Connect with us

Cultural

ರಂಗಬಳಗದವತಿಯಿಂದ ಅಭಿನಯಿಸಿದ ಚಾವುಂಡರಾಯ ನಾಟಕ ಪ್ರೇಕ್ಷಕರನ್ನು ಮನಸೂರೆಗೊಂಡಿತು

Published

on

ಚನ್ನರಾಯಪಟ್ಟಣ : ತಾಲೂಕಿನ ಶ್ರವಣಬೆಳಗೊಳದಲ್ಲಿ ಸಮಾಜಮುಖಿ ರಂಗಬಳಗದವತಿಯಿಂದ ಅಭಿನಯಿಸಿದ ಚಾವುಂಡರಾಯ ನಾಟಕ ಪ್ರೇಕ್ಷಕರನ್ನು ಮನಸೂರೆಗೊಂಡಿತು.

ನಾಟಕ ಗಂಗ ಅರಸರ ದೊರೆ ಮಾರಸಿಂಹನ ಸಲ್ಲೇಖನ ತೆಗೆದುಕೊಳ್ಳುವ ದೃಶ್ಯಗಳಿಂದ ಆರಂಭವಾಗಿ ನಂತರ ಅವನ ಉತ್ತರಾಧಿಕಾರಿಯ ನೇಮಕದ ವಿಷಯದಲ್ಲಿ ನಡೆಯುವ ರಾಜಕೀಯ ಗುದ್ದಾಟ ದೊಂದಿಗೆ ಆರಂಭವಾಗುತ್ತದೆ.
ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಗೌರವ ಸ್ಮರಣೆಯೊಂದಿಗೆ, ಶ್ರವಣಬೆಳಗೊಳ ದಿಗಂಬರ ಜೈನ ಸಂಘ ಹಾಗೂ ಹಾಸನ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಾಟಕ ಏರ್ಪಡಿಸಲಾಗಿತ್ತು.

ನಾಟಕದ ಆರಂಭದಲ್ಲಿ ರನ್ನ ಕವಿಯ ಆಗಮನ ಆಗುತ್ತದೆ.
ನಾಟಕದ ಉದ್ದಕ್ಕೂ ಗಂಗ ಅರಸರ ರಾಜನಿಷ್ಠೆಯನ್ನು ಹೊಂದಿರುವ ಚಾವುಂಡರಾಯನ ಪಾತ್ರ ನಾಟಕದ ಪೂರ್ತಿ ಆವರಿಸಿಕೊಳ್ಳುತ್ತದೆ.

ನಾಟಕದ ಪ್ರಥಮದಲ್ಲಿ ಚಾವುಂಡರಾಯ ಹಾಗೂ ಆತನ ತಮ್ಮ ನಾಗವರ್ಮನ ಕತ್ತಿ ವರಸೆ ಹಾಗೂ ಕುಸ್ತಿಯ ಪ್ರದರ್ಶನದಿಂದ ಪ್ರವೇಶವಾಗುತ್ತಾರೆ ನಂತರ ರನ್ನ ಕವಿ ಬಂದು ಚಾವುಂಡರಾಯನ ಆಶ್ರಯ ಪಡೆಯುತ್ತಾರೆ.

ದೊರೆ ಮಾರಸಿಂಹನ ಉತ್ತರಾಧಿಕಾರಿಯಾಗಿ ಆತನ ಹಿರಿಯ ಪುತ್ರ ರಾಚಮಲ್ಲ ಅಧಿಕಾರ ವಹಿಸಿಕೊಳ್ಳಬೇಕೆಂಬುದು ಚಾವುಂಡರಾಯನ ನಿಲುವು ಆಗಿರುತ್ತದೆ.
ಅದಕ್ಕೆ ಪಾಂಚಾಲರಾಜ ಹಾಗೂ ಇತರೆ ಸಾಮಂತರ ವಿರೋಧ ಇರುತ್ತದೆ.
ಇಂತಹ ಸಂದರ್ಭದಲ್ಲಿ ರಾಜಮಲನನ್ನೇ ರಾಜನನ್ನಾಗಿ ಮಾಡಬೇಕೆಂದು ಚಾವುಂಡರಾಯ ಹೋರಾಟ ನಡೆಸುತ್ತಾನೆ. ರಾಜ ದ್ರೋಹ ಎಸಗಿದ ಆರೋಪದ ಮೇಲೆ ರಾಜ ಮಾರಸಿಂಹನ ತಮ್ಮನನ್ನು ಕೂಡ ಕೊಲ್ಲಲಾಗುತ್ತದೆ.
ಕೆಲವು ಸಾಮಂತರು ಚಾವುಂಡರಾಯನನ್ನೇ ರಾಜ್ಯಭಾರ ಮಾಡು ಎಂದು ಹೇಳಿದಾಗ ಅದಕ್ಕೆ ಚಾವುಂಡರಾಯ ನಯವಾಗಿ ತಿರಸ್ಕಾರ ಮಾಡುತ್ತಾನೆ.
ನಾಟಕದ ದ್ವಿತೀಯಾರ್ಧದಲ್ಲಿ ಕಳವಪ್ಪು ಅಂದರೆ ಈಗಿನ ಶ್ರವಣಬೆಳಗೊಳಕ್ಕೆ ಚಾವುಂಡರಾಯ ಕುಟುಂಬ ಸಮೇತ ಆಗಮಿಸಿ ಇಲ್ಲಿಯೇ ನೆಲೆಯೂರಿ ಬಾಹುಬಲಿ ಮೂರ್ತಿಯ ಸ್ಥಾಪನೆಗೆ ಮುಂದಾಗುತ್ತಾನೆ.

ನಾಟಕದಲ್ಲಿ ರನ್ನ ಕವಿಯ ಪದ್ಯಗಳು ರನ್ನ ಹಾಗೂ ಚಾವುಂಡರಾಯನ ಕವಿತ್ವವನ್ನ ತೋರಿಸಲಾಗಿದೆ. ಜೈನ ಧರ್ಮದ ಸಲ್ಲೇಖನ ವ್ರತ, ಜೈನ ಧರ್ಮದ ತತ್ವಗಳು ಹಾಗೂ ಮೋಕ್ಷ ಸಾಧನೆಯನ್ನು ಕೂಡ ವಿವರಿಸಲಾಗಿದೆ.
ನಾಟಕದ ಮಧ್ಯದಲ್ಲಿ ಹಾಸ್ಯದ ಮೇಳ ತರಲಾಗುತ್ತದೆ ಆಗ ಚಾವುಂಡರಾಯ ಪಾಂಚಾಲ ರಾಜ ವೇಷಮರಸಿ ಹಾಸ್ಯಗಾರನ ಪಾತ್ರ ಧರಿಸಿ ಬಂದಿರುವುದನ್ನು ಕಂಡುಹಿಡಿದು ಪಾಂಚಾಲ ರಾಜನನ್ನು ತಡೆಯುತ್ತಾನೆ.
ಆಗಲೂ ಕೂಡ ಪಾಂಚಾಲರಾಜ ಚಾವುಂಡರಾಯ ನೀನೇ ರಾಜ್ಯಭಾರ ವಹಿಸಿಕೊಳ್ಳುವಂತೆ ಕರೆ ನೀಡುತ್ತಾನೆ, ನಿನ್ನ ತಮ್ಮ ನಾಗವರ್ಮನನ್ನು ರಾಜನೇ ಕೊಲ್ಲಿಸಿರುವುದಾಗಿಯೂ ತಿಳಿಸುತ್ತಾನೆ. ಆಗಲೂ ಕೂಡ ಚಾವುಂಡರಾಯ ರಾಜ್ಯಭಾರ ವಹಿಸಿಕೊಳ್ಳುವುದನ್ನು ನಿರಾಕರಿಸುವುದನ್ನು ಕಾಣಬಹುದು.

ಸಮಾಜಮುಖಿ ರಂಗಬಳಗದ ನುರಿತ ಕಲಾವಿದರು ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು ಪ್ರೇಕ್ಷಕರು ಕೂಡ ಶಾಂತ ರೀತಿಯಲ್ಲಿ ಕುಳಿತು ನಾಟಕವನ್ನು ವೀಕ್ಷಿಸಿದರು.
ನಾಟಕವನ್ನು ಜಯರಾಮ್ ರಾಯಪುರ ರಚಿಸಿದರೆ ಹುಲಗಪ್ಪ ಕಟ್ಟಿಮನಿ ವಿನ್ಯಾಸ ಹಾಗೂ ನಿರ್ದೇಶನವನ್ನು ಮಾಡಿದ್ದಾರೆ.

ಯುಗಳ ಮುನಿಗಳಾದ ಅಮೋಘ ಕೀರ್ತಿ ಮಹಾರಾಜರು, ಅಮರ ಕೀರ್ತಿ ಮಹಾರಾಜರು, ಅಭಿನವ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು, ಕಂಬದ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನಾಟಕವನ್ನು ವೀಕ್ಷಿಸಿದರು.

ವರದಿ : ದಯಾನಂದ್ ಶೆಟ್ಟಿಹಳ್ಳಿ.

 

Continue Reading
Click to comment

Leave a Reply

Your email address will not be published. Required fields are marked *

Cultural

ಕ್ರೀಡೆ ಸ್ಪೂರ್ತಿದಾಯಕ ಕ್ಷೇತ್ರ : ಸಚಿವ ಡಾ.ಹೆಚ್.ಸಿ.ಮಹದೇವಪ್ಪ

Published

on

ಮೈಸೂರು,ಅ.21:- ಪ್ರಪಂಚದಲ್ಲಿ ಕ್ರೀಡೆಯು ಮಹತ್ವದ ಸ್ಥಾನ ಪಡೆದಿದ್ದು, ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಕ್ಷೇತ್ರವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ದಸರಾ ಕ್ರೀಡಾ ಉಪಸಮಿತಿ ವತಿಯಿಂದ ಶನಿವಾರ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಡ ಮತ್ತು ಸಿಎಂ ಕಪ್-2023 ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಿ ಸಚಿವರು ಮಾತನಾಡಿದರು.

ಕ್ರೀಡೆಯು ಮನುಷ್ಯನ ಭಾವನೆಗಳನ್ನು ಕ್ಷಣಾರ್ಧದಲ್ಲಿ ಬದಲಿಸುವ ಶಕ್ತಿ ಹೊಂದಿದೆ. ಬಹುಮುಖ್ಯವಾಗಿ ಕ್ರೀಡೆಗೆ ಕಠಿಣವಾದ ಪರಿಶ್ರಮ ಅಗತ್ಯ. ಅದಕ್ಕೆ ಉತ್ತೇಜನ ಮತ್ತು ಪ್ರೋತ್ಸಾಹ ಹಾಗೂ ಅಗತ್ಯ ಸವಲತ್ತುಗಳನ್ನು ನೀಡಿದಾಗ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ. ಈ ಎಲ್ಲಾ ಸೌಕರ್ಯವನ್ನು ಸರ್ಕಾರ ಒದಗಿಸಿಕೊಡಲಿದೆ ಎಂದು ಭರವಸೆ ನೀಡಿದರು.

ಮೈಸೂರು ದಸರಾ ಮಹೋತ್ಸವಲ್ಲಿ ಪ್ರಮುಖವಾಗಿ ಕಳೆಗಟ್ಟುವ ವೇದಿಕೆ ದಸರಾ ಕ್ರೀಡಾಕೂಟವಾಗಿದೆ. ಈ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಸರ್ಕಾರ ಅಭಿನಂದಿಸುತ್ತದೆ. ಈ ಎಲ್ಲರೂ ಕೂಡ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸೌಹರ್ದತೆ, ಅಖಂಡತೆ ಮತ್ತು ಬಹುತ್ವವನ್ನು ರಕ್ಷಣೆ ಮಾಡುವುದು ನಿಮ್ಮ ಜವಬ್ದಾರಿ ಎಂದು ತಿಳಿಸಿದರು.

ದಸರಾ ಕ್ರೀಡಾಕೂಟದಲ್ಲಿ ಹತ್ತು ಸಾವಿರ ಕ್ರೀಡಾಪಟುಗಳು ಭಾಗವಹಿಸಿ, ಕ್ರೀಡಾಂಗದಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ. ಸೋಲು, ಗೆಲುವಿನ ಲೆಕ್ಕಚಾರ ಹಾಕದೆ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಸಾಧನೆ ಮಾಡಿದಂತಹ ಸಾಧಕರ ಗುರಿ ನಿಮ್ಮದಾಗಬೇಕು. ಸೋಲೇ ಗೆಲುವಿನ ಸೋಪಾನ ಎಂದು ಭಾವಿಸಿ ಮರಳಿ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಭಾರತದ ಭೂಪಟದಲ್ಲಿ ಅಚ್ಚಳಿಯದೆ ಮೈಸೂರು ಸಾಂಸ್ಕೃತಿಕ ನಗರದ ಎಂಬ ಹೆಗ್ಗಳಿಕೆ ಉಳಿಯಬೇಕಾದರೆ ನಾಲ್ವಡಿ ಕೃಷ್ಣರಾಜ ಒಡೆಯರ ಮುತ್ಸದ್ಧಿತನ, ಸೂಕ್ಷ್ಮತೆ, ದೂರದೃಷ್ಟಿ ಮುಖ್ಯಕಾರಣ. ಅವರು ಬೆಂಬಲಿಸದ ಯಾವುದೇ ಕ್ಷೇತ್ರ ಉಳಿದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ, ಶಾಸಕ ತನ್ವೀರ್ ಸೇಠ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ಒಲಂಪಿಕ್ ಸಂಸ್ಥೆಯ ಕಾರ್ಯದರ್ಶಿ ಆನಂತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್.ಶಶಿಕುಮಾರ್, ಉಪಸಮಿತಿ ಅಧ್ಯಕ್ಷ ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Cultural

ಸತತ ಮೂರನೇ ಬಾರಿ ಯುವ ಸಂಭ್ರಮದಿಂದ ಯುವ ದಸರಕ್ಕೆ ಆಯ್ಕೆ ಆದ ಗ್ರೀನ್ ಕಿಡ್ಸ್ ಡ್ಯಾನ್ಸ್ ಸ್ಕೂಲ್ ತಂಡದ ನೃತ್ಯ ಸಂಯೋಜನೆಯ ತಂಡ.

Published

on

ಮೈಸೂರಿನಲ್ಲಿ ನಡೆದ ಯುವ ಸಂಭ್ರಮದಲ್ಲಿ ರಾಜ್ಯದ 400ಕ್ಕೂ ಹೆಚ್ಚು ಕಾಲೇಜುಗಳು ನೃತ್ಯ ಪ್ರದರ್ಶನ ನೀಡಿದ್ದು ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ 30 ಕಾಲೇಜಿನ ತಂಡಗಳನ್ನು ಯುವ ದಸರಾ ಕ್ಕೆ ಆಯ್ಕೆ ಮಾಡಲಾಗಿತ್ತು.
ಇದರಲ್ಲಿ ಪಿರಿಯಾಪಟ್ಟಣದ ಒಂದು ಪ್ರಥಮ ದರ್ಜೆ ಕಾಲೇಜ್ ಆಯ್ಕೆಯಾಗಿದೆ.

ಸತತ ಮೂರನೇ ಬಾರಿ ಯುವ ದಸರಾ ಕ್ಕೇ ಪಿರಿಯಾಪಟ್ಟಣದ ಹೆಸರಾಂತ ಗ್ರೀನ್ ಕಿಡ್ಸ್ ಡಾನ್ಸ್ ಸ್ಕೂಲ್ ನೃತ್ಯ ಸಂಯೋಜನೆಯಲ್ಲಿ ಪಟ್ಟಣದ ಪ್ರಥಮ ದರ್ಜೆ ಕಾಲೇಜು ತಂಡ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ನೃತ್ಯ ಸಂಯೋಜಕ ಅಂಬಾರಿ ಪರಮೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಆಯ್ಕೆಯಾಗಿರುವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

Continue Reading

Cultural

ರಂಜಿಸಲಿದೆ ಡೊಳ್ಳು ಕುಣಿತ, ಪೂಜಾ ಕುಣಿತ, ವಸ್ತು ಪ್ರದರ್ಶನ

Published

on

ಅ. 19 ಜಾನಪದ ದಸರಾ ವೈವಿಧ್ಯಕ್ಕೆ ಪೂರ್ಣ ತಯಾರಿ

ಜನಮಿತ್ರ ಮಡಿಕೇರಿ : ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕವು ಅದ್ಧೂರಿಯ ಜಾನಪದ ದಸರಾ ಮೆರವಣಿಗೆ ಮತ್ತು ಕಾರ್ಯಕ್ರಮವನ್ನು ರೂಪಿಸಿದ್ದು, ಮಡಿಕೇರಿ ನಗರ ದಸರಾ ಸಮಿತಿಯ ಸಹಕಾರದೊಂದಿಗೆ ಅ. 19 ರಂದು ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ರಸ್ತೆಯ ವಿಶ್ರಾಂತಿ ಗೃಹ ಆವರಣದಿಂದ ವರ್ಣರಂಜಿತ ಮೆರವಣಿಗೆ ಆರಂಭಗೊಳ್ಳಲಿದೆ. ರಾಮನಗರದ ಪ್ರತಿಷ್ಠಿತ ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ತಮಟೆ, ಕೊಡಗಿನ ಮುತ್ತಪ್ಪ ಚಂಡೆ ವಾದ್ಯ ಇತ್ಯಾದಿ ಕಲಾ ತಂಡಗಳು ಭಾಗವಹಿಸಲಿವೆ.
ಶಾಸಕ ಡಾ. ಮಂತರ್‌ಗೌಡ, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್‌ಆಚಾರ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಜಿಲ್ಲಾಧಿಕಾರಿ ವೆಂಕಟ್‌ರಾಜ ಹಾಗೂ ಇತರರು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಜಾನಪದ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಈ ಸಂದರ್ಭ ಜಾನಪದ ಪರಿಷತ್ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನೂ ವಿತರಿಸಲಾಗುವುದು.
ಪರಿಷತ್ ಏರ್ಪಡಿಸಿದ್ದ ಕೊಡಗಿನ ಕಲೆ, ಸಂಸ್ಕೃತಿ ಆಧಾರಿತ ಜಾನಪದ ಕಥೆ ಹೇಳುವ ಆನ್‌ಲೈನ್ ಸ್ಪರ್ಧೆಯಲ್ಲಿ ಕವಯತ್ರಿ ಭಾಗೀರಥಿ ಹುಲಿತಾಳ ಪ್ರಥಮ ಬಹುಮಾನ ಗಳಿಸಿದ್ದಾರೆ. ಸೋಮವಾರಪೇಟೆಯ ಬರಹಗಾರ್ತಿ ಶರ್ಮಿಳಾ ರಮೇಶ್ ದ್ವಿತೀಯ ಹಾಗೂ ಕಾನ್ವೆಂಟ್ ವಿದ್ಯಾರ್ಥಿನಿ ಅನಗ ತೃತೀಯ ಬಹುಮಾನ ಗಳಿಸಿದ್ದಾರೆ.
ಮೆರವಣಿಗೆ ಆಹ್ವಾನ: ಜಿಲ್ಲೆಯ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಸ್ವಸÀಹಾಯ ಸಂಘಗಳ ಸದಸ್ಯರುಗಳು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸುವಂತೆ ಜಾನಪದ ಪರಿಷತ್ ಮನವಿ ಮಾಡಿದೆ.
ಬೊಂಬೆ ಮನೆಗೆ ಬಹುಮಾನ: ದಸರಾ ಪ್ರಯುಕ್ತ ಹಲವು ಮನೆಗಳಲ್ಲಿ ಬೊಂಬೆ ಪ್ರದರ್ಶನ ನಡೆಸುವ ಪದ್ಧತಿ ಇದ್ದು, ಈ ಸಾಲಿನಿಂದ ಉತ್ತಮ ಪ್ರದರ್ಶನ ಏರ್ಪಡಿಸುವವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲು ಜಿಲ್ಲಾ ಜಾನಪದ ಪರಿಷತ್ ತೀರ್ಮಾನಿಸಿದೆ.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಎಲ್ಲೆಡೆಯಿರುವ ಜಾನಪದ ಪರಿಷತ್ ಘಟಕಗಳ ವತಿಯಿಂದ ವೈವಿಧ್ಯ ಮಯ, ಜಾನಪದ ನೃತ್ಯ, ಸಂಗೀತ, ಹಾಡು ಕಾರ್ಯಕ್ರಮಗಳು ಜರುಗಲಿವೆ. ಬಳಿಕ ಸಂಜೆ ಆರು ಗಂಟೆಗೆ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲೂ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಿ.ಜಿ. ಅನಂತಶಯನ ತಿಳಿಸಿದ್ದಾರೆ.

Continue Reading

Trending