Connect with us

Kodagu

ಕೊಡಗಿನ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿದ್ದಕ್ಕೆ ಧನ್ಯವಾದ ಹೇಳಿದ ಸಿಎಂ

Published

on

ಕಾಂಗ್ರೆಸ್ ಪಕ್ಷ ದೀರ್ಘ ಇತಿಹಾಸ ಹೊಂದಿರುವ ಪಕ್ಷ, ಸ್ವಾತಂತ್ರ್ಯಕ್ಕೆ ಹೋರಾಡಿದೆ

ಈಗಿರುವ ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಿಲ್ಲ

ಬಿಜೆಪಿ ಯಾವತ್ತೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆದ ಪಕ್ಷ ಅಲ್ಲ

ಆರ್ಎಸ್ಎಸ್ ಆಗಲಿ ಜನಸಂಘ ಆಗಲೀ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲಿಲ್ಲ

ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ ಅಲ್ಲ

1925ರಲ್ಲಿ ಆರ್ಎಸ್ಎಸ್ ಪ್ರಾರಂಭ ಆದರೂ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ

ಅವತ್ತು ನಿಮಗೆ ದೇಶ ಭಕ್ತಿ ಇರಲಿಲ್ವಾ ಅಂತ ಬಿಜೆಪಿಯವರನ್ನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಏನ್ ಮಾಡಿದೆ ಕಾಂಗ್ರೆಸ್ ಅಂತ ಕೇಳ್ತೀರ.. ದೇಶದ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್

ಒಂದೇ ಒಂದು ಅಣೆಕಟ್ಟು ಕಟ್ಟಿದ್ದು ತೋರಿಸಿದ್ರೆ ನಾ ನಿಮ್ಮ ವಿರುದ್ಧ ಮಾತಾಡೋದನ್ನ ನಿಲ್ಲಿಸ್ತೀನಿ

ಹಸಿರು ಕ್ರಾಂತಿ ಮಾಡಿದ್ದು ಕಾಂಗ್ರೆಸ್, ಇದು ಬಿಜೆಪಿಯವರು ಮಾಡಿದ್ರಾ….?

ನಾವು ಬಂದಿದ್ದು ಸಂವಿಧಾನ ಬದಲಾಯಿಸಲು ಅಂತ ಅನಂತ್ ಕುಮಾರ್ ಹೆಗ್ಡೆ ಹೇಳ್ತಾರೆ

ಅವರ ವಿರುದ್ಧ ಬಿಜೆಪಿ ಕ್ರಮ ತೆಗೆದುಕೊಂಡಿಲ್ಲ, ಅಲ್ಲೇ ಎಲ್ಲವೂ ಗೊತ್ತಾಗುತ್ತದೆ

ಈ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಅಂತ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದು

ಇವತ್ತು ದೇಶ ಅಭಿವೃದ್ದಿ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ ಕಾರಣ

ಕಳೆದ ಬಾರಿ ಸಿಎಂ ಆಗಿದ್ದಾಗ 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೆ

ಅದೇ ಬಿಜೆಪಿಯವರು 2018ರಲ್ಲಿ 600 ಭರವಸೆ ಕೊಟ್ಟು ಕೇವಲ 10% ಭರವಸೆ ಈಡೇರಿಸಿದ್ದಾರೆ

ನರೇಂದ್ರ ಮೋದಿಜಿ ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀನಿ ಅಂದಿದ್ರಲ್ಲಾ ಮಾಡಿದೀರ..?

ಬೆಲೆ ಏರಿಕೆ ತಡೆದು ಅಚ್ಛೇ ದಿನ್ ತರುತ್ತೀವಿ ಅಂದಿದ್ರಿ, ಬೆಲೆ ಏನಾಗಿದೆ ಅಂತ ಗೊತ್ತಾ..?

ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಕಹಾಹೆ ಹೋ…?

ನರೇಂದ್ರ ಮೋದೀಜಿ ಕ್ಯೋ ಇತುನೆ ಜೂಟ್ ಬೋಲಿಯೇ..?

ಪ್ರಧಾನಿ ನರೇಂದ್ರ ಮೋದಿಯವರನ್ನ ಕಿಚಾಯಿಸಿದ ಸಿಎಂ ಸಿದ್ದರಾಮಯ್ಯ

ಹೀಗಾಗಿ ಬಿಜೆಪಿ, ಮೋದಿಯನ್ನ ನಂಬಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿ

ನಾನು ಕಂಡ ಶಾಸಕರಲ್ಲಿ ಪೊನ್ನಣ್ಣ ಅತ್ಯಂತ ಕ್ರಿಯಾಶೀಲ ಶಾಸಕ ಅಂತ ಪೊನ್ನಣ್ಣನವರನ್ನ ಹೊಗಳಿದ ಸಿದ್ದು

ನಾವು ಯಾವತ್ತೂ ಜಾತಿ, ಭಾಷೆ ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಲು ಹೋಗಲ್ಲ

ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭದ್ಧತೆ ಇರೋದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ

NDRF ಹಣ ಕೇಂದ್ರದ ಅನುದಾನ ಅಲ್ಲ ನಮಗೆ ಕೊಡಬೇಕಾದ ಹಣ

ಇವತ್ತಿನವರೆಗೂ ಒಂದು ಬಿಡಿಗಾಸೂ ಕೂಡ ಕೇಂದ್ರ ಬಿಡುಗಡೆ ಮಾಡಿಲ್ಲ

ಮಿಸ್ಟರ್ ಪ್ರತಾಪ್ ಸಿಂಹ ಕೊಡಗಿಗೆ ಏನು ಮಾಡಿದೀರ..?

ಸುಳ್ಳು ಹೇಳೋದು, ರೈಲು ಬಿಡೋದು ಬಿಟ್ಟು ನೀನು ಬೇರೆ ಏನು ಮಾಡಿಲ್ಲ

ರೈಲು ಬಿಡೋದ್ರಲ್ಲಿ ಮಾತದರ ಪ್ರತಾಪ ನಿಂದು, ಸುಳ್ಳು ಹೇಳೋದನ್ನ ಬಿಡು

ಕೊಡಗು ಜಿಲ್ಲೆಯ ವಿರಾಜಪೇಟೆ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ವಿರಾಜಪೇಟೆಯ ಸೈಂಟ್ ಆ್ಯನ್ಸ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮ

Continue Reading
Click to comment

Leave a Reply

Your email address will not be published. Required fields are marked *

Kodagu

ನಾಳೆ ಎಲ್ಲೆಲ್ಲಿ ಕರೆಂಟ್ ಇರಲ್ಲ?

Published

on

ಸೋಮವಾರಪೇಟೆ 66/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಗ ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಫ್2 ಶಾಂತಳ್ಳಿ ಮಾರ್ಗದಲ್ಲಿ ಮೇ, 23 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಯಡೂರು, ತಲ್ತಾರೆಶೆಟ್ಟಳ್ಳಿ, ಕಿರಗಂದೂರು, ತಾಕೇರಿ, ಗಿಜಗನಮನೆ, ತೊಳೂರುಶೆಟ್ಟಳ್ಳಿ, ಕೂತಿ, ಹೊಸಬೀಡು, ಕಲ್ಕಂದೂರು, ಬಸವನಕಟ್ಟೆ, ನಗರಳ್ಳಿ, ಹೆಮನಗದ್ದೆ, ಶಾಂತಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಕುಂದಳ್ಳಿ, ಹೆಗ್ಗಡಮನೆ, ಹರಗ, ಕುಂಬಾರಗಡಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Kodagu

ಅಯ್ಯಪ್ಪ ದೇವಸ್ಥಾನದಲ್ಲಿ ಬುಡಕಟ್ಟು ಜನರ ಕುದುರೆ ಹಬ್ಬ

Published

on

ಗೋಣಿಕೊಪ್ಪಲು: ಬೈಗುಳವನ್ನೇ ದೇವರ ಪ್ರಾರ್ಥನೆಯಾಗಿಸಿ ಜನರಿಗೆ ಮುಜುಗರ ತರಿಸುವ ಅಶ್ಲೀಲ ಶಬ್ದಗಳ ಉಚ್ಚರಣೆಯೊಂದಿಗೆ ದೇವರಪುರ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದಲ್ಲಿ ಬುಡಕಟ್ಟು ಜನರ ಕುದುರೆಹಬ್ಬ ನಡೆಯಿತು.
ಸೂರೆ ಬುರುಡೆಯ ಗಿಲಿಗಿಲಿ ಬೋರ್ಗೆರೆತ ನಾದದೊಂದಿಗೆ ವೇಷದಾರಿ ಭಕ್ತಾದಿಗಳು ದೇವರ ಮಂತ್ರಜಪ ಕುಂಡೆ ಪದ ಬಳಕೆಯೊದಿಗೆ ಎದುರಿಗೆ ಸಿಕ್ಕ ಜನರಿಗೆ ವಾಚಮ ಗೋಚಾರವಾಗಿ ಬಯ್ಯುತ್ತಾ ದೇವರನ್ನು ಪ್ರಾರ್ಥಿಸುವ ನೆಪದಲ್ಲಿ ಜನರನ್ನು ಸಂಕೋಚಿತರನ್ನಾಗಿಸಿದರು.
ವೇಷದಾರಿ ಭಕ್ತರನ್ನು ಕಂಡೊಡನೆ ಲಜ್ಜೆಯಿಂದಲೇ ಜನರು ಕಾಣಿಕೆ ನೀಡುವ ಮೂಲಕ ಕಾಡು ಮಕ್ಕಳ ಕುದುರೆ ಬೇಡು ಹಬ್ಬವನ್ನು ಸಂಭ್ರಮಿಸಿದರು.
ಸೂರೆ ಬುರುಡೆ, ಡ್ರಮ್, ಚಂಡೆ, ಕೊಳಲು, ಗಂಟೆ ಇನ್ನಿತರ ಶಬ್ಧ ಹೊರಡಿಸುವ ಸಿಲ್ವರ್ ಪಾತ್ರೆಗಳು, ಬಕೆಟ್‌ಗಳು, ತುತ್ತೂರಿ ಶಬ್ದಗಳು ಅಶ್ಲೀಲ ಬೈಗುಳಕ್ಕೆ ನಾದ ಹೊರಡಿಸುತ್ತಿದ್ದವು.
ಗೋಣಿಕೊಪ್ಪ ಪಟ್ಟಣ ಸೇರಿದಂತೆ ತಿತಿಮತಿ, ಪೊನ್ನಂಪೇಟೆ, ಪಾಲಿಬೆಟ್ಟ, ಬಾಳಲೆ, ಮಾಯಮುಡಿ, ವಿರಾಜಪೇಟೆ, ಸಿದ್ದಾಪುರ, ಕುಶಾಲನಗರ, ಭಾಗಗಳಲ್ಲಿಯೂ ಕುಂಡೆ ಹಬ್ಬ ನೃತ್ಯ,  ಬೈಗುಳದೊಂದಿಗೆ ಎರಡು ದಿನದ ಕಾಡುಮಕ್ಕಳ ಸಂಭ್ರಮವಾಗಿತ್ತು.
ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷದಾರಿಗಳು ನಾಗಸಾಧುಗಳಾಗಿ, ವಿಭಿನ್ನ ದೇವರ ರೂಪಗಳು, ಸೊಪ್ಪು, ಹರಿದ ಬಟ್ಟೆ, ಸ್ತ್ರೀ ರೂಪ, ತುಂಡುಡುಗೆ, ವಿಭಿನ್ನ ಶೈಲಿಯಲ್ಲಿ ಆದಿವಾಸಿಗಳು ಡೋಲು ಬಾರಿಸುವುದರೊಂದಿಗೆ ನೃತ್ಯ ಮಾಡಿ ಆಧಿವಾಸಿಗಳು ಸಹಸ್ರಾರು ಸಂಖ್ಯೆಯಲ್ಲಿ ಹರಕೆ ಪೂರೈಸಿ ದಕ್ಷಿಣ ಕೊಡಗಿನ ವಿಭಿನ್ನ ಬುಡಕಟ್ಟು ಸಮುದಾಯ ಆಚರಣೆ ಕಳೆಗಟ್ಟಿತ್ತು.
ಕಾಡಿನಲ್ಲಿ ವಾಸವಿರುವ ಆದಿವಾಸಿಗಳು ತನ್ನ ವೇಷಭೂಷಣವನ್ನು ಕಾಡಿನಲ್ಲಿ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ವಿಭಿನ್ನವಾಗಿ ಶೃಂಗರಿಸಿಕೊAಡು ಸಂಭ್ರಮಿಸುತ್ತಾರೆ. ಆದರೆ, ಇಂದು ತಾಂತ್ರಿಕವಾಗಿ ಮುಂದುವರೆದಿರುವ ಕಾರಣ ಕಾಲಕ್ಕೆ ತಕ್ಕಂತೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿಗಳಾಗಿ ವೇಷಭೂಷಣ ಮಾಡಿಕೊಂಡು ಜನರಿಂದ ಬೇಗ ಆಕರ್ಷಿತರಾಗುತ್ತಿದ್ದದ್ದು, ಕಂಡುಬAದಿತು.
ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಧ್ಯಾಹ್ನ ೩:೦೦ ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಸಂದರ್ಭ ಸಾವಿರಕ್ಕೂ ಅಧಿಕ ಜನರು ದೂರದ ಊರಿನಿಂದ ಬಂದು ಸೇರಿದ್ದರು.
ಇದಕ್ಕೂ ಮೊದಲು ಅಲ್ಲಿನ ಅಂಬಲದಿAದ ಭದ್ರಕಾಳಿ ದೇವರು ವ್ಯಕ್ತಿಯ ಮೈ ಮೇಲೆ ಬಂದು ಹಬ್ಬದಲ್ಲಿ ಪಾಲ್ಗೊಂಡಿತು. ಇದರೊಂದಿಗೆ ಪಣಿಕ ಜನಾಂಗದ ಇಬ್ಬರು ವ್ಯಕ್ತಿಯರು ದೇವರ ಮೊಗವನ್ನು ತೆಗದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವರ ದೇವಸ್ಥಾನದತ್ತ ತೆರಳಿದರು. ಇದರೊಂದಿಗೆ ಇಬ್ಬರು ಕುದುರೆ ಹೊತ್ತ ಯುವಕರು ಹಾಗೂ ಭಂಡಾರ ಪೆಟ್ಟಿಗೆ ಹೊತ್ತ ತಕ್ಕ ಮುಖ್ಯಸ್ಥರು ತೆರಳಿದರು.
ದೇವರ ವಿಧಿವಿಧಾನದೊಂದಿಗೆ ನಡೆಯುವ ಈ ಹಬ್ಬದಲ್ಲಿ ಭಂಡಾರ ಪೆಟ್ಟಿಗೆ, ಬಿದಿರಿನಿಂದ ತಯಾರಿಸಿದ ಕೃತಕ ಕುದುರೆಯನ್ನು  ಕಳ್ಳಿಚಂಡ ಮುತ್ತಣ್ಣ ಮತ್ತು ಮಂದಣ್ಣ ಹೊತ್ತು ದೇವಸ್ಥಾನದ ಕಣದಲ್ಲಿ ವೇಷಧಾರಿಗಳೊಂದಿಗೆ ಕುಣಿಯುವ ಮೂಲಕ ಹಬ್ಬಕ್ಕೆ ಮತ್ತಷ್ಟು ಭಕ್ತಿಯ ಪರಾಮರ್ಷೆಯನ್ನು ತಂದರು. ವನವಾಸಿ ಕಲ್ಯಾಣ ಸಮಿತಿ ವತಿಯಿಂದ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಲಾಗಿತ್ತು.
Continue Reading

Kodagu

ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ‘ಡಿ’ ಗ್ರೂಪ್ ಹುದ್ದೆಗೆ ಅರ್ಜಿ ಆಹ್ವಾನ

Published

on

ಮಡಿಕೇರಿ : ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಸೇರಿರುವ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು 03 ‘ಡಿ’ ಗ್ರೂಪ್ ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಸುವವರ ವಯೋಮಿತಿ 18 ವರ್ಷ ತುಂಬಿರಬೇಕು. 35 ವರ್ಷ ಮೀರಿರಬಾರದು. (ವಯಸ್ಸಿನ ಬಗ್ಗೆ ಶಾಲಾ ದಾಖಲೆ ನೀಡಬೇಕು), ದೇವಾಲಯದ ಹೊರಾಂಗಣದ ನೌಕರರು ‘ಡಿ’ ಗ್ರೂಪ್ ಹುದ್ದೆ-2(ಕಾವಲುಗಾರರು) ವೇತನ ರೂ.9,600 ಮತ್ತು ಇತರೆ. ದೇವಾಲಯದ ಕರ್ತವ್ಯದ ಅವಧಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆ, ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.


ದೇವಾಲಯದ ಕೆಲಸ ಕಾರ್ಯಗಳು ಮುಜರಾಯಿ ಇಲಾಖೆ ಸೂಚಿಸಿದ ನಿಯಮಗಳು ಹಾಗೂ ಶಿಸ್ತು ಪಾಲನೆಗೆ ಒಳಪಟ್ಟಿರುತ್ತದೆ. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಿಂದ ಪಡೆದ ದೇಹ ದಾಢ್ರ್ಯ ಪ್ರಮಾಣ ಪತ್ರ ಹಾಜರುಪಡಿಸುವುದು. ಯಾವುದೇ ಕ್ರಿಮಿನಲ್ ಮೊಕದ್ದಮೆ ಹಾಗೂ ನ್ಯಾಯಾಲಯದ ಆದೇಶದಂತೆ ಕಾರಾಗೃಹದ ಶಿಕ್ಷೆಗೆ ಒಳಪಟ್ಟಿರಬಾರದು. ಅರ್ಜಿ ಸಲ್ಲಿಸಲು ಜೂನ್, 05 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ದೇವಾಲಯದ ಕಚೇರಿಯ ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಒಳಗೆ ಭೇಟಿ ನೀಡಬಹುದಾಗಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ಅವರು ತಿಳಿಸಿದ್ದಾರೆ.

Continue Reading

Trending

error: Content is protected !!