Connect with us

Special

ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮ (PMFME) – 15 ಲಕ್ಷ ರೂ. ಸಹಾಯಧನ

Published

on

ಭಾರತ ಸರ್ಕಾರವು ಗ್ರಾಮೀಣ ಹಳ್ಳಿಗಳಲ್ಲಿ ಸ್ವತಂತ್ರ ಉದ್ದಿಮೆ ಸ್ಥಾಪಿಸಲು ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯ ಉದ್ದೇಶ:
ಇದರ ಪ್ರಮುಖ ಉದ್ದೇಶ ರೈತರು, ಮಹಿಳೆಯರು ಮತ್ತು ಯುವಕರಿಗೆ ಆಹಾರ ಪೂರೈಕೆಯಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುವುದು. ಈ ಯೋಜನೆಯಡಿ ಗರಿಷ್ಠ ₹15,00,000 ವರೆಗೆ ಸಹಾಯಧನ (ಸಬ್ಸಿಡಿ) ಲಭಿಸುತ್ತದೆ.

ಸಹಾಯಧನದ ಬಗ್ಗೆ ಮಾಹಿತಿ:
ಈ ಯೋಜನೆಯಡಿ ಒಟ್ಟು ₹15 ಲಕ್ಷದವರೆಗೆ ಸಹಾಯಧನ ದೊರೆಯುತ್ತದೆ. ಇದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ. 60:40 ದರದಲ್ಲಿ ಹಂಚಿಕೊಳ್ಳುತ್ತಿದ್ದು, ಕೇಂದ್ರದಿಂದ ₹6 ಲಕ್ಷ ಮತ್ತು ರಾಜ್ಯದಿಂದ ₹9 ಲಕ್ಷ ವರ್ಷಕ್ಕೆ ನೀಡಲಾಗುತ್ತದೆ.

ಯಾರು ಅರ್ಹರು?
ಸಹಾಯಧನ ಪಡೆಯಲು ಯಾವುದೇ ವಿಶೇಷ ವಿದ್ಯಾರ್ಹತೆ ಅಗತ್ಯವಿಲ್ಲ; 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು ಮತ್ತು ಬ್ಯಾಂಕ್ ಸಾಲ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಕೆಯನ್ನು ಅಧಿಕೃತ ಪೋರ್ಟ್‌ಲ್‌ ಮೂಲಕ ಆನ್‌ಲೈನ್‌ನಲ್ಲಿ ಮಾಡಬೇಕು.

ಯಾರು ಲಾಭ ಪಡೆಯಬಹುದು?
* ವೈಯಕ್ತಿಕ ಉದ್ಯಮಿಗಳು
* ರೈತರು ಹಾಗೂ ಯೂವಕರು
* ಮಹಿಳಾ ಉದ್ಯಮಿಗಳು
* ಸ್ವ ಸಹಾಯ ಸಂಘಗಳು (SHG)
* ರೈತ ಉತ್ಪಾದಕ ಸಂಘಗಳು (FPO)

ಯಾವ ಉದ್ಯಮಗಳಿಗೆ ಸಹಾಯಧನ?
ಸಹಾಯಧನಕ್ಕಾಗಿ ವಿವಿಧ ಬಗೆಯ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು.
* ಸಿರಿಧಾನ್ಯ (ಮಿಲೆಟ್ಸ್) ಸಂಸ್ಕರಣಾ ಘಟಕ
* ಬೆಲ್ಲ, ಸಕ್ಕರೆ ಹಾಗೂ ನಿಂಬೆ ಉತ್ಪನ್ನ ಘಟಕಗಳು
* ಬೇಕರಿ ಅಥವಾ ಮಸಾಲಾ ಘಟಕ
* ಎಣ್ಣೆ (ಕೋಲ್ಡ್-ಪ್ರೆಸ್) ಘಟಕ
* ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ
* ಕೋಳಿ, ಮೀನು ಮತ್ತು ಇತರ ಆಹಾರ ಘಟಕಗಳು.

ಯೋಜನೆಯ ಪ್ರಗತಿ:
ಕಳೆದ ಕೆಲವು ವರ್ಷಗಳಲ್ಲಿ ಈ ಯೋಜನೆ ಮೂಲಕ ಸಾವಿರಾರು ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿವೆ. ಉದಾ., ಸಿರಿಧಾನ್ಯ, ಎಣ್ಣೆ, ಬೆಲ್ಲ ಮತ್ತು ಮಸಾಲಾ ಘಟಕಗಳು ದೇಶಾದ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಈ ಯೋಜನೆ ಗ್ರಾಮೀಣ ಭಾರತೀಯರಿಗೆ ಉದ್ಯಮ ಸ್ಥಾಪನೆಯಲ್ಲಿ ಬೃಹತ್ ಅವಕಾಶ ಒದಗಿಸುತ್ತದೆ ಮತ್ತು ಕಳೆದ ವರ್ಷಕ್ಕಿಂತ ಹೆಚ್ಚು ಹೊಸ ಅರ್ಜಿಗಳನ್ನು ಸ್ವೀಕರಿಸಲು ಮುಂದುವರಿಸಿದೆ. ರೈತರು, ಮಹಿಳೆಯರು ಮತ್ತು ಯುವಕರು ತಮ್ಮ ಹಳ್ಳಿಯಲ್ಲೇ ಸ್ವಂತ ಆಹಾರ ಸಂಸ್ಕರಣಾ ಉದ್ಯಮ ಆರಂಭಿಸಲು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು.

Special

ದಂತ ಭಾಗ್ಯ ಯೋಜನೆ, ಹಿರಿಯರ ಆರೋಗ್ಯಕ್ಕೆ ಸರ್ಕಾರದ ಭರವಸೆ.

Published

on

ಹಿರಿಯ ನಾಗರಿಕರು ಇಳಿವಯಸ್ಸಿನಲ್ಲಿ ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹಲ್ಲುಗಳ ಸಮಸ್ಯೆಯೂ ಒಂದಾಗಿದೆ. ಈ ಸಮಸ್ಯೆಯನ್ನು ಮನಗಂಡು ಕರ್ನಾಟಕ ರಾಜ್ಯ ಸರ್ಕಾರ ದಂತ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.

ಯೋಜನೆಯ ಉದ್ದೇಶ:
ಈ ಯೋಜನೆಯ ಮುಖ್ಯ ಉದ್ದೇಶ ಹಿರಿಯ ನಾಗರಿಕರಿಗೆ ಗುಣಮಟ್ಟದ ದಂತ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿದೆ.

ಯೋಜನೆಯಡಿ ದೊರೆಯುವ ಸೌಲಭ್ಯಗಳು:
ದಂತ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೃತಕ ದಂತ ಪಂಕ್ತಿಗಳ ಜೋಡಣೆ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ಬಳಸುವ ಉಪಕರಣಗಳು ಉನ್ನತ ಗುಣಮಟ್ಟದ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ದೀರ್ಘಕಾಲ ಬಳಕೆಗೆ ಬರುತ್ತವೆ.

ಅರ್ಹತಾ ಮಾನದಂಡಗಳು:
ಈ ಯೋಜನೆಯ ಲಾಭ ಪಡೆಯಲು 45 ವರ್ಷ ಮೇಲ್ಪಟ್ಟವರು ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಅರ್ಹರಾಗಿರುತ್ತಾರೆ. ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು.

ಸೇವೆ ಲಭ್ಯವಿರುವ ಸ್ಥಳಗಳು:
ರಾಜ್ಯಾದ್ಯಂತ ಇರುವ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರ್ಕಾರದಿಂದ ಗುರುತಿಸಲ್ಪಟ್ಟ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

ಯೋಜನೆಯ ಸಾಧನೆ:
ಈವರೆಗೆ 41,218ಕ್ಕೂ ಹೆಚ್ಚು ಹಿರಿಯ ನಾಗರಿಕರು ದಂತ ಭಾಗ್ಯ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಯೋಜನೆಯ ಯಶಸ್ಸು ಮತ್ತು ಜನಪ್ರಿಯತೆಯನ್ನು ತೋರಿಸುತ್ತದೆ.

ದಂತ ಭಾಗ್ಯ ಯೋಜನೆ ಹಿರಿಯರ ಆರೋಗ್ಯವನ್ನು ಕಾಪಾಡುವ ಜೊತೆಗೆ ಅವರ ಜೀವನಕ್ಕೆ ಹೊಸ ಸಂತೋಷವನ್ನು ತರುವ ಅತ್ಯುತ್ತಮ ಯೋಜನೆಯಗಿದ್ದು, ಹಿರಿಯರು ಇದರ ಸದುಪಯೋಗಪಡಿಸಿಕೊಳ್ಳಬೇಕು.

Continue Reading

Special

ಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!

Published

on

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಗೃಹವ್ಯವಸ್ಥೆ ಕಾರ್ಯಕ್ರಮವಾಗಿದ್ದು, ಲಕ್ಷಾಂತರ ಭಾರತೀಯ ನಾಗರಿಕರ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸು ಮಾಡುವ ಉದ್ದೇಶ ಹೊಂದಿರುವ ಪ್ರಮುಖ ಯೋಜನಯಾಗಿದೆ.

ಯೋಜನೆಯ ರೂಪುರೆಷೆ:
PMAY ಯೋಜನೆ ಎರಡು ಮುಖ್ಯ ವಿಭಾಗಗಳಾದ
PMAY-Urban (ನಗರ ಪ್ರದೇಶದವರಿಗೆ)
PMAY-Gramin / Rural (ಗ್ರಾಮೀಣ ಪ್ರದೇಶದವರಿಗೆ) ಹೊಂದಿದ್ದು, ಇದರಲ್ಲಿ ಮನೆ ನಿರ್ಮಾಣಕ್ಕೆ ಸಾಲದೊಡನೆ ಸರ್ಕಾರದಿಂದ ಸಬ್ಸಿಡಿ ಸಹ ನೀಡಲಾಗುತ್ತದೆ, ಇದರಿಂದ ಕಡಿಮೆ ಆದಾಯ ಇರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಮನೆ ಕಟ್ಟಲು ಸಹಾಯ ಪಡೆಯಬಹುದು.

ಯೋಗ್ಯತೆಯ ಆಧಾರದಲ್ಲಿ ಸಬ್ಸಿಡಿ ವಿವರ:
* EWS – ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಾರ್ಷಿಕ ಆದಾಯ ₹3 ಲಕ್ಷ ಅಥವಾ ಕಡಿಮೆಯಾಗಿರಬೇಕು. ಇವರಿಗೆ ಗರಿಷ್ಠ ₹6 ಲಕ್ಷ ಮನೆ ಸಾಲ ನೀಡಲಾಗುತ್ತಿದ್ದು, ಇದರಲ್ಲಿ ಸರ್ಕಾರದಿಂದ ₹2.67 ಲಕ್ಷದವರೆಗೆ ಸಬ್ಸಿಡಿ ಇರುತ್ತದೆ.

* LIG – ಕಡಿಮೆ ಆದಾಯ ವರ್ಗದವರಿಗೆ ವಾರ್ಷಿಕ ಆದಾಯ ₹3 ಲಕ್ಷ ದಿಂದ ₹6 ಲಕ್ಷದವರೆಗಿರಬೇಕು.ಇವರಿಗೆ ₹2.67 ಲಕ್ಷ ಸಹಾಯ ನೀಡಲಾಗುತ್ತದೆ.

* MIG-I – ಮಧ್ಯಮ ಆದಾಯ ವರ್ಗ 1 ದವರಿಗೆ ಆದಾಯ ₹6 ಲಕ್ಷ – ₹12 ಲಕ್ಷವಿರಬೇಕು. ಇವರಿಗೆ ₹2.30 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.

* MIG-II – ಮಧ್ಯಮ ಆದಾಯ ವರ್ಗ ll ದವರಿಗೆ ಆದಾಯ ₹12 ಲಕ್ಷ – ₹18 ಲಕ್ಷವಿರಬೇಕು. ಇವರಿಗೆ ₹2.30 ಲಕ್ಷ ಸಹಾಯಧನ ನೀಡಲಾಗುತ್ತದೆ.

ಸಬ್ಸಿಡಿಯ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುತ್ತದೆ ಮತ್ತು ಸಾಲದ ಬಡ್ಡಿದರವನ್ನು ಹೆಚ್ಚಾಗಿ ಕಡಿಮೆ ಮಾಡಲಾಗುತ್ತದೆ.

ಯಾರು ಅರ್ಹರು?
• ದೇಶದ ನಾಗರಿಕರಾಗಿರಬೇಕು.
• ಯಾವುದೇ ಸ್ಥಳದಲ್ಲಿ ಈಗಾಗಲೇ “ಪಕ್ಕಾ ಮನೆ ” ಹೊಂದಿರಬಾರದು.
• ಸರ್ಕಾರದ ಇತರ ಗೃಹ ಸಹಾಯ ಯೋಜನೆಗಳ ಪ್ರಯೋಜನ ಪಡೆದಿರಬಾರದು.

ಅಗತ್ಯ ದಾಖಲೆಗಳು:
* ಆದಾಯ ಪ್ರಮಾಣ ಪತ್ರ
* ಐಡಿ ಪ್ರೂಫ್ (Aadhaar)
* ಬ್ಯಾಂಕ್ ಪುಸ್ತಕ
ಅರ್ಜಿಯನ್ನು ಸಲ್ಲಿಸಿದ ನಂತರ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.

PM Awas Yojana ಒಂದು ಮಹತ್ವದ ಸಾರ್ವಜನಿಕ ಯೋಜನೆಯಾಗಿದ್ದು, ಇದು ಮನೆ ಕಟ್ಟುವ ಕನಸು ಹೊಂದಿರುವ ಬಡ ಮತ್ತು ಮಾಧ್ಯಮ ವರ್ಗದವರಿಗೆ ಸರ್ಕಾರ ಸಾಲ ಮತ್ತು ಸಬ್ಸಿಡಿ ಮೂಲಕ ಅವರ ಜೀವನಕ್ಕೆ ದಾರಿದೀಪವಾಗಿದೆ.

Continue Reading

Special

ಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!

Published

on

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಗೃಹವ್ಯವಸ್ಥೆ ಕಾರ್ಯಕ್ರಮವಾಗಿದ್ದು, ಲಕ್ಷಾಂತರ ಭಾರತೀಯ ನಾಗರಿಕರ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸು ಮಾಡುವ ಉದ್ದೇಶ ಹೊಂದಿರುವ ಪ್ರಮುಖ ಯೋಜನಯಾಗಿದೆ.

ಯೋಜನೆಯ ರೂಪುರೆಷೆ:
PMAY ಯೋಜನೆ ಎರಡು ಮುಖ್ಯ ವಿಭಾಗಗಳಾದ
PMAY-Urban (ನಗರ ಪ್ರದೇಶದವರಿಗೆ)
PMAY-Gramin / Rural (ಗ್ರಾಮೀಣ ಪ್ರದೇಶದವರಿಗೆ) ಹೊಂದಿದ್ದು, ಇದರಲ್ಲಿ ಮನೆ ನಿರ್ಮಾಣಕ್ಕೆ ಸಾಲದೊಡನೆ ಸರ್ಕಾರದಿಂದ ಸಬ್ಸಿಡಿ ಸಹ ನೀಡಲಾಗುತ್ತದೆ, ಇದರಿಂದ ಕಡಿಮೆ ಆದಾಯ ಇರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಮನೆ ಕಟ್ಟಲು ಸಹಾಯ ಪಡೆಯಬಹುದು.

ಯೋಗ್ಯತೆಯ ಆಧಾರದಲ್ಲಿ ಸಬ್ಸಿಡಿ ವಿವರ:
* EWS – ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಾರ್ಷಿಕ ಆದಾಯ ₹3 ಲಕ್ಷ ಅಥವಾ ಕಡಿಮೆಯಾಗಿರಬೇಕು. ಇವರಿಗೆ ಗರಿಷ್ಠ ₹6 ಲಕ್ಷ ಮನೆ ಸಾಲ ನೀಡಲಾಗುತ್ತಿದ್ದು, ಇದರಲ್ಲಿ ಸರ್ಕಾರದಿಂದ ₹2.67 ಲಕ್ಷದವರೆಗೆ ಸಬ್ಸಿಡಿ ಇರುತ್ತದೆ.

* LIG – ಕಡಿಮೆ ಆದಾಯ ವರ್ಗದವರಿಗೆ ವಾರ್ಷಿಕ ಆದಾಯ ₹3 ಲಕ್ಷ ದಿಂದ ₹6 ಲಕ್ಷದವರೆಗಿರಬೇಕು.ಇವರಿಗೆ ₹2.67 ಲಕ್ಷ ಸಹಾಯ ನೀಡಲಾಗುತ್ತದೆ.

* MIG-I – ಮಧ್ಯಮ ಆದಾಯ ವರ್ಗ 1 ದವರಿಗೆ ಆದಾಯ ₹6 ಲಕ್ಷ – ₹12 ಲಕ್ಷವಿರಬೇಕು. ಇವರಿಗೆ ₹2.30 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.

* MIG-II – ಮಧ್ಯಮ ಆದಾಯ ವರ್ಗ ll ದವರಿಗೆ ಆದಾಯ ₹12 ಲಕ್ಷ – ₹18 ಲಕ್ಷವಿರಬೇಕು. ಇವರಿಗೆ ₹2.30 ಲಕ್ಷ ಸಹಾಯಧನ ನೀಡಲಾಗುತ್ತದೆ.

ಸಬ್ಸಿಡಿಯ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುತ್ತದೆ ಮತ್ತು ಸಾಲದ ಬಡ್ಡಿದರವನ್ನು ಹೆಚ್ಚಾಗಿ ಕಡಿಮೆ ಮಾಡಲಾಗುತ್ತದೆ.

ಯಾರು ಅರ್ಹರು?
• ದೇಶದ ನಾಗರಿಕರಾಗಿರಬೇಕು.
• ಯಾವುದೇ ಸ್ಥಳದಲ್ಲಿ ಈಗಾಗಲೇ “ಪಕ್ಕಾ ಮನೆ ” ಹೊಂದಿರಬಾರದು.
• ಸರ್ಕಾರದ ಇತರ ಗೃಹ ಸಹಾಯ ಯೋಜನೆಗಳ ಪ್ರಯೋಜನ ಪಡೆದಿರಬಾರದು.

ಅಗತ್ಯ ದಾಖಲೆಗಳು:
* ಆದಾಯ ಪ್ರಮಾಣ ಪತ್ರ
* ಐಡಿ ಪ್ರೂಫ್ (Aadhaar)
* ಬ್ಯಾಂಕ್ ಪುಸ್ತಕ
ಅರ್ಜಿಯನ್ನು ಸಲ್ಲಿಸಿದ ನಂತರ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.

PM Awas Yojana ಒಂದು ಮಹತ್ವದ ಸಾರ್ವಜನಿಕ ಯೋಜನೆಯಾಗಿದ್ದು, ಇದು ಮನೆ ಕಟ್ಟುವ ಕನಸು ಹೊಂದಿರುವ ಬಡ ಮತ್ತು ಮಾಧ್ಯಮ ವರ್ಗದವರಿಗೆ ಸರ್ಕಾರ ಸಾಲ ಮತ್ತು ಸಬ್ಸಿಡಿ ಮೂಲಕ ಅವರ ಜೀವನಕ್ಕೆ ದಾರಿದೀಪವಾಗಿದೆ.

Continue Reading

Trending

error: Content is protected !!