Connect with us

Cinema

‘ಸೇವ್‌ ಅವರ್ ಸೋಲ್’ ಕಿರುಚಿತ್ರ ಬಿಡುಗಡೆ

Published

on

ಮಂಗಳೂರು: “ಅಪಘಾತ ಮತ್ತು ಅತ್ಯಾಚಾರದಂತಹ ಘಟನೆಗಳು ನಡೆದಾಗ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್ ಫೋನ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎಂದು ಮಹತ್ವದ ಸಂದೇಶ ಸಾರುವ ಕಿರುಚಿತ್ರ ‘ಸೇವ್ ಅವರ್ ಸೋಲ್’ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿದೆ.ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಕಿರುಚಿತ್ರದ ಬಿಡುಗಡೆ ಎ.ಯು. ಕ್ರಿಯೇಶನ್ಸ್ ಯೂ ಯೂ ಟ್ಯೂಬ್‌ನಲ್ಲಿ ಅ.೧೮ರಂದು ಸಂಜೆ ನಡೆಯಲಿದೆ“ ಎಂದು ನಿರ್ಮಾಪಕ ಯು.ಜಿ.ರಾಘವ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಸೇವ್ ಅವರ್ ಸೋಲ್ ಕಿರುಚಿತ್ರದಲ್ಲಿ ಅತ್ಯಾಚಾರ ಹಾಗೂ ಅಪಘಾತಗಳು ನಡೆದ ಸಮಯದಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಕಾಂಟ್ಯಾಕ್ಟ್ ಮಾಡಬಹುದು ಎಂಬ ಸಂದೇಶ ಸಾರಲಾಗಿದೆ. ಎ.ಯು. ಕ್ರಿಯೇಶನ್ಸ್ ಮೂಲಕ ನಿರ್ಮಾಣಗೊಂಡಿರುವ ಈ ಕಿರ್ರುಚಿತ್ರಕ್ಕೆ ದ.ಕ.ಜಿಲ್ಲಾ ಪೊಲೀಸ್ ಘಟಕ
ಸಹಯೋಗ ನೀಡಿದೆ. ಇದೇ ಅ. ೧೮ರಂದು ಎ.ಯು. ಕ್ರಿಯೇಶನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಕಿರುಚಿತ್ರ ಬಿಡುಗಡೆಗೊಳ್ಳಲಿದೆ“ ಎಂದರು.


ಎ.ಯು. ಕ್ರಿಯೇಶನ್ಸ್ ಮುಖ್ಯಸ್ಥ ಅಚಲ್ ಉಬರಡ್ಕ ಅವರು ‘ಸೇವ್ ಅವರ್ ಸೋಲ್’ ಕಿರುಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ಎಡಿಟಿಂಗ್ ಮಾಡಿದ್ದು ಗುರುಮೂರ್ತಿ ಅಮ್ಮಣ್ಣಾಯ ಮತ್ತು ರತ್ನ ಸಿಂಚನ ಅವರು ಸಹನಿರ್ದೇಶಕರಾಗಿದ್ದಾರೆ. ಉಪ್ಪಿನಂಗಡಿಯ ಸರ್ಗಂ ಸ್ಟುಡಿಯೋಸ್ ನ ಸಾತ್ವಿಕ್ ಪಡಿಯಾ‌ರ್ ಸಂಗೀತ ನೀಡಿದ್ದು ಪ್ರಸಾದ್ ಕೊಯಿಲ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅನೀಶ್ ಗಾಣಿಗ, ಕಿಶೋರ್ ಜೋಗಿ, ಅನುಷಾ ಜೋಗಿ ಪುರುಷರಕಟ್ಟೆ, ಅಚಲ್ ಉಬರಡ್ಕ, ಗುರುಮೂರ್ತಿ ಅಮ್ಮಣ್ಣಾಯ, ವಿಲ್ಮಾ ಸಿಸ್ಮರ್, ಲಲಿತಾ ಸಿಸ್ಟರ್, ದಿವಾಕರ ಸುರ್ಯ, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ,
ಸಂದೀಪ್ ಆಚಾರ್ಯ, ಪ್ರಕಾಶ್ ಆಚಾರ್ಯ, ಜಯರಾಮ ಆಚಾರ್ಯ, ನವೀನ್ ಕುಲಾಲ್, ಕಿಶೋರ್ ನೀರಕಟ್ಟೆ, ಚಂದ್ರಶೇಖರ ಶೆಟ್ಟಿ ಮತ್ತಿತರರು ತಾರಾಗಣದಲ್ಲಿದ್ದಾರೆ.
ಎ.ಯು. ಕ್ರಿಯೇಶನ್ಸ್‌ನ ಪರಿಚಯ:
ಅಚಲ್ ಉಬರಡ್ಕ ಅವರ ಮುಂದಾಳತ್ವದ ಎ.ಯು. ಕ್ರಿಯೇಶನ್ಸ್ ಈಗಾಗಲೇ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿದೆ. ಮೊದಲ ಕಿರುಚಿತ್ರ ಮೌನ. ಇದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಅಚಲ್ ಉಬರಡ್ಕ ಅವರು ವಿಧ್ಯಾಭ್ಯಾಸ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಸೇರಿ ಮಾಡಿರುವ ಕಿರುಚಿತ್ರ. ಇದಕ್ಕೆ ರಾಷ್ಟ್ರ ಮಟ್ಟದ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಅಚಲ್, ಅನಿಶ್ ಗಾಣಿಗ, ಗುರುಮೂರ್ತಿ ಅಮ್ಮಣ್ಣಾಯ ಉಪಸ್ಥಿತರಿದ್ದರು.

Continue Reading

Cinema

ಸೀಬರ್ಡ್ ಬಸ್‌ಗೆ ಬೆಂಕಿ ಆವಘಡ : 20ಕ್ಕು ಹೆಚ್ಚು ಮಂದಿ ಸಜೀವ ದಹನ

Published

on

ಹಿರಿಯೂರು : ಬೆಂಗಳೂರಿನಿಂದ ಗೋಕರ್ಣಕ್ಕೆ  ತೆರಳುತ್ತಿದ್ದ ಸೀಬರ್ಡ್‌ ಬಸ್‌  ರಾಷ್ಟ್ರೀಯ ಹೆದ್ದಾರಿ ಕೆ.ಆರ್ ಹಳ್ಳಿ ಗೊರ್ಲತ್ತು ಬಳಿ ಅಪಘಾತ ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗೊಲ್ಲಡ್ಕು ಗ್ರಾಮದ ಬಳಿ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ

ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಸಿರಾ ಮತ್ತು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬಸ್ ಅತಿವೇಗದಿಂದ ಕಂಟೈನರ್ ಲಾರಿ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಥಳಕ್ಕೆ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

Cinema

ಯುದ್ಧಕ್ಕೆ ಸಿದ್ಧ ಕಿಚ್ಚ ಸುದೀಪ ಹೇಳಿಕೆ: ಫ್ಯಾನ್ ಫೈಟ್ ಮಧ್ಯೆ ಪೈರಸಿ ವಾರ್‌

Published

on

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಡಿ.25ಕ್ಕೆ  ) ವರ್ಲ್ಡ್‌ವೈಡ್‌ ಬಿಡುಗಡೆಯಾಗುತ್ತಿದೆ. ಆದರೆ ರಿಲೀಸ್‌ಗೂ ಮುನ್ನವೇ ಮಾರ್ಕ್ ಫುಲ್ ಸೌಂಡ್ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ ಮಾತುಗಳು, ಇಡೀ ಸ್ಯಾಂಡಲ್‌ವುಡ್‌ಗೆ ಕಿಚ್ಚು ಹಚ್ಚಿದೆ.

ಹುಬ್ಬಳಿಯ ಬೃಹತ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚನ ಮಾತಿಗಾಗಿ ಎಲ್ಲರೂ ಕಾದಿದ್ದರು. ಸುದೀಪ್ ಆಡಿದ ಒಂದು ಮಾತು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪರೋಕ್ಷವಾಗಿ ಫ್ಯಾನ್ಸ್‌ವಾರ್‌ ಮಾತಿನ ಯುದ್ಧಭೂಮಿಯಾಗಿ ಬದಲಾಗಿದೆ. ಯುದ್ಧಕ್ಕೆ ಸಿದ್ಧ..ಯಾಕಂದರೆ ನಾವು ನಮ್ಮ ಮಾತಿಗೆ ಬದ್ಧ ಎಂದಿದ್ದು, ಫ್ಯಾನ್ಸ್ ಫೈಟ್‌ನಲ್ಲಿ ಕಿಚ್ಚನ ಕಿಚ್ಚು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಚಿತ್ರರಂಗದಲ್ಲಿ ಫ್ಯಾನ್ ವಾರ್ ಜೋರಾಗಿದೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದು ಎಂದು ಚರ್ಚೆ ಆರಂಭವಾಗಿದೆ.

ಸುದೀಪ್ ಏಟು..  ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ದರ್ಶನ್‌ ತಿರುಗೇಟು

ಸುದೀಪ್ ಹೇಳಿಕೆ ಪೈರಸಿ ಮಾಡೋರಿಗೆ ಖಡಕ್ ವಾರ್ನಿಂಗ್ ನೀಡಿದಂತಿದ್ದರೂ  ಅದು ದರ್ಶನ್ ಫ್ಯಾನ್ಸನ್ನೇ ಉದ್ದೇಶಿಸಿ ಹೇಳಿದ್ದರಾ ಎಂಬ ವಾದ ಶುರುವಾಗಿದೆ. ಕಿಚ್ಚನ ಯುದ್ಧದ ಮಾತಿಗೆ ನಾನಾ ಆಯಾಮ ಪಡೆದುಕೊಂಡಿದೆ. ಇದಕ್ಕೆ ಭಾನುವಾರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಸುದೀಪ್ ಮಾತಿಗೆ ಕೌಂಟರ್‌ ನೀಡಿದ್ದು ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ಹುಟ್ಟುಹಾಕಿವೆ.

ಕಿಚ್ಚ ಸುದೀಪ ಯುದ್ಧ ಮಾತಿಗೆ ದರ್ಶನ್ ಪತ್ನಿ ಟಾಂಗ್ ನೀಡಿದರೆ, ದರ್ಶನ್ ಆಪ್ತ, ನಟ ಧನ್ವೀರ್ ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಫ್ಯಾನ್ಸ್ ವಾರ್ ಇನ್ನಷ್ಟು ಹೆಚ್ಚಿಸಿದೆ. ಮೊದಲಿನಿಂದಲೂ ದರ್ಶನ್ ಪರ ನಿಂತಿರುವ ಧನ್ವೀರ್, ದರ್ಶನ್ ಜೊತೆಗಿರುವ ಮತ್ತೊಂದು ಫೋಟೊ ಹಾಕಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ. ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತದೆ. ಆದರೆ ಸಿಂಹನೇ ರಾಜ ಎಂದು ತಮಿಳು ಸಿನಿಮಾ ಡೈಲಾಗ್ ಅನ್ನು ಧನ್ವೀರ್ ಗೌಡ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಇನ್ನೊಂದು ಸ್ಟೋರಿಯಲ್ಲಿ ವಿಜಯಲಕ್ಷ್ಮಿ ಬೆಂಕಿ ಮಾತಿಗೆ ಶಹಬ್ಬಾಶ್ ಎಂದು ಬರೆದುಕೊಂಡಿದ್ದಾರೆ. ಇದು ದರ್ಶನ್- ಸುದೀಪ್ ಫ್ಯಾನ್ಸ್ ವಾರ್‌ಗೆ ಮತ್ತಷ್ಟು ತುಪ್ಪ ಸುರಿದಂತೆ ಕಾಣುತ್ತಿದೆ.

ಫ್ಯಾನ್ಸ್ ಫೈಟ್ ನಡುವೆ ಪೈರಸಿ ವಾರ್

ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚನ ಕಿಚ್ಚಿಗೆ  ಮತ್ತೆ ಫ್ಯಾನ್ಸ್ ವಾರ್ ಜೋರಾಗಿದೆ. ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ವಾಕ್ಸಮರ ತಾರಕಕ್ಕೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನು ಒಬ್ಬರು ಕೆಣಕಿ ಪೋಸ್ಟ್ ಮಾಡುತ್ತಿದ್ದಾರೆ. ಫ್ಯಾನ್ಸ್ ವಾರ್ ಮಧ್ಯೆ  ಇದೀಗ ಪೈರಸಿ ವಾರ್ ಶುರುವಾಗಿದೆ. ಸ್ಯಾಂಡಲ್‌ವುಡ್ ಸಿನಿಮಾಗಳಿಗೆ ಪೈರಸಿ ಪಿಡುಗು ತಗುಲಿದೆ. ಕನ್ನಡ ಸಿನಿಮಾಗಳಿಗೆ ಪೈರಸಿ ಮಾರಕವಾಗುತ್ತಿದೆ. ಪೈರಸಿ ಪಿಶಾಚಿ ವಿರುದ್ಧ ಡೆವಿಲ್ ಚಿತ್ರತಂಡ ಗರಂ ಆಗಿದೆ. ಡೆವಿಲ್‌ಗೂ ಪೈರಸಿ ಕಾಟ ತಾಗಿದ್ದು, ಈವರೆಗೂ 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದ್ಯಂತೆ. ಪ್ಲೀಸ್ ಪೈರಸಿ ಬೇಡ ಚಿತ್ರಮಂದಿರಕ್ಕೆ ಬನ್ನಿ ಎಂದು ಮನವಿ ಮಾಡಿ ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್ ಮಾಡಿದೆ.

ಫ್ಯಾನ್ಸ್ ವಾರ್ ನಡುವೆ ಸುದೀಪ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಆಲ್ ಸೆಟ್…? ಎಂದು ಟ್ವೀಟ್ ಮಾಡಿದ್ದಾರೆ. ಯುದ್ಧಕ್ಕೆ ಸಜ್ಜು ಎಂಬ ಸುಳಿವು ಕೊಟ್ಟಂತೆ ಪೋಸ್ಟ್ ಮಾಡಿದ್ದಾರೆ. ಈ ಒಂದು ಪೋಸ್ಟ್ ನಾನಾ ಅರ್ಥ ನೀಡುತ್ತಿದೆ. ಏಟಿಗೆ ಎದಿರೇಟು ಕೊಡಲು ಕಿಚ್ಚ ಸಿದ್ಧವಾದ್ದರಾ? ಎಂಬ ಚರ್ಚೆ ಹುಟ್ಟು ಹಾಕಿದೆ.

ಯುದ್ಧಕ್ಕೆ ಸಿದ್ಧ, ಹೇಳಿಕೆ ಸುದೀಪ ಆಪ್ತರ ಕ್ಲಾರಿಟಿ

ಸುದೀಪ ಕಿಚ್ಚು ಒಂದ್ಕಡೆಯಾದರೆ, ಮತ್ತೊಂದೆಡೆ  ಅವರ ಆಪ್ತ ಚಂದ್ರಚೂಡ್ ಫೇಸ್‌ಬುಕ್‌ನಲ್ಲಿ ಸುದೀಪ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾಗಳನ್ನ ಹಾಳು ಮಾಡುವ ಒಂದು ಪಡೆ ಇದೆ. ಪೈರಸಿ ಮಾಡುವವರ ವಿರುದ್ಧ ನಮ್ಮ ಹೋರಾಟ. ಮ್ಯಾಕ್ಸ್ ರಿಲೀಸ್ ಆಗಿದ್ದಾಗ 11 ಸಾವಿರ ಲಿಂಕ್ಸ್‌ಗಳನ್ನು ನಾವು ಡಿಲೀಟ್ ಮಾಡಿದ್ದೇವೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಳ್ಳುವುದು ಯಾಕೆ? ಎಂದು ದರ್ಶನ್ ಫ್ಯಾನ್ಸ್‌ಗೆ ಕೌಂಟರ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ ಆಪ್ತ, ಮಾಜಿ ಸಚಿವ ರಾಜೂ ಗೌಡ ಅವರು ಸಹ ಮಾತನಾಡಿದ್ದು, ಸುದೀಪ ಫ್ಯಾನ್ಸ್ ಕಾಂಜಿ ಪೀಂಜಿ ಅಲ್ಲ. ಕ್ಲಾಸ್ ಫ್ಯಾನ್ಸ್ ಎಂದು ಹೇಳಿದ್ದರು. ಈ ಮಾತು ಸಹ ಪರೋಕ್ಷವಾಗಿ ದರ್ಶನ್ ಫ್ಯಾನ್ಸ್ ಗುರಿಯಾಗಿಸಿ ಹೇಳುವಂತಿತ್ತು.
ಈ ಹೇಳಿಕೆಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು,   ಸುದೀಪ ಯುದ್ಧಕ್ಕೆ ಸಿದ್ಧ ಎಂದಿದ್ದು  ಪೈರಸಿ ವಿರುದ್ಧ ಮಾತ್ರ. ಇನ್ನೊಬ್ಬರನ್ನು ದೃಷ್ಟಿಯಲ್ಲಿ ಇಟ್ಕೊಂಡು ಹೇಳಿಲ್ಲವೆಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗೂ ಸ್ಪಷ್ಟನೆ ನೀಡಿದ್ದಾರೆ.
Continue Reading

Chamarajanagar

ಗಂಗವಾಡಿ ಗ್ರಾಮದಲ್ಲಿ ಚಿರತೆ ದಾಳಿ: ಹಸು ಕರು ಬಲಿ

Published

on

ಚಾಮರಾಜನಗರ: ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ದಾಳಿಗೆ ನಾಲ್ಕು ಹಸು, ಕರು ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.

ಗಂಗವಾಡಿ ಗ್ರಾಮದ ನಿವಾಸಿ ರಾಮಯ್ಯ ಎಂಬುವರು ಹಸುವನ್ನು ಜಮೀನಿನಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದಾಗ ದಾಳಿ ನಡೆಸಿರುವ ಚಿರತೆ ಹಸು ಹಾಗೂ ಕರುಗಳನ್ನು ಕೊಂದುಹಾಕಿದೆ.

ಚಿರತೆಯು ಕೊಟ್ಟಿಗೆಯಲ್ಲಿದ್ದ ಹಸುವನ್ನು ಹೊರ ಎಳೆದು ತಂದು ಹಸುವಿನ ಅರ್ಧ ಭಾಗವನ್ನು ತಿಂದು ಹಾಕಿದೆ. ಉಳಿದಂತೆ ಹಸು ಮತ್ತು ಕರುವಿನ ಕುತ್ತಿಗೆಗೆ ಗಾಯಗಳಾಗಿ ಸಾವನ್ನಪಿವೆ.

ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಇಲಾಖೆಯಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಚಿರತೆ ಸೆರೆಗೆ ಬೋನ್ ಇರಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿರತೆ ಸೆರೆಗೆ ಒತ್ತಾಯ:
ಗಂಗವಾಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಾಯರವಾಗಿ ಚಿರತೆ ದಾಳಿ ನಡೆಯುತ್ತಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆಯೂ ಹಲವು ಹಸುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಹಾಗಾಗಿ ಚಿರತೆ ಸೆರೆಗೆ ಬೋನ್ ಇರಿಸಬೇಕು. ಪದೇ ಪದೇ ಚಿರತೆ ಹಸುವಿನ ಮೇಲೆ ದಾಳಿ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆಯನ್ನು ಶೀಘ್ರದಲ್ಲಿಯೇ ಸೆರೆಹಿಡಿಯಬೇಕು. ಹಸುವಿನ ಮಾಲೀಕ ರಾಮಯ್ಯ ಅವರಿಗೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Continue Reading

Trending

error: Content is protected !!