Connect with us

Mysore

ಪ್ರಕೃತಿಯೊಂದಿಗೆ ಮಾನವ ಅವಿನಾಭಾವ ಹೊಂದಿ, ಗಿಡ, ಮರ ಬೆಳೆಸಿ : ಇ ಒ ಹರೀಶ್ ಮನವಿ ಎಸ್ ಬಿ ಹರೀಶ್ ಸಾಲಿಗ್ರಾಮ

Published

on

ಹಸಿರು ನಮ್ಮ ಉಸಿರು, ಪ್ರಕೃತಿ ಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮಾನವರಾದ ನಾವು ಗಿಡ ಮರಗಳನ್ನು ನೆಟ್ಟು, ಬೆಳೆಸಿ, ಜೋಪಾನ ಮಾಡಿ ಎಂದು ತಾಲೂಕು ಪಂಚಾಯತಿ ಇ ಒ ಮನವಿ ಮಾಡಿದರು.
ಸಾಲಿಗ್ರಾಮ ತಾಲೂಕು ಭೇರ್ಯ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಪಂಚಾಯತಿ ಮತ್ತು ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನೀರೆಳೆದು ಮಾತನಾಡಿದ ಅವರು ಮಾನವರಾದ ನಾವು ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ ನಡೆಸಿ ಮರ ಗಿಡಗಳನ್ನು ಕಡಿದು ಕಾಡನ್ನು ನಾಶ ಮಾಡಿ, ಮನೆಗಳನ್ನು ಹಾಗೂ ಬಡಾವಣೆಗಳನ್ನು ನಿರ್ಮಿಸುತ್ತಿರುವುದರಿಂದ ಕಾಲ ಕಾಲಕ್ಕೆ ಮಳೆಯಾಗಿ ಉತ್ತಮವಾದ ಬೆಳೆಯಾಗದೆ ರೈತಾಪಿ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.


ಕಾಡಿದ್ದರೆ, ನಾಡು, ಗಿಡಮರ ಗಳಿಂದ ಉತ್ತಮವಾದ ಮಳೆಯಾಗುತ್ತದೆ ಎಂಬ ಸತ್ಯವನ್ನು ಅರಿತು ಪರಿಸರ ನಾಶವನ್ನು ತಡೆಯಲು ನಾವುಗಳು ಎಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.
ಅರಣ್ಯ ಇಲಾಖೆಯವರಾದ ಹರಿಪ್ರಸಾದ್, ಜಯಲಕ್ಷ್ಮಿ, ರಶ್ಮಿ,ಶೇಷಾದ್ರಿ, ಪಿ ಡಿ ಒ ಪ್ರತಾಪ್,ಮಂಜುಳಮ್ಮ, ರತ್ನಮ್ಮ ಇನ್ನಿತರರು ಇದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Mysore

ಖೋ-ಖೋ ವಿಶ್ವಕಪ್‌ನಲ್ಲಿ ಮೈಸೂರಿನ ಕುವರಿ ಕಮಾಲ್‌: ಜನವರಿ 21ರಂದು ತಿ.ನರಸೀಪುರದಲ್ಲಿ ಚೈತ್ರೋತ್ಸವ

Published

on

ತಿ.ನರಸೀಪುರ: ಇದೇ ಜನವರಿ 19 ರಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನೇಪಾಳ ನಡುವಿನ ಖೋ-ಖೋ ವಿಶ್ವಕಪ್‌ 2025ರ ಫೈನಲ್ಸ್‌ನಲ್ಲಿ ಭಾರತ ತಂಡದ ಗೆದ್ದು ಬೀಗಿತ್ತು.

ಈ ವಿಶ್ವಕಪ್‌ ವಿಜೇತ ಮಹಿಳಾ ತಂಡದಲ್ಲಿ ಮೈಸೂರಿನ ಯುವತಿ ಚೈತ್ರ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸಳೆದಿದ್ದರು.

ಮೂಲತಃ ಮೈಸೂರು ಜಿಲ್ಲೆಯ ನರಸೀಪುಪರ ತಾಲೂಕಿನ ಚೈತ್ರಾ ಅವರ ಸಾಧನೆ ಕೊಂಡಾಡಲು ಚೈತ್ರೋತ್ಸವ ಕಾರ್ಯಕ್ರಮಕ್ಕೆ ಟಿ ನರಸೀಪುರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದೇ ಜನವರಿ 21ರಂದು ಟಿ ನರಸೀಪುರಕ್ಕೆ ಚೈತ್ರಾ ಅವರು ಆಗಮಿಸುತ್ತಿದ್ದು, ಈ ವೇಳೆ ಚೈತ್ರಗೆ ಅದ್ದೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಲಾಗಿದೆ.

ಈ ಸಂಬಂಧ ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳಿಂದ ಸುದ್ದಿಗೋಷ್ಠಿ ನಡೆಸಿದ್ದು, ಭಾರತ ಮಹಿಳಾ ಖೋ ಖೋ ತಂಡದಲ್ಲಿ ನಮ್ಮ ತಾಲ್ಲೂಕಿನ ಕ್ರೀಡಾಪಟು ಚೈತ್ರ ಆಟವಾಡಿದ್ದಾರೆ. ಇದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ. ಭಾರತ ಮಹಿಳಾ ಖೋ ಖೋ ತಂಡಕ್ಕೆ ವಿಶ್ವಕಪ್ ಸಿಕ್ಕಿದೆ. ಜನವರಿ 21ರಂದು ಟಿ ನರಸೀಪುರಕ್ಕೆ ಚೈತ್ರ ಆಗಮಿಸುತ್ತಿದ್ದಾರೆ.ಈ ವೇಳೆ ಖಾಸಗಿ ಬಸ್ ನಿಲ್ದಾಣದಿಂದ ವಿದ್ಯೋದಯ ಕಾಲೇಜು ವೃತ್ತದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ ಎಂದು ಮುಖಂಡರು ಮಾಹಿತಿ ನೀಡಿದರು.

Continue Reading

Mysore

ಖೋ ಖೋ ವಿಶ್ವಕಪ್ ನಲ್ಲಿ ಮೈಸೂರಿನ ಯುವತಿ ಚೈತ್ರ ಉತ್ತಮ ಪ್ರದರ್ಶನ.

Published

on

ಭಾರತ ಮಹಿಳಾ ಖೋ ಖೋ ತಂಡಕ್ಕೆ ಫೈನಲ್ ನಲ್ಲಿ ಭರ್ಜರಿ ಗೆಲುವು ಹಿನ್ನೆಲೆ.
ಖೋ ಖೋ ವಿಶ್ವಕಪ್ ನಲ್ಲಿ ಮೈಸೂರಿನ ಯುವತಿ ಚೈತ್ರ ಉತ್ತಮ ಪ್ರದರ್ಶನ.
ಚೈತ್ರೋತ್ಸವ ಕಾರ್ಯಕ್ರಮಕ್ಕೆ ಟಿ ನರಸೀಪುರದಲ್ಲಿ ಸಿದ್ಧತೆ.
ಜನವರಿ 21ರಂದು ಟಿ ನರಸೀಪುರಕ್ಕೆ ಆಗಮಿಸುವ ಚೈತ್ರ.
ಈ ವೇಳೆ ಚೈತ್ರಗೆ ಅದ್ದೂರಿ ಸ್ವಾಗತ ಕೋರಲು ಸಿದ್ಧತೆ.


ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳಿಂದ ಸುದ್ದಿಗೋಷ್ಠಿ.
ಭಾರತ ಮಹಿಳಾ ಖೋ ಖೋ ತಂಡದಲ್ಲಿ ನಮ್ಮ ತಾಲ್ಲೂಕಿನ ಕ್ರೀಡಾಪಟು ಚೈತ್ರ ಆಟವಾಡಿದ್ದಾರೆ.
ಇದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ.
ಭಾರತ ಮಹಿಳಾ ಖೋ ಖೋ ತಂಡಕ್ಕೆ ವಿಶ್ವಕಪ್ ಸಿಕ್ಕಿದೆ.
ಜನವರಿ 21ರಂದು ಟಿ ನರಸೀಪುರಕ್ಕೆ ಚೈತ್ರ ಆಗಮಿಸುತ್ತಿದ್ದಾರೆ.
ಈ ವೇಳೆ ಖಾಸಗಿ ಬಸ್ ನಿಲ್ದಾಣದಿಂದ ವಿದ್ಯೋದಯ ಕಾಲೇಜು ವೃತ್ತದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ.
ಟಿ ನರಸೀಪುರ ತಾಲ್ಲೂಕಿನ ಸರ್ವ ಸಂಘಟನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ ಎಂದ ಮುಖಂಡರು

Continue Reading

Mysore

23/1/2025 ರಂದು “ಶಾಸಕರು -ಸಂಸದರು” ಜೊತೆ ರೈತರ ಮುಖಂಡರ ಮುಖಮುಖಿ ರೈತ ಸ್ನೇಹಿ ಚರ್ಚಾ ಕಾರ್ಯಕ್ರಮ

Published

on

ನಂಜನಗೂಡು ಜ. 20

ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ವತಿಯಿಂದ ಇದೇ ತಿಂಗಳು ಜನವರಿ 23/1/2025 ರಂದು ನಂಜನಗೂಡು ತಾಲೂಕು ತಾಂಡವಪುರ ಚಿಕ್ಕಯ್ಯನ ಛತ್ರ ಹೋಬಳಿ ಮಾರಮ್ಮನ ಗುಡಿ ದೇವಸ್ಥಾನದ ಆವರಣದಲ್ಲಿ ಗುರುವಾರ ಬೆಳಿಗ್ಗೆ 10: 30 ಗಂಟೆಗೆ ಸ್ಥಳೀಯ ” ಶಾಸಕರು -ಸಂಸದರು” ಜೊತೆ ರೈತರ ಮುಖಂಡರ ಮುಖಮುಖಿ ರೈತ ಸ್ನೇಹಿ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ದೇಶದ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾ ಸಾಗರ್ ಗೋಷ್ಠಿಯಲ್ಲಿ ಹೇಳಿದರು.

ಇಂದು ನಂಜನಗೂಡು ತಾಲೂಕು ಪತ್ರಕರ್ತ ಭವನದಲ್ಲಿ ಪತ್ರಿಕೆ ಗೋಷ್ಟಿ ನಡೆಸಿ ಮಾತಾಡುತ್ತಾ ಅವರು,

ಈ ಕಾರ್ಯಕ್ರಮಕ್ಕೆ ನಂಜನಗೂಡು ಕ್ಷೇತ್ರದ ಶಾಸಕರು, ಗುಂಡ್ಲುಪೇಟೆ ಶಾಸಕರು, ಕೆ. ಆರ್. ನಗರ ಶಾಸಕರು, ಎಚ್.ಡಿ. ಕೋಟೆ ಶಾಸಕರು, ಹಾಗೂ ಚಾಮರಾಜನಗರ ಸಂಸದರು, ಮತ್ತು ಜಿಲ್ಲಾ ಉಸ್ತುವರಿ ಸಚಿವರು ಬರುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ ರೈತ ಪ್ರಭುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು,

ರೈತ ಸಂಘದ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ

ಕರ್ನಾಟಕದಲ್ಲಿ ರೈತರ ದೊಡ್ಡ ಸಮಸ್ಯೆ ಸಾಕಷ್ಟು ಇದೆ.

ಸ್ಪಂದಿಸದೆ ದವರಿಗೆ ವಿರೋಧ ವ್ಯಕ್ತಪಡಿಸುವ ನಮ್ಮ ಕರ್ತವ್ಯ,

ಆದರೆ ಸ್ಪಂದಿಸಿದವರಿಗೆ ಅವರ ಗಮನಕ್ಕೆ ರೈತರ ಸಮಸ್ಯೆಗಳನ್ನು ಹೇಳುವ ನಿಟ್ಟಿನಲ್ಲಿ ಈ ವಿಶೇಷ ಸಭೆಯಲ್ಲಿ ಶಾಸಕರಗಳ ಮುಖಮುಖಿ ರೈತರ ಸ್ನೇಹಿ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಭಾಗದ ಶಾಸಕರುಗಳ ಮಹನೀಯರ ಮಕ್ಕಳಾಗಿದ್ದು,

ಅವರ ತಂದೆಯವರು ಕರ್ನಾಟಕದಲ್ಲಿ ದೊಡ್ಡ ಮಟ್ಟದ ಕೊಡುಗೆಗಳನ್ನು ನೀಡಿದ್ದಾರೆ.

ಈ ಭಾಗದ ಶಾಸಕರುಗಳಿಗೆ ಮತ್ತು ಸಂಸದರಿಗೆ ರೈತರ ಬಗೆ ಹೆಚ್ಚು ಕಾಳಜಿ ಇಲ್ಲದೇ ಇರುವುದರಿಂದ ಈ ವಿಶೇಷ ಸಭೆಯನ್ನು ರೈತರ ಮುಖಂಡರ ಮುಖಮುಖಿ ಸ್ನೇಹಿ ಚರ್ಚಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಗೋಷ್ಠಿಯಲ್ಲಿ ಹೇಳಿದರು.

23 ರಂದು ನಡೆಯುವ ಕಾರ್ಯಕ್ರಮದ ಕರಪತ್ರ ಗಳನ್ನು ಬಿಡುಗಡೆಗೊಳಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು, ಬಂಗಾರ ಸ್ವಾಮಿ, ಶ್ವೇತ, ಮಹದೇವಪ್ಪ, ತಿಮ್ಮಣ್ಣ ಮಾದೇವ ನಾಯಕ ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Trending

error: Content is protected !!