Connect with us

Chikmagalur

ಕೋಡಿ ಬಿದ್ದ ಹಿರೇಕೊಳಲೆ ಕೆರೆ

Published

on

ಚಿಕ್ಕಮಗಳೂರು : ನಗರಕ್ಕೆ ನೀರೊದಗಿಸುವ ಹತ್ತಿರದ ಪ್ರವಾಸಿ ಸ್ಥಳ ಹಿರೇಕೊಳಲೆ ಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ.

ಕಳೆದ 15 ದಿನಗಳ ನಿರಂತರ ಮಳೆಗೆ ತುಂಬಿ ಹರಿಯುತ್ತಿದ್ದು ಕೆರೆಯ ವಿಹಂಗಮ ನೋಟ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು ಕೈ ಬೀಸಿ ಕರೆಯುತ್ತಿದೆ.

ಚಿಕ್ಕಮಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಭಾರೀ ವರ್ಷಧಾರೆಯಿಂದಾಗಿ ಐತಿಹಾಸಿಕ ಹಿರೇಕೊಳಲೆಕೆರೆ ಸಂಪೂರ್ಣ ತುಂಬಿ ಕೊಡಿ ಬಿದ್ದಿದೆ. ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ದೊಡ್ಡ ಕೆರೆ ಇದಾಗಿದ್ದು ನಗರವಾಸಿಗಳ ನೀರ ಕೊರತೆ ನೀಗಿಸಿದೆ. ಕೆರೆ ಭರ್ತಿಯಿಂದಾಗಿ ಚಿಕ್ಕಮಗಳೂರು ನಗರದ ನಿವಾಸಿಗಳಲ್ಲಿ ಸಂತಸ ಮೂಡಿದಂತಾಗಿದೆ. ವರ್ಷವಿಡಿ ಹಲವು ಬಡಾವಣೆಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಆಸರೆಯಾಗಿದೆ.

ತುಂಬಿದ ಕೆರೆಯ ಸೌಂದರ್ಯ ನೋಡಲು ಸ್ಥಳೀಯರು ಮುಗಿಬಿದ್ದು ಆಗಮಿಸುತ್ತಿದ್ದಾರೆ. ಗಿರಿ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಹಿರೇಕೊಳಲೆ ಕೆರೆ ಭರ್ತಿಯಾಗಿದೆ

Continue Reading

Chikmagalur

ಸಹೋದರಿ ಹತ್ಯೆಯ ಪ್ರತೀಕಾರವಾಗಿ ಭಾವನ ಬರ್ಬರ ಹ*ತ್ಯೆ: ಆರೋಪಿಗಳನ್ನು ಬಂಧಿಸಿದ ಪೊಲೀಸರು

Published

on

ಚಿಕ್ಕಮಗಳೂರು: ಸಹೋದರಿಯ ಹತ್ಯೆಯ ಪ್ರತಿಕಾರವಾಗಿ ಭಾವನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ತರೀಕೆರೆ ತಾಲೂಕಿನ ಕರಕುಚಿ ಗ್ರಾಮದ ಬಳಿ ಈ ಒಂದು ಭೀಕರ ಕೊಲೆ ನಡೆದಿತ್ತು.

ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಕರಕೋಚಿ ಗ್ರಾಮ ಚರಣ್ (23) ಹತ್ಯೆಗೈದ ಬಾಮೈದ ಸಂತೋಷ ಮತ್ತು ಸಚಿನ್‌ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

2024ರ ಏಪ್ರಿಲ್ 29ರಂದು ಪತ್ನಿ ಮೇಘನಾಳನ್ನು ಪತಿ ಚರಣ್ ಕೊಂದಿದ್ದ. ಗ್ರಾಮದ ಮೇಘನಾ ಮತ್ತು ಚರಣ್ ಪ್ರೀತಿಸಿ ಮದುವೆಯಾಗಿದ್ದರು. ತನ್ನ ಮನೆ ಬಿಟ್ಟು ತವರು ಮನೆಗೆ ಊರಿಗೆ ಹೋಗಿದ್ದಕ್ಕೆ ಚರಣ್ ಮೇಘನಾಳನ್ನು ಕೊಂದಿದ್ದ. ಬಟ್ಟೆ ತೊಳೆಯಲು ಹೋದಾಗ ಪತ್ನಿಕೊಂದು ಶವ ಕಾಲುವೆಗೆ ಎಸೆದಿದ್ದ. ಚರಣ್ 2024 ಏಪ್ರಿಲ್ 29ರಂದು ಮೊಳಕಟ್ಟಮ್ಮ ಜಾತ್ರೆಯ ದಿನ ಮೇಘನಾ ಕೊಲೆ ನಡೆದಿತ್ತು.

ಬಳಿಕ ಮೂರು ತಿಂಗಳ ಹಿಂದೆ ಚರಣ್ ಜಾಮೀನಿನಿಂದ ಹೊರಗಡೆ ಬಂದಿದ್ದನ್ನು ನೋಡಿ ಮೇಘನಾ ಸಹೋದರ ಕೊಲೆ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಭಾವನನ್ನು ಕೊಲೆಗೈದ ಸಂತೋಷ. ಕರಕೋಚಿ ಗ್ರಾಮಕ್ಕೆ ಬೈಕ್ ಮೇಲೆ ಬಂದು ವಾಪಸ್ ತೆರಳುವಾಗ ಚರಣನನ್ನು ಕೊಲೆ ಮಾಡಲಾಗಿದೆ.

ಈ ಘಟನೆಯ ಬಗ್ಗೆ ಲಕ್ಕವಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chikmagalur

ಬೇಲ್ ಮೇಲೆ ಬಂದಿದ್ದ ಆರೋಪಿಯ ಕೊಲೆ

Published

on

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ
ಬೇಲ್ ಮೇಲೆ ಬಂದಿದ್ದ ಆರೋಪಿಯ ಕೊಲೆ

ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಘಟನೆ

ಚರಣ್ (31) ಮೃತ ದುರ್ದೈವಿ

 

ವರ್ಷದ ಹಿಂದೆ ಪತ್ನಿಯನ್ನ ಕೊಂದು ಜೈಲು ಸೇರಿದ್ದ ಚರಣ್

ತಿಂಗಳ ಹಿಂದೆ ಬೇಲ್ ಆಗಿ ಜೈಲಿನಿಂದ ಹೊರಬಂದಿದ್ದ

ಇಂದು ನಡುರಸ್ತೆಯಲ್ಲಿ ಲಕ್ಕವಳ್ಳಿಯಲ್ಲಿ ಕೊಲೆಯಾಗಿದ್ದಾನೆ

ಹೆಂಡತಿ ತಮ್ಮನ ಮೇಲೆ ಅನುಮಾನ, ಆತನೇ ಕೊಲೆ ಮಾಡಿರೋ ಶಂಕೆ

ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು.

Continue Reading

Chikmagalur

ಅಪರಿಚಿತ ವಾಹನದ ಡಿಕ್ಕಿ – ಏಳು ದನಗಳಿಗೆ ಗಾಯ, ಐದು ಸಾ*ವು

Published

on

ಚಿಕ್ಕಮಗಳೂರು : ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ–ಹೆಬ್ಬರಿಗೆ ರಸ್ತೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಏಳು ದನಗಳು ಗಂಭೀರವಾಗಿ ಗಾಯಗೊಂಡಿದ್ದು, ಅವುಗಳಲ್ಲಿ ಐದು ದನಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ಘಟನೆಯ ವಿವರ ಹೀಗಿದೆ: ರಾತ್ರಿ ವೇಳೆ ಮೋಡ ಕವಿದ ವಾತಾವರಣದಲ್ಲಿ, ರಸ್ತೆಯ ಮೇಲೆ ಮಲಗಿದ್ದ ದನಗಳನ್ನು ಅಪರಿಚಿತ ವಾಹನವು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ಬಲೆಗೆ ಸಿಲುಕಿದ ದನಗಳಲ್ಲಿ ಎರಡು ಬದುಕುಳಿದರೂ ಗಂಭೀರ ಗಾಯಗಳಿಂದ ಬಳಲುತ್ತಿವೆ.

ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Continue Reading

Trending

error: Content is protected !!