Kodagu
ಕಾವೇರಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಬೆನಡಿಕ್ಟ್ ಆರ್ ಸಲ್ಡಾನ
ವೀರಾಜಪೇಟೆ : ಕಾವೇರಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯು ವಿರಾಜಪೇಟೆ ಕಾವೇರಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಬೆನಡಿಕ್ಟ್ ಆರ್ ಸಲ್ಡಾನರವರನ್ನು ನೇಮಿಸಿದ್ದು, ಶನಿವಾರ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಬೋಪಣ್ಣ ಸಮ್ಮುಖದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾಕ್ಟರ್ ಆನಂದ ಕಾರ್ಲ ಅಧಿಕಾರವನ್ನು ಹಸ್ತಾಂತರಿಸಿದರು.
ಮೂಲತಃ ವಿರಾಜಪೇಟೆಯವರಾದ ಸಲ್ಡಾನ ರವರು 1995ರಲ್ಲಿ ಕಾವೇರಿ ಕಾಲೇಜು ಗೋಣಿಕೊಪ್ಪದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಸುಮಾರು 28 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, 15 ವರ್ಷಗಳ ಕಾಲ ಕಾವೇರಿ ಕಾಲೇಜು ಗೋಣಿಕೊಪ್ಪ, 10 ವರ್ಷಗಳ ಕಾಲ ಕಾವೇರಿ ಕಾಲೇಜು ವಿರಾಜಪೇಟೆ ಹಾಗೂ 3 ವರ್ಷಗಳ ಕಾಲ ಕಾವೇರಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ
ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಬೆನಡಿಕ್ಟ್ ಆರ್ ಸಲ್ಡಾನ ಮಾತನಾಡಿ ನನಗೆ ಸಿಕ್ಕಂತಹ ಈ ಅವಕಾಶವನ್ನುಉತ್ತಮವಾಗಿ ಬಳಸಿಕೊಂಡು ಕಾಲೇಜಿನ ಏಳಿಗೆಗೆ ಶ್ರಮಿಸುತ್ತೇನೆ. ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ
ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಹಾಗೆ ಎಲ್ಲ ಉಪನ್ಯಾಸಕರ ಜೊತೆಗೂಡಿ ಒಗ್ಗಟ್ಟಿನಿಂದ ಜವಬ್ದಾರಿಯನ್ನು ನಿರ್ವಹಿಸುವೆ ಎಂದರು.
ಕಾವೇರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಇಟ್ಟೀರ ಕೆ ಬಿದ್ದಪ್ಪ, ಕಾರ್ಯದರ್ಶಿಗಳಾದ ಕುಳ್ಳಚಂಡ ಬೋಪಣ್ಣ ಹಾಗೂ ಕಾವೇರಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಬೆನಡಿಕ್ಟ್ ಆರ್ ಸಲ್ಡಾನರವರೆಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದರು.
Kodagu
ಬೆಂಗಳೂರು ಒಕ್ಕಲಿಗ ಸಂಘದ ಸಹಯೋಗದೊಂದಿಗೆ ಪ್ರತಿಭಟನೆ ಸಿದ್ದತೆ
ವರದಿ: ಟಿ.ಆರ್.ಪ್ರಭುದೇವ್ ಕುಶಾಲನಗರ
ಕುಶಾಲನಗರ: ಜನವರಿ 20 ರಂದು ಮಡಿಕೇರಿಯಲ್ಲಿ ಅರೆಭಾಷೆ ಒಕ್ಕಲಿಗ ಗೌಡರಿಂದ ನಡೆದ ಮೌನ ಮೆರವಣಿಗೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅರೆಭಾಷೆ ಒಕ್ಕಲಿಗ ಗೌಡರ ಮೇಲೆ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ಸಮಾಜದ ಶಾಂತಿ ಕದಡಲು ಪ್ರಯತ್ನ ಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಇದರ ನಂತರವೂ ಕೆಲವು ದುಷ್ಟ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಷ್ಠ ಕಾರ್ಯವೈಖರಿಯನ್ನು ಮುಂದುವರಿಸಿದ್ದಾರೆ. ನಿರಂತರವಾಗಿ ನಿಂದನೆಯ ಹೇಳಿಕೆಗಳನ್ನು, ಆಡಿಯೋ ಗಳನ್ನೂ ಹರಿಬಿಡುತ್ತಿದ್ದಾರೆ. ಎಂದು ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ ಕುಶಾಲನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂಥವರ ವಿರುದ್ಧ ತೀವ್ರತರದ ಕಾನೂನು ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಕೊಡಗಿನಲ್ಲಿ ಅಶಾಂತಿ ಉಂಟಾಗುವುದರಲ್ಲಿ ಎರಡು ಮಾತಿಲ್ಲ. ಕೊಡಗು ಜಿಲ್ಲೆ ಒಂದು ಜನಾಂಗಕ್ಕೆ ಸೀಮಿತವಾದ ಜಿಲ್ಲೆಯಲ್ಲ, ಹಲವಾರು ಜನಾಂಗದವರು ಅನಾದಿಕಾಲದಿಂದಲೂ ಜೀವನ ಸಾಗಿಸುತ್ತಿರುವುದಾಗಿದೆ. ಹೀಗಿರುವಾಗ ಒಂದು ಕೋಮಿನ ಕೆಲವೊಂದು ದುಷ್ಕರ್ಮಿಗಳು ಇಂತಹ ಆಡಿಯೋಗಳನ್ನು ಹರಿಬಿಡುವುದು ಆರೋಗ್ಯಕರವಲ್ಲ. ಪೊಲೀಸ್ ಇಲಾಖೆಯವರು ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದರು.
ಕುಶಾಲನಗರ ಗೌಡ ಯುವಕ ಸಂಘದ ಕಾರ್ಯದರ್ಶಿ ಪಳಂಗೋಟು ವಿನಯ್ ಕಾರಿಯಪ್ಪ ಮಾತನಾಡಿ, ಪೊಲೀಸ್ ವರಿಷ್ಠಾಧಿಕಾರಿ ಗಳ ಯಾವುದೇ ಮನವಿ ಮತ್ತು ಎಚ್ಚರಿಕೆಗಳು ಅರಣ್ಯರೋದನೆಯಾಗುತ್ತಿದೆ. ದುಷ್ಟ ಶಕ್ತಿಗಳು ಅದನ್ನು ಕ್ಯಾರೆ ಮಾಡುತ್ತಿಲ್ಲ. ಅರೆಭಾಷೆ ಒಕ್ಕಲಿಗ ಜನಾಂಗದವರು ಕೆ.ಎಸ್.ಪಿ ತಂತ್ರಾಂಶ, ಐ.ಜಿ ಮತ್ತು ಎಸ್.ಪಿ ಯವರಿಗೆ ಸಾಕ್ಷಿ ಸಮೇತ ಮತ್ತೆ ದೂರುಗಳನ್ನು ಸಲ್ಲಿಸುತ್ತಿದ್ದು ತಕ್ಷಣ ಕ್ರಮಜರುಗಿಸದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂಭವ ಕಂಡು ಬರುತ್ತಿದ್ದು ಇಂತಹ ದುಷ್ಕರ್ಮಿಗಳ ವಿರುದ್ಧ ಜನವರಿ ಇಪ್ಪತ್ತನೆಯ ತಾರೀಖಿನಂದು ಮಡಿಕೇರಿಯಲ್ಲಿ ಸುಮಾರು ಹತ್ತು ಸಾವಿರದಷ್ಟು ಜನರು ಸ್ವಯಂಪ್ರೇರಿತರಾಗಿ ನೆರೆದಿದ್ದರು. ಕೂಡಲೇ ದುಷ್ಕರ್ಮಿಗಳ ವಿರುದ್ಧ ಸೂಕ್ತ
ಕ್ರಮವನ್ನು ತಕ್ಷಣ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಎರಡೂ ಜಿಲ್ಲೆಯ ಸಂಘಟನೆಗಳು ಬೆಂಗಳೂರಿನ ಒಕ್ಕಲಿಗ ಸಂಘದ ಸಹಯೋಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಲಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುದಿಯನೆರವನ ರಿಷಿತ್ ಮಾದಯ್ಯ, ಕಾರ್ಯದರ್ಶಿ ಯುವ ವೇದಿಕೆ, ವಿವೇಕ್ ಕಡವಡಿರ, ನವೀನ್ ದೇರಳ ಇದ್ದರು.
Kodagu
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-ಹೆಚ್ಚು ಮೊತ್ತಕ್ಕೆ ಖರೀದಿಯಾದ ಐಕಾನ್ ಆಟಗಾರ ಸಜೀರ್
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ (ಕೆಪಿಎಲ್) ಬಿಡ್ಡಿಂಗ್ ಪ್ರಕ್ರಿಯೆ ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಬಿಡ್ಡಿಂಗ್ ಪ್ರಕ್ರಿಯಲ್ಲಿ ಕೆ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಅವರು ಮಾತನಾಡಿ ಕೆಪಿಎಲ್ ಕ್ರಿಕೆಟ್ 10 ನೇ ವರ್ಷಕ್ಕೆ ಪಾದರ್ಪಣೆಯಾಗಿದೆ ಎಂಬುವುದು ಸಂತೋಷ,ಕ್ರಿಕೆಟ್, ವಾಲಿಬಾಲ್,ಫುಟ್ಬಾಲ್ ಎಲ್ಲಾ ಪಂದ್ಯಾಟಗಳು ಒಂದೇ ಆಯೋಜಕತ್ವದಲ್ಲಿ ನಡೆದರೆ ಉತ್ತಮ ವಾಗುತಿತ್ತು, ನಮ್ಮ ಗ್ರಾಮಸ್ತರಿಗೆ ಇರೋದು ನಮ್ಮ ಶಾಲಾ ಮೈದಾನ ಮಾತ್ರ ಅದು ನಮ್ಮ ಗ್ರಾಮದ ಯುವಕರಿಗೆ ಆಟವಾಡಲು ದೊರೆಯುತ್ತಿಲ್ಲ ಎಂಬುದು ಕೇದಕರ.ಎಲ್ಲಾ ಕ್ರೀಡಾಪಟುಗಳು ಸಂಘಟಿತರಾಗಿ ಸಹಕರಿಸಿ ಪ್ರಯತ್ನ ಪಟ್ಟರೆ ಖಂಡಿತ ಅದು ದೊರೆಯಲಿದೆ ಎಂದು ಶುಭಹಾರೈಸಿದರು.
ಮತ್ತೊರ್ವ ಮುಖ್ಯ ಅತಿಥಿ ಪತ್ರಕರ್ತ ಅಶ್ರಫ್ ಮಾತನಾಡಿ ಕೆಪಿಎಲ್ ಆಯೋಜಕರು ಉತ್ತಮ ಕ್ರೀಡಾಕೂಟ ಆಯೋಜಿಸುವ ಮೂಲಕ ಕ್ರೀಡಾ ಸ್ಫೂತಿ ಮೆರೆಯುತ್ತಿರುವುದು ಶ್ಲಾಘನೀಯ.ಇಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ರಾಜ್ಯ,ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮಕ್ಕೆ ಹೆಸರು ತರುವಂತ್ತಾಗಲಿ ಎಂದು ಶುಭ ಹಾರೈಸಿದರು.
:ಕೆಪಿಎಲ್ ಬಿಡ್ಡಿಂಗ್ ನಲ್ಲಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಅಟಗಾರ ಸಜೀರ್
ಜಿದ್ದಾಜಿದ್ದಿನಿಂದ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಡಂಗ ವ್ಯಾಪ್ತಿಯ ಒಟ್ಟು 7 ತಂಡಗಳಾದ ಕೂರ್ಗ್ ವಾರಿಯರ್ಸ್,ಎಬಿಆರ್ ಕ್ರಿಕೆಟರ್ಸ್,ಕೊಡಗು ರಾಯಲ್ಸ್,
ಇಲೆವೆನ್ ಮೊಂಸ್ಟರ್,ಸ್ಟ್ರೈಕ್ ಫೋರ್ಸ್ ಇಲೆವೆನ್,ತಪ್ಸಿ ಕ್ರಿಕೆಟರ್ಸ್,ಸ್ಟ್ರೀಟ್ ಫೈಟರ್ಸ್ ತಂಡಗಳ ಮಾಲೀಕರು ಹಾಗೂ ವ್ಯವಸ್ಥಾಪಕರು,ಕೋಚ್ ಭಾಗವಹಿಸಿದರು.ಇದರಲ್ಲಿ ಸ್ಟ್ರೀಟ್ ಫೈಟರ್ಸ್ ತಂಡದ ಮಾಲೀಕ ಐಕಾನ್ ಆಟಗಾರ ಸಜೀರ್ ರವರನ್ನು 29 ಸಾವಿರ ರೂಗಳ ಬೃಹತ್ ಮೊತ್ತಕ್ಕೆ ಖರಿದಿಸಿದ್ದು ವಿಶೇಷ ವಾಗಿತ್ತು.
2025 ರ ಏಪ್ರಿಲ್ 10 ರಿಂದ 13ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ ಎಂದು ಆಯೋಜಕರಾದ ಜುನೈದ್ ಕೆ.ಎಂ. ಹಾಗೂ ಇಕ್ಬಾಲ್ ಮಾಹಿತಿ ನೀಡಿದರು.
ಈ ಸಂದರ್ಭ ಮೊಹಿಯ್ಯದ್ದೀ ನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್,ನಡಿಕೇರಿಯಂಡ ಜೀವನ್,ಬರೋಡ ಬ್ಯಾಂಕ್ ನ ಅಶ್ರಫ್,ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ವೈಶಾಕ್, ಕರೀಂ, ರಜಾಕ್,ರಾಝಿಕ್,ಸಲಾಂ, ಸಮೀರ್,ಸಿದ್ದಿಕ್,ಕಬೀರ್,ಆಶಿಕ್,ರಹೀಂ,ಷರೀಫ್, ಅಝರುದ್ದಿನ್, ಆಸ್ಕರ್,ಅಜೀಝ್,ರಝಿಕ್ ಎಬಿಆರ್,ನೌಫಲ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ನೌಫಲ್ಎಂ.ಬಿ. ಸ್ವಾಗತಿಸಿ,ನಿರೂಪಿಸಿ,ಸರ್ವರನ್ನು ವಂದಿಸಿದರು.
Kodagu
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
ಮಡಿಕೇರಿ : ಮಡಿಕೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ( ACF) ಆಗಿ ವಾಟೇರಿರ.ಪಿ.ಕಾರ್ಯಪ್ಪ ಅಧಿಕಾರ ಸ್ವೀಕರಿಸಿದರು.
ಮೂಲತ ಕೊಡಗು ಜಿಲ್ಲೆಯ ಮಗ್ಗುಲ ಗ್ರಾಮದವರಾದ ವಾಟೇರಿರ
.ಪಿ.ಕಾರ್ಯಪ್ಪ ನವರು ಈ ಹಿಂದೆ ಕುಂದಾಪುರದಲ್ಲಿ ಕರಾವಳಿ ಮತ್ತು ಸಾಗರ ಕೋಶ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಸೇವೆಯಲ್ಲಿದ್ದು ಈಗ ತಾಯ್ನಾಡಿನಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇವರ ಕುಟುಂಬ ಮಡಿಕೇರಿ ನಗರದ ನಿವಾಸಿಗಳಾಗಿದ್ದಾರೆ.
-
Mysore23 hours ago
ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
-
Education23 hours ago
Free Coaching : ಮಾಸಿಕ 5,000ರೂ. ಜೊತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಸರ್ಕಾರದಿಂದ ಉಚಿತ ತರಬೇತಿ
-
Cinema24 hours ago
ಬಿಗ್ಬಾಸ್ ಸೀಸನ್ 11: ಮೀಸಲಾತಿ ಮೂಲಕ ಹನುಮಂತು ಫೈನಲ್ಸ್ ತಲುಪಿದ್ದಾರೆ ಎಂದ ನಟಿ ಹಂಸ
-
Mysore8 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Kodagu9 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Kodagu9 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Kodagu6 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-
Mysore5 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ