Cinema
ಮುದ್ದು ಮುದ್ದಾದ ವಿಭಿನ್ನ ಪ್ರೇಮ ಕಥೆ ಲವ್ ಯು ಮುದ್ದು
ಮುದ್ದು ಮುದ್ದಾದ ವಿಭಿನ್ನ ಪ್ರೇಮ ಕಥೆ ಲವ್ ಯು ಮುದ್ದು
ವಿಮರ್ಶೆ : ಸಂಜಯ್ ಜಗನಾಥ್
ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಎಲ್ಲೆಡೆ ಸದ್ದು ಮಾಡ್ತಾ ಇರೋದು ನಿಜ. ಇದರ ಮಧ್ಯೆ ಕನ್ನಡಕ್ಕೆ ಮತ್ತೊಂದು ಅದ್ಭುತ ಪ್ರೀತಿ ಪ್ರೇಮ ಮತ್ತು ಪ್ರಾಣಾಯದೊಂದಿಗೆ ತೆರೆ ಕಾಣಲಿದೆ ಲವ್ ಯು ಮುದ್ದು.
ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ರಚಿಸಿ ನಿರ್ದೇಶಿಸಿ ಹಾಗೂ ಕಿಶನ್ ಟಿ. ಏನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಸಿನಿಮಾ ಲವ್ ಯು ಮುದ್ದು.

ಇಂದು ಲವ್ ಯು ಮುದ್ದು ಚಿತ್ರದ ಟ್ರೈಲರ್ ತೆರೆಕಂಡಿದ್ದು. ಪಾರು ಧಾರಾವಾಹಿ ಖ್ಯಾತಿಯ ಸಿದ್ದು ಅವರು (ಕರ್ಣ) ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಹಾಸನದ ಬೆಡಗಿ ರೇಷ್ಮಾ (ಸುಮತಿ) ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಜೇಶ್ ನಟರಂಗ, ತಬಲ ನಾಣಿ, ಗಿರೀಶ್ ಶಿವಣ್ಣ, ಸ್ವಾತಿ ಗುರುದತ್ ಹಾಗೂ ಶ್ರೀವತ್ಸ ಅವರು ಸಹ ನಟರಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿದ್ದು ಹಾಗೂ ರೇಷ್ಮಾ ಅವರ ಸಹನೆ ನಟನೆಯಿಂದ ಕರ್ನಾಟಕದ ಮನೆ ಮಾತಾಗಲಿದ್ದಾರೆ.
ಈಗಾಗಲೆ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು ಅನಿರುದ್ಧ್ ಶಾಸ್ತ್ರಿ ಅವರ ಸಂಗೀತ ಕೈಚಳದಿಂದ ಸಿನಿಮಾದ ಎಲ್ಲಾ ಹಾಡುಗಳು ಹಾಗೂ ಚಿತ್ರದಲ್ಲಿ ಬರುವಂತ ಬ್ಯಾಗ್ರೌಂಡ್ ಸ್ಕೋರ್ ಟ್ರೈಲರ್ನಲ್ಲಿ ಅದ್ಭುತವಾಗಿ ಮೂಡಿಬಂದಿದೆ.

ಮತ್ತೊಂದೆಡೆ ಕೃಷ್ಣ ದೇಪಕ್ ಅವರ ಛಾಯಾಗ್ರಹಣ ಸಿ.ಎಸ್ ದೀಪು ಅವರ ಸಂಕಲದಿಂದ ನೋಡುಗರ ಹೃದಯ ಮುಟ್ಟಿದೆ
ಟ್ರೈಲರ್ ಮುಖಾಂತರ ಕನ್ನಡ ಸಿನಿ ಪ್ರಿಯರಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಚಿತ್ರತಂಡ ನವೆಂಬರ್ 7 ನೇ ತಾರೀಕು ರಾಜ್ಯಾದ್ಯಂತ ತೆರೆಕಾಣಲಿದೆ.
ಕನ್ನಡ ಸಿನಿಪ್ರಿಯರು ದಯವಿಟ್ಟು ಲವ್ ಯು ಮುದ್ದು ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ಸಿನಿಮಾವನ್ನು ಯಶಸ್ವಿಗೊಳಿಸಿ.
ಸಿನಿಮಾದ ಟ್ರೈಲರ್ ನೋಡಲು ಲಿಂಕ್ ಕ್ಲಿಕ್ ಮಾಡಿ
Cinema
ತಂಗಿಯ ಆರತಕ್ಷತೆ ದಿನವೇ ಮಸಣ ಸೇರಿದ ಸಹೋದರರು
ಬೇಲೂರು : ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ
ತಂಗಿಯ ಆರತಕ್ಷತೆ ದಿನವೇ ಮಸಣ ಸೇರಿದ ಸಹೋದರರು
ಬೈಕ್ನಲ್ಲಿದ್ದ ಇಬ್ಬರು ಯುವಕರು ಧಾರುಣ ಸಾವು
ಲೋಕೇಶ್ (25), ಕಿರಣ್ (32) ಮೃತ ದುರ್ದೈವಿಗಳು
, ಬೇಲೂರು ತಾಲ್ಲೂಕಿನ, ಹೊನ್ನೇನಹಳ್ಳಿ ಗ್ರಾಮದ ಯುವಕರು ತನ್ನ ತಂಗಿಯ ಮದುವೆ ಆರ್ಥಕ್ಷತೆ ಸಮಾರಂಭಕ್ಕೆ ಮೊಸರು ತರಲು ಬರ್ತಿದ್ದ ಸಂದರ್ಭದಲ್ಲಿ ಮುತುಗನೆ ಗ್ರಾಮದ ಬಳಿ ಬಳಿ ಬೆಳಗಿನ ಜಾವ 6:00 ಸಮಯದಲ್ಲಿ ಘಟನೆ
KA-05 LE-4017 ನಂಬರ್ನ ಹೀರೋ ಸ್ಲೆಂಡರ್ ಬೈಕ್ನಲ್ಲಿ ತೆರಳುತ್ತಿದ್ದ ಲೋಕೇಶ್ ಹಾಗೂ ಕಿರಣ್
ಹೊನ್ನೇನಹಳ್ಳಿ ಗ್ರಾಮದ ಲೋಕೇಶ್, ಚಿಕ್ಕಮಗಳೂರು ಜಿಲ್ಲೆ, ರಾಮೇನಹಳ್ಳಿ ಗ್ರಾಮದ ಕಿರಣ್
ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದಿರುವ ಶಂಕೆ
ಸ್ಥಳದಲ್ಲೇ ಮೃತಪಟ್ಟಿರುವ ಲೋಕೇಶ್ ಹಾಗೂ ಕಿರಣ್
ಮೃತದೇಹಗಳು ಬಿದ್ದಿರುವುದನ್ನು ಇಂದು ಬೆಳಿಗ್ಗೆ ನೋಡಿದ ಗ್ರಾಮಸ್ಥರು
ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Cinema
ಕಾಂತಾರ ಇದು ದರ್ಶನ ಅಲ್ಲ ದೈವ ದರ್ಶನ…!
ವಿಮರ್ಶೆ : ಸಂಜಯ್ ಜಗನಾಥ್
ರಿಶಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿ ಹಾಗೂ ಹೊಂಬಾಳೆ ಪ್ರೋಡಕ್ಷನ್ ಅವರು ನಿರ್ಮಾಣ ಮಾಡಿರುವ ಸಿನಿಮಾ ಕಾಂತಾರ ಒಂದು ದಂತ ಕತೆ.
ಇದರಲ್ಲಿ ರಿಶಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಷನ್ ದೇವಯ್ಯ, ಜಯರಾಂ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಅವರಿಗೆ ಕೊಟ್ಟ ಪಾತ್ರವನ್ನು ಅದ್ಭುತವಾಗಿ ನಟಿಸಿದ್ದಾರೆ.
2022ರಲ್ಲಿ ತೆರೆ ಕಂಡ ಕಾಂತರ ಸಿನಿಮಾ ಯಾವುದೇ ನಿರೀಕ್ಷೆಯನ್ನು ಉಂಟು ಮಾಡದೆ ತೆರೆ ಕಂಡು ಬರಿ ಕರ್ನಾಟಕ ಮಾತ್ರವಲ್ಲದೇ, ಇಂಡಿಯನ್ ಸಿನಿಮಾದಲ್ಲೇ ಒಂದು ದಾಖಲೆಯನ್ನು ನಿರ್ಮಿಸಿತ್ತು.

ಸಿನಿಮಾ 2022ರಲ್ಲಿ ಬಹು ದೊಡ್ಡ ಗೆಲುವು ಕಂಡ ನಂತರ, ಚಿತ್ರ ತಂಡವು 2ನೇ ಭಾಗವೂ ಕೂಡ ತೆರೆ ಕಾಣುತ್ತದೆ ಎಂದಾಗ ಸಿನಿಮಾ ಪ್ರಿಯರಿಗೆ ಮತ್ತಷ್ಟು ನಿರೀಕ್ಷೆಯುಂಟು ಮಾಡಿತ್ತು.
ಅದೇ ನಿರೀಕ್ಷೆಯಂತೆ ಶೆಟ್ರು ತಂಡ ಸತತ ಮೂರು ವರ್ಷಗಳ ಪರಿಶ್ರಮದಿಂದ ಇಂದು ಕಾಂತರಾ ಚಾಪ್ಟರ್-1 ತೆರೆಕಂಡು ಸಿನಿ ಪ್ರಿಯರ ಮೆಚ್ಚುಗೆ ಪಾತ್ರವಾಗಿದೆ.
ರಿಷಬ್ ಶೆಟ್ಟಿಯವರ ಅದ್ಭುತ ಪುನರಾಗಮನ
ರಿಷಬ್ ಶೆಟ್ಟಿ ಮತ್ತೊಮ್ಮೆ ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಅದರ ಹಿಂದೆಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅನೇಕರು ಅವರ ನಿರ್ದೇಶನವನ್ನು ತೀವ್ರ ಮತ್ತು ದೂರದೃಷ್ಟಿಯುಳ್ಳದ್ದು ಎಂದು ಕರೆಯುತ್ತಿದ್ದರೆ, ಅವರ ನಟನೆಯನ್ನು ಆಳವಾಗಿ ತಲ್ಲೀನಗೊಳಿಸುವಂತಿದೆ ಎಂದು ವಿವರಿಸಲಾಗಿದೆ, ಕೆಲವರು ಅವರು ಈ ಸಿನಿಮಾದ ಮೂಲಕ ತಮ್ಮ “ರಕ್ತ ಮತ್ತು ಆತ್ಮ”ವನ್ನು ಪಾತ್ರಕ್ಕೆ ಹರಿಸಿದ್ದಾರೆ.

ಕಾಂತಾರ: ಅಧ್ಯಾಯ 1 ಅನ್ನು ತಾಂತ್ರಿಕ ಅದ್ಭುತ, ಸೆಟ್ ವಿನ್ಯಾಸಗಳಿಂದ ಹಿಡಿದು ಅರವಿಂದ್ ಕಶ್ಯಪ್ ಅವರ ಅದ್ಭುತ ಛಾಯಾಗ್ರಹಣದವರೆಗೆ, ಚಿತ್ರದ ಸೌಂದರ್ಯಶಾಸ್ತ್ರವು ಅದರ ಪ್ರಬಲ ಸ್ವತ್ತುಗಳಲ್ಲಿ ಒಂದಾಗಿದೆ. VFX ಮತ್ತು ಆಕ್ಷನ್ ಸೀಕ್ವೆನ್ಸ್ಗಳು, ವಿಶೇಷವಾಗಿ ನಾಟಕೀಯ ಹುಲಿ ದೃಶ್ಯ ಮತ್ತು ಪರಾಕಾಷ್ಠೆಯ 30 ನಿಮಿಷಗಳು, ರಂಗಭೂಮಿಗೆ ಯೋಗ್ಯವಾದ ಚಮತ್ಕಾರಗಳಾಗಿವೆ.
ಒಬ್ಬ ವೀಕ್ಷಕ ಈ ಚಿತ್ರದ ಪ್ರಮಾಣ ಮತ್ತು ನಿರ್ವಹಣೆಯು ಪ್ರಾದೇಶಿಕ ಸಿನಿಮಾಗಳಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಉನ್ನತ ಮಟ್ಟದ ಸಿನಿಮಾ ಅನುಭವಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ ಎಂದು ಉಲ್ಲೇಖಿಸಿದ್ದಾರೆ. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ತಮ್ಮ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥದೊಂದಿಗೆ ವಾತಾವರಣವನ್ನು ಉನ್ನತೀಕರಿಸಲು ಮರಳಿದ್ದಾರೆ. ವೀಕ್ಷಕರು ಚಿತ್ರಕ್ಕೆ ಭಾವನಾತ್ಮಕ ತೂಕ ಮತ್ತು ತೀವ್ರತೆಯನ್ನು ಸೇರಿಸಿದ್ದಕ್ಕಾಗಿ ಸಂಗೀತವನ್ನು ವ್ಯಾಪಕವಾಗಿ ಶ್ಲಾಘಿಸುತ್ತಿದ್ದಾರೆ, ಅನೇಕರು ಪ್ರಮುಖ ದೃಶ್ಯಗಳ ಸಮಯದಲ್ಲಿ ಒಂದೊಂದು ದೃಶ್ಯ ಕೂಡ ಅದ್ಭುತವಾಗಿ ಮೂಡಿ ಬಂದಿದೆ.

ಇತರ ಪೌರಾಣಿಕ ನಾಟಕಗಳಿಗಿಂತ ಕಾಂತಾರವನ್ನು ಪ್ರತ್ಯೇಕಿಸುವುದು ಸಂಸ್ಕೃತಿ ಮತ್ತು ಜಾನಪದದೊಂದಿಗಿನ ಅದರ ಆಳವಾದ ಬೇರೂರಿರುವ ಸಂಪರ್ಕ. ಈ ಚಿತ್ರವು ಬುಡಕಟ್ಟು ನಂಬಿಕೆಗಳು, ಆಧ್ಯಾತ್ಮಿಕತೆ ಮತ್ತು ಮಾನವ ಸಂಘರ್ಷವನ್ನು ಮಹಾಕಾವ್ಯ ಮತ್ತು ಆತ್ಮೀಯವಾಗಿ ಅನುಭವಿಸುವ ರೀತಿಯಲ್ಲಿ ಒಟ್ಟಿಗೆ ಹೆಣೆಯುತ್ತದೆ. ಪ್ರೇಕ್ಷಕರು ಈ ವಿಶಿಷ್ಟ ಕಥೆ ಹೇಳುವ ಶೈಲಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ, ಇದನ್ನು “ಪುರಾಣ, ಸಂಪ್ರದಾಯ ಮತ್ತು ಕಚ್ಚಾ ಭಾವನೆಗಳ ಆಕರ್ಷಕ ಮಿಶ್ರಣ”.
ಹಾಗೂ ಸಿನಿಮಾದ ಅಂತ್ಯಕ್ಕೆ ಬಂದರೆ ಕೊನೆಯ 35 ನಿಮಿಷ ಅಂತೂ ಶಟ್ರು ದರ್ಶನವಲ್ಲ..! ದೈವ ದರ್ಶವನ್ನು ನೀಡಿದ್ದಾರೆ.
Cinema
ಅರಣ್ಯ ಇಲಾಖೆ ಪರಿಹಾರಕ್ಕಾಗಿ ಗಂಡನನ್ನೇ ಕೊಂ*ದ ಹೆಂಡತಿ
ಮೈಸೂರು: ಹಣದ ಆಸೆಗೆ ಕೈ ಹಿಡಿದ ಪತಿಯನ್ನೇ ಕೊಲೆಗೈದು ಹುಲಿ ದಾಳಿ ಎಂದು ಬಿಂಬಿಸಲು ಹೋಗಿದ್ದ ಹೆಂಡತಿಯ ಸುಳ್ಳಿನ ಕಟ್ಟುಕತೆಯನ್ನು ಭೇದಿಸುವಲ್ಲಿ ಹುಣಸೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಚಿಕ್ಕಹೆಜ್ಜೂರು ಗ್ರಾಮದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕಡಂಪುರ ಗ್ರಾಮದ ವೆಂಕಟಸ್ವಾಮಿ (45) ಕೊಲೆಯಾದವರು. ಈತನ ಪತ್ನಿ ಸಲ್ಲಾಪುರಿ (40) ತನ್ನ ಕೈಹಿಡಿದ ಪತಿಯನ್ನೇ ಕೊಲೆಗೈದ ಆರೋಪಿಯಾಗಿದ್ದಾಳೆ.

ಹಲವು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರ ಶಿಕ್ಷಣಕ್ಕಾಗಿ ಬಿಡದಿಯಲ್ಲಿರುವ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರು.
ಕಳೆದ ಆರು ತಿಂಗಳ ಹಿಂದಷ್ಟೆ ಬೆಂಗಳೂರಿನ ರವಿಕುಮಾರ್ ಮತ್ತು ಅರುಣ್ಕುಮಾರ್ ಅವರ ಒಡೆತನದ
ಚಿಕ್ಕಹೆಜ್ಜೂರಿನಲ್ಲಿರುವ 4.10 ಎಕರೆ ಅಡಿಕೆ ತೋಟವನ್ನು ನಿರ್ವಹಿಸುವ ಕೆಲಸವನ್ನು ನಿರ್ವಹಿಸಲು
ಮಾಸಿಕ 18 ಸಾವಿರ ರೂ. ವೇತನವನ್ನು ಈ ದಂಪತಿಗಳಿಗೆ ನಿಗದಿಪಡಿಸಿ ತೋಟದೊಳಗಿರುವ ಮನೆಯನ್ನು ವಾಸಕ್ಕೆ ನೀಡಿದ್ದರು.
ಕಾಡಂಚಿನ ಗ್ರಾಮಗಳಲ್ಲಿ ಆಗಿದ್ದಾಂಗೆ ಜನ ಜಾನುವಾರುಗಳ ಮೇಲೆ ಹುಲಿ, ಚಿರತೆಗಳ ದಾಳಿ ಆಗುತ್ತಿರುವ ಬಗ್ಗೆ ಹಾಗೂ ಹುಲಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಸರ್ಕಾರ ನೀಡುವ ಪರಿಹಾರದ ಬಗ್ಗೆ ಅಕ್ಕ ಪಕ್ಕದವರು ಕೆಲಸಕ್ಕೆ ಬರುತ್ತಿದ್ದವರಿಂದ ಮಾಹಿತಿ ಪಡೆದಿದ್ದ ಸಲ್ಲಾಪುರಿ ಹಣದ ದುರಾಸೆ ಬಿದ್ದು, ಸೆ.8ರಂದು ರಾತ್ರಿ ತನ್ನ ಗಂಡ ವೆಂಕಟಸ್ವಾಮಿಗೆ ವಿಷ ಬೆರೆಸಿದ ಆಹಾರ ನೀಡಿ ಸಾಯಿಸಿದ್ದಾಳೆ.

ವಿಷ ಆಹಾರ ಸೇವಿಸಿದ ವೆಂಕಟಸ್ವಾಮಿ ಸತ್ತ ನಂತರ ಅವನ ದೇಹವನ್ನು ಮನೆಯಿಂದ ಹೊರಗೆ ಎಳೆದೊಯ್ದು ಮನೆಯ ಪಕ್ಕದಲ್ಲಿದ್ದ ಸಗಣಿ ಗುಂಡಿಯನ್ನು ಐದು ಅಡಿ ಆಳ ಅಗೆದು, ಶವವನ್ನು ಹೂತು ಹಾಕಿ ಸಗಣಿ, ಎಲೆಗಳು, ಜೋಳದ ಹುಲ್ಲು ಮತ್ತಿತರ ತ್ಯಾಜ್ಯಗಳಿಂದ ಮುಚ್ಚಿಹಾಕಿದ್ದಾಳೆ. ನಂತರ ಸೆ.9ರ ಮಂಗಳವಾರ ಸಂಜೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ
ಹುಲಿಯೊಂದು ತನ್ನ ಗಂಡ ವೆಂಕಟಸ್ವಾಮಿಯನ್ನು ಕೊಂದು ಅವನ ದೇಹವನ್ನು ಜೋಳದ ಹೊಲದ ಮೂಲಕ ಹತ್ತಿರದ ಕಾಡಿಗೆ ಎಳೆದುಕೊಂಡು ಹೋಗಿದೆ ಎಂದು ಕಥೆ ಕಟ್ಟಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ಹುಣಸೂರು ಗ್ರಾಮಾಂತರ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಶೋಧ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಮುನಿಯಪ್ಪ

ತೋಟದಲ್ಲಿ ಅಳವಡಿಸಲಾದ ಸಿ.ಸಿ.ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಅಪರಾಧದ ಸಮಯದಲ್ಲಿ ಸಲ್ಲಾಪುರಿಯ ಚಲನವಲನಗಳನ್ನು ಗಮನಿಸಿ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಆಕೆಯ ಹೇಳಿಕೆ ಮತ್ತು ದೃಢವಾದ ಪುರಾವೆಗಳನ್ನು ಸಂಗ್ರಹಿಸಿ ತನಿಖೆ ತೀವ್ರಗೊಳಿಸಿದ ಪರಿಣಾಮ ಹಣದ ದುರಾಸೆಗೆ ಬಿದ್ದು ಪತಿಯನ್ನೆ ಕೊಲೆಗೈದು ಶವವನ್ನು ತಿಪ್ಪೆ ಗುಂಡಿಯಲ್ಲಿ ಹೂತಕ್ಕಿರುವುದಾಗಿ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾಳೆ.
ಶವ ಪರೀಕ್ಷೆಗಾಗಿ ಶವವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಮೈಸೂರು ಎಎಸ್ಪಿ ಮಲ್ಲಿಕ್, ಹುಣಸೂರು ಡಿ ವೈ ಎಸ್ ಪಿ ಗೋಪಾಲಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
-
State10 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
State23 hours agoSSLC ಪಾಸ್ ಆದವರಿಗೆ ಸರ್ಕಾರಿ ನೌಕರಿ ಚಾನ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ…
-
Hassan7 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
National24 hours agoಪಲಾಶ್ ಮುಚ್ಚಲ್ರೊಂದಿಗೆ ಮದುವೆ ಮುಂದೂಡಿದ ನಂತರ ಮೊದಲ ಪೋಸ್ಟ್ ಹಂಚಿಕೆಕೊಂಡ ಸ್ಮೃತಿ ಮಂದಾನ
-
Chikmagalur13 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
-
Hassan10 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Politics23 hours agoಡಿಕೆ ಬ್ರದರ್ಸ್ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಪೊಲೀಸರು
-
Mysore11 hours agoಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ
