Special
ಪೋಸ್ಟ್ ಆಫೀಸ್ ಉದ್ಯೋಗ ಅವಕಾಶ: ನೇರ ನೇಮಕಾತಿ
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಅಂಚೆ ಇಲಾಖೆಯಿಂದ ಭರ್ಜರಿ ಉದ್ಯೋಗ ಅವಕಾಶ ಪ್ರಕಟವಾಗಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 1023 ಪೋಸ್ಟ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿಯ ವಿವರ:
ಈ ನೇಮಕಾತಿಯಲ್ಲಿ ಭಾಗವಹಿಸಲು ಕನಿಷ್ಠ ವಿದ್ಯಾರ್ಹತೆ SSLC ಪಾಸ್ ಆಗಿರಬೇಕು. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ನಿಮ್ಮ ಹತ್ತನೇ ತರಗತಿ ಅಂಕಗಳ (ಮೆರಿಟ್ ಲಿಸ್ಟ್ ) ಪ್ರಕಾರ ನಿಮ್ಮ ಆಯ್ಕೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಸಿಗಲಿದೆ.
ಅರ್ಜಿ ಸಲ್ಲಿಸುವ ವಿವರ:
1. ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭ: 31 ಜನವರಿ 2026
2. ಕೊನೆ ದಿನಾಂಕ: 14 ಫೆಬ್ರವರಿ 2026
3. ಅರ್ಜಿ ಶುಲ್ಕ ಪಾವತಿ ಕೊನೆ ದಿನ: 16 ಫೆಬ್ರುವರಿ 2026
4. ಮಹಿಳಾ, SC/ST, PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರಹಿತ. ಇತರ ಅಭ್ಯರ್ಥಿಗಳು ₹100/- ಅನ್ನು ಪಾವತಿಸಬೇಕು.
5. ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ 40 ವರ್ಷ; ವರ್ಗಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ವೇತನ ವರದಿ:
1. ಬ್ರಾಂಚ್ ಪೋಸ್ಟ್ಮಾಸ್ಟರ್ (BPM): ₹12,000 – ₹29,380/–
2. ಸಹಾಯಕ BPM / GDS: ₹10,000 – ₹24,470/–
ಹುದ್ದೆಗಳು ಜಿಲ್ಲಾವಾರುವಾಗಿ ಹಂಚಿಕೆ ಮಾಡಲಾಗಿದ್ದು, ಅಭ್ಯರ್ಥಿಗಳು ತಮ್ಮದೇ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಬ್ಬರೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವೇತನ, ಭತ್ಯೆಗಳು ಮತ್ತು ಭದ್ರ ಉದ್ಯೋಗ ಸೌಲಭ್ಯಗಳು ಲಭ್ಯವಿರುತ್ತವೆ.
ಪೋಸ್ಟ್ ಆಫೀಸ್ ಉದ್ಯೋಗವು ಶಾಶ್ವತ ಹಾಗೂ ಗೌರವಾನ್ವಿತ ಸರ್ಕಾರಿ ಕೆಲಸವಾಗಿದ್ದು, ಭವಿಷ್ಯದಲ್ಲಿ ಪದೋನ್ನತಿ ಅವಕಾಶಗಳೂ ಇವೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಿಡದೆ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಲಾಗುತ್ತದೆ.
Special
ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸಭೆ ಗಮನ ಸೆಳೆವ ಸೂಚನೆ ವೇಳೆ ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು ಅವರು ಯಗಚಿ ಜಲಾಶಯದ ಎಡದಂಡೆ ನಾಲೆಗಳ ಲ್ಯಾಟರಲ್, ಮೈನರ್ ಗಳು ಹಾಗೂ ಮೊಸಳೆ ಶಾಖಾ ನಾಲೆಯ ಭೂಸ್ವಾಧೀನ ಕೈಗೊಳ್ಳದಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಇದಕ್ಕೆ ಸೋಮವಾರ ಉತ್ತರ ನೀಡಿದರು.
“ಹಾಸನ ಜಿಲ್ಲೆಯ ಬೇಲೂರು, ಹಾಸನ, ಆಲೂರು ತಾಲ್ಲೂಕುಗಳ 37 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಿಂಗಾರು ಬೆಳೆಗಳಿಗೆ ನೀರಾವರಿ ಕಲ್ಪಿಸಲು ಯಗಚಿ ಎಡದಂಡೆ ಯೋಜನೆ ಮಾಡಲಾಗಿದೆ. ಯಗಚಿ ಮುಖ್ಯ ನಾಲೆಯ 54ರಿಂದ 84ರ ವ್ಯಾಪ್ತಿಯಲ್ಲಿ 12,427 ಎಕರೆ ಅಚ್ಚುಕಟ್ಟು ಪ್ರದೇಶವಿದ್ದು, 262 ಎಕರೆ 28 ಗುಂಟೆ ಜಮೀನು ಭೂಸ್ವಾಧೀನವಾಗಿದ್ದು, ಭೂಮಾಲೀಕರಿಗೆ ಪರಿಹಾರ ನೀಡಲಾಗಿದೆ. ಯಗಚಿ ಎಡದಂಡೆ ಮುಖ್ಯ ನಾಲೆ ಮತ್ತು ವಿತರಣ ನಾಲೆ ಸಂಖ್ಯೆ 71ರಿಂದ 84ರವರೆಗೆ ಹಾಗೂ ಮೊಸಳೆ ನಾಲೆಗಳಿಗೆ ಸಂಬಂಧಿಸಿದಂತೆ ಒಟ್ಟು 286 ಎಕರೆ 22.5 ಗುಂಟೆ ಜಮೀನುಗಳಿಗೆ ಭೂಪರಿಹಾರ ನೀಡಲು 60 ಕೋಟಿಗಳಷ್ಟು ಅನುದಾನ ಅಗತ್ಯವಿದ್ದು, ಅನುದಾನ ಲಭ್ಯತೆ ಅನುಗುಣವಾಗಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲು ಕ್ರಮವಹಿಸಲಾಗಿದೆ” ಎಂದು ತಿಳಿಸಿದರು.

ಹೊಸದಾಗಿ ಬಂದಿರುವ ಮಂಜು ಅವರ ಧ್ವನಿಗೆ ಬೆಂಬಲ ನೀಡುತ್ತೇನೆ
ಈ ವೇಳೆ ಮಾತನಾಡಿದ ರೇವಣ್ಣ ಅವರು ಮಾತನಾಡಿ ಈ ನಾಲೆಯಲ್ಲಿ ಆರಂಭಿಕ 5 ಕಿ.ಮೀವರೆಗೂ ನಾಲೆ ಆಗಿಲ್ಲ ಆದಷ್ಟು ಬೇಗ ಅನುದಾನ ಕೊಡಿಸಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದ್ದು ಯಾವಾಗ? ಸಿಮೆಂಟ್ ಮಂಜು ಅವರ ಮನವಿ ಆದ್ಯತೆ ಮೇರೆಗೆ ಕೈಗೊಳ್ಳುತ್ತೇವೆ. ರೇವಣ್ಣ ಅವರು ಐದಾರು ಬಾರಿ ಶಾಸಕರಾಗಿ, ಮಂತ್ರಿಯಾಗಿದ್ದಾರೆ. ಅವರ ತಂದೆ ನೀರಾವರಿ ಸಚಿವರಾಗಿದ್ದರು, ಪಿಡಬ್ಲ್ಯೂಡಿ ಸಚಿವರಾಗಿದ್ದರು. ಅವರು ಇಡೀ ಜಿಲ್ಲೆ ನಡೆಸಿದ್ದಾರೆ. ಮಂಜು ಅವರು ಹೊಸದಾಗಿ ಬಂದಿದ್ದು, ಅವರ ಧ್ವನಿಗೆ ನಾನು ಬೆಂಬಲ ನೀಡುತ್ತೇನೆ” ಎಂದು ತಿಳಿಸಿದರು.
ನೀರಿನ ಲಭ್ಯತೆ ಪರಿಶೀಲಿಸಿ ಬೆಂಡವಾಡ ಏತ ನೀರಾವರಿ ಯೋಜನೆ
ಬಿಜೆಪಿ ಶಾಸಕರಾದ ದುರ್ಯೋಧನ ಐಹೊಳಿ ಅವರು, ರಾಯಭಾಗ ಕ್ಷೇತ್ರದ ಚಿಕ್ಕೊಡಿ ತಾಲ್ಲೂಕು ವ್ಯಾಪ್ತಿಯ ಹನುಮಾನ ಏತ ನೀರಾವರಿ ಯೋಜನೆ, ಬೆಂಡವಾಡ ಏತ ನೀರಾವರಿ ಯೋಜನೆ ಅಂದಾಜು ವೆಚ್ಚಕ್ಕೆ ಕಾಲಮಿತಿ ಅನುಮತಿ ನೀಡಿರುವ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ರಾಯಭಾಗ 14 ಗ್ರಾಮಗಳ 9650 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಆಗಬೇಕು ಎಂದು ಕೃಷ್ಣಾ ನದಿಯಿಂದ ಮುಂಗಾರು ಹಂಗಾಮಿನಲ್ಲಿ ಹರಿಯುವ 1.7 ಟಿಎಂಸಿ ನೀರನ್ನು ಬಳಸಿಕೊಳ್ಳಲು ಈ ಯೋಜನೆಯಾಗಿದೆ. ಇದು 796 ಕೋಟಿ ಮೊತ್ತದ ಯೋಜನೆಯಾಗಿದ್ದು, ಇಲ್ಲಿ ಹಂಚಿಕೆಯಾಗಿರುವ ಕೃಷ್ಣಾ ನೀರಿನ ಪ್ರಮಾಣದ ಬಗ್ಗೆ ಲೆಕ್ಕ ಹಾಕುವ ಅಗತ್ಯವಿದೆ. ನಂತರ ನೀರಿನ ಲಭ್ಯತೆ ಇದೆಯೇ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈಗಾಗಲೇ ಅಂದಾಜು ಮೊತ್ತ ಪ್ರಸ್ತಾಪಿಸಲಾಗಿದೆ. ನೀರಿನ ಪ್ರಮಾಣ ಪರಿಶೀಲಿಸಿದ ಬಳಿಕ ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ವಾರಾಹಿ ಏತನೀರಾವರಿ ತಾಂತ್ರಿಕ ಸಮಸ್ಯೆ ಖುದ್ದಾಗಿ ಪರಿಶೀಲನೆ
ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ವಾರಾಹಿ ಏತ ನೀರಾವರಿ ಯೋಜನೆ ಬಗ್ಗೆ ಕೇಳಿದಾಗ, “ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಚರ್ಚೆ ಮಾಡಿದ್ದಾರೆ. ಇಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಲ್ಲಿ ಇದನ್ನು ಕೆಳ ಹಂತದಲ್ಲಿ ಮಾಡಿದರೆ ವಿದ್ಯುತ್ ಗೆ ನೀರು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ದಾರಿತಪ್ಪಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇದನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೆಆರ್ ಎಸ್ ಅಣೆಕಟ್ಟಿನ ಬೃಂದಾವನ ಪ್ರವೇಶಿಸಲು ಹಾಗೂ ಹಳ್ಳಿಗಳ ಸಂಪರ್ಕ ಕಲ್ಪಿಸಲು ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಶುಲ್ಕವನ್ನು ಬೃಂದಾವನ ಪ್ರವೇಶದ ಬಳಿ ವಸೂಲಿ ಮಾಡಿ, ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ಈ ಹಿಂದಿನಿಂದಲೂ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಇಲ್ಲಿ ಟೆಂಡರ್ ಕರೆದು ಬಿಡ್ ಮಾಡಲಾಗಿದೆ. ಈ ವಿಚಾರದಲ್ಲಿ ರೈತರಿಗೆ ತೊಂದರೆಯಾಗುವುದು ಬೇಡ. ನಾನು ಆ ಜಾಗಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ. ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ನಿಮ್ಮ ಸಲಹೆಗಳನ್ನು ಸ್ವೀಕರಿಸಲಾಗುವುದು” ಎಂದು ಭರವಸೆ ನೀಡಿದರು.
ಚರ್ಚೆಗೆ ಕರೆದರೆ ಧರಣಿ ಮಾಡುತ್ತೀರಿ, ನಾವೇನು ಮಾಡೋಣ
ಬಿಜೆಪಿ ಶಾಸಕ ಮುನಿರತ್ನ ಅವರು ನಗರದಲ್ಲಿ ಕಾರ್ಯನಿರ್ವಹಿಸದ ಬೀದಿ ದೀಪಗಳ ವಿಚಾರವಾಗಿ ಕೇಳಿದಾಗ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಉತ್ತರಿಸಿದರು.
“ನಿಮ್ಮನ್ನು ಕರೆಸಿ ಮಾತನಾಡಲು ಮುಂದಾದರೆ ನೀವು ಧರಣಿ ಮಾಡುತ್ತೀರಿ. ನಾವೇನು ಮಾಡೋಣ ಹೇಳಿ. ನಾವು ನಿಮ್ಮನ್ನು ಕರೆಸಿದ್ದು ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು. ಆದರೆ ನಿಮ್ಮ ಕ್ಷೇತ್ರದ ನೋವು ಹೇಳಿಕೊಳ್ಳುವಷ್ಟು ಧೈರ್ಯ ತೋರಲಿಲ್ಲ. ನೀವು ಜನಪ್ರತಿನಿಧಿಯಾಗಿ ಪ್ರಶ್ನೆ ಕೇಳಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಬೀದಿ ದೀಪಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸುತ್ತೇವೆ. ಬೇಕಾದರೆ, ನಿಮ್ಮನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸುತ್ತೇನೆ. ನೀವು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬನ್ನಿ, ಅದನ್ನು ಪರಿಹರಿಸೋಣ” ಎಂದು ಭರವಸೆ ನೀಡಿದರು.
ಬಿಜೆಪಿ ಶಾಸಕರಾದ ಕೃಷ್ಣಪ್ಪ ಅವರು, ಬಿಡಿಎ ವತಿಯಿಂದ ಪೂರ್ಣಪ್ರಜ್ಞಾ ಬಡಾವಣೆ ಮಂಜೂರಾಗಿದ್ದು, ಸಣ್ಣ ಪ್ರಮಾಣದ ಶೆಡ್ ತೆರವುಗೊಳಿಸಿ ಪಾರ್ಕ್ ಮಾಡಲು ಅನುಕೂಲ ಮಾಡಿಕೊಳ್ಳಬೇಕು ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಇತ್ತೀಚೆಗೆ ಬಿಡಿಎ ಎಲ್ಲಾ ಬಡಾವಣೆಗಳು ಮತ್ತು ಸೊಸೈಟಿ ಬಡಾವಣೆಗಳನ್ನು ಪಾಲಿಕೆಗಳಿಗೆ ಹಸ್ತಾಂತರಿಸಲು ಮುಂದಾಗಿದ್ದೇವೆ. ಈ ರೀತಿ ಅನಧಿಕೃತವಾಗಿ ನಿರ್ಮಾಣವನ್ನು ತೆರವುಗೊಳಿಸಲಾಗುವುದು. ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಅಲ್ಲಿ ತೆರವುಗೊಳಿಸಿ ಪಾರ್ಕ್ ಮಾಡಿಸಲಾಗುವುದು” ಎಂದು ಭರವಸೆ ನೀಡಿದರು.
Special
ರಾಜ್ಯದಲ್ಲಿ ಈ ವರ್ಷದ ರಸಗೊಬ್ಬರ ಪೂರೈಕೆ ಹೇಗಿದೆ?ಅಂಕಿ ಅಂಶಗಳು ಹೇಳುವುದೇನು? ತಿಳಿಯಿರಿ
ರೈತರಿಗೆ ಕೃಷಿಯಲ್ಲಿ ಪ್ರಮುಖವಾಗಿ ಬೇಕಾದ ರಸಗೊಬ್ಬರ ಪೂರೈಕೆ ಕರ್ನಾಟಕ ರಾಜ್ಯದಲ್ಲಿ ರೈತರ ಅಗತ್ಯಕ್ಕೆ ತಕ್ಕಂತೆ ಸರ್ಕಾರ ಸಮರ್ಪಕವಾಗಿ ನಿರ್ವಹಿಸಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದು, ಇದು ರೈತರಿಗೆ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದೆ. ಕೆಲವು ತಿಂಗಳುಗಳಲ್ಲಿ ಸ್ವಲ್ಪ ಕೊರತೆ ಕಂಡುಬಂದಿದ್ದರೂ, ಒಟ್ಟಾರೆ ಹಂಗಾಮಿನ ಅವಧಿಯಲ್ಲಿ ರಸಗೊಬ್ಬರ ಲಭ್ಯತೆಯಲ್ಲಿ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2025ರ ಮೇ ಹಾಗೂ ಆಗಸ್ಟ್ ತಿಂಗಳಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ಕೊರತೆ ಉಂಟಾಗಿದ್ದರೂ ಕೂಡ, ಸರ್ಕಾರ ಪರ್ಯಾಯ ವ್ಯವಸ್ಥೆಗಳ ಮೂಲಕ ರೈತರಿಗೆ ಅಗತ್ಯವಾದಷ್ಟು ರಸಗೊಬ್ಬರ ಒದಗಿಸಲು ಪ್ರಯತ್ನಿಸಿದೆ.

ರಸಗೊಬ್ಬರದ ಬೇಡಿಕೆ:
2025–26ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ರಾಜ್ಯದಲ್ಲಿ ಒಟ್ಟು 18.21 ಲಕ್ಷ ಮೆಟ್ರಿಕ್ ಟನ್ ವಿವಿಧ ಶ್ರೇಣಿಯ ರಸಗೊಬ್ಬರಗಳ ಬೇಡಿಕೆಯಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಅಕ್ಟೋಬರ್ 2025ರಿಂದ ಜನವರಿ 2026ರ ವರೆಗೆ 12.46 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳ ಅಗತ್ಯವಿದೆ ಎಂದು ಕೃಷಿ ಇಲಾಖೆ ಲೆಕ್ಕ ಹಾಕಿದೆ.
ರಸಗೊಬ್ಬರ ಪೂರೈಕೆಯ ವಿವರ:
ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯಕ್ಕೆ ನಿರಂತರವಾಗಿ ರಸಗೊಬ್ಬರ ಸರಬರಾಜು ಮಾಡಲಾಗಿದೆ. 2026ರ ಜನವರಿ 27ರವರೆಗೆ ಒಟ್ಟು 21.89 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳು ರಾಜ್ಯಕ್ಕೆ ಸರಬರಾಜಾಗಿವೆ. ಇದರಲ್ಲಿ 11.71 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳು ರೈತರಿಗೆ ಮಾರಾಟವಾಗಿದ್ದು, ಉಳಿದ 10.18 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳು ದಾಸ್ತಾನಿನಲ್ಲಿ ಲಭ್ಯವಿವೆ.
ಮುಂದಿನ ದಿನಗಳಲ್ಲಿ ರೈತರ ಬೇಡಿಕೆ ಹೆಚ್ಚಾದರೂ ಯಾವುದೇ ತೊಂದರೆ ಆಗದಂತೆ ಸರ್ಕಾರ ನಿಗಾ ವಹಿಸಿ ರಸಗೊಬ್ಬರ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ, ರಾಜ್ಯದ ಅವಶ್ಯಕತೆಗೆ ಅನುಗುಣವಾಗಿ ಕೇಂದ್ರ ಸರ್ಕಾರದಿಂದ ಅಗತ್ಯ ಪ್ರಮಾಣದ ರಸಗೊಬ್ಬರ ಸರಬರಾಜು ಮುಂದುವರಿಯಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
Special
ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ – ನಿಮ್ಮ ಹಳ್ಳಿಗೂ ಅವಕಾಶ!
ಕರ್ನಾಟಕ ಸರ್ಕಾರದ Samudaya Bhavana Grant Scheme ಅಡಿಯಲ್ಲಿ ನಿಮ್ಮ ಹಳ್ಳಿಯಲ್ಲಿ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರ್ತವ್ಯಗಳು, ಸಾರ್ವಜನಿಕ ಸಭೆಗಳು ಮುಂತಾದ ಕಾರ್ಯಕ್ರಮಗಳಲ್ಲಿ ಬಳಸಲು ಸುಸಜ್ಜಿತ ಸಮುದಾಯ ಭವನ ಕಟ್ಟಲು ₹20,00,000/- ಅನುದಾನ ದೊರೆಯಲಿದೆ.
ಯಾವುದಕ್ಕೆ ಎಷ್ಟು ಅನುದಾನ?
1. ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ರೂ. ಅನುದಾನವಿದೆ.
2. ಹೆಚ್ಚಿನ ಮಟ್ಟದಲ್ಲಿ (ಹೋಬಳಿ / ತಾಲ್ಲೂಕು / ಜಿಲ್ಲಾ) ವಿಭಿನ್ನವಾಗಿ ₹75 ಲಕ್ಷ – ₹4 ಕೋಟಿ ತನಕ ದೊರೆಯಬಹುದು.
ಯಾರಿಗೆ ಅನುದಾನ?
1. ಅರ್ಜಿ ಸಲ್ಲಿಸುವವರು ಪರಿಶಿಷ್ಠ ಜಾತಿ (SC) / ಪರಿಶಿಷ್ಠ ಪಂಗಡ (ST) ಕುಟುಂಬ ಅಥವಾ ಸಮುದಾಯದ ಸದಸ್ಯರಾಗಿರಬೇಕು.
2. ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ, ಭೂಮಿಯ ದಾಖಲೆಗಳು, ಭವನದ ವಿನ್ಯಾಸ (Blueprint) ಮತ್ತು estimate ಸೇರಿದಂತೆ ಎಲ್ಲಾ ಮೂಲ ದಾಖಲೆಗಳು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
1. ಸಮುದಾಯ ಸದಸ್ಯತೆಯ ಪುರಾವೆ (SC/ST ದಾಖಲೆ)
2. ನೆಲದ ದಾಖಲೆ (Khata / Land Ownership)
3. ಭವನ ಕಟ್ಟಡದ ವಿನ್ಯಾಸ ಮತ್ತು ವೆಚ್ಚದ ಅಂದಾಜು
4. ಸಮುದಾಯ ಸಂಘದ ನಿರ್ಧಾರ ಪತ್ರ.
ಅರ್ಜಿಸಲ್ಲಿಕೆ ಹೇಗೆ?
ಮೊದಲಿಗೆ ಸಂಬಂಧಿತ ತಾಲೂಕು / ಗ್ರಾಮ ಪಂಚಾಯತ್ ಖಚೇರಿಗೆ ಭೇಟಿ ನೀಡಿ, Samudaya Bhavana Grant Scheme ಸಂಬಂಧಿತ ಅರ್ಜಿ ಫಾರ್ಮ್ ಪಡೆದುಕೊಳ್ಳಬೇಕು.ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಒಟ್ಟಾಗಿ ಸಂಗ್ರಹಿಸಿ,ಅರ್ಜಿ ಸಲ್ಲಿಸಬೇಕು.
ಪ್ರಮಾಣಿತ ಕಚೇರಿ ಮೂಲಕ ಪರಿಶೀಲನೆ ನಂತರ ಅನುದಾನ ಮಂಜೂರು ಆಗುತ್ತದೆ.
ಗ್ರಾಮದ ಅಭಿವೃದ್ಧಿಗೆ, ಸಮುದಾಯ ಚಟುವಟಿಕೆಗಳಿಗೆ ಹಾಗೂ ಭವನ ನಿರ್ಮಾಣಕ್ಕೆ ಇದೊಂದು ದೊಡ್ಡ ಅವಕಾಶವಾಗಿದ್ದು, ಜವಾಬ್ದಾರಿಯುತ ಗ್ರಾಮಸ್ಥರು ಈ ಅವಕಾಶ ತಪ್ಪಿಸಿಕೊಳ್ಳಬೇಡಿ.
-
Manglore17 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Hassan16 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
-
Hassan17 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan17 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
State20 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
National19 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
Mandya22 hours agoಎಂ. ಅಂಕೇಗೌಡರ ಪುಸ್ತಕ ಪ್ರೀತಿ ಇಂದಿನ ಯುವ ಪೀಳಿಗೆಗೆ ಮಾದರಿ : ಡಾ.ಮಾನಸ
-
Hassan21 hours agoಕಾಡಾನೆ ದಾಳಿಯಿಂದ ತಂದೆ–ಮಗ ಅದೃಷ್ಟವಶಾತ್ ಪಾರು
