Connect with us

Kodagu

ಅಜಯ್ ಮಾಖೇನ್ ಅವರಿಗೆ ಧನ್ಯವಾದ ಅರ್ಪಿಸಿದ ಕೊಡವಾಮೆರ ಕೊಂಡಾಟ ಸಂಘಟನೆ

Published

on

ಮಡಿಕೇರಿ : ರಾಜ್ಯ ಸಭಾ ಸಂಸದ ಅಜಯ್ ಮಾಖೇನ್ ಅವರು ರಾಜ್ಯ ಸಭೆಯಲ್ಲಿ ಕೊಡವ ಹಾಕಿ ನಮ್ಮೆಯ ಕುರಿತು ಪ್ರಸ್ತಾಪಿಸಿ, ಕೊಡವರ ಬಗ್ಗೆ ವ್ಯಕ್ತಪಡಿಸಿದ ಹೆಮ್ಮೆಯ ಅಭಿಪ್ರಾಯಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಜನಾಂಗದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಶ್ರೀ ಅಜಯ್ ಮಾಕೇನ್ ಅವರಿಗೆ ಇಮೈಲ್, ಎಕ್ಸ್ ಮತ್ತು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾರೆ.


ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವ, ಕೊಡವ ಹಾಕಿ ನಮ್ಮೆಗೆ ಕೇಂದ್ರ ಸರ್ಕಾರ ಅನುದಾನ ನೀಡಬೇಕು, ಭಾರತ ಹಾಕಿಗೆ ಕೊಡವ ಜನಾಂಗ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಈ ಸಾಧನೆಯೂ ಕೇಂದ್ರ ಸರ್ಕಾರದ ಯಾವುದೇ ಸಹಾಯ, ಅನುದಾನ ಇಲ್ಲದೆಯೆ ಮಾಡಿರುವ ಹೆಗ್ಗಳಿಕೆಯಾಗಿದೆ. ಕೊಡಗಿನ ಕ್ರೀಡಾ ಸ್ಫೂರ್ತಿಯನ್ನ ಮನಗಂಡು ಸರ್ಕಾರ ಕೂಡಲೇ ಅರುಣಾಚಲದ ಕೂನೂರ್ ಮಾದರಿಯಲ್ಲಿ ಉನ್ನತ ದರ್ಜೆಯ ಕ್ರೀಡಾ ತರಬೇತಿ ಕೇಂದ್ರವನ್ನು ತೆರೆಯಬೇಕೆಂದು ಅಜಯ್ ಮಾಖೇನ್ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದರು.


ದೇಹಲಿ ಮೂಲದ ಸಂಸದರೊಬ್ಬರು ಪ್ರಪಂಚದ ವಿಶಿಷ್ಟ ಸಂಸ್ಕೃತಿ ಮತ್ತು ಸ್ವಾಭಿಮಾನಿ ಜನಾಂಗವಾದ ಕೊಡವರ ಬಗ್ಗೆ ಹಾಗೂ ಕೊಡವ ಹಾಕಿಯ ಕುರಿತು ಸಂಸತ್ತಿನಲ್ಲಿ ದ್ವನಿ ಎತ್ತಿರುವುದಕ್ಕೆ, ಸಮಸ್ಥ ಕೊಡವ ಜನಾಂಗದ ಪರವಾಗಿ ಶ್ರೀ ಅಜಯ್ ಮಾಖೇನ್ ಅವರಿಗೆ ಅಭಿನಂದನೆಯ ಜೊತೆಗೆ, ಧನ್ಯವಾದ ತಿಳಿಸಿದ ಸಂಘಟನೆ, ಶ್ರೀಯುತರ ಮನವಿಯನ್ನು ಪುರ್ಸ್ಕರಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೆ ಅನುಷ್ಟಾನಕ್ಕೆ ತರಬೇಕೆಂದು ಒತ್ತಾಯಿಸಿದೆ.

Continue Reading

Kodagu

ಬೆಂಗಳೂರು ಒಕ್ಕಲಿಗ ಸಂಘದ ಸಹಯೋಗದೊಂದಿಗೆ ಪ್ರತಿಭಟನೆ ಸಿದ್ದತೆ

Published

on

ವರದಿ: ಟಿ.ಆರ್.ಪ್ರಭುದೇವ್ ಕುಶಾಲನಗರ

ಕುಶಾಲನಗರ: ‌ಜನವರಿ 20 ರಂದು ಮಡಿಕೇರಿಯಲ್ಲಿ ಅರೆಭಾಷೆ ಒಕ್ಕಲಿಗ ಗೌಡರಿಂದ ನಡೆದ ಮೌನ ಮೆರವಣಿಗೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅರೆಭಾಷೆ ಒಕ್ಕಲಿಗ ಗೌಡರ ಮೇಲೆ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ಸಮಾಜದ ಶಾಂತಿ ಕದಡಲು ಪ್ರಯತ್ನ ಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಇದರ ನಂತರವೂ ಕೆಲವು ದುಷ್ಟ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಷ್ಠ ಕಾರ್ಯವೈಖರಿಯನ್ನು ಮುಂದುವರಿಸಿದ್ದಾರೆ. ನಿರಂತರವಾಗಿ ನಿಂದನೆಯ ಹೇಳಿಕೆಗಳನ್ನು, ಆಡಿಯೋ ಗಳನ್ನೂ ಹರಿಬಿಡುತ್ತಿದ್ದಾರೆ. ಎಂದು ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ ಕುಶಾಲನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂಥವರ ವಿರುದ್ಧ ತೀವ್ರತರದ ಕಾನೂನು ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಕೊಡಗಿನಲ್ಲಿ ಅಶಾಂತಿ ಉಂಟಾಗುವುದರಲ್ಲಿ ಎರಡು ಮಾತಿಲ್ಲ. ಕೊಡಗು ಜಿಲ್ಲೆ ಒಂದು ಜನಾಂಗಕ್ಕೆ ಸೀಮಿತವಾದ ಜಿಲ್ಲೆಯಲ್ಲ, ಹಲವಾರು ಜನಾಂಗದವರು ಅನಾದಿಕಾಲದಿಂದಲೂ ಜೀವನ ಸಾಗಿಸುತ್ತಿರುವುದಾಗಿದೆ. ಹೀಗಿರುವಾಗ ಒಂದು ಕೋಮಿನ ಕೆಲವೊಂದು ದುಷ್ಕರ್ಮಿಗಳು ಇಂತಹ ಆಡಿಯೋಗಳನ್ನು ಹರಿಬಿಡುವುದು ಆರೋಗ್ಯಕರವಲ್ಲ. ಪೊಲೀಸ್ ಇಲಾಖೆಯವರು ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದರು.

ಕುಶಾಲನಗರ ಗೌಡ ಯುವಕ ಸಂಘದ ಕಾರ್ಯದರ್ಶಿ ಪಳಂಗೋಟು ವಿನಯ್ ಕಾರಿಯಪ್ಪ ಮಾತನಾಡಿ, ಪೊಲೀಸ್ ವರಿಷ್ಠಾಧಿಕಾರಿ ಗಳ ಯಾವುದೇ ಮನವಿ ಮತ್ತು ಎಚ್ಚರಿಕೆಗಳು ಅರಣ್ಯರೋದನೆಯಾಗುತ್ತಿದೆ. ದುಷ್ಟ ಶಕ್ತಿಗಳು ಅದನ್ನು ಕ್ಯಾರೆ ಮಾಡುತ್ತಿಲ್ಲ. ಅರೆಭಾಷೆ ಒಕ್ಕಲಿಗ ಜನಾಂಗದವರು ಕೆ.ಎಸ್.ಪಿ ತಂತ್ರಾಂಶ, ಐ.ಜಿ ಮತ್ತು ಎಸ್.ಪಿ ಯವರಿಗೆ ಸಾಕ್ಷಿ ಸಮೇತ ಮತ್ತೆ ದೂರುಗಳನ್ನು ಸಲ್ಲಿಸುತ್ತಿದ್ದು ತಕ್ಷಣ ಕ್ರಮಜರುಗಿಸದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂಭವ ಕಂಡು ಬರುತ್ತಿದ್ದು ಇಂತಹ ದುಷ್ಕರ್ಮಿಗಳ ವಿರುದ್ಧ ಜನವರಿ ಇಪ್ಪತ್ತನೆಯ ತಾರೀಖಿನಂದು ಮಡಿಕೇರಿಯಲ್ಲಿ ಸುಮಾರು ಹತ್ತು ಸಾವಿರದಷ್ಟು ಜನರು ಸ್ವಯಂಪ್ರೇರಿತರಾಗಿ ನೆರೆದಿದ್ದರು. ಕೂಡಲೇ ದುಷ್ಕರ್ಮಿಗಳ ವಿರುದ್ಧ ಸೂಕ್ತ

ಕ್ರಮವನ್ನು ತಕ್ಷಣ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಎರಡೂ ಜಿಲ್ಲೆಯ ಸಂಘಟನೆಗಳು ಬೆಂಗಳೂರಿನ ಒಕ್ಕಲಿಗ ಸಂಘದ ಸಹಯೋಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಲಿರುವುದಾಗಿ ತಿಳಿಸಿದರು.
‌‌‌‌‌
ಪತ್ರಿಕಾಗೋಷ್ಠಿಯಲ್ಲಿ ಪುದಿಯನೆರವನ ರಿಷಿತ್ ಮಾದಯ್ಯ, ಕಾರ್ಯದರ್ಶಿ ಯುವ ವೇದಿಕೆ, ವಿವೇಕ್ ಕಡವಡಿರ, ನವೀನ್ ದೇರಳ ಇದ್ದರು.

Continue Reading

Kodagu

ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ

Published

on

ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-ಹೆಚ್ಚು ಮೊತ್ತಕ್ಕೆ ಖರೀದಿಯಾದ ಐಕಾನ್ ಆಟಗಾರ ಸಜೀರ್

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ (ಕೆಪಿಎಲ್) ಬಿಡ್ಡಿಂಗ್ ಪ್ರಕ್ರಿಯೆ ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಬಿಡ್ಡಿಂಗ್ ಪ್ರಕ್ರಿಯಲ್ಲಿ ಕೆ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಅವರು ಮಾತನಾಡಿ ಕೆಪಿಎಲ್ ಕ್ರಿಕೆಟ್ 10 ನೇ ವರ್ಷಕ್ಕೆ ಪಾದರ್ಪಣೆಯಾಗಿದೆ ಎಂಬುವುದು ಸಂತೋಷ,ಕ್ರಿಕೆಟ್, ವಾಲಿಬಾಲ್,ಫುಟ್ಬಾಲ್ ಎಲ್ಲಾ ಪಂದ್ಯಾಟಗಳು ಒಂದೇ ಆಯೋಜಕತ್ವದಲ್ಲಿ ನಡೆದರೆ ಉತ್ತಮ ವಾಗುತಿತ್ತು, ನಮ್ಮ ಗ್ರಾಮಸ್ತರಿಗೆ ಇರೋದು ನಮ್ಮ ಶಾಲಾ ಮೈದಾನ ಮಾತ್ರ ಅದು ನಮ್ಮ ಗ್ರಾಮದ ಯುವಕರಿಗೆ ಆಟವಾಡಲು ದೊರೆಯುತ್ತಿಲ್ಲ ಎಂಬುದು ಕೇದಕರ.ಎಲ್ಲಾ ಕ್ರೀಡಾಪಟುಗಳು ಸಂಘಟಿತರಾಗಿ ಸಹಕರಿಸಿ ಪ್ರಯತ್ನ ಪಟ್ಟರೆ ಖಂಡಿತ ಅದು ದೊರೆಯಲಿದೆ ಎಂದು ಶುಭಹಾರೈಸಿದರು.

ಮತ್ತೊರ್ವ ಮುಖ್ಯ ಅತಿಥಿ ಪತ್ರಕರ್ತ ಅಶ್ರಫ್ ಮಾತನಾಡಿ ಕೆಪಿಎಲ್ ಆಯೋಜಕರು ಉತ್ತಮ ಕ್ರೀಡಾಕೂಟ ಆಯೋಜಿಸುವ ಮೂಲಕ ಕ್ರೀಡಾ ಸ್ಫೂತಿ ಮೆರೆಯುತ್ತಿರುವುದು ಶ್ಲಾಘನೀಯ.ಇಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ರಾಜ್ಯ,ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮಕ್ಕೆ ಹೆಸರು ತರುವಂತ್ತಾಗಲಿ ಎಂದು ಶುಭ ಹಾರೈಸಿದರು.

:ಕೆಪಿಎಲ್ ಬಿಡ್ಡಿಂಗ್ ನಲ್ಲಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಅಟಗಾರ ಸಜೀರ್
ಜಿದ್ದಾಜಿದ್ದಿನಿಂದ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಡಂಗ ವ್ಯಾಪ್ತಿಯ ಒಟ್ಟು 7 ತಂಡಗಳಾದ ಕೂರ್ಗ್ ವಾರಿಯರ್ಸ್,ಎಬಿಆರ್ ಕ್ರಿಕೆಟರ್ಸ್,ಕೊಡಗು ರಾಯಲ್ಸ್,
ಇಲೆವೆನ್ ಮೊಂಸ್ಟರ್,ಸ್ಟ್ರೈಕ್ ಫೋರ್ಸ್ ಇಲೆವೆನ್,ತಪ್ಸಿ ಕ್ರಿಕೆಟರ್ಸ್,ಸ್ಟ್ರೀಟ್ ಫೈಟರ್ಸ್ ತಂಡಗಳ ಮಾಲೀಕರು ಹಾಗೂ ವ್ಯವಸ್ಥಾಪಕರು,ಕೋಚ್ ಭಾಗವಹಿಸಿದರು.ಇದರಲ್ಲಿ ಸ್ಟ್ರೀಟ್ ಫೈಟರ್ಸ್ ತಂಡದ ಮಾಲೀಕ ಐಕಾನ್ ಆಟಗಾರ ಸಜೀರ್ ರವರನ್ನು 29 ಸಾವಿರ ರೂಗಳ ಬೃಹತ್ ಮೊತ್ತಕ್ಕೆ ಖರಿದಿಸಿದ್ದು ವಿಶೇಷ ವಾಗಿತ್ತು.

2025 ರ ಏಪ್ರಿಲ್ 10 ರಿಂದ 13ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ ಎಂದು ಆಯೋಜಕರಾದ ಜುನೈದ್ ಕೆ.ಎಂ. ಹಾಗೂ ಇಕ್ಬಾಲ್ ಮಾಹಿತಿ ನೀಡಿದರು.

ಈ ಸಂದರ್ಭ ಮೊಹಿಯ್ಯದ್ದೀ ನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್,ನಡಿಕೇರಿಯಂಡ ಜೀವನ್,ಬರೋಡ ಬ್ಯಾಂಕ್ ನ ಅಶ್ರಫ್,ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ವೈಶಾಕ್, ಕರೀಂ, ರಜಾಕ್,ರಾಝಿಕ್,ಸಲಾಂ, ಸಮೀರ್,ಸಿದ್ದಿಕ್,ಕಬೀರ್,ಆಶಿಕ್,ರಹೀಂ,ಷರೀಫ್, ಅಝರುದ್ದಿನ್, ಆಸ್ಕರ್,ಅಜೀಝ್,ರಝಿಕ್ ಎಬಿಆರ್,ನೌಫಲ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ನೌಫಲ್ಎಂ.ಬಿ. ಸ್ವಾಗತಿಸಿ,ನಿರೂಪಿಸಿ,ಸರ್ವರನ್ನು ವಂದಿಸಿದರು.

Continue Reading

Kodagu

ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ

Published

on

ಮಡಿಕೇರಿ : ಮಡಿಕೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ( ACF) ಆಗಿ ವಾಟೇರಿರ.ಪಿ.ಕಾರ್ಯಪ್ಪ ಅಧಿಕಾರ ಸ್ವೀಕರಿಸಿದರು.

ಮೂಲತ ಕೊಡಗು ಜಿಲ್ಲೆಯ ಮಗ್ಗುಲ ಗ್ರಾಮದವರಾದ ವಾಟೇರಿರ
.ಪಿ.ಕಾರ್ಯಪ್ಪ ನವರು ಈ ಹಿಂದೆ ಕುಂದಾಪುರದಲ್ಲಿ ಕರಾವಳಿ ಮತ್ತು ಸಾಗರ ಕೋಶ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಸೇವೆಯಲ್ಲಿದ್ದು ಈಗ ತಾಯ್ನಾಡಿನಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇವರ ಕುಟುಂಬ ಮಡಿಕೇರಿ ನಗರದ ನಿವಾಸಿಗಳಾಗಿದ್ದಾರೆ.

Continue Reading

Trending

error: Content is protected !!