Uncategorized
ರಾಧಮ್ಮ ಜನಸ್ಪಂದನ ಸಂಸ್ಥೆ ಹೋರಾಟಕ್ಕೆ ಆಲೂರು ರೈಲ್ವೆ ನಿಲ್ದಾಣಕ್ಕೆ ರೈಲು ನಿಲುಗಡೆ ಆದೇಶ

ಬಿ.ಎನ್. ಹೇಮಂತ್ ಕುಮಾರ್ ಅಭಿನಂದನೆ
ಹಾಸನ: ರಾಧಮ್ಮ ಜನಸ್ಪಂದನ ಸಂಸ್ಥೆಯಿಂದ ಆಲೂರು ರೈಲ್ವೆ ನಿಲ್ದಾಣಕ್ಕೆ ರೈಲು ನಿಲುಗಡೆ ಆದೇಶ ಬಂದಿದ್ದು, ಇದಕ್ಕೆ ಕಾರಣರಾದವರಿಗೆಲ್ಲಾ ಅಭಿನಂದನೆ ಸಲ್ಲಿಸುವುದಾಗಿ ರಾಧಮ್ಮ ಜನಸ್ಪಂದನ ಸಂಸ್ಥೆಯ ಸಂಸ್ಥಾಪಕ ಬಿ.ಎನ್. ಹೇಮಂತ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕಳೆದ ೧೭ ತಿಂಗಳಿಂದ ನಿರಂತರವಾಗಿ ಹಂತ ಹಂತವಾಗಿ ಸಂಬಂಧಪಟ್ಟ ಎಲ್ಲಾ ರೈಲ್ವೆ ವಿಭಾಗಗಳನ್ನು ಸಂಪರ್ಕಿಸಿ ಮನವಿಯನ್ನು ಕೊಡುವುದರ ಮುಖಾಂತರ ಆಲೂರು ತಾಲೂಕು ರೈಲ್ವೆ ನಿಲ್ದಾಣಕ್ಕೆ ರೈಲು ನಿಲುಗಡೆ ಆದೇಶವನ್ನು ತರುವುದರಲ್ಲಿ ಯಶಸ್ವಿಯಾಗಿದ್ದೇವೆ. ಯಶಸ್ವಿಗೆ ಮತ್ತು ನಮ್ಮ ಹೋರಾಟಕ್ಕೆ ಸಹಕರಿಸಿದಂತವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಕೇಂದ್ರ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಹಿಂದೆ ಇದ್ದಂತಹ ಬಿಜೆಪಿ ಜಿಲ್ಲಾಧ್ಯಕ್ಷರಾದಂತಹ ಹಾಗೂ ಈಗಿನ ಶಾಸಕರು ಬೇಲೂರು ಕ್ಷೇತ್ರದ ಹೆಚ್.ಕೆ. ಸುರೇಶ್ ಮತ್ತು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕಾಗಿರುವ ಸಿಮೆಂಟ್ ಮಂಜುನಾಥ್, ರೈಲ್ವೆ ಜಿಎಂ ಸೆಕ್ರೆಟರಿ ಆಗಿರುವ ಸುನಿಲ್, ಹುಬ್ಬಳ್ಳಿ ಮತ್ತು ಮೈಸೂರಿನ ಡಿ ಆರ್ ಎಂ ಶಿಲ್ಪಿ ಅಗರ್ವಾಲ್ ಎಲ್ಲಾ ರೈಲ್ವೆ ಅಧಿಕಾರಿಗಳು ಸಹ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ನಾನು ಮೊದಲನೇದಾಗಿ ರಾಧಮ್ಮ ಜನಸ್ಪಂದನ ಸಂಸ್ಥೆಯಿಂದ ಹೋರಾಟ ಮಾಡಿದ ರೀತಿಯನ್ನ ಪತ್ರಕರ್ತರ ಮುಖಾಂತರ ನಮ್ಮ ಸಮಾಜಕ್ಕೆ ಬೆಳಕಿಗೆ ದಾಖಲಾತಿ ನೀಡುವುದರ ಮುಖಾಂತರ ನಮ್ಮದೇ ಕೊಡುಗೆ ಎಂದು ತಿಳಿಸುತ್ತಿದ್ದೇವೆ.
೨೦೨೨ ರಿಂದ ಹೋರಾಟಕ್ಕಿಳಿದು ಮನವಿ ಸಲ್ಲಿಸಿದ ತಕ್ಷಣ ಅಂಚೆ ಕಚೇರಿಯ ಮುಖಾಂತರ ಬಂದಿರುವ ಸ್ವೀಕೃತಿ ಪತ್ರವನ್ನು ನೈರುತ್ಯ ರೈಲ್ವೆ ಇವರಿಂದ ತದನಂತರ ೨೦೨೩ ಜುಲೈ ದೆಹಲಿಗೆ ಹೋಗಿ ೨೦ನೇ ತಾರೀಕು ಬೇಲೂರು ಶಾಸಕರಾದ ಎಚ್.ಕೆ. ಸುರೇಶ್ ಅವರೊಂದಿಗೆ ಕೇಂದ್ರದ ರೈಲ್ವೆ ಬೋರ್ಡ್ಗೆ ಮನವಿ ಸಲ್ಲಿಸಿ ರೈಲ್ವೆ ಮಂತ್ರಿಗೆ ಖುದ್ದಾಗಿ ಮನವಿ ಪತ್ರ ಕೊಡಲಾಗಿತ್ತು. ಸ್ಥಳೀಯ ಶಾಸಕರ ಸಿಮೆಂಟ್ ಮಂಜುನಾಥ್ ಕಾಗದಪತ್ರವನ್ನ ಸಂಬಂಧಪಟ್ಟಂತಹ ರೈಲ್ವೆ ವಲಯ ಅಧಿಕಾರಿಗಳಿಗೆ ತಲುಪಿಸಿದ್ದೇವೆ ಮೈಸೂರು ವಿಭಾಗದ ಡಿ.ಆರ್.ಎಂ. ಮತ್ತು ಹುಬ್ಬಳ್ಳಿಯ ಜಿಎಂ ಮತ್ತೊಮ್ಮೆ ನಾನು ದೆಹಲಿಯ ರೈಲ್ವೆ ಬೋರ್ಡ್ ಬಳಿ ಹೋಗಿ ವಿಶೇಷವಾಗಿ ನವೆಂಬರ್ ೧೭ ರಂದು ಮನವಿ ಸಲ್ಲಿಸಿ ರೈಲ್ವೆ ಮಂತ್ರಿಗಳ ಬಳಿ ಸ್ವೀಕೃತಿ ಪತ್ರ ವನ್ನು ಪಡೆದು ಆಲೂರ್ ಗೆ ತಕ್ಷಣ ರೈಲು ನಿಲುಗಡೆ ಆಗಬೇಕೆಂದು ದೆಹಲಿ ಅಧಿಕಾರಿಗಳು ದೂರವಾಣಿ ಮುಖಾಂತರ ಹುಬ್ಬಳ್ಳಿಯ ಜಿಎಂ ಕಚೇರಿಗೆ ಆದೇಶಿಸಿದರು. ನಂತರ ನಾನು ದೆಹಲಿಯಿಂದ ನೇರವಾಗಿ ಹುಬ್ಬಳಿಯ ಕಚೇರಿಗೆ ಹೋಗಿ ಡಿಜಿಎಂ ಆಗಿರುವ ಕುಲದೀಪ್ ಅವರಿಗೆ ಭೇಟಿ ಮಾಡಿ ದೆಹಲಿಯ ಮನವಿ ಪತ್ರವನ್ನು ಕೊಟ್ಟಾಗ ಸ್ವೀಕರಿಸಿ ಒಂದೇ ದಿನದಲ್ಲಿ ಆಲೂರಿಗೆ ರೈಲ್ವೆ ಅಧಿಕಾರಿಗಳನ್ನು ಕಳಿಸಿಕೊಟ್ಟು ನಿಲ್ದಾಣದ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ಸಲ್ಲಿಸುವಂತೆ ಮಾಡಿದರು. ಇದು ಕೂಡ ನನ್ನ ಹೋರಾಟದ ಪ್ರಥಮ ಗೆಲುವು ಎಂದು ಎಲ್ಲಾ ಮಾಧ್ಯಮಗಳು ಕಳೆದ ಎರಡು ತಿಂಗಳಿಂದ ಸುದ್ದಿಯನ್ನು ಮಾಡಲಾಗಿತ್ತು ಎಂದರು. ತದನಂತರ ವರದಿಯ ಪ್ರಕಾರ ಮತ್ತೊಮ್ಮೆ ರೈಲ್ವೆ ಇಲಾಖೆಯನ್ನು ಮೈಸೂರಿನಲ್ಲಿ ಸಂಪರ್ಕಿಸಿದಾಗ ಡಿ.ಆರ್.ಎಂ. ಶಿಲ್ಪಿ ಅಗರ್ವಾಲ್ ಅವರು ಪ್ರೋಸೆಸ್ ಮಾಡಿ ಆರು ತಿಂಗಳು ಪ್ರಾಯೋಗಿಕವಾಗಿ ರೈಲ್ ನಿಲುಗಡೆಗೆ ಹುಬ್ಬಳ್ಳಿಯಿಂದ ಆದೇಶ ಬರುತ್ತದೆ ಎಂದು ನಮ್ಮ ಕಚೇರಿಗೆ ನಮ್ಮ ಮನವಿ ಪತ್ರದ ಸಂಖ್ಯೆಯನ್ನು ನಮೂದಿಸಿ ಕಾಗದಪತ್ರವನ್ನು ಕಳಿಸಿಕೊಟ್ಟರು. ಎಲ್ಲಾ ದಾಖಲಾತಿಗಳನ್ನ ಮಾಧ್ಯಮದ ಸ್ನೇಹಿತರ ಮುಂದೆ ಕೊಡುತ್ತಿದ್ದು ಈ ಹೋರಾಟವನ್ನು ತಾವುಗಳು ಗಮನಿಸಿ ಮತ್ತೊಮ್ಮೆ ಸಹಕರಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಹೂವಯ್ಯ, ಸಂಸ್ಥೆ ನಿರ್ದೇಶಕ ಲೋಹಿತ್ ಹಾಗೂ ಬಿಜೆಪಿ ವಕ್ತರಾರರು ಐನೆಟ್ ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.
Uncategorized
ಯುವ ಜನಾಂಗಕೆ ಪುನೀತ್ ರಾಜಕುಮಾರ್ ಪ್ರೇರಣೆ: ನಜರಬಾದ್ ನಟರಾಜ್

ಮೈಸೂರು: ಪುನೀತ್ ರಾಜಕುಮಾರ್ 50ನೇ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಜ್ಜಿಗೆ ವಿತರಣೆ ಮಾಡಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಯುವ ಜನಾಂಗಕ್ಕೆ ಪುನೀತ್ ರಾಜಕುಮಾರ್ ಪ್ರೇರಣೇ ಎಂದರೆ ತಪ್ಪಾಗಲಾರದು ಏಕೆಂದರೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಂತಹದ್ದು ಎಂದು ಪುನೀತ್ ಗುಣಗಾನ ಮಾಡಿದರು.
Uncategorized
ಕೊಡಗು ವಿದ್ಯಾಲಯದಲ್ಲಿ ಯುಕೆಜಿ ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ

ಮಡಿಕೇರಿ : ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಶಿಸ್ತು, ಜೀವನಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ಕಲಿಸಿಕೊಡಬೇಕು. ಸ್ವಚ್ಛಂದ ಜೀವನದ ಬಗೆಗಿನ ಎಚ್ಚರಿಕೆಯನ್ನೂ ಇಂದಿನ ಮಕ್ಕಳಿಗೆ ತಿಳಿಹೇಳುವುದು ಅಗತ್ಯ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಿವಿಮಾತು ಹೇಳಿದರು.
ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಯುಕೆಜಿ ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿಂದನಿಂದಲೇ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಪೋಷಕರು ಸಲಹುತ್ತಾ ಮಕ್ಕಳು ಮಾಡಿದ್ದೆಲ್ಲವೂ ಸರಿ ಎಂದು ಭಾವಿಸುತ್ತಾರೆ. ಇದರಿಂದಾಗಿ ಸ್ವಚ್ಛಂದತೆಯನ್ನು ಹೆಚ್ಚಾಗಿಯೇ ಮಕ್ಕಳು ಬೆಳೆಸಿಕೊಂಡು ಸಮಾಜದಲ್ಲಿ ದಾರಿ ತಪ್ಪುವ ಸಾಧ್ಯತೆಯೂ ಹೆಚ್ಚಾಗಿದೆ. ಇಂಥ ಸಂದಭ೯ ಜೀವನಮೌಲ್ಯ, ಶಿಸ್ತನ್ನು ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ವಯಸ್ಸಿನಲ್ಲಿಯೇ ಕಲಿಸುವ ಮೂಲಕ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಅನಂತಶಯನ ಹೇಳಿದರು.
ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆ, ಶಿಕ್ಷಕ ವಗ೯ದ ಬಗ್ಗೆ ಪೋಷಕರು ನಂಬಿಕೆ ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳೇ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಕೇಂದ್ರಗಳೆಂದು ಮರೆಯಬಾರದು ಎಂದು ಕಿವಿಮಾತು ಹೇಳಿದ ಅನಂತಶಯನ, ಕೊಡಗು ವಿದ್ಯಾಲಯವು ಆದ್ಯಾತ್ಮಿಕ ಸಾಧಕ ಸದ್ಗುರು ಜಾಕ್ ಸುಬ್ಬಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಕಾರಣದಿಂದ ಇಂದಿಗೂ ಈ ಸಂಸ್ಥೆಯು ಸದಾ ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರಾಗಿದೆ ಎಂದು ಶ್ಲಾಘಿಸಿದರು.
ಸಾಧಿಸುವ ಛಲವಿದ್ದಲ್ಲಿ ಯಾವುದೇ ವ್ಯಕ್ತಿಯೂ ಎಷ್ಟೇ ಎತ್ತರದ ಬೆಟ್ಟ, ಗುಡ್ಡಗಳನ್ನು ಸಲೀಸಾಗಿ ಏರಬಲ್ಲ. ಎಷ್ಟೇ ದೂರದವರೆಗೂ ಸಮುದ್ರದಲ್ಲಿ ಈಜಬಲ್ಲ,ಗಗನದಲ್ಲಿ ಹಾರಬಲ್ಲ ಸಾಮಥ್ಯ೯ ಹೊಂದಬಲ್ಲ ಎಂದು ಹೇಳಿದ ಅನಂತಶಯನ, ಛಲ ಹಾಗೂ ಕಠಿಣ ಪರಿಶ್ರಮ ಇಂಥ ಸಾಧನೆಗೆ ಅತ್ಯಗತ್ಯ ಎಂದು ಹೇಳಿದರು. ದೊಡ್ಡ ಮಟ್ಟದ ಸಾಧನೆಯ ಕನಸುಗಳನ್ನು ಕಾಣಿ ಎಂದು ಕರೆ ನೀಡಿದ ಅವರು, ಬೆಟ್ಟಗುಡ್ಡಗಳು ಅವುಗಳ ಎಚ್ಚರದಿಂದ ಮಾತ್ರವೇ ದೊಡ್ಡವು ಎನಿಸಿಕೊಂಡಿಲ್ಲ. ಬದಲಿಗೆ ಅವುಗಳು ಮಾನವನಿಗೆ ಒಡ್ಡುವ ಸವಾಲಿನಿಂದಾಗಿ ನಿಜವಾಗಿಯೂ ಅವುಗಳು ಹಿರಿಯದ್ದಾಗಿವೆ ಎಂದು ಹೇಳಿದರು.
ಎಂದಿಗೂ ಪುಟ್ಟ ಮಕ್ಕಳು ಇತರರೊಂದಿಗೆ ಜಗಳವಾಡದೇ ಗೆಳೆತನ ಕಾಪಾಡಿಕೊಳ್ಳಿ, ಗೆಳೆತನವೇ ಜೀವನದ ಬಹುದೊಡ್ಡ ಸಂಪತ್ತಾಗಿದೆ ಎಂಬುದನ್ನು ಮರೆಯದಿರಿ ಎಂದೂ ಅನಂತಶಯನ ಪುಟಾಣಿಗಳಿಗೆ ಕಿವಿಮಾತು ಹೇಳಿದರು.
ಕಾಯ೯ಕ್ರಮದಲ್ಲಿ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ವ್ಯವಸ್ಥಾಪಕರಾದ ರವಿ ಪಿ, ವೇದಿಕೆಯಲ್ಲಿದ್ದರು.
ವಿದ್ಯಾಥಿ೯ನಿ ಶಾವಿ೯ ಭರತ್ ಸ್ವಾಗತಿಸಿ, ಸ್ಟಿಫಾನಿಯಾ ಸ್ಟ್ಯಾನಿ, ಆಂಚಲ್ ಅಯ್ಯಪ್ಪ ಮತ್ತು ಶಾವಿ೯ಕ್ ಅನುಭವ ಹಂಚಿಕೊಂಡ ಕಾಯ೯ಕ್ರಮದಲ್ಲಿ ಶಿಕ್ಷಕಿ ವೀಣಾ ಎಂ.ಎಂ.ನಿರೂಪಿಸಿ, ಶಿಕ್ಷಕಿಯರಾದ ಟಿ.ಪಿ.ರಮ್ಯ ಹಾಗೂ ಬಿ.ಬಿ.ಭಾರತಿ ನಿವ೯ಹಿಸಿದರು. ಐಶಾನಿ ವಂದಿಸಿದರು. ಯುಕೆಜಿ ವಿದ್ಯಾಥಿ೯ಗಳಿಂದ ಅತ್ಯಾಕಷ೯ಕ ಸಾಂಸ್ಕೖತಿಕ ಕಾಯ೯ಕ್ರಮಗಳು ಮನಸೆಳೆದವು
Uncategorized
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್

ಬೇಲೂರು: ಕಾಡಾನೆ ಸೆರೆ ಕಾರ್ಯಾಚರಣೆ
ಮೊದಲ ದಿನದ ಕಾರ್ಯಾಚರಣೆ ಯಶಸ್ವಿ
ಸತತ ನಾಲ್ಕು ಗಂಟೆಗಳ ನಂತರ ಕಾರ್ಯಾಚರಣೆ ಯಶಸ್ವಿ
ಬೇಲೂರು ತಾಲ್ಲೂಕಿನ, ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್ನಲ್ಲಿ ಸೆರೆ ಸಿಕ್ಕ ಕಾಡಾನೆ
ಪುಂಡಾನೆಗಳನ್ನು ಗುರುತಿಸಿದ್ದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ
ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು
ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಜೊತೆಗಿದ್ದ ಕಾಡಾನೆ ಜೊತೆ ಓಡಾಡಿದ ಒಂಟಿಸಲಗ
ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲೆಂದರಲ್ಲಿ ಓಡಾಡಿದ ಒಂಟಿಸಲಗ
ಹರಸಾಹಸಪಟ್ಟು ಎರಡು ಕಾಡಾನೆಗಳನ್ನು ಬೇರ್ಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ನಂತರ ಕುಸಿದು ಬಿದ್ದ ಒಂಟಿಸಲಗ
ಕಾಡಾನೆಯನ್ನು ಸೆರೆ ಹಿಡಿದು ಎಳೆದು ತಂದ ಸಾಕಾನೆಗಳು
ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ
-
Mandya7 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Mandya9 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Kodagu7 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ
-
Kodagu10 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ