Politics
ಪ್ರಜ್ವಲ್ ರೇವಣ್ಣ ಗೆ ಬಿಗ್ ಶಾಕ್ ಸಂಸದರಾಗಿ ಆಯ್ಕೆ ಅಸಿಂಧು ತಡೆ ಅರ್ಜಿ ವಜಾ ಗೊಳಿಸಿದ ಹೈಕೋರ್ಟ್

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಮಾಹಿತಿ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಸಲ್ಲಿಸದ ಕಾರಣ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧು. ಈ ಅಸಿಂಧು ಆದೇಶಕ್ಕೆ ತಡೆ ನೀಡುವಂತೆ ಹೈಕೋರ್ಟ್ ಗೆ ಮೇಲ್ಮನೆಯನ್ನು ಅವರು ಸಲ್ಲಿಸಿದ್ದರು.
ಈ ಅರ್ಜಿಯನ್ನು ವಜಾಗೊಳಿಸುವ ಮೂಲಕ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ನೀಡಿದೆ.
ಇಂದು ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯ ಪೀಠವು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವವರೆಗೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಹೇಳುವ ಮೂಲಕ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ನೀಡಿದೆ ಅಲ್ಲದೆ ಸಂಸದ ಸ್ಥಾನ ಆಯ್ಕೆ ಅಸಿಂಧು ತಡೆಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಗೊಳಿಸಿದೆ
Politics
ಉತ್ತರದಲ್ಲಿ ಮೋದಿ ಹವಾ – ದಕ್ಷಿಣದಲ್ಲಿ ರಾಹುಲ್ ಗಾಳಿ.

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ.
3 ರಾಜ್ಯಗಳಲ್ಲಿ ಬಿಜೆಪಿ ತ್ರಿವಿಕ್ರಮ.
ತೆಲಂಗಾಣದಲ್ಲಿ ಕೈ ಹಿಡಿದ ಮತದಾರ.
ಮಧ್ಯ ಪ್ರದೇಶ
ಒಟ್ಟು ಸ್ಥಾನ -230
ಬಿಜೆಪಿ-164
ಕಾಂಗ್ರೆಸ್=64
..
ರಾಜಸ್ಥಾನ
ಒಟ್ಟು ಸ್ಥಾನ -199
ಬಿಜೆಪಿ-112
ಕಾಂಗ್ರೆಸ್ -71
..
ಛತ್ತೀಸ್ ಘಡ
ಒಟ್ಟು ಸ್ಥಾನ -90
ಬಿಜೆಪಿ-53
ಕಾಂಗ್ರೆಸ್-35
..
ತೆಲಂಗಾಣ
ಒಟ್ಟು ಸ್ಥಾನ -119
ಕಾಂಗ್ರೆಸ್-65
ಬಿಆರ್ ಎಸ್
ಬಿಜೆಪಿ -9
..
ಲೋಕಸಭಾ ಚುನಾವಣೆ ಗೆ ಮುನ್ನ ಸೆಮಿ ಫೈನಲ್ ಚುನಾವಣೆ ಎಂದೇಬಿಂಬಿಸಲಾಗಿದ್ದ ದೇಶದ ಪ್ರಮುಖ ರಾಜ್ಯಗಳ ಚುನಾವಣೆ.
ಉತ್ತರದಲ್ಲಿ ಕಮಲ ಪಕ್ಷದ ಕಮಾಲ್.
ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಕಾಂಗ್ರೆಸ್.
ತೆಲಂಗಾಣದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊಂದಿದ್ದರು.
ಉಳಿದ 3 ರಾಜ್ಯಗಳಲ್ಲಿ ಹಿಂದೂ ಪರ ಹೇಳಿಕೆಗಳು ಬಿಜೆಪಿ ಭರ್ಜರಿ ಗೆಲುವಿಗೆ ಕಾರಣ ಆದವು.
Politics
Telangana Election: ತೆಲಂಗಾಣದಲ್ಲಿ BJPಯನ್ನು ಗೆಲ್ಲಿಸಿದ ಕಾಂಗ್ರೆಸ್ !!

Telangana Election: ಇಡೀ ದೇಶವೇ ಪಂಚರಾಜ್ಯ ಚುನಾವಣೆಗಳ ಫಲಿತಾಂಶದತ್ತ ದೃಷ್ಟಿ ನೆಟ್ಟಿದೆ. ಇಂದು ಕೇವಲ 4 ರಾಜ್ಯಗಳತ ಎಣಿಕೆ ನಡೆಯುತ್ತಿದ್ದರೂ ಭಾರೀ ಕುತೂಹಲ ಕೆರಳಿಸಿದೆ. ಅಚ್ಚರಿಯಂತೆ ಹಿನ್ನಡೆ, ಮುನ್ನಡೆಗಳು ಆಗುತ್ತಿವೆ. ಊಹಿಸದಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಆದರೆ ಎಲ್ಲಿ ಕಾಂಗ್ರೆಸ್ ತಾನು ಗೆಲ್ಲುವುದರೊಂದಿಗೆ ಬಿಜೆಪಿಯನ್ನೂ ಗೆಲ್ಲಿಸಿಬಿಟ್ಟಿದೆ. ಅರೆ ಏನಪ್ಪಾ ಇದು ಹೊಸ ಸುದ್ದಿ ಅಂತೀರಾ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಲೆಕ್ಕಾಚಾರ .
ಹೌದು, ಮಧ್ಯಪ್ರದೇಶ , ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಉದಾಖಲಿಸಿದೆ. ಅಂತೆಯೇ ತೆಲಂಗಾಣದಲ್ಲಿ(Telangana Election) ಎಲ್ಲರೂ ಊಹಿಸಿದಂತೆ ಕಾಂಗ್ರೆಸ್ ಭರ್ಜರಿ ಗೆಲುವೊಂದಿಗೆ ಇತಿಹಾಹ ಸೃಷ್ಟಿಸಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಎರಡನೇ ರಾಜ್ಯದಲ್ಲಿ ತನ್ನ ಅಧಿಪತ್ಯ ಸಾಧಿಸಿದೆ. ಗ್ಯಾರಂಟಿಗಳು ಕೊನೆಗೂ ಕಾಂಗ್ರೆಸ್ ಗೆ ಜಯಭೇರಿ ತಂದಿವೆ. ಆದರೆ ಈ ನಡುವೆ ಕಾಂಗ್ರೆಸ್ ಗೆಲುವು ಬಿಜೆಪಿಗೂ ಲಾಭವನ್ನು ತಂದಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಪ್ರತಿಪಕ್ಷಗಳೆಲ್ಲವೂ ಸೇರಿ ‘ಇಂಡಿಯಾ’ ಮೈತ್ರಿ ಕೂಟವನ್ನು ರಚಿಸಿಕೊಂಡಿವೆ. ಇದರಲ್ಲಿ ಕಾಂಗ್ರೆಸ್ ಹಾಗೂ ಕೆಲವೊಂದು ಪ್ರಮುಖ ಪಕ್ಷಗಳನ್ನು ಬಿಟ್ಟರೆ ಉಳಿದವೆಲ್ಲವೂ ಪ್ರಾದೇಶಿಕ ಪಕ್ಷಗಳು. ಮೋದಿ ಹವಾ ಮುಂದೆ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳ ವರ್ಚಸ್ಸು ಕಮ್ಮಿಯಾಗುತ್ತಿರುವದರಿಂದ ಎಲ್ಲವೂ ‘ಇಂಡಿಯಾ’ ಕೂಟ ಸೇರಿವೆ. ಆದರೆ ಹೀಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೊಂದು ರಾಜ್ಯವನ್ನು ಗೆಲ್ಲುತ್ತಾ ಬಂದಂತೆ ಅಲ್ಲಿನ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಗೆ ವಿರುದ್ಧವಾಗುತ್ತವೆ. ಅದರಲ್ಲೂ ದಕ್ಷಿಣ ಭಾರತ ಪ್ರಾದೇಶಿಕ ಪಕ್ಷಗಳ ನಾಡು ಆದ್ದರಿಂದ ಇದು ಸಂಭವಿಸುದು ಪಕ್ಕಾ ಎನ್ನಲಾಗುತ್ತೆ.
ಅಲ್ಲದೆ ತನ್ನ ಗೆಲುವಿನ ಪ್ರಾಬಲ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಟಿನ ಕ್ಷೇತ್ರಗಳನ್ನು ಕೇಳಬಹುದು. ಇದು ಪ್ರಾಧೇಶಿಕ ಪಕ್ಷಗಳ ಅಸ್ತಿತ್ವವನ್ನೇ ಕಸಿದಂತೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲು ಮೈತ್ರಿ ಮಾಡಿಕೊಂಡಿದ್ದವು. ಬಳಿಕ ಬೇರೆ ಬೇರೆಯಾದವು. ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಬಳಿಕವಂತೂ ಹಾವು ಮುಂಗುಸಿಯಾಗಿದವು. ಇದೀಗ ತೆಲಂಗಾಣದಲ್ಲೂ ಅದೇ ಪರಿಸ್ಥಿತಿ ಉಂಟಾಗಬಹುದು. ಯಾವ ಮೈತ್ರಿ ಸೇರದೆ ತಟಸ್ಥವಾಗಿರುವ ಕೆಸಿಆರ್ ಪಾರ್ಟಿ ಕಾಂಗ್ರೆಸ್ ದೋಸ್ತಿ ತೊರೆದು, ರಾಜ್ಯದಲ್ಲಿ ಅದನ್ನು ಎದುರಿಸಲು NDA ಮೈತ್ರಿ ಸೇರಬಹುದು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಬಿರುಕಿನಿಂದ ನೇರವಾಗಿ ಲಾಭವಾಗಬಹುದು. ಇದು ಬಿಜೆಪಿಗೆ ದೊಡ್ಡ ಲಾಭ ಆಗುತ್ತದೆ. ಕಾಂಗ್ರೆಸ್ ತಾನು ಗೆಲ್ಲುವುದರೂಂದಿಖೆ ಸುಲಭವಾಗಿ ಬಿಜೆಪಿಯನ್ನು ಗೆಲ್ಲಿಸಿದಂತಾಗಿದೆ.
Hassan
ಹಾಸನ : ಇಂದು ತವರು ಜಿಲ್ಲೆಗೆ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿ

ಸಂಸದರು, ಶಾಸಕರು, ಮಾಜಿಶಾಸಕರು, ಮಾಜಿ ಜಿ.ಪಂ., ತಾ.ಪಂ. ಅಧ್ಯಕ್ಷರು, ಮಾಜಿ ಸದಸ್ಯರು, ನಗರಸಭೆ, ಪುರಸಭೆ ಹಾಲಿ, ಮಾಜಿ ಅಧ್ಯಕ್ಷರು, ಹಾಲಿ, ಮಾಜಿ ಸದಸ್ಯರು, ಹಾಲಿ, ಮಾಜಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳ ಸಭೆ ಕರೆದಿರುವ ಎಚ್.ಡಿ.ದೇವೇಗೌಡರು
ಹೊಳೆನರಸೀಪುರ ತಾಲ್ಲೂಕಿನ, ಹಳೇಕೋಟೆ ಹೋಬಳಿ, ಶ್ರೀರಾಮದೇವರಕಟ್ಟೆಯಲ್ಲಿ ಮ.12.15 ಕ್ಕೆ ನಡೆಯಲಿರುವ ಸಭೆ
ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ
ಮುಂಬರುವ, ತಾ.ಪಂ., ಜಿ.ಪಂ., ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಭೆ ಕರೆದಿರುವ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು
ಸಭೆಯಲ್ಲಿ ಭಾಗಲಿರುವ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Mysore6 days ago
ಗೃಹಲಕ್ಷ್ಮಿ : 1,18,000 ರೂಪಾಯಿ ಹಣ ನಾಡದೇವತೆ ತಾಯಿ ಚಾಮುಂಡೇಶ್ವ ದೇಗುಲಕ್ಕೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.
-
Hassan2 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ