Connect with us

Hassan

ಜ.೩೦ ರಂದು ನಗರದಲ್ಲಿ ಸೌಹಾರ್ದತಾ ಮಾನವ ಸರಪಳಿ ಧರ್ಮೇಶ್ ಹೇಳಿಕೆ

Published

on

ಹಾಸನ : ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಗಾಂಧಿ ಹುತಾತ್ಮ ದಿನದ ಅಂಗವಾಗಿ ಕಾರ್ಯಕ್ರಮ ನಡೆಯುವಂತೆ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಜನವರಿ ೩೦ ರಂದು ಸಂಜೆ ೪ ಗಂಟೆಗೆ ಸೌಹಾರ್ದತಾ ಮಾನವ ಸರಪಳಿ ಹಾಗೂ ಸಭೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಇಂದು ವಿವೇಕ ಅವಿವೇಕ, ಸತ್ಯ-ಅಸತ್ಯ, ವಿಚಾರ-ವಿಕಾರಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆದರೆ ಮನುಷ್ಯ-ಮನುಷ್ಯರ ನಡುವಿನ ’ಕಂದರ’ ಹೆಚ್ಚಾಗುತ್ತಿದೆ. ಈ ಕಂದರದ ಒಳಗಿಂದ ಬರುತ್ತಿರುವ ಕರುಳ ಬಳ್ಳಿಯ ಕರೆ ಕ್ಷೀಣ ದನಿಯಾಗುತ್ತಿದೆ. ಹೊರಗಿನ ಅನುಚಿತ ಗೂಳಿಗದ್ದಲದಲ್ಲಿ ಕರುಳಬಳ್ಳಿಯ ಮಾನವೀಯ ಕರೆ ಕೇಳಿಸದಂತಾಗಿದೆ. ಇಂಥ ಕಳವಳಕಾರಿ ವಾತಾವರಣದಲ್ಲಿ ಸೌಹಾರ್ದವನ್ನು ಮುನ್ನೆಲೆಗೆ ತರಲು ಎಲ್ಲ ಕ್ಷೇತ್ರಗಳ ಮಾನವೀಯ ಮನಸ್ಸುಗಳು ಮುಂದಾಗಬೇಕಾಗಿದೆ ಎಂದರು. ಸೌಹಾರ್ದ ಎಂದರೆ ಪಕ್ಷಪಾತವಲ್ಲ. ಪೂರ್ವಾಗ್ರಹವಲ್ಲ. ಇದು ಎಲ್ಲಾ ವಲಯದ ಅವಿವೇಕಗಳನ್ನು ಮೀರಿದ ವಿವೇಕದ ಹಾದಿ. ಶಾಂತಿ, ಸಮಾಧಾನ ಮತ್ತು ಸಮಾನ ಮನಸ್ಥಿತಿಯ ಸಾಮಾಜಿಕ ಮೌಲ್ಯಪರ ಮತ್ತು ವಿರೋಧಿ ನೆಲೆಗಳಲ್ಲಿರುವ ವೈರುಧ್ಯಗಳನ್ನು ಒಂದಾಗಿಸುವ ಪ್ರಕ್ರಿಯೆಯ ಪ್ರತೀಕವೇ ಸೌಹಾರ್ದ. ನಮ್ಮ ಭಾರತಕ್ಕೆ ಬಹುದೊಡ್ಡ ಸೌಹಾರ್ದ ಪರಂಪರೆಯಿದೆ. ಬಹು ಸಂಸ್ಕೃತಿ, ಬಹುಭಾಷೆ ಮತ್ತು ಬಹು ಧರ್ಮಗಳ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುತ್ತ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂಬ ಬದ್ಧತೆಯಿಂದ ಅನೇಕ ಸಾಧಕರು ಶ್ರಮಿಸಿದ್ದಾರೆ. ಜಾತಿ, ಮತ ಧರ್ಮಗಳನ್ನು ಮೀರಿ ಒಟ್ಟಾಗಿ ಜೀವಿಸಿದ ಸೋದರತ್ವದ ಮೌಲ್ಯವನ್ನು ಪ್ರತಿನಿಧಿಸಿದ್ದಾರೆ. ವಿವಿಧ ಹಬ್ಬಾದಿ ಆಚರಣೆಗಳನ್ನು ಒಟ್ಟಾಗಿ ಮಾಡಿ ಸಂಭ್ರಮಿಸಿದ ನಿದರ್ಶನಗಳಿಗೂ ನಮ್ಮ ದೇಶವು ಉತ್ತಮ ಸಾಕ್ಷಿ ಸ್ವರೂಪಿಯಾಗಿದೆ. ಬಹುತ್ವದ ಬದುಕಿನ ಮಾದರಿಯಾಗಿ ವಿಶ್ವಕ್ಕೆ ದಾರಿತೋರಿಸಿದೆ. ನಮ್ಮ ಕರ್ನಾಟಕವು ಇಂತಹ ಸೌಹಾರ್ದ ಪರಂಪರೆಯನ್ನು ಉನ್ನತ ಮಟ್ಟದಲ್ಲಿ ಬಂದ ಆದರ್ಶ ರಾಜ್ಯವಾಗಿದೆ ಎಂದು ಹೇಳಿದರು. ಭಾರತ ಭಾರತವಾಗಿರಬೇಕು. ಧರ್ಮವು ರಾಷ್ಟ್ರೀಯತೆಗೆ ಮಾನದಂಡವಲ್ಲ. ಅದು ಮನುಷ್ಯ ಮನುಷ್ಯನ ನಡುವಿನ ವಯಕ್ತಿಕ ಸಂಬಂಧ. ಮನಸ್ಸಿನಲ್ಲಿ ಪರಧರ್ಮದ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು. ಎಲ್ಲಾ ಧರ್ಮಗಳನ್ನು ಸಮದೃಷ್ಠಿಯಲ್ಲಿ ನೋಡಿ ಬೇರೆ ಧರ್ಮದಲ್ಲಿರುವ ಒಪ್ಪಿತ ವೈಶಿಷ್ಟ್ಯಗಳನ್ನು ಎಲ್ಲಾ ಧರ್ಮಿಯರು ಅಳವಡಿಸಿಕೊಳ್ಳಬೇಕು.

ಹಿರಿಯ ಸಾಹಿತಿ ಭಾನುಮುಸ್ತಾಕ್ ಮಾತನಾಡಿ, ಹಲವು ದಶಕಗಳಿಂದಲೂ ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೆಮ್ಮೆಯಿಂದ ಕರೆಯುತ್ತಾ ಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು ನಿಚ್ಚಳವಾಗಿದೆ. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಮತಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಮತೀಯ ದ್ವೇಷ-ಹಗೆತನದ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿರುವ ವಿಷಮ ಗಳಿಗೆಯಲ್ಲಿ ನಾವು ಹಾದು ಹೋಗುತ್ತಿದ್ದೇವೆ. ದೇವರು, ಮತಧರ್ಮ ಮುಂತಾದವುಗಳನ್ನು ಸಂಕುಚಿತ ಉದ್ದೇಶಗಳಿಗೆ ಎಗ್ಗಿಲ್ಲದೇ ಬಳಸಲಾಗುತ್ತಿದೆ. ಒಟ್ಟಿಗೆ ಹೋಗುವ ನಿಟ್ಟಿನಲ್ಲಿ ಪ್ರಗತಿಪರ ಮುಖಂಡರು, ವಿವಿಧ ಸಂಘಟನೆಗಳು, ರೈತರು, ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು ಸಹಕಾರ ನೀಡಿದ್ದು, ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಸಾಹಿತಿ ಭಾನುಮುಸ್ತಾಕ್ ಎಲ್ಲಾರೂ ಸೇರಿದೊಡ್ಡ ಮಟ್ಟದಲ್ಲಿ ಜನವರಿ ೩೦ ರಂದು ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಇಡೀ ರಾಜ್ಯಾಧ್ಯಂತ ಮಾನವ ಸರಪಳಿಯನ್ನು ಮಾಡಲು ಪಾಲ್ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಾಹಿತಿ ಭಾನುಮಸ್ತಾಕ್, ಅಂತರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಅಂಬೂಗ ಮಲ್ಲೇಶ್, ಕ್ರೈಸ್ತ ಮುಖಂಡರಾದ ಸುರೇಶ್, ಹಿರಿಯ ಪತ್ರಕರ್ತರಾದ ವೆಂಕಟೇಶ್, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಸೌಹಾರ್ದ ವೇದಿಕೆಯ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಸ್ಪರ್ಧೆ

Published

on

ಹಾಸನ: 79ನೇ ವರ್ಷದ ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ನಗರದ ಕುವೆಂಪು ನಗರ ಫೀಲ್ಡ್ ಮಾರ್ಷಲ್ ಕರಿಯಪ್ಪ ಉದ್ಯಾನವನದ ಬಳಿ ಇರುವ ಜಿಲ್ಲಾ ಮಾಜಿ ಸೈನಿಕರ ಸಂಘದವತಿಯಿಂದ ಸೈನಿಕ ಹಾಗು ಮಾಜಿ ಸೈನಿಕರ ಮಕ್ಕಳಿಗೆ ಭವನದಲ್ಲಿ ಕ್ವಿಜ್, ಚಿತ್ರಕಲಾ ಸ್ಪರ್ಧೆ ಮತ್ತು ಭಾಷಣ ಸ್ಪರ್ದೆಯನ್ನು ಭಾನುವಾರ ಹಮ್ಮಿಕೊಳ್ಲಲಾಗಿತ್ತು.

ಈ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ದೊರೆರಾಜು ಮತ್ತು ಜಿಲ್ಲಾಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್ ಮಾಧ್ಯಮದೊಂದಿಗೆ ಮಾತನಾಡಿ, ಮಕ್ಕಳಲ್ಲಿ ದೇಶ ಭಕ್ತಿಯ ಭಾವನೆಯನ್ನು ಮೂಡಿಸಲು ಹಾಗೂ ಅವರಲ್ಲಿ ಸ್ಪರ್ದಾಮನೋಭಾವದಲ್ಲಿ ಪಾಲ್ಗೊಂಡು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸಲು ಹಿರಿಯರಾದ ನಾವು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ. ಮಕ್ಕಳಲ್ಲಿ ಧೈರ್ಯ, ವಿಶ್ವಾಸ, ದೇಶದ ಮೇಲಿನ ಪ್ರೀತಿ ಗೌರವವನ್ನು ಬಿತ್ತಬೇಕಾಗಿದೆ ಎಂದು ಹೇಳಿದರು.

ಚಿತ್ರಕಲಾ ಸ್ಪರ್ದೆಯಲ್ಲಿ ಸೈನಿಕರ ಮಕ್ಕಳು ಭಗತ್ ಸಿಂಗ್, ಗಡಿ ಕಾಯುವ ಯೋಧ, ಸ್ವಾತಂತ್ರ್ಯ ಸಿಕ್ಕ ಮೇಲೆ ಪಂಜರದಿಂದ ಹಕ್ಕಿ ಹಾರುತ್ತಿರುವುದು ಹೆಚ್ಚು ಚಿತ್ರ ಬಿಡಿಸಿರುವುದು ಕಂಡು ಬಂದಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ಸೈನಿಕರ ಪ್ರಧಾನ ಕಾರ್ಯದರ್ಶಿ ಡಿ.ಇ. ಸ್ವಾಮಿ, ಖಜಾಂಚಿ ಹೆಚ್.ಎ. ಲೋಕೇಶ್, ಸಹಕಾರ್ಯದರ್ಶಿ ಶ್ರಿಧರ್, ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ನಿರ್ದೇಶಕರಾದ ಕೃಷ್ಣೇಗೌಡ, ಮೇಲೆಗೌಡ ಹಾಗೂ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Continue Reading

Hassan

ಎಲ್ಲರ ಸಹಕಾರದಲ್ಲಿ 42 ಲಕ್ಷಕ್ಕಿಂತ ಹೆಚ್ಚಿನ ಗಾಯಿತ್ರಿ ಜಪ, 1 ಲಕ್ಷ ಗಾಯಿತ್ರಿ ಹೋಮ ಯಶಸ್ವಿ

Published

on

ಹಾಸನ: ನಗರ ಬ್ರಾಹ್ಮಣ ಸಭಾದ ವತಿಯಿಂದ ಕಳೆದ ೩೫ ವರ್ಷದಿಂದ ಪ್ರತಿವರ್ಷ ಗಾಯಿತ್ರಿ ಹೋಮ, ಜಪಗಳ ಮಾಡುತ್ತಿದ್ದು, ಈ ವರ್ಷ ನಿರೀಕ್ಷೆಗೂ ಮೀರಿ ಎಲ್ಲಾರ ಸಹಕಾರದಲ್ಲಿ 42 ಲಕ್ಷಕ್ಕಿಂತ ಅಧಿಕವಾದ ಗಾಯಿತ್ರಿ ಜಪ ಹಾಗೂ ಒಟ್ಟು 1 ಲಕ್ಷ ಗಾಯಿತ್ರಿ ಹೋಮವನ್ನು ಮಾಡಲಾಗಿದೆ ಎಂದು ನಗರ ಬ್ರಾಹ್ಮಣ ಸಭಾದ ಸಹ ಸಂಚಾಲಕ ಡಾ. ಎಂ.ಎನ್. ಪಾಂಡುರಂಗ ತಿಳಿಸಿದರು.

ನಗರದ ಶ್ರೀ ಶೃಂಗೇರಿ ಮಠದ ಆವರಣದಲ್ಲಿ ೩೫ನೇ ವರ್ಷದ ಗಾಯಿತ್ರೀ ಪ್ರತಿಪತ್ ಕಾರ್ಯಮ್ರಮದ ಅಂಗವಾಗಿ ಭಾನುವಾರದಂದು ಬೆಳಿಗ್ಗೆ ಪ್ರಾರಂಭವಾದ ಜಪ ಮತ್ತು ಹೋಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಇದೆ ವೇಳೆ ಎಂ.ಎನ್. ಪಾಂಡುರಂಗ ಮಾಧ್ಯಮದೊಂದಿಗೆ ಮಾತನಾಡಿದರು.

ಪ್ರತಿ ವರ್ಷವೂ ನಡೆಯುತ್ತಿರುವ ಗಾಯಿತ್ರಿ ಪತ್ತಿನ ಕಾರ್ಯಕ್ರಮದ ಅಂಗವಾಗಿ ಗಾಯಿತ್ರಿ ಹೋಮವನ್ನ ಮಾಡಲಾಗುತ್ತಿದ್ದು, ಪ್ರತಿ ವರ್ಷ 10 ಸಾವಿರ ಜಪ ಮತ್ತು 1 ಸಾವಿರ ಹೋಮವನ್ನ ಮಾಡಲಾಗುತಿತ್ತು. ಶೃಂಗೇರಿ ಗುರುಗಳ ಅಪ್ಪಣೆಯಂತೆ ಈ ವರ್ಷ 1 ಲಕ್ಷ ಹೋಮ ಹಾಗೂ 10 ಲಕ್ಷ ಗಾಯಿತ್ರಿ ಜಪ ಮಾಡುವ ಉದ್ದೇಶಗಳನ್ನಿಟ್ಟುಕೊಂಡು ಕಳೆದ ಒಂದು ತಿಂಗಳ ಹಿಂದೆ ಈ ಕಾರ್ಯವನ್ನ ಪ್ರಾರಂಭ ಮಾಡಿದ್ದು, ಎಲ್ಲಾರ ಸಹಕಾರದಲ್ಲಿ 42 ಲಕ್ಷಕ್ಕಿಂತ ಅಧಿಕವಾದ ಗಾಯಿತ್ರಿ ಜಪವನ್ನು ಮಾಡಲಾಗಿದೆ. ಅದರ ಅಂಗವಾಗಿ ಎಲ್ಲಾ ಜಪವನ್ನು ಸಮರ್ಪಿಸುವಂತಹ ಗಾಯಿತ್ರಿ ಹೋಮದಲ್ಲಿ 10 ಹೋಮ ಕುಂಡಗಳನ್ನು ಮಾಡಿ, ಪ್ರಧಾನ ಹೋಮ ಬಿಟ್ಟು 9 ಹೋಮದ ಕುಂಡಗಳ ಜೊತೆಗೆ ಪ್ರತಿ ಹೋಮ ಕುಂಡದಲ್ಲಿ 10 ಜನ ಪುರೊಹಿತರೂ ಸಹ ಹೋಮವನ್ನು ಮಾಡುತ್ತಿದ್ದಾರೆ ಎಂದರು.

ಒಟ್ಟು 1 ಲಕ್ಷ ಗಾಯಿತ್ರಿ ಹೋಮವನ್ನು ಮಾಡುತ್ತಿರುವ ವಿಶೇಷ ಕಾರ್ಯಕ್ರಮವನ್ನು ಶ್ರೀ ಶಂಕರ ಮಠದ ಆವರಣದಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ನಮ್ಮ ಸಂಘದ 35ನೇ ವರ್ಷದ ಹಿನ್ನಲೆಯಲ್ಲಿ ಲೋಕ ಕಲ್ಯಾಣದ ದೃಷ್ಠಿಯಲ್ಲಿ ಎಲ್ಲಾ ವಿಪ್ರ ಬಾಂಧವರು ಸೇರಿ ಕಾರ್ಯಕ್ರಮ ಮಾಡಲಾಗಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ನಗರ ಬ್ರಾಹ್ಮಣ ಸಭಾದ ಅಧ್ಯಕ್ಷ ಪಿ.ಎಸ್. ವೆಂಕಟೇಶ್, ಕಾರ್ಯದರ್ಶಿ ಎಂವಿ. ಕುಮಾರಸ್ವಾಮಿ, ಖಜಾಂಚಿ ಜಿ. ಸುರೇಶ್, ಮುಖ್ಯ ಸಂಚಾಲಕ ಜಿ. ಅನಂತರಾಮು, ಸಹ ಸಂಚಾಲಕ ಹೆಚ್.ಕೆ. ಬದರಿನಾರಾಯಣ, ಡಿ.ವಿ. ಸಂಪತ್ತು ಕುಮಾರ್, ಕೆ. ನಂಜುಂಡಸ್ವಾಮಿ, ಕೆ.ಸಿ. ಸುರೇಶ್, ಸುಜಾತ ಸುರೇಶ್, ಕವಿತ ಗಿರೀಶ್ ಮುಖಂಡರಾದ ಎ.ಎಸ್.ಎನ್. ಮೂರ್ತಿ ಇತರರು ಉಪಸ್ಥಿತರಿದ್ದರು.

 

Continue Reading

Hassan

ಮಾದರಿ ನೆನಪಿನ ಉದ್ಯಾನವನ ಮಾಡಲು ಶ್ರಮದಾನಕ್ಕೆ ಎಸ್.ಎಂ. ಕೃಷ್ಣ ನಗರದಲ್ಲಿ ಚಾಲನೆ

Published

on

ಹಾಸನ: ನಗರದ ಅರಸೀಕೆರೆ ರಸ್ತೆ ಬಳಿ ಇರುವ ಎಸ್.ಎಂ. ಕೃಷ್ಣ ನಗರದಲ್ಲಿ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಉದ್ಯಾನವನವನ್ನು ಮಾದರಿ ನೆನಪಿನ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲು ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ.ಟಿ. ರಾಮಸ್ವಾಮಿ ಮತ್ತು ಮೇಯರ್ ಎಂ. ಚಂದ್ರೇಗೌಡ ಅವರು ಶ್ರಮದಾನಕ್ಕೆ ಚಾಲನೆ ನೀಡಿದರು.

ನಂತರ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಕೃಷ್ಣ ನಗರದಲ್ಲಿರುವ ನಾಲ್ಕುವರೆ ಎಕರೆ ಪ್ರದೇಶವನ್ನು ಉದ್ಯಾನವನಕ್ಕಾಗಿ ಜಾಗವನ್ನು ಬಿಡಲಾಗಿದೆ. ನಗರ ಪ್ರದೇಶದಲ್ಲಿ ವಾಯು ವಿಹಾರಗಳಿಗೆ ಅವಕಾಶ ಸಿಗಲಿ ಎಂದು ಸ್ಥಳ ಕಾಯ್ದು ಇರಿಸಲಾಗಿದೆ. ಕೃಷ್ಣ ನಗರದಲ್ಲಿರುವ ಜಾಗ ನಿರ್ವಹಣೆ ಆಗದೆ ಬಹಳ ಕೆಟ್ಟದಾಗಿದೆ. ಇದನ್ನೆಲ್ಲಾ ಮನಗೊಂಡು ಪರಿಸರಕ್ಕಾಗಿ ನಾವು ರಾಜ್ಯ ಸಂಘಟನೆವತಿಯಿಂದ ಮಹಾನಗರ ಪಾಲಿಕೆ ಮೇಯರ್ ಗೆ ಒಂದು ಮನವಿ ಕೊಟ್ಟಿದ್ದು, ಸುಮಾರು 15 ದಿನದಲ್ಲೇ ನಿರ್ಣಯ ಮಾಡಿ ನಿರ್ವಹಣೆ ಮಾಡಲು ವಹಿಸಿಕೊಟ್ಟಿದ್ದಾರೆ ಎಂದರು.

ಮಹಾನಗರ ಪಾಲಿಕೆಯ ಮತ್ತು ಹುಡಾ ಹಾಗೂ ಸಂಘ ಸಂಸ್ಥೆಯ ಸಹಕಾರಬೇಕು. ಅಧಿಕಾರಿ ನೌಕರರ ವರ್ಗದವತಿಯಿಂದ ಒಂದು ಮಾಧರಿಯಾಗಿ ಇಲ್ಲೊಂದು ಉದ್ಯಾನವನ ಮಾಡಬೇಕು ಎಂದು ತೀರ್ಮಾನಿಸಿ ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ನೆನಪಿನ ಉದ್ಯಾನವನದ ಉದ್ದೇಶ ಎಂದರೇ ಒಂದು ಕಡೆ ಜಪಾನ್ ಮಾದರಿ ಉದ್ಯಾನವನ ಮಾಡಬೇಕು. ಎಲ್ಲಾ ಮಾದರಿಯ ಹಣ್ಣಿನ ಗಿಡಗಳನ್ನ ನೆಡಬೇಕು, ಔಷಧಿಯ ಸಸಿಗಳ ಗುಣ ಉಳ್ಳವಂತಹ ವನ ನಿರ್ಮಾಣ ಮಾಡಬೇಕು. ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳಲು ಧಾಮ ಮಾಡಬೇಕು. ಮಹಿಳೆಯರ ಮತ್ತು ಪುರುಷರ ಶೌಚಾಲಯ ಮಾಡಬೇಕು. ಯಾವುದಾದರೂ ಮದುವೆ, ಮಗು ನಾಮಕರಣ ಇತರೆ ಸಮಾರಂಭದ ವೇಳೆ ನೆನಪಿಗಾಗಿ ಒಂದು ಗಿಡ ನೆಡಬೇಕು ಎಂದು ಕಿವಿಮಾತು ಹೇಳಿದರು.

ನೆನಪಿನ ಮಾಧರಿ ಉದ್ಯಾನವನ ದಾಗ ಇಡೀ ರಾಜ್ಯದ ಜನ ಇಲ್ಲಿಗೆ ಬಂದು ನೋಡಿಕೊಂಡು ಬರಬೇಕೆಂದು ಹೇಳಿ ಜನ ಬರಬೇಕು ಎಂಬುವ ರೀತಿ ನಿರ್ಮಾಣವಾಗಬೇಕು. ನಿವೃತ್ತ ನೌಕರರ ವರ್ಗ, ಹುಡಾ ಸಹಕಾರ, ಮಹಾನಗರ ಪಾಲಿಕೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆ ಸೇರಿ ಇಲ್ಲೊಂದು ಮಾಧರಿ ಉದ್ಯಾನವನ ಮಾಡೋಣ, ಎಲ್ಲಾರೂ ಸಹಕಾರ ಮಾಡುವಂತೆ ಮನವಿ ಮಾಡಿದರು.

ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ಪರಿಸರಕ್ಕಾಗಿ ಎನ್ನುವ ಒಂದು ಸಂಘಟನೆಯ ರಾಜ್ಯಧ್ಯಾಕ್ಷರಾದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರ ನೇತೃತ್ವದಲ್ಲಿ ಈ ಉದ್ಯಾನವನವನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮ ಬಹಳ ಕಡೆ ನಡೆಯುತ್ತಿದೆ. ನಗರದ ಕೃಷ್ಣ ಲೇಔಟ್ ನಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶ ಇರುವ ದೊಡ್ಡ ಪ್ರದೇಶದಲ್ಲಿ ಪಾರ್ಕ್ ಆಯ್ಕೆ ಮಾಡಿಕೊಂಡು ನೆನಪಿನ ಉದ್ಯಾನವನ್ನಾಗಿ ಮಾಡಲು ತೀರ್ಮಾನಿಸಿದ್ದು, ಅವರೊಂದಿಗೆ ಮಹಾ ನಗರ ಪಾಲಿಕೆ ಹಾಗೂ ಇತರೆ ಸಂಘ ಸಂಸ್ಥೆಯವರು ಹಾಗೂ ಅರಕಲಗೂಡು ಮಾಜಿ ಶಾಸಕರ ಅಭಿಮಾನಿಗಳು, ಇಲ್ಲಿನ ಸುತ್ತಮುತ್ತಲ ನಿವಾಸಿಗಳು, ನೌಕರರ ಸಂಘದ ಎಲ್ಲಾರೂ ಪರಿಸರಕ್ಕಾಗಿ ಸಂಘಟನೆಯಡಿ ಎಲ್ಲಾರೂ ಸ್ವಚ್ಛ ಕೆಲಸ ಕೆಲಸ ಮಾಡುತ್ತಿದ್ದು, ಇಲ್ಲಿ ಒಂದು ರಾಷ್ಟ್ರಿಯ ಮಟ್ಟದ ಗಣಮಟ್ಟದ ಪಾರ್ಕ್‌ವನ್ನಾಗಿ ನಿರ್ಮಾಣ ಮಾಡುವುದಕ್ಕಾಗಿ ಎ.ಟಿ. ರಾಮಸ್ವಾಮಿ ಅವರು ಮುಂದಾಗಿದ್ದು, ಅವರೊಂದಿಗೆ ಮಹಾನಗರ ಪಾಲಿಕೆ ಸನ್ನದವಾಗಿದೆ ಎಂದರು.

ಎಲ್ಲಾ ಸಂಘಟನೆ ಕೈಜೋಡಿಸುತ್ತಿದೆ. ಪ್ರತಿ ಭಾನುವಾರ ಈ ಉದ್ಯಾನವನ ಸ್ವಚ್ಛತೆ ಮಾಡಿ ಅಭಿವೃದ್ಧಿಗೊಳಿಸಬಹುದು ಎಂದು ಹೇಳಿದರು.ಇಲ್ಲಿನ ನಿವಾಸಿಗಳು ಕೂಡ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಇದೆ ವೇಳೆ ಪರಿಸರಕ್ಕಾಗಿ ನಾವು ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ಬಿ.ಈ. ಯೋಗೇಂದ್ರ, ಹಾಸನ ಲಯನ್ಸ್ ಕ್ಲಬ್ ಸದಸ್ಯ ವೆಂಕಟೇಗೌಡ, ಸ್ಕೌಟ್ ಅಂಡ್ ಗೈಡ್ಸ್ ಮುಖಂಡರಾದ ಕಾಂಚನಾ ಮಾಲಾ, ಗಿರೀಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ, ಆಕಾಶವಾಣಿಯ ವಿಜಯ ಅಂಗಡಿ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ಪ್ರಸನ್ನಕುಮಾರ್, ಬಿ.ಶಿವರಾಂ, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!