Mandya
ಮರಿತಿಬ್ಬೇಗೌಡ ಬದಲಿಗೆ ನನ್ನನ್ನು ಬೆಂಬಲಿಸಿ – ಪುಟ್ಟ ಸಿದ್ದಶೆಟ್ಟಿ

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಪಕ್ಷಾಂತರಿಯಾಗಿದ್ದು, ಶಿಕ್ಷಕರ ಪರವಾಗಿ ಯಾವುದೇ ಕಾರ್ಯವನ್ನು ಮಾಡಿಲ್ಲ. ಆದ್ದರಿಂದ ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದು, ನನ್ನನ್ನು ಬೆಂಬಲಿಸುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಿ ತಿಬ್ಬೆಗೌಡರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಆದರೆ ಶಿಕ್ಷಕರ ಪರವಾಗಿ ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂದು ಆಪಾದಿಸಿದರು.

ನಾನು 1994 ರಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದು, ಹಾಗೆಯೇ ಕಾಯಕ ಸಮಾಜ ಒಕ್ಕೂಟವನ್ನು ಸ್ಥಾಪಿಸಿ ಮೂರು ಮಂದಿಯನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ್ದಲ್ಲದೆ ಇತರ ಪಕ್ಷಗಳ ಅಭ್ಯರ್ಥಿಗಳಿಗೂ ಬೆಂಬಲ ನೀಡಿ ಅವರನ್ನು ಗೆಲ್ಲಿಸಿರುವುದಾಗಿ ಹೇಳಿಕೊಂಡರು.
ಹೆಚ್.ಕೆ.ಪಾಟೀಲ, ರಾಮಚಂದ್ರಗೌಡ ಸೇರಿದಂತೆ ಇತರರಿಗೆ ನಮ್ಮ ಸಂಘಟನೆ ವತಿಯಿಂದ ಬೆಂಬಲ ನೀಡಿದ್ದು 1990ರಲ್ಲಿ ಮರಿ ತಿಬ್ಬೇಗೌಡರನ್ನು ಗೆಲ್ಲಿಸಿದ್ದೇವೆ. ಅವರು ಶಿಕ್ಷಕರ ಸಂಘವನ್ನು ಮೆಟ್ಟಿಲಾಗಿ ಮಾಡಿಕೊಂಡು ಹೋಗಿದ್ದಾರೆ. ಆದರೆ ಶಿಕ್ಷಕರ ಪರವಾಗಿ ಯಾವುದೇ ಕೆಲಸವನ್ನು ಮಾಡಿಲ್ಲ ಎನ್ನುವ ದೂರು ಅವರ ಮೇಲಿದೆ ಎಂದರು .

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. .ಆದರೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಿಕ್ಷಕರಿಗೆ ನೀಡಿದ್ದ ಭರವಸೆಗಳಾದ ಹಳೆ ಪಿಂಚಣಿ ವ್ಯವಸ್ಥೆ , 7 ನೇ ವೇತನ ಜಾರಿ ಸೇರಿದಂತೆ ಇತರ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಕಿಡಿಕಾರಿದರು .
ಮರಿತಿಬ್ಬೇಗೌಡರು ಮೊದಲು ಕಾಂಗ್ರೆಸ್ ನಲ್ಲಿದ್ದು ನಂತರ ಜೆಡಿಎಸ್ ಗೆ ಸೇರಿ ತರುವಾಯ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ,ಅವರು ಪಕ್ಷಾಂತರಿ ಆಗಿದ್ದಾರೆ ಎಂದು ಕಿಡಿ ಕಾರಿದರು.
ಈ ಬಾರಿ ತಾವು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಶಿಕ್ಷಕರು ತಮ್ಮನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾಯಕ ಸಮಾಜ ಒಕ್ಕೂಟದ ರಾಜ್ಯ ಸಂಚಾಲಕ ಹೆಚ್ಎಲ್ ಕೆಂಪಶೆಟ್ಟಿ ,ಉಪಾಧ್ಯಕ್ಷ ಶಿವಪ್ಪ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶಿವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Mandya
ಅನ್ಯಾಯದ ವಿರುದ್ಧ ಬರೆಯುವುದೇ ಬಂಡಾಯ ಸಾಹಿತ್ಯ: ಹುರುಗಲವಾಡಿ ರಾಮಯ್ಯ
ಮದ್ದೂರು: ಅನ್ಯಾಯದ ವಿರುದ್ಧ ಮಾತನಾಡುವುದು ಮತ್ತು ಬರೆಯುವುದೇ ಬಂಡಾಯ ಸಾಹಿತ್ಯ ಎಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಸಾಮಾಜಿಕ ಚಳವಳಿ ನೇತಾರ ನಾರಾಯಣ ಗುರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯೇ ಬಂಡಾಯ ಸಾಹಿತ್ಯವನ್ನು ಹುಟ್ಟುಹಾಕಿದೆ, ದಲಿತ ಚಳವಳಿಯೇ ನಿಜವಾದ ಜಾತ್ಯತೀತ ಚಳವಳಿಯಾಗಿದೆ ಎಂದರು.
ದಲಿತ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಇನ್ಯಾವುದೇ ಸಂಘಟನೆ ಗೆ ಪರ್ಯಾಯ ಸಂಘಟನೆ ಅಲ್ಲ. ದಲಿತರ ಪರವಾಗಿ ಯಾರು ಚಿಂತನೆವುಳ್ಳವರು ಈ ಪರಿಷತ್ತಿನ ಒಡನಾಡಿ ಗಳು, ಬಂಧುಗಳಾಗಿದ್ದಾರೆ ಎಂದು ಹೇಳಿದರು.

ದಲಿತ ಕೇವಲ ಜಾತಿ ಸೂಚಕ ಪದವಲ್ಲ. ತುಳಿತಕ್ಕೊಳ್ಳಗಾದ, ದೌರ್ಜನ್ಯಕ್ಕೊಳಗಾದ, ನೊಂದವರೆಲ್ಲರೂ ದಲಿತರಾಗಿದ್ದಾರೆ. ತಮಗಾಗುತ್ತಿರುವ ದೌರ್ಜನ್ಯದ ವಿರುದ್ದ ದನಿ ಎತ್ತುವುದೇ ದಲಿತ ಸಾಹಿತ್ಯದ ತಿರುಳಾಗಿದೆ ಎಂದರು.
ಶಿಕ್ಷಕ ಹಾಗೂ ಸಾಹಿತಿ ಬಿ.ವಿ. ಹಳ್ಳಿ ನಾರಾಯಣ ಅವರು ಮಾತನಾಡಿ, ನಾರಾಯಣ ಗುರು ಅವರು ಅಸ್ಪೃಶ್ಯತೆಗೆ ಒಳಗಾಗಿದ್ದ ಈಳವ ಸಮುದಾಯದ ವಿಮೋಚನೆಗಾಗಿ ದುಡಿದ ಮಹನೀಯ. ಜಾತಿ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯನ್ನು ದೇಶಕ್ಕಂಚಿದ ದಾರ್ಶನಿಕ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಡಯಟ್ ನ ನಿವೃತ್ತ ಶಿಕ್ಷಕ ಗುರುಮೂರ್ತಿ ಅವರು, ದಲಿತ ಸಾಹಿತ್ಯ ಹೋರಾಟದ ಹಾಡುಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯವಾಗಿದೆ. ವ್ಯವಸ್ಥೆಯ ವಿರುದ್ದ ಪ್ರಶ್ನೆ ಮಾಡುವುದೆ ಮೂಲಕ ದಲಿತ ಪ್ರಜ್ಞೆ ಹುಟ್ಟಿಕೊಂಡಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಗೌರವ ಅಧ್ಯಕ್ಷೆ ಸುಶೀಲಮ್ಮ, ರಾಣಿ ಐಶ್ವರ್ಯ ಡೆವಲಪರ್ಸ್ ಮಾಲೀಕ ಎಚ್.ಎಲ್. ಸತೀಶ್ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ ಅವರು, ಸರೋಜಮ್ಮ ಲಿಂಗರಾಜು ಅವರ ಹಕ್ಕಿಗೂಡು ಕವನ ಸಂಕಲನ ಕುರಿತು ಮಾತನಾಡಿದರು.
ಸಾಹಿತಿ ಹಾಗೂ ಪತ್ರಕರ್ತ ಬಿ.ಎಲ್. ಮಧುಸೂದನ್, ಪ್ರಾಧ್ಯಾಪಕ ಡಾ. ಹೊಂಬಯ್ಯ ಹೊನ್ನಲಗೆರೆ, ಶಿಕ್ಷಕಿ ಹಾಗೂ ಕವಯತ್ರಿ ಸರೋಜಮ್ಮ ಲಿಂಗರಾಜು ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಬೆಸಗರಹಳ್ಳಿ ಸತ್ಯ ಅವರು ಗೀತ ಗಾಯನ ನಡೆಸಿಕೊಟ್ಟರು.
ದಸಾಪ ತಾಲ್ಲೂಕು ಗೌರವ ಅಧ್ಯಕ್ಷ ಹನುಮಂತ ರಾಯಪ್ಪ ಅಧ್ಯಕ್ಷತೆ ವಹಿಸಿದ್ದರು.
ದಸಾಪ ತಾಲ್ಲೂಕು ಅಧ್ಯಕ್ಷ ಕೆ.ಟಿ. ಶಿವಕುಮಾರ್, ಬಿಇಒ ಧನಂಜಯ, ಡಿ.ಸಿ. ಮಹೇಂದ್ರ, ಶಶಿಕುಮಾರ, ಕಾರ್ಕಹಳ್ಳಿ ಬಸವರಾಜ ಪಾಲ್ಗೊಂಡಿದ್ದರು.
Mandya
ಮೈಷುಗರ್ ಕಂಪನಿ ವ್ಯಾಪ್ತಿಯಲ್ಲಿ ಅಕ್ರಮವಾಗಿ 27.39 ಎಕರೆ ಸ್ವತ್ತಿನ ಅನುಭವದಲ್ಲಿ : ಸಿ.ಡಿ.ಗಂಗಾಧರ್
ಮಂಡ್ಯ: ಮೈಷುಗರ್ ಕಂಪನಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅನುಭವದಲ್ಲಿರುವ 27.39 ಎಕರೆ ಸ್ವತ್ತಿನ್ನು ಗುರುತಿಸಲಾಗಿದೆ. ಅಕ್ರಮವಾಗಿ ಅನುಭವದಲ್ಲಿ ಇರುವವರು ಕೂಡಲೇ ಮೈಷುಗರ್ ಕಂಪನಿ ಸ್ವಾಧೀನಕ್ಕೆ ಸದರಿ ಸ್ವತ್ತನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಂಪನಿಯ ಸುಮಾರು 7.10 ಎಕರೆ ವಾಣಿಜ್ಯ ಭೂಮಿ ಹಾಗೂ ಸುಮಾರು 20.29 ಎಕರೆ ವ್ಯವಸಾಯ ಭೂಮಿಯು ಅನಧಿಕೃತ ಅನುಭವದಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದರು.
ಮೈಷುಗರ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅನುಭವದಲ್ಲಿರುವ ಭೂಮಿ ಪತ್ತೆಗೆ ತಹಶೀಲ್ದಾರ್ ಜೊತೆಗೂಡಿ ಕಂಪನಿಯ ಆಡಳಿತ ಮಂಡಳಿಯು ಇದೇ ಮೇ.12 ಮತ್ತು ಜೂನ್ 30ರಂದು ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರೊಂದಿಗೆ ಚರ್ಚಿಸಿ ಮಾಹಿತಿ ಕಲೆಹಾಕಲಾಗಿದೆ ಎಂದು ಹೇಳಿದರು.

ಹನಕೆರೆ ಗ್ರಾಮದ ಸರ್ವೆ.ನಂ. 261ರಲ್ಲಿ ಮಹೇಶ್ ಎಂಬುವವರು 3.30 ಎಕರೆ, ಕಾಳಿಕಾಂಭ ಟ್ರಸ್ಟ್ ಮಂಡ್ಯದ ಸರ್ವೆ.ನಂ. 840ರಲ್ಲಿ 20 ಗುಂಟೆ, ಹೊನ್ನಯ್ಯ ಬಡಾವಣೆಯ ಸ್ಲಂನವರು ಸರ್ವೆ ನಂ. 816/4, 816/5, 816/6, 817/7 ಮತ್ತು 817/1ರಲ್ಲಿ ಕ್ರಮವಾಗಿ 17, 12, 09, 02 ಗುಂಟೆ ಮತ್ತು 1.37 ಎಕರೆ ವಾಣಿಜ್ಯ ಭೂಮಿ, ತಗ್ಗಹಳ್ಳಿಯಲ್ಲಿ ಜಯರಾಂಉ ಅವರು ಟಿ.ಮಲ್ಲಿಗೆರೆ ಸರ್ವೆ.ನಂ 159ರಲ್ಲಿ 2 ಎಕರೆ, ಹೊಳಲು ಗ್ರಾಮದ ಕುಚೇಲ ಇತರರು ಹೆಚ್.ಕೋಡಿಹಳ್ಳಿ ಸರ್ವೆ ನಂ. 133, 3.04 ಎಕರೆ, ಶಿವಳ್ಳಿ ಕೃಷ್ಣ ಇತರರು ಹೆಚ್.ಕೋಡಿಹಳ್ಳಿ ಸರ್ವೆ ನಂ.134ರಲ್ಲಿ 38 ಗುಂಟೆ, 135ರಲ್ಲಿ 2.16 ಎಕರೆ, 136ರಲ್ಲಿ 4.03 ಎಕರೆ, ಚನ್ನಮ್ಮ ಕೋಂ ಲೇಟ್ ಕರಿಯ ಇತರರು ಭೀಮನಹಳ್ಳೀಯ ಸರ್ವೆ ನಂ. 36/ಪಿ19ರಲ್ಲಿ 6 ಎಕರೆ, ರಾಜಿ ಮರಿಯಯ್ಯ ಅವರು ಭೀಮನಹಳ್ಳೀಯ ಸರ್ವೆ ನಂ. 36/ಪಿ18ರಲ್ಲಿ 1.10 ಎಕರೆ, ಕುಮಾರ ಬಿನ್ ಪುಟ್ಟಸ್ವಾಮಿ ಅವರು ಸಂಪಹಳ್ಳಿಯ ಸರ್ವೆ ನಂ.124ರಲ್ಲಿ 0.15 ಗುಂಟೆ, ನಿಂಗಾಜಮ್ಮ ಅವರು ಸಂಪಹಳ್ಳಿಯ ಸರ್ವೆ ನಂ.125ರಲ್ಲಿ 10 ಗುಂಟೆ, ಚಿಕ್ಕತಾಯಮ್ಮ ಅವರು ಹೆಚ್.ಕೋಡಿಹಳ್ಳಿಯ ಸರ್ವೆ ನಂ.202ರಲ್ಲಿ 13 ಗುಂಟೆಯ ವ್ಯವಸಾಯ ಭೂಮಿಯನ್ನು ಅಕ್ರಮವಾಗಿ ಅನುಭವದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿದರು.
ಸದರಿಯವರು ಈ ಆಸ್ತಿಗಳ ಸಂಬಂಧ ಸೂಕ್ತ ದಾಖಲೆಗಳಿದ್ದರೆ, ಮೈಷುಗರ್ ಕಂಪನಿಗೆ ತಿಳಿಸಿ, ಒದಗಿಸಬೇಕು. ಇಲ್ಲವಾದಲ್ಲಿ ತೆರವುಗೊಳಿಸಿ ಮೈಷುಗರ್ ಕಂಪನಿ ಸುಪರ್ಧಿಗೆ ನೀಡಬೇಕು. ಅನುಭವದಲ್ಲಿರುವವರಿಗೆ ಬೇರಾವುದೇ ಜೀವನಾಧಾರ ಇಲ್ಲವಾದಲ್ಲಿ ವಾಣಿಜ್ಯ ಭೂಮಿಯನ್ನು ಮಾಸಿಕ ಬಾಡಿಕೆ ಪಾವತಿಸಬೇಕು. ವ್ಯವಸಾಯ ಭೂಮಿಗೆ ವಾರ್ಷಿಕ ಗೇಣಿ ಪಾವತಿ ಮೂಲಕ ಅನುಭವಕ್ಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಅನುಭವದಲ್ಲಿರುವವರಿಗೆ ಯಾವುದೇ ರೀತಿಯ ನೋಟಿಸ್ ನೀಡಲಾಗುವುದಿಲ್ಲ. ಸದರಿ ಆಸ್ತಿಯು ಸಂಪೂರ್ಣವಾಗಿ ಮೈಷುಗರ್ ಕಂಪನಿಯ ಒಡೆತನದಲ್ಲಿದ್ದು, ತೆರವುಗೊಳಿಸಬೇಕು. ಇಲ್ಲವಾದಲಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಬ್ಬು ಕಟಾವು ಸಂಬಂಧ ಆಳುಗಳ ಕೊರತೆಯಿದೆ ಎಂಬ ಗೊಂದಲಮಯ ಸುದ್ದಿ ಸತ್ಯಕ್ಕೆ ದೂರವಾದವು. ಕಾರ್ಖಾನೆ ಸಾಮರ್ಥ್ಯಕ್ಕಿಂತ ಹೆಚ್ಚು ಕಬ್ಬು ಕಟಾವಾಗಿದ್ದು, ಕಳೆದವರ್ಷಕ್ಕಿಂತ 45 ಟನ್ ಹೆಚ್ಚಾಗಿ ನುರಿಯಲಾಗಿದೆ. ಕಟಾವು ಕೂಲಿ ಬೇರೆ ಕಾರ್ಖಾನೆಗಳಿಗಿಂತ 120-130 ರೂ ಉಳಿತಾಯ ವಾಗಲಿದೆ ಎಂದು ಸ್ಪಷ್ಟೀಕರಿಸಿದರು.
ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರ ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಆಗಸ್ಟ್ 19ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮೈಷುಗರ್ ಕಂಪನಿಯಲ್ಲಿ 40 ಸಾವಿರ ಕ್ವಿಂಟಲ್ ಸಕ್ಕರೆ ದಾಸ್ತಾನಿದ್ದು, ಅದರಲ್ಲಿ 25 ಸಾವಿರ ಟನ್ ಸಕ್ಕರೆ ಮಾರಾಟಕ್ಕೆ ಕೇಂದ್ರ ಸಕ್ಕರೆ ಸಚಿವರು ಅನುಮತಿ ನೀಡಿದ್ದಾರೆ. ಸಕ್ಕರೆ ಮಾರಾಟ ಮಾಡಿ ಒಂದೇ ಕಂತಿನಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ರಾಮಕೃಷ್ಣ, ಬೋರೇಗೌಡ, ಹೆಚ್.ವಿ.ನಾಗರಾಜು, ಉದಯ್ಕುಮಾರ್, ದ್ಯಾವಣ್ಣ, ವಿಜಿ ಕುಮಾರ್ ಇದ್ದರು.
Mandya
ಗೊರವಾಲೆ ಪಟೇಲ್ ಸಿದ್ದೇಗೌಡರು ಅನೇಕ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದವರು : ನಿಖಿಲ್ ಕುಮಾರಸ್ವಾಮಿ
ಮಂಡ್ಯ: ಗೊರವಾಲೆ ಪಟೇಲ್ ಸಿದ್ದೇಗೌಡರು ಅನೇಕ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದವರು ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ದುದ್ದ ಹೋಬಳಿಯ ಗೊರವಾಲೆ ಗ್ರಾಮದಲ್ಲಿ ಪಟೇಲ್ ಸಿದ್ದೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟೇಲ್ ಸಿದ್ದೇಗೌಡರ ಪ್ರತಿಮೆ ಅನಾವರಣವನ್ನು ಮಾಜಿ ಪ್ರಧಾನಿ ದೇವೇಗೌಡರ ಕೈಯಿಂದ ಅನಾವರಣ ಮಾಡಿಸಬೇಕು ಎಂದು ಗ್ರಾಮಸ್ಥರು ಬಯಸಿದ್ದರು. ಕುಮಾರಣ್ಣ ಬರಬೇಕು ಎಂದು ಹೇಳುತ್ತಿದ್ದರು. ಆದರೆ ಅವರ ಕೆಲಸದ ಒತ್ತಡದಿಂದ ಬರಲು ಆಗದ ಕಾರಣ ಪುತ್ತಳಿ ಅನಾವರಣವನ್ನು ನಾವುಗಳು ಮಾಡಿದ್ದೇವೆ ಎಂದರು.

ಕುಮಾರಣ್ಣ ಸಂಸದರಾಗಿ ಮಾಡಲು ಮಂಡ್ಯ ಜಿಲ್ಲೆಯ ಜನ ರಾಜಕೀಯ ಪುನರ್ಜನ್ಮ ತಂದು ಕೊಟ್ಟು ರಾಷ್ಟ್ರದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟವರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿದ್ದೀರಿ. ಸಮರ್ಥವಾಗಿ ನಿಭಾಯಿಸಲು ದೆಹಲಿಯಲ್ಲಿದ್ದರೂ ಅವರ ಮನಸ್ಸು ಮಾತ್ರ ಮಂಡ್ಯದಲ್ಲಿ ಇದೆ ಎಂದು ತಿಳಿಸಿದರು.
ಕುಮಾರಣ್ಣನ ಮೇಲೆ ಹಾಗೂ ಜೆಡಿಎಸ್ ಪಕ್ಷದ ಮೇಲೆ ಜಿಲ್ಲೆಯ ಜನತೆ ಅಭಿಮಾನ ಇಟ್ಟಿರುವುದರಿಂದ ಜಿಲ್ಲೆಯ ಜನತೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ನಿಂತಿದ್ದಾರೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಗೊರವಾಲೆ ಗ್ರಾಮದಲ್ಲಿ ಯಾವುದೇ ಭಾಗದಲ್ಲೂ ಕೆಲಸ ಆಗಿದೆ ಎಂದರೆ ಇದನ್ನು ಪಟೇಲ್ ಸಿದ್ದೇಗೌಡರು ಮಾಡಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ ಅದಕ್ಕಾಗಿ ಅವರು ಮೊದಲನೇ ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ತಿಳಿಸಿದರು.

ಗೊರವಾಲೆ ಗ್ರಾಮದ ಕಲ್ಯಾಣ ಮಂಟಪವನ್ನು ಪಟೇಲ್ ಸಿದ್ದೇಗೌಡರ ಹೆಸರಿನಲ್ಲಿ ನಿರ್ಮಾಣ ಮಾಡಿ ಅದನ್ನು ಉದ್ಘಾಟನೆ ಮಾಡಲಾಗುವುದು ಎಂದರು.
ದುದ್ದ ಹೋಬಳಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಲ್ಲಲು ಬಿಡಲ್ಲ.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಈ ಭಾಗದಲ್ಲಿ ಮಾಡುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಯಾವುದೇ ಸಂದರ್ಭದಲ್ಲಿ ಗೊರವಾಲೆ ಗ್ರಾಮವನ್ನು ಮರೆಯಲು ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಅತಿ ಹೆಚ್ಚು ಮತಗಳನ್ನು ನಮಗೆ ಕೊಡುವ ಮೂಲಕ ನಮ್ಮ ಪರ ಇದ್ದಾರೆ ಎಂದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಪ್ಪಟ ಶಿಷ್ಯ ಪಟೇಲ್ ಸಿದ್ದೇಗೌಡರು.
ಊರಿಗೋಸ್ಕರ ತಮ್ಮನ್ನು ತಾವೇ ಅರ್ಪಿಸಿಕೊಂಡು ಮೂಲಭೂತ ಸೌಕರ್ಯ ತಂದಿರುವುದು ಪಟೇಲ್ ಸಿದ್ದೇಗೌಡರ ಶ್ರಮ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಜೆಡಿಎಸ್ ಮುಖಂಡರಾದ ಹೆಚ್.ಟಿ.ಬಾಲರಾಜುರವರು, ಪುರದಕೊಪ್ಪಲು ಶಂಕರೇಗೌಡ, ಆರ್ ಎಪಿಸಿಎಂಎಸ್ ಮಾಜಿ ನಿರ್ದೇಶಕ ಜಿ.ಎಲ್. ಸತೀಶ್, ಜಿ.ಎಸ್. ಕೃಷ್ಣೆಗೌಡ, ಸಿದ್ದೇಗೌಡ, ಹೊಳಲು ಯೋಗೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
-
Hassan7 hours agoಮಕ್ಕಳ ನಡುವೆ ನಡೆದಿದ್ದ ಜಗಳ ತಂದೆ ಕೊ*ಲೆಯಲ್ಲಿ ಅಂತ್ಯ
-
Kodagu24 hours agoಮೀನು ಮಾರಾಟ: ನಾಲ್ಕು ಚಕ್ರ ವಾಹನ ಖರೀದಿಗೆ ಅರ್ಜಿ ಆಹ್ವಾನ
-
State3 hours agoಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ ಕರ್ನಾಟಕ ಆಯ್ಕೆಗೆ ಅರ್ಜಿ ಆಹ್ವಾನ
-
Kodagu2 hours agoಅನುಚಿತ ಪೋಸ್ಟ್ – ಆರೋಪಿ ಬಂಧನ
-
Manglore4 hours agoಎಸ್ಸಿಡಿಸಿಸಿ ಬ್ಯಾಂಕ್ಗೆ ಸತತ ನಾಲ್ಕನೇ ಬಾರಿ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ
-
Manglore4 hours agoಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಎಂಎನ್ಆರ್ ಸ್ಪಂದನೆ
-
Mandya4 hours agoಗೊರವಾಲೆ ಪಟೇಲ್ ಸಿದ್ದೇಗೌಡರು ಅನೇಕ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದವರು : ನಿಖಿಲ್ ಕುಮಾರಸ್ವಾಮಿ
-
Mandya3 hours agoಮೈಷುಗರ್ ಕಂಪನಿ ವ್ಯಾಪ್ತಿಯಲ್ಲಿ ಅಕ್ರಮವಾಗಿ 27.39 ಎಕರೆ ಸ್ವತ್ತಿನ ಅನುಭವದಲ್ಲಿ : ಸಿ.ಡಿ.ಗಂಗಾಧರ್
