Sports
IPL 2025: ರಾಜಸ್ಥಾನ್ಗೆ ಸತತ ಎರಡನೇ ಸೋಲು: ಕೆಕೆಆರ್ ಶುಭಾರಂಭ
ಗುವಾಹಟಿ: ಸಂಘಟಿತ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಅತಿಥೇಯ ರಾಯಸ್ಥಾನ್ ರಾಯಲ್ಸ್ ತಂಡವನ್ನು 8 ವಿಕೆಟ್ಗಳ ಅಂತರದಿಂದ ಮಣಿಸಿದ ಕೆಕೆಆರ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮತ್ತೊಂದೆಡೆ ಆರ್ಆರ್ ತಾನಾಡಿದ ಮೊದಲೆರೆಡು ಪಂದ್ಯಗಳಲ್ಲಿಯೂ ಸೋತು ನಿರಾಸೆ ಅನುಭವಿಸಿದೆ.
ಇಲ್ಲಿನ ಬಾರ್ಸಪರ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್ ಮತ್ತು ಆರ್ಆರ್ ನಡುವಣ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಆರ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಕೆಕೆಆರ್ 17.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿ 8 ವಿಕಟ್ಗಳ ಅಂತರದಿಂದ ಗೆಲುವು ದಾಖಲಿಸಿತು.
ಆರ್ಆರ್ ಇನ್ನಿಂಗ್ಸ್: ತನ್ನ ತವರು ನೆಲದಲ್ಲಿ ಇನ್ನಿಂಗ್ಸ್ ಆರಂಭಿಸಿದ ಆರ್ಆರ್ಗೆ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸ್ಯಾಮ್ಸನ್ 13(11), ಜೈಸ್ವಾಲ್ 29(24) ರನ್ ಗಳಿಸಿ ವೇಗವಾಗಿ ಔಟಾದರು.
ನಂತರ ಬಂದ ನಾಯಕ ರಿಯಾನ್ ಪರಾಗ್ ಅಬ್ಬರಿಸುವ ಹಾಗೆ ಕಂಡರೂ 25(15) ರನ್ ಗಳಿಸಿ ಔಟಾದರು. ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಧ್ರುವ್ ಜುರೆಲ್ 33(28) ರನ್ ಗಳಿಸಿದ್ದೆ ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಆಗಿತ್ತು.
ಉಳಿದಂತೆ ನಿತೀಶ್ ರಾಣಾ 8(9), ವನಿಂದು ಹಸರಂಗ 4(4), ಶುಭಂ ದುಬೆ 9(12), ಹೆಟ್ಮಾಯರ್ 7(8), ಜೋಫ್ರಾ ಆರ್ಚರ್ 16(7) ರನ್ ಗಳಿಸಿ ಔಟಾದರು. ತೀಕ್ಷಣ ಹಾಗೂ ತುಷಾರ್ ದೇಶ್ಪಾಂಡೆ ಔಟಾಗದೇ 1(1) ಮತ್ತು 2(1) ರನ್ ಕಲೆಹಾಕಿದರು.
ಕೆಕೆಆರ್ ಪರ ವರುಣ್ ಚಕ್ರವರ್ತಿ, ಮೋಯಿನ್ ಅಲಿ, ಹರ್ಷಿತ್ ರಣಾ, ವೈಭವ್ ಅರೋರಾ ತಲಾ 2 ವಿಕೆಟ್ ಪಡೆದರು.
ಕೆಕೆಆರ್ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್ಗೆ ಕ್ವಿಂಟನ್ ಡಿ ಕಾಕ್ ಆಸರೆಯಾದರು. ಆರಂಭಿಕ ಬ್ಯಾಟರ್ ಮೊಯೀನ್ ಅಲಿ 5(12) ರನ್ ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನ್ಔಟ್ ಆಗಿ ಹೊರ ನಡೆದರು. ಬಳಿಕ ಬಂದ ನಾಯಕ ಅಜಿಂಕ್ಯಾ ರಹಾನೆ 18(15) ಕೂಡಾ ಹಚ್ಚುಹೊತ್ತು ನಿಲ್ಲಲಿಲ್ಲ.
ನಂತರ ಒಂದಾದ ಕ್ವಿಂಟನ್ ಡಿ ಕಾಕ್ ಹಾಗೂ ರಘುವಂಶಿ ತಂಡದ ದಿಕ್ಕನ್ನೇ ಬದಲಾಯಿಸಿದರು. ತಮ್ಮ ಬಲವಾದ ಹೊಡೆತಗಳ ಮೂಲಕ ಆರ್ಆರ್ ಬೌಲರ್ಗಳನ್ನು ಕಾಡಿದರು. ಡಿಕಾಕ್ ಔಟಾಗದೇ 61 ಎಸೆತಗಳಲ್ಲಿ 8 ಬೌಂಡರಿ ಹಾಗೂ ಭರ್ಜರಿ 6 ಸಿಕ್ಸರ್ ಸಹಿತ 97 ರನ್ ಗಳಿಸಿದರು. ರಘುವಂಶಿ 22(17) ರನ್ ಗಳಿಸಿ ಔಟಾಗದೇ ಉಳಿದು ಡಿಕಾಕ್ಗೆ ಸಾಥ್ ನೀಡಿದರು.
ಆರ್ಆರ್ ಪರ ಹಸರಂಗ ಒಂದು ವಿಕೆಟ್ ಪಡೆದರು.
National
U-19 World Cup| ವೈಭವ್ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
ಹರಾರೆ: ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಯಂಗ್ ಇಂಡಿಯಾ ತಂಡ ಇತಿಹಾಸ ಸೃಷ್ಟಿಸಿದೆ. ಅಂಡರ್- 19 ವಿಶ್ವಕಪ್ ಫೈನಲ್ನಲ್ಲಿ ಭಾರತ v/s ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್ಗಳಿಂದ ಸೋಲಿಸಿದ್ದು, ಭಾರತ ಸತತ ಆರನೇ ಬಾರಿಗೆ ಅಂಡರ್- 19 ವಿಶ್ವಕಪ್ ಎತ್ತಿಹಿಡಿದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 411 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವೂ 311 ರನ್ಗಳಿಗೆ ಆಲೌಟ್ ಆಗುವ ಮೂಲಕ 100 ರನ್ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಈ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್ಗಳ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಈ ಇನ್ನಿಂಗ್ಸ್ನಲ್ಲಿ 15 ಸಿಕ್ಸರ್ಗಳು ಮತ್ತು 15 ಬೌಂಡರಿಗಳು ಸೇರಿದ್ದವು.

ವೈಭವ್ನ ಸ್ಫೋಟಕ ಶತಕ
ಈ ವೇಳೆ ವೈಭವ್ 39 ಎಸೆತಗಳಲ್ಲಿ ವೇದಾಂತ್ ತ್ರಿವೇದಿ ಅವರೊಂದಿಗೆ ಮೂರನೇ ವಿಕೆಟ್ಗೆ 89 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವೈಭವ್ ವಿಕೆಟ್ ಪತನವಾದಾಗ ತಂಡದ ಮೊತ್ತ 251 ರನ್ ಆಗಿತ್ತು. ಇದರ ನಂತರ ಉಳಿದ 7 ಆಟಗಾರರು ಸ್ಕೋರ್ ಬೋರ್ಡ್ಗೆ 160 ರನ್ ಸೇರಿಸಿದರು. ವೇದಾಂತ್ 36 ಎಸೆತಗಳಲ್ಲಿ 32 ರನ್ ಗಳಿಸಿದರೆ, ವಿಹಾನ್ ಮಲ್ಹೋತ್ರಾ 36 ಎಸೆತಗಳಲ್ಲಿ 30 ರನ್ ಬಾರಿಸಿದರು. ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್, ಅಂಬ್ರಿಸ್ ಕೇವಲ 18 ರನ್, ಕನಿಷ್ಕ್ ಚೌಹಾಣ್ 20 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್ ಪಡೆದರೆ, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಏಕಾಂಗಿ ಹೋರಾಟ ಮಾಡಿದ ಫಾಕ್ನರ್ ಆಟ ವ್ಯರ್ಥ
ಭಾರತ ನೀಡಿದ 412 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 40.2 ಓವರ್ಗಳಲ್ಲಿ 311 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಕ್ಯಾಲೆಬ್ ಫಾಕ್ನರ್ 67 ಎಸೆತಗಳಲ್ಲಿ 115 ರನ್ಗಳ ಇನ್ನಿಂಗ್ಸ್ ಆಡಿದರು. ಆದರೆ ಇನ್ನೊಂದು ತುದಿಯಿಂದ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ. ಫಾಕ್ನರ್ ಹೊರತುಪಡಿಸಿ ಬೆನ್ ಡಾಕಿನ್ಸ್ 66 ಮತ್ತು ಬೆನ್ ಮೇಯಸ್ 45 ರನ್ಗಳ ಇನ್ನಿಂಗ್ಸ್ ಆಡಿದರು. ನಾಯಕ ಥಾಮಸ್ 31 ರನ್ಗಳನ್ನು ನೀಡಿದರು. ಇಂಗ್ಲೆಂಡ್ ತಂಡ ಉತ್ತಮ ಪಡೆಯಿತ್ತಾದರೂ ಮಧ್ಯಮ ಓವರ್ಗಳಲ್ಲಿ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದಾಗಿ ತಂಡಕ್ಕೆ ಬೃಹತ್ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಕೊನೆಗೂ 140 ಕೋಟಿ ಭಾರತೀಯರ ಕನಸು ನನಸಾಗಿದೆ. ಐಸಿಸಿ ಅಂಡರ್-19 ವಿಶ್ವಕಪ್ 2026ರ ಟ್ರೋಫಿಗೆ ‘ಯಂಗ್ ಇಂಡಿಯಾ’ ಮುತ್ತಿಟ್ಟಿದೆ. ಹರಾರೆಯಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 100 ರನ್ಗಳ ಭರ್ಜರಿ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
National - International
ನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
T-20 World Cup 2026: 10ನೇ ಆವೃತ್ತಿಯ ಟಿ-20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ನಾಳೆಯಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಮೆಂಟ್ನಲ್ಲಿ ಒಟ್ಟು 20 ತಂಡಗಳು ಸ್ಪರ್ಧಿಸಲಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಭಾರತ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
20 ತಂಡಗಳ 4 ಗುಂಪುಗಳು ಯಾವ್ಯಾವು?
ಗುಂಪು -ಎ: ಭಾರತ, ಪಾಕಿಸ್ತಾನ, ಅಮೆರಿಕ, ನೆದರ್ಲ್ಯಾಂಡ್ಸ್, ನಮೀಬಿಯಾ.
ಗುಂಪು- ಬಿ: ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಐರ್ಲೆಂಡ್, ಓಮನ್.
ಗುಂಪು- ಸಿ: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಇಟಲಿ, ನೇಪಾಳ, ಸ್ಕಾಟ್ಲೆಂಡ್.
ಗುಂಪು -ಡಿ: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಕೆನಡಾ, ಯುಎಇ.

ಆತಿಥ್ಯದ ಸ್ಥಳಗಳು ಯಾವ್ಯಾವು?
ಭಾರತ
- ಈಡನ್ ಗಾರ್ಡನ್ಸ್- ಕೋಲ್ಕತ್ತಾ
- ವಾಂಖೆಡೆ ಸ್ಟೇಡಿಯಂ- ಮುಂಬೈ
- ಎಂಎ ಚಿದಂಬರಂ ಸ್ಟೇಡಿಯಂ- ಚೆನ್ನೈ
- ನರೇಂದ್ರ ಮೋದಿ ಕ್ರೀಡಾಂಗಣ- ಅಹಮದಾಬಾದ್
- ಅರುಣ್ ಜೇಟ್ಲಿ ಕ್ರೀಡಾಂಗಣ- ದೆಹಲಿ
ಶ್ರೀಲಂಕಾ
- ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್- ಕೊಲಂಬೊ
- ಆರ್.ಪ್ರೇಮದಾಸ ಕ್ರೀಡಾಂಗಣ- ಕೊಲಂಬೊ
- ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ- ಪಲ್ಲೆಕೆಲೆ
ಟಿ-20 ವಿಶ್ವಕಪ್ ಪಂದ್ಯದ ವೇಳಾಪಟ್ಟಿ ಏನು?
1.ಫೆ. 7 (ಶನಿವಾರ)
- ಪಾಕಿಸ್ತಾನ v/s ನೆದರ್ಲ್ಯಾಂಡ್ಸ್ — ಕೊಲಂಬೊ — ಬೆಳಿಗ್ಗೆ 11:00
- ವೆಸ್ಟ್ ಇಂಡೀಸ್ v/s ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00
- ಭಾರತ v/s ಅಮೆರಿಕ – ಮುಂಬೈ – ಸಂಜೆ 7:00
2.ಫೆ.8 (ಭಾನುವಾರ)
- ನ್ಯೂಜಿಲೆಂಡ್ v/s ಅಫ್ಘಾನಿಸ್ತಾನ – ಚೆನ್ನೈ – ಬೆಳಿಗ್ಗೆ 11:00
- ಇಂಗ್ಲೆಂಡ್ v/s ನೇಪಾಳ – ಮುಂಬೈ – ಮಧ್ಯಾಹ್ನ 3:00
- ಶ್ರೀಲಂಕಾ v/s ಐರ್ಲೆಂಡ್ – ಕೊಲಂಬೊ- ಸಂಜೆ 7:00
3.ಫೆ. 9 (ಸೋಮವಾರ)
- ಸ್ಕಾಟ್ಲೆಂಡ್ v/s ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00
- ಜಿಂಬಾಬ್ವೆ v/s ಓಮನ್ – ಕೊಲಂಬೊ – ಮಧ್ಯಾಹ್ನ 3:00
- ದಕ್ಷಿಣ ಆಫ್ರಿಕಾ v/s ಕೆನಡಾ – ಅಹಮದಾಬಾದ್ – ಸಂಜೆ 7:00
4. ಫೆ.10 (ಮಂಗಳವಾರ)
- ನೆದರ್ಲ್ಯಾಂಡ್ಸ್ v/s ನಮೀಬಿಯಾ — ದೆಹಲಿ — ಬೆಳಿಗ್ಗೆ 11:00
- ನ್ಯೂಜಿಲೆಂಡ್ v/s ಯುಎಇ – ಚೆನ್ನೈ – ಮಧ್ಯಾಹ್ನ 3:00
- ಪಾಕಿಸ್ತಾನ v/s ಅಮೆರಿಕ — ಕೊಲಂಬೊ— ಸಂಜೆ 7:00
5. ಫೆ. 11 (ಬುಧವಾರ)
- ದಕ್ಷಿಣ ಆಫ್ರಿಕಾ v/s ಅಫ್ಘಾನಿಸ್ತಾನ – ಅಹಮದಾಬಾದ್ – ಬೆಳಿಗ್ಗೆ 11:00
- ಆಸ್ಟ್ರೇಲಿಯಾ v/s ಐರ್ಲೆಂಡ್ – ಕೊಲಂಬೊ – ಮಧ್ಯಾಹ್ನ 3:00
- ಇಂಗ್ಲೆಂಡ್ v/s ವೆಸ್ಟ್ ಇಂಡೀಸ್ – ಮುಂಬೈ – ಸಂಜೆ 7:00 ಗಂಟೆಗೆ
6.ಫೆ.12 (ಗುರುವಾರ)
- ಶ್ರೀಲಂಕಾ v/s ಓಮನ್ — ಕ್ಯಾಂಡಿ — ಬೆಳಿಗ್ಗೆ 11:00
- ನೇಪಾಳ v/s ಇಟಲಿ — ಮುಂಬೈ — ಮಧ್ಯಾಹ್ನ 3:00
- ಭಾರತ v/s ನಮೀಬಿಯಾ — ದೆಹಲಿ — ಸಂಜೆ 7:00
7. ಫೆ. 13 (ಶುಕ್ರವಾರ)
- ಆಸ್ಟ್ರೇಲಿಯಾ v/s ಜಿಂಬಾಬ್ವೆ — ಕೊಲಂಬೊ— ಬೆಳಿಗ್ಗೆ 11:00
- ಕೆನಡಾ v/s ಯುಎಇ — ದೆಹಲಿ — ಮಧ್ಯಾಹ್ನ 3:00
- ಅಮೆರಿಕ v/s ನೆದರ್ಲ್ಯಾಂಡ್ಸ್ — ಚೆನ್ನೈ — ಸಂಜೆ 7:00
8. ಫೆ. 14 (ಶನಿವಾರ)
- ಐರ್ಲೆಂಡ್ v/s ಓಮನ್ — ಕೊಲಂಬೊ — ಬೆಳಿಗ್ಗೆ 11:00
- ಇಂಗ್ಲೆಂಡ್ v/s ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00
- ನ್ಯೂಜಿಲೆಂಡ್ v/s ದಕ್ಷಿಣ ಆಫ್ರಿಕಾ – ಅಹಮದಾಬಾದ್ – ಸಂಜೆ 7:00
9. ಫೆ. 15 (ಭಾನುವಾರ)
- ವೆಸ್ಟ್ ಇಂಡೀಸ್ v/s ನೇಪಾಳ – ಮುಂಬೈ – ಬೆಳಿಗ್ಗೆ 11:00
- ಅಮೆರಿಕ v/s ನಮೀಬಿಯಾ — ಚೆನ್ನೈ — 3:00
- ಭಾರತ /vs ಪಾಕಿಸ್ತಾನ – ಕೊಲಂಬೊ- ಸಂಜೆ 7:00
10. ಫೆ.16 (ಸೋಮವಾರ)
- ಅಫ್ಘಾನಿಸ್ತಾನ v/s ಯುಎಇ — ದೆಹಲಿ — ಬೆಳಿಗ್ಗೆ 11:00
- ಇಂಗ್ಲೆಂಡ್ v/s ಇಟಲಿ – ಕೋಲ್ಕತ್ತಾ – ಮಧ್ಯಾಹ್ನ 3:00
- ಆಸ್ಟ್ರೇಲಿಯಾ v/s ಶ್ರೀಲಂಕಾ – ಕ್ಯಾಂಡಿ – ಸಂಜೆ 7:00
11.ಫೆ. 17 (ಮಂಗಳವಾರ)
- ನ್ಯೂಜಿಲೆಂಡ್ v/s ಕೆನಡಾ – ಚೆನ್ನೈ – ಬೆಳಿಗ್ಗೆ 11:00
- ಐರ್ಲೆಂಡ್ v/s ಜಿಂಬಾಬ್ವೆ – ಕ್ಯಾಂಡಿ – ಮಧ್ಯಾಹ್ನ 3:00
- ಸ್ಕಾಟ್ಲೆಂಡ್ v/s ನೇಪಾಳ – ಮುಂಬೈ – ಸಂಜೆ 7:00 ಗಂಟೆಗೆ.
12.ಫೆ. 18 (ಬುಧವಾರ)
- ದಕ್ಷಿಣ ಆಫ್ರಿಕಾ v/s ಯುಎಇ — ದೆಹಲಿ — ಬೆಳಿಗ್ಗೆ 11:00
- ಪಾಕಿಸ್ತಾನ v/s ನಮೀಬಿಯಾ – ಕೊಲಂಬೊ – ಮಧ್ಯಾಹ್ನ 3:00
- ಭಾರತ v/s ನೆದರ್ಲ್ಯಾಂಡ್ಸ್ – ಅಹಮದಾಬಾದ್ – ಸಂಜೆ 7:00
13. ಫೆ.19 (ಗುರುವಾರ)
- ವೆಸ್ಟ್ ಇಂಡೀಸ್ v/s ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00
- ಶ್ರೀಲಂಕಾ v/s ಜಿಂಬಾಬ್ವೆ – ಕೊಲಂಬೊ – ಮಧ್ಯಾಹ್ನ 3:00
- ಅಫ್ಘಾನಿಸ್ತಾನ v/s ಕೆನಡಾ — ಚೆನ್ನೈ — ಸಂಜೆ 7:00
14.ಫೆ. 20 (ಶುಕ್ರವಾರ)
ಆಸ್ಟ್ರೇಲಿಯಾ v/s ಓಮನ್ – ಕ್ಯಾಂಡಿ – ಸಂಜೆ 7:00
Sports
U-19 World Cup: ಫೈನಲ್ ಪಂದ್ಯದಲ್ಲಿ ಸೆಂಚುರಿ ಬಾರಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ
U-19 World Cup: ವೈಭವ್ ಸೂರ್ಯವಂಶಿ, ಕೇವಲ 14 ವರ್ಷ ವಯಸ್ಸಾಗಿದ್ದರೂ ತನ್ನ ಲ್ಲಿರುವ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ನನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಳೆದ ಐಪಿಎಲ್ನಲ್ಲಿ ಘಟಾನುಘಟಿ ಬೌಲರ್ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ವಿಶ್ವಕಪ್ನಲ್ಲೂ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿ ಮಾಡಿದ್ದಾರೆ.
ಹರಾರೆಯಲ್ಲಿ ಇಂದು ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವೈಭವ್ ಅಂಡರ್ 19 ವಿಶ್ವಕಪ್ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಕೇವಲ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್
ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಳಪೆ ಆರಂಭ ಪಡೆಯಿತು. ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ್ದ ಆರಂಭಿಕ ಆರನ್ ಜಾರ್ಜ್ ಈ ಪಂದ್ಯದಲ್ಲಿ ಕೇವಲ 9 ರನ್ಗಳಿಗೆ ಔಟಾದರು. ಆದರೆ ಆ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ಎಂದಿನಂತೆ ಬೌಂಡರಿ ಸಿಕ್ಸರ್ಗಳ ಮಳೆಗರೆದ ಸೂರ್ಯವಂಶಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
-
Chamarajanagar15 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Hassan13 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Kodagu13 hours agoಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ಡಿವೈಎಸ್ಪಿ ಮಹೇಶ್ ಕುಮಾರ್
-
Uncategorized6 hours agoದಿ. ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಕಾರ್ ರೇಸ್ : ಕುಚುಕು ಗೆಳೆಯ ನನ್ನ ನೆನೆದ ಸಂಸದ ಸುನಿಲ್ ಬೋಸ್
-
Kodagu6 hours agoಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ
-
Kodagu6 hours agoಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ
-
Uncategorized6 hours agoಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ
-
State7 hours agoಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!
