Connect with us

Mysore

ನೂತನವಾಗಿ ಆರಂಭವಾಗಿದ್ದ  ಸಕ್ಕರೆ ಗ್ರಾಮದ  ಅಂಬೇಡ್ಕರ್ ವಸತಿ ಶಾಲೆಯ ಅವ್ಯವಸ್ಥೆ,  ಪೋಷಕರ ಪ್ರತಿಭಟನೆ

Published

on

ಸಾಲಿಗ್ರಾಮ: ತಾಲೂಕಿನ ಸಕ್ಕರೆ ಗ್ರಾಮದ ಅಂಬೇಡ್ಕರ್ ವಸತಿ ಶಾಲೆ ಅವ್ಯವಸ್ಥೆಯಿಂದ ಕೂಡಿದ್ದು, ಶಾಲೆಯಲ್ಲಿ ವಾಸಿಸುವ ಮಕ್ಕಳು ನಿತ್ಯ ಇಂತಹ ವಾತಾವರಣದಲ್ಲಿಯೇ ಕಾಲಕಳೆಯುವಂತಾಗಿದ್ದು,ಶೌಚಾಲಯಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳ ಎರಡೂ ವಿಭಾಗದಲ್ಲಿಯೂ ಇಂತಹದೇ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಾದ ಅನಿವಾರ್ಯತೆಯಲ್ಲಿರುವುದು ದುರದೃಷ್ಟಕರ ಸಂಗತಿ.

ಗಬ್ಬೆದ್ದು ನಾರುವ ಶೌಚಾಲಯ,_ಮಕ್ಕಳ ಶೌಚಾಲಯ ವಿಭಾಗವಂತೂ ತೀರಾ ಹದಗೆಟ್ಟಿದ್ದು, ಈ ಶಾಲೆ ಉದ್ಘಾಟನೆಯಾಗಿ ಕೇವಲ ೧ವರ್ಷ ಕಳೆದಿದ್ದು ಅಲ್ಲಿನ ಶೌಚಾಲಯಗಳನ್ನು ನೋಡಿದರೆ ಎಷ್ಟೋ ೧೦ ವರ್ಷವಾದಂತೆ ಕಾಣುತ್ತಿದೆ. ಮಕ್ಕಳು ಬಳಸುವ ವಾಷ್ ಬೇಸಿನ್‌ಗಳು ಪಾಚಿಕಟ್ಟಿ ಕೆಂಪು ಬಣ್ಣಕ್ಕೆ ತಿರುಗಿದೆ.ಶೌಚಾಲಯಗಳ ಕೊಠಡಿಗಳ ಟೈ ಲ್ಸ್ ಗಳ  ಮೇಲೆ ಮಣ್ಣು ಹಾಗೆಯೇ ಇದೆ. ಮೂತ್ರಾಲಯದ ಬೇಸಿನ್‌ಗಳ ವಾಸನೆ ತಡೆಗಟ್ಟಲು ಮೈಗೆ ಹಾಕುವ ಸೋಪುಗಳನ್ನು ಹಾಕಿರುತ್ತಾರೆ.

ಅಶುಚತ್ವದ ಮಲಗುವ ಕೋಣೆ –ಮಕ್ಕಳು ಮಲಗುವ ಕೋಣೆಯಲ್ಲಿ ಯಾವುದೇ ಹಾಸಿಗೆಯಿಲ್ಲದೇ ಚಾಪೆಯಲ್ಲಿಯೇ ಮಲಗಬೇಕಿದ್ದು ಅದೂ ಕೂಡಾ ವಸತಿ ಶಾಲೆಯಿಂದ ವಿತರಣೆಯಾಗದೇ ಮಕ್ಕಳೇ ಮನೆಯಿಂದ ತರಬೇಕಿದ್ದು ಯಾವುದೇ ಮಂಚ( ಬಂಕರ್ ಕಾಟ್ ) ದ ವ್ಯವಸ್ಥೆ ಇಲ್ಲಿನ ಮಕ್ಕಳಿಗೆ ಕನಸಾಗಿದ್ದು ಋತುಮತಿಯಾದ ಮಕ್ಕಳ ಗೋಳು ಇಲ್ಲಿ ಕೇಳುವವರೇ ಇಲ್ಲದಂತಾಗಿದೆ. ಆ ಮಕ್ಕಳು ಕೂಡಾ ನೆಲದಲ್ಲಿಯೇ ಮಲಗಬೇಕಿರುವುದು ಆತಂಕದ ಸಂಗತಿಯಾಗಿದ್ದು ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕಂಡೂ ಕಾಣದಂತಿರುವುದು ದುರದೃಷ್ಟಕರ.

ಕಟ್ಟಡದ ಹಿಂಬಾಗದಲ್ಲಿ ಯಾವುದೇ ಸ್ವಚ್ಚತೆ ಇಲ್ಲವಾಗಿದ್ದು ಇಲ್ಲಿ ಸ್ವಚ್ಚ ಮಾಡಲೂ ಯಾರೂ ಇಲ್ಲವೆನೋ ಎಂಬ ಸ್ಥಿತಿ ಇದೆ. ವಸತಿ ಶಾಲೆಗಳ ಹಿಂಬಾಗ ಕಸದ ರಾಶಿಯೇ ಇದ್ದರೂ ಅದನ್ನು ಸ್ವಚ್ಚಗೊಳಿಸುವ ಬದಲು ಅಲ್ಲಿಯೇ ಸುಟ್ಟಹಾಕುತ್ತಿದ್ದು ಪತ್ರಕರ್ತರು ಭೇಟಿ ನೀಡಿದ ಸಂಧರ್ಭದಲ್ಲಿ ಮಕ್ಕಳ ಕೋಣೆಗಳನ್ನು ಸ್ವಚ್ಚಗೊಳಿಸಿ ಶೌಚಾಲಯಗಳಿಗೆ ಪೆನಾಯಿಲ್ ಹಾಕುವ ಕೆಲಸವಾಗಿದೆ. ಇಲ್ಲಿನ ಕೆಲಸಗಾರರ ಸೂಕ್ಷತೆಗೆ ಸಾಕ್ಷಿಯಾಯಿತು.

ಹುಳು ತುಂಬಿದ ಅಕ್ಕಿ : ಇದೇ ವೇಳೆ ಅಡುಗೆ ಕೋಣೆಯ ದಾಸ್ತಾನು ಕೊಠಡಿಯಲ್ಲಿ ಅಕ್ಕಿ ಚೀಲ ತೆರೆದು ನೋಡಿದರೆ ಜಿರಳೆಗಳು ಕಂಡುಬoದಿದ್ದು, ಈ ಬಗ್ಗೆ ಶಾಲೆಯ ವಾರ್ಡನ್ ಅವರು ಅದು ಸ್ವಚ್ಚಗೊಳಿಸಿ ಇಟ್ಟಿರುವ ನುಚ್ಚು ಅಕ್ಕಿ ಎಂದು ಸಮಜಾಯಿಸಿ ನೀಡಿದ್ದು ಪೋಷಕರು ಮಾತ್ರ ಯಾವುದೇ ಸ್ವಚ್ಚತೆ ಮಾಡದೇ ಅದೇ ಅಕ್ಕಿಯನ್ನು ಊಟಕ್ಕೆ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ವಾರ್ಡನ್ ಇಲ್ಲ : ಯಾವುದೇ ವಸತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳನ್ನು ದಾಖಲು ಮಾಡಿಕೊಂಡಲ್ಲಿ ಮಹಿಳಾ ವಾರ್ಡನ್ ಇರಲೇಬೇಕೆಂಬ ಬಾಲನ್ಯಾಯ ಕಾಯ್ದೆಯ ನಿಯಮ ಇದ್ದರೂ ಇಲ್ಲಿ ಮಹಿಳಾ ವಾರ್ಡನ್ ಇಲ್ಲದೇ ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪತ್ರಿಕೆ ಪ್ರಶ್ನಿಸಿದರೆ ಶಾಲೆಯ ಶಿಕ್ಷಕಿಯೊಬ್ಬರು ನೋಡಿಕೊಳ್ಳುತ್ತಾರೆ ಎಂಬ ಉತ್ತರ ಬಂದಿದ್ದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಏನು ಕ್ರಮಕೈಗೊಳ್ಳುವುದೋ ಕಾದು ನೋಡಬೇಕಿದೆ.

ಶಿಕ್ಷಕರೇ ಇಲ್ಲ : ೨೦೦ಕ್ಕೂ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಶಾಲೆಯಲ್ಲಿ ೯ಮಂದಿ ಶಿಕ್ಷಕರಿಗೆ ಅವಕಾಶವಿದೆ. ಇರುವುದು ಕೇವಲ ೪ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಹೊರಗುತ್ತಿಗೆ ಮೂಲಕ ಶಿಕ್ಷಕರನ್ನು ನೇಮಿಸಿಕೊಂಡು ಶಾಲೆ ನಡೆಸುತ್ತಿರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಪ್ರತಿಭಟನೆ ಮಾಡಿದ ಪೋಷಕರು : ಈ ಬಗ್ಗೆ ಇಂದು ಶಾಲೆಯ ಆವರಣದಲ್ಲಿ ಪೋಷಕರು ಜಮಾಯಿಸಿ ಪ್ರತಿಭಟನೆ ಮಾಡಿದ್ದು ರಾತ್ರಿ ವೇಳೆ ಕರೆಂಟ್ ಇಲ್ಲವಾದರೆ ಮಕ್ಕಳೇ ಮೇಣದ ಬತ್ತಿ ಹಚ್ಚಿ ಓದಬೇಕು. ಶಾಲೆಯ ವತಿಯಿಂದ ಕನಿಷ್ಠ ಲ್ಯಾಂಪ್‌ಗಳನ್ನು ನೀಡಿಲ್ಲ ಹಾಗೂ ಮಕ್ಕಳು ಮಲಗುವ ಕೋಣೆಯಲ್ಲಿ ಅವರ ವಸ್ತುಗಳು ಇರುವ ಟ್ರಂಕ್‌ಗಳನ್ನು ಒಡೆದು ಹಾಕಿರುವ ಘಟನೆಗಳು ನಡೆದಿದ್ದು ಶಾಲೆಯ ಪ್ರಿನ್ಸಿಪಾಲ್ ಸುರೇಶ್ ಅವರನ್ನು ಈ ಬಗ್ಗೆ ಕೇಳಿದರೆ ಉಢಾಫೆ ಮಾತನಾಡುತ್ತಿದ್ದಾರೆ. ಅವರನ್ನು ತಕ್ಷಣ ವರ್ಗಾವಣೆ ಮಾಡಿ ಎಂದು ಆಡಳಿತ ಕಚೇರಿ ಎದುರು ೧೫ಕ್ಕೂ ಹೆಚ್ಚು ಮಕ್ಕಳ ಪೋಷಕರು ಆಗ್ರಹ ಪಡಿಸಿದ ಘಟನೆಯೂ ಜರುಗಿತು.

ಒಟ್ಟಾರೆ ಹಿಂದೊಮ್ಮೆ ಶೌಚಾಲಯವನ್ನು ಮಕ್ಕಳಿಂದ ಸ್ವಚ್ಚಗೊಳಿಸಿ ವಿವಾದಕ್ಕೀಡಾಗಿದ್ದ ಈ ವಸತಿ ಶಾಲೆ ಮತ್ತೊಮ್ಮೆ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದು.ಈಗಲಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕೋಟ್ಯಾಂತರ ರೂಗಳನ್ನು ವೆಚ್ಚ ಮಾಡಿ ಕಟ್ಟಿದ ಮೊರಾರ್ಜಿ ಶಾಲೆ ಗುಣಮಟ್ಟದ ಶಿಕ್ಷಣ ನೀಡಲಿ ಎಂಬುದೇ ಆಶಯವಾಗಿದೆ.ಪ್ರತಿಭಟನೆಯಲ್ಲಿ ಸಾಲಿಗ್ರಾಮ ಗ್ರಾಪಂ ಸದಸ್ಯ ಹರೀಶ್,ಚನ್ನಕಲ್ ಕಾವಲ್‌ನ ಮೋಹನ್,ಜೈಸ್ವಾಮಿ,ರಘು,ಶಿವಶಂಕರ್,ಮoಚಯ್ಯ,ಸುನೀಲ್,ರಮೇಶ,ರೇಖಾ,,ಮೋಹನಕುಮಾರಿ,ಮನು,ಪ್ರವೀಣ್  ಅವರುಗಳು ಪ್ರತಿಭಟನೆಯಲ್ಲಿ ಇದ್ದರು.

ನಾವು ಶಿಕ್ಷಣಕ್ಕಾಗಿ ಪಿರಿಯಾಪಟ್ಟಣ ತಾಲ್ಲೋಕಿನಿಂದ ಇಲ್ಲಿಗೆ ದಾಖಲಾತಿ ಮಾಡಿದ್ದು ಇಷ್ಟು ಉತ್ತಮವಾದ ಕಟ್ಟಡವಿದ್ದರು ಸೌಲಭ್ಯಗಳು ಮಾತ್ರ ನಿಕೃಷ್ಟವಾಗಿದೆ,ಸರ್ಕಾರ ಉತ್ತಮ ಪ್ರಿನ್ಸಿಪಾಲ್ ಅವರನ್ನು ನೇಮಕ ಮಾಡಿ ಇನ್ನಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ,ಸೌಲಭ್ಯಗಳನ್ನು ನೀಡಲಿ ಇಲ್ಲವಾದರೆ ನಮ್ಮ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಲಿ

ಪ್ರತಿಭಟನಾ ನಿರತ ಪೋಷಕರು

 

ಮೋಹನ್ ಪೋಷಕ

 

ಅಕ್ಕಿಯಲ್ಲಿ ಹುಳು ಇರುವುದು

 

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading
Click to comment

Leave a Reply

Your email address will not be published. Required fields are marked *

Mysore

ಮೇ.04ರಂದು ಭಗೀರಥ ಜಯಂತಿಯನ್ನು ಆಚರಣೆ

Published

on

 ಮಹದೇವಸ್ವಾಮಿ ಪಟೇಲ್

ನಂಜನಗೂಡು  : ಮೇ ನಾಲ್ಕರಂದು ಸಾಂಕೇತಿಕವಾಗಿ ಭಗೀರಥ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ನಂಜನಗೂಡು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಬಳಿಕ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಅವರನ್ನು ಆಹ್ವಾನ ಮಾಡಿ ಅದ್ದೂರಿಯಾಗಿ ಭಗಿರಥ ಜಯಂತಿಯನ್ನು ನಡೆಸಲು ಸಮಾಜದ ಮುಖಂಡರು ಸಲಹೆ ನೀಡಿದ್ದೀರಿ. ಇಂದು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತೇನೆ. ಮುಖ್ಯಮಂತ್ರಿಗಳು ದಿನಾಂಕ ಸೂಚಿಸಿದ ಬಳಿಕ, ಕಾರ್ಯಕ್ರಮ ರೂಪ ರೇಷೆ ಬಗ್ಗೆ ಮತ್ತೊಂದು ಸಭೆಯನ್ನು ಕರೆದು ತೀರ್ಮಾನ ಮಾಡೋಣ. ಕಳೆದ ಬಾರಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಚರ್ಚಾ ಸ್ಪರ್ಧೆ ಮಾಡಿ ಅರ್ಥಪೂರ್ಣ ಜಯಂತಿಯನ್ನು ಆಚರಿಸಲಾಗಿತ್ತು. ಅದೇ ಮಾದರಿಯಲ್ಲಿ ಜಯಂತಿ ನಡೆಸೋಣ ಎಂದರು. ಜಿಲ್ಲಾ ಮಟ್ಟಕ್ಕಿಂತ ತಾಲೂಕು ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಜಯಂತಿ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದ ಮಾಜಿ ತಾಲೂಕು ಅಧ್ಯಕ್ಷ ಮೂಗಶಟ್ಟಿ ಮಾತನಾಡಿ ನಿಮ್ಮ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಕರೆಸಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ಜನರನ್ನು ಸೇರಿಸುವ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ ಎಂದರು

ನಂತರ ಹೆಮ್ಮರಗಾಲ ಸೋಮಣ್ಣ ಮಾತನಾಡಿ, ಭಗೀರಥ ಜಯಂತಿ ಆಚರಣೆ ಮಾಡಿ ಮೂರು ವರ್ಷಗಳಾಗಿವೆ. ಮುಖ್ಯಮಂತ್ರಿ ಅವರನ್ನು ಕರೆಸಿ, ನಂಜನಗೂಡು ಶಾಸಕರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಜಯಂತಿ ಆಚರಿಸಲು ಸಮಾಜದ ಮುಖಂಡರು ತೀರ್ಮಾನಿಸಿದ್ದಾರೆ. ಸಭೆಗೆ ಸಮಾಜದ 10,000ಕ್ಕೂ ಹೆಚ್ಚು ಜನರ ಸೇರುವ ನಿರೀಕ್ಷೆ ಇದೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೂಗ ಶೆಟ್ಟಿ, ಹೆಮ್ಮರಗಾಲ ಸೋಮಣ್ಣ, ಹಾಡ್ಯ ರಂಗಸ್ವಾಮಿ, ಹೆಡತಲೆ ದೊರೆಸ್ವಾಮಿ ನಾಯಕ, ಲತಾ ಸಿದ್ದಶೆಟ್ಟಿ, ಕರಳಪುರ ನಾಗರಾಜು, ಟಿಪಿ ಶಿವಣ್ಣ, ಗೋವಿಂದರಾಜು, ಮಹದೇವ್, ಮುದ್ದು ಮಾದ ಶೆಟ್ಟಿ, ಸಿದ್ದರಾಜು, ನಾಗಮಣಿ ಶಂಕ್ರಪ್ಪ, ಬಾಲಚಂದ್ರ, ಕಲ್ಲಂಗಡಿ ಮಹದೇವಸ್ವಾಮಿ, ತರದಲೆ ಮಹದೇವು, ಶ್ರೀನಿವಾಸ್, ಸಿದ್ಧ ಶೆಟ್ಟಿ ಸೇರಿದಂತೆ ಇತರರು ಹಾಜರಿದ್ದರು.

Continue Reading

Mysore

ಸುಮಯಾ ಪ್ರಾಪರ್ಟೀಸ್ ಶ್ರೇಷ್ಠತೆಯ 9 ವರ್ಷ ಮೈಸೂರಿನ ವಿಶ್ವಾಸಾರ್ಹ ಡೆವಲಪರ್ ಅಂಡ್ ಬಿಲ್ಡರ್

Published

on

ಮೈಸೂರು: ಅರಮನೆ ನಗರಿ ಮೈಸೂರಿನ ವಿಶ್ವಾಸರ್ಹ ಬಿಲ್ಡರ್ ಅಂಡ್ ಡೆವಲಪರ್ ಸುಮಯಾ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ನಿವೇಶನಾಂಕ್ಷಿಗಳ ನಂಬಿಕೆ ಮತ್ತು ಶ್ರೇಷ್ಠತೆಯ 9 ಅದ್ಭುತ ವರ್ಷಗಳನ್ನು ಆಚರಿಸುತ್ತಿದೆ.

ಏಪ್ರಿಲ್ 24, 2016ರಂದು ಸ್ಥಾಪನೆಯಾದ ಈ ಕಂಪನಿಯು ಪಾರದರ್ಶಕತೆ, ಗುಣಮಟ್ಟ ಮತ್ತು ಗ್ರಾಹಕ ತೃಪ್ತಿಯಿಂದ ಬೆಂಬಲಿತವಾದ ಅಸಾಧಾರಣ ವಸತಿ ಯೋಜನೆಗಳನ್ನು ತಲುಪಿಸುವ ತನ್ನ ದೃಷ್ಟಿಕೋನಕ್ಕೆ ಬದ್ಧವಾಗಿದ್ದು, ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ, ಸುಮಯಾ ಪ್ರಾಪರ್ಟೀಸ್ ಆರು ಪ್ರತಿಷ್ಠಿತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ – ಪ್ರಗತಿ ಡ್ರೀಮ್ಸ್. ಸುಮಯಾ ಹೋಮ್‌ಲ್ಯಾಂಡ್ಸ್, ಸೆರೆನ್ ಬ್ಲಾಸಮ್, ಸುಮಯಾ ಹೆವೆನ್ಲಿ ಹೋಮ್ಸ್, ಸುಮಯಾ ಕಲ್ಪತರು ಗಾರ್ಡನ್ಸ್ ಮತ್ತು ಸುಮಯಾ ಸಂಪರ್ಕ ನಗರ. ಈ ಮಹತ್ವದ ಯೋಜನೆಗಳ ಮೂಲಕ, ಕಂಪನಿಯು 2 ಸಾವಿರಕ್ಕೂ ಹೆಚ್ಚು ಸಂತೋಷದ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ ಮತ್ತು ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸಾರ್ಹ ಪಾಲುದಾರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈ ವಿಶೇಷ ಸಂದರ್ಭದಲ್ಲಿ, ಆಡಳಿತ ಮಂಡಳಿಯು ಎಲ್ಲಾ ಮೌಲ್ಯಯುತ ಗ್ರಾಹಕರು. ಸಮರ್ಪಿತ ತಂಡದ ಸದಸ್ಯರು. ಪಾಲುದಾರರು ಮತ್ತು ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ. ಅವರ ನಿರಂತರ ಬೆಂಬಲವು ಈ ಅದ್ಭುತ ಪ್ರಯಾಣದ ಅಡಿಪಾಯವಾಗಿದೆ.

ಆಚರಣೆಯನ್ನು ಇನ್ನಷ್ಟು ಸ್ಮರಣೀಯವಾಗಿಸಲು, ಸುಮಯಾ ಪ್ರಾಪರ್ಟೀಸ್ ಮೈಸೂರಿನಾದ್ಯಂತ ಹಲವಾರು ಮುಂಬರುವ ಯೋಜನೆಗಳೊಂದಿಗೆ ಪ್ರಮುಖ ವಿಸ್ತರಣೆಯನ್ನು ಘೋಷಿಸಲು ಉತ್ಸುಕವಾಗಿದೆ. ಕಂಪನಿಯು ಈ ವರ್ಷ 2 ಸಾವಿರಕ್ಕೂ ಹೆಚ್ಚು ಪ್ರೀಮಿಯಂ ವಸತಿ ಪ್ಲಾಟ್‌ಗಳನ್ನು ಪ್ರಾರಂಭಿಸಲು ಯೋಜಿಸಿದೆ. ಇವು ಮೈಸೂರಿನ ಎಲ್ಲಾ ದಿಕ್ಕುಗಳಲ್ಲಿ ಯೋಜನೆಯ ಹಂತದಲ್ಲಿವೆ. ಭವಿಷ್ಯದ ನಿವಾಸಿಗಳಿಗೆ ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಉತ್ತಮ ಜೀವನ ಅನುಭವಗಳನ್ನು ನೀಡುತ್ತವೆ.

ನಂಬಿಕೆಯ ಬಲವಾದ ಪರಂಪರೆ ಮತ್ತು ಗುಣಮಟ್ಟಕ್ಕೆ ಅಚಲ ಬದ್ಧತೆಯೊಂದಿಗೆ, ಸುಮಯಾ ಪ್ರಾಪರ್ಟೀಸ್ ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಎತ್ತರವನ್ನು ಏರಲು ಎದುರು ನೋಡುತ್ತಿದೆ.

ಕೋಟ್
ನಮ್ಮ ಪ್ರಯಾಣದಲ್ಲಿ ಇಲ್ಲಿಯವರೆಗಿನ ಭಾಗವಾಗಿರುವ ಪ್ರತಿಯೊಬ್ಬ ಗ್ರಾಹಕರು, ಉದ್ಯೋಗಿಗಳು ಮತ್ತು ಸಹವರ್ತಿಗಳಿಗೆ ನಾವು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಿಮ್ಮ ನಂಬಿಕೆ ಮತ್ತು ಬೆಂಬಲವು ನಮ್ಮ ದೊಡ್ಡ ಪ್ರೇರಣೆಯಾಗಿದೆ. ಮುಂದೆಯೂ ನಿರಂತರ ಪ್ರೋತ್ಸಾಹವನ್ನು ನಾವು ಬಯಸುತ್ತೇವೆ.
-ವಿಶಾಖ ಹೆಗಡೆ- ಸುಧಿ ಎಸ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಸುಮಾಯ ಪ್ರಾಪರ್ಟಿಸ್

Continue Reading

Mysore

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಯೊಂದಿಗೆ ಅಭಿವೃದ್ಧಿಗೂ ಹಣ ನೀಡುತ್ತಿರುವುದೇ ಬಿಜೆಪಿಗೆ ಹೊಟ್ಟೆಯುರಿ: ಸಿಎಂ ಸಿದ್ದರಾಮಯ್ಯ

Published

on

ಪಿರಿಯಾಪಟ್ಟಣ: ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಯೊಂದಿಗೆ ರಾಜ್ಯದ ಕ್ಷೇತ್ರಗಳ ಅಭಿವೃದ್ಧಿಗೂ ಹಣ ನೀಡುತ್ತಿರುವುದೇ ಬಿಜೆಪಿಗೆ ಹೊಟ್ಟೆ ಉರಿ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪಿರಿಯಾಪಟ್ಟಣದಲ್ಲಿ ಜಿಲ್ಲಾಡಳಿತ ಮತ್ತು ನಾನಾ ಇಲಾಖೆಗಳ ಸಹಯೋಗದಲ್ಲಿ ಇಂದು(ಏಪ್ರಿಲ್‌.26) ಆಯೋಜಿಸಿದ್ದ 439.88 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು. ಇದೇ ವೇಳೆ ಸಾವಿರಾರು ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ, ಅಂಬೇಡ್ಕರ್-ಬಾಬು ಜಗಜೀವನ್ ರಾಮ್ ಜನ್ಮ‌ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಜನರ ಅಭಿವೃದ್ಧಿಗೆ ಹಣ ನೀಡುತ್ತಿದೆ. ಇದರಿಂದ ರಾಜ್ಯದ ಜನತೆ ಖುಷಿಯಾಗಿದ್ದಾರೆ. ಆದರೆ ಇದನ್ನು ಬಿಜೆಪಿ ಸಹಿಸದೇ ಹೊಟ್ಟೆಯುರಿ ಮಾಡುತ್ತಿದೆ. ಪಿರಿಯಾಪಟ್ಟಣ ಕೃಷಿ ಪ್ರಧಾನ ಕ್ಷೇತ್ರ. ಹೀಗಾಗಿ 300 ಕ್ಕೂ ಹೆಚ್ಚು ರೈತರಿಗೆ 100 ಕೋಟಿಗೂ ಅಧಿಕ ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ಇಂದು ವಿತರಿಸಲಾಗಿದೆ. ಕೃಷಿ ಕಾರ್ಮಿಕರು ನಗರಗಳಿಗೆ ವಲಸೆ ಹೋಗಿದ್ದರಿಂದ ಗ್ರಾಮೀಣ ರೈತರು ಯಂತ್ರಗಳ ಮೇಲೆ ಅವಲಂಬಿತರಾಗಬೇಕಾಗಿದೆ ಎಂದು ಹೇಳಿದರು.

ಹಿಂದಿನ ವರ್ಷ ಜಲಾಶಯಗಳೆಲ್ಲಾ ತುಂಬಿ ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿದೆ. ಈ ವರ್ಷವೂ ಒಳ್ಳೆ ಮಳೆ ಆಗಿ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ರಾಜ್ಯದಲ್ಲಿ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿ ಹಣ ಗ್ಯಾರಂಟಿಗಳ ಮೂಲಕ ತಲುಪುತ್ತಿದೆ. ಈ ಗ್ಯಾರಂಟಿಗಳಲ್ಲದೆ ಎಲ್ಲಾ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಫಲ ಕೂಡ ನಾಡಿನ ದೊರೆಗಳಾದ ಜನರ ಮನೆ ಬಾಗಿಲಿಗೆ ತಲುಪುತ್ತಿದೆ. ಜನರಿಗೆ ಪ್ರತೀ ದಿನ ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರದ ಅಭಿವೃದ್ಧಿ ಕಾಣಿಸುತ್ತಿದೆ. ಆದರೆ, ಬಿಜೆಪಿ ಮಾತ್ರ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದೆ ಎಂದು ಟೀಕಿಸಿದರು.

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬರೀ ಸುಳ್ಳು ಹೇಳಿಕೊಂಡು, ದೇವರು ಧರ್ಮದ ಹೆಸರಲ್ಲಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಂಡು ಜನರ ದಿಕ್ಕು ತಪ್ಪಿಸಿ ಕಾಲ‌ ಕಳೆದು ಮನೆಗೆ ಹೋದರು ಎಂದು ವ್ಯಂಗ್ಯ ಮಾಡಿದರು.

 

Continue Reading

Trending

error: Content is protected !!