Connect with us

National - International

ಬಜೆಟ್‌ ಅಧಿವೇಶನದ ಮೊದಲ ಹಂತದ ಕಲಾಪ: ಮಾ.10 ಕ್ಕೆ ಮುಂದೂಡಿಕೆ

Published

on

ನವದೆಹಲಿ: ಬಜೆಟ್‌ ಅಧಿವೇಶನದ ಮೊದಲ ಹಂತದ ಕಲಾಪ ಶೇ.112ರಷ್ಟು ಫಲಭದ್ರವಾಗಿದ್ದು, ಸದನದ ಕಾರ್ಯಕಲಾಪಗಳನ್ನು ಮಾರ್ಚ್‌ 10ವರೆಗೆ ಮುಂದೂಡಲಾಗಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಘೋಷಿಸಿದರು.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ, 17 ಗಂಟೆ 23ನಿಮಿಷ ಚರ್ಚೆ ನಡೆದಿದೆ. ಬಜೆಟ್‌ ಮೇಲೆ 170 ಸದಸ್ಯರು ಮಾತನಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಗುಜರಾತ್‌ ಉದ್ಯಮಿಯೊಬ್ಬರಿಗೆ ಯೋಜನೆ ವಹಿಸುವ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿತ್ತು.

ಕಲಾಪ ಆರಂಭವಾಗುತ್ತಿದ್ದಂತೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆದಾಯ ತೆರಿಗೆ ಮಸೂದೆ ಮಂಡಿಸಿದರು.

Continue Reading

Kodagu

ಟೋಕಿಯೋ, ಜಪಾನ್ ಹಾರ್ವರ್ಡ್ HPAIR 2025 ಅಂತರಾಷ್ಟ್ರೀಯ ಶೖಂಗಸಭೆಗೆ ಮಡಿಕೇರಿಯ ಯದೀಶ್ ರಮೇಶ್ ಭಾರತದ ಪ್ರತಿನಿಧಿಯಾಗಿ ಆಯ್ಕೆ

Published

on

ಮಡಿಕೇರಿ:  ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಕೊಡಗು ಜಿಲ್ಲೆಯ ಯದೀಶ್ ರಮೇಶ್, ಹಾರ್ವರ್ಡ್ ಪ್ರಾಜೆಕ್ಟ್ ಫಾರ್ ಏಷ್ಯನ್ ಅಂಡ್ ಇಂಟರ್‌ನ್ಯಾಷನಲ್ ರಿಲೇಶನ್ಸ್ (HPAIR) 2025 ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.

ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಮತ್ತು ಕೆ.ಆರ್. ರಮ್ಯಾ ಅವರ ಪುತ್ರ.ರಾಗಿರುವ ಯದೀಶ್ ರಮೇಶ್ ಏಷ್ಯಾದಿಂದ ಆಯ್ಕೆಯಾದ ಕೆಲವೇ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದಾರೆ. ಈ ಪ್ರತಿಷ್ಠಿತ ಜಾಗತಿಕ ಸಮ್ಮೇಳನವು ಈ ವರ್ಷ ಆಗಸ್ಟ್ 20 ರಿಂದ 24ರವರೆಗೆ ಜಪಾನ್‌ನ ಟೋಕಿಯೋ ನಗರದಲ್ಲಿ ನಡೆಯಲಿದೆ.

ಇದೇ ವರ್ಷ 2025ರಲ್ಲಿ, ಯದೀಶ್ ರಮೇಶ್ ಅವರು ಜಾಗತಿಕ ವೇದಿಕೆಗಳಲ್ಲಿ ಭಾರತದ ಪ್ರತಿನಿಧಿಯಾಗಿ ಹಲವಾರು ಪ್ರಮುಖ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC) ಯುವ ಸಮ್ಮೇಳನದಲ್ಲಿ MGCY ಭಾರತವನ್ನು ಪ್ರತಿನಿಧಿಸಿದ್ದಾರೆ. , ಲಾಸ್ ಏಂಜಲೀಸ್‌ನಲ್ಲಿ ನಡೆದ 11ನೇ ಆವೃತ್ತಿಯ ಅಂತರಾಷ್ಟ್ರೀಯ ಯುವ ಸಮ್ಮೇಳನ 2025ರಲ್ಲಿ ಕೂಡ ಯದೀಶ್ ರಮೇಶ್ ಭಾರತದ ಪ್ರತಿನಿಧಿಯಾಗಿದ್ದರು.

ಹಾರ್ವರ್ಡ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ವಿದ್ಯಾರ್ಥಿ ಸಂಘಟನೆಯಾದ HPAIR, ಏಷ್ಯಾ-ಪ್ರಶಾಂತ ಪ್ರದೇಶದ ಪ್ರಮುಖ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸೂಕ್ತವಾದ ವಿಚಾರ ವಿನಿಮಯ ವೇದಿಕೆಯನ್ನು ಒದಗಿಸುತ್ತದೆ. ಹಿಂದಿನ HPAIR ಸಮ್ಮೇಳನಗಳಲ್ಲಿ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷರು ಮತ್ತು ನೋಬೆಲ್ ಶಾಂತಿ ಪ್ರಶಸ್ತಿ ವಿಜೇತ ಕಿಮ್ ದೆ-ಜುಂಗ್, ಆಸ್ಟ್ರೇಲಿಯಾದ ಗವರ್ನರ್ ಜನರಲ್ ಪೀಟರ್ ಹಾಲಿಂಗ್ವರ್ಥ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್, ಸಿಂಗಾಪುರದ ಅಧ್ಯಕ್ಷ ಎಸ್.ಆರ್. ನಾಥನ್, ಅಮೆರಿಕದ ಜಪಾನ್ ರಾಯಭಾರಿ ಜಾನ್ ಥಾಮಸ್ ಶೀಫರ್ ಹಾಗೂ ಗೋಲ್ಡ್ಮ್ಯಾನ್ ಸ್ಯಾಕ್ಸ್‌ನ ಮಾಜಿ ಅಧ್ಯಕ್ಷ ಫಿಲಿಪ್ ಮರ್ಫಿ ಸೇರಿದಂತೆ ಅನೇಕ ಜಾಗತಿಕ ಗಣ್ಯರು ಭಾಗವಹಿಸಿದ್ದಾರೆ.

ಕಾಲಕ್ರಮೇಣ, HPAIR ಅಂತರಾಷ್ಟ್ರೀಯ ಸಮ್ಮೇಳನಗಳು ಹಾರ್ವರ್ಡ್ ಕಾಲೇಜಿನ ಏಷ್ಯಾ-ಪ್ರಶಾಂತ ಪ್ರದೇಶದಲ್ಲಿ ನಡೆಯುವ ಅತ್ಯಂತ ದೊಡ್ಡ ವಿದ್ಯಾರ್ಥಿ-ನಡೆಸುವ ವಾರ್ಷಿಕ ಕಾರ್ಯಕ್ರಮಗಳಾಗಿ ರೂಪುಗೊಂಡಿವೆ. ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಗೌರವ ಹೊಂದಿರುವ ಗಣ್ಯರು ಹಾಗೂ ಭವಿಷ್ಯದ ನಾಯಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.

HPAIR ನ ನಂಬಿಕೆ ಪ್ರಕಾರ, ಏಷ್ಯಾ-ಪ್ರಶಾಂತ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ವಿಷಯಗಳಲ್ಲಿ ಸಾಮರಸ್ಯ ಕಂಡುಹಿಡಿಯುವುದು ಚುರುಕು ಹಾಗೂ ನವೀನ ಪ್ರಕ್ರಿಯೆಯಾಗಿದ್ದು, ಯದೇಶ್ ಕುಂಬಳತಿಲ್ ರಮೇಶ್ ಅವರಂತಹ ಅರ್ಹ ಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಅವರ ಹಾಜರಾತಿಯಿಂದ ಏಷ್ಯಾ ಹಾಗೂ ಅಂತರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ಜಾಗತಿಕ ಸಂವಾದ ಇನ್ನಷ್ಟು ಬಲಗೊಳ್ಳಲಿದೆ.

ಇದು ವೈಯಕ್ತಿಕ ಗೌರವದಷ್ಟೇ ಅಲ್ಲ, ಭಾರತದ ಪ್ರತಿನಿಧಿಯಾಗಿ ಜಾಗತಿಕ ಚರ್ಚೆಗಳಲ್ಲಿ ಭಾಗವಹಿಸುವ ಅಪೂರ್ವ ಅವಕಾಶವೂ ಹೌದು. ಈ ಸಾಧನೆ ಸಾಧ್ಯವಾಗಲು ನೆರವಾದ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮತ್ತು ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ , ಕರ್ನಾಟಕ ಸರ್ಕಾರದ ಬೆಂಬಲ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಪ್ರಮುಖವಾಗಿದೆ ಎಂದು ಯದೀಶ್ ರಮೇಶ್ ಹೇಳಿದರು.

ಟೋಕಿಯೋದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಜಾಗತಿಕ ನಾಯಕರು, ನೀತಿ ನಿರ್ಣಾಯಕರು ಮತ್ತು ಬದಲಾವಣೆಗೆ ಪಥಪ್ರದರ್ಶಕರಾದವರು ಒಂದೇ ವೇದಿಕೆಯಲ್ಲಿ ಸೇರಿ ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಆಳವಾದ ಚರ್ಚೆ ನಡೆಸುವರು. ಭವಿಷ್ಯದ ನಾಯಕರಿಗೆ ತಮ್ಮ ದೃಷ್ಟಿಕೋನ ಹಂಚಿಕೊಳ್ಳಲು ಮತ್ತು ಪರಿಣಾಮಕಾರಿ ಪರಿಹಾರಗಳನ್ನು ರೂಪಿಸಲು ಇದು ಅಪರೂಪದ ಅವಕಾಶ ಒದಗಿಸುತ್ತದೆ.

Continue Reading

National - International

ಭಾರತದ ವಿರುದ್ದ ಪರಮಾಣು ಬೆದರಿಕೆಯೊಡ್ಡಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್ ಆಸಿಂ ಮುನೀರ್

Published

on

ವಾಷಿಂಗ್ಟನ್‌: ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್ ಆಸಿಂ ಮುನೀರ್ ಅವರು ಭಾರತದ ವಿರುದ್ದ ಪರಮಾಣು ಬೆದರಿಕೆಯೊಡ್ಡಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಹೊಸದಿಲ್ಲಿಯು ಪಾಕಿಸ್ತಾನದ ಅಸ್ತಿತ್ವಕ್ಕೆ ಧಕ್ಕೆ ತಂದರೆ, ಅದು ಅರ್ಧ ಜಗತ್ತನ್ನು ನಾಶ ಮಾಡುತ್ತದೆ ಎಂದು ಮುನೀರ್ ಹೇಳಿದ್ದಾರೆ.

ಉದ್ಯಮಿ ಅದ್ಘಾನ್ ಅಸಾದ್ ಅವರು ಟ್ಯಾಂಪಾದಲ್ಲಿ ಆಯೋಜಿಸಿದ್ದ ಬ್ಲ್ಯಾಕ್-ಟೈ ಭೋಜನಕೂಟದಲ್ಲಿ ಆಸಿಂ ಮುನೀ‌ರ್ ಭಾಗವಹಿಸಿದ್ದರು. “ನಾವು ಪರಮಾಣು ಹೊಂದಿದ ದೇಶ. ನಾವು ಮುಳುಗುತ್ತಿದ್ದೇವೆ ಎಂಬ ಸ್ಥಿತಿ ಬಂದರೆ, ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶ ಪಡಿಸುತ್ತೇವೆ” ಎಂದು ಮುನೀ‌ರ್ ಅಲ್ಲಿದ್ದವರಿಗೆ ಹೇಳಿದರು.

ಈ ಹೇಳಿಕೆಗಳು ಅಮೆರಿಕದ ಪ್ರದೇಶದಿಂದ ಮೂರನೇ ದೇಶದ ವಿರುದ್ಧ ಹೊರಡಿಸಲಾದ ಪರಮಾಣು ಬೆದರಿಕೆಯ ಮೊದಲ ಜ್ಞಾತ ನಿದರ್ಶನವಾಗಿದೆ.

ಆಪರೇಷನ್ ಸಿಂದೂರ್ ಬಳಿಕ ಎರಡು ತಿಂಗಳ ಅವಧಿಯಲ್ಲಿ ಮುನೀರ್ ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಪಹಲ್ಗಾಮ್ ದಾಳಿಯ ಬಳಿಕ ಭಾರತವು ಹಲವು ಕಠಿಣ ರಾಜತಾಂತ್ರಿಕ ನಿಲುವು ತಳೆದಿತ್ತು. ಅದರಲ್ಲಿ ಪ್ರಮುಖ ವಿಚಾರ ಎಂದರೆ ಸಿಂಧೂ ನದಿ ಒಪ್ಪಂದ ಮುರಿದು ಪಾಕಿಸ್ತಾನಕ್ಕೆ ನೀರು ಹರಿಸದೇ ಇರುವುದು. ಇದು ನೆರೆ ರಾಷ್ಟ್ರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರ ಬಗ್ಗೆ ಮಾತನಾಡಿದ ಮುನೀರ್, “ಭಾರತ ಅಣೆಕಟ್ಟು ಕಟ್ಟುವವರೆಗೆ ನಾವು ಕಾಯುತ್ತೇವೆ, ಅದು ಕಟ್ಟಿದಾಗ, ನಾವು ಅದನ್ನು ಹತ್ತು ಪಾಕಿಸ್ತಾನಕ್ಕೆ ನೀರು ಹರಿಸದೇ ಇರುವುದು. ಇದು ನೆರೆ ರಾಷ್ಟ್ರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರ ಬಗ್ಗೆ ಮಾತನಾಡಿದ ಮುನೀರ್, “ಭಾರತ ಅಣೆಕಟ್ಟು ಕಟ್ಟುವವರೆಗೆ ನಾವು ಕಾಯುತ್ತೇವೆ, ಅದು ಕಟ್ಟಿದಾಗ, ನಾವು ಅದನ್ನು ಹತ್ತು ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ” ಎಂದಿದ್ದಾರೆ. “ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ನಮಗೆ ಕ್ಷಿಪಣಿಗಳ ಕೊರತೆಯಿಲ್ಲ ” ಎಂದು ಮುನೀ‌ರ್ ಹೇಳಿದ್ದಾರೆಂದು ದಿ ಪ್ರಿಂಟ್ ಮೂಲಗಳು ಉಲ್ಲೇಖಿಸಿವೆ.

ಅಮೆರಿಕದ ನೆಲದಿಂದ ಭಾರತಕ್ಕೆ ಬೆದರಿಕೆ ಹಾಕುತ್ತಾ ಮತ್ತು ಪಾಕಿಸ್ತಾನದ ಇನ್ನೂ ಬಳಸದ ತೈಲ ಮತ್ತು ಖನಿಜ ಸಂಪತ್ತಿನ ಬಗ್ಗೆ ಹೆಮ್ಮೆಪಡುತ್ತಾ, ಪಾಕಿಸ್ತಾನದ ಸೇನಾ ಮುಖ್ಯಸ್ಥರು ಭಾರತದೊಂದಿಗಿನ ತಮ್ಮ ದೇಶದ ನಿಜವಾದ ನಿಲುವನ್ನು ಬಹಿರಂಗಪಡಿಸಿದರು.

ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಪಾಕಿಸ್ತಾನಿ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಜನರಲ್ ಅಸಿಮ್ ಮುನೀರ್, “ಭಾರತವು ಫೆರಾರಿಯಂತಹ ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್‌ನಂತೆ ಹೊಳೆಯುತ್ತಿದೆ, ಆದರೆ ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ, ಯಾರು ಸೋಲುತ್ತಾರೆ?” ಎಂದು ಹೇಳಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನದ ದುನ್ಯಾ ನ್ಯೂಸ್ ಪ್ರಕಾರ, ಮುನೀರ್ “ಭಾರತವು ತನ್ನನ್ನು ತಾನು ವಿಶ್ವ ನಾಯಕನಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ವಾಸ್ತವದಲ್ಲಿ ಅದು ಅದರಿಂದ ದೂರವಿದೆ” ಎಂದು ಹೇಳಿಕೊಂಡಿದ್ದಾರೆ. ಅದು ಅದರಿಂದ ದೂರವಿದೆ” ಎಂದು ಹೇಳಿಕೊಂಡಿದ್ದಾರೆ.

ಮುನೀರ್ ಅಮೆರಿಕದ ಹಿರಿಯ ರಾಜಕೀಯ ಮತ್ತು ಮಿಲಿಟರಿ ವ್ಯಕ್ತಿಗಳು ಹಾಗೂ ಪಾಕಿಸ್ತಾನಿ ವಲಸೆಗಾರರನ್ನು ಭೇಟಿಯಾದರು.

ಟ್ಯಾಂಪಾದಲ್ಲಿ, ಮುನೀರ್ ನಿರ್ಗಮಿತ ಯುಎಸ್ ಸೆಂಟ್ರಲ್ ಕಮಾಂಡ್  ಕಮಾಂಡರ್ ಜನರಲ್ ಮೈಕೆಲ್ ಕುರಿಲ್ಲಾ ಅವರ ನಿವೃತ್ತಿ ಸಮಾರಂಭ ಮತ್ತು  ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅಡ್ಮಿರಲ್ ಬ್ರಾಡ್ ಕೂಪರ್ ಅವರ ಕಮಾಂಡ್ ಬದಲಾವಣೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಕುರಿಲ್ಲಾ ಅವರ ನಾಯಕತ್ವ ಮತ್ತು ಯುಎಸ್-ಪಾಕಿಸ್ತಾನ ಮಿಲಿಟರಿ ಸಂಬಂಧಗಳಿಗೆ ನೀಡಿದ ಕೊಡುಗೆಯನ್ನು ಮುನೀರ್ ಶ್ಲಾಘಿಸಿದರು.

Continue Reading

National - International

NISAR ಉಪಗ್ರಹ ಉಡಾವಣೆ ಯಶ್ವಸಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹತ್ವ ಮೈಲಿಗಲ್ಲು

Published

on

ಶ್ರೀಹರಿಕೋಟ: ಪ್ರಥಮ ಬಾರಿಗೆ ಭಾರತದ ಇಸ್ರೊ ಹಾಗೂ ಅಮೆರಿಕದ ನಾಸಾ  ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (NISAR) ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.

ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 5:40 ಗಂಟೆಗೆ ಜಿಎಸ್‌ಎಲ್‌ವಿ- ಎಫ್‌16 ರಾಕೆಟ್‌ ಮೂಲಕ ನಾಸಾ-ಇಸ್ರೋ ಸಿಂಥೆಟಿಕ್‌ ಅಪರ್ಚರ್ ರೇಡಾರ್ (NISAR) ಉಡಾವಣೆ ಮಾಡಲಾಯಿತು. ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ತಲುಪುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.
 NISAR ಉಪಗ್ರಹ 2,392 ಕೆ.ಜಿ. ತೂಕದ ಹಾಗೂ ಡ್ಯುಯಲ್-ಫ್ರೀಕ್ವೆನ್ಸಿ ರೇಡಾರ್‌ ವ್ಯವಸ್ಥೆಗಳಿಂದ (L-ಬ್ಯಾಂಡ್ ಮತ್ತು S-ಬ್ಯಾಂಡ್) ಚಾಲಿತಯಾಗಿದ್ದು, ವಿಪತ್ತುಗಳು, ಹವಾಮಾನ ಬದಲಾವಣೆಗಳು ಹಾಗೂ ಪರಿಸರ ಬದಲಾವಣೆಗಳ ಬಗ್ಗೆ ನೈಜ-ಸಮಯದ ಡೇಟಾವನ್ನು ಒದಗಿಸಲಿದೆ. ಎಲ್ಲಾ ಹವಮಾನದಲ್ಲಿ ಹಗಲು ಮತ್ತು ರಾತ್ರಿಯ ವೇಳೆ ಹೆಚ್ಚಿನ ರೆಸಲ್ಯೂಶನ್ ಇರುವ ಚಿತ್ರವನ್ನು ಸೆರೆ ಹಿಡಿಯಲಿದೆ.

ಎಲ್‌–ಬ್ಯಾಂಡ್ ಅನ್ನು ನಾಸಾ ತಯಾರಿಸಿದ್ದರೆ ಎಸ್‌–ಬ್ಯಾಂಡ್‌ ಅನ್ನು ಇಸ್ರೊ ತಯಾರಿಸಿದೆ. ಎಸ್‌–ಬ್ಯಾಂಡ್‌ ಅನ್ನು ಸಿಂಥೆಟಿಕ್‌ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.

NISAR 13,000 ಕೋಟಿ ರೂ. ವೆಚ್ಚ 
ಇನ್ನೂ ನಿಸಾರ್‌ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್‌ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದೆ. ಮುಖ್ಯವಾಗಿ ನಿಸಾರ್‌ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಸಿಕೊಳ್ಳಬಹುದಾಗಿದೆ. 

NISAR ಉಪಹ್ರಹದಿಂದ ಏನು ಲಾಭ?

ಅರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಣೆ: ದಟ್ಟವಾದ ಸಸ್ಯವರ್ಗವನ್ನು ಭೇದಿಸುವ ಸಾಮರ್ಥ್ಯವನ್ನು NISAR ಹೊಂದಿರುವುದು ವಿಶೇಷ. ಅರಣ್ಯನಾಶ, ಅರಣ್ಯದಲ್ಲಿ ಆಗುವ ಬದಲಾವಣೆಯನ್ನು ನಕ್ಷೆ ಮಾಡುವಲ್ಲಿ ಪ್ರಬಲ ಸಾಧನವಾಗಿ ಬಳಕೆಯಾಗಲಿದೆ. ಅಕ್ರಮ ಮರ ಕಡಿಯುವಿಕೆಯನ್ನು ಪತ್ತೆಹಚ್ಚಲು, ಅಳಿವಿನಂಚಿನಲ್ಲಿರುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಡೇಟಾವನ್ನು ಬಳಸಬಹುದು.

ವಿಪತ್ತು ನಿರ್ವಹಣೆ: ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು, ಜ್ವಾಲಾಮುಖಿ ಚಟುವಟಿಕೆಗಳು ಮತ್ತು ಇತರ ನೈಸರ್ಗಿಕ ವಿಕೋಪಗಳ ಬಗ್ಗೆ NISAR ರಿಯಲ್‌ ಟೈಂ ಡೇಟಾವನ್ನು ಒದಗಿಸಲಿದೆ.ಅಧಿಕಾರಿಗಳು ಈ ಡೇಟಾವನ್ನು ಬಳಸಿಕೊಂಡು ಹಾನಿಯನ್ನು ನಕ್ಷೆ ಮಾಡಲು, ವಿಪತ್ತಿನ ಪ್ರಗತಿಯನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ.

ಹವಾಮಾನ ಮೇಲ್ವಿಚಾರಣೆ: ಉಪಗ್ರಹವು ಹಿಮನದಿ ಕರಗುವಿಕೆ, ಸಮುದ್ರ ಮಟ್ಟ ಏರಿಕೆ, ಮಣ್ಣಿನ ತೇವಾಂಶ ಟ್ರ್ಯಾಕ್ ಮಾಡುತ್ತದೆ.  ವಿಜ್ಞಾನಿಗಳಿಗೆ ಜಾಗತಿಕ ತಾಪಮಾನ ಏರಿಕೆಯ ವೇಗ ಮತ್ತು ಅದರ ಪ್ರಾದೇಶಿಕ ಪರಿಣಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕೃಷಿ ಮುನ್ಸೂಚನೆ: NISAR ಬೆಳೆ ಬೆಳವಣಿಗೆ, ಮಣ್ಣಿನ ಸ್ಥಳಾಂತರ, ನೀರಾವರಿ ಮಟ್ಟಗಳು ಮತ್ತು ಭೂ ಬಳಕೆಯ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಬಹುದು. ಇದು ಸರ್ಕಾರಗಳು ಇಳುವರಿಯನ್ನು ಊಹಿಸಲು, ನೀರಿನ ಬಳಕೆಯನ್ನು ನಿರ್ವಹಿಸಲು ಮತ್ತು ಬರ ಬರಬಹುದಾ? ಇಲ್ಲವೋ ಎಂಬುದನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

ನಗರ ಮತ್ತು ಮೂಲಸೌಕರ್ಯ ಯೋಜನೆ: ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಭೂ ಕುಸಿತ ಮತ್ತು ರಚನಾತ್ಮಕ ಬದಲಾವಣೆಗಳ ಮಾಹಿತಿ ಸಿಗಲಿದೆ. ಅಣೆಕಟ್ಟುಗಳು, ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳ ಮೇಲ್ವಿಚಾರಣೆಯಲ್ಲಿ ಉಪಗ್ರಹ ಸಹಾಯ ಮಾಡಲಿದೆ.

Continue Reading

Trending

error: Content is protected !!