Connect with us

Sports

IPL 2025: ರಾಜಸ್ಥಾನ್‌ಗೆ ಸತತ ಎರಡನೇ ಸೋಲು: ಕೆಕೆಆರ್‌ ಶುಭಾರಂಭ

Published

on

ಗುವಾಹಟಿ: ಸಂಘಟಿತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನದ ಸಹಾಯದಿಂದ ಅತಿಥೇಯ ರಾಯಸ್ಥಾನ್‌ ರಾಯಲ್ಸ್‌ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ ಕೆಕೆಆರ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮತ್ತೊಂದೆಡೆ ಆರ್‌ಆರ್‌ ತಾನಾಡಿದ ಮೊದಲೆರೆಡು ಪಂದ್ಯಗಳಲ್ಲಿಯೂ ಸೋತು ನಿರಾಸೆ ಅನುಭವಿಸಿದೆ.

ಇಲ್ಲಿನ ಬಾರ್ಸಪರ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್‌ ಮತ್ತು ಆರ್‌ಆರ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಿತು. ಈ ಮೊತ್ತ ಬೆನ್ನತ್ತಿದ ಕೆಕೆಆರ್‌ 17.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿ 8 ವಿಕಟ್‌ಗಳ ಅಂತರದಿಂದ ಗೆಲುವು ದಾಖಲಿಸಿತು.

ಆರ್‌ಆರ್‌ ಇನ್ನಿಂಗ್ಸ್‌: ತನ್ನ ತವರು ನೆಲದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಆರ್‌ಆರ್‌ಗೆ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸ್ಯಾಮ್ಸನ್‌ 13(11), ಜೈಸ್ವಾಲ್‌ 29(24) ರನ್‌ ಗಳಿಸಿ ವೇಗವಾಗಿ ಔಟಾದರು.

ನಂತರ ಬಂದ ನಾಯಕ ರಿಯಾನ್‌ ಪರಾಗ್‌ ಅಬ್ಬರಿಸುವ ಹಾಗೆ ಕಂಡರೂ 25(15) ರನ್‌ ಗಳಿಸಿ ಔಟಾದರು. ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಧ್ರುವ್‌ ಜುರೆಲ್‌ 33(28) ರನ್‌ ಗಳಿಸಿದ್ದೆ ತಂಡದ ಪರ ವೈಯಕ್ತಿಕ ಗರಿಷ್ಠ ರನ್‌ ಆಗಿತ್ತು.

ಉಳಿದಂತೆ ನಿತೀಶ್‌ ರಾಣಾ 8(9), ವನಿಂದು ಹಸರಂಗ 4(4), ಶುಭಂ ದುಬೆ 9(12), ಹೆಟ್ಮಾಯರ್‌ 7(8), ಜೋಫ್ರಾ ಆರ್ಚರ್‌ 16(7) ರನ್‌ ಗಳಿಸಿ ಔಟಾದರು. ತೀಕ್ಷಣ ಹಾಗೂ ತುಷಾರ್‌ ದೇಶ್‌ಪಾಂಡೆ ಔಟಾಗದೇ 1(1) ಮತ್ತು 2(1) ರನ್‌ ಕಲೆಹಾಕಿದರು.

ಕೆಕೆಆರ್‌ ಪರ ವರುಣ್‌ ಚಕ್ರವರ್ತಿ, ಮೋಯಿನ್‌ ಅಲಿ, ಹರ್ಷಿತ್‌ ರಣಾ, ವೈಭವ್‌ ಅರೋರಾ ತಲಾ 2 ವಿಕೆಟ್‌ ಪಡೆದರು.

ಕೆಕೆಆರ್‌ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಕ್ವಿಂಟನ್‌ ಡಿ ಕಾಕ್‌ ಆಸರೆಯಾದರು. ಆರಂಭಿಕ ಬ್ಯಾಟರ್‌ ಮೊಯೀನ್‌ ಅಲಿ 5(12) ರನ್‌ ಗಳಿಸಿ ಇಲ್ಲದ ರನ್‌ ಕದಿಯಲು ಹೋಗಿ ರನ್‌ಔಟ್‌ ಆಗಿ ಹೊರ ನಡೆದರು. ಬಳಿಕ ಬಂದ ನಾಯಕ ಅಜಿಂಕ್ಯಾ ರಹಾನೆ 18(15) ಕೂಡಾ ಹಚ್ಚುಹೊತ್ತು ನಿಲ್ಲಲಿಲ್ಲ.

ನಂತರ ಒಂದಾದ ಕ್ವಿಂಟನ್‌ ಡಿ ಕಾಕ್‌ ಹಾಗೂ ರಘುವಂಶಿ ತಂಡದ ದಿಕ್ಕನ್ನೇ ಬದಲಾಯಿಸಿದರು. ತಮ್ಮ ಬಲವಾದ ಹೊಡೆತಗಳ ಮೂಲಕ ಆರ್‌ಆರ್‌ ಬೌಲರ್‌ಗಳನ್ನು ಕಾಡಿದರು. ಡಿಕಾಕ್‌ ಔಟಾಗದೇ 61 ಎಸೆತಗಳಲ್ಲಿ 8 ಬೌಂಡರಿ ಹಾಗೂ ಭರ್ಜರಿ 6 ಸಿಕ್ಸರ್‌ ಸಹಿತ 97 ರನ್‌ ಗಳಿಸಿದರು. ರಘುವಂಶಿ 22(17) ರನ್‌ ಗಳಿಸಿ ಔಟಾಗದೇ ಉಳಿದು ಡಿಕಾಕ್‌ಗೆ ಸಾಥ್‌ ನೀಡಿದರು.

ಆರ್‌ಆರ್ ಪರ ಹಸರಂಗ ಒಂದು ವಿಕೆಟ್‌ ಪಡೆದರು.

Continue Reading

Sports

IPL 2025: ಸೀಸನ್‌ನ ಮೊದಲ ಸೂಪರ್‌ ಓವರ್‌ನಲ್ಲಿ ಗೆದ್ದು ಬೀಗಿದ ಡೆಲ್ಲಿ; ಆರ್‌ಆರ್‌ಗೆ ಸೋಲು

Published

on

ನವದೆಹಲಿ: 2025ನೇ ಸಾಲಿನ ಐಪಿಎಲ್‌ನ 18ನೇ ಆವೃತ್ತಿಯ 32ನೇ ಪಂದ್ಯ ಸೂಪರ್‌ ಓವರ್‌ನಲ್ಲಿ ಅಂತ್ಯ ಕಂಡಿದ್ದು, ಈ ಪಂದ್ಯದಲ್ಲಿ ರಾಜಸ್ಥಾನ್‌ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್‌ ಮಣಿಸುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ್‌ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌ಆರ್‌ 12 ರನ್‌ ಗಳಿಸಿದರೇ, ಇದನ್ನು ಬೆನ್ನಟಿದ ಡೆಲ್ಲಿ ಕೇವಲ 4 ಎಸೆತಗಳಲ್ಲಿ 13 ರನ್‌ ಗಳಿಸಿ ಗೆದ್ದು ಬೀಗಿತು.

ಡೆಲ್ಲಿ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಮ್ಯಾಕ್‌ಗಾರ್ಕ್‌ 9(6) ರನ್‌ ಗಳಿಸಿ ಔಟಾದರೇ, ಕಳೆದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ಕರುಣ್‌ ನಾಯರ್‌ ಡಕ್‌ಔಟ್‌ ಆಗಿ ಹೊರ ನಡೆದರು.

ಅಭಿಷೇಕ್‌ 49(37), ಕೆ.ಎಲ್‌ ರಾಹುಲ್‌ 38(32), ನಾಯಕ ಅಕ್ಷರ್‌ ಪಟೇಲ್‌ 34(14) ರನ್‌ ಗಳಿಸಿದರು. ಸ್ಟಬ್ಸ್‌ ಔಟಾಗದೇ 34(18) ರನ್‌ ಗಳಿಸಿದರೇ, ಅಶುತೋಶ್‌ ಶರ್ಮಾ ನಾಟ್‌ಔಟ್‌ ಆಗಿ 15(11) ರನ್‌ ಗಳಿಸಿದರು.

ರಾಜಸ್ಥಾನ್‌ ಪರ ಜೋಫ್ರಾ ಆರ್ಚರ್‌ ಎರಡು ವಿಕೆಟ್‌, ತೀಕ್ಷಣ ಮತ್ತು ಹಸರಂಗ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ರಾಜಸ್ಥಾನ್‌ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಆರ್‌ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಯಶಸ್ವಿ ಜೈಸ್ವಾಲ್‌ 51(37) ಅರ್ಧಶತಕ ಗಳಿಸಿ ಔಟಾದರೆ, ನಾಯಕ ಸ್ಯಾಮ್ಸನ್‌ 31(19) ರನ್‌ ಗಳಿಸಿದರು. ರಿಯಾನ್‌ ಪರಾಗ್‌ 8(11), ನಿತೀಶ್‌ ರಾಣಾ 51(28) ರನ್‌ ಗಳಿಸಿದರು.

ಕೊನೆಯಲ್ಲಿ ಹೋರಾಟ ಮಾಡಿದ ಹೆಟ್ಮಾಯರ್‌ ಔಟಾಗದೇ 15(9) ರನ್‌ ಗಳಿಸಿದರೇ, ಧ್ರುವ್‌ ಜುರೆಲ್‌ 26(17) ರನ್‌ಔಟ್‌ ಆಗಿ ತಂಡವನ್ನು ಗೆಲ್ಲಿಸಿಕೊಡುವಲ್ಲಿ ವಿಫಲರಾದರು. ಪಂದ್ಯ ಟೈ ಆಗುವ ಮೂಲಕ ಈ ಟೂರ್ನಿಯಲ್ಲಿ ಮೊದಲ ಸೂಪರ್‌ ಓವರ್‌ಗೆ ಸಾಕ್ಷಿಯಾಯಿತು.

ಡೆಲ್ಲಿ ಪರ ಸ್ಟಾರ್ಕ್‌, ಅಕ್ಷರ್‌ ಪಟೇಲ್‌ ಮತ್ತು ಕುಲ್ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Continue Reading

Sports

ಮತ್ತೆ ಸದ್ದು ಮಾಡಿದ ಮ್ಯಾಚ್‌ ಫಿಕ್ಸಿಂಗ್‌: ಐಪಿಎಲ್‌ ಫ್ರಾಂಚೈಸಿಗಳಿಗೆ ಎಚ್ಚರಿಕೆ ಕೊಟ್ಟ ಬಿಸಿಸಿಐ

Published

on

ನವದೆಹಲಿ: ಐಪಿಎಲ್‌ (ಇಂಡಿಯನ್ ಪ್ರೀಮಿಯರ್ ಲೀಗ್) 18ನೇ ಆವೃತ್ತಿಯಲ್ಲಿ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಭೂತ ಸದ್ದು ಮಾಡುತ್ತಿದೆ. ಮಾ.22 ರಂದು ಆರಂಭವಾದ ಐಪಿಎಲ್‌ನ 18 ಆವೃತ್ತಿಯಲ್ಲಿ 31 ಪಂದ್ಯಗಳು ಪೂರ್ಣಗೊಂಡಿದ್ದು, ಈ ನಡುವೆ ಮ್ಯಾಚ್‌ ಫಿಕ್ಸಿಂಗ್‌ ಪ್ರಯತ್ನ ನಡೆಸಲಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಈ ಬಗ್ಗೆ ಎಲ್ಲಾ ಫ್ರಾಂಚೈಸಿಗಳಿಗೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ಎಸಿಎಸ್‌ಯು) ಖಡಕ್‌ ಎಚ್ಚರಿಕೆ ನೀಡಿದ್ದು, ಟೂರ್ನಿಯಲ್ಲಿನ ಎಲ್ಲಾ 10 ತಂಡಗಳ ಮಾಲೀಕರು, ಆಟಗಾರರು, ಕೋಚ್‌ಗಳು, ಸಹಾಯಕ ಸಿಬ್ಬಂದಿ ಹಾಗೂ ವೀಕ್ಷಕ ವಿವರಣೆಕಾರರಿಗೆ ಎಚ್ಚರಿಕೆ ನೀಡಿದೆ.

ಮ್ಯಾಚ್‌ ಫಿಕ್ಸಿಂಗ್‌ ಸಂಬಂಧ ಯಾರಾದರೂ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ತಕ್ಷಣ ವರದಿ ಮಾಡಬೇಕೆಂದು ಬಿಸಿಸಿಐ ಸೂಚಿಸಲಾಗಿದೆ.

ಎಸಿಯುಸಿ ಪ್ರಕಾರ, ಪ್ರಸ್ತುತ ಟೂರ್ನಿಯಲ್ಲಿ ಭ್ರಷ್ಟಾಚಾರದ ಕರಿನೆರಳು ಆವರಿಸಿದೆ. ಇದಕ್ಕಾಗಿ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ, ತಂಡದ ಮಾಲೀಕರು ಮತ್ತು ವೀಕ್ಷಕರ ಕುಟುಂಬಗಳ ಸದಸ್ಯರ ಜೊತೆ ಅಭಿಮಾನಿಗಳಂತೆ ನಟಿಸಿ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಓಲೈಸುವ ಪ್ರಯತ್ನಗಳು ನಡೆಯುತ್ತಿವೆ. ಈ ಮೂಲಕ ಫಿಕ್ಸಿಂಗ್ ನಡೆಸಲು ಯತ್ನಿಸಲಾಗಿದೆ ಎಂದು ವರದಿ ಮಾಡಿದೆ.

ಮಾಧ್ಯಮವೊಂದರ ವರದಿಯ ಪ್ರಕಾರ, ಹೈದರಾಬಾದ್ ಮೂಲದ ಉದ್ಯಮಿಯೊಬ್ಬ ಪಂದ್ಯಾವಳಿಯಲ್ಲಿ ಭಾಗವಹಿಸುವವರೊಂದಿಗೆ ಐಪಿಎಲ್‌ನ ಎಲ್ಲರೊಂದಿಗೂ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದಾನೆ. ಆದಾಗ್ಯೂ ಅವರು ಯಾರೆಂಬುದನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಈ ಉದ್ಯಮಿ ಬುಕ್ಕಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಭಿಮಾನಿಯಂತೆ ನಟಿಸುತ್ತಾ ಅವರು ಆಟಗಾರರು, ತರಬೇತುದಾರರು ಮತ್ತು ವೀಕ್ಷಕ ವಿವರಣೆಗಾರರ ಕುಟುಂಬ ಸದಸ್ಯರನ್ನು ಆಭರಣ ಅಂಗಡಿಗಳು ಮತ್ತು ದುಬಾರಿ ಹೋಟೆಲ್‌ಗಳಿಗೆ ಕರೆದೊಯ್ಯಲು ಮುಂದಾಗುತ್ತಿದ್ದಾನೆ. ಇಷ್ಟು ಮಾತ್ರವಲ್ಲದೆ, ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ವಿದೇಶದಲ್ಲಿ ವಾಸಿಸುವ ಐಪಿಎಲ್‌ಗೆ ಸಂಬಂಧಪಟ್ಟಿರುವ ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿಯೇ ಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ಲೀಗ್‌ನ ಎಲ್ಲ 10 ತಂಡಗಳಿಗೆ ಎಚ್ಚರಿಕೆ ನೀಡಿದೆ.

2013 ರಲ್ಲಿ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಗಳು ನಡೆದಿದ್ದವು. ಈ ಸಂಬಂಧ ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ಅಲ್ಲದೆ ಫಿಕ್ಸಿಂಗ್ ಸಾಬೀತಾದ ಹಿನ್ನಲೆಯಲ್ಲಿ 2016 ಮತ್ತು 2017 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು 2 ವರ್ಷಗಳ ಕಾಲ ನಿಷೇಧಿಸಲಾಗಿತ್ತು.

Continue Reading

Sports

IPL 2025: ಚಾಹಲ್‌ ಕಮಾಲ್‌ಗೆ ಮಣಿದ ಕೆಕೆಆರ್‌; ಪಂಜಾಬ್‌ಗೆ 16 ರನ್‌ಗಳ ಜಯ

Published

on

ಚಂಡೀಗಢ: ಪಂಜಾಬ್‌ ಕಿಂಗ್ಸ್‌ ತಂಡದ ಮಿಸ್ಟ್ರಿ ಸ್ಪಿನ್ನರ್‌ ಚಾಹಲ್‌, ಮಾರ್ಕೋ ಏನ್ಸನ್‌ ಅವರ ಅಮೋಘ ಬೌಲಿಂಗ್‌ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ 16 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿದೆ.

ಇಲ್ಲಿನ ಮುಲ್ಲನ್‌ಪುರ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 15.3 ಓವರ್‌ಗಳಲ್ಲಿ ಸರ್ವಪತನ ಕಂಡು ಕೇವಲ 111 ರನ್‌ ಗಳಿಸಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಕೋಲ್ಕತ್ತಾ ನೈಟ್‌ರೈಡರ್ಸ್‌ 15.1 ಓವರ್‌ಗಳಲ್ಲಿ 10 ವಿಕೆಟ್‌ ಕಳೆದುಕೊಂಡು 95 ರನ್‌ ಬಾರಿಸಿ 16 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಪಂಜಾಬ್‌ ಇನ್ನಿಂಗ್ಸ್‌: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ಗೆ ಹರ್ಷಿತ್‌ ರಾಣಾ, ಸುನೀಲ್‌ ನರೈನ್‌ ಹಾಗೂ ಚಕ್ರವರ್ತಿ ಜೋಡಿ ಕಾಡಿದರು. ಪ್ರಭ್‌ ಸಿಮ್ರಾನ್‌ 30(15) ರನ್‌ ಬಾರಿಸಿದ್ದೇ ತಂಡದ ಪರವಾಗಿ ದಾಖಲಾದ ವೈಯಕ್ತಿಕ ಗರಿಷ್ಠ ರನ್‌ ಆಗಿತ್ತು. ಇತ್ತ ಶತಕ ಬಾರಿಸಿದ್ದ ಪ್ರಿಯಾಂಶ್‌ ಆರ್ಯ 22(12) ರನ್‌ ಗಳಿಸಿ ಔಟಾದರು.

ಮಧ್ಯಮ ಕ್ರಮಾಂಕದ ದಿಢೀರ್‌ ಕುಸಿತದಿಂದಾಗಿ ತಂಡ ಅಲ್ಪ ಮೊತ್ತಕ್ಕೆ ಸುಸ್ತಾಯಿತು. ನಾಯಕ ಶ್ರೇಯಸ್‌ ಅಯ್ಯರ್‌ ಡಕ್‌ಔಟ್‌, ಜೋಶ್‌ ಇಂಗ್ಲಿಸ್‌ 2(6), ನೇಹಲ್‌ ವಧೇರಾ 10(9), ಮ್ಯಾಕ್ಸ್‌ವೆಲ್‌ 7(10), ಸೂರ್ಯಾಂಶ್‌ 4(4), ಶಶಾಂಕ್‌ ಸಿಂಗ್‌ 18(17), ಏನ್ಸನ್‌ 1(2), ಬಾರ್ಟ್ಲೆಟ್ 11(15) ಮತ್ತು ಅರ್ಶ್‌ದೀಪ್‌ ಔಟಾಗದೇ 1(1) ರನ್‌ ಗಳಿಸಿದರು.

ಕೆಕೆಆರ್‌ ಪರ ಹರ್ಷಿತ್‌ ರಾಣಾ ಮೂರು ವಿಕೆಟ್‌, ಸುನೀಲ್‌ ನರೈನ್‌ ಹಾಗೂ ವರುಣ್‌ ಚಕ್ರವರ್ತಿ ತಲಾ ಎರಡು ವಿಕೆಟ್‌, ವೈಭವ್‌ ಅರೋರಾ ಮತ್ತು ನೋಕಿಯೋ ಒಂದೊಂದು ವಿಕೆಟ್‌ ಕಬಳಿಸಿದರು.

ಕೆಕೆಆರ್‌ ಇನ್ನಿಂಗ್ಸ್‌: ಈ ಸಾಧಾರಣ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಆರಂಭಿಕ ಆಘಾತ ಎದುರಾಯಿತು. ಡಿಕಾಕ್‌ 2(4), ಸುನೀಲ್‌ ನರೈನ್‌ 5(4) ರನ್‌ ಬಾರಿಸಿ ಬಂದಷ್ಟೆ ವೇಗವಾಗಿ ಪೆವಿಲಿಯನ್‌ ಸೇರಿದರು.

ನಂತರ ಬಂದ ನಾಯಕ ಅಜಿಂಕ್ಯಾ ರಹಾನೆ 17(17), ರಘುವಂಶಿ 37(28) ರನ್‌ ಗಳಿಸಿ ಔಟಾದರು. ಬಳಿಕ ಬಂದ ಯಾರಿಂದಲೂ ಉತ್ತಮ ಇನ್ನಿಂಗ್ಸ್‌ ಕಟ್ಟಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದ ದಿಢೀರ್‌ ಕುಸಿತ ತಂಡ ಸೋಲಿಗೆ ಕಾರಣವಾಯಿತು.

ವೆಂಕಟೇಶ್‌ ಅಯ್ಯರ್‌ 7(4), ರಿಂಕು ಸಿಂಗ್‌ 2(9), ರಮಣ್‌ದೀಪ್‌ ಸಿಂಗ್‌ ಡಕ್‌ಔಟ್‌, ಹರ್ಷಿತ್‌ ರಾಣಾ 3(6), ರಸೆಲ್‌ 17(11), ವೈಭವ್‌ ಅರೋರಾ ಡಕ್‌ಔಟ್‌ ಆಗುವ ಮೂಲಕ ತಂಡದ ಸೋಲಿಗೆ ಕಾರಣರಾದರು.

ಪಂದ್ಯಶ್ರೇಷ್ಠ: ಚಾಹಲ್‌

Continue Reading

Trending

error: Content is protected !!