Hassan
ಹಾಸನದಲ್ಲಿ ಮಾಜಿಶಾಸಕ ಪ್ರೀತಂಗೌಡ ಹೇಳಿಕೆ

ಹಾಸನ : ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ
ಜೆಡಿಎಸ್ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ
ನಮ್ಮದು ರಾಷ್ಟ್ರೀಯ ಪಕ್ಷ, 303 ಸೀಟ್ ತಗೊಂಡಿರುವವರ ಹತ್ತಿರ ಒಂದು ಸೀಟ್ ಇರುವವರು ಬಂದಿದ್ದಾರೆ
ಬಂದಿರುವಂತಹ ನೆಂಟರು ಯಾರು ಮನೆಯಲ್ಲಿ ಇರ್ತಾರೆ ಅವರ ತತ್ವ, ಸಿದ್ಧಾಂತ, ರಾಷ್ಟ್ರೀಯತೆ ಎಲ್ಲಾ ಮೈಗೂಡಿಸಿಕೊಳ್ಳಬೇಕು
ನಮ್ಮದು ರಾಷ್ಟ್ರೀಯತೆ, ದೇಶ ಮೊದಲು ವ್ಯಕ್ತಿ ಕೊನೆ ಎಂಬುದು ಅಜೆಂಡಾ
ಇದನ್ನೆಲ್ಲಾ ಒಪ್ಪಿಕೊಂಡು ಬಂದಿದ್ದಾರೆ
ನಮ್ಮಲ್ಲಿ ವಂಶಪಾರಂಪಾರಿಕ ಆಡಳಿತಕ್ಕೆ ಅವಕಾಶ ಇರುವುದಿಲ್ಲ
ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರುವುದಿಲ್ಲ
ಅದನ್ನು ಮನದಟ್ಟು ಮಾಡಿಕೊಂಡು, ನರೇಂದ್ರಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕೆಂದು ಬಂದಿರುವುದು ಬಹಳ ಸ್ವಾಗತ ಮಾಡುವಂತಹ ವಿಚಾರ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ವಿಚಾರ
ನನ್ನ ಬದಲಿಗೆ ಬೇರೆಯವರಿಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ
ಸಿಟ್ಟಿಂಗ್ ಇರುವವರು ಸಿಟ್ಟಿಂಗ್ ಇರಬೇಕೆಂದಿಲ್ಲ, ಸ್ಟ್ಯಾಂಡಿಂಗ್ ಆಗಬಹುದು
ಬೇರೆಯವರು ಸಿಟ್ಟಿಂಗ್ ಆಗಬಹುದು ಕಾದುನೋಡೋಣ
ಸೀಟ್ ಹಂಚಿಕೆ ತೀರ್ಮಾನ ಮಾಡಿಲ್ಲ
ಆರ್ಪಿಐ ಕೂಡ ಹಾಸನವನ್ನು ಕೇಳುತ್ತಿದ್ದಾರೆ
ಗೆಲುವು ಒಂದೇ ಮಾನದಂಡ, ನಾವೆಲ್ಲ ಕುಳಿತು ತೀರ್ಮಾನ ಮಾಡ್ತಿವಿ
ಗಣಪತಿ ಮುಂದೆ ಹೇಳುತ್ತಿದ್ದೇನೆ, ಬಿಜೆಪಿಯ ಕಾರ್ಯಕರ್ತನೇ ಅಭ್ಯರ್ಥಿಯಾಗಿ ಅವರೇ ಬೆಂಬಲ ಕೊಡಬೇಕಾಗಿ ಬರಬಹುದು
ಗಣೇಶನ ಆಶೀರ್ವಾದ ಇದೆ, ಯಾರಿಗೆ ಗೊತ್ತು
ನಮ್ಮ ಆಚಾರ, ವಿಚಾರ ಒಪ್ಪಿಕೊಳ್ಳಲಿ
ನಾನು ಫ್ರೆಂಡ್ಲಿಯಾಗಿ ಹೋಗಲ್ಲ, ಅವರು ಬಂದಿರೋದು, ಅವರು ಫ್ರೆಂಡ್ಲಿಯಾಗಿ ಇರಬೇಕು
ನಮ್ಮ ಮನೆಗೆ ಗೆಸ್ಟ್ ಬಂದಿರೋದು, ಕಾಫಿ, ಟೀ, ಊಟನೂ ಕೊಡ್ತಿವಿ
ನಾವು ಕೊಡುವ ಮೆನು ಊಟ ಮಾಡಬೇಕಷ್ಟೇ
ಅವರು ನನಗೆ ಇದೇ ಬೇಕು, ಅದೇ ಬೇಕು ಅಂತ ಹೇಳಂಗಿಲ್ಲ
ಬಂದಿರೋದು ನಮ್ಮ ಮನೆಗೆ, ರಾಷ್ಟ್ರೀಯ ನಾಯಕರು ಹೇಳಿದ್ದಾರೆ ಗೆಸ್ಟ್ನ ಒಳ್ಳೆಯ ರೀತಿ ನೋಡಿಕೊಳ್ಳುತ್ತೇವೆ
ಅತಿಥಿ ಸತ್ಕಾರ ಮಾಡುತ್ತೇನೆ..
ಶಿವಮೊಗ್ಗ ಗಲಾಟೆ ಪ್ರಕರಣ ಹಾಗೂ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ವಿಚಾರ
ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಮಾಜಿಶಾಸಕ ಪ್ರೀತಂಗೌಡ ಆಕ್ರೋಶ
ಹಾಸನದಲ್ಲಿ ಶಾಸಕ ಪ್ರೀತಂಗೌಡ ಹೇಳಿಕೆ
ಶಿವಮೊಗ್ಗದಲ್ಲಿ ಪದೇ ಪದೇ ಜಿಹಾದಿ ಮನಸ್ಥಿತಿ, ದೇಶ ವಿರೋಧಿ ಇರುವಂತಹ ವ್ಯಕ್ತಿಗಳು ಇಡೀ ಸಮಾಜದ ಶಾಂತಿಯನ್ನು ಕದಡುವ ಕೆಲಸ ಮಾಡ್ತಿದ್ದಾರೆ
ಯಾರು ಮಂತ್ರಿಗಳಿಗೆ ಫೀಡ್ಬ್ಯಾಕ್ ಕೊಡ್ತಾರೋ, ಅವರ ಮನಸ್ಥಿತಿ ಏನಿದೆಯೋ ಗೊತ್ತಿಲ್ಲ
ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡ್ತಾರೆ, ಯಾಕೆ ಈ ಆತುರ
ಇವತ್ತು ರಾಗಿಗುಡ್ಡದಲ್ಲಿ ಆಗಿರುವುದು ನಾಳೆ ಹಾಸನದಲ್ಲಿ ಆದರೆ, ಬಿಟಿಎಂ ಲೇಔಟ್ನಲ್ಲಿ ಆದರೆ, ರಾಮಲಿಂಗಾರೆಡ್ಡಿ ಅವರ ಮನೆ ಮೇಲೆ ಆದರೆ ಯಾರೂ ಜವಾಬ್ದಾರರು
ಬೇಸಿಕ್ ಕಾಮನ್ಸೆನ್ಸ್ ಇಲ್ಲದೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ
ವೆಸ್ಟ್ಬೆಂಗಾಲ್ನಲ್ಲಿ ಏನು ನಡಿತಿದೆ, ಜಮ್ಮುಕಾಶ್ಮೀರನಲ್ಲಿ 370 ರದ್ದು ಮಾಡುವ ಮುಂಚೆ ಯಾವ ಪರಿಸ್ಥಿತಿ ಇತ್ತು ಆ ಪರಿಸ್ಥಿತಿ ಕರ್ನಾಟಕಕ್ಕೆ ತರಲು ಹೊರಟಿದ್ದಾರೆ
ರಾಮಲಿಂಗಾರೆಡ್ಡಿ ಅವರ ಹೇಳಿಕೆಯನ್ನು ಖಂಡಿಸುತ್ತೇನೆ
ನಿಮಗು ಮಕ್ಕಳು, ಮೊಮ್ಮಕ್ಕಳು, ಮುಂದಿನ ಪೀಳಿಗೆ ಇದೆ
ಅವರಿಗೆ ಸಮಾಜ ಒಳ್ಳೆಯ ರೀತಿ ಇರಬೇಕೆಂದರೆ ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಯಾವುದೇ ಧರ್ಮದಲ್ಲಿದ್ದರು ಸಹಿಸುವ ಕೆಲಸ ಮಾಡಬಾರದು
ಯಾರು ಹೇಳಿಕೆ ಕೊಡುತ್ತಿದ್ದಾರೆ ಅವರಿಗೆ, ಅವರ ಕುಟುಂಬಸ್ಥರು ಬುದ್ದಿ ಹೇಳಬೇಕು
ಬೇರೆಯವರಿಗೆ ಜ್ವರ ಬಂದಿದೆ ಎಂದು ಹಣೆ ಮುಟ್ಟಿ ನೋಡಿದರೆ ಟೆಂಪ್ರೇಚರ್ ಗೊತ್ತಾಗುತ್ತೆ
ಇವರೆಲ್ಲಾ ಎಸಿ ಕಾರಿನಲ್ಲಿ ಕುಳಿತಿರ್ತರೆ
ಪಕ್ಕದವನಿಗೆ ಜ್ವರ ಬಂದರೆ ನನ್ನ ಟೆಂಪ್ರೇಚರ್ ಸರಿ ಇದೆಯಾ ಅಂತ ಮುಟ್ಟಿ ನೋಡಿಕೊಳ್ತಾರೆ ಅದಲ್ಲ
ಪಕ್ಕದಲ್ಲಿ ಇರುವವರಿಗೆ ಬಂದಿರುವ ವೈರಲ್ ಫೀವರ್ ನಿಮಗೆ ಬರಲು ಎರಡು ದಿನ, ಇಪ್ಪತ್ತು ದಿನ, ಇಪ್ಪತ್ತು ವರ್ಷ ಬೇಕಾಗುತ್ತೆ
ರಾಮಲಿಂಗಾರೆಡ್ಡಿ ಅವರೇ ಸ್ವಲ್ಪ ಸಮಾಧಾನವಾಗಿರಿ
ರಾಮಲಿಂಗಾರೆಡ್ಡಿ ಅವರೇ ನಿಮಗೂ ಸಂಸಾರ ಇದೆ, ನಿಮಗೂ ಮಕ್ಕಳಿದ್ದಾರೆ, ಅವರಿಗೂ ಮಕ್ಕಳಿದ್ದಾರೆ
ಇನ್ನೂ ಹತ್ತು ವರ್ಷ ಆದ್ಮೇಲೆ ನಿಮ್ಮ ಈ ಮನಸ್ಥಿತಿ ಮುಂದುವರಿದರೆ ದೇಶ ಯಾವ ಸ್ಥಿತಿಗೆ ಹೋಗುತ್ತೆ
ಆಫ್ಘಾನಿಸ್ತಾನದಲ್ಲಿ, ಪಾಕಿಸ್ತಾನದಲ್ಲಿ ಏನಾಗುತ್ತಿದೆ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ವಾ
ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ
ಹಾಸನದಲ್ಲಿ ಮಾಜಿಶಾಸಕ ಪ್ರೀತಂಗೌಡ ಹೇಳಿಕೆ
ಬರಗಾಲ ಎರಡು ಮೂರು ವರ್ಷ ಸತತವಾಗಿರುತ್ತೆ
ಆದರೆ ನಾವು ಈ ವರ್ಷ ಎಷ್ಟು ನೀರು ಬೇಕು ಅಂತ ತಮಿಳುನಾಡು ಜೊತೆ ವಾದ ಮಾಡ್ತಿದ್ದೀವಿ
ಮುಂದಿನ ಎರಡು ಮೂರು ವರ್ಷಕ್ಕೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರದ ರೀತಿಯಲ್ಲಿ ಎಷ್ಟು ಟಿಎಂಸಿ ನೀರುವ ಬೇಕು ಎನ್ನುವ ಅಂಕಿ ಅಂಶವನ್ನು ಕೋರ್ಟ್ಗೆ ತಿಳಿಸಬೇಕು
ಮುಂದಿನ ವರ್ಷ ಮಳೆ ಬರುತ್ತೆ ಅಂತಾ ಯಾರಾದರೂ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರಾ, ಸರ್ಕಾರಕ್ಕೆ ಮಾಹಿತಿ ಇದೆಯಾ
ಯಾವತ್ತೂ ಕೂಡ ಸರ್ಕಾರ ನಡೆಸುವವರು ಮುಂದಿನ ಎರಡು ಮೂರು ವರ್ಷಗಳ ಬಗ್ಗೆ ಯೋಚನೆ ಮಾಡಿ ತಮ್ಮ ನಿರ್ಧಾರ ಮಾಡಬೇಕು
ಸರ್ಕಾರ ಸರಿಯಾಗಿ ಟ್ರಿಬ್ಯೂನಲ್ಗೆ ಅರ್ಥ ಮಾಡಿಕೊಡಬೇಕೆಂದು ಒತ್ತಾಯ ಮಾಡುತ್ತೇನೆ
ಬಿಜೆಪಿಯಿಂದ ಕಾಂಗ್ರೆಸ್ಗೆ ಹಲವು ನಾಯಕರು ಸೇರ್ಪಡೆ ವಿಚಾರ
ಕಾಂಗ್ರೆಸ್ ನಾಯಕರ ಹೇಳಿಕೆಗೆ ಮಾಜಿಶಾಸಕ ಪ್ರೀತಂಗೌಡ ತಿರುಗೇಟು
ಹಾಸನದಲ್ಲಿ ಮಾಜಿಶಾಸಕ ಪ್ರೀತಂಗೌಡ ಹೇಳಿಕೆ
ಕಾಂಗ್ರೆಸ್ನಿಂದ ಬಿಜೆಪಿಗೆ ಕರೆದುಕೊಂಡು ಬರಲು ಇನ್ನೂ ಯಾವ ನಾಯಕರ ಜೊತೆಗೂ ಮಾತನಾಡಿಲ್ಲ
ಮುಂದಿನ ದಿನಗಳಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ
ಪ್ರೀತಂಗೌಡಗೆ ಕಾಂಗ್ರೆಸ್ ಗಾಳ ವಿಚಾರ
ಪ್ರೀತಂಗೌಡ ರಾಜಕಾರಣ ಬಂದಿರುವುದು ತತ್ವ ಸಿದ್ದಾಂತದ ಆಧಾರದ ಮೇಲೆ, ಕೆಲಸ ಮಾಡಲು
ಆರು ಸಾವಿರ ಓಟು ಇದ್ದ ಪಕ್ಷಕ್ಕೆ ಬಂದಿದ್ದು, ಈಗ 78 ಸಾವಿರಕ್ಕೆ ಹೋಗಿದೆ
ಇದನ್ನು ಬಿಟ್ಟು ನಾಲ್ಕು ಸಾವಿರ ಓಟು ಪಡೆದ ಪಕ್ಷಕ್ಕೆ ಹೋಗ್ತಾರಾ
ನಾವೇ ಮನೆ ಕಟ್ಟಿ, ಬಣ್ಣ ಹೊಡೆದು ಗೃಹಪ್ರವೇಶ ಮಾಡಿ, ಬೇರೆ ಹೊಸ ಮನೆ ಕಟ್ಟುವ ಅವಶ್ಯಕತೆ ಏನಿದೆ
ನೆಂಟರು ಬಂದರು ಅಂತ ಹೇಳಿ ಬೇರೆ ಫಾರ್ಮ್ಹೌಸ್, ಗೆಸ್ಟ್ಹೌಸ್ಲಿ ಹೋಗಿ ಮಲಗಲ್ಲ
ನಮ್ಮ ಮನೆ ಯಜಮಾನಿಕೆ ಮಾಡಲು ಕಾರ್ಯಕರ್ತರಿದ್ದಾರೆ
ಬಂದಿರುವ ನೆಂಟರು ಸೋಮವಾರ ನಾನ್ವೆಜ್ ಕೇಳಿದ್ರೆ ಸಿಗಲ್ಲ, ಶನಿವಾರ ನಾನ್ವೆಜ್ ಇರಲ್ಲ
ಪಥ್ಯಗಳಿರುತ್ತೆ, ಇದು ನಮ್ಮ ಮನೆ ಪರಿಸ್ಥಿತಿ
ಅವರು ಬಂದು ನಾನ್ವೆಜ್ ಅಂದರೆ ರಾಂಗ್ ಅಡ್ರೆಸ್ಗೆ ಅಂತ
ಭಾರತೀಯ ಜನತಾ ಪಾರ್ಟಿಯಿಂದಲೇ ಹಾಸನದಲ್ಲಿ ಅಭ್ಯರ್ಥಿ ಆಗ್ತಾರೆ
ಜೆಡಿಎಸ್ ಅನಿವಾರ್ಯವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡ್ತಾರೆ, ಅದಕ್ಕೆ ನಾನು ಅವರಿಗೆ ಸ್ವಾಗತ ಕೋರಿದ್ದು
Crime
ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ – ಕಿಡ್ನಾಪರ್ಸ್ನ್ನು ಪತ್ತೆ ಹಚ್ಚಿದ ಪೊಲೀಸರು

ಹಾಸನ : ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ
ಕಿಡ್ನಾಪರ್ಸ್ನ್ನು ಪತ್ತೆ ಹಚ್ಚಿದ ಪೊಲೀಸರು
ನೆಲ್ಯಾಡಿ ಬಳಿ ತೆರಳುತ್ತಿದ್ದ ವೇಳೆ ಎಲ್ಲರೂ ಪೊಲೀಸರ ವಶಕ್ಕೆ
ಅರ್ಪಿತಳನ್ನು ರಕ್ಷಿಸಿ ಕಿಡ್ನಾಪ್ ಮಾಡಿದವರನ್ನು ವಶಕ್ಕೆ ಪಡೆದ ಪೊಲೀಸರು
ಹಾಸನ ನಗರ ಪೊಲೀಸ್ ಠಾಣೆಗೆ ಕರೆತರುತ್ತಿರುವ ಪೊಲೀಸರು
ಯುವತಿ ಅಪಹರಿಸಿ ಸೋಮವಾರಪೇಟೆ ಕಡೆ ಕರೆದೊಯ್ದಿದ್ದ ಖತರ್ನಾಕ್ ಕಿಡ್ನಾಪರ್ಸ್
ಪೊಲೀಸರಿಗೆ ಸಿಗದ ರೀತಿ ಪ್ಲಾನ್ ಮಾಡಿ ಅರ್ಪಿತಾಳನ್ನು ಕರೆದೊಯ್ಯಲು ಯತ್ನಿಸುತ್ತಿದ್ದ ರಾಮು ಮತ್ತು ತಂಡ
ಅಪರಹರಣಕ್ಕೊಳಗಾಗಿದ್ದ ಅರ್ಪಿತಾಳನ್ನು ರಕ್ಷಿಸಿ ರಾಮು ಮತ್ತು ತಂಡವನ್ನು ವಶಕ್ಕೆ ಪಡೆದು ಹಾಸನಕ್ಕೆ ಕರೆತರುತ್ತಿರುವ ಪೊಲೀಸರು
Hassan
ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ – ತವರು ಜಿಲ್ಲೆಯಿಂದಲೇ ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು

ಹಾಸನ: ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ
ತವರು ಜಿಲ್ಲೆಯಿಂದಲೇ ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು
ಡಿ.1 ರಂದು ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆಯಲ್ಲಿ ಮಹತ್ವದ ಸಭೆ
ಸಂಸದರು, ಶಾಸಕರು, ಜಿಪ-ತಾಪಂ ಮಾಜಿ ಸದಸ್ಯರು, ಮುಖಂಡರ ಸಭೆ ಕರೆದ ದೊಡ್ಡಗೌಡರು
ನಗರಸಭೆ,ಪುರಸಭೆ,ಪಟ್ಟಣ ಪಂಚಾಯ್ತಿ, ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೂ ಆಹ್ವಾನ
ತಮ್ಮ ಅಧ್ಯಕ್ಷತೆಯಲ್ಲೇ ನಡೆಯುವ ಸಭೆಗೆ ಪ್ರಮುಖರ ಆಹ್ವಾನ
ತಪ್ಪದೇ ಸಭೆಗೆ ಹಾಜರಾಗಿ ಪೂರಕ ಸಲಹೆ ಸೂಚನೆ ನೀಡುವಂತೆ ಸೂಚನೆ
ತವರು ಜಿಲ್ಲೆಯಿಂದಲೇ ಚುನಾವಣಾ ಪ್ರಕ್ರಿಯೆ ಆರಂಭಿಸುತ್ತಿರುವ ಹೆಚ್ಡಿಡಿ
Hassan
ಜ್ಞಾನ ಮನುಷ್ಯನನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆ – ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಚನ್ನರಾಯಪಟ್ಟಣ: ಜ್ಞಾನ ಮನುಷ್ಯನನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪುರಾಣ ಪ್ರಸಿದ್ದ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ 92 ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದೇಹ ಮಣ್ಣು ಸೇರಿದರು ಕೂಡ ಮನಸ್ಸು ಮನುಷ್ಯನನ್ನು ಹಿಂಬಾಲಿಸುತ್ತದೆ.
ಮನಸ್ಸಿಗೆ ಸರಿಯಾದ ಸಂಸ್ಕಾರವನ್ನು ನೀಡಬೇಕು ಭಕ್ತಿ ಮತ್ತು ಶ್ರದ್ದೆಯನ್ನು ಇಟ್ಟುಕೊಂಡು ಬದುಕಬೇಕು.
ಅಶಿಸ್ತಿನ ಬದುಕನ್ನು ತೊರೆದು ನಿಸ್ವಾರ್ಥದೊಂದಿಗೆ ಸನ್ಮಾರ್ಗದಲ್ಲಿ ನಡೆದರೆ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ. ಒಬ್ಬರಿಗೊಬ್ಬರು ಸಹಾಯ ಮಾಡುವುದೇ ಮಾನವೀಯ ಧರ್ಮ. ಆದರೆ ನಾವು ಮಾಡುವ ದಾನ ಪಡೆದವರಿಗೆ ಸಾರ್ಥಕವಾಗಬೇಕೆ ಹೊರತು ಹೊರೆಯಾಗಬಾರದು. ಬದುಕು ಕಟ್ಟಿಕೊಳ್ಳಲು ದಾರಿಯಾಗಿರಬೇಕು ಎಂದರು.
ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಯುತ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ನಾವು ಎಷ್ಟೆಲ್ಲ ದುಡಿದಿದ್ದೇವೆ, ಏನೆಲ್ಲ ಸಂಪಾದಿಸಿದ್ದೇವೆ ಎಂದು ಎಣಿಸುವ ಬದಲು ದುಡಿದ ಹಣವನ್ನು ಯಾವ ಧರ್ಮ ಕಾರ್ಯಕ್ಕೆ ಎಷ್ಟು ವಿನಿಯೋಗಿಸಿದ್ದೇವೆ ಎಂಬುದನ್ನು ಅರಿಯಬೇಕು. ಕುಡಿಕೆ ತುಂಬುವಷ್ಟು ಕೂಡಿಟ್ಟು ಸ್ವಾರ್ಥ ಬದುಕು ನಡೆಸುವುದಕ್ಕಿಂತ ಧರ್ಮ ಕಾರ್ಯಗಳಿಗೆ ನಿಸ್ವಾರ್ಥದಿಂದ ಬಳಸುವುದು ಒಳಿತು ಎಂದರು.
ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಬಸವೇಶ್ವರಸ್ವಾಮಿಯ ದೇಗುಲ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಾಗಿದ್ದು ಈಗಾಗಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಗರ್ಭಗುಡಿ ನಿರ್ಮಾಣಕ್ಕೆ 10 ಲಕ್ಷ ರೂ. ಸಮರ್ಪಿಸುತ್ತೇನೆ ಎಂದು ತಿಳಿಸಿದರು.
ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 2023 ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ 4 ಸರ್ಕಾರಿ ಫ್ರೌಢಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಇದೇ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪುಷ್ವವೃಷ್ಟಿ ನೆರವೇರಿಸಿ ಗುರುವಂದನೆ ಸಲ್ಲಿಸಲಾಯಿತು. ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಸದಸ್ಯೆ ಸುಮಾ, ದಿಡಗ ಗ್ರಾಪಂ ಅಧ್ಯಕ್ಷ ಎನ್.ಆರ್.ರತ್ನರಾಜ್, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಗುಡಿಗೌಡ ಪ್ರಕಾಶ್, ಗಣೇಶ್ಗೌಡ ಇತರರು ಇದ್ದರು.
ದಯಾನಂದ್ ಶೆಟ್ಟಿಹಳ್ಳಿ.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ