Connect with us

Hassan

ಕ್ಯಾಪ್ಟನ್ ಅರ್ಜುನನ ಸಾವಿಗೆ ತೆಂಕಲಗೂಡು ಬೃಹನ್ಮಠದ ಶ್ರೀ ಷ.ಬ್ರ.ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಾಪ

Published

on

ಆಲೂರು: ಸತತ ಎಂಟು ಬಾರಿ ತಾಯಿ ಚಾಮುಂಡೇಶ್ವರಿ ದೇವಿಯ ಸೇವೆಯನ್ನ ಮಾಡಿದ ಕ್ಯಾಪ್ಟನ್ ಅರ್ಜುನನ ಸಾವಿಗೆ ತೆಂಕಲಗೂಡು ಬೃಹನ್ಮಠದ ಶ್ರೀ ಷ.ಬ್ರ.ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಾಪವನ್ನು ವ್ಯಕ್ತಪಡಿಸಿದರು.
ಇಡೀ ಕರ್ನಾಟಕದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಎನ್ನುವ ಮಾತನ್ನು ಕೇಳಿದಾಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು.


ಇಂತಹ ಒಂದು ದೊಡ್ಡ ಸಮಸ್ಯೆಯನ್ನು ಈ ಭಾಗದ ಜನರು ಹಲವಾರು ವರ್ಷಗಳಿಂದ ಎದುರಿಸಿಕೊಂಡು ಬರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕಾಡಾನೆ ಮಾನವ ಸಂಘರ್ಷದಿಂದ ಈ ಭಾಗದಲ್ಲಿ ಸಾವು ನೋವುಗಳ ಸುದ್ದಿಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದೆ ಎಂದು ಹೇಳಲು ಅತ್ಯಂತ ದುಃಖವೆನಿಸುತ್ತದೆ.
ಈ ಒಂದು ಸಮಸ್ಯೆಯ ಭಾಗವಾಗಿ ನೆನ್ನೆ ಕಾಡಾನೆ ಕಾರ್ಯಾಚರಣೆಗೆ ಇಳಿದಂತಹ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿರುವುದು. ಇತ್ತೀಚಿಗಷ್ಟೇ ಅರವಳಿಕೆ ತಜ್ಞರಾದ ವೆಂಕಟೇಶ್ ರವರನ್ನ ಕಳೆದುಕೊಂಡೆವು ಇಂದು ಆನೆಗಳನ್ನ ಹಿಡಿಯುವ ಬಲಿಷ್ಠವಾದ ಹಾಗೂ ಕಾಡಾನೆ ಕಾರ್ಯಾಚರಣೆಯಲ್ಲಿ ಪರಿಣಿತಿ ಹೊಂದಿದ್ದ ಅದೆಷ್ಟೋ ಊರುಗಳಿಗೆ ಕಾಡು ಪ್ರಾಣಿಗಳಿಂದ ಮುಕ್ತಿಯನ್ನು ನೀಡಿದ ಅರ್ಜುನನನ್ನು ಕಳೆದುಕೊಂಡಿದ್ದೇವೆ. ಕಾಡಾನೆ ಮತ್ತು ಮಾನವ ಸಂಘರ್ಷ ನಿಲ್ಲಲು ಇನ್ನೂ ಅದೆಷ್ಟು ಸಾವು ನೋವುಗಳು ಆಗಬೇಕೋ ಎನ್ನುವುದು ಖಂಡಿತವಾಗಿಯೂ ತಿಳಿಯುತ್ತಿಲ್ಲ ಈ ಮಲೆನಾಡಿನ ಜನರು ಬೆಳಗ್ಗೆ ಎದ್ದಾಕ್ಷಣ ಭಯದ ನೆರಳಿನಲ್ಲಿ ಜೀವನವನ್ನು ನಡೆಸುವಂತೆ ಆಗಿದೆ ಸರ್ಕಾರಗಳು ಬದಲಾಗುತ್ತಿವೆ ಅಧಿಕಾರಿಗಳು ಬದಲಾಗುತ್ತಿದ್ದಾರೆ ಎಲ್ಲವೂ ಬದಲಾಗುತ್ತಿದೆ ಆದರೆ ಮಲೆನಾಡಿನ ಭಾಗಕ್ಕೆ ಕಾಡಾನೆ ಮತ್ತು ಮಾನವರ ಸಂಘರ್ಷ ಬದಲಾಗುತ್ತಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಇಲ್ಲಿ ಸರ್ಕಾರ ವಿಫಲವಾಗಿದೆಯೋ ಅಧಿಕಾರಿಗಳು ವಿಫಲರಾಗಿದ್ದಾರೋ ಅಥವಾ ಮಲೆನಾಡಿನ ಭಾಗವೇ ಎಲ್ಲದರಿಂದ ವಂಚಿತವಾಗಿದೆಯೋ ಆದರೆ ಅದರ ಫಲಿತಾಂಶ ಮಾತ್ರ ಮಲೆನಾಡಿನ ಭಾಗ ಸದಾವಕಾಲ ಸಾವು ನೋವುಗಳನ್ನು ಎದುರಿಸುವಂಥಾಗಿದೆ.


ಸರ್ಕಾರಕ್ಕೆ ಮನವಿ ಮಾಡಿದರು ಅಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದನೆಯಿಲ್ಲ. ಕೊನೆಯದಾಗಿ ಪ್ರತಿಭಟನೆಗಳನ್ನ ಮಾಡಿದರು ಕೂಡ ಸಮಸ್ಯೆಯ ತೀವ್ರತೆಯನ್ನು ಅರಿತುಕೊಳ್ಳದ ಸರ್ಕಾರವಾಗಲಿ ಅಧಿಕಾರಿಗಳಾಗಲಿ ಈ ಭಾಗದ ಜನಕ್ಕೆ ಪ್ರಾಮುಖ್ಯತೆಯನ್ನು ನೀಡದಿರುವುದು ಅತ್ಯಂತ ದುರದೃಷ್ಟಕರ. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹೋರಾಟಗಾರರನ್ನು ಜೈಲಿಗೆ ಕಳಿಸುವಲ್ಲಿ ತೆಗೆದುಕೊಂಡ ಮುತವರ್ಜಿಯನ್ನು ಈ ಕಾಡಾನೆ ಮಾನವ ಸಂಘರ್ಷದ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ತೆಗೆದುಕೊಂಡಿದ್ದರೆ ಬಹುಶಹ ಒಂದಷ್ಟು ಜೀವಗಳನ್ನ ಉಳಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಸಿಗುತ್ತಿತ್ತೇನೋ ಸಾಕು ಮಾಡಿ ಇನ್ನಾದರೂ ಮಲೆನಾಡಿನ ಭಾಗದ ಜನಕ್ಕೆ ನೆಮ್ಮದಿಯ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಅದೇ ರೀತಿ ಮಾತು ಬರದ ಪ್ರಾಣಿ ಆದರೂ ಕೂಡ ಮನುಷ್ಯನ ಜೊತೆ ಅನ್ಯೋನ್ಯವಾದ ಸಂಬಂಧವನ್ನು ಇಟ್ಟುಕೊಂಡು ತಾಯಿ ಚಾಮುಂಡೇಶ್ವರಿಯ ಸೇವೆಯನ್ನು ಮಾಡಿದ ಇಡೀ ಕರ್ನಾಟಕಕ್ಕೆ ಕೀರ್ತಿ ಕಲಶದಂತೆ ಇದ್ದ ಅರ್ಜುನನನ್ನು ಇಂದು ಕಳೆದುಕೊಂಡಿದ್ದೇವೆ. ಅರ್ಜುನನ ಪವಿತ್ರಾತ್ಮಕ್ಕೆ ತಾಯಿ ಚಾಮುಂಡೇಶ್ವರಿ ಚಿರಶಾಂತಿಯನ್ನು ಅನುಗ್ರಹಿಸಲಿ ಎಂದು ಈ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದರು

Continue Reading
Click to comment

Leave a Reply

Your email address will not be published. Required fields are marked *

Hassan

ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ

Published

on

ವರದಿ: ಸತೀಶ್ ಚಿಕ್ಕಕಣಗಾಲು

ಆಲೂರು: ತಾಲ್ಲೂಕಿನ ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್ಲಾ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕುಮಾರ್‌ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಸಾಮಾನ್ಯ ಕ್ಷೇತ್ರದಿಂದ ಕೆ.ಕೆ. ಜಯರಾಮ, ಹೆಚ್‌.ಎಂ. ನಾರಾಯಣ, ಕೆ.ಟಿ. ಬೋರೇಗೌಡ, ಸುಬ್ಬೇಗೌಡ, ವೆಂಕಟೇಗೌಡ, ಮಹಿಳಾ ಕ್ಷೇತ್ರದಿಂದ ಶಕುಂತಲ, ಪ್ರತಿಮ, ನಂಜಶೆಟ್ಟಿ (ಹಿಂದುಳಿದ ವರ್ಗ ಎ), ಕೆ. ಜಗದೀಶ್‌ (ಹಿಂದುಳಿದ ವರ್ಗ ಬಿ), ರಂಗಸ್ವಾಮಿ (ಪ.ಜಾ.) ಹಾಗು ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸದ ಹಿನ್ನಲೆಯಲ್ಲಿ ಸ್ಥಾನ ಖಾಲಿಯಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಸಿ. ಸಂತೋಷ್‌ ಅವರು ಆಯ್ಕೆಯಾದರು. 2030ರ ಫೆ. 9ರ ವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ.

ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್‌, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್‌, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕುಮಾರಸ್ವಾಮಿ, ನಂಜೇಶ್‌ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.

Continue Reading

Hassan

ಫೆ.11 ರಿಂದ 13 ವರೆಗೆ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ

Published

on

ಬೇಲೂರು: ಬೇಲೂರಿನ ಚನ್ನಾಪುರ ರಸ್ತೆಯಲ್ಲಿರುವ ಕೋವಿಪೇಟೆಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ ಫೆ. 11 ರಿಂದ ಫೆ.13ರ ವರೆಗೂ ನಡೆಯಲಿದೆ, ಪ್ರತಿಯೊಬ್ಬ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇಗುಲದ ಪ್ರಧಾನ ಅರ್ಚಕ ರವಿಸ್ವಾಮಿ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಫೆ.11 ಮಂಗಳವಾರ ಸಂಜೆ 6.00 ಗಂಟೆಗೆ ಗಂಗಪೂಜೆ ಮತ್ತು ಕಳಸ ಸ್ಥಾಪನೆ, ಪಂಚಾಮೃತ, ಅಭಿಷೇಕ, ಗಣ ಹೋಮ, ನವಗ್ರಹ ಹೋಮ ಚಂಡಿ ಹೋಮ, ದುರ್ಗಾ ಹೋಮ, ಜಯಾವಿ ಹೋಮಗಳು ನಡೆಯುತ್ತದೆ.

ಫೆ.12 ರ ಬುಧವಾರ ಬೆಳಗ್ಗೆ 8.00 ಗಂಟೆಗೆ 12.30 ವರೆಗೂ ಬೇಲೂರಿನ ವಿಷ್ಣು ಸಮುದ್ರದಲ್ಲಿ (ಅಷ್ಟಮ್ಮನಕೆರೆ) “ಗಂಗಾ ಪೂಜೆ’ ನಂತರ ನಗರದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ನಂದಿ ಧ್ವಜ ಮತ್ತು ಚೌಡಿಕೆ ಪದಗಳೊಂದಿಗೆ ಹಲವು ವಾದ್ಯ ಗೋಷ್ಠಿಯೊಂದಿಗೆ 101 ಕುಂಭಾಷೇಕಗಳೊಂದಿಗೆ ಪ್ರಷಾಲಂಕಾರಗೊಂಡ ಶ್ರೀ ರೇಣುಕಾ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮತ್ತು ಬೆಳಗ್ಗೆ 11.30 ಕ್ಕೆ “ಶ್ರೀ ರೇಣುಕಾ ಯಲ್ಲಮ್ಮನವರ ಕೆಂಡೋತ್ಸವ” ನಡೆಯುತ್ತದೆ. ನಂತರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ಇರುತ್ತದೆ. “ಮದ್ಯಾಹ್ನ 1-00 ಗಂಟೆಗೆ ಅನ್ನ ಸಂತರ್ಪಣೆ” ನಡೆಯುತ್ತದೆ.

ಫೆ.13 ರ ಬೆಳಿಗ್ಗೆ 8.00 ರಿಂದ ಶ್ರೀ ಹುಚ್ಚಂಗಿ ಅಮ್ಮನವರ ಜಾತ್ರಾ ಮಹೋತ್ಸವ ಉತ್ಸವ” ಬೆಳಗ್ಗೆ 10.30 ರಿಂದ ಸಂಜೆ 6.00 ರವರೆಗೆ ದೇವಿಗೆ ಹರಕೆ ಸೇವೆ ಇರುತ್ತದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ತನು, ಮನ, ಧನ ಸಹಾಯದೊಂದಿಗೆ ಸಹಕರಿಸಿ ಶ್ರೀ ದೇವಿಯವರ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Continue Reading

Hassan

ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ ಕಂಪನಿಗೆ ಒಂದು ಲಕ್ಷ ರೂ. ದಂಡ

Published

on

ಚಾಮರಾಜನಗರ, ಫೆ.06:- ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ್ದ ತಮಿಳುನಾಡಿನ ಕಂಪನಿಯೊಂದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ನ್ಯಾಯನಿರ್ಣಾಯಕ ಅಧಿಕಾರಿ ಗೀತ ಹುಡೇದ ಅವರು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಹನೂರು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಸ್ಟೋರ್ ಗೆ ಕಳೆದ 2024ರ ಜುಲೈ 29ರಂದು ಕೊಳ್ಳೇಗಾಲ ತಾಲ್ಲೂಕಿನ ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅಂಗಡಿಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ವಿ.ಕೆ.ಎಸ್.ಟ್ರೂ ಸಾಲ್ಟ್ (VKS TRUE SALT) ಎಂಬ ಹೆಸರಿನ ಉಪ್ಪಿನ ಆಹಾರ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಸದರಿ ಉಪ್ಪಿನ ಮಾದರಿಯು ವಿಶ್ಲೇಷಣಾ ವರದಿಯಿಂದ ಕಳಪೆ ಗುಣಮಟ್ಟ (ಸಬ್ ಸ್ಟ್ಯಾಂಡರ್ಡ್) ಎಂದು ದೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಮೊಕದ್ದಮೆ ಹೂಡಲಾಗಿತ್ತು.

ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಾಯಕ ಅಧಿಕಾರಿಗಳಾದ ಗೀತಾ ಹುಡೇದ ಅವರು ಪ್ರಕರಣದ ವಿಚಾರಣೆ ನಡೆಸಿ ತಯಾರಕರಾದ ತಮಿಳುನಾಡಿನ ತೂತುಕುಡಿಯ ವಿ.ಕೆ.ಎಸ್. ಪುಡ್ ಪ್ರಾಡಕ್ಟ್ಸ್ ಕಂಪನಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮ ನಿಬಂಧನೆ 2011ರ ರಿತ್ಯಾ ಸೆಕ್ಷನ್ 51 ರಡಿಯಲ್ಲಿ ಒಂದು ಲಕ್ಷ ರೂ. ದಂಡ ವಿಧಿಸಿ ಫೆಬ್ರವರಿ 3 ರಂದು ಆದೇಶಿಸಿದ್ದಾರೆ.

Continue Reading

Trending

error: Content is protected !!