Mysore
ನಂಜನಗೂಡು ತಾಲ್ಲೂಕಿನ ನಗಲೆ೯ ಗ್ರಾಮಸ್ಧರು ಶ್ರೀನಿವಾಸ್ ಪ್ರಸಾದ್ ರವರಿಗೆ ಮತ್ತು ಕೆ.ಶಿವರಾಂಗೆ ನುಡಿ ನಮನ
ನಂಜನಗೂಡು: ಮೇ.26
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಮತ್ತು ಕೆ.ಶಿವರಾಂ ರವರ ನುಡಿ ನಮನ ಕಾರ್ಯಕ್ರಮವನ್ನು ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದಿಂದ ಆಯೋಜನೆ ಮಾಡಲಾಗಿತ್ತು.
ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಮತ್ತು ಐಎಎಸ್ ಅಧಿಕಾರಿ ಹಾಗೂ ನಟ ದಿವಂಗತ ಕೆ.ಶಿವರಾಂ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸಿ, ಗ್ರಾಮಸ್ಥರು ನುಡಿ ನಮನ ಸಲ್ಲಿಸಿದರು.
ಬಳಿಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ. ವಿಜಯಕುಮಾರ್ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ರವರು ಹೋರಾಟದ ಮೂಲಕವೇ ರಾಜಕಾರಣಕ್ಕೆ ಬಂದರು. ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಹರಿಕಾರ, ಚಿಂತಕ, ಸಾಮಾಜಿಕ ಸುಧಾರಕ ಎಂದರೆ ತಪ್ಪಾಗಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದರು. ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳುತ್ತಿದ್ದರು. ಹೇಳಿದ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಿದ್ದರು. ತಳ ಸಮುದಾಯಕ್ಕೆ ಮೊದಲ ಆದ್ಯತೆ ನೀಡಿ ಪ್ರತಿ ಸಮುದಾಯಕ್ಕೂ ಭವನ ನಿರ್ಮಾಣ ಮಾಡಲು ಸ್ಥಳವಕಾಶ ಮಾಡಿಕೊಟ್ಟು ನಿವೇಶನಗಳನ್ನು ನೀಡಿದ್ದಾರೆ. ಬುದ್ಧ ಬಸವ ಅಂಬೇಡ್ಕರ್ ಅವರ ಅನುಯಾಯಿಯಾಗಿ ಆದರ್ಶವನ್ನು ರೂಪಿಸಿಕೊಂಡಿದ್ದರು. ಅವರು ನಮ್ಮೊಟ್ಟಿಗೆ ಇಲ್ಲದಿದ್ದರೂ ಅವರು ಬದುಕಿದ ಬದುಕು ಇನ್ನು ಜೀವಂತವಾಗಿದೆ ಎಂದು ಸ್ಮರಿಸಿದ್ದಾರೆ.
ಗುತ್ತಿಗೆದಾರ ಮಹದೇವಸ್ವಾಮಿ ಮಾತನಾಡಿ, ಶೋಷಿತರ ಪರ ಧ್ವನಿ ಎತ್ತಿ ನ್ಯಾಯ ನೀಡುತ್ತಿದ್ದರು. ಬಡವರು ಮತ್ತು ಸಾಮಾನ್ಯರಿಗೂ ಗೌರವವನ್ನು ನೀಡುತ್ತಿದ್ದರು. ನಮ್ಮ ಸಮಾಜದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಕೆ. ಶಿವರಾಂ ಅವರ ಕೊಡುಗೆ ಅಪಾರವಾಗಿದೆ ಇಬ್ಬರು ನಾಯಕರು ಕೂಡ ನಮ್ಮಲ್ಲಿ ಜೀವಂತವಾಗಿ ಉಳಿದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮನು, ಧರ್ಮೇಂದ್ರ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್,
ಗುತ್ತಿಗೆದಾರ ಮಹದೇವಸ್ವಾಮಿ, ಯುವ ಮುಖಂಡರಾದ ಗುರುಪಾದ ಸ್ವಾಮಿ, ಪ್ರಜ್ವಲ್, ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಮುಖಂಡರಾದ ಸ್ವಾಮಿ, ಗೌರಿಶಂಕರ್, ಕೆಂಪರಾಜು, ಅಂಬೇಡ್ಕರ್ ಸಂಘದ ಅಧ್ಯಕ್ಷ ಪವನ್ ಕುಮಾರ್ ಮಾಜಿ ಗ್ರಾಪಂ ಅಧ್ಯಕ್ಷ ಇಸ್ಮಾಯಿಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಂಜನಗೂಡು ಮಹದೇವಸ್ವಾಮಿ ಪಟೇಲ್.
Mysore
ಖೋ-ಖೋ ವಿಶ್ವಕಪ್ನಲ್ಲಿ ಮೈಸೂರಿನ ಕುವರಿ ಕಮಾಲ್: ಜನವರಿ 21ರಂದು ತಿ.ನರಸೀಪುರದಲ್ಲಿ ಚೈತ್ರೋತ್ಸವ
ತಿ.ನರಸೀಪುರ: ಇದೇ ಜನವರಿ 19 ರಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನೇಪಾಳ ನಡುವಿನ ಖೋ-ಖೋ ವಿಶ್ವಕಪ್ 2025ರ ಫೈನಲ್ಸ್ನಲ್ಲಿ ಭಾರತ ತಂಡದ ಗೆದ್ದು ಬೀಗಿತ್ತು.
ಈ ವಿಶ್ವಕಪ್ ವಿಜೇತ ಮಹಿಳಾ ತಂಡದಲ್ಲಿ ಮೈಸೂರಿನ ಯುವತಿ ಚೈತ್ರ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸಳೆದಿದ್ದರು.
ಮೂಲತಃ ಮೈಸೂರು ಜಿಲ್ಲೆಯ ನರಸೀಪುಪರ ತಾಲೂಕಿನ ಚೈತ್ರಾ ಅವರ ಸಾಧನೆ ಕೊಂಡಾಡಲು ಚೈತ್ರೋತ್ಸವ ಕಾರ್ಯಕ್ರಮಕ್ಕೆ ಟಿ ನರಸೀಪುರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದೇ ಜನವರಿ 21ರಂದು ಟಿ ನರಸೀಪುರಕ್ಕೆ ಚೈತ್ರಾ ಅವರು ಆಗಮಿಸುತ್ತಿದ್ದು, ಈ ವೇಳೆ ಚೈತ್ರಗೆ ಅದ್ದೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಲಾಗಿದೆ.
ಈ ಸಂಬಂಧ ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳಿಂದ ಸುದ್ದಿಗೋಷ್ಠಿ ನಡೆಸಿದ್ದು, ಭಾರತ ಮಹಿಳಾ ಖೋ ಖೋ ತಂಡದಲ್ಲಿ ನಮ್ಮ ತಾಲ್ಲೂಕಿನ ಕ್ರೀಡಾಪಟು ಚೈತ್ರ ಆಟವಾಡಿದ್ದಾರೆ. ಇದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ. ಭಾರತ ಮಹಿಳಾ ಖೋ ಖೋ ತಂಡಕ್ಕೆ ವಿಶ್ವಕಪ್ ಸಿಕ್ಕಿದೆ. ಜನವರಿ 21ರಂದು ಟಿ ನರಸೀಪುರಕ್ಕೆ ಚೈತ್ರ ಆಗಮಿಸುತ್ತಿದ್ದಾರೆ.ಈ ವೇಳೆ ಖಾಸಗಿ ಬಸ್ ನಿಲ್ದಾಣದಿಂದ ವಿದ್ಯೋದಯ ಕಾಲೇಜು ವೃತ್ತದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ ಎಂದು ಮುಖಂಡರು ಮಾಹಿತಿ ನೀಡಿದರು.
Mysore
ಖೋ ಖೋ ವಿಶ್ವಕಪ್ ನಲ್ಲಿ ಮೈಸೂರಿನ ಯುವತಿ ಚೈತ್ರ ಉತ್ತಮ ಪ್ರದರ್ಶನ.
ಭಾರತ ಮಹಿಳಾ ಖೋ ಖೋ ತಂಡಕ್ಕೆ ಫೈನಲ್ ನಲ್ಲಿ ಭರ್ಜರಿ ಗೆಲುವು ಹಿನ್ನೆಲೆ.
ಖೋ ಖೋ ವಿಶ್ವಕಪ್ ನಲ್ಲಿ ಮೈಸೂರಿನ ಯುವತಿ ಚೈತ್ರ ಉತ್ತಮ ಪ್ರದರ್ಶನ.
ಚೈತ್ರೋತ್ಸವ ಕಾರ್ಯಕ್ರಮಕ್ಕೆ ಟಿ ನರಸೀಪುರದಲ್ಲಿ ಸಿದ್ಧತೆ.
ಜನವರಿ 21ರಂದು ಟಿ ನರಸೀಪುರಕ್ಕೆ ಆಗಮಿಸುವ ಚೈತ್ರ.
ಈ ವೇಳೆ ಚೈತ್ರಗೆ ಅದ್ದೂರಿ ಸ್ವಾಗತ ಕೋರಲು ಸಿದ್ಧತೆ.
ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳಿಂದ ಸುದ್ದಿಗೋಷ್ಠಿ.
ಭಾರತ ಮಹಿಳಾ ಖೋ ಖೋ ತಂಡದಲ್ಲಿ ನಮ್ಮ ತಾಲ್ಲೂಕಿನ ಕ್ರೀಡಾಪಟು ಚೈತ್ರ ಆಟವಾಡಿದ್ದಾರೆ.
ಇದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ.
ಭಾರತ ಮಹಿಳಾ ಖೋ ಖೋ ತಂಡಕ್ಕೆ ವಿಶ್ವಕಪ್ ಸಿಕ್ಕಿದೆ.
ಜನವರಿ 21ರಂದು ಟಿ ನರಸೀಪುರಕ್ಕೆ ಚೈತ್ರ ಆಗಮಿಸುತ್ತಿದ್ದಾರೆ.
ಈ ವೇಳೆ ಖಾಸಗಿ ಬಸ್ ನಿಲ್ದಾಣದಿಂದ ವಿದ್ಯೋದಯ ಕಾಲೇಜು ವೃತ್ತದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ.
ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ ಎಂದ ಮುಖಂಡರು
Mysore
23/1/2025 ರಂದು “ಶಾಸಕರು -ಸಂಸದರು” ಜೊತೆ ರೈತರ ಮುಖಂಡರ ಮುಖಮುಖಿ ರೈತ ಸ್ನೇಹಿ ಚರ್ಚಾ ಕಾರ್ಯಕ್ರಮ
ನಂಜನಗೂಡು ಜ. 20
ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ವತಿಯಿಂದ ಇದೇ ತಿಂಗಳು ಜನವರಿ 23/1/2025 ರಂದು ನಂಜನಗೂಡು ತಾಲೂಕು ತಾಂಡವಪುರ ಚಿಕ್ಕಯ್ಯನ ಛತ್ರ ಹೋಬಳಿ ಮಾರಮ್ಮನ ಗುಡಿ ದೇವಸ್ಥಾನದ ಆವರಣದಲ್ಲಿ ಗುರುವಾರ ಬೆಳಿಗ್ಗೆ 10: 30 ಗಂಟೆಗೆ ಸ್ಥಳೀಯ ” ಶಾಸಕರು -ಸಂಸದರು” ಜೊತೆ ರೈತರ ಮುಖಂಡರ ಮುಖಮುಖಿ ರೈತ ಸ್ನೇಹಿ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ದೇಶದ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾ ಸಾಗರ್ ಗೋಷ್ಠಿಯಲ್ಲಿ ಹೇಳಿದರು.
ಇಂದು ನಂಜನಗೂಡು ತಾಲೂಕು ಪತ್ರಕರ್ತ ಭವನದಲ್ಲಿ ಪತ್ರಿಕೆ ಗೋಷ್ಟಿ ನಡೆಸಿ ಮಾತಾಡುತ್ತಾ ಅವರು,
ಈ ಕಾರ್ಯಕ್ರಮಕ್ಕೆ ನಂಜನಗೂಡು ಕ್ಷೇತ್ರದ ಶಾಸಕರು, ಗುಂಡ್ಲುಪೇಟೆ ಶಾಸಕರು, ಕೆ. ಆರ್. ನಗರ ಶಾಸಕರು, ಎಚ್.ಡಿ. ಕೋಟೆ ಶಾಸಕರು, ಹಾಗೂ ಚಾಮರಾಜನಗರ ಸಂಸದರು, ಮತ್ತು ಜಿಲ್ಲಾ ಉಸ್ತುವರಿ ಸಚಿವರು ಬರುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ ರೈತ ಪ್ರಭುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು,
ರೈತ ಸಂಘದ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ
ಕರ್ನಾಟಕದಲ್ಲಿ ರೈತರ ದೊಡ್ಡ ಸಮಸ್ಯೆ ಸಾಕಷ್ಟು ಇದೆ.
ಸ್ಪಂದಿಸದೆ ದವರಿಗೆ ವಿರೋಧ ವ್ಯಕ್ತಪಡಿಸುವ ನಮ್ಮ ಕರ್ತವ್ಯ,
ಆದರೆ ಸ್ಪಂದಿಸಿದವರಿಗೆ ಅವರ ಗಮನಕ್ಕೆ ರೈತರ ಸಮಸ್ಯೆಗಳನ್ನು ಹೇಳುವ ನಿಟ್ಟಿನಲ್ಲಿ ಈ ವಿಶೇಷ ಸಭೆಯಲ್ಲಿ ಶಾಸಕರಗಳ ಮುಖಮುಖಿ ರೈತರ ಸ್ನೇಹಿ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಭಾಗದ ಶಾಸಕರುಗಳ ಮಹನೀಯರ ಮಕ್ಕಳಾಗಿದ್ದು,
ಅವರ ತಂದೆಯವರು ಕರ್ನಾಟಕದಲ್ಲಿ ದೊಡ್ಡ ಮಟ್ಟದ ಕೊಡುಗೆಗಳನ್ನು ನೀಡಿದ್ದಾರೆ.
ಈ ಭಾಗದ ಶಾಸಕರುಗಳಿಗೆ ಮತ್ತು ಸಂಸದರಿಗೆ ರೈತರ ಬಗೆ ಹೆಚ್ಚು ಕಾಳಜಿ ಇಲ್ಲದೇ ಇರುವುದರಿಂದ ಈ ವಿಶೇಷ ಸಭೆಯನ್ನು ರೈತರ ಮುಖಂಡರ ಮುಖಮುಖಿ ಸ್ನೇಹಿ ಚರ್ಚಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಗೋಷ್ಠಿಯಲ್ಲಿ ಹೇಳಿದರು.
23 ರಂದು ನಡೆಯುವ ಕಾರ್ಯಕ್ರಮದ ಕರಪತ್ರ ಗಳನ್ನು ಬಿಡುಗಡೆಗೊಳಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು, ಬಂಗಾರ ಸ್ವಾಮಿ, ಶ್ವೇತ, ಮಹದೇವಪ್ಪ, ತಿಮ್ಮಣ್ಣ ಮಾದೇವ ನಾಯಕ ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.
ನಂಜನಗೂಡು ಮಹದೇವಸ್ವಾಮಿ ಪಟೇಲ್.
-
Mysore22 hours ago
ಮೈಸೂರು ಮಹಾರಾಜರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ
-
Sports21 hours ago
ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಸುರೇಶ್ ರೈನಾ
-
Sports20 hours ago
Kho Kho world cup 2025: ಭಾರತ ಮಹಿಳಾ ಹಾಗೂ ಪುರುಷ ತಂಡಗಳೇ ಚಾಂಪಿಯನ್
-
National - International20 hours ago
ಮಹಾ ಕುಂಭಮೇಳ ದರ್ಶನಕ್ಕಾಗಿ ಹುಬ್ಬಳ್ಳಿಯಿಂದ ವಿಶೇಷ ರೈಲು ವ್ಯವಸ್ಥೆ : ಈ ದಿನ ಮಾತ್ರ!
-
Mysore23 hours ago
ತಾಲೂಕು ಕಚೇರಿಗಳು ಪ್ರಾರಂಭವಾಗಲು ಒತ್ತಾಯ: ಹೊಸೂರು ಕುಮಾರ್
-
Hassan7 hours ago
ಅನುಮತಿ ಪಡೆಯೇ ಚಿತ್ರೀಕರಣ ಉಪಕರಣ ತಂದಿಟ್ಟಿದ್ದಕ್ಕೆ ದಂಡ ವಿಧಿಸಿಧ್ದ ಅರಣ್ಯ ಇಲಾಖೆ
-
Hassan7 hours ago
ಹಾಸನ : ಆನ್ಲೈನ್ ಗೇಮ್ಗೆ ಯುವಕ ಬಲಿ
-
Mysore23 hours ago
ಪ್ಲಾಸ್ಟಿಕ್ ತ್ಯಾಜ್ಯ ಕಾನನ ಪ್ರವೇಶಿಸದಂತೆ 2 ಹಂತದ ತಪಾಸಣೆ: ಈಶ್ವರ ಖಂಡ್ರೆ