Connect with us

Uncategorized

ಮತದಾನ ಜಾಗೃತಿ ಕಾರ್ಯಕ್ರಮ

Published

on

ಯಳಂದೂರು ಸಮೀಪದ ಕುದೇರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಗೂ ಗ್ರಾಮಪಂಚಾಯತಿ ಅವರ ಸಹಯೋಗದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು,

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ಮತದಾನ ಕುರಿತು ಜಾಗೃತಿ ಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಥಿಯೋಡರ್ ಲೂಥರ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾದ ಮಹೇಂದ್ರ ಅವರುಗಳು ಮತದಾನದ ಮಹತ್ವವನ್ನು ಕುರಿತು ಮಾತನಾಡಿದರು,

ದಿನಾಂಕ 26.04.2024 ರಂದು ನಡೆಯಲಿರುವ ಲೋಕ ಸಭಾ ಚುನಾವಣೆಯಲ್ಲಿ ಅರ್ಹ ಮತದಾರೆಲ್ಲರೂ ಮತದಾನ ಮಾಡಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರಾದ ವಾಣಿ.ವಿ,ಶಶಿಕಲಾ,ಕವಿತಾ,ಮಧುಸೂದನ್, ಶ್ರೀನಿವಾಸ್,ಬಸವಣ್ಣ,ಮಲ್ಲಿಕಾರ್ಜುನ,ಭಾಗ್ಯಮ್ಮಹಾಗೂ ಗ್ರಾಮ ಪಂಚಾಯತಿ ಪಿಡಿಓ ಅವರಾದ ಗೋವಿಂದಯ್ಯ ಅವರುಗಳು ಭಾಗವಹಿಸಿದರು.
ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Uncategorized

ಕೊಡಗು ವಿದ್ಯಾಲಯದಲ್ಲಿ ಯುಕೆಜಿ ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ

Published

on

ಮಡಿಕೇರಿ : ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಶಿಸ್ತು, ಜೀವನಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ಕಲಿಸಿಕೊಡಬೇಕು. ಸ್ವಚ್ಛಂದ ಜೀವನದ ಬಗೆಗಿನ ಎಚ್ಚರಿಕೆಯನ್ನೂ ಇಂದಿನ ಮಕ್ಕಳಿಗೆ ತಿಳಿಹೇಳುವುದು ಅಗತ್ಯ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಿವಿಮಾತು ಹೇಳಿದರು.

ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಯುಕೆಜಿ ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿಂದನಿಂದಲೇ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಪೋಷಕರು ಸಲಹುತ್ತಾ ಮಕ್ಕಳು ಮಾಡಿದ್ದೆಲ್ಲವೂ ಸರಿ ಎಂದು ಭಾವಿಸುತ್ತಾರೆ. ಇದರಿಂದಾಗಿ ಸ್ವಚ್ಛಂದತೆಯನ್ನು ಹೆಚ್ಚಾಗಿಯೇ ಮಕ್ಕಳು ಬೆಳೆಸಿಕೊಂಡು ಸಮಾಜದಲ್ಲಿ ದಾರಿ ತಪ್ಪುವ ಸಾಧ್ಯತೆಯೂ ಹೆಚ್ಚಾಗಿದೆ. ಇಂಥ ಸಂದಭ೯ ಜೀವನಮೌಲ್ಯ, ಶಿಸ್ತನ್ನು ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ವಯಸ್ಸಿನಲ್ಲಿಯೇ ಕಲಿಸುವ ಮೂಲಕ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಅನಂತಶಯನ ಹೇಳಿದರು.

ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆ, ಶಿಕ್ಷಕ ವಗ೯ದ ಬಗ್ಗೆ ಪೋಷಕರು ನಂಬಿಕೆ ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳೇ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಕೇಂದ್ರಗಳೆಂದು ಮರೆಯಬಾರದು ಎಂದು ಕಿವಿಮಾತು ಹೇಳಿದ ಅನಂತಶಯನ, ಕೊಡಗು ವಿದ್ಯಾಲಯವು ಆದ್ಯಾತ್ಮಿಕ ಸಾಧಕ ಸದ್ಗುರು ಜಾಕ್ ಸುಬ್ಬಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಕಾರಣದಿಂದ ಇಂದಿಗೂ ಈ ಸಂಸ್ಥೆಯು ಸದಾ ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರಾಗಿದೆ ಎಂದು ಶ್ಲಾಘಿಸಿದರು.

ಸಾಧಿಸುವ ಛಲವಿದ್ದಲ್ಲಿ ಯಾವುದೇ ವ್ಯಕ್ತಿಯೂ ಎಷ್ಟೇ ಎತ್ತರದ ಬೆಟ್ಟ, ಗುಡ್ಡಗಳನ್ನು ಸಲೀಸಾಗಿ ಏರಬಲ್ಲ. ಎಷ್ಟೇ ದೂರದವರೆಗೂ ಸಮುದ್ರದಲ್ಲಿ ಈಜಬಲ್ಲ,ಗಗನದಲ್ಲಿ ಹಾರಬಲ್ಲ ಸಾಮಥ್ಯ೯ ಹೊಂದಬಲ್ಲ ಎಂದು ಹೇಳಿದ ಅನಂತಶಯನ, ಛಲ ಹಾಗೂ ಕಠಿಣ ಪರಿಶ್ರಮ ಇಂಥ ಸಾಧನೆಗೆ ಅತ್ಯಗತ್ಯ ಎಂದು ಹೇಳಿದರು. ದೊಡ್ಡ ಮಟ್ಟದ ಸಾಧನೆಯ ಕನಸುಗಳನ್ನು ಕಾಣಿ ಎಂದು ಕರೆ ನೀಡಿದ ಅವರು, ಬೆಟ್ಟಗುಡ್ಡಗಳು ಅವುಗಳ ಎಚ್ಚರದಿಂದ ಮಾತ್ರವೇ ದೊಡ್ಡವು ಎನಿಸಿಕೊಂಡಿಲ್ಲ. ಬದಲಿಗೆ ಅವುಗಳು ಮಾನವನಿಗೆ ಒಡ್ಡುವ ಸವಾಲಿನಿಂದಾಗಿ ನಿಜವಾಗಿಯೂ ಅವುಗಳು ಹಿರಿಯದ್ದಾಗಿವೆ ಎಂದು ಹೇಳಿದರು.

ಎಂದಿಗೂ ಪುಟ್ಟ ಮಕ್ಕಳು ಇತರರೊಂದಿಗೆ ಜಗಳವಾಡದೇ ಗೆಳೆತನ ಕಾಪಾಡಿಕೊಳ್ಳಿ, ಗೆಳೆತನವೇ ಜೀವನದ ಬಹುದೊಡ್ಡ ಸಂಪತ್ತಾಗಿದೆ ಎಂಬುದನ್ನು ಮರೆಯದಿರಿ ಎಂದೂ ಅನಂತಶಯನ ಪುಟಾಣಿಗಳಿಗೆ ಕಿವಿಮಾತು ಹೇಳಿದರು.

ಕಾಯ೯ಕ್ರಮದಲ್ಲಿ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ವ್ಯವಸ್ಥಾಪಕರಾದ ರವಿ ಪಿ, ವೇದಿಕೆಯಲ್ಲಿದ್ದರು.

ವಿದ್ಯಾಥಿ೯ನಿ ಶಾವಿ೯ ಭರತ್ ಸ್ವಾಗತಿಸಿ, ಸ್ಟಿಫಾನಿಯಾ ಸ್ಟ್ಯಾನಿ, ಆಂಚಲ್ ಅಯ್ಯಪ್ಪ ಮತ್ತು ಶಾವಿ೯ಕ್ ಅನುಭವ ಹಂಚಿಕೊಂಡ ಕಾಯ೯ಕ್ರಮದಲ್ಲಿ ಶಿಕ್ಷಕಿ ವೀಣಾ ಎಂ.ಎಂ.ನಿರೂಪಿಸಿ, ಶಿಕ್ಷಕಿಯರಾದ ಟಿ.ಪಿ.ರಮ್ಯ ಹಾಗೂ ಬಿ.ಬಿ.ಭಾರತಿ ನಿವ೯ಹಿಸಿದರು. ಐಶಾನಿ ವಂದಿಸಿದರು. ಯುಕೆಜಿ ವಿದ್ಯಾಥಿ೯ಗಳಿಂದ ಅತ್ಯಾಕಷ೯ಕ ಸಾಂಸ್ಕೖತಿಕ ಕಾಯ೯ಕ್ರಮಗಳು ಮನಸೆಳೆದವು

Continue Reading

Uncategorized

ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್

Published

on

ಬೇಲೂರು: ಕಾಡಾನೆ ಸೆರೆ ಕಾರ್ಯಾಚರಣೆ

ಮೊದಲ‌ ದಿನದ ಕಾರ್ಯಾಚರಣೆ ಯಶಸ್ವಿ

ಸತತ ನಾಲ್ಕು ಗಂಟೆಗಳ ನಂತರ ಕಾರ್ಯಾಚರಣೆ ಯಶಸ್ವಿ

ಬೇಲೂರು ತಾಲ್ಲೂಕಿನ, ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ಸೆರೆ ಸಿಕ್ಕ ಕಾಡಾನೆ

ಪುಂಡಾನೆಗಳನ್ನು ಗುರುತಿಸಿದ್ದ ಅರಣ್ಯ ಇಲಾಖೆ ಇಟಿಎಫ್‌ ಸಿಬ್ಬಂದಿ

ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು

ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ಜೊತೆಗಿದ್ದ ಕಾಡಾನೆ‌ ಜೊತೆ ಓಡಾಡಿದ ಒಂಟಿಸಲಗ

ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲೆಂದರಲ್ಲಿ ಓಡಾಡಿದ ಒಂಟಿಸಲಗ

ಹರಸಾಹಸಪಟ್ಟು ಎರಡು ಕಾಡಾನೆಗಳನ್ನು ಬೇರ್ಪಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ನಂತರ ಕುಸಿದು ಬಿದ್ದ ಒಂಟಿಸಲಗ

ಕಾಡಾನೆಯನ್ನು ಸೆರೆ ಹಿಡಿದು ಎಳೆದು ತಂದ ಸಾಕಾನೆಗಳು

ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ

Continue Reading

Kodagu

ಗೋಣಿಕೊಪ್ಪ ಅತ್ತೂರು ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಅಟ್ಟಗಲ್ ದೇವಿಯ ಪೊಂಗಲೋ ಉತ್ಸವ ಆಚರಣೆ.

Published

on

ವರದಿ : ಸಿಂಗಿ ಸತೀಶ್
ಗೋಣಿಕೊಪ್ಪ ಅತ್ತೂರು ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಅಟ್ಟಗಲ್ ದೇವಿಯ ಪೊಂಗಲೋ ಉತ್ಸವ ಆಚರಣೆ.
ಕೆ ಎನ್ ಎಸ್ ಎಸ್ ಮತ್ತು ಹಿಂದೂ ಮಲೆಯಾಳಿ ಸಂಘದಿಂದ ಕೇರಳದ ಪ್ರತಿಷ್ಠಿತ ದೇವಿಯಾದ ಅಟ್ಟಗಲ್ ದೇವಿಯ ಉತ್ಸವವನ್ನು ಸಂಪ್ರದಾಯಕ ಉಡುಗೆ ತೊಡುಗೆಯೊಂದಿಗೆ ಆಚರಿಸಲಾಯಿತು. ಕೊಡಗಿನ ವಿವಿಧ ಭಾಗಗಳಿಂದ ಕಾರ್ಯಕ್ರಮದಲ್ಲಿ ಸಮಾಜ ಭಾಂದವರು.
ಸುಮಾರು 40 ರಿಂದ 50 ಕುಟುಂಬಗಳು ಸೇರಿ ದೇವಿಗೆ ನೈವೇದ್ಯ ಅರ್ಪಿಸುತ್ತಾರೆ.
ಕೇರಳದ ತ್ರಿವೇಡ್ರಾಮ್ ನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಅಟ್ಟಗಲ್ ದೇವಿಯ ಉತ್ಸವವನ್ನು ಇಂದು ಸಹಸ್ರಾರು ಮಹಿಳೆಯರು ಸೇರಿ ಪೊಂಗಲೋ ನೈವೇದ್ಯದಲ್ಲಿ ಭಾಗವಹಿಸಿ ಉತ್ಸವವನ್ನು ಆಚರಿಸುತ್ತಾರೆ.
ಈಗೆ ಕೊಡಗಿನಲ್ಲಿಯೂ ಪೊಂಗಲೋ ಹಬ್ಬ ಆಚರಣೆ ಪ್ರತೀಕವಾಗಿದೆ.
ಕಾರ್ಯಕ್ರಮದಲ್ಲಿ ಕೆ ಎನ್ ಎಸ್ ಎಸ್ ನ ಕಾರ್ಯದರ್ಶಿ ಸರಳ, ಹಿಂದೂ ಮಲೆಯಾಳಿ ಸಂಘದ ಕಾರ್ಯದರ್ಶಿ ರೀನಾ, ಕೆ ಎನ್ ಎಸ್ ಎಸ್ ಅಧ್ಯಕ್ಷ ವೇಣುಗೋಪಾಲ್ ಮೆನನ್, ಲೋಹಿತಕ್ಷನ್, ವೇಣುಗೋಪಾಲ್, ವಿನ್ಯಾ, ಲೀನಾ, ಭಾಸ್ಕರ್, ವಿಮಲಾ ಇನ್ನಿತರರು ಉಪಸ್ಥಿತರಿದ್ದರು.

Continue Reading

Trending

error: Content is protected !!