Connect with us

Kodagu

ಮಣಿಪುರದ ಮೈತೆಯಿ ಜನಾಂಗ, ಕೊಡಗಿನ ಕೊಡವರು ಒಂದೇ ನೋವನ್ನು ಅನುಭವಿಸುತ್ತಿದ್ದಾರೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದನೆ : ಮೈತೆಯಿ ಬುಡಕಟ್ಟು ಜನರ ಸಭೆಯಲ್ಲಿ ಭಾಗಿ

Published

on

ಮಡಿಕೇರಿ : ಮಣಿಪುರ ಮೈತೆಯಿ ಅಸೋಸಿಯೇಷನ್ ಆಫ್ ಬೆಂಗಳೂರು ವತಿಯಿಂದ ಶಾಂತಿ ಮತ್ತು ಶಾಂತಿಯನ್ನು ಉತ್ತೇಜಿಸುವ ಗುರಿಯೊಂದಿಗೆ ಬೆಂಗಳೂರಿನ ದೊಡ್ಡಕನ್ನೆ ಹಳ್ಳಿ “ಸಿಲ್ವರ್ ಜ್ಯೂಬಿಲಿ ಟರ್ಫ್ ಪಾರ್ಕ್” ನಲ್ಲಿ ನಡೆದ ಫುಟ್ ಬಾಲ್ ಕ್ರೀಡಾಕೂಟದಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಮೇಜರ್ ರಾಜ್‌ಕುಮಾರ್ ಜಲಜಿತ್ ಸಿಂಗ್ ಅವರ ಆಹ್ವಾನದ ಮೇರೆಗೆ ಮುಖ್ಯ ಅತಿಥಿಗಳಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪಾಲ್ಗೊಂಡರು.
ಮಣಿಪುರದ ಆದಿಮಸಂಜಾತ ಮೈತೆಯಿ ಬುಡಕಟ್ಟು ಜನಾಂಗದ ಸಭೆಯಲ್ಲಿ ಉಪಸ್ಥಿತರಿದ್ದ ಅವರು ಮೈತೆಯಿ ಜನಾಂಗ ಹಾಗೂ ಕೊಡಗಿನ ಕೊಡವರು ಒಂದೇ ನೋವನ್ನು ಅನುಭವಿಸುತ್ತಿದ್ದಾರೆ ಎಂದರು.
ಮಣಿಪುರದ ಆದಿಮಸಂಜಾತ ಮೈತೆಯಿ ಸಮುದಾಯವು ಕಳೆದ ಹಲವು ತಿಂಗಳುಗಳಿAದ ತಮ್ಮ ಸ್ವಂತ ತಾಯ್ನಾಡಿನಲ್ಲಿ ಸಂಕಷ್ಟದಲ್ಲಿದೆ. ನೆರೆಯ ಮ್ಯಾನ್ಮಾರ್‌ನಿಂದ ಬಂದ ವಲಸಿಗರಿಂದ ಮೈತೆಯಿ ಸಮುದಾಯದ ಅಸ್ತಿತ್ವಕ್ಕೆ ಬೆದರಿಕೆ ಇದೆ. ವಲಸಿಗ ಕುಕಿಗಳು ಭೂಮಿಯನ್ನು ಕಸಿದುಕೊಳ್ಳಲು ಮತ್ತು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪವಿತ್ರ ಯಾತ್ರಾಸ್ಥಳ ನೊಂಗ್ ಮೈಚಿಂಗ್‌ಗೆ ಪ್ರವೇಶಿಸದಂತೆ ತಡೆದಿದ್ದಾರೆ. ಸ್ಥಳೀಯ ಮೈತೆಯಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಕುರಿತು ಗುವಾಹಟಿ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಎತ್ತಿ ಹಿಡಿದಿದ್ದರೂ ಕುಕಿ ವಲಸಿಗರ ಒತ್ತಡದಿಂದ ಸರ್ಕಾರ ಇದನ್ನು ತಿರಸ್ಕರಿಸಿದೆ ಅಥವಾ ಅವಮಾನಿಸಿದೆ.


ಇದೇ ಪರಿಸ್ಥಿತಿ ಕೊಡಗಿನಲ್ಲೂ ಇದ್ದು, ಕೊಡವ ಪ್ರಾಂತ್ಯದಲ್ಲಿ ಆದಿಮಸಂಜಾತ ಕೊಡವರ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿದೆ ಮತ್ತು ರಾಜ್ಯ ಪ್ರಾಯೋಜಿತ ವಲಸಿಗರು ಆಕ್ರಮಿಸಿಕೊಂಡಿದ್ದಾರೆ. ಕೊಡವರ ಪವಿತ್ರ ಯಾತ್ರಾಸ್ಥಳ ತಲಕಾವೇರಿಗೆ ದೇವಟ್ ಪರಂಬು ದುರಂತÀದ ಫಲಾನುಭವಿ ಜನ ಪ್ರವೇಶವನ್ನು ನಿರ್ಬಂಧಿಸುತ್ತಿದ್ದಾರೆ. ಕೊಡವರ ಪ್ರವೇಶವನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಅನುಕೂಲವಾಗುವಂತೆ ಜನಾಂಗೀಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನಗಳು ಮತ್ತು ನಂತರದ ಹೈಕೋರ್ಟ್ ತೀರ್ಪುಗಳ ಹೊರತಾಗಿಯೂ, ರಾಜ್ಯ ಸರ್ಕಾರ ವಲಸಿಗರ ಒತ್ತಡದಿಂದ ಈ ಪ್ರಯತ್ನಗಳನ್ನು ಸ್ಥಗಿತಗೊಳಿಸಿತು ಎಂದು ಆರೋಪಿಸಿದರು.
ಕೊಡವರು ಹಾಗೂ ಮೈತೆಯಿಗಳÀ ನೋವು ಮತ್ತು ಆಕಾಂಕ್ಷೆಗಳು ಒಂದೇ ಆಗಿವೆ. ವಲಸಿಗರಿಂದ ರಾಜ್ಯ ಪ್ರಾಯೋಜಿತ ಬಹಿರಂಗ ಕಿರುಕುಳವನ್ನು ಅನುಭವಿಸಿದ್ದಾರೆ, ಕೊಡವರು ರಹಸ್ಯ ಕಿರುಕುಳವನ್ನು ಅನುಭವಿಸಿದ್ದಾರೆ. ವಲಸಿಗರು ತಾಯಿ ನೆಲದಿಂದ ಸಂಪರ್ಕ ಕಡಿತಗೊಳಿಸಲು ಪ್ರಯತ್ನಿಸುತ್ತಿವೆ. ಹೀಗಾಗಿ ಕೊಡವರು ಹಾಗೂ ಮೈತೆಯಿಗಳು ಒಗ್ಗಟ್ಟಿನ ಪ್ರದರ್ಶನಕ್ಕೆ ಮುಂದಾಗಿ ಹಕ್ಕುಗಳನ್ನು ಪ್ರತಿಪಾದಿಸುವುದು ಸೂಕ್ತ ಎಂದು ನಾಚಪ್ಪ ಹೇಳಿದರು.
ಮಣಿಪುರ ಮೈತೆಯಿ ಅಸೋಸಿಯೇಷನ್ ಆಫ್ ಬೆಂಗಳೂರು ಅಧ್ಯಕ್ಷ ಮೇಜರ್ ರಾಜ್‌ಕುಮಾರ್ ಜಲಜಿತ್ ಸಿಂಗ್ ಅವರ ನೇತೃತ್ವದಲ್ಲಿ “ಫೀಲ್ಡ್ ಆಫ್ ಹೋಪ್” ಎಂಬ ಘೋಷಣೆಯಡಿ ಶಾಂತಿ ಸ್ಥಾಪಿಸುವ ಪುಟ್ಬಾಲ್ ಕ್ರೀಡಾಕೂಟ ನಡೆಯಿತು.
ಎನ್.ಯು.ನಾಚಪ್ಪ ಅವರ ಪತ್ನಿ ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ ಉಪಸ್ಥಿತರಿದ್ದರು.

Continue Reading

Kodagu

ಚಿಕ್ಕಮ್ಮನ ಮೇಲೆ ಗುದ್ದಲಿಯಿಂದ ಹಲ್ಲೆ: ಆರೋಪಿ ಆರೆಸ್ಟ್‌

Published

on

ಮಡಿಕೇರಿ: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಸ್ವಂತ ಚಿಕ್ಕಮ್ಮನನ್ನೇ ಗುದ್ದಲಿಯಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊನ್ನಂಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಅರಮಣಮಾಡ ಸಚಿನ್‌(42) ಎಂಬಾತ ಅರಮಣಮಾಡ ಬಾಗು(56) ಎಂಬುವವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದನು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಹಿಂದಿನಿಂದಲೂ ಪರಸ್ಪರ ವೈಶ್ಯಮ್ಯವಿದ್ದು, ಇಂದು ಗದ್ದೆಗೆ ತೆರಳುವ ಹಾದಿಗಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿತ್ತು. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

Continue Reading

Kodagu

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಮೇಲೆ ಎಫ್ಐಆರ್ ದಾಖಲು

Published

on

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ಮೇಲೆ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯ ಸಂಪಾದಕಿ ಉಳಿಯಂಡ ಡಾಟಿ ಪೂವಯ್ಯ ಅವರು ನೀಡಿದ ದೂರಿನ್ವಯ ಭಾರತೀಯ ನ್ಯಾಯ ಸಂಹಿತೆ (BNS) U\S 75(1)(iv) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಶುಕ್ರವಾರ(ಜು.18) ಪಿರ್ಯಾದಿಯವರು ಮಡಿಕೇರಿ ನಗರ ಮಹಿಳಾ ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಸಾರಾಂಶವೇನೆಂದರೆ,ಪಿರ್ಯಾದಿಯವರ 38 ವರ್ಷಗಳಿಂದ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿಕೊಂಡಿದ್ದು, ವೈಯಕ್ತಿಕ ದ್ವೇಷ ಎಂಬಂತೆ ಮಾನಹಾನಿ ಮಾಡುವ ಉದ್ದೇಶದಿಂದ ಪೂಮಾಲೆ ಪತ್ರಿಕೆಯ ಸಂಪಾದಕ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ವ್ಯಾಟ್ಸ್ ಅಪ್ ನಂಬರ್ ನಿಂದ ದಿನಾಂಕ 6-07-2025ರಂದು ಸಾಮಾಜಿಕ ಜಾಲತಾಣವಾದ ವ್ಯಾಟ್ಸ್ ಅಪ್ ಗುಂಪುಗಳಲ್ಲಿ ಹಾಗೂ ಬೇರೆಯವರ ವೈಯಕ್ತಿಕ ವ್ಯಾಟ್ಸ್ ಅಪ್ ನಂಬರ್ ಳಿಗೆ ಪಿರ್ಯಾದಿಯವರನ್ನು ಕೊಡವ ಭಾಷೆಯಲ್ಲಿ “ಎಲ್ಲಾ ಬೆತ್ತಲೆ ಆನವಡ ಕೊಣಿ ನೋಟಿಯಪ್ಪ(ಎಲ್ಲಾ ಬೆತ್ತಲಾದವಳ ಚೆಲ್ಲಾಟ ನೋಡ್ರಪ್ಪಾ) ಎಂಬುದಾಗಿ ತೀರಾ ಆಕ್ಷೇಪಕಾರಿಯಾಗಿಯೂ ಆಘಾತಕಾರಿಯಾಗಿಯೂ ಟಿಪ್ಪಣಿ ಬರೆದು ಸುಮಾರು20 ವರ್ಷಗಳ ಹಿಂದೆ ಆಗಿಹೋದ ಘಟನೆಯನ್ನೂ,ಅಂದೂ ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿರುವುದನ್ನು ಲೆಕ್ಕಿಸದೆ ವ್ಯಾಪಕ ಅಪಪ್ರಚಾರ ಮಾಡಿ ತೇಜೋವಧೆ ಮಾಡಿ ಪಿರ್ಯಾದಿಯವರಿಗೆ ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿರುತ್ತಾರೆ.

ತಪ್ಪಿತಸ್ಥೆ ಅಲ್ಲವೆಂದು ಘನವೆತ್ತ ಮಡಿಕೇರಿ ನ್ಯಾಯಾಲಯ ತೀರ್ಪು ಹೊರಡಿಸಿರುವುದನ್ನು ಮರೆಮಾಚಿ ಕುತಂತ್ರಿಗಳು ಪಿರ್ಯಾದಿಯವರ ಮೇಲೆ ಆರೋಪಿಸಿದ್ದ ಹಳೆ ವದಂತಿಗಳನ್ನು ಫೋಟೋ ಸಹಿತ ಪ್ರಕಟಿಸಿ ಎಲ್ಲಾ ಗ್ರೂಪ್ ಗಳಿಗೆ ಹರಡಿ ಆರೋಪ ,ಅಸಹ್ಯಕರ ಲೈಂಗಿಕ ಅರ್ಥ ಛಾಯೆ ಬರುವಂತೆ ಶಬ್ದ ಬಳಸಿ ಆಕ್ಷೇಪವಾದ ವಾಕ್ಯಗಳನ್ನು ದುರುದ್ದೇಶದಿಂದ ಬಳಸಿ ಲೈಂಗಿಕವಾಗಿ ಬಣ್ಣದ ಟೀಕೆಗಳ ಪದಗಳನ್ನು ಉಪಯೋಗಿಸಿ ಕಿರುಕುಳ ಕೊಟ್ಟದ್ದು ಪಿರ್ಯಾದಿಯವರನ್ನು ಕಳಂಕಿತ ಮಹಿಳೆ ಎಂಬಂತೆ ಬಿಂಬಿಸಿ ಮಾನಸಿ ಆಘಾತ ಉಂಟುಮಾಡಿರುತ್ತಾರೆ.

ಇದರಿಂದ ಮಾನಸಿಕವಾಗಿ ಬಹಳಷ್ಟು ನೊಂದಿರುವ ಪಿರ್ಯಾದಿ ತುಂಬಾ ಕುಗ್ಗಿ ಹೋಗಿರುತ್ತೇನೆ.ಆದ್ದರಿಂದ ಅಜ್ಜನಿಕಂಡ ಮಹೇಶ್‌ ನಾಚಯ್ಯವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ಕೊಟ್ಟ ಪುಕಾರಿಗೆ FIR ದಾಖಲಾಗಿದೆ.

Continue Reading

Kodagu

ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡ ಭರತನಾಟ್ಯ ಕಲಾವಿದೆ ಕೊಂಪುಳಿರ ಪಿ.ದಿಥ್ಯ

Published

on

ಮಡಿಕೇರಿ: ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ವಿರಾಜಪೇಟೆಯ ಪುಟ್ಟ ಪೋರಿ ಭರತನಾಟ್ಯ ಕಲಾವಿದೆ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ-2025 ರ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ವಿರಾಜಪೇಟೆಯ ನಾಟ್ಯಾಂಜಲಿ ನಾಟ್ಯ ನೃತ್ಯ ಶಾಲೆಯಲ್ಲಿ ತನ್ನ ಚಿಕ್ಕ ವಯಸ್ಸಿಗೆ ಅಮೋಘ ಪ್ರತಿಭೆ ಮಾಡಿರುವ ಇವರು ತನ್ನ ಗುರುಗಳಾದ ವಿದುಷಿ ಹೇಮಾವತಿ ಮತ್ತು ಕಾವ್ಯ ಇವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ಸಾಧನೆಯನ್ನು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿಥ್ಯಳ ಪ್ರತಿಭೆಯನ್ನು ಗಣ್ಯರು ಗುರುತಿಸಿದ್ದು, ಬಳಿಕ ಈ ರಾಜ್ಯಮಟ್ಟದ ಪ್ರಶಸ್ತಿಗೆ ತನ್ನ ಸಣ್ಣ ವಯಸ್ಸಿನಲ್ಲೇ ಆಯ್ಕೆಯಾದರು.

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಸಹಯೋಗದೊಂದಿಗೆ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್‍ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಿಥ್ಯ ವಿರಾಜಪೇಟೆ ಪಟ್ಟಣದ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಚಿಕ್ಕಪೇಟೆಯ ನಿವಾಸಿ ನಿವೃತ್ತ ಶಿಕ್ಷಕರುಗಳಾದ ಕೊಂಫುಳಿರ ಯು ಪಳಂಗಪ್ಪ, ತಾರಾಮಣಿ ಅವರ ಮೊಮ್ಮಗಳು ಹಾಗೂ ಪೃಥ್ವಿ ಕುಮಾರ್ ಮತ್ತು ಭವ್ಯ ದಂಪತಿಯ ಪುತ್ರಿಯಾಗಿದ್ದಾರೆ.

Continue Reading

Trending

error: Content is protected !!