Connect with us

Special

ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ – ನಿಮ್ಮ ಹಳ್ಳಿಗೂ ಅವಕಾಶ!

Published

on

ಕರ್ನಾಟಕ ಸರ್ಕಾರದ Samudaya Bhavana Grant Scheme ಅಡಿಯಲ್ಲಿ ನಿಮ್ಮ ಹಳ್ಳಿಯಲ್ಲಿ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರ್ತವ್ಯಗಳು, ಸಾರ್ವಜನಿಕ ಸಭೆಗಳು ಮುಂತಾದ ಕಾರ್ಯಕ್ರಮಗಳಲ್ಲಿ ಬಳಸಲು ಸುಸಜ್ಜಿತ ಸಮುದಾಯ ಭವನ ಕಟ್ಟಲು ₹20,00,000/- ಅನುದಾನ ದೊರೆಯಲಿದೆ.

ಯಾವುದಕ್ಕೆ ಎಷ್ಟು ಅನುದಾನ?
1. ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ರೂ. ಅನುದಾನವಿದೆ.
2. ಹೆಚ್ಚಿನ ಮಟ್ಟದಲ್ಲಿ (ಹೋಬಳಿ / ತಾಲ್ಲೂಕು / ಜಿಲ್ಲಾ) ವಿಭಿನ್ನವಾಗಿ ₹75 ಲಕ್ಷ – ₹4 ಕೋಟಿ ತನಕ ದೊರೆಯಬಹುದು.

ಯಾರಿಗೆ ಅನುದಾನ?
1. ಅರ್ಜಿ ಸಲ್ಲಿಸುವವರು ಪರಿಶಿಷ್ಠ ಜಾತಿ (SC) / ಪರಿಶಿಷ್ಠ ಪಂಗಡ (ST) ಕುಟುಂಬ ಅಥವಾ ಸಮುದಾಯದ ಸದಸ್ಯರಾಗಿರಬೇಕು.
2. ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ, ಭೂಮಿಯ ದಾಖಲೆಗಳು, ಭವನದ ವಿನ್ಯಾಸ (Blueprint) ಮತ್ತು estimate ಸೇರಿದಂತೆ ಎಲ್ಲಾ ಮೂಲ ದಾಖಲೆಗಳು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
1. ಸಮುದಾಯ ಸದಸ್ಯತೆಯ ಪುರಾವೆ (SC/ST ದಾಖಲೆ)
2. ನೆಲದ ದಾಖಲೆ (Khata / Land Ownership)
3. ಭವನ ಕಟ್ಟಡದ ವಿನ್ಯಾಸ ಮತ್ತು ವೆಚ್ಚದ ಅಂದಾಜು
4. ಸಮುದಾಯ ಸಂಘದ ನಿರ್ಧಾರ ಪತ್ರ.

ಅರ್ಜಿಸಲ್ಲಿಕೆ ಹೇಗೆ?
ಮೊದಲಿಗೆ ಸಂಬಂಧಿತ ತಾಲೂಕು / ಗ್ರಾಮ ಪಂಚಾಯತ್ ಖಚೇರಿಗೆ ಭೇಟಿ ನೀಡಿ, Samudaya Bhavana Grant Scheme ಸಂಬಂಧಿತ ಅರ್ಜಿ ಫಾರ್ಮ್ ಪಡೆದುಕೊಳ್ಳಬೇಕು.ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಒಟ್ಟಾಗಿ ಸಂಗ್ರಹಿಸಿ,ಅರ್ಜಿ ಸಲ್ಲಿಸಬೇಕು.
ಪ್ರಮಾಣಿತ ಕಚೇರಿ ಮೂಲಕ ಪರಿಶೀಲನೆ ನಂತರ ಅನುದಾನ ಮಂಜೂರು ಆಗುತ್ತದೆ.

ಗ್ರಾಮದ ಅಭಿವೃದ್ಧಿಗೆ, ಸಮುದಾಯ ಚಟುವಟಿಕೆಗಳಿಗೆ ಹಾಗೂ ಭವನ ನಿರ್ಮಾಣಕ್ಕೆ ಇದೊಂದು ದೊಡ್ಡ ಅವಕಾಶವಾಗಿದ್ದು, ಜವಾಬ್ದಾರಿಯುತ ಗ್ರಾಮಸ್ಥರು ಈ ಅವಕಾಶ ತಪ್ಪಿಸಿಕೊಳ್ಳಬೇಡಿ.

Continue Reading

Cinema

ಫೆ.1ರಂದು ಚಿತ್ರೋತ್ಸವದಲ್ಲಿ ನೋಡಬಹುದಾದ ಉತ್ತಮ 10 ಸಿನಿಮಾಗಳು

Published

on

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ 3ನೇ ದಿನ, ಫೆ.1ರಂದು ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ. ಇದರಲ್ಲಿ ಜಾಗತಿಕ ಸಿನಿಮಾಗಳು ಮತ್ತು ಕನ್ನಡದ ಪ್ರಮುಖ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

1. ಆಶಸ್ ಅಂಡ್ ಡೈಮಂಡ್ಸ್
ಸ್ಕ್ರೀನ್ 1 – ಬೆಳಗ್ಗೆ 11:50
ನಿರ್ದೇಶಕ: ಆಂಡ್ರೆ ವಾಜ್ದಾ (ಪೋಲೆಂಡ್)
ವಿಶೇಷತೆ: ಇದು ವಿಶ್ವದ ಶ್ರೇಷ್ಠ ಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಆಂಡ್ರೆ ವಾಜ್ದಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.


2. ಕೂರ್ಮಾವತಾರ
ಸ್ಕ್ರೀನ್ ವಿಐಪಿ 2 – ಸಂಜೆ 5:10
ನಿರ್ದೇಶಕ: ಗಿರೀಶ್ ಕಾಸರವಳ್ಳಿ
ವಿಶೇಷತೆ: ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಈ ಚಿತ್ರವು ನೈತಿಕತೆ ಮತ್ತು ಗಾಂಧಿವಾದದ ಸಂಘರ್ಷವನ್ನು ಅದ್ಭುತವಾಗಿ ಚಿತ್ರಿಸುತ್ತದೆ.

3. ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್
ಸ್ಕ್ರೀನ್ 5 – ಸಂಜೆ 5:10
ನಿರ್ದೇಶಕ: ಜಾಫರ್ ಪನಾಹಿ (ಇರಾನ್)
ವಿಶೇಷತೆ: ಇರಾನಿನ ಖ್ಯಾತ ನಿರ್ದೇಶಕ ಜಾಫರ್ ಪನಾಹಿ ಅವರ ಚಿತ್ರಗಳು ಮಾನವೀಯ ಸಂಬಂಧಗಳ ಬಗ್ಗೆ ಆಳವಾದ ಒಳನೋಟ ನೀಡುತ್ತವೆ.

4. ಅಮರಶಿಲ್ಪಿ ಜಕಣಾಚಾರಿ
ಸ್ಕ್ರೀನ್ ವಿಐಪಿ 3 – ಸಂಜೆ 7:00
ನಿರ್ದೇಶಕ: ಬಿ.ಎಸ್. ರಂಗ
ವಿಶೇಷತೆ: 1964ರ ಈ ಐತಿಹಾಸಿಕ ಕನ್ನಡ ಚಿತ್ರವನ್ನು ಈಗ ‘ನವಿಕರಿಸಿದ ಶ್ರೇಷ್ಠ ಚಿತ್ರ’ (Restored Classic) ವಿಭಾಗದಲ್ಲಿ ನೋಡಬಹುದು. ಹಳೆಯ ಚಿತ್ರವನ್ನು ಹೊಸ ಮೆರುಗಿನಲ್ಲಿ ನೋಡಲು ಇದು ಸುವರ್ಣಾವಕಾಶ.

5. ಸೌಂಡ್ ಆಫ್ ಫಾಲಿಂಗ್
ಸ್ಕ್ರೀನ್ 5 – ರಾತ್ರಿ 7:30
ನಿರ್ದೇಶಕ: ಮಾಶಾ ಸ್ಕಿಲಿನ್ಸ್ಕಿ (ಜರ್ಮನಿ)
ವಿಶೇಷತೆ: ಇದು ಈ ವರ್ಷದ ‘ಮಹಿಳೆ: ಅವಳ ಇರುವಿಕೆ’ (Woman: As She Is) ವಿಭಾಗದ ಪ್ರಮುಖ ಆಕರ್ಷಣೆಯಾಗಿದೆ.

6. ನಮ್ ಸಾಲಿ
ಸ್ಕ್ರೀನ್ 7 – ಮಧ್ಯಾಹ್ನ 3:30
ನಿರ್ದೇಶಕ: ಅನೀಲ್ ಕುಮಾರ್
ವಿಶೇಷತೆ: ಇದು ‘ಕನ್ನಡ ಸಿನಿಮಾ ಸ್ಪರ್ಧಾತ್ಮಕ’ ವಿಭಾಗದ ಚಿತ್ರವಾಗಿದ್ದು, ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ಸುತ್ತ ನಡೆಯುವ ಕಥೆಯಾಗಿದೆ.

7. ಅಮ್ರಮ್
ಸ್ಕ್ರೀನ್ 6 – ರಾತ್ರಿ 8:00
ನಿರ್ದೇಶಕ: ಫಾತಿಹ್ ಅಕಿನ್ (ಜರ್ಮನಿ)
ವಿಶೇಷತೆ: ವಿಶ್ವ ಸಿನಿಮಾದ ಪ್ರಮುಖ ಧ್ವನಿಯಾಗಿರುವ ಫಾತಿಹ್ ಅಕಿನ್ ಅವರ ಈ ಹೊಸ ಚಿತ್ರವು ಇತಿಹಾಸ ಮತ್ತು ಕೌಟುಂಬಿಕ ಸಂಬಂಧಗಳ ಕಥೆ ಹೊಂದಿದೆ.

8. ದಿ ಇಯರಿಂಗ್ಸ್ ಆಫ್ ಮೇಡಂ ಡಿ…
ಸ್ಕ್ರೀನ್ 1 – ಮಧ್ಯಾಹ್ನ 2:30
ನಿರ್ದೇಶಕ: ಮ್ಯಾಕ್ಸ್ ಓಫಲ್ಸ್ (ಫ್ರಾನ್ಸ್)
ವಿಶೇಷತೆ: 1953ರ ಈ ಕಪ್ಪು ಬಿಳುಪು ಚಿತ್ರವು ಫ್ರೆಂಚ್ ಚಿತ್ರರಂಗದ ಅದ್ಭುತಗಳಲ್ಲಿ ಒಂದಾಗಿದೆ. ಇದರ ಛಾಯಾಗ್ರಹಣ ಮತ್ತು ಕಥೆ ಅಪ್ರತಿಮವಾಗಿದೆ.

9. ಕ್ಯಾರವಾನ್
ಸ್ಕ್ರೀನ್ 2 – ರಾತ್ರಿ 8:10
ನಿರ್ದೇಶಕ: ಜುಜಾನಾ ಕಿರ್ಚ್‌ನರೋವಾ (ಜೆಕ್ ಗಣರಾಜ್ಯ)
ವಿಶೇಷತೆ: ಕಂಟೆಂಪರರಿ ವರ್ಲ್ಡ್ ಸಿನಿಮಾ ವಿಭಾಗದ ಈ ಚಿತ್ರವು ಯುರೋಪ್‌ನ ಪ್ರಯಾಣದ ಹಿನ್ನೆಲೆಯಲ್ಲಿ ಸಾಗುವ ಅದ್ಭುತ ಡ್ರಾಮಾ.

10. ಮೈ ಫಾದರ್ಸ್ ಶಾಡೋ
ಸ್ಕ್ರೀನ್ 5 – ಮಧ್ಯಾಹ್ನ 12:00
ನಿರ್ದೇಶಕ: ಅಕಿನೋಲಾ ಡೇವಿಸ್ ಜೂನಿಯರ್ (ಯುಕೆ/ ನೈಜೀರಿಯಾ)
ವಿಶೇಷತೆ: ನೈಜೀರಿಯಾದ ಸಂಸ್ಕೃತಿ ಮತ್ತು ಅಸ್ಮಿತೆಯ ಬಗ್ಗೆ ಈ ಚಿತ್ರವು ವಿಭಿನ್ನವಾಗಿ ಚರ್ಚಿಸುತ್ತದೆ.

Continue Reading

Special

ಸತತ 2ನೇ ದಿನ ದರ ಇಳಿಕೆ – 10 ಗ್ರಾಂ ಚಿನ್ನ 1.5 ಲಕ್ಷಕ್ಕೆ ಕುಸಿತ

Published

on

ಬೆಂಗಳೂರು/ಮುಂಬೈ: ಸತತ ಏರಿಮುಖವಾಗಿ ಸಾಗುತ್ತಿದ್ದ ಚಿನ್ನ – ಬೆಳ್ಳಿಯ ದರ ಕಳೆದ 2 ದಿನಗಳಲ್ಲಿ ಭಾರೀ ಕುಸಿತ ಕಂಡಿದೆ.
ಕೇಂದ್ರ ಬಜೆಟ್‌ಗೂ ಮುನ್ನವೇ ಕಳೆದ 2 ದಿನಗಳಲ್ಲಿ ಚಿನ್ನ 10 ಗ್ರಾಮ್‌ಗೆ 1.5 ಲಕ್ಷ ರೂ.ಗೆ ಕುಸಿದಿದ್ದರೆ, 4 ಲಕ್ಷ ರೂ. ಇದ್ದ ಬೆಳ್ಳಿಯ ದರ 3 ಲಕ್ಷಕ್ಕೆ ಕುಸಿದಿದೆ.
ಇದು ವ್ಯಾವಹಾರಿಕರಿಗೆ ನಿರಾಸೆ ಮೂಡಿಸಿದ್ದರೆ, ಚಿನ್ನ – ಬೆಳ್ಳಿ ಖರೀದಿ ಗ್ರಾಹಕರಿಗೆ ಫುಲ್ ಖುಷ್‌ ಆಗಿದೆ. 2 ದಿನಗಳ ಹಿಂದೆ 4 ಲಕ್ಷ ರೂ. ಇದ್ದ ಕೆಜಿ ಬೆಳ್ಳಿ ಬೆಲೆ ಜನವರಿ 31 (ಇಂದು) ರಂದು 30% ಕುಸಿತ ಕಂಡಿದ್ದು, ಕೆಜಿ 3 ಲಕ್ಷ ರೂ.ಗಳಿಗೆ ಇಳಿಕೆಯಾಗಿದೆ.
ಇನ್ನೂ 1.93 ಲಕ್ಷ ರೂ.ಗೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ದರ 10 ಗ್ರಾಮ್‌ಗೆ ಇಂದು 1,50,849 ರೂ.ಗಳಿಗೆ ಕುಸಿದಿದೆ. ಈ ದರಗಳು ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳನ್ನ ಒಳಗೊಂಡಿರುವುದಿಲ್ಲ.
Continue Reading

Special

ಯುಜಿಸಿ ಹೊಸ ನಿಯಮ: ಏನೀ ವಿವಾದ? ಹೊಸ ನಿಯಮಾವಳಿಗಳೇನು?

Published

on

ದೇಶದ ಉನ್ನತ ಶಿಕ್ಷಣದಲ್ಲಿ ಸಮಾನತೆ ತರಲು ರೂಪಿಸಲಾದ ಯುಜಿಸಿ ನಿಯಮಾವಳಿಗಳು ಈಗ ಹೆಚ್ಚು ಚರ್ಚೆಗೆ ಕಾರಣವಾಗಿದ್ದು, ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಈ ವಿಚಾರ ದೇಶದ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

UGC ನಿಯಮಾವಳಿಗಳು: ಏನು ಹೊಸದು?
1. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭೇದಭಾವ ತಪ್ಪಿಸಲು 2026 ರ UGC ನಿಯಮಾವಳಿ ಅಡಿಯಲ್ಲಿ ಹೊಸ ನಿಯಮಗಳು ಜಾರಿಗೆ ಬರುತ್ತಿವೆ.
2. ಎಸ್‌ಸಿ/ಎಸ್‌ಟಿ/ಒಬಿಸಿ ಹಾಗೂ ಇತರ ಪೀಡಿತ ಗುಂಪುಗಳಿಗೆ ಎಲ್ಲಾ ಕಾಲೇಜುಗಳು ಸಮಾನತೆ ಮತ್ತು ಸಮಾನಾವಕಾಶ ನೀಡಬೇಕೆಂದು ಇದರಲ್ಲಿ ಕಡ್ಡಾಯ ಮಾಡುತ್ತದೆ.
3. ಇದರಲ್ಲಿ Equal Opportunity Centres, Equity Committees, 24/7 ಸಹಾಯ ದೂರವಾಣಿ, Equity Squads ಮುಂತಾದ ವ್ಯವಸ್ಥೆಗಳನ್ನೂ ಇರಲಾಗುತ್ತವೆ.
4. ಶಾಲೆಗಳು ಭೇದಭಾವದ ಬಗ್ಗೆ ವಾರ್ಷಿಕ ವರದಿ ಸಲ್ಲಿಸಬೇಕು ಎಂಬುದು ಕಡ್ಡಾಯವಾಗಿದೆ.

“ಸಮಾನತೆ ನಿಯಮಾವಳಿ” ನಲ್ಲಿ ಪ್ರಮುಖ ಬದಲಾವಣೆಗಳು:
1. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳೊಂದಿಗೆ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಜಾತಿ ತಾರತಮ್ಯ ವಿರೋಧಿ ನಿಯಮದ ವ್ಯಾಪ್ತಿಗೆ.
2. ಪ್ರತಿಯೊಬ್ಬ ಶಿಕ್ಷಣ ಸಂಸ್ಥೆಯಲ್ಲೂ ಸಮಾನಾವಕಾಶ ಮತ್ತು ಭೇದಭಾವ ತಡೆಗೆ ಸಮಿತಿ ಕಡ್ಡಾಯವಾಗಿ ಇರಬೇಕು.
3. SC/ST/OBC ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿತವಾಗಿ ರಕ್ಷಿಸುವ ನಿರ್ಧಾರ ಇದಾಗಿದೆ.

ವಿವಾದದ ಮೂಲ – ಯಾಕೀ ವಿರೋಧ?
1. ಹೊಸ ನಿಯಮಗಳು ಸಾಮಾನ್ಯ ವರ್ಗ ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡುತ್ತಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದು, ಇದರಿಂದ ಬೇಧ ಭಾವ ಉಂಟಾಗಬಹುದು ದು ಭಯ ಪಟ್ಟಿದ್ದಾರೆ.

2. ಸಮಾನತೆ ಸಮಿತಿಗಳು ಮತ್ತು ದೂರವಾಣಿ ವ್ಯವಸ್ಥೆಗಳ ಬಳಕೆದಿಂದ ಸಾಮಾನ್ಯ ಅಭ್ಯರ್ಥಿಗಳು ತಪ್ಪಾಗಿ ಗುರಿಯಾಗಬಹುದು ಎಂಬ ಆತಂಕವೂ ಇದೆ.
3. ತಪ್ಪಾದ ದೂರು ಗಳಿಗೆ ಸ್ಪಷ್ಟ ಶಿಕ್ಷೆಗಳಿಲ್ಲದಿರುವುದರಿಂದ ದೂರುಗಳ ದುರುಪಯೋಗವಾಗಬಹುದು ಎಂಬ ಆತಂಕವಿದೆ.

ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಅಗತ್ಯವಿಲ್ಲದ ಅಸ್ಪಷ್ಟತೆ ಮತ್ತು ಬಳಕೆಯಈ ಎಲ್ಲಾ ದುರುಪಯೋಗಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆ Supreme Court ಈ ನಿಯಮಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಹಳೆಯ 2012 UGC ನಿಯಮಗಳು ಜಾರಿಗೆ ಇರಬೇಕೆಂದು ತೀರ್ಮಾನಿಸಿದೆ.

ಇದೇ ವೇಳೆ ವಿವಿಧ ಕಾಲೇಜುಗಳು ಮತ್ತು ವಿದ್ಯಾರ್ಥಿ ಗುಂಪುಗಳ ನಡುವೆ ವಿವಾದಗಳು, ಪ್ರತಿಭಟನೆಗಳು ಮುಂದುವರೆದಿವೆ.

UGC ನಿಯಮಾವಳಿಗಳು ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ ಹಾಗೂ ಭೇದಭಾವದ ವಿರುದ್ಧ ಇಡಬಹುದಾದ ದೊಡ್ಡ ಹೆಜ್ಜೆ. ಆದರೆ ಅದರಲ್ಲಿ ಕೆಲವು ಅಸ್ಪಷ್ಟತೆಗಳು ಮತ್ತು ಸಮಾನ ವರ್ಗದ ಪ್ರತಿನಿಧಿತ್ವದ ಕೊರತೆ ಎಂಬ ಕಾರಣಗಳಿಂದ ಇದು ಹೆಚ್ಚು ಚರ್ಚೆಗೆ ಕಾರಣವಾಗಿದೆ.

Continue Reading

Trending

error: Content is protected !!