Kodagu
ಕೋಟೆ ಬೆಟ್ಟ ಗಲಾಟೆ ಪ್ರಕರಣ – ಮಾದಾಪುರ ಹೆದ್ದಾರಿ ತಡೆದು ಪ್ರತಿಭಟನೆ ಎಚ್ಚರಿಕೆ
ಮಡಿಕೇರಿ : ಗರ್ವಾಲೆ ವ್ಯಾಪ್ತಿಯ ಕೋಟೆಬೆಟ್ಟ ತಪ್ಪಲಿನಲ್ಲಿ ನಡೆದ ಪ್ರವಾಸಿಗರು ಮತ್ತು ಸ್ಥಳೀಯರ ನಡುವಿನ ಕ್ಷುಲ್ಲಕ ಗಲಾಟೆಗೆ, ರಾಜಕೀಯ ಮತ್ತು ಕೋಮು ಬಣ್ಣ ಬಳಿದಿದಲ್ಲದೆ, ಸ್ಥಳೀಯರ ವಿರುದ್ಧ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಿಸಿರುವುದನ್ನು ಗರ್ವಾಲೆ ಕೊಡವ ಸಮಾಜದ ಅಧ್ಯಕ್ಷ ಸರ್ಕಂಡ ಗಣಪತಿ ಮತ್ತು ಪದಾಧಿಕಾರಿಗಳು ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಕರಣವನ್ನಿಟ್ಟುಕೊಂಡು ಪದೇ ಪದೇ ಸ್ಥಳೀಯರ ಮನೆಗೆ ಬಂದು, ಯುವಕರ ಪೋಷಕರಿಗೆ ಪೊಲೀಸರು ಒತ್ತಡ ಹಾಕುತ್ತಿದ್ದು, ಒಬ್ಬ ಆರೋಪಿತ ಯುವಕನ ಸಹೋದರ ಈ ಯಾವುದೇ ಕಾರ್ಯದಲ್ಲಿ ಭಾಗಿ ಅಲ್ಲದಿದ್ದರೂ ಆತನನ್ನು ಠಾಣೆಗೆ ಕರೆದೊಯ್ದು, ಮತ್ತೆ ಬಿಡುಗಡೆ ಮಾಡಿದ್ದು, ಇದು, ಗಾಯದ ಮೇಲೆ ಬರೆ ಎನ್ನುವಂತೆ ಪೊಲೀಸರು ಮಾಡುತ್ತಿದ್ದಾರೆ. ಪೊಲೀಸರ ಈ ನಡೆಯನ್ನು ಗರ್ವಾಲೆ ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತೆ ಘಟನೆಯ ಅರಿವೇ ಇಲ್ಲದ ಯುವಕರ ಮನೆಗೆ ಪೊಲೀಸರು ತೆರಳಿ, ವೃದ್ದರು, ಮಹಿಳೆಯರಿಗೆ ಬೆದರಿಸುತ್ತಿರುವ ಕ್ರಮ ಸರಿಯಲ್ಲ. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ ಒಂದರಲ್ಲಿ ವ್ಯಕ್ತಿಯೊಬ್ಬ ಸ್ಥಳೀಯ ಯುವಕರಿಗೆ ಧಮಖಿ ಹಾಕುತಿದ್ದು, ಈತನೇ ಪ್ರವಾಸಿಗರಿಗೆ ಕುಮ್ಮಕ್ಕು ನೀಡಿ, ಗಲಾಟೆಗೆ ಕಾರಣ ಕರ್ತನಾ ಎಂಬ ಸಂಶಯ ಬರುತ್ತಿದೆ. ಪೋಲೀಸರು ಆ ವ್ಯಕ್ತಿಯನ್ನು ಪತ್ತೆಹಚ್ಚಿ ಮೊದಲು ಪ್ರಕರಣ ದಾಖಲಿಸಬೇಕಿದೆ. ಎಲ್ಲಿಂದಲೋ ಬರುವ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದು ತೆರಳಬೇಕೇ ಹೊರತು ಸ್ಥಳೀಯರ ಮೇಲೆ ದಬ್ಬಾಳಿಕೆ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪೋಲೀಸರು ಯಾರದೋ ಒತ್ತಡಕ್ಕೆ ಮಣಿದು ಸ್ಥಳೀಯರು ಅದರಲ್ಲೂ ಅಮಾಯಕ ಕುಟುಂಬಸ್ಥರ ಮೇಲೆ ಬೆದರಿಕೆಯಂತ ಕೃತ್ಯಕ್ಕೆ ಮುಂದಾದರೆ, ಇಲ್ಲಿಯ ಮೂಲನಿವಾಸಿಗಳು ಸುಮ್ಮನೆ ಕೂರುವುದಿಲ್ಲ ಎನ್ನುವ ಅರಿವಿರಬೇಕು. ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯರಿಗೆ ಆತ್ಮವಿಶ್ವಾಸ ತುಂಬಿಸುವ ಕೆಲಸ ಮಾಡಬೇಕು. ಮುಂದೆ ಇಂತ ಪ್ರಕರಣಗಳು ಕೊಡಗಿನಲ್ಲಿ ನಡೆಯದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದಲ್ಲದೆ ಕೋಟೆಬೆಟ್ಟ ನಮ್ಮ ಭಾವನಾತ್ಮಕ ಪವಿತ್ರ ದೇವತಾ ಕ್ಷೇತ್ರವಾಗಿದ್ದು ಇದನ್ನು ಕೂಡಲೇ ಪ್ರವಾಸಿಗರಿಂದ ಮುಕ್ತಮಾಡುವ ಕಾರ್ಯವನ್ನು ಸಂಬAದಿಸಿದ ಇಲಾಖೆ ಮಾಡಬೇಕಿದೆ. ಇಂತ ಘಟನೆ ಮುಂದುವರೆಯಬಾರದು ಹಾಗೂ ಪ್ರಕರಣದಲ್ಲಿ ಸ್ಥಳೀಯರ ಮೇಲೆ ದಾಖಲಾಗಿರುವ ಪ್ರಕರಣವನ್ನ ತಕ್ಷಣ ಹಿಂಪಡೆಯಬೇಕು ಮತ್ತು ಆ ವೀಡಿಯೋದಲ್ಲಿ ಇರುವಂತೆ ಯುವಕರಿಗೆ ಧಮಕಿ ಹಾಕುತ್ತಿರುವ ವ್ಯಕ್ತಿಯ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸಬೇಕು ತಪ್ಪಿದಲ್ಲಿ ಮಾದಾಪುರ ಹೆದ್ದಾರಿ ಬಂದ್ ಮಾಡಿ ತೀವ್ರ ಪ್ರತಿಭಟನೆಗೆ ಕರೆ ಕೊಡುತ್ತೇವೆಂದು ಗರ್ವಾಲೆ ಕೊಡವ ಸಮಾಜ ಅಧ್ಯಕ್ಷ ಸರ್ಕಂಡ ಗಣಪತಿ ಮತ್ತು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
Kodagu
ಬೆಂಗಳೂರು ಒಕ್ಕಲಿಗ ಸಂಘದ ಸಹಯೋಗದೊಂದಿಗೆ ಪ್ರತಿಭಟನೆ ಸಿದ್ದತೆ
ವರದಿ: ಟಿ.ಆರ್.ಪ್ರಭುದೇವ್ ಕುಶಾಲನಗರ
ಕುಶಾಲನಗರ: ಜನವರಿ 20 ರಂದು ಮಡಿಕೇರಿಯಲ್ಲಿ ಅರೆಭಾಷೆ ಒಕ್ಕಲಿಗ ಗೌಡರಿಂದ ನಡೆದ ಮೌನ ಮೆರವಣಿಗೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅರೆಭಾಷೆ ಒಕ್ಕಲಿಗ ಗೌಡರ ಮೇಲೆ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ಸಮಾಜದ ಶಾಂತಿ ಕದಡಲು ಪ್ರಯತ್ನ ಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಇದರ ನಂತರವೂ ಕೆಲವು ದುಷ್ಟ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಷ್ಠ ಕಾರ್ಯವೈಖರಿಯನ್ನು ಮುಂದುವರಿಸಿದ್ದಾರೆ. ನಿರಂತರವಾಗಿ ನಿಂದನೆಯ ಹೇಳಿಕೆಗಳನ್ನು, ಆಡಿಯೋ ಗಳನ್ನೂ ಹರಿಬಿಡುತ್ತಿದ್ದಾರೆ. ಎಂದು ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ ಕುಶಾಲನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂಥವರ ವಿರುದ್ಧ ತೀವ್ರತರದ ಕಾನೂನು ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಕೊಡಗಿನಲ್ಲಿ ಅಶಾಂತಿ ಉಂಟಾಗುವುದರಲ್ಲಿ ಎರಡು ಮಾತಿಲ್ಲ. ಕೊಡಗು ಜಿಲ್ಲೆ ಒಂದು ಜನಾಂಗಕ್ಕೆ ಸೀಮಿತವಾದ ಜಿಲ್ಲೆಯಲ್ಲ, ಹಲವಾರು ಜನಾಂಗದವರು ಅನಾದಿಕಾಲದಿಂದಲೂ ಜೀವನ ಸಾಗಿಸುತ್ತಿರುವುದಾಗಿದೆ. ಹೀಗಿರುವಾಗ ಒಂದು ಕೋಮಿನ ಕೆಲವೊಂದು ದುಷ್ಕರ್ಮಿಗಳು ಇಂತಹ ಆಡಿಯೋಗಳನ್ನು ಹರಿಬಿಡುವುದು ಆರೋಗ್ಯಕರವಲ್ಲ. ಪೊಲೀಸ್ ಇಲಾಖೆಯವರು ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದರು.
ಕುಶಾಲನಗರ ಗೌಡ ಯುವಕ ಸಂಘದ ಕಾರ್ಯದರ್ಶಿ ಪಳಂಗೋಟು ವಿನಯ್ ಕಾರಿಯಪ್ಪ ಮಾತನಾಡಿ, ಪೊಲೀಸ್ ವರಿಷ್ಠಾಧಿಕಾರಿ ಗಳ ಯಾವುದೇ ಮನವಿ ಮತ್ತು ಎಚ್ಚರಿಕೆಗಳು ಅರಣ್ಯರೋದನೆಯಾಗುತ್ತಿದೆ. ದುಷ್ಟ ಶಕ್ತಿಗಳು ಅದನ್ನು ಕ್ಯಾರೆ ಮಾಡುತ್ತಿಲ್ಲ. ಅರೆಭಾಷೆ ಒಕ್ಕಲಿಗ ಜನಾಂಗದವರು ಕೆ.ಎಸ್.ಪಿ ತಂತ್ರಾಂಶ, ಐ.ಜಿ ಮತ್ತು ಎಸ್.ಪಿ ಯವರಿಗೆ ಸಾಕ್ಷಿ ಸಮೇತ ಮತ್ತೆ ದೂರುಗಳನ್ನು ಸಲ್ಲಿಸುತ್ತಿದ್ದು ತಕ್ಷಣ ಕ್ರಮಜರುಗಿಸದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂಭವ ಕಂಡು ಬರುತ್ತಿದ್ದು ಇಂತಹ ದುಷ್ಕರ್ಮಿಗಳ ವಿರುದ್ಧ ಜನವರಿ ಇಪ್ಪತ್ತನೆಯ ತಾರೀಖಿನಂದು ಮಡಿಕೇರಿಯಲ್ಲಿ ಸುಮಾರು ಹತ್ತು ಸಾವಿರದಷ್ಟು ಜನರು ಸ್ವಯಂಪ್ರೇರಿತರಾಗಿ ನೆರೆದಿದ್ದರು. ಕೂಡಲೇ ದುಷ್ಕರ್ಮಿಗಳ ವಿರುದ್ಧ ಸೂಕ್ತ
ಕ್ರಮವನ್ನು ತಕ್ಷಣ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಎರಡೂ ಜಿಲ್ಲೆಯ ಸಂಘಟನೆಗಳು ಬೆಂಗಳೂರಿನ ಒಕ್ಕಲಿಗ ಸಂಘದ ಸಹಯೋಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಲಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುದಿಯನೆರವನ ರಿಷಿತ್ ಮಾದಯ್ಯ, ಕಾರ್ಯದರ್ಶಿ ಯುವ ವೇದಿಕೆ, ವಿವೇಕ್ ಕಡವಡಿರ, ನವೀನ್ ದೇರಳ ಇದ್ದರು.
Kodagu
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-ಹೆಚ್ಚು ಮೊತ್ತಕ್ಕೆ ಖರೀದಿಯಾದ ಐಕಾನ್ ಆಟಗಾರ ಸಜೀರ್
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ (ಕೆಪಿಎಲ್) ಬಿಡ್ಡಿಂಗ್ ಪ್ರಕ್ರಿಯೆ ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಬಿಡ್ಡಿಂಗ್ ಪ್ರಕ್ರಿಯಲ್ಲಿ ಕೆ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಅವರು ಮಾತನಾಡಿ ಕೆಪಿಎಲ್ ಕ್ರಿಕೆಟ್ 10 ನೇ ವರ್ಷಕ್ಕೆ ಪಾದರ್ಪಣೆಯಾಗಿದೆ ಎಂಬುವುದು ಸಂತೋಷ,ಕ್ರಿಕೆಟ್, ವಾಲಿಬಾಲ್,ಫುಟ್ಬಾಲ್ ಎಲ್ಲಾ ಪಂದ್ಯಾಟಗಳು ಒಂದೇ ಆಯೋಜಕತ್ವದಲ್ಲಿ ನಡೆದರೆ ಉತ್ತಮ ವಾಗುತಿತ್ತು, ನಮ್ಮ ಗ್ರಾಮಸ್ತರಿಗೆ ಇರೋದು ನಮ್ಮ ಶಾಲಾ ಮೈದಾನ ಮಾತ್ರ ಅದು ನಮ್ಮ ಗ್ರಾಮದ ಯುವಕರಿಗೆ ಆಟವಾಡಲು ದೊರೆಯುತ್ತಿಲ್ಲ ಎಂಬುದು ಕೇದಕರ.ಎಲ್ಲಾ ಕ್ರೀಡಾಪಟುಗಳು ಸಂಘಟಿತರಾಗಿ ಸಹಕರಿಸಿ ಪ್ರಯತ್ನ ಪಟ್ಟರೆ ಖಂಡಿತ ಅದು ದೊರೆಯಲಿದೆ ಎಂದು ಶುಭಹಾರೈಸಿದರು.
ಮತ್ತೊರ್ವ ಮುಖ್ಯ ಅತಿಥಿ ಪತ್ರಕರ್ತ ಅಶ್ರಫ್ ಮಾತನಾಡಿ ಕೆಪಿಎಲ್ ಆಯೋಜಕರು ಉತ್ತಮ ಕ್ರೀಡಾಕೂಟ ಆಯೋಜಿಸುವ ಮೂಲಕ ಕ್ರೀಡಾ ಸ್ಫೂತಿ ಮೆರೆಯುತ್ತಿರುವುದು ಶ್ಲಾಘನೀಯ.ಇಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ರಾಜ್ಯ,ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮಕ್ಕೆ ಹೆಸರು ತರುವಂತ್ತಾಗಲಿ ಎಂದು ಶುಭ ಹಾರೈಸಿದರು.
:ಕೆಪಿಎಲ್ ಬಿಡ್ಡಿಂಗ್ ನಲ್ಲಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಅಟಗಾರ ಸಜೀರ್
ಜಿದ್ದಾಜಿದ್ದಿನಿಂದ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಡಂಗ ವ್ಯಾಪ್ತಿಯ ಒಟ್ಟು 7 ತಂಡಗಳಾದ ಕೂರ್ಗ್ ವಾರಿಯರ್ಸ್,ಎಬಿಆರ್ ಕ್ರಿಕೆಟರ್ಸ್,ಕೊಡಗು ರಾಯಲ್ಸ್,
ಇಲೆವೆನ್ ಮೊಂಸ್ಟರ್,ಸ್ಟ್ರೈಕ್ ಫೋರ್ಸ್ ಇಲೆವೆನ್,ತಪ್ಸಿ ಕ್ರಿಕೆಟರ್ಸ್,ಸ್ಟ್ರೀಟ್ ಫೈಟರ್ಸ್ ತಂಡಗಳ ಮಾಲೀಕರು ಹಾಗೂ ವ್ಯವಸ್ಥಾಪಕರು,ಕೋಚ್ ಭಾಗವಹಿಸಿದರು.ಇದರಲ್ಲಿ ಸ್ಟ್ರೀಟ್ ಫೈಟರ್ಸ್ ತಂಡದ ಮಾಲೀಕ ಐಕಾನ್ ಆಟಗಾರ ಸಜೀರ್ ರವರನ್ನು 29 ಸಾವಿರ ರೂಗಳ ಬೃಹತ್ ಮೊತ್ತಕ್ಕೆ ಖರಿದಿಸಿದ್ದು ವಿಶೇಷ ವಾಗಿತ್ತು.
2025 ರ ಏಪ್ರಿಲ್ 10 ರಿಂದ 13ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ ಎಂದು ಆಯೋಜಕರಾದ ಜುನೈದ್ ಕೆ.ಎಂ. ಹಾಗೂ ಇಕ್ಬಾಲ್ ಮಾಹಿತಿ ನೀಡಿದರು.
ಈ ಸಂದರ್ಭ ಮೊಹಿಯ್ಯದ್ದೀ ನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್,ನಡಿಕೇರಿಯಂಡ ಜೀವನ್,ಬರೋಡ ಬ್ಯಾಂಕ್ ನ ಅಶ್ರಫ್,ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ವೈಶಾಕ್, ಕರೀಂ, ರಜಾಕ್,ರಾಝಿಕ್,ಸಲಾಂ, ಸಮೀರ್,ಸಿದ್ದಿಕ್,ಕಬೀರ್,ಆಶಿಕ್,ರಹೀಂ,ಷರೀಫ್, ಅಝರುದ್ದಿನ್, ಆಸ್ಕರ್,ಅಜೀಝ್,ರಝಿಕ್ ಎಬಿಆರ್,ನೌಫಲ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ನೌಫಲ್ಎಂ.ಬಿ. ಸ್ವಾಗತಿಸಿ,ನಿರೂಪಿಸಿ,ಸರ್ವರನ್ನು ವಂದಿಸಿದರು.
Kodagu
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
ಮಡಿಕೇರಿ : ಮಡಿಕೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ( ACF) ಆಗಿ ವಾಟೇರಿರ.ಪಿ.ಕಾರ್ಯಪ್ಪ ಅಧಿಕಾರ ಸ್ವೀಕರಿಸಿದರು.
ಮೂಲತ ಕೊಡಗು ಜಿಲ್ಲೆಯ ಮಗ್ಗುಲ ಗ್ರಾಮದವರಾದ ವಾಟೇರಿರ
.ಪಿ.ಕಾರ್ಯಪ್ಪ ನವರು ಈ ಹಿಂದೆ ಕುಂದಾಪುರದಲ್ಲಿ ಕರಾವಳಿ ಮತ್ತು ಸಾಗರ ಕೋಶ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಸೇವೆಯಲ್ಲಿದ್ದು ಈಗ ತಾಯ್ನಾಡಿನಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇವರ ಕುಟುಂಬ ಮಡಿಕೇರಿ ನಗರದ ನಿವಾಸಿಗಳಾಗಿದ್ದಾರೆ.
-
Mysore24 hours ago
ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
-
Mysore9 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Kodagu10 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Mysore6 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu10 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Kodagu7 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-
State24 hours ago
ಬೆಂಗಳೂರು ಅರಮನೆ ಮೈದಾನದ ಜಾಗಕ್ಕೆ ಟಿ.ಡಿ.ಆರ್ ವಿತರಿಸುವುದು ರಾಜ್ಯದ ಹಿತಾಸಕ್ತಿಗೆ ಪ್ರತಿಕೂಲ: ಎಚ್.ಕೆ ಪಾಟೀಲ
-
Mysore7 hours ago
ಮತದಾನದ ಮಹತ್ವ ಸಾರಲು ಪರಿಣಾಮಕಾರಿ ಜನ ಜಾಗೃತಿ ಕಾರ್ಯಕ್ರಮ ಆಯೋಜನೆ ಅವಶ್ಯಕ ಬಿ.ಜಿ.ದಿನೇಶ್