Connect with us

Mysore

ನಾನು ಒಂದು ಬಾರಿಯೂ ಮತ ಹಾಕುವುದನ್ನ ಮರೆತಿಲ್ಲ 90 ವರ್ಷ ದ ವೃದೇ ಗಿಡಮ್ಮ.

Published

on

ಕೊಳ್ಳೇಗಾಲ ತಾಲ್ಲಕಿನ ಸೂರಪುರ ಗ್ರಾಮದ 90 ವರ್ಷ ದ ಗಿಡಮ್ಮ ನಾನು ಮತ ಹಾಕುವುದನ್ನು ಎಂದಿಗೂ ಮರೆತಿಲ್ಲ ಪ್ರತಿ ಬಾರಿ ವು ನಾನು ತಪ್ಪದೆ ಮತ ವನ್ನು ಚಲಾಯಿಸುತ್ತೇನೆ ಎಂದು ಉರ್ಗೋಲು ಇಡಿದು ಬಂದ ವೃದೇ ಯ ಮಾತು.
ಇದೇ ವೇಳೆ ಮಾಜಿ ಶಾಸಕರು ಹಾಲಿ ಉಗ್ರಣ ನಿಗಮದ ಅಧ್ಯಕ್ಷರಾದ ಜಯಣ್ಣ ರವರು ಸುರಪುರದ ಕಾಂಗ್ರೆಸ್ ಮುಖಂಡ ರಾಜೂಗೌಡ ರವರ ಮನೆಗೆ ಭೇಟಿ ನೀಡಿ ಚುನಾವಣೆ ಯ ರುಪುರೇಶ ದ ಬಗ್ಗೆ ಚರ್ಚೆ ನಡೆಸಿ ಮಾತನಾಡಿ ದ ಅವರು ಕೊಳ್ಳೇಗಾಲ ಕ್ಷೇತ್ರ ದಲ್ಲಿ ಕಾಂಗ್ರೆಸ್ ಗೆ ಉತ್ತಮ ಸ್ಥಿತಿಯಲ್ಲಿದೆ ಹಾಗೂ ಚಾಮರಾಜನಗರ ಲೋಕಸಭಾ
8 ಕ್ಷೇತ್ರ ಗಳಲ್ಲಿ,7 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆ ಯಾಗಿದ್ದರೆ ಈಗಾಗಿ ಕಾಂಗ್ರೆಸ್ ಪಕ್ಷ ಕ್ಕೆ ಪ್ಲಸ್ ಪಾಯಿಂಟ್ ಅಂದರು.

Continue Reading
Click to comment

Leave a Reply

Your email address will not be published. Required fields are marked *

Mysore

ಬಿಜೆಪಿಗೆ ದಲಿತರನ್ನು ಕಂಡರೆ ಆಗಲ್ಲ ಲಕ್ಷ್ಮಣ್ ಕಿಡಿ

Published

on

ಮೈಸೂರು: ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯವು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಕಾಂಗ್ರೆಸ್ ಈಗ ಜಾತಿಯ ಬಣ್ಣ ಬಳಿಯಲು ಮುಂದಾಗಿದೆ.

ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ.ಲಕ್ಷ್ಮಣ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಡಿ ದಾಳಿಯನ್ನು ಬಲವಾಗಿ ಖಂಡಿಸಿದರು. ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಡಾ.ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿರುವುದು ಬಿಜೆಪಿಗೆ ದಲಿತರನ್ನು ಕಂಡರೆ ಆಗುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.


ಕೇಂದ್ರ ಸರ್ಕಾರ ದಲಿತ ನಾಯಕರನ್ನು ಟಾರ್ಗೆಟ್ ಮಾಡಿದೆ. ಕೇಂದ್ರ ಸರ್ಕಾರದ ಇಂತಹ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪ್ರಭಾವಿ ನಾಯಕರ ಮೇಲೆ ಇಡಿ ದಾಳಿ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದರೆ ಸಂಬಂಧಿಸಿದ ಶಿಕ್ಷಣ ಇಲಾಖೆ ಮೇಲೆ ತನಿಖೆ ನಡೆಸಬೇಕು. ಆದರೆ ಇಡಿಗೆ ಈ ರೀತಿಯ ದಾಳಿ ಮಾಡಲು ಅಧಿಕಾರ ಇಲ್ಲ ಎಂದರು.

ಪರಮೇಶ್ವರ್ ಅವರು ತಮ್ಮ ತಂದೆ ಕಾಲದಿಂದಲೂ ಶಿಕ್ಷಣ ಸಂಸ್ಥೆ ನಡೆಸುತ್ತಾ ಬಂದಿದ್ದಾರೆ. ಇಡಿ ದಾಳಿ ಮಾಡಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದುವರೆಗೆ ಕೇಂದ್ರ ಸರ್ಕಾರ 28,878 ಇಡಿ ದಾಳಿ ಮಾಡಿದೆ. ಅದರಲ್ಲಿ ಕೇವಲ 992 ಪ್ರಕರಣಗಳಿಗೆ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಶಿಕ್ಷೆ ಆಗಿರುವುದು ಕೇವಲ 23 ಪ್ರಕರಣಗಳಲ್ಲಿ ಮಾತ್ರ. ಶೇಕಡಾ 98ರಷ್ಟು ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದರು.

ಇನ್ನೂ ಏಳೆಂಟು ದಲಿತ ಮುಖಂಡರ ಪಟ್ಟಿ ಮಾಡಿದ್ದು, ಇವರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುವ ಸಾಧ್ಯತೆ ಇದೆ. ಜಾತಿ ಗಣತಿ ವರದಿ ಬಂದರೆ ದಲಿತರು ತಮ್ಮ ಪರವಾಗಿ ಇರುವುದಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ಆದರೆ ನಾವೆಲ್ಲ ಪರಮೇಶ್ವರ ಪರ ಇದ್ದೇವೆಂದು ಸ್ಪಷ್ಟಪಡಿಸಿದರು.

ಇನ್ನು ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿರುವ ಭಾಷಣವನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ. ಒಬ್ಬ ಸಕ್ರಿಯ ರಾಜಕಾರಣದಲ್ಲಿರುವ ಮುತ್ಸದ್ದಿ ರಾಜಕಾರಣಿಯ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಪ್ರತಾಪ ಸಿಂಹ ಅವರಿಗೆ ದಲಿತ ಸಮುದಾಯದ ಜನ ತಕ್ಕ ಬುದ್ಧಿ ಕಲಿಸಬೇಕು. ಪಹಲ್ಗಾಮ್ ದಾಳಿ ವಿಷಯದಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡಿದರು. ಅಂತಹ ವಿಚಾರಗಳನ್ನ ನಾವು ಪ್ರಶ್ನೆ ಮಾಡಿದರೆ ತಪ್ಪೇನು, ಮಾಹಿತಿ ಕೇಳುವುದು, ಕದನ ವಿರಾಮ ಯಾವಾಗ, ಏಕೆ ಘೋಷಣೆ ಮಾಡಿದಿರಿ ಎಂದು ಕೇಳುವುದು ತಪ್ಪೇ, ನಾವು ದೇಶ ದ್ರೋಹಿಗಳೇ, ಕೊಂದವರು ಯಾರು ಎಂದು ಇನ್ನೂ ಕಂಡು ಹಿಡಿದಿಲ್ಲ ಎಂದರು.

Continue Reading

Mysore

ಸಾಧನಾ ಸಮಾವೇಶ ಬೆನ್ನಲ್ಲೇ ಬಿಜೆಪಿಯಿಂದ ಚಾರ್ಜ್ ಶೀಟ್ ಬಿಡುಗಡೆ

Published

on

ಮೈಸೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಎರಡು ವರ್ಷಗಳ ಅಧಿಕಾರ ಅವಧಿ ಮುಗಿಸಿ ಸಾಧನಾ ಸಮಾವೇಶ ನಡೆಸಿದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿಯು ಸರಕಾರದ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ.

ಸಿದ್ದರಾಮಯ್ಯ ಸರಕಾರ ಸಾಧನಾ ಸಮಾವೇಶ ನಡೆಸಿ ಆರನೇ ಗ್ಯಾರಂಟಿ ಪ್ರಕಟಿಸಿದರೆ ಇತ್ತ ಬಿಜೆಪಿಯು ಸರಕಾರದ ವಿರುದ್ಧ ಆರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೇವಲ ಎರಡು ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ3.6 ಲಕ್ಷ ಕೋಟಿ ರೂ ಸಾಲ ಮಾಡಿರುವ ಸಾಧನೆಗೆ ಈ ಸಾಧನ ಸಮಾವೇಶ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯದಲ್ಲಿ ಹಾಲು, ಕುಡಿಯುವ ನೀರು, ವಿದ್ಯುತ್‌, ಡೀಸೆಲ್‌ ಪೆಟ್ರೋಲ್‌, ಬರ್ತ್‌ ಸರ್ಟಿಫಿಕೇಟ್‌ ನಿಂದ ಸ್ಮಶಾನದ ಸೌದೆಯವರೆಗೂ ಬೆಲೆ ಏರಿಕೆ ಮಾಡಿ, ಜನತೆಯ ಮೇಲೆ ಭಾರಿ ಪ್ರಮಾಣದ ಸಾಲದ ಹೊರೆ ಹೊರಿಸಿದ್ದಾರೆ. ಗೃಹಲಕ್ಷ್ಮಿ ಹಣಕ್ಕೆ ತಿಂಗಳುಗಟ್ಟಲೆ ಸತಾಯಿಸುತ್ತಾರೆ.ಅನ್ನಭಾಗ್ಯದಲ್ಲಿ ಅಕ್ಕಿಯಲ್ಲಿ ಕಲ್ಲು, ಗೃಹಜ್ಯೋತಿ ಹೆಸರಲ್ಲಿ ಅಧಿಕ ವಿದ್ಯುತ್‌ ಬಿಲ್‌ ವಸೂಲಿಮಾಡುತ್ತಿದ್ದಾರೆ. ಬಸ್‌, ಮೆಟ್ರೋದರ, ಪಾರ್ಕಿಂಗ್‌ ಶುಲ್ಕ, ಕಸದ ಸೆಸ್ಕ್‌, ಸ್ಮಾರ್ಟ್‌ ಮೀಟರ್‌ ಶುಲ್ಕ, ತಪಾಸಣೆ ಶುಲ್ಕಗಳು ಸೇರಿದಂತೆ ವಿವಿಧ ತೆರಿಗೆಗಳ ವಿಪರೀತ ಏರಿಕೆ ಮಾಡಿರುವುದು ಇವರ ಸಾಧನೆ ಯಾಗಿದೆ ಎಂದು ರವಿ ಟೀಕಿಸಿದರು.

ಶಕಿಯೋಜನೆ ಅನುಷ್ಠಾನದಲ್ಲಿ ಲೋಪ ಕಂಡುಬಂದಿದೆ. ಬಸ್‌ ಗಳ ಸಂಚಾರ ಮಾರ್ಗ ಬದಲಿಸಿ ಶಾಲಾ ಮಕ್ಕಳ ನಿತ್ಯ ಸಂಕಟಕ್ಕೆ ಕಾರಣರಾಗಿದ್ದಾರೆ. ಗುತ್ತಿಗೆದಾರರಿಂದ ಶೇ.60 ಕಮೀಷನ್ ಸರಕಾರ ಎಂಬ ಬಹಿರಂಗ ಅರೋಪಗಳು ಕೇಳಿ ಬಂದಿವೆ. ಕಾಮಗಾರಿಗೆ ಬಿಲ್‌ ಪಾಸ್‌ ಮಾಡಲು ಇವರ ಬಳಿ ಹಣ ವಿಲ್ಲ. ಇನ್ನು ಯಾವ ಪುರುಷಾರ್ಥಕ್ಕೆ ರಾಜ್ಯದ ಜನರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶ ಮಾಡಿದ್ದಾರೆ ಎಂದು ಅವರು ಹರಿಹಾಯ್ದರು.

ಮಧ್ಯ ಕರ್ನಾಟಕಕ್ಕೆ ಅಭಿವೃದ್ದಿ ಮರೀಚಿಕೆಯಾಗಿದೆ. ನೀರಾವರಿ ಯೋಜನೆಗೆ ಹಣವಿಲ್ಲದ ಪರಿಸ್ಥಿತಿ ಬಂದಿದ್ದಾರೆ. ರಸ್ತೆ ಸೇತುವೆ ದುರಸ್ತಿಯಿಲ್ಲ, ಕುಡಿಯುವ ನೀರಿಗೆ ಹಾಹಾಕಾರ ಬಂದಿದೆ. ರಾಜ್ಯದಲ್ಲಿ ಬಿತ್ತನೆ ಬೀಜ,ಗೊಬ್ಬರ, ಕೃಷಿ ಉಪಕರಣಗಳ ಬೆಲೆ ಏರಿಕೆ, ವಿವಿಧ ಬೆಳೆಗಾರರಿಗೆ ಬೆಂಬಲ ಬೆಲೆ ನೀಡದೆ ರೈತರ ಆರ್ಥಿಕತೆಗೆ ಕೊಡಲಿಪೆಟ್ಟು ನೀಡಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರ ರೈತ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ದರೋಡೆ, ಕೊಲೆ, ಸುಲಿಗೆ ಜಾಸ್ತಿಯಾಗಿದೆ. ಆರೋಪಿಗಳಿಗೆ ರಾಜಾಶ್ರಯ ನೀಡುತ್ತಿದ್ದಾರೆ. ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಎಡವಿದ್ದಾರೆ. ಜಾತಿ ಜಾತಿಗಳ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನ ವರ್ತನೆ ಪಾಕಿಸ್ತಾನಿ ಕಾಂಗ್ರೆಸ್‌ ವರ್ತನೆಯಾಗಿದೆ. ಕಾಂಗ್ರೆಸ್‌ ನಾಯಕರ ಹೇಳಿಕೆಯನ್ನು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ತನ್ನನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿದೆ ಎಂದರು.

ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಎಷ್ಟು ತೆರಿಗೆ ಹಣ ನೀಡುತ್ತಿದ್ದರೋ ಅದಕ್ಕೂ ಅಧಿಕವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಕ್ಕೆ ಈಗ ನೀಡುತ್ತಿದೆ. ಆದರೆ ಸಿದ್ದರಾಮಯ್ಯ ಅವರು ಜನರಿಗೆ ಸುಳ್ಳಿನ ಮಾಹಿತಿಯನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ರವಿ ಉತ್ತರಿಸಿದರು.

Continue Reading

Mysore

ತಿರುಪತಿ ತಿರುಮಲ ದೇಗುಲಕ್ಕೆ ಅಖಂಡ ದೀಪ ಸಮರ್ಪಣೆ

Published

on

ಮೈಸೂರು: ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ತಿರುಪತಿಯ ತಿರುಮಲ ದೇವಸ್ಥಾನಕ್ಕೆ ಹೊಸ ಬೆಳ್ಳಿ ಅಖಂಡ ದೀಪದ ಜೋಡಿಯನ್ನು ಸಮರ್ಪಿಸಿದ್ದಾರೆ.

ಶ್ರೀ ತಿರುಪತಿ ತಿರುಮಲ ದೇವಾಲಯದ ಗರ್ಭಗುಡಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಬೆಳ್ಳಿ ಅಖಂಡ ದೀಪದ ಜೋಡಿಯನ್ನು ತಮ್ಮ ಪೂರ್ವಜರಾದ ಮೈಸೂರಿನ ಮಹಾರಾಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ದಾನವಾಗಿ ನೀಡಿದ್ದರು. ಆ ದಿನದಿಂದ ಇಂದಿನವರೆಗೆ ಅವು ನಿರಂತರವಾಗಿ ಬಳಸಲ್ಪಡುತ್ತಿವೆ. ಈಗ ಅವು ಪುನಶ್ಚೇತನಗೊಳ್ಳುವ ಅವಶ್ಯಕತೆ ಇದೆ. ಅತ್ಯಂತ ನಮನ ಹಾಗೂ ಭಕ್ತಿಯಿಂದ ಹಳೆಯ ಅಖಂಡ ದೀಪಗಳ ಬದಲಿಗೆ ಹೊಸ ಬೆಳ್ಳಿ ಅಖಂಡ ದೀಪದ ಜೋಡಿಯನ್ನು ಸಮರ್ಪಿಸಿದ್ದೇನೆ ಎಂದು ಪ್ರಮೋದಾದೇವಿ ಒಡೆಯರ್ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದು ನನ್ನ ಆಧ್ಯಾತ್ಮಿಕ ನಂಬಿಕೆ ಮತ್ತು ಶ್ರದ್ಧೆಯ ಪ್ರತೀಕವಾಗಿದೆ. ನನ್ನ ಪೂರ್ವಜರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಲು ಈ ಅವಕಾಶ ದೊರೆತಿದ್ದಕ್ಕಾಗಿ ನಿಜಕ್ಕೂ ಕೃತಜ್ಞನಾಗಿದ್ದೇನೆ. ಈ ಪವಿತ್ರ ಕಾರ್ಯವನ್ನು ನೆರವೇರಿಸಲು ಅವಕಾಶ ಮತ್ತು ಅನುಗ್ರಹ ನೀಡಿದ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಮೋದಾದೇವಿ ಒಡೆಯರ್ ಅವರು ಹೇಳಿದ್ದಾರೆ.

ಹೊಸ ಬೆಳ್ಳಿ ಅಖಂಡ ದೀಪದ ಜೋಡಿಯ ತೂಕ ಮತ್ತು ಮೌಲ್ಯದ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಊಹಾತ್ಮಕವಾಗಿದೆ. ನಾನು ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ನಾನು ತೂಕ ಅಥವಾ ಮೌಲ್ಯವನ್ನು ಬಹಿರಂಗಪಡಿಸಿದ್ದೇನೆ ಎಂಬ ಮಾಹಿತಿಯು ಸರಿಯಲ್ಲ ಎಂದು ಪ್ರಮೋದಾದೇವಿ ಒಡೆಯರ್ ಅವರು ಸ್ಪಷ್ಟಪಡಿಸಿದ್ದಾರೆ.

Continue Reading

Trending

error: Content is protected !!