Connect with us

Mysore

ಮೈಸೂರಿನ KSRTC ಬಸ್ ನಿಲ್ದಾಣ ಸ್ಥಳಾಂತರ !! ಯಾವ ಜಾಗಕ್ಕೆ, ಯಾವಾಗ?

Published

on

ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರತೀ ದಿನ 1400ಕ್ಕೂ ಅಧಿಕ ಬಸ್‌ಗಳು ಸಂಚಾರ ನಡೆಸುತ್ತವೆ. ನಗರ ಬೆಳೆದಂತೆ ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ತನ್ನ ಸೇವೆ ವಿಸ್ತರಿಸಬೇಕಿದೆ. ಸದ್ಯ ಹೆಚ್ಚಾಗಿರುವ ಬಸ್‌ಗಳ ಸಂಖ್ಯೆಯಿಂದಾಗಿ ನಿಲ್ದಾಣದಲ್ಲಿ ವಾಹನ ದಟ್ಟಣೆ ಸೃಷ್ಟಿಯಾಗಿದೆ. ಶುಕ್ರವಾರ, ಶನಿವಾರ, ಭಾನುವಾರ, ಹಬ್ಬ ಸೇರಿದಂತೆ ಇನ್ನಿತರ ರಜೆ ಸಂದರ್ಭಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಜನರನ್ನು ಹತ್ತಿಸಿಕೊಳ್ಳಲು ಸ್ವಲ್ಪ ಹೊತ್ತು ಬಸ್‌ ನಿಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಬಸ್‌ ನಿಲ್ದಾಣ ಸ್ಥಳಾಂತರ (Mysore KSRTC New Bus Station) ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಹೌದು, ಮೈಸೂರು ಕೇಂದ್ರೀಯ ಬಸ್‌ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿಗೆ ಸೇರಿದ ಬನ್ನಿಮಂಟಪ ಡಿಪೋ ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಿದೆ. ಪ್ರಸ್ತಾವನೆಯನ್ನು ಸರಕಾರದ ಗಮನಕ್ಕೆ ತರಲು ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮುಖ್ಯವಾಗಿ ಕೊಳ್ಳೇಗಾಲ, ಮಳವಳ್ಳಿ, ತುಮಕೂರು ಭಾಗಕ್ಕೆ ತೆರಳುವ ಬಸ್‌ ನಿಲ್ಲಿಸಲು ಫ್ಲಾಟ್‌ ಫಾರಂಗಳೇ ಇಲ್ಲದೇ ಗೋಡೆಯ ಪಕ್ಕದಲ್ಲಿರುವ ಜಾಗದಲ್ಲಿಯೇ ಬಸ್‌ಗಳನ್ನು ನಿಲ್ಲಿಸಿಕೊಂಡು ಜನರನ್ನು ಹತ್ತಿಸಿಕೊಳ್ಳಬೇಕು. ಇಲ್ಲಿ ಬಸ್‌ಗೆ ಕಾಯುವ ಜನರು ಕುಳಿತುಕೊಳ್ಳಲು ಜಾಗವಿಲ್ಲ. ಚಾಮರಾಜ ನಗರ ಹಾಗೂ ಅಕ್ಕ ಪಕ್ಕದ ಕೆಲ ಪ್ಲಾಟ್‌ ಫಾರಂಗಳಲ್ಲಿ ಕೇವಲ ಎರಡು ಇಲ್ಲವೇ ಮೂರು ಬಸ್‌ ಮಾತ್ರ ನಿಲ್ಲಿಸಬಹುದು. 4ನೇ ಬಸ್‌ ಬಂದರೆ ಅದು ನಿಲ್ದಾಣದ ಪ್ರವೇಶ ದ್ವಾರದ ಬಳಿಯ ರಸ್ತೆಯಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಈ ಎಲ್ಲ ಕಾರಣಕ್ಕೆ ಹಾಲಿ ಇರುವ ಗ್ರಾಮಾಂತರ ಬಸ್‌ ನಿಲ್ದಾಣವನ್ನು ಬನ್ನಿಮಂಟಪ ಬಳಿಯ ಕೆಎಸ್‌ಆರ್‌ಟಿಸಿಗೆ ಸೇರಿದ 56 ಎಕರೆ ಜಾಗಕ್ಕೆ ವರ್ಗಾವಣೆ ಮಾಡಬೇಕೆಂಬ ಒತ್ತಾಯ ನಾಗರಿಕರಿಂದ ಕೇಳಿಬಂದಿದೆ.

ಇನ್ನು ಬನ್ನಿ ಮಂಟಪ ಬಳಿಯ ಕೆಎಸ್‌ಆರ್‌ಟಿಸಿ ಜಾಗದಲ್ಲಿಸದ್ಯ ಇರುವ ನಾಲ್ಕು ಡಿಪೊ, ವರ್ಕ್‌ಶಾಪ್‌ ಹಿಂದಕ್ಕೆ ಸ್ಥಳಾಂತರಿಸಿ ರಸ್ತೆ ಬಳಿಯ ಮುಂಭಾಗದ ಜಾಗವನ್ನು ನಿಲ್ದಾಣದ ಬಳಕೆಗೆ ಉಪಯೋಗಿಸಬೇಕು. ನಗರ ಹಾಗೂ ಕೇಂದ್ರೀಯ ಬಸ್‌ ನಿಲ್ದಾಣಗಧಿಳನ್ನು ಒಂದೇ ಕಡೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ ಆಗಿದೆ.

ಈಗಾಗಲೇ ನಗರಕ್ಕೂ ಪರ್ಯಾಯ ನಿಲ್ದಾಣ
ನಗರ ಬಸ್‌ ನಿಲ್ದಾಣಕ್ಕಾಗಿ ಸದ್ಯ ಬಳಕೆ ಮಾಡುತ್ತಿರುವ ಖಾಸಗಿ ಜಾಗಕ್ಕೆ ವರ್ಷಕ್ಕೆ ಅಂದಾಜು 60,000 ರೂ. ಪಾವತಿಸಲಾಗುತ್ತಿದೆ. ನಗರ ಪ್ರದೇಶಕ್ಕೆ ಸಾರಿಗೆ ಸೇವೆ ಒದಗಿಸಲು ಈ ಜಾಗವೂ ಸಾಕಾಗುತ್ತಿಲ್ಲ. ಒಂದು ವೇಳೆ ಕೇಂದ್ರೀಯ ಬಸ್‌ ನಿಲ್ದಾಣ ಬನ್ನಿಮಂಟಪ ಡಿಪೊ ಜಾಗಕ್ಕೆ ವರ್ಗಾಯಿಸಿದರೆ ಆ ಜಾಗದಲ್ಲಿ ನಗರ ಬಸ್‌ ನಿಲ್ದಾಣವನ್ನು ಆರಂಭಿಸಬೇಕು ಎಂಬ ಸಲಹೆಯೂ ಕೇಳಿಬಂದಿದೆ.

ಸದ್ಯ ಜನರ ಅಭಿಪ್ರಾಯ ಆಲಿಸಿ ಅದನ್ನು ಸರಕಾರದ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಇದೊಂದು ಉಪಯುಕ್ತ ಸಲಹೆಯೂ ಆಗಿರುವುದರಿಂದ ಕೂಡಲೇ ಈ ವಿಷಯಕ್ಕೆ ಸಂಬಂಧಿಸಿದ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಶ್ರೀನಿವಾಸ್‌, ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Mysore

ತಾಯಿಯಿಂದ ಬೇರ್ಪಟ್ಟಿರುವ ಹುಲಿಮರಿ ಬನ್ನೇರುಘಟ್ಟ ಪುನರ್‌ವಸತಿ ಕೇಂದ್ರಕ್ಕೆ ರವಾನೆ

Published

on

ಮೈಸೂರು: ತಾಯಿಯಿಂದ ಬೇರ್ಪಟ್ಟಿರುವ ಹುಲಿಮರಿಯನ್ನು ಬನ್ನೇರುಘಟ್ಟ ಪುನರ್‌ ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.

ಹುಣಸೂರು ತಾಲೂಕಿನ ಗುರುಪುರ ಹೊರವಲಯದಲ್ಲಿ ಸಿಕ್ಕಿರುವ 3 ತಿಂಗಳ ಹೆಣ್ಣು ಹುಲಿಮರಿ ಸಿಕ್ಕಿತ್ತು. ಹೀಗಾಗಿ ಅರಣ್ಯ ಇಲಾಖೆಯೂ ಡ್ರೋನ್‌ ಮೂಲಕ ತಾಯಿ ಹುಲಿಯ ಪತ್ತೆಗೆ  ಮುಂದಾಗಿದ್ದರು. ಆದರೆ  ಇದುವರೆಗೂ ತಾಯಿ ಹುಲಿ ಪತ್ತೆಯಾಗದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ರವಾನೆ‌ ಮಾಡಲಾಗಿದೆ.


ತಾಯಿಗಾಗಿ ಹಂಬಲಿಸುತ್ತಿರುವ ಹುಲಿ ಮರಿ

ವೀರನಹೊಸಹಳ್ಳಿಯ ಅರಣ್ಯ ಇಲಾಖೆ ಕಚೇರಿ ಸಿಬ್ಬಂದಿಯ ಆರೈಕೆಯಲ್ಲಿದ್ದ ಹುಲಿಮರಿಯನ್ನು
ಆರೋಗ್ಯದ ಹಿತದೃಷ್ಟಿಯಿಂದ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.

Continue Reading

Mysore

ಡಿ.12 ರಿಂದ 14ರವರೆಗೆ  ಮೈಸೂರು ಇಂಗ್ಲೀಷ್‌ ಥೇಟರ್ ಫೆಸ್ಟಿವಲ್: ಶಶಿಧರ್‌ ಡೊಂಗ್ರೆ

Published

on

ಮೈಸೂರು: ಮೈಸೂರು ಇಂಗ್ಲಿಷ್ ಥಿಯೇಟರ್ ಫೋರಂ (METF) ವತಿಯಿಂದ ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ನ ಮೊದಲ ಆವೃತ್ತಿ ಡಿ. 12ರಿಂದ 14ರವರೆಗೆ ವಿಜಯನಗರ 1ನೇ ಹಂತದಲ್ಲಿರುವ ಜಗನ್ನಾಥ ಆರ್ಟ್ ಅಂಡ್ ಕಲ್ಚರ್ ಕೇಂದ್ರ (JCAC)ದಲ್ಲಿ ನಡೆಯಲಿದೆ ಎಂದು METF ಸಂಸ್ಥಾಪಕ ಶಶಿಧರ್‌ ಡೊಂಗ್ರೆ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೂರು ದಿನಗಳ ನಾಟಕೋತ್ಸವದಲ್ಲಿ ಇಂಗ್ಲೀಷ್‌ ರಂಗಭೂಮಿಯ ಪಠ್ಯದ ವಾಚನಗಳು ಮತ್ತು ನಾಟಕಗಳ ಪ್ರದರ್ಶನಗಳು ಹಮ್ಮಿಕೊಳ್ಳಲಾಗಿದೆ. ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಡಿ.12ರ ಸಂಜೆ 6.00 ಗಂಟೆಗೆ ಜರುಗಲಿದ್ದು, ಕಲ್ಪ ಹೆರಿಟೇಜ್ ಟ್ರಸ್ಟ್ ನಿರ್ದೇಶಕ ಡಾ. ವಿ. ಆರ್. ಅನಿಲ್ ಕುಮಾರ್  ಮತ್ತು ಹಿರಿಯ ರಂಗಭೂಮಿ ಕಲಾವಿದೆ  ಶ್ರೀಮತಿ ಹರಿಪ್ರಸಾದ್ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಡಿ.12 ರಂದು ಸಂಜೆ 5 ಗಂಟೆಗೆ ಭಾರತೀಯ ಇಂಗ್ಲಿಷ್ ನಾಟಕಗಳ ಓದಿನ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ. ಡಿ. 13ರಂದು ಸಂಜೆ 5 ಗಂಟೆಗೆ ಕಾವ್ಯ ವಾಚನ ಮತ್ತು ಡಿ. 14ರಂದು ಸಂಜೆ 5 ಗಂಟೆಗೆ ಅಂತಾರಾಷ್ಟ್ರೀಯ ಇಂಗ್ಲೀಷ್‌ ನಾಟಕಗಳ ವಾಚನ ನಡೆಯಲಿದೆ. ಪ್ರತಿದಿನವೂ ಸಂಜೆ ನಕ್ಷತ್ರ ಅಮ್ಫಿಥಿಯೇಟರ್‌ನಲ್ಲಿ ಓಪನ್ ಮೈಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನರಿಗೆ ಮುಕ್ತ ಪ್ರವೇಶವಿದೆ ಎಂದರು.

ಉತ್ಸವದಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ

ಡಿ. 12 ರಂದು ಸಂಜೆ 6.30ಕ್ಕೆ ಕಲಾಸರುಚಿ ಸಂಸ್ಥೆಯು ಸುಂದರ್ ಸರುಕೈ ಅವರ ರಚನೆಯ ಮತ್ತು ಬದರಿ ನಾರಾಯಣ ನಿರ್ದೇಶನದ “ಟು ಫಾದರ್ಸ್” ನಾಟಕವನ್ನು ಪ್ರದರ್ಶನವಾಗುತ್ತದೆ. ಡಿ.13 ರಂದು ಸಂಜೆ 6.30ಕ್ಕೆ ವೀಮೂವ್ ಥಿಯೇಟರ್ ತಂಡದ “ಹೂ ಕಿಲ್ಡ್ ಅಗಥಾ?” ನಾಟಕವನ್ನು ಪ್ರದರ್ಶಿಸಲಿದ್ದು, ಕಥೆ: ರಂಗರಾಜ ಭಟ್ರಾಚಾರ್ಯ ಮತ್ತು ಪವನ್ ಶರ್ಮಾ; ರಂಗರೂಪ: ಆದಿತ್ಯ ನಾಯಕ್; ನಿರ್ದೇಶನ: ಪವನ್ ಶರ್ಮಾ. ಡಿ. 14ರಂದು ಸಂಜೆ 6.30ಕ್ಕೆ ದಿ ಆ್ಯಕ್ಟರ್ಸ್ ಕಲೆಕ್ಟಿವ್ ತಂಡದಿಂದ ಆಲೋಚನೆ ಅಂಶುಲ್ ಜಂಬಾನಿ ಹಾಗೂ ಪಿ.ಐ. ರಾಜೇಶ್, ರಚನೆ ಹಾಗೂ ನಿರ್ದೇಶನ ಮಾಡಿರುವ “ದಿ ಮಹಾಭಾರತ ಪ್ರಾಜೆಕ್ಟ್” ನಾಟಕದ ಪ್ರದರ್ಶನವಾಗುತ್ತದೆ ಎಂದು ತಿಳಿಸಿದರು.

ಪ್ರತಿ ನಾಟಕದ ಟಿಕೆಟ್‌ ಬೆಲೆ 200 ರೂ.  ಮತ್ತು ಮೂರು ದಿನಗಳ ನಾಟಕಕ್ಕೆ ಪಾಸ್ 500 ರೂ. ಟಿಕೆಟುಗಳು ಬುಕ್ ಮೈ ಶೋ ನಲ್ಲಿ ಕೂಡ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 91082 90415 ಸಂಪರ್ಕಿಸಬಹುದಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಸೀಮಾಂತಿನಿ ಬಿ. ಶರ್ಮಾ ಹಾಗೂ ನೀಮಾ ಮಂರ್ಜೇಕರ್‌ ಉಪಸ್ಥಿತರಿದ್ದರು.

Continue Reading

Mysore

ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ: ತಾಲೂಕು ಅಧ್ಯಕ್ಷ ಗುರುಸ್ವಾಮಿ

Published

on

ಮೈಸೂರು: ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳ ಫಲನುಭವಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಸ್ಪಂದಿಸುವ ಮೂಲಕ ಪರಿಹರಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗುರುಸ್ವಾಮಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಅದರಂತೆ ನಾವೆಲ್ಲರೂ ಪೂರಕವಾಗಿರಬೇಕು ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಬಿಪಿಎಲ್ ಪಡಿತರ ಚೀಟಿಯನ್ನು ತೆರಿಗೆ ಪಾವತಿ ಮಾಡಿದ ಆಧಾರದ ಮೇಲೆ ಎಪಿಎಲ್‌ಗೆ ಪರಿವರ್ತಿಸುವಾಗ ಕೂಲಕಂಷವಾಗಿ ಪರಿಶೀಲಿಸಬೇಕು. ಬಡಜನರು ಕೂಡ ವಿವಿಧ ಸಾಲ ಮಾಡುವಾಗ ತೆರಿಗೆ ಪಾವತಿಸಿರುತ್ತಾರೆ. ವಾಸ್ತವಾಂಶವನ್ನು ಗಮನದಲ್ಲಿರಿಸಿಬೇಕು. ನೈಜ ಫಲಾನುವಭವಿಗಳು ಅನ್ಯಭಾಗ್ಯ ಯೋಜನೆಯಿಂದ ವಂಚಿತರಾಗಬಾರದು ಎಂದರು.

ಗೃಹಜ್ಯೋತಿ ಯೋಜನೆಯಡಿ ಹೊಸದಾಗಿ ನೋಂದಣಿ ಮಾಡಿಕೊಳ್ಳುವರಿಗೆ ಅಗತ್ಯ ದಾಖಲೆ ಪರಿಶೀಲಿಸಿ ನೋಂದಣಿ ಮಾಡಿಕೊಡಿ ಎಂದು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ಯುವನಿಧಿ ಯೋಜನೆಗೆ ಒಟ್ಟು 5,646 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ. ಸೆಪ್ಟೆಂಬರ್ ಅಂತ್ಯದವರೆಗೆ 12.87 ಕೋಟಿ ರೂ. ಯೋಜನೆಯ ಫಲಾನುಭವಿಗಳಿಗೆ ತಲುಪಿದೆ ಎಂದು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಡಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ಸಾತಗಳ್ಳಿ ಘಟಕದಿಂದ ಒಟ್ಟು 2.6 ಕೋಟಿ ಮಹಿಳಾ ಮತ್ತು ಮಕ್ಕಳು ಸೌಲಭ್ಯ ಪಡೆದಿದ್ದು, 44.27 ಕೋಟಿ ಪ್ರಯಾಣದ ಮೊತ್ತವಾಗಿದೆ. ಶಾಲಾ, ಕಾಲೇಜು ಮಕ್ಕಳಿಗೆ ತೊಂದರೆ ಉಂಟಾಗದಂತೆ ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸಬೇಕು ಎಂದು ಸೂಚನೆ ನೀಡಿದರು.

ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಅನಾನುಕೂಲ ಉಂಟಾಗದಂತೆ ಸಮರ್ಪಕವಾಗಿ ಅನುಷ್ಠಾನ ಮಾಡೋಣ. ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ತಾಂತ್ರಿಕ ದೋಷದಿಂದ ಹಣ ಸಂದಾಯವಾಗದಿದ್ದರೆ ಕೂಡಲೇ ಅವರ ಪಡಿತರ ಚೀಟಿ ಸಂಖ್ಯೆ ಪಡೆದು ಸಂಬಂಧಿಸಿದ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಸಮಿತಿಯ ಸದಸ್ಯರಾದ ಬಿ.ರವಿ, ರಾಣಿ, ಎಂ.ಸೋಮಣ್ಣ, ಕರೀಗೌಡ, ಎಚ್‌.ಡಿ.ಚನ್ನಯ್ಯ, ತಾಲ್ಲೂಕು ಪಂಚಾಯಿತಿ ಪ್ರಗತಿ ಸಹಾಯಕ ಕಿಶೋರ್, ವಿಷಯ ನಿರ್ವಾಹಕ ಸೋಮಶೇಖರ್ ಸೇರಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Continue Reading

Trending

error: Content is protected !!