Mysore
ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮಕ್ಕೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭೇಟಿ
ಸ್ಮಶಾನ ಭೂಮಿ ಪರಿಶೀಲನೆ ನಡೆಸಿದ ತಹಶೀಲ್ದಾರ್
ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಚುಂಚನಹಳ್ಳಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಸ್ಮಶಾನ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ ಎಂದು ತಾಲ್ಲೂಕು ಆಡಳಿತದ ಗಮನ ಸೆಳೆಯಲಾಗಿತ್ತು.
ಇದರಿಂದ ಎಚ್ಚೆತ್ತ ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದ 34/2 ರಲ್ಲಿ ಸುಮಾರು 500 ವರ್ಷಗಳಿಂದಲೂ ಇದೇ ಜಾಗದಲ್ಲಿ ದಲಿತರು, ಲಿಂಗಾಯಿತರು, ಮಡಿವಾಳ ಶೆಟ್ಟರು, ಅಗಸರು, ಗೆಜ್ಜಗಾರರು , ನಾಯಕರು ಸೇರಿದಂತೆ ಇನ್ನುಳಿದ ಸಮುದಾಯದವರು ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಸ್ಮಶಾನದಲ್ಲಿ ತಂತಿ ಬೇಲಿ ಅಳವಡಿಸಿ, ಅಕ್ರಮವಾಗಿ ತೆಂಗು ಬಾಳೆ ಬೆಳೆಯನ್ನು ಬೆಳೆದಿದ್ದಾರೆ. ಸ್ಮಶಾನ ಮಂಜೂರು ಮಾಡಿಕೊಡಬೇಕು ಎಂದು ಗ್ರಾಮದ ವಿಮೋಚನಾ ಯುವಕ ಸಂಘ ಮತ್ತು ಗ್ರಾಮಸ್ಥರು ಒಂದು ವರ್ಷದ ಹಿಂದೆಯೇ ದೂರು ಸಲ್ಲಿಸಿದರು.
ಇದರಿಂದ ಜಾಗೃತಗೊಂಡ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಿಭಾಗೀಯ ಸಂಚಾಲಕ ಮಂಜು ಶಂಕರಪುರ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಕವಲಂದೆ ಆರ್.ಐ ಡಿಸೋಜಾ ಸ್ಮಶಾನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಮಶಾನದಲ್ಲಿ ಗ್ರಾಮಸ್ಥರಿಗೆ ಅಂತ್ಯಸಂಸ್ಕಾರ ಮಾಡಲು ಯಾವುದೇ ತೊಂದರೆ ನೀಡುತ್ತಿಲ್ಲ ಅಧಿಕೃತವಾಗಿ ಸಾರ್ವಜನಿಕ ಸ್ಮಶಾನ ಮಾಡಿಕೊಡಿ ಎಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಈ ತಿಂಗಳ ಒಳಗೆ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭರವಸೆ ನೀಡಿದ್ದಾರೆ.

Mysore
ಸಕಲೇಶಪುರ: ಗಾಂಜಾ ಶೀನಪ್ಪ ಬಂಧನ: 14 ಕೆ.ಜಿ.ಗಾಂಜಾ ವಶ
ಮೈಸೂರು: ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, 14 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಶ್ರೀನಿವಾಸ್ ಅಲಿಯಾಸ್ ಶೀನಪ್ಪ ಅಲಿಯಾಸ್ ಗಾಂಜಾ ಶೀನ ಬಂಧಿತ ಆರೋಪಿ. ಈತ ನಗರ ವ್ಯಾಪ್ತಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ.
ಮೈಸೂರು ಪೊಲೀಸರು ಮಾದಕದ್ರವ್ಯದ ವಿರುದ್ದ ನಿರಂತರ ಕಾರ್ಯಾಚರಣೆಯಿಂದ ಈತ ಮೈಸೂರು ಬಿಟ್ಟು ಪರಾರಿಯಾಗಿದ್ದ. ಈತನ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು.

ಕಳೆದ 45 ದಿನಗಳಿಂದ ಈತನ ಪತ್ತೆಗಾಗಿ ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿಗೆ ವಿವಿಧ ಶೋಧ ತಂಡಗಳನ್ನು ಕಳುಹಿಸಲಾಗಿತ್ತು. ಭಾನುವಾರ ಆರೋಪಿಯನ್ನು ಮೈಸೂರು ಬಳಿ ಬಂಧಿಸಲಾಗಿದೆ.
ಆತನಿಂದ ಸುಮಾರು 14 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Mysore
ನಂಜನಗೂಡು| ತಾಲೂಕಿನ ಹೆಮ್ಮರಗಾಲದಲ್ಲಿ 4 ನೇ ವರ್ಷದ ಕಬಡ್ಡಿ ಕ್ರೀಡಾಕೂಟ : ಹರದನಹಳ್ಳಿ ವಿಜಯ್ ಕುಮಾರ್ ಚಾಲನೆ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಖ್ಯಾತ ಉದ್ಯಮಿ ಹರದನಹಳ್ಳಿ ಹೆಚ್.ಎನ್. ವಿಜಯಕುಮಾರ್ ಅಭಿಮಾನಿಗಳ ಬಳಗ, ಮತ್ತು ವಿಸ್ಮಯ ಕಬಡ್ಡಿ ತಂಡ ಹೆಮ್ಮರಗಾಲ ಹಾಗೂ ಸಿ. ಸೋಮಣ್ಣ ಸ್ನೇಹ ಬಳಗ ಇವರ ಸಹಯೋಗದಲ್ಲಿ ಹೆಮ್ಮರಗಾಲ ಗ್ರಾಮದ ಶ್ರೀ ಮಾಲರಸಮ್ಮನವರ ಮನೆ ದೇವರ ಹಬ್ಬದ ಪ್ರಯುಕ್ತ ನಾಲ್ಕನೇ ವರ್ಷದ ಜಿಲ್ಲಾಮಟ್ಟದ ಗ್ರಾಮಾಂತರ ಕಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಖ್ಯಾತ ಉದ್ಯಮಿ ಹರದನಹಳ್ಳಿ ವಿಜಯ್ ಕುಮಾರ್ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ , ಮುಖಂಡ ಹೆಮ್ಮರಗಾಲ ಸೋಮಣ್ಣ, ಎಸ್.ಮಹದೇವಯ್ಯ, ಸಿಂಧುವಳ್ಳಿ ಕೆಂಪಣ್ಣ, ನಾಗರತ್ನ, ರೇವಣ್ಣ, ಬದನವಾಳು ರಾಮು, ಮಹೇಶ್, ನಂಜುಂಡಸ್ವಾಮಿ, ಗುರುರಾಜ, ಕೃಷ್ಣ, ಸೇರಿದಂತೆ ಇನ್ನಿತರ ಮುಖಂಡರುಗಳೊಂದಿಗೆ ಕಬಡ್ಡಿ ಆಟಗಾರರ ಕೈಕುಲಕಿ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಇದೇ ಸಂದರ್ಭ ವಿಜಯ್ ಕುಮಾರ್, ಕುಂಬರಳ್ಳಿ ಸುಬ್ಬಣ್ಣ, ಹೆಮ್ಮರಗಾಲ ಸೋಮಣ್ಣ ಕಬ್ಬಡ್ಡಿ ಅಂಕಣದಲ್ಲಿ ಕಬ್ಬಡ್ಡಿ ಪಂದ್ಯಾವಳಿ ರವರ ಜೊತೆ ಐದು ನಿಮಿಷ ಕಾಲ ಕಬ್ಬಡ್ಡಿ ಆಟ ಆಡಿ ಗಮನ ಸೆಳೆದದರು.
ಈ ವೇಳೆ ಖ್ಯಾತ ಉದ್ಯಮಿ ಹರದನಹಳ್ಳಿ ಹೆಚ್ .ಎನ್. ವಿಜಯ್ ಕುಮಾರ್ ಮಾತನಾಡಿ ಕಬ್ಬಡ್ಡಿ ಕ್ರೀಡೆ ಗ್ರಾಮೀಣ ಕ್ರೀಡೆಯಾಗಿದ್ದು. ಗ್ರಾಮದ ಮನೆದೇವರ ಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಗ್ರಾಮದ ಮುಖಂಡರು ಕಬ್ಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ನಡೆಯುವ ಪಂದ್ಯಾವಳಿ ಜಿಲ್ಲೆಯಲ್ಲಿ ನಡೆಯುವ ಹಾಗೆ ಅದ್ದೂರಿಯಾಗಿ ನಡೆಯುತ್ತಿದೆ.
ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಆಟಗಾರರು ಇದನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಸಲಹೆ ಹೇಳಿದರು. ಈ ಪಂದ್ಯಾವಳಿ ಸೋಮಣ್ಣ ರವರ ನೇತೃತ್ವದಲ್ಲಿ ವಿಸ್ಮಯವಾಗಿ ಆಯೋಜಿಸಿದ್ದಾರೆ ಎಂದರು.

ತಾಲೂಕು ಮಟ್ಟದಲ್ಲಿ ಆಯೋಜನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಪಂದ್ಯಾವಳಿಯಾಗಲಿ ಸಹಕಾರ ಕೊಡುತ್ತೇನೆ ಮತ್ತು ನನ್ನ ಕ್ರೀಡೆಗೆ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಭರವಸೆಗಳನ್ನು ನೀಡಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ 4ನೇ ವರ್ಷದ ಹೆಮ್ಮರಗಾಲದಲ್ಲಿ ಕಬ್ಬಡಿ ಪಂದ್ಯಾವಳಿ ಆಯೋಜಿಸಿದ್ದಾರೆ. ನಾನು ಸಹ ವಿದ್ಯಾರ್ಥಿ ಸಂದರ್ಭದಲ್ಲಿ ಕಬ್ಬಡಿ ಪ್ಲೇಯರ್ ಆಗಿ ಆಟ ಆಡಿದ್ದೇನೆ. ಈ ಗ್ರಾಮದಲ್ಲಿ ಪ್ರತ್ಯೇಕವಾಗಿ ಕ್ರೀಡೆ ಪಂದ್ಯಾವಳಿ ಎಂದು ಹೆಸರುವಾಸಿವಾಗಿದೆ. ಸೋಮಣ್ಣನವರು ಉತ್ತಮವಾಗಿ ಏರ್ಪಡಿಸಿದ್ದಾರೆ ಆಟಗಾರರಲ್ಲಿ ಮನವಿ ಸೋಲು ಗೆಲುವು ಸಾಮಾನ್ಯ ತೀರ್ಪುಗಾರರ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಆಟಗಾರರಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಸಿ.ಸೋಮಣ್ಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಪಂದ್ಯಾವಳಿಯನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಕಬಡ್ಡಿ ಪಂದ್ಯಾವಳಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಎರಡೂ ಜಿಲ್ಲೆಗಳಿಂದ ಸುಮಾರು 32 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕ್ರೀಡಾ ಕೌಸಲ್ಯ ಮೆರೆದರು.
ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ದೊಡ್ಡಮಾದಶೆಟ್ಟಿ, ಗಜೇಂದ್ರ, ರಂಗಸ್ವಾಮಿ, ಮಹದೇವಶೆಟ್ಟಿ, ಮಹದೇವಸ್ವಾಮಿ, ಸಿದ್ದರಾಜು, ರಾಜೇಶ್, ಧನಂಜಯ್, ಸೇರಿದಂತೆ ಹಲವರು ಭಾಗವಹಿಸಿದ್ದರು.
Mysore
ಮಹಿಳೆಯರ ಮೇಲಿನ ಅಸುರಕ್ಷತೆ ಕಡಿಮೆಯಾಗಿಲ್ಲ: ಹೆಚ್.ಎಸ್. ಅನುಪಮ
ಹಾಸನ: ಮಹಿಳೆಯರು ಮತ್ತು ಪುರುಷರೆಲ್ಲರೂ ಸಮಾನರು ಎಂದು ಸಂವಿಧಾನ ಹೇಳಿದರೂ ಇಂದಿಗೂ ಭಾರತದಲ್ಲಿ ಮಹಿಳೆಯರ ಮೇಲಿನ ಅಸುರಕ್ಷತೆ ಕಡಿಮೆಯಾಗಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನವರ ತಾಲ್ಲೂಕಿನ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹೆಚ್.ಎಸ್. ಅನುಪಮ ಪ್ರಶ್ನಿಸಿದರು.

ಸೆಪ್ಟಂಬರ್.7 ರಂದು ಸೋಮವಾರ ನಡೆಯುವ ಅರಿವಿನ ಪಯಣ ಕಾರ್ಯಕ್ರಮದ ಅಂಗವಾಗಿ ನಗರದ ಎಂ.ಜಿ. ರಸ್ತೆ ಬಳಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಭೆ ಸೇರಿ ಕೈಪಿಡಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ವಿವಿಧ ಜಿಲ್ಲೆಗಳಲ್ಲಿ ನಾನಾ ಸೈದಾಂತಿಕ ಮತ್ತು ಔದ್ಯೋಗಿಕ ಹಿನ್ನಲೆಯ ಮಹಿಳೆಯರು, ಜನಪರ ಕೆಲಸ ಮಾಡುವ ಮಹಿಳೆಯರು ಹಾಗೂ ಸಾಮಾಜಿಕ ಕಾರ್ಯಕರ್ತರು ನಿರ್ಭಯ ಹತ್ಯಾಚಾರ ಪ್ರಕರಣದ ನಂತರ ವಿಚಾರಮಂಥನ ನಡೆಸಿದರು ಎಂದು ಸ್ಮರಿಸಿದರು.
“ನಾವೆಲ್ಲಾ ಮಹಿಳೆಯರು ಬೇರೆ ಬೇರೆ ಉದ್ಯೋಗಗಳಲ್ಲಿ, ಸಂಘಟನೆಗಳಲ್ಲಿ, ಸಂಸ್ಥೆಗಳಲ್ಲಿ ಹಂಚಿಕೊಂಡಿದ್ದರೂ ನಿರ್ಭಯ ಹತ್ಯಾಚಾರದ ಬಳಿಕ ಒಟ್ಟಾಗಿ ಸೇರಿ 2013ರಲ್ಲಿ ಮಂಗಳೂರಿನಲ್ಲಿ ಸಮಾವೇಶ ನಡೆಸಲಾಯಿತು. ದೌರ್ಜನ್ಯ ಎಂಬುದರ ವಿರುದ್ಧ ಹೋರಾಡಲು ಒಟ್ಟಾಗಿ ಸೇರಿ ಒಂದು ‘ಅಂಬ್ರೆಲಾ ಆರ್ಗನೈಸೇಷನ್’ ರಚಿಸಬೇಕೆಂಬ ಅಭಿಪ್ರಾಯ ಮೂಡಿತು.

ಮೊದಲ ಸಮಾವೇಶ ಯಶಸ್ವಿಯಾದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶಗಳನ್ನು ನಡೆಸಿ ಬಂದಿದ್ದೇವೆ. ಈಗ 2025ರಲ್ಲಿ ಹಾಸನ ಜಿಲ್ಲೆಯ ನೆಲಕ್ಕೆ ಬಂದಿದ್ದೇವೆ. ಹಾಸನ ಎಂದರೆ ಹೋರಾಟದ ನೆಲ, ಹೋರಾಟದ ತವರು. ಎಲ್ಲರೂ ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದನ್ನು ಈಗಾಗಲೇ ತೋರಿಸಿದ್ದೀರಿ. ಇಂತಹ ನೆಲದಲ್ಲಿ ವಿವಿಧ ಸೈದಾಂತಿಕ ನೆಲೆಯ ಸಂಗಾತಿಗಳು ಸೇರಿ ಒಕ್ಕೂಟವನ್ನು ಬಲಪಡಿಸುತ್ತಿದ್ದಾರೆ. ಒಕ್ಕೂಟದ ಲೋಗೋ ಸಿದ್ಧವಾಗಿದೆ. ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ, ಸಮಾನತೆಯಿಂದ ಉಸಿರು ಆಡುವ, ನಿರ್ಭೀತಿಯುಳ್ಳ ಎಲ್ಲರೂ ಈ ಒಕ್ಕೂಟದ ಭಾಗವಾಗುತ್ತಾರೆ. ಇದು ಸಂಘ, ಸಂಸ್ಥೆ ಅಲ್ಲ, ಸಂಘಟನೆಗಳ ಜಾಲ” ಎಂದು ಹೇಳಿದರು.
ಇದಲ್ಲದೇ, ದಲಿತ ಮತ್ತು ಎಡಪಂಥೀಯ ಸೈದಾಂತಿಕ ದಾರಿಗಳ ಸಮಾನ ಮನಸ್ಕರು ಒಟ್ಟಾಗಿ ಕಟ್ಟಿರುವ ಸಂಬಂಧದ ಜಾಲವೇ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವಾಗಿದೆ ಎಂದು ಅವರು ವಿವರಿಸಿದರು.

ಮುಂದಿನ 2026ರ ಮಾರ್ಚ್ ೮ರ ಮಹಿಳಾ ದಿನಾಚರಣೆವರೆಗೂ ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅದರ ಮೊದಲ ಹಂತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. “ಅನ್ಯಾಯ, ದೌರ್ಜನ್ಯ ನಡೆಯದಂತೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಯುದ್ಧಕಾಲದ ಕೆಲಸ ಎಷ್ಟು ಮುಖ್ಯವೋ, ಶಾಂತಿಕಾಲದ ಕೆಲಸವೂ ಅಷ್ಟೇ ಮುಖ್ಯ. ಮಹಿಳೆಯರು, ಮಕ್ಕಳು, ಪುರುಷರು ? ಯಾರೇ ಆಗಿರಲಿ, ಅಸಹಾಯಕರು ಹಾಗೂ ಅಧಿಕಾರ ಹೀನರ ಮೇಲಾದರೂ ದೌರ್ಜನ್ಯ ನಡೆಯದಂತೆ ಅರಿವು ಮೂಡಿಸುವ ಕಾರ್ಯಕ್ಕಾಗಿ ಹಾಸನದಲ್ಲಿ ನಾವು ಸೇರಿದ್ದೇವೆ” ಎಂದು ಅನುಪಮ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಬೇಲೂರಿನ ಸಿ. ಸೌಭಾಗ್ಯ, ಕೆ.ಜಿ. ಡಾ. ಕವಿತಾ, ಶಿವಮೊಗ್ಗದ ಟಿ.ಎಲ್. ರೇಖಾಂಬ, ಮಂಗಳೂರಿನ ವಾಣಿ ಪೆರಿಯೋಡಿ, ಮೈಸೂರಿನ ರತಿರಾವ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್. ವೆಂಕಟೇಶ್ ಮೂರ್ತಿ, ಮಮತಾ ಶಿವು, ಭಾನುಮತಿ, ಮುನೀರಾ ಬೇಗಂ, ಶಡ್ರಾಕ್ ಸೇರಿ ಅನೇಕರು ಉಪಸ್ಥಿತರಿದ್ದರು.
-
Chikmagalur7 hours agoಚಾರ್ಮಾಡಿಯಲ್ಲಿ ಸರಣಿ ಅಪಘಾತ
-
Manglore23 hours agoವಿದ್ಯಾರ್ಥಿಗಳ ರಾಷ್ಟ್ರ, ರಾಜ್ಯ ಮಟ್ಟ ಸಾಧನೆಗೆ ತಾಂತ್ರಿಕ ಕೌಶಲ್ಯದೊಂದಿಗೆ ಸ್ಮಾರ್ಟ್ ಸ್ಕಿಲ್ ಅಗತ್ಯ: ಮಂಜುನಾಥ್ ಭಂಡಾರಿ
-
Chamarajanagar10 hours agoಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಸಾ*ವು
-
Kodagu1 hour agoವಿರಾಜಪೇಟೆ| DJ ನಿಯಮ ಉಲ್ಲಂಘನೆ : FIR ದಾಖಲು
-
Chamarajanagar23 hours agoಕೊಳ್ಳೇಗಾಲ: ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ 5 ನೇ ಕ್ರಾಸ್ ರಸ್ತೆಯ ಅತಿಕ್ರಮ ಒತ್ತುವರಿ ತೆರವು
-
Mysore5 hours agoವ್ಯವಹಾರ, ತಿಳುವಳಿಕೆ ಜ್ಞಾನ ನೀಡುತ್ತಿರುವ ಜ್ಞಾನ ವಿಕಾಸ ಕೇಂದ್ರ: ಜನ ಜಾಗೃತಿ ಕೇಂದ್ರ ಸದಸ್ಯ ಎಸ್.ಬಿ. ಶೇಖರ್
-
Mysore24 hours agoಹಾಲಿನ ದರ ಮತ್ತಷ್ಟು ಹೆಚ್ಚಳ ಅಗತ್ಯ: ಆರ್.ಚಲುವರಾಜು
-
Hassan22 hours agoಸ್ಕಾಲರ್ಸ್ ಇಂಟರ್ನ್ಯಾಷನಲ್ ವಿದ್ಯಾರ್ಥಿಗಳಿಂದ ಗುರುಗಳಿಗೆ ಹೃದಯಸ್ಪರ್ಶಿ ನಮನ
