Connect with us

Kodagu

ಪ್ರಥಮ ಮತದಾನ : ದೇಶದ ಅಭಿವೃದ್ಧಿ ಗಾಗಿ : ವಿದ್ಯಾರ್ಥಿ ಪ್ರೀತಿ 

Published

on

ಸಾಲಿಗ್ರಾಮ : ಪ್ರಥಮ   ಮತದಾನ ಮಾಡುವ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಖುಷಿ ಯಾಗಿದೆ. ಮತದಾನ ಮಾಡುತ್ತಿರುವ ಬಗ್ಗೆ ಹೆಮ್ಮೆ ಇದೆ. ಎಂದು ಪ್ರಥಮ ಮತದಾನ ಮಾಡಿದ ವಿದ್ಯಾರ್ಥಿ ಪ್ರೀತಿ ಹೇಳಿದರು.

ಸಾಲಿಗ್ರಾಮ ಪಟ್ಟಣದಲ್ಲಿ ಮತದಾನ ಮಾಡಿ ಮಾತನಾಡಿದ ಇವರು ದೇಶದ ಅಭಿವೃದ್ಧಿ ಹಾಗೂ ಉತ್ತಮ ಸರ್ಕಾರ ರಚನೆಗೆ ಒಂದೊಂದು ಮತವು ಅಮೂಲ್ಯ,  ನನ್ನ ಮತದ ಮೌಲ್ಯವನ್ನು ಅರಿವು ಮತಗಟ್ಟೆಗೆ ಹೋಗಿ ಸೂಕ್ತ ಅಭ್ಯರ್ಥಿ ಗೆ ಮತ ಮಾಡಿರುತ್ತೇನೆ.

ದೇಶದ ಅಭಿವೃದ್ಧಿ ಯಲ್ಲಿ ಯುವ ಶಕ್ತಿಯ ಪಾತ್ರ ಎಷ್ಟು ಮುಖ್ಯವೊ, ಚುನಾವಣೆ ಯಲ್ಲಿ ಅರ್ಹ ಅಭ್ಯರ್ಥಿ ಆಯ್ಕೆ ಯೂ ಅಷ್ಟೆ ಮುಖ್ಯ,ಅದಕ್ಕೆ ಸಂವಿಧಾನ ನೀಡಿರುವ ಪ್ರಮುಖ ಅಸ್ತ್ರವೇ ಮತದಾನ, ಪ್ರಪ್ರಥಮ ಬಾರಿಗೆ ಲೋಕಸಭೆಯ ಮತದಾನದ ಹಕ್ಕು ಪಡೆದಿರುವ ನಾವುಗಳು   ಮತದಾನ ಮಾಡಿದೆವು ತುಂಬಾ ಖುಷಿಯಾಗಿದೆ ಎಂದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಕೇಂದ್ರ ಸರಕಾರದ ಹೊಸ ಜಿಎಸ್‌ಟಿ ನೀತಿಯಿಂದ ಕಾಫಿ ಉದ್ಯಮಕ್ಕೆ ಹೊಡೆತ

Published

on

ಮಡಿಕೇರಿ: ಜಾಗತಿಕ ವಾಣಿಜ್ಯ ವ್ಯವಹಾರದಲ್ಲಿ ಕಾಫಿ ಬೇಡಿಕೆ ಕಡಿಮೆಯಾಗಿರುವುದರಿಂದ ಕಾಫಿ ಬೆಲೆಯಲ್ಲಿ ಭಾರೀ ಏರಿಳಿತವಾಗುತ್ತಿದೆ. ಇದರ ನಡುವೆಯೇ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಜಿಎಸ್‌ಟಿ ನೀತಿಯಿಂದ ಕಾಫಿ ಉದ್ಯಮಕ್ಕೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಫಿ ಬೆಲೆಯಲ್ಲಿನ ಅತಂತ್ರತೆ ಮತ್ತು ಅಮೆರಿಕ ದೇಶ ಭಾರತದ ಮೇಲೆ ವಿಧಿಸಿರುವ ಶೇ.೫೦ರಷ್ಟು ರಫ್ತು ಸುಂಕದಿಂದ ಕಾಫಿ ಉದ್ಯಮ ಹಾಗೂ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವರು ಘೋಷಣೆ ಮಾಡಿರುವ ಹೊಸ ಜಿಎಸ್‌ಟಿ ನೀತಿಯಲ್ಲಿ caffeined Beverages ಮೇಲೆ ಶೇ.೪೦ರಷ್ಟು ತೆರಿಗೆ ವಿಧಿಸಿದ್ದು, ಇದು ದೇಶೀಯ ಉತ್ಪಾದನೆಯ ಬೇಡಿಕೆ ಮೇಲೆ ಹೊಡೆತ ಬೀಳಲಿದೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಕಾಫಿ ಬೆಳೆಗಾರರು, ಉದ್ಯಮಗಳು ಹಾಗೂ ರಪ್ತು ವಲಯ ತೀವ್ರ ಸ್ವರೂಪದ ಸಂಕ?ಕ್ಕೆ ಸಿಲುಕುವ ಸಾಧ್ಯತೆಗಳಿದ್ದು, ಕೇಂದ್ರ ಸರಕಾರ ಕಾಫಿ ಬೆಳೆಗೆ ಸಂಬಂಧಸಿದ ತೆರಿಗೆಯನ್ನು ತಕ್ಷಣ ಪರಿ?ರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Continue Reading

Kodagu

ಮತಾಂತರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಪರಿವಾರ ಸಂಘಟನೆಯಿಂದ ಜಾಥ

Published

on

ಮಡಿಕೇರಿ: ಮತಾಂತರ ಪಿಡುಗಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಪರಿವಾರ ಸಂಘಟನೆಯ ಪ್ರಮುಖರು ಗೋಣಿಕೊಪ್ಪದಲ್ಲಿ ಪ್ರತಿಭಟನಾ ಜಾಥ ನಡೆಸಿದರು.
ಶ್ರೀ ಮಹಾಲಕ್ಷ್ಮಿ ದೇವಾಲಯದ ಆವರಣದಿಂದ ಆತೂರು ವರೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರು ಇತ್ತೀಚೆಗೆ ಖಾಸಗಿ ಶಾಲೆಯ ಸಭಾಂಗಣವೊಂದರಲ್ಲಿ ಮತಾಂತರದ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.


ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯಕಾರಿಣಿಯ ಪ್ರಮುಖ ಕುಕ್ಕೇರ ಅಜಿತ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಮತಾಂತರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಖಾಸಗಿ ಶಾಲೆಯ ಸಭಾಂಗಣದಲ್ಲಿ ನಡೆದ ಮತಾಂತರ ಪ್ರಯತ್ನದ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ವಿಶ್ವ ಹಿಂದೂ ಪರಿಷತ್, ಪರಿವಾರ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡು ಮತಾಂತರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Continue Reading

Kodagu

ಕುಶಾಲನಗರ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ . 1.26 ಕೋಟಿ ನಿವ್ವಳ ಲಾಭ.

Published

on

ವರದಿ.ಟಿ.ಆರ್.ಪ್ರಭುದೇವ್
ಕುಶಾಲನರ : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವು 104 ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು ಸತತವಾಗಿ 8 ವರ್ಷಗಳಿಂದ ಕೋಟಿಗೂ ಮೀರಿ ಲಾಭಗಳಿಸುತ್ತಿದ್ದು,2024-25ನೇ ಸಾಲಿನಲ್ಲಿ ರೂ. 259.30 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ. 1.26 ಕೋಟಿ ನಿವ್ವಳ ಲಾಭಗಳಿಸಿ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.
ಗುರುವಾರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಕಳೆದ ಸಾಲಿನಲ್ಲಿ 3604 ಸದಸ್ಯರಿಂದ ರೂ. 358.39 ಲಕ್ಷಗಳ ಪಾಲುಹಣ ಸಂಗ್ರಹಿಸಿದ್ದು, ಈ ವರ್ಷ ರೂ.400.67 ಲಕ್ಷಗಳ ಪಾಲುಹಣ ಸಂಗ್ರಹ ಮಾಡಲಾಗಿದೆ.ಪ್ರಸಕ್ತ ಸಾಲಿನಲ್ಲಿ ದುಡಿಯುವ ಬಂಡವಾಳ ರೂ 7853.02 ಲಕ್ಷಗಳಷ್ಟು ಕ್ರೋಢೀಕರಿಸಿ ರೂ 896.59 ಲಕ್ಷಗಳ ಹೆಚ್ಚಿಗೆ ಸಂಗ್ರಹ ಮಾಡಿರುತ್ತೇವೆ. ವಿವಿಧ ಠೇವಣಿಗಳ ರೂಪದಲ್ಲಿ ರೂ. 5763.26 ಲಕ್ಷಗಳನ್ನು ಠೇವಣಿ ಹೊಂದಿದ್ದು, ಕಳೆದ ಸಾಲಿಗಿಂತ ಅಧಿಕ ರೂ 300.41 ಲಕ್ಷಗಳ ಠೇವಣಿ ಸಂಗ್ರಹಿಸಿದ್ದು, ಇದು ಸಂಘ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸಂಘದ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲೆ ಇಟ್ಟಿರುವ ಅಭಿಮಾನವೇ ಇದಕ್ಕೆ ಸಾಕ್ಷಿಯಾಗಿರುತ್ತದೆ ಎಂದರು.

ಸದಸ್ಯರಿಗೆ ಕೆ.ಸಿ.ಸಿ ಸಾಲ ರೂ. 105.06 ಲಕ್ಷಗಳನ್ನು ಪಾವತಿಸಿದ್ದು, ಇನ್ನೂ ಕೆಲವು ಸದಸ್ಯರಿಗೆ ಸಾಲ ವಿತರಿಸಲು ಕ್ರಮ ತೆಗೆದುಕೊಂಡಿರುತ್ತೇವೆ. ಈ ಸಾಲಿನಲ್ಲಿ ವಿವಿಧ ಸಾಲಗಳ ರೂಪದಲ್ಲಿ ರೂ. 5000.78 ಲಕ್ಷಗಳನ್ನು ವಿತರಿಸಿದ್ದು ರೂ. 734.04 ಲಕ್ಷಗಳ ಹೆಚ್ಚಿಗೆ ಸಾಲ ವಿತರಿಸಿರುತ್ತೇವೆ. ಸಂಘದ ಸ್ವಂತ ಬಂಡವಾಳದಿಂದ ರೂ. 40 ಲಕ್ಷಗಳನ್ನು ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆ ಎಂದರು.
ರೂ 490.87 ಲಕ್ಷಗಳು ಕ್ರೋಡಿಕೃತವಾಗಲಿದ್ದು, ಕ್ಷೇಮನಿಧಿ ಮೊಬಲಗನ್ನು ಪೂರ್ತಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾಗುವುದು ಮತ್ತು ಕಟ್ಟಡ ನಿಧಿ ರೂ 388.20 ಲಕ್ಷಗಳಿದ್ದು 2024-2025 ನೇ ಸಾಲಿನ ಲಾಭ ವಿಲೇವಾರಿಯಲ್ಲಿ ರೂ.47.93 ಲಕ್ಷ ಸೇರಿ ಕಟ್ಟಡ ನಿಧಿಯಲ್ಲಿ ಒಟ್ಟು ರೂ.436.13 ಲಕ್ಷಗಳಿದ್ದು ಈ ಮೊಬಲಗು ಸಂಘವು ಉದ್ದೇಶಿಸಿರುವ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.

ಸದಸ್ಯರಿಗೆ ಕಳೆದ 13 ವರ್ಷಗಳಿಂದ ಶೇ.16 ರಿಂದ ಶೇ.25 ಡಿವಿಡೆಂಡ್ ನೀಡುತ್ತಿದ್ದು, ಸಂಘವು ಸದಸ್ಯರ ಅನುಕೂಲಕೋಸ್ಕರ ತ್ಯಾಗರಾಜ ರಸ್ತೆಯಲ್ಲಿರುವ 8.60 ಸೆಂಟ್ಸ್ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಸುಲಲಿತವಾಗಿ ಸದಸ್ಯರ ಸೇವೆಗೆ ಅನುಕೂಲವಾಗುವಂತೆ ವ್ಯವಹಾರವನ್ನು ನಡೆಸುತ್ತಿದ್ದೇವೆ. ಸಂಘದ ‘ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ 25 ರೀತಿಯ ವಿವಿಧ ಸಾಲಗಳನ್ನು ಅತೀ ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಪ್ರತಿ ಸದಸ್ಯನ ಕೊಡುಗೆ ಕೂಡ ಇರುವುದು.

ಈ ಸಾಲಿನಲ್ಲಿ ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ. ಸದಸ್ಯರು ಸಹಕರಿಸಬೇಕೆಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಕೋರಿಕೊಂಡಿರುತ್ತೇವೆ.

ಹಿಂದಿನ ಸಾಲುಗಳಲ್ಲಿ ಸಾಲಗಾರ ಸದಸ್ಯರಿಗೋಸ್ಕರ ಹೊಸದಾಗಿ ಸಾಲಗಾರ ಸದಸ್ಯರ ಮರಣೋತ್ತರ ಪರಿಹಾರ ನಿಧಿಯ ಯೋಜನೆಯನ್ನು ಸಂಘದಲ್ಲಿ ಪ್ರಾರಂಭಿಸಿದ್ದು ಈ ಯೋಜನೆಗೆ ಸದಸ್ಯರು ಉತ್ತಮ ಪ್ರತಿಕ್ರಿಯೆಯನ್ನು ಹೊಂದಿದ್ದು ಕೇವಲ 4 ವರ್ಷಗಳಲ್ಲಿ ಸದಸ್ಯರ ಠೇವಣಿ ಮತ್ತು ಸದಸ್ಯರು ತೊಡಗಿಸಿರುವ ಠೇವಣಿಯನ್ನು ಸಂಘದಲ್ಲಿ ಅತೀ ಹೆಚ್ಚಿನ ಬಡ್ಡಿದರದಲ್ಲಿ ತೊಡಗಿಸಿಕೊಂಡಿದ್ದು ವರದಿ ಸಾಲಿಗೆ ಈ ಮೊಬಲಗು ರೂ 76.50 ಲಕ್ಷಗಳಾಗಿದ್ದು, ಮರಣ ಹೊಂದಿದ ಸದಸ್ಯರ ಸಾಲವನ್ನು ಅವರ ಕುಟುಂಬಸ್ಥರು ಮರುಪಾವತಿಸುವಾಗ ಈ ನಿಧಿಯಿಂದ ನಿಯಾಮಾನುಸಾರ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ನಿಗಧಿ ಮಾಡಿರುವ ಹಾಲಿ ಸದಸ್ಯರು ಸದ್ರಿ ನಿಧಿಯಲ್ಲಿ ಹೂಡಿರುವ ಮೊತ್ತಕ್ಕೆ ಈ ಹಿಂದೆ ನಿಗದಿಪಡಿಸಿದ್ದ 7 ಪಟ್ಟು ಮೊತ್ತಕ್ಕೆ ಬದಲಾಗಿ 9 ಪಟ್ಟು ಮೊತ್ತವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡಿ ಮೃತ ಸಾಲಗಾರ ಸದಸ್ಯನ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದ ಈ ನಿಧಿ ಅನುಕೂಲವಾಗುವುದೆಂದು ತಿಳಿಯಪಡಿಸುತ್ತೇವೆ.
ಸಂಘದ ಸದಸ್ಯರು ಮರಣ ನಿಧಿಯ ಪೂರ್ಣ ಪ್ರಮಾಣದ ವಂತಿಕೆಯನ್ನು ಪಾವತಿಸಿದ್ದಲ್ಲಿ, ಅಂದರೆ 60 ವರ್ಷ ಒಳಪಟ್ಟವರು ರೂ.1,000 ಮತ್ತು 60 ವರ್ಷ ಮೇಲ್ಪಟ್ಟವರು ರೂ.1,500 ವಂತಿಕೆ ಪಾವತಿಸಿದ್ದಲ್ಲಿ, ಅಂತಹ ಸದಸ್ಯರು ಮೃತಹೊಂದಿದ ಸಂದರ್ಭದಲ್ಲಿ ವಂತಿಕೆ ಸೇರಿಸಿ ರೂ.10,000/- ಗಳನ್ನು ಮರಣ ಪರಿಹಾರ ನಿಧಿಯಿಂದ ಮೃತ ಹೊಂದಿದವರ ಅಂತ್ಯಕ್ರಿಯೆ ಕಾರ್ಯಗಳಿಗೆ ಪರಿಹಾರ ಧನವನ್ನಾಗಿ ನೀಡುತ್ತಿರುತ್ತೇವೆ ಎಂದರು.


ವನಿತಾ ಬಂಧು ಮತ್ತು ಜನಚೈತನ್ಯ ಎಂಬ ಜಂಟಿ ಭಾದ್ಯತಾ ಗುಂಪು ಸಾಲ ಯೋಜನೆಯು ಯಶಸ್ವಿಯಾಗಿದ್ದು ಈ ಯೋಜನೆಯಡಿಯಲ್ಲಿ ಒಟ್ಟು 887 ಮಹಿಳೆಯರಿಗೆ ವರದಿ ಸಾಲಿನಲ್ಲಿ ರೂ 5.83 ಕೋಟಿ ಸಾಲ ವಿತರಿಸಿದ್ದು ವಾರ್ಷಿಕ ಅಂತ್ಯಕ್ಕೆ ಒಟ್ಟಾಗಿ 6.52 ಕೋಟಿ ಬರಲು ಬಾಕಿಯಿದ್ದು ಈ ಸಾಲದ ಯೋಜನೆಯಿಂದ ಎಲ್ಲಾ ವರ್ಗದ ಮಹಿಳೆಯರು ಆರ್ಥಿಕ ಸಬಲತೆಯತ್ತ ಹೋಗುತ್ತಿರುವುದು ಸಂಘಕ್ಕೆ ಒಂದು ಹೆಗ್ಗಳಿಕೆಯ ವಿಚಾರವಾಗಿರುತ್ತದೆ ಎಂದು ತಿಳಿಸಿದರು.
ಸದಸ್ಯರಿಗೆ ಜಾಮೀನು ಸಾಲದ ಮಿತಿ ರೂ 3 ಲಕ್ಷ,ಮದ್ಯಮಾವಧಿ ಗಿರ್ವಿ ಸಾಲ, ಮನೆ ರಿಪೇರಿ, ಮನೆ ಕಟ್ಟಲು ಮನೆ ಅಡಮಾನ ರೂ 15 ರಿಂದ 50 ಲಕ್ಷ,ನಿವೇಶನ,ಕಟ್ಟಡ,ವಾಣಿಜ್ಯ ಮಳಿಗೆ ವಾಸದ ಮನೆ ಖರೀದಿ ಮತ್ತು ನೂತನ ಗೃಹ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಸಾಲ ರೂ 50 ಲಕ್ಷ ,ವ್ಯಾಪಾರ, ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲು ವ್ಯಾಪಾರಾಭಿವೃದ್ಧಿ ದೀರ್ಘಾವದಿ ಸಾಲ ರೂ 50 ಲಕ್ಷ , ಹೊಸ ವಾಹನ ಖರೀದಿ ರೂ 25 ಲಕ್ಷ , ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ ವ್ಯಾಪಾರ ಮೀರಳತೆ ಸಾಲ ರೂ 50 ಲಕ್ಷ ,ವ್ಯಾಪಾರಭಿವೃದ್ಧಿ ಸಲಾ 3 ಲಕ್ಷ ,ವನಿತಾ ಬಂಧು ಮಹಿಳಾ ಗುಂಪು ಸಾಲ 2.5 ಲಕ್ಷ,ಸ್ವ-ಸಹಾಯ ಗುಂಪು ಸಾಲ 15 ಲಕ್ಷ , ಭದ್ರತಾ ಠೇವಣಿ ಸಾಲ-ಭದ್ರತಾ ಠೇವಣಿಯ ಮೇಲೆ 80% ರಷ್ಟು ಸಾಲ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಸದುಪಯೋಗ ನಮ್ಮ ಸದಸ್ಯರು ಸಾಲಗಳನ್ನು ಪಡೆದುಕೊಂಡು ಪಡಿಸಿಕೊಳ್ಳಬೇಕಾಗಿಯೂ ಹಾಗೂ ಪಡೆದುಕೊಂಡಂತಹ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕಾಗಿ ಮನವಿ ಮಾಡಿದರು.


ಸಂಘದಲ್ಲಿ ತೊಡಗಿಸಿರುವ ನಿರಖು ಠೇವಣಿಗೂ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಿಗೆ ಶೇಕಡಾ 0.25 ಹೆಚ್ಚಿನ ಬಡ್ಡಿ ನೀಡುತ್ತಿದ್ದೇವೆ. ಸಂಘದ ನೂತನ ಕಟ್ಟಡದಲ್ಲಿ ಆರ್.ಬಿ.ಐ. ಮಾನದಂಡದಂತೆ ನಿರ್ಮಾಣ ಮಾಡಿರುವ ಭದ್ರತಾ ಕೊಠಡಿಯೊಳಗೆ ಲಾಕ‌ರ್ ಸೌಲಭ್ಯವು ಸದಸ್ಯರು ಮತ್ತು ಗ್ರಾಹಕರಿಗೆ ದೊರೆಯುತ್ತದೆ.
ಪ್ರತಿ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಮಕ್ಕಳ ಪೈಕಿ 10ನೇ ತರಗತಿ, ದ್ವಿತೀಯ ಪಿ.ಯು.ಸಿ., ಅಂತಿಮ ಪದವಿ ಪರೀಕ್ಷೆ, ಡಿಪ್ಲೊಮ ಮತ್ತು ಕೊನೆಯ ಇಂಜಿನಿಯರಿಂಗ್ ಪರೀಕ್ಷೆ, ವೈದ್ಯಕೀಯ ಪದವೀಧರರಿಗೂ ಉತ್ತಮ ಅಂಕಗಳಿಸಿರುವಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ಕಳೆದ 15 ವರ್ಷಗಳಿಂದಲೂ ನೀಡುತ್ತಿದ್ದೇವೆ. ಸದಸ್ಯರ ಮಕ್ಕಳು ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವ ಕ್ರೀಡಾಸ್ಪರ್ಧಿಗಳಿಗೆ ಬಹುಮಾನ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.


ಸಂಘವು ಶತಮಾನೋತ್ಸವ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರಿನಲ್ಲಿ 2 ಎಕರೆ ನಿವೇಶನದಲ್ಲಿ ಇದೀಗ ಶತಮಾನೋತ್ಸವ ಭವನ ಕಟ್ಟಡ ಕಾಮಗಾರಿಯು ನಡೆಯುತ್ತಿದ್ದು, ಮುಂದಿನ ವರ್ಷ ಅಂದರೆ 2026 ರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಉದ್ಘಾಟನೆ ಮಾಡುವವರಿದ್ದೇವೆ ಎಂದು ತಮಗೆಲ್ಲ ಅತಿ ಹರ್ಷದಿಂದ ತಿಳಿಸುತ್ತಿದ್ದೇವೆ ಎಂದರು.
ಮಹಾಸಭೆ : ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.7ರಂದು ಭಾನುವಾರ ಪೂರ್ವಾಹ್ನ 11.00 ಗಂಟೆಗೆ ಸಂಘದ ಅಧ್ಯಕ್ಷ ಟಿ.ಆ‌ರ್ ಶರವಣಕುಮಾರ್‌ರವರ ಅಧ್ಯಕ್ಷತೆಯಲ್ಲಿ ಗಾಯಿತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಮಹಾಸಭೆ ನಡೆಯಲಿದೆ. ಮಹಾಸಭೆಗೆ ಸರ್ವ ಸದಸ್ಯರು ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಮಹಾಸಭೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಶರವಣಕುಮಾರ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ವಿ.ಎಸ್.ಅನಂದ್ ಕುಮಾರ್, ಯತೀಶ್,ಎಂ.ವಿ.ರಾಜೇಶ್,ಎಂ.ಎಂ.ಚರಣ್,ಕೆ.ಎನ್.ದೇವರಾಜ್, ಬಿ.ರಾಮಕೃಷ್ಣ, ಕವಿತಾ,ಎಚ್.ಎಂ.ಮಧುಸೂದನ್,. ಮಹಮ್ಮದ್ ಇಬ್ರಾಹಿಂ, ಪ್ರಸನ್ನ,ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಭಾಗವಹಿಸಿದ್ದರು.

Continue Reading

Trending

error: Content is protected !!