖೆಯಲ್ಲಿನ ಲೋಪದಿಂದ ನ್ಯಾಯ ನೀಡಲು ಸಾಧ್ಯವಾಗಿಲ್ಲ ಎಂಬುದನ್ನು ಸಿಬಿಐ ನ್ಯಾಯಾಲಯ ಹೇಳಿದೆ, ಹಾಗಾಗಿ ಪ್ರಾಥಮಿಕ ತನಿಖೆಯನ್ನು ಸಮರ್ಪಕವಾಗಿ ನಡೆಸಬೇಕು. ಪ್ರಜ್ವಲ್ ರೇವಣ್ಣ ಅವರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳೆಯರ ಖಾಸಗಿ ಮತ್ತು ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಪೆನ್ ಡೈನ್ ಮುಖಾಂತರ ಸಾರ್ವಜನಿಕರಿಗೆ ವಿತರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಲು ಕಾರಣವಾದವರನ್ನು ಸಹ ಪತ್ತೆಹಚ್ಚಿ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಚಿತ್ರೀಕರಣ ಮಾಡಿದವರು ಯಾರು ಪೆನ್ ಡ್ರೈವ್ ಯಾರಿಂದ ಬಂತು, ಯಾರು ಯಾರಿಗೆ ಪೆನ್ ಡ್ರೈವ್ ಹಂಚಿಕೆಯಾಗಿದೆ ಮತ್ತು ಯಾವ ಮೊಬೈಲ್ನಿಂದ ಚಿತ್ರೀಕರಣವಾಗಿದೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯದಲ್ಲಿ ಸಂತ್ರಸ್ತರಾಗಿರುವ ಮಹಿಳೆಯ ಗೌಪ್ಯತೆಯನ್ನು ಕಾಯಬೇಕು ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಸಂತ್ರಸ್ತ ಮಹಿಳೆಯರಿಗಾಗಿ ಪ್ರತ್ಯೇಕ ಕೌನ್ಸಿಲಿಂಗ್ ಕೇಂದ್ರಗಳನ್ನು ತೆರೆಯಬೇಕು. ಹಾಗೂ ಸಂತ್ರಸ್ಥ ಮಹಿಳೆಯರಿಗೆ ದೂರು ದಾಖಲಿಸಲು ಅನುಕೂಲವಾಗುವಂತೆ ಹಾಸನ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕವಾದ ದೂರು ಕೇಂದ್ರಗಳನ್ನು ಸ್ಥಾಪಿಸಬೇಕು. ಜೊತೆಗೆ ದೂರು ದಾಖಲಿಸಲು ಬರುವ ಸಂತ್ರಸ್ಥ ಮಹಿಳೆಯರಿಗೆ ಸೂಕ್ತ ಭದ್ರತೆ ಮತ್ತು ಪ್ರಯಾಣ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ಬು ಜನಪರ ಒಕ್ಕೂಟದ ದೇವಿ, ಸಿ ಕುಮಾರಿ, ಸುನಂದಜಯರಾಮ್, ಲತಾ,ಸುಶೀಲಾ,ಮಂಜುಳಾ ಭರತ್ ರಾಜ್, ಪ್ರೇಮಮ್ಮ, ಮಹಾದೇವಮ್ಮ, ಸತ್ಯಭಾಮ, ರೈತ ಸಂಘದ ಕೆಂಪೂಗೌಡ, ಕಾಂಗ್ರೆಸ್ ಮುಖಂಡರಾದ ಅಂಜನಾ ಶ್ರೀಕಾಂತ್, ವಿಜಯಲಕ್ಷ್ಮಿ ರಘುನಂದನ್ ಸೇರಿದಂತೆ ಇತರರು ವಹಿಸಿದ್ದರು.
Mandya
ಯಶಸ್ವಿಗೊಂಡ ಪ್ರೊ.ನಂಜುಂಡಸ್ವಾಮಿಯವರ 90ನೇ ವರ್ಷದ ಜಯಂತೋತ್ಸವ
ಮದ್ದೂರು : ಎಂಬತ್ತರ ದಶಕದಲ್ಲಿ ರೈತ ಸಂಘಟನೆ ಸ್ಥಾಪಿಸಿ ರೈತರ ಸ್ವಾಭಿಮಾನದ ಸಂಕೇತ ಹಸಿರು ಶಾಲು ಹೆಗಲ ಮೇಲೆ ಹೊರಿಸಿ ಲಕ್ಷಾಂತರ ರೈತರಿಗೆ ಹೋರಾಟದ ದೀಕ್ಷೆ ನೀಡಿ ನಮ್ಮನ್ನಾಳುವಂತಹ ಸರ್ಕಾರಗಳ ಅನ್ಯಾಯದ ವಿರುದ್ಧ ಸಿಡಿದೇಳಲು ಉತ್ತೇಜಿಸಿದ ಅಂತರಾಷ್ಟ್ರೀಯ ರೈತ ನಾಯಕ ಪ್ರೊ. ನಂಜುಂಡಸ್ವಾಮಿಯವರು ಎಂದು ಕಸ್ತೂರಿ ಕರ್ನಾಟಕ ಜನಪರ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ ಹೇಳಿದರು.
ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರೊ. ನಂಜುಂಡಸ್ವಾಮಿಯವರ 90 ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪ್ರೊ. ನಂಜುಂಡಸ್ವಾಮಿಯವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಹೊಸ ಕರ್ನಾಟಕ ಕಟ್ಟುವ ಎಂಬ ಘೋಷ ವಾಕ್ಯದೊಡನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬ್ರಹತ್ ರೈತ ಸಮಾವೇಶದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ರೈತರು ಭಾಗಿಯಾಗಿ ಮೂವತ್ತೈದು ಸಾವಿರಕ್ಕೂ ಹೆಚ್ಚು ರೈತರು ಬಂಧನ ಕೊಳಕ್ಕಾಗಿ ನಾಡಿನ ಎಲ್ಲಾ ಜೈಲುಗಳ ಸೇರಿದರು ಇದು ಸಾವಿರದ ಒಂಬೈನೂರ ನಲವತ್ತೇರಡೆನೆ ಇಸವಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯ ಮೀರಿಸುವಂತಹ ರೈತ ಚಳುವಳಿ ಇದಾಗಿತ್ತು ಎಂದು ಸ್ಮರಿಸಿದರು.
ಪ್ರೊಫೆಸರ್ ರವರ ರೈತ ಚಳುವಳಿ ಸಂಘಟನೆಯ ದ್ಯೆಯೋದ್ದೇಶಗಳನ್ನು ಮೆಚ್ಚಿ, ಹೊರದೇಶಗಳಾದ ಫ್ರಾನ್ಸ್ ,ಸ್ವಿಜರ್ಲ್ಯಾಂಡ್ ದೇಶಗಳಲ್ಲಿ ನಂಜುಂಡಸ್ವಾಮಿ ರವರ ನ್ನು ಕರೆಸಿ ಭಾಷಣ ಮಾಡಿಸಿದರು.

ಕೆಂಟಕಿ ಚಿಕನ್ ವಿರುದ್ಧದ ಚಳುವಳಿಯಲ್ಲಿ ಮೂವತ್ತು ದಿವಸಗಳ ಕಾಲ ಜೈಲುವಾಸ ಅನುಭವಿಸಿದರು ಆನ್ಲೈನ್ ಲಾಟರಿ ವಿರುದ್ಧ, ನೀರಾಚಳುವಳಿ ವಿದ್ಯುತ್ ಬಿಲ್ ನಿರಾಕರಣೆ ,ಕಾವೇರಿ ನದಿ ನೀರು ಹೋರಾಟ ಹೀಗೆ ನೂರಾರು ಹೋರಾಟದ ರುವಾರಿಗಳಾದ ಪ್ರೊಫೆಸರ್ ರವರು ನಮ್ಮನ್ನೆಲ್ಲ ಅಗಲಿದ್ದು, ಭೌದಿಕವಾಗಿ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಅವರ ಆದರ್ಶ ಮತ್ತು ಹಾಕಿಕೊಟ್ಟ ಹೋರಾಟದ ಸ್ಪೂರ್ತಿ ರೈತ ಚಳುವಳಿ ಮತ್ತು ಕನ್ನಡ ಚಳುವಳಿಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ತಿಳಿಸಿದರು .
ಈ ವೇಳೆ ಜಿಲ್ಲಾ ರೈತ ಮುಖಂಡ ಕುದುರಗಂಡಿ ನಾಗರಾಜು , ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ .ಸಿ. ಲಿಂಗರಾಜು ಗೌರವಾಧ್ಯಕ್ಷರುಗಳಾದ ವಿ. ಎಚ್ .ಶಿವಲಿಂಗಯ್ಯ, ನಿವೃತ್ತ ಶಿಕ್ಷಕ ಆಲೂರು ಚನ್ನಪ್ಪ ,ಪ್ರಧಾನ ಕಾರ್ಯದರ್ಶಿ ಸೊಂಪುರ ಉಮೇಶ್, ಉಪಾಧ್ಯಕ್ಷ ಟೈಲರ್ ರಮೇಶ, ಸಂಘಟನಾ ಕಾರ್ಯದರ್ಶಿ ಉಮೇಶ್, ಯುವ ಘಟಕದ ಅಧ್ಯಕ್ಷ ವಿಶ್ವಾಸ್, ತೂಬಿನಕೆರೆ ರಾಜು ಎಂ. ವೀರಪ್ಪ ,ಅರುಣ, ಶ್ರೀನಿವಾಸ್ , ವರದರಾಜು, ಶಿವರಾಜು ಶಿವರಾಮು ಹಾಗೂ ಕಾರ್ಯಕರ್ತರು ಹಾಜರಿದ್ದರು.
Mandya
ಬೂದನೂರು ಗ್ರಾ.ಪಂ. ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಂದೂಡಿದ ಗ್ರಾಮಸ್ಥರು
ಮಂಡ್ಯ: 2023-24ನೇ 15ನೇ ಹಣಕಾಸು ಯೋಜನೆ ಹಾಗೂ ಮ.ನ.ರೇ.ಗಾ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ವಿರುದ್ಧ ಕ್ರಮ ವಹಿಸದೆ ಮತ್ತೊಂದು ಗ್ರಾಮಸಭೆ ಮಾಡಲು ಮುಂದಾದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಗ್ರಾಮಸ್ಥರು ಗ್ರಾಮಸಭೆ ಮುಂದೂಡಿಸಿದ ಘಟನೆ ಜರುಗಿದೆ.
ಮಂಡ್ಯ ತಾಲೂಕಿನ ಬೂದನೂರು ಗ್ರಾಮ ಪಂಚಾಯತಿ ಆವರಣದಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆ ಹಾಗೂ ಮನರೇಗಾ ಕುರಿತ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಆಯೋಜಿಸಲಾಗಿತ್ತು. ಸಭೆ ಅರಂಭವಾದಾಗ ಹಿಂದಿನ ಗ್ರಾಮಸಭೆಯ ಅನುಪಾಲನಾ ವರದಿ ಮಂಡಿಸಿದಾಗ, ಕಳೆದ ಸಾಲಿನ ಅಕ್ರಮ, ಅವ್ಯವಹಾರ ಕುರಿತು ತನಿಖೆ ಮಾಡದ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು.

ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ನ್ಯೂನತೆಗಳ ಕುರಿತು ಗ್ರಾಪಂ ತಿಂಗಳಲ್ಲಿ ಅನುಪಾಲನಾ ವರದಿ ನೀಡಬೇಕು. ಈ ಕುರಿತು ವರ್ಷವಾದರೂ ವರದಿ ನೀಡಿಲ್ಲ. ಈ ಬಗ್ಗೆ ಆಡಾಕ್ ಸಮಿತಿ ನಡೆಸಿ ಕ್ರಮ ವಹಿಸಬೇಕಾದ ತಾ.ಪಂ ಅಧಿಕಾರಿಗಳು ಭ್ರಷ್ಟರ ಜೊತೆ ಶಾಮೀಲಾಗಿ ಅಕ್ರಮ ಮುಚ್ಚಿ ಹಾಕಲು ಮುಂದಾಗಿದ್ದಾರೆ ಎಂದು ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್ ದೂರಿದರು.

ಆಡಾಕ್ ಸಮಿತಿಯಲ್ಲಿ ಅಕ್ರಮಕ್ಕೆ ಸರಿಯಾದ ಕ್ರಮವಾಗುವವರೆಗೂ ಗ್ರಾಮಸಭೆ ಮುಂದೂಡುವಂತೆ ಸಭೆ ತೀರ್ಮಾನಿಸಿತು. ಸಭೆಯಲ್ಲಿ ನೋಡೆಲ್ ಅಧಿಕಾರಿ ನಾಗರಾಜು, ಆಡಳಿತಾಧಿಕಾರಿ ಕುಮಾರಸ್ವಾಮಿ, ಪಿಡಿಒ ಸ್ವಾಮಿ, ಮನರೇಗಾ ಇಂಜಿನಿಯರ್ ನವೀನ ಸೇರಿದಂತೆ ಇತರರು ಇದ್ದರು.
Mandya
ಮೀನುಗಾರಿಕೆಗೆ ಬೇಕಿರುವ ಸವಲತ್ತುಗಳನ್ನು ಪಡೆದುಕೊಳ್ಳಿ : ಶಾಸಕ ರಮೇಶ್ ಬಂಡಿಸಿದ್ದೇಗೌಡ
ಶ್ರೀರಂಗಪಟ್ಟಣ: ಮೀನುಗಾರರು ಸರ್ಕಾರದ ಮಟ್ಟದಲ್ಲಿ ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಗಂಜಾಂ ನ ಗಂಗಾಧರೇಶ್ವರ ಮೀನುಗಾರರ ಸಹಕಾರ ಸಂಘದ ಆವರಣದಲ್ಲಿ ಮೀನುಗಾರಿಕಾ ಇಲಾಖೆಯಿಂದ ಮೀನುಗಾರರಿಗೆ ಬಲೆ, ದೋಣಿ ಸೇರಿದಂತೆ ವಿವಿಧ ಸವಲತ್ತುಗಳ ವಿತರಿಸಿ ಅವರು ಮಾತನಾಡಿದರು.

ರಾಜ್ಯವಲಯ ಹಾಗೂ ಜಿಲ್ಲಾ ಪಂಚಾಯಿತಿ, ಒಳನಾಡು ಮೀನುಗಾರಿಕೆ ಅಭಿವೃದ್ದಿ ಯೋಜನೆ ಅಡಿ ಸರ್ಕಾರ ಮೀನು ಕೃಷಿ ಮಾಡುವರಿಗೆ ಅನೇಕ ಸವಲತ್ತುಗಳನ್ನು ನೀಡಲು ಮುಂದಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆ, ನದಿ ಸೇರಿದಂತೆ ಜಮೀನುಗಳಲ್ಲಿ ಹೋಂಡ ತೆಗೆ ಮೀನು ಕೃಷಿ ಮಾಡುವ ಮೀನುಗಾರರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಬರುವ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಮೀನುಗಾರರು ಬಳಸುವ ಹರಿಗೋಲು, ಬಲೆ. ಹೊಂಡಗಳಲ್ಲಿ ಮೀನುಗಳ ಸಾಕಲು ಉಚಿತವಾಗಿ ಗಿಪ್ಟ್ ತಿಲಾಪಿಯ ಮಾದರಿಯ ಮೀನುಮರಿಗಳನ್ನು ನೀಡಲಾಗುತ್ತಿದೆ. ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಿ ಜೊತೆಗೆ ಗಂಜಾಂನಲ್ಲಿರುವ ಗಂಗಾಧರೇಶ್ವರ ಮೀನುಗಾರಿಕಾ ಸಹಕಾರ ಸಂಘ ತುಂಬಾ ಹಳೆಯದಾಗಿದ್ದು, ಹಲವಾರು ವರ್ಷಗಳಿಂದ ಮೀನುಗಾರರ ಸಂಘದಲ್ಲಿ ಯೋಗಕ್ಷೇಮಗಳಿಗೆ ಹೆಸರುವಾಸಿಯಾಗಿದೆ. ಇನ್ನಷ್ಟು ಉನ್ನತಮಟ್ಟದ ಮಾದರಿ ಸಂಘವನ್ನಾಗಿಸಲು ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.
ನಂತರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಟಿ.ಡಿ. ಮಾತನಾಡಿ,, ಸರ್ಕಾರ ನಮ್ಮ ಮೀನುಗಾರಿಕೆ ಇಲಾಖೆಯಲ್ಲಿ ಬರುವ ಸವಲತ್ತುಗಳನ್ನು ಒಳನಾಡು ಮೀನುಗಾರಿಕೆ ಅಭಿವೃದ್ದಿ ಯೋಜನೆ ಮೀನುಗಾರರನ್ನು ಗುರುತಿಸಿ ಒಗದಿಸಲಾಗುತ್ತಿದೆ. ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು . ಜೊತೆಗೆ ಮೀನು ಕೃಷಿಕರು ಮೀನುಗಾರರು ಹೆಚ್ಚಿನ ಆಶಕ್ತಿ ತೋರಬೇಕು. ಮೀನುಗಾರಿಕೆ ಸಲಕರಣಾ ಕಿಟ್ ಹಾಗೂ ಲೈಫ್ ಜಾಕಿಟ್ಗಳನ್ನು ಪಡೆದುಕೊಳ್ಳಿ ಇದೀಗ ಸುಮಾರು 47 ಮಂದಿ ಮೀನುಗಾರರ ಫಲಾನುಭವಿಗಳಿಗೆ ತಲಾ 10 ಸಾವಿರ ರೂಗಳು ತಗಲುವ ವೆಚ್ಚದಲ್ಲಿ ಸಲಕರಣೆಗಳ ನೀಡಲಾಗಿದೆ ಎಂದರು.

ಪುರಸಭೆ ಮಾಜಿ ಪ್ರಭಾರ ಅಧ್ಯಕ್ಷ ಎಂ.ಎಲ್. ದಿನೇಶ್, ಮೀನುಗಾರರ ಸಂಘದ ಅಧ್ಯಕ್ಷ ಈ ಪ್ರಕಾಶ್, ಉಪಾಧ್ಯಕ್ಷ ನಾರಾಯಣ್, ಕಾರ್ಯದರ್ಶಿ ಜಿ.ಎಸ್ ಗೋವಿಂದರಾಜು, ನಿರ್ದೇಶಕರಾದ ಟಿ. ಕೃಷ್ಣ, ಮಂಜು, ಹೊನ್ನಯ್ಯ,ಪಿ. ಕುಮಾರ್, ಮಹದೇವು, ರಮ್ಯಾ, ವಿನಯ್ ಕುಮಾರ್, ರೇಣುಕಾ , ಪುರಸಭೆ ಮಾಜಿ ಅಧ್ಯಕ್ಷರಾದ ಎಲ್. ನಾಗರಾಜು, ಆರ್, ಕೃಷ್ಣ ಸೇರಿದಂತೆ ಇತರ ಸಂಘದ ಸದಸ್ಯರು ಹಾಗೂ ಮೀನುಗಾರರು ಉಪಸ್ಥಿತರಿದ್ದರು.
-
Mandya16 hours agoಬೂದನೂರು ಗ್ರಾ.ಪಂ. ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಂದೂಡಿದ ಗ್ರಾಮಸ್ಥರು
-
State18 hours agoಫಿಲ್ಮ್ ಚೇಂಬರ್ನಲ್ಲೇ ಹೃದಯಾಘಾತದಿಂದ ಜೊ ಸೈಮನ್ ಸಾ*ವು
-
Hassan22 hours agoರಾಜ್ಯ ಸರ್ಕಾರದಿಂದ ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿ: ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
-
Mandya19 hours agoಪಾಂಡವಪುರ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿ
-
Manglore19 hours agoಮಂಗಳೂರು: ಬೆಂಗಳೂರಿನಿಂದ ಮಾದಕದ್ರವ್ಯ ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಅರೆಸ್ಟ್
-
Mysore20 hours agoನಾಳೆ 1 ಲಕ್ಷ ಜನರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣೆ
-
Chamarajanagar20 hours agoಕುಡಿಯುವ ನೀರಿಗೆ ಸಮಸ್ಯೆಗೆಯಾಗದಂತೆ ಕ್ರಮ ವಹಿಸಲು ಶಾಸಕ ಮಂಜುನಾಥ್ ಸಲಹೆ
-
Hassan21 hours agoಮೈತ್ರಿ ಕುರಿತು ಹೈಕಮಾಂಡ್ ತೀರ್ಮಾನವೇ ಅಂತಿಮ: ಛಲವಾದಿ ನಾರಾಯಣಸ್ವಾಮಿ
