Connect with us

Hassan

ಶೀಘ್ರವೇ ಒಳ ಮೀಸಲಾತಿ ಜಾರಿಗಾಗಿ ಡಿಸಿ-ಸಿಎಂಗೆ ಮನವಿ

Published

on

ಹಾಸನ: ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಸಮಿತಿ ಅಡಿಯಲ್ಲಿ ನಡೆದ ಸಬೆಯಲ್ಲಿ ಕೆಲ ನಿರ್ಣಯ ಕೈಗೊಂಡು ಕೆನೆಪದರ ನೀತಿಯನ್ನು ವಿರೋಧಿಸಿದಲ್ಲದೇ ಕೂಡಲೇ ತೆಗೆದು ಹಾಕಬೇಕು. ಒಂದು ವಿಚಾರ ಸಂಕೀರಣವನ್ನ ಜಿಲ್ಲಾ ಮಟ್ಟದಲಿ ನಡೆಸಬೇಕು. ಶೀಘ್ರವೇ ಒಳಮೀಸಲಾತಿ ಜಾರಿ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಎಕ್ಸ್ ಪೋರ್ಟ್‌ಗಳ ಕರೆಯಿಸಿ ದೊಡ್ಡಮಟ್ಟದಲ್ಲಿ ಇನ್ನೊಂದು ಬಾರಿ ಜಾಗೃತಿ ಸಭೆ ಮಾಡುವುದು ಬಗ್ಗೆ ತೀರ್ಮಾನಿಸಲಾಯಿತು.

ಬಿ.ಎಸ್.ಪಿ. ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲರಾದ ಗಂಗಾಧರ್ ಬಹುಜನ್ ಉದ್ದೇಶಿಸಿ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗಾಗಿ ಹಿರಿಯರು ಹೋರಾಟ ಮಾಡಿದ ಹಿನ್ನಲೆಯಲ್ಲಿ ಒಮದು ಹಂತಕ್ಕೆ ತಲುಪಿದೆ. ಅತಿ ಹೆಚ್ಚು ಪರಿಶಿಷ್ಟ ಜಾತಿಯವರು ಇರುವ ಪಂಜಾಬಿನಲ್ಲಿ ೧೯೭೫ನೇ ಅಸವಿಯಲ್ಲಿ ಈ ಹೋರಾಟ ಪ್ರಾರಂಭವಾಗುತ್ತದೆ. ಅಲ್ಲಿನ ಸರಕಾರ ಒಳ ಮೀಸಲಾತಿಯ ವರ್ಗೀಕರಣ ಮಾಡಿ ಪರಿಶಿಷ್ಟ ಜಾತಿಗಳಿಗೆ ಚಾಲನೆ ಕೊಡುವ ಕೆಲಸ ಮಾಡಿರುವುದು ಪಂಜಾಬ್ ರಾಜ್ಯ. ಇದನ್ನೆ ಅನುಸರಿಸಿ ಮುಂದುವರೆಸಿರುವುದು ಹರಿಯಾಣ ರಾಜ್ಯ. ಈ ಎರಡು ರಾಜ್ಯಗಳ ಪ್ರೇರಣೆ ಪಡೆದುಕೊಂಡ ಆಂದ್ರ ಪ್ರದೇಶದಲ್ಲಿ ಈ ಕೂಗು ಹಬ್ಬಿದೆ. ಹರಿಯಾಣದಿಂದ ಪ್ರೇರಣೆ ಹೊಂದಿರುವುದು ಕರ್ನಾಟದವರು. ಈ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರು, ದಲಿತ ಸಮಿತಿ, ರಾಜಕೀಯ ಮುಖಂಡರು, ರಾಜಕೀಯಪಕ್ಷದವರು ಎಲ್ಲಾರೂ ಕೂಡ ಕಷ್ಟಪಟ್ಟು ಸಹಕರಿಸಿದ್ದಾರೆ. ಈ ವಿಚಾರವಾಗಿ ಚಳುವಳಿ ಹೊಂದೆಯಲ್ಲ. ರಕ್ತ ಕೂಡ ಸುರಿಸಿದೆ. ಇವೆಲ್ಲಾ ಹೋರಾಟದ ಪ್ರತಿಫಲ ಒಳಮೀಸಲಾತಿ ತೀರ್ಪು ಹೊರ ಬಂದಿದೆ. ತೀರ್ಪು ಕೊಡುವ ಸಂದರ್ಭದಲ್ಲಿ ಅಂತಿಮವಾಗಿ ನಿರ್ಧಾರಕ್ಕೆ ಬರುವ ವೇಳೆ ಒಂದು ರೀತಿಯ ಸಣ್ಣ ಕೊಳಕು ಮಾಡಿದೆ. ಅದನ್ನು ದಾಟುವುದು ಹೇಗೆ ಎಂಬುದು ಒಂದು ರೀತಿಯ ಕಾನೂನಾತ್ಮಕವಾದ ಸವಾಲು

ಆಗಿದೆ. ಒಳಮೀಸಲಾತಿ ವರ್ಗೀಕರಣ ಮೀಸಲಾತಿ ವಿಚಾರ ಏನಿದೆ ಇದನ್ನು ಹೈಕೋರ್ಟ್ ಒಪ್ಪಿಕೊಳ್ಳುತ್ತದೆ. ಇದರ ಅನುಷ್ಠಾನ ಏನಿದೆ ಅದರ ಜವಬ್ಧಾರಿಯನ್ನು ಆಯಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸುತ್ತದೆ. ಕಾಯಿದೆ, ಕಾನೂನು ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗಿಲ್ಲ. ಇದನ್ನು ಏನಿದ್ದರೂ ಕೇಂದ್ರವೇ ಮಾಡಬೇಕು. ಆರ್ಟಿಕಲ್ ೩೪೦, ೩೪೧ ನಲ್ಲಿ ಅದು ಕೇಂದ್ರ ಸರಕಾರವೇ ಮಾಡಬೇಕು, ರಾಜ್ಯ ಸರಕಾರ ಮಾಡುವಾಗಿಲ್ಲ ಎಂದು ರದ್ದುಗೊಳಿಸಲಾಗಿತ್ತು. ಮತ್ತೆ ಸುಪ್ರಿಂ ಕೋರ್ಟ್‌ಗೆ ಎತ್ತಿ ಹಿಡಿದಾಗ ಇದು ಸಂವಿಧಾನ ಬದ್ಧವಾಗಿದೆ ಇದನ್ನು ಅನುಷ್ಠಾನಗೊಳಿಸುವ ಜವಬ್ಧಾರಿ ರಾಜ್ಯ ಸರಕಾರಗಳು ತೆಗೆದುಕೊಳ್ಳಬೇಕು ಎಂದು ಹೇಳಿದೆ ಎಂದು ಕಿವಿಮಾತು ಹೇಳಿದರು. ಈ ತೀರ್ಪಿನ ಅನುಸಾರವಾಗಿ ಸಂಬಂಧಪಟ್ಟ ಮಸೂದೆ ತರಬೇಕಾಗುತ್ತದೆ. ಸದಾಶಿವ ಆಯೋಗ ಏನಿದೆ ಬಗ್ಗೆ ಹೇಳ್ಳುತ್ತಿದ್ದೇವೆ ಹೊರತು ಆ ಬಗ್ಗೆ ಪೂರ್ಣವಾಗಿ ತಿಳಿದಿರುವುದಿಲ್ಲ. ಅದರ ಪ್ರಕಾರವೇ ಮೀಸಲಾತಿ ವರ್ಗೀಕರಣ ಹಂಚಿಕೆ ಆಗಬೇಕಾ! ಅದರೊಳಗೆ ಏನಾದರೂ ಲೋಪದೋಷಗಳಿವೆಯೇ ಎನ್ನುವುದನ್ನು ಗಮನಹರಿಸಿ ಜಾರಿ ಮಾಡಿದರೇ ಗೊತ್ತಾಗುತ್ತದೆ ಎಂದು ಸಲಹೆ ನೀಡಿದರು. ಇದು ಒಂದು ರಾಜ್ಯಕ್ಕೆ ಸೀಮಿತಿದ ಬಗ್ಗೆ ಯೋಚನೆ ಮಾಡುವಂತದಲ್ಲ. ಸುಪ್ರಿಂ ಕೋರ್ಟ್ ತೀರ್ಪು ಎಂದರೇ ಇಡೀ ದೇಶಕ್ಕೆ ಅನ್ವಯವಾಗುವ ವಿಚಾರ

ಆಗಿರುವುದರಿಂದ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದರೂ ಸಹ ಇದು ಸಂವಿಧಾನದ ಅನುಗೂಣವಾಗಿ ಕಾಯಿದೆಗಳು ಮತ್ತು ಮಸೂದೆಗಳನ್ನು ತರಬೇಕಾಗುತ್ತದೆ ಎಂದು ಹೇಳಿದರು. ಮೀಸಲಾತಿ ಪರಿಕಲ್ಪನೆಗೆ ಎಲ್ಲೊ ಒಂದು ರೀತಿಯ ಕೊಡಲಿಪೆಟ್ಟು ಎನ್ನುವ ಅಂಶ ಕಾಣುತ್ತದೆ. ಎಸ್.ಸಿ.ಎಸ್.ಟಿಗೆ ಮೀಸಲಾತಿ ಕೊಟ್ಟಿರುವುದು ಆರ್ಥಿಕ ಆಧಾರದ ಮೇಲೆ ಅಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎನ್ನುವ ಕಾರಣದಿಂದ ಸಂವಿಧಾನದ ಆರ್ಟಿಕಲ್ ೧೫ ಮತ್ತು ೧೬ ರಲ್ಲಿ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನು ಕೊಟ್ಟಿದೆ ಎಂದು ಒಳಮೀಸಲಾತಿ ಕುರಿತು ವಿಚಾರವನ್ನು ತಿಳಿಸಿದರು.

ಸಭೆಯಲ್ಲಿ ಇದೆ ವೇಳೆ ಒಳ ಮೀಸಲಾತಿಗಾಗಿ ಹೋರಾಟ ಮಾಡಿದಂತಹ ಕೇಂದ್ರ ಸಚಿವ ನಾರಾಯಣಸ್ವಾಮಿ, ಆಂಜನೇಯವರಿಗೆ ಸಭೆಯಲ್ಲಿ ಚಪ್ಪಾಲೆ ತಟ್ಟುವ ಮೂಲಕ ಅಭಿನಂಧಿಸಲಾಯಿತು. ಸುಪ್ರಿಂ ಕೋರ್ಟ್‌ಗೆ ಈ ಪ್ರಕರಣ ತೆಗೆದುಕೊಂಡು ಹೋದ ಪಾರ್ಥಸಾರಥಿ ಅವರು ಮರಣ ಹೊಂದಿದ ಹಿನ್ನಲೆಯಲ್ಲಿ ಎದ್ದು ನಿಂತು ಎರಡು ನಿಮಿಷ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸೂಚಿಸಲಾಯಿತು. ನಂತರ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಕೆಲ ಸಮಯ ಜೈಕಾರ ಹಾಕಿದರು.

ಇದೆ ವೇಳೆ ಸಭೆಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ವಕೀಲ ರಾಜೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ರಾಜ್ಯ ಸಂಘಟನಾ ಸಂಚಾಲಕ ಅಂಬೂಗ ಮಲೇಶ್, ಹಿರಿಯ ಮುಖಂಡ ಹೆಚ್.ಕೆ. ಸಂದೇಶ್, ಕೆ. ಈರಪ್ಪ, ಎಡಬ್ಯೂಇ ರಂಗಪ್ಪ, ದೇವರಾಜು, ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ರಮೇಶ್, ಸತೀಶ್, ಪ್ರವೀಣ್, ಚಿಕ್ಕಣ್ಣ, ಶಿಕ್ಷಣ ಇಲಾಖೆ ಡಿಡಿಪಿಐ ನಿವೃತ್ತ ಉಪನಿರ್ದೇಶಕರಾದ ಎನ್.ಡಿ. ಸಾಲಿ, ವೀರಭದ್ರಪ್ಪ, ಜಾವಗಲ್ ಇಂದ್ರೇಶ್, ಹಳೇಬೀಡು ಭೈರೇಶ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೃಷ್ಣದಾಸ್ ಹೆಚ್.ಪಿ. ಶಂಕರ್ ರಾಜು, ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಸುವರ್ಣ, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಜಿ.ಓ. ಮಹಾಂತಪ್ಪ ಸಹ ಕಾರ್ಯದರ್ಶಿ ವಸಂತಕುಮಾರ್, ಎ.ಟಿ. ಮಂಜುನಾಥ, ಹೆಚ್.ಎಂ. ಮಹೇಶ್, ಹೇಮಂತ್ ಕುಮಾರ್, ಇತರರು ಉಪಸ್ಥಿತರಿದ್ದರು.

Continue Reading

Hassan

ಜಮೀನು ವಿಚಾಕ್ಕೆ ಕೊಲೆ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ತಾಲ್ಲೂಕಿನ ಉಮಾದೇವರಹಳ್ಳಿ ಗ್ರಾಮದಲ್ಲಿ ಶನಿವಾರ ಜಮೀನು ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.

ತಾಲ್ಲೂಕಿನ ತೇಜೂರು ಗ್ರಾಮದ ಕೆ.ಎಂ. ಪ್ರತಾಪ್‌ (43) ಮೃತರು. ತೊರಗರವಳ್ಳಿ ಗ್ರಾಮದ ಈರಯ್ಯ ಅವರ ಪುತ್ರರಾದ ಚಂದ್ರಶೇಖರ್‌, ಮೋಹನ್‌ ಹಾಗೂ ಟ್ರ್ಯಾಕ್ಟರ್‌ ಚಾಲಕ ಮೂವರು ಸೇರಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಉಮಾದೇವರಹಳ್ಳಿ ಗ್ರಾಮದ ಸರ್ವೆ ನಂ. 179ರ 3 ಎಕರೆ ಜಮೀನನ್ನು ಕಳೆದ 30 ವರ್ಷಗಳ ಹಿಂದೆ ಬ್ಯಾಂಕ್‌ ಹರಾಜಿನಲ್ಲಿ ಮೃತ ಪ್ರತಾಪ್‌ ಅವರ ತಾಯಿ ಚನ್ನಮ ಖರೀದಿಸಿದ್ದರು. ಇತ್ತೀಚೆಗೆ ಆ ಜಮೀನನ್ನು ಕೆ.ಎಂ. ಪ್ರತಾಪ್‌ ಹೆಸರಿಗೆ ಖಾತೆ ಮಾಡಿಕೊಳ್ಳಲಾಗಿತ್ತು. ಹಲವು ವರ್ಷಗಳಿಂದ ಪ್ರತಾಪ್‌ ಹಾಗು ಕುಟುಂಬಸ್ಥರೇ ಉಳುಮೆ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ.
ತೊರಗರವಳ್ಳಿ ಗ್ರಾಮದ ಚಂದ್ರಶೇಖರ್‌ ಹಾಗು ಮೋಹನ್‌ ಜಮೀನು ತಮಗೆ ಸೇರಬೇಕೆಂದು ಆಗಾಗ ಗಲಾಟೆ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ ಉಳುಮೆ ಮಾಡಲು ಈರಯ್ಯನ ಮಕ್ಕಳು ಟ್ರ್ಯಾಕ್ಟರ್‌ ಸಮೇತ ಬಂದಿದ್ದು ವಿಷಯ ತಿಳಿದು ಅಲ್ಲಿಗೆ ಪ್ರತಾಪ್‌, ತಾಯಿ ಚನ್ನಮ, ಚಿಕ್ಕಪ್ಪನ ಮಗ ಬಸವರಾಜ, ಸ್ನೇಹಿತ ಹೇಮಂತ್‌ ಅವರು ಜಮೀನಿಗೆ ಬಂದು ವಾಗ್ವಾದ ನಡೆಸಿದ್ದಾರೆ.
ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೂವರು ಸೇರಿ ಪ್ರತಾಪ್‌ನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Hassan

ಹಾಸನ| ಪ್ರತಿಯೊಬ್ಬರು ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡುವುದು ಅಗತ್ಯ: ಮಾಜಿ ಶಾಸಕ ಬಿ.ಆರ್. ಗುರುದೇವ್

Published

on

ಹಾಸನ: ಪ್ರತಿಯೊಬ್ಬರು ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡುವುದು ಅಗತ್ಯ. ತಮ್ಮ ಮಕ್ಕಳು ಎಷ್ಟೇ ದೊಡ್ಡ ಮಟ್ಟದ ಹುದ್ದೆಯಲ್ಲಿದ್ದರೂ ಕುಟುಂಬ ಸಮುದಾಯದ ವಿಚಾರ ಬಂದಾಗ ಸಂಸ್ಕಾರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಬಿ.ಆರ್. ಗುರುದೇವ್ ತಿಳಿಸಿದರು.

ನಗರದ ಸಾಲಗಾಮೆ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಭಾಂಗಣದಲ್ಲಿ ಇಂದು(ಏಪ್ರಿಲ್‌.26) ಆಯೋಜಿಸಲಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಮುದಾಯ ಅಭಿವೃದ್ಧಿ ಪಥದತ್ತ ಸಾಗಲು ಒಗ್ಗಟ್ಟು ಬಹಳ ಮುಖ್ಯ. ಈ ನಿಟ್ಟಿನಲ್ಲಿ ವೀರಶೈವ ಸಮುದಾಯದ ಅಭಿವೃದ್ಧಿ ಹಾಗೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಬಹಳ ಮುಖ್ಯ. ಪ್ರತಿಯೊಬ್ಬರು ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡುವುದು ಅಗತ್ಯ. ತಮ್ಮ ಮಕ್ಕಳು ಎಷ್ಟೇ ದೊಡ್ಡ ಮಟ್ಟದ ಹುದ್ದೆಯಲ್ಲಿದ್ದರೂ ಕುಟುಂಬ ಸಮುದಾಯದ ವಿಚಾರ ಬಂದಾಗ ಸಂಸ್ಕಾರಕ್ಕೆ ಮೊದಲ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ವೀರಶೈವ ಮಹಾಸಭಾ ಕೆಲಸ ಮಾಡಬೇಕು ಎಂದರು.

ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ವಚನಗಳನ್ನು ಬೋಧಿಸುವುದು ಅವುಗಳ ಅರ್ಥವನ್ನು ಅರ್ಥೈಸುವುದು ಹಾಗೂ ಎಲ್ಲರೂ ಒಂದೆಡೆ ಸೇರಿ ಬುದ್ಧಿಜೀವಿಗಳಿಂದ ವಿಚಾರಗಳನ್ನು ಹಂಚಿಕೊಳ್ಳುವುದು ಹೀಗೆ ಒಗ್ಗಟ್ಟಿನ ಮಂತ್ರ ಪಠಿಸುವ ಅಗತ್ಯವಿದೆ. ಅಖಿಲ ಭಾರತ ವೀರಶೈವ ಮಹಾಸಭ ಸ್ಥಾಪನೆಯಾಗಿ 104 ವರ್ಷಗಳು ಕಳೆದಿವೆ. ಆದರೆ ಇನ್ನೂ ಹೆಚ್ಚಿನ ಸಂಘಟನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಇಂದಿನ ಜನಾಂಗ ಹಿರಿಯರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಕೆಲಸಗಳಾಗಬೇಕು. ಸಂಘ- ಸಮುದಾಯಕ್ಕೆ ನಮ್ಮ ಪೂರ್ವಜರಲ್ಲಿ ಹಲವರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವರನ್ನು
ಸ್ಮರಿಸದೆ ಇರುವುದು ನಮ್ಮ ದೌರ್ಭಾಗ್ಯ. ಅವರ ಅವಿರತ ಶ್ರಮದಿಂದ ಇಂದು ಸಮುದಾಯ ಪ್ರಗತಿಯತ್ತ ಆಗುತ್ತಿದೆ ಆದುದರಿಂದ ಹಿರಿಯರನ್ನು ನೆನಪಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಅಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಹಾಸನ ತಾಲ್ಲೂಕು ವೀರಶೈವ ಲಿಂಗಾಯತ ಮಹಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾ ಶತಮಾನೋತ್ಸವ ಪೂರೈಸಿದ ಮಹಾಸಭೆಗೆ ನಾಡಿನ ಪ್ರಮುಖ ಗಣ್ಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಸಂಘಟನೆ ಒತ್ತು ನೀಡುವ ಸಮುದಾಯದ ಮೇಲೆ ಕೆಲ ಪಟ್ಟಭದ್ರರು ದುರುದ್ದೇಶದಿಂದ ಜಾತಿಗಣತಿಯಲ್ಲಿ ಜನಾಂಗದ ಸಂಖ್ಯೆಯನ್ನು ಇಳಿಮುಖ ಮಾಡುವ ಮೂಲಕ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದರು.

ಈಗಾಗಲೇ ಮಹಾಸಭಾ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಜನಾಂಗ ತಮ್ಮ ಒಳ ಪಂಗಡಗಳನ್ನು ಮರೆತು ಒಗ್ಗಟ್ಟು ಪ್ರದರ್ಶನ ಅನಿರ್ವಾಯತೆದ್ದು, ಹಾಸನ ಜಿಲ್ಲೆಯಲ್ಲಿ ಕೂಡ ಮಹಾಸಭಾ ಸಕ್ರಿಯಾಗಿದ್ದು, ಮಹಿಳಾ ಘಟಕ ಕೂಡ ಉತ್ತಮವಾಗಿ ಮುಂದಿನ ಕೆಲಸ ಮಾಡಲಿ ಎಂದು ನೂತನ ಪದಾಧಿಕಾರಿಗಳಿಗೆ ಹಾರೈಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷರಾದ ಬಿ.ಮುಕ್ತಾಂಬಾ ಮಾತನಾಡಿ, ಹೆಣ್ಣ ಮನೆಯ ಕಣ್ಣು ಹಾಗೇಯೆ ಸಮಾಜಕ್ಕೆ ದೊಡ್ಡ ಶಕ್ತಿಯಾಗಿದೆ. ಬಸವಣ್ಣನವರು ಮಹಿಳೆ ಮೊದಲು ಸಮಾನತೆ ನೀಡಿದ ಮಾಹನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಇತ್ತೀಚಿನ ದಿನದಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾಳೆ. ಆದರೂ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಿಜಕ್ಕೂ ಶೋಚನೀಯ. ಗಂಡು ಹೆಣ್ಣು ಸಮಾಜದ ಯುವ ಶಕ್ತಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಮಾನತೆ ಕೊರತೆ ಇದೆ. ಒಳ ಪಂಗಡಗಳನ್ನು ಮರೆತರೆ ಮಾತ್ರ ವೀರಶೈವ ಲಿಂಗಾಯತ ಸಮಾಜ ಪ್ರಭಲವಾಗಲಿದೆ ಎಂದ ಅವರು ಸಮಾನತೆ ನೀಡಿದ ಸಮಾಜದವರು ನಮಗೆ ಮೀಸಲಾತಿಗೆ ಹೋರಾಟ ನಡೆಯುತ್ತಿದೆ.ಮಹಿಳಾ ಘಟಕ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ ಅಬ್ಬಿಗೆರೆ ಮಾತನಾಡಿ, ಹಾನಗಲ್ ಶ್ರೀಗಳು ಸ್ಥಾಪಿಸಿದ ವೀರಶೈವ ಲಿಂಗಾಯತ ಮಹಾಸಭಾ ಇನ್ನೂ ಹೆಚ್ಚಿನ ಸಂಘಟನೆಗೆ ಒತ್ತು ನೀಡಲು ಯುವಕರು ಇಂತಹ ಕಾರ್ಯಕ್ರಮಕ್ಕೆ ಆಗಮಿಸಬೇಕಿದೆ. ಆಗ ಮಾತ್ರ ಸಂಘಟನೆ ಸಾಧ್ಯ, ಸಿದ್ದಗಂಗಾ ಶ್ರೀಗಳ ರೀತಿಯಲ್ಲಿ ಸೌಹಾರ್ದತೆ ಬಾಳು ನಮ್ಮದಾಗಲಿ, ಪ್ರತಿ ಮನೆ ಮನೆಯಲ್ಲಿ ಕಡ್ಡಾಯವಾಗಿ ಸದಸ್ಯತ್ವ ನೊಂದಣಿ ಮಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಮುಂದಾಗಿ ಎಂದು ತಿಳಿಸಿದರು.

ಹಾಸನ ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಘಟಕ ನೂತನ ಅಧ್ಯಕ್ಷೆ ಮಮತಾ ಪಾಟೀಲ್ ಮಾತನಾಡಿ, ಮಹಿಳಾ ಘಟಕದಿಂದ ಮೊದಲಿಗೆ ಮಹಾಸಭಾ ಸದಸ್ಯತ್ವ ಅಭಿಯಾನಕ್ಕೆ ನಡೆಸಲಾಗುತ್ತದೆ. ಆರೋಗ್ಯ, ಶಿಕ್ಷಣ, ಪರಿಸರ, ದಾರ್ಮಿಕ ಸೇವೆ ಮಾಡುವ ಭರವಸೆ ನೀಡಲಾಗುತ್ತದೆ. ನಮ್ಮನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದ ಕಟ್ಟಾಯ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತನೆ. ಬಸವ ಮತ್ತು ರೇಣುಕರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಲು ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಮಹಿಳಾ ಘಟಕದ ಪದಗ್ರಹಣ ಸಮಾರಂಭವನ್ನು ವೇದಿಕೆ ಮೇಲಿನ ಗಣ್ಯರು ಉದ್ಘಾಟನೆ ನಡೆಸಿದರು.

ಇದೇ ವೇಳೆ ನೂತನವಾಗಿ ಆಯ್ಕೆಯಾದ ಮಹಿಳಾ ಪದಾಧಿಕಾರಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸುವ ಜೊತೆಗೆ, ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಸಮುದಾಯ ಕಟ್ಟುವ ನಿಟ್ಟಿನಲ್ಲಿ ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ನಮ್ಮೆಲ್ಲರ ಸಹಮತ ಇದೆ ಎಂದು ಎಲ್ಲಾ ಸದಸ್ಯರು ಒಮ್ಮತದ ಅಭಿಪ್ರಾಯ ಸೂಚಿಸಿದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಹಿರಿಯ ಸದಸ್ಯರಾದ ಗುರುನಾಥ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಉಪಾಧ್ಯಕ್ಷರಾದ ಆಶಾದೇವಿ, ಶೀಲಾ ವಿಶ್ವನಾಥ್, ಎಂ.ಬಿ. ಗಿರಿಜಾಂಬಿಕ, ಧನಲಕ್ಷ್ಮಿ, ಶೊಭ ಚಂದ್ರಶೇಖರ್, ಹೆಚ್,ಎಂ. ಇಂದಿರಾ, ಬೇಲೂರು ತಾಲ್ಲೂಕು ಉಪಾಧ್ಯಕ್ಷೆ ಗೀತಾ ಪುಟ್ಟಸ್ವಾಮಿ, ಶೋಭ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

Continue Reading

Hassan

ಮರು ಮೌಲ್ಯಮಾಪನದ ನಂತರವೂ ಸೆಂಟ್ರಲ್ ಕಾಮರ್ಸ್ ಕಾಲೇಜು ಜಿಲ್ಲೆಗೆ ಪ್ರಥಮ

Published

on

ಹಾಸನ  : 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಸತತ 8ನೇ ವರ್ಷ ಶೇ.100 ರಷ್ಟು ಫಲಿತಾಂಶ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಸೆಂಟ್ರಲ್ ಕಾಮರ್ಸ್ ಕಾಲೇಜು ಮರು ಮೌಲ್ಯಮಾಪನದ ನಂತರ ಫಲಿತಾಂಶ ಉತ್ತಮಪಡಿಸಿಕೊಂಡಿದ್ದಲ್ಲದೇ ಹಾಸನ ಜಿಲೆಯಲ್ಲಿ ತನ್ನ ಅಧಿಪತ್ಯ ಮುಂದುವರೆಸಿದೆ.

ಮರುಮೌಲ್ಯಮಾಪನದ ನಂತರ ಕಾಲೇಜಿನ ಗಗನ್ ಗೌಡ ಪಿ. 596 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 4ನೇ Rank, ಸ್ಪೂರ್ತಿ ಎಸ್. 595 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ 5ನೇ Rank ಹಾಗೂ ರಾಜಶೇಕರಯ್ಯ 593 ಅಂಕಗಳನ್ನು ಪಡೆದು ಜಿಲೆಗೆ 3ನೇ ಸ್ಥಾನ ಹಾಗೂ ರಾಜ್ಯಕ್ಕೆ 7ನೇ Rank ಪಡೆದಿರುತ್ತಾರೆ.

ಕಾಮರ್ಸ್ ವಿಭಾಗದಲ್ಲಿ ಜಿಲ್ಲೆಯ ಪ್ರಥಮ 10 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳೇ ಪಡೆದಿರುವುದು ಹಾಗೂ ರಾಜ್ಯದ ಪ್ರಥಮ 10 ಸ್ಥಾನಗಳಲ್ಲಿ ಕಾಲೇಜಿನ 6 ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಉತ್ತಮ ಫಲಿತಾಂಶ ಪಡೆದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಾಂಶುಪಾಲೆ ಶ್ರೀಮತಿ ಪರಿಮಳ ಮಹೇಶ್ ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿರುತ್ತಾರೆ.

Continue Reading

Trending

error: Content is protected !!