Connect with us

Chamarajanagar

ಯಳಂದೂರು – ಉದ್ಯೋಗ ಮೇಳ ಕಾರ್ಯಕ್ರಮ

Published

on

ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   ಉದ್ಯೋಗ ಕೋಶ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ ಇಂದು ಆಯೋಜಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನಲ್ಲಿ ಈ ಹಿಂದೆ ವ್ಯಾಸಂಗ ಮಾಡಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಯೋ ಕಂಪನಿಯ ಕೊಳ್ಳೇಗಾಲ ಮತ್ತು ಚಾಮರಾಜನಗರ ವಿಭಾಗದ ನಿರ್ವಾಹಕರಾದ ಶ್ರೀ ಸೈಯದ್ ಅವರು ಮತ್ತು ಅವರ ಸಹಪಾಠಿಗಳೊಡನೆ ಕಾಲೇಜಿಗೆ ಆಗಮಿಸಿ ಸಂದರ್ಶನಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಮೊದಲು ಮಾರ್ಗದರ್ಶನ ನೀಡಿ ಆನಂತರ ಒಬ್ಬೊಬ್ಬರಾಗಿ ಸಂದರ್ಶನ ನಡೆಸಲಾಯಿತು
ಸಂದರ್ಶನದಲ್ಲಿ ವಿದ್ಯಾರ್ಥಿಗಳು ಮಾತನಾಡುತ್ತಾ ನಮ್ಮಂತಹ ಗ್ರಾಮೀಣ ಭಾಗದ ಕಾಲೇಜಿಗೂ ಜಿಯೋ ಅಂತ ಕಂಪನಿ ಅವಕಾಶ ನೀಡುತ್ತಿರುವುದು ನಮ್ಮ ಖುಷಿಗೆ ಕಾರಣವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಉದ್ಯೋಗ ಕೋಶದ ಸಂಚಾಲಕರಾದ ಕುಮಾರಿ ದಾಕ್ಷಾಯಿಣಿಯವರು ಮಾತನಾಡುತ್ತಾ ಕಾಲೇಜಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾಂಶುಪಾಲರ ಪ್ರಯತ್ನದಿಂದ ಇಂದು ನಮ್ಮ ಕಾಲೇಜಿನಲ್ಲಿ ಬದಲಾವಣೆಯ ಯುಗ ಆರಂಭವಾಗಿದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಉದ್ಯೋಗ ಕೋಶವನ್ನು ತೆರೆಯಲಾಗಿದ್ದು ಆ ನಿಮಿತ್ತ ಇಂದು ನಮ್ಮ ಕಾಲೇಜಿನ ಪ್ರಾಂಶುಪಾಲರ ಸಹಕಾರ ದೊಂದಿಗೆ ಜಿಯೋ ಕಂಪನಿಯ ಸಂಯುಕ್ತ ಆಶ್ರಯದಲ್ಲಿ ಆಶ್ರಯದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿರುವುದು ನಮಗೆಲ್ಲ ಸಂತಸವನ್ನು ತಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಕಾಲೇಜಿನ ಪ್ರಾಂಶುಪಾಲರಾದ ವಿಜಯ ಅವರು ಮಾತನಾಡುತ್ತಾ ಇದು ಮೊದಲ ಪ್ರಯತ್ನವಾಗಿದ್ದು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿ ಯಶಸ್ಸನ್ನು ಪಡೆಯಬೇಕೆಂಬುದು ನಮ್ಮ ಉದ್ದೇಶ ಒಂದು ವೇಳೆ ಆಯ್ಕೆ ಆಗದಿದ್ದರೂ ಇದು ಮೊದಲ ಪ್ರಯತ್ನವಾದ ಕಾರಣ ಮತ್ತಷ್ಟು ನಿಮ್ಮನ್ನು ಸಿದ್ಧಗೊಳಿಸಿ ಉದ್ಯೋಗಕ್ಕೆ ನಿಮ್ಮನ್ನು ಸಜ್ಜುಗೊಳಿಸುವತ್ತ ನಮ್ಮ ಕಾಲೇಜು ನಿರಂತರವಾಗಿ ಪ್ರಯತ್ನಿಸುತ್ತದೆ ಎಂಬ ಭರವಸೆಯ ಮಾತುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಯಾವುದೇ ಒಂದು ಯಶಸ್ಸು ಅಂಕವನ್ನು ನೋಡಿ ಗಳಿಸುವುದಲ್ಲ ಅದಕ್ಕೆ ನಿರಂತರ ಪರಿಶ್ರಮದ ಅಗತ್ಯವಿದೆ ಮೊದಲ ಪ್ರಯತ್ನದಲ್ಲಿ ಸೋಲಾಯಿತು ಎಂಬ ಕಾರಣಕ್ಕೆ ಮತ್ತೆ ಪ್ರಯತ್ನಿಸಿದಿರುವುದು ಮೂರ್ಖತನವಾಗುತ್ತದೆ ಎಂಬ ಮಾತುಗಳನ್ನು ಹೇಳುತ್ತಲೇ ಪ್ರತಿ ಎರಡು ತಿಂಗಳಿಗೊಮ್ಮೆ ಇಂಥ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗುತ್ತದೆ ತಾವೆಲ್ಲರೂ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವತ್ತ ಗಮನಹರಿಸಬೇಕು ಅಲ್ಲದೇ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕೂಡ ಈ ಮಾಹಿತಿ ಲಭ್ಯವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು ಗ್ರಾಮೀಣ ಭಾಗದ ಇಂತ ಕಾಲೇಜಿಗೆ ನಮ್ಮ ಕೋರಿಕೆ ಮೇರೆಗೆ ಆಗಮಿಸಿದ ಜಿಯೋ ಕಂಪನಿಯ ನಿರ್ವಾಹಕರಾದ ಶ್ರೀ ಸಯ್ಯದ್ ಅವರನ್ನು ಅಭಿನಂದಿಸಿದ ಪ್ರಾಂಶುಪಾಲರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಮೇಳವನ್ನು ತಮ್ಮ ಕಂಪನಿಯ ಕಡೆಯಿಂದ ಸಂಘಟಿಸಬೇಕೆಂಬ ಕೋರಿಕೆಯನ್ನು ತಿಳಿಸಿದರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಯೋ ಕಂಪನಿಯವರು ಪ್ರತಿ ಎರಡು ತಿಂಗಳಿಗೊಮ್ಮೆ ಈ ತರದ ಪ್ರಯತ್ನವನ್ನು ತಮ್ಮ ಕಾಲೇಜಿನಲ್ಲಿ ನಾವು ನಿರಂತರವಾಗಿ ಹಮ್ಮಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದರು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಹಾಂತೇಶ್ ಹಾಗೂ ಎಲ್ಲಾ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಚೈತನ್ಯವನ್ನು ತುಂಬಿದರು ಕಾಲೇಜಿನ ಗ್ರಂಥಾಲಯದ ಮುಖ್ಯಸ್ಥರಾದ ಅರುಣ್ ರವರು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಗ್ರಂಥಾಲಯ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಡುತ್ತದೆ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದೇವೆ ತಾವು ನಿರಂತರವಾಗಿ ಗ್ರಂಥಾಲಯವನ್ನು ಬಳಸಿಕೊಂಡು ಇಂಥ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೂಲಕ ಯಶಸ್ಸನ್ನು ಪಡೆಯಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು

Continue Reading
Click to comment

Leave a Reply

Your email address will not be published. Required fields are marked *

Chamarajanagar

ಹನೂರು ಪಟ್ಟಣದ ವಾಸಿ ದರ್ಶನ್ ರವರ ಮೆದುಳು ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ

Published

on

ಹನೂರು : ಪಟ್ಟಣದ ವಾಸಿ ದರ್ಶನ್ ರವರ ಮೆದುಳು ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹನೂರು ಪಟ್ಟಣದ ನಿವಾಸಿಗಳಾದ ಶಶಿ ಮತ್ತು ಸುಶೀಲಾ ದಂಪತಿ ಪುತ್ರ ದರ್ಶನ್ ರಸ್ತೆ ಅಪಘಾತವಾದ ಹಿನ್ನಲೆ
ಮೈಸೂರಿನ ಖಾಸಗಿ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿ ಆಗದೇ ಸಾವನ್ನಪ್ಪಿದರು ಎನ್ನಲಾಗಿದೆ ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಮೂಲಕ ದರ್ಶನ್ ತನ್ನ ಸಾವಿನಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಮೈಸೂರಿನ ಅಪೋಲೋ ಆಸ್ಪತ್ರೆಗೆ ದರ್ಶನ್ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ ನಾಶಗಳು, ಪಿತ್ತಕೋಶ(ಲಿವರ್‌), ಮೂತ್ರಪಿಂಡ(ಕಿಡ್ನಿ), ಕಣ್ಣು, ದಾನ ಮಾಡಿದ್ದಾರೆ.

Continue Reading

Chamarajanagar

ಯಳಂದೂರುಇಂದು ಕಾಲೇಜಿನ ಸಭಾಂಗಣದಲ್ಲಿ ಸಂತ ಕವಿಕನಕದಾಸರ ಜಯಂತಿ ಕಾರ್ಯಕ್ರಮ

Published

on

ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಳಂದೂರುಇಂದು ಕಾಲೇಜಿನ ಸಭಾಂಗಣದಲ್ಲಿ ಸಂತ ಕವಿಕನಕದಾಸರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಅವರು ಅಧ್ಯಕ್ಷತೆ ವಹಿಸಿದ್ದರು ಇಂದಿನ ಕಾರ್ಯಕ್ರಮವನ್ನು ಕುರಿತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಮಹಂತೇಶ್ ಅವರು ಕನಕದಾಸರ ಜೀವನ ಚರಿತ್ರೆ ಅವರ ಸಾಹಿತ್ಯ ಸೇವೆ ಮತ್ತು ಭಾರತೀಯ ಸಂತ ಪರಂಪರೆಯಲ್ಲಿ ಕನಕದಾಸರ ಸ್ಥಾನ ಶ್ರೇಷ್ಠವಾದದ್ದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಅಲ್ಲದೆ ತಿಮ್ಮಪ್ಪನಾಯಕನಾಗಿದ್ದ ಕನಕದಾಸರು ಕನಕ ನಾಯಕರ ಬಗ್ಗೆ ಆನಂತ್ರದ ಅವರ ಜೀವನ ಮತ್ತು ಅವರ ಸಾಧನೆಗಳನ್ನು ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದ ಅವರು


ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಪುರಂದರದಾಸರಿಗೆ ಯಾವ ಮಟ್ಟದ ಶ್ರೇಷ್ಠತೆಯು ಅಷ್ಟೇ ಶ್ರೇಷ್ಠತೆಯು ಕನಕದಾಸರಿಗೂ ಲಭ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ನುಡಿದರು ಸಾಮಾಜಿಕವಾಗಿ ತನ್ನನ್ನೇ ಸಮಾಜಕ್ಕೆ ಒಟ್ಟಿಕೊಂಡ ಕನಕದಾಸರು ಸಾಕಷ್ಟು ತರತಮಗಳಿಗೆ ಒಳಗಾದರೂ ಎದೆಗೊಂದದೆ ವ್ಯಾಸರಾಯರ ಶ್ರೇಷ್ಠ ಶಿಷ್ಯ ಪರಂಪರೆಯಲ್ಲಿ ಅಗ್ರಗಣ್ಯರಾಗಿ ರೂಪಗೊಂಡದ್ದು ನಿಜಕ್ಕೂ ಪ್ರಾಚಸ್ಮರಣೀಯ ಎಂದು ತಿಳಿಸಿದರು
ನಳಚರಿತ್ರೆ ಮೋಹನತರಂಗಿಣಿ ರಾಮಧಾನ್ಯ ಚರಿತೆಕೀರ್ತನೆಗಳು ಊಹಾಭೋಗಗಳು ಮುಂಡಿಗೆಗಳು ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಮಾತ್ರವಲ್ಲ ಇಡೀ ದಾಸ ಸಂತತಿಯಲ್ಲಿ ಅಗ್ರಗಣ್ಯ ದಾಸವರೇಣ್ಯರೆನಿಸಿ ಕೀರ್ತಿಗೆ ಭಾಜನರಾದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಕನಕದಾಸರು ಭಾರತೀಯ ಸಂತ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟವಾದ ದಾಸರಾಗಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಆತ್ಮ ಯಾವ ಕುಲ ಜೀವ ಯಾವ ಕುಲ’ ಜಲವೇ ಸಕಲ ಕುಲಕ್ಕೆ ತಾಯಲ್ಲವೇ
ಜಲದ ನೆಲೆಯ ನೀನಾದರೂ ಬಲ್ಲಿರಾ ‘
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ‘
ಇತ್ಯಾದಿ ಕೀರ್ತನೆಗಳಲ್ಲದೆ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಅವರ ಸಲ್ಲಿಸಿದ ಸೇವೆ ಅನನ್ಯವಾಗುವುದು ಎಂದು ತಿಳಿಸಿದರು ಸಾಮಾನ್ಯ ಪಾಳೇಗಾರನಾಗಿದ್ದನಾಯಕನಾಗಿ ಅನಂತರ ಕನಕದಾಸರಾಗಿ ಪರಿವರ್ತನೆ ಹೊಂದಿದ್ದೆ ಒಂದು ವಿಸ್ಮಯದ ಸಂಗತಿ ಎಂಬ ಅಂಶವನ್ನು ತಿಳಿಸಿದರು.ಎಲ್ಲ ಕಾಲಕ್ಕೂ ಸಲ್ಲಬಹುದಾದ ಅವರ ರಾಮಧಾನ್ಯ ಚರಿತೆ ಅಂದಿನ ಕಾಲದ ಅದ್ಭುತ ಕಲಾಕೃತಿಗಳಲ್ಲಿ ಒಂದು ಎಂದು ತಿಳಿಸಿದರು
ರಾಗಿ ಮತ್ತು ಭತ್ತವನ್ನು ಕಾವ್ಯದ ವಸ್ತುವನ್ನಾಗಿಸಿ ಅದರ ಹಿನ್ನೆಲೆಯಲ್ಲಿ ಸಮಾಜದಲ್ಲಿದ್ದ ಮೇಲು-ಕೀಳು ತರತಮ ಭಾವಗಳಿಗೆ ಆ ಕೃತಿಯ ಮೂಲಕ ಅವರು ಕೊಟ್ಟ ಸಂದೇಶ ಅತ್ಯಂತ ವಿಶೇಷವಾದದ್ದು ಎಂಬ ಅಂಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಎಲ್ಲರೂ ಎಲ್ಲ ಕಾಲಕ್ಕೂ ಓದಲೇಬೇಕಾದ ಅವರ ಸಾಹಿತ್ಯದ ಅನನ್ಯತೆಯನ್ನು ನಾವು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳುವ ಮೂಲಕ ಕನಕ ಜಯಂತಿಯ ಶುಭಾಶಯಗಳು
ಕೋರಿದರು.ಐಕ್ಯೂ ಎಸಿ ಸಂಚಾಲಕರಾದ ವಿಕಾಸ್ ರವರು ಕಾರ್ಯಕ್ರಮವನ್ನು
ಅಚ್ಚುಕಟ್ಟಾಗಿ ನಿರೂಪಿಸಿದರು ಮತ್ತು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ
ತೆರೆ ಎಳೆಯಲಾಯಿತು
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ವೇತಾ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಾಕ್ಷಾಯಿಣಿ ಕನ್ನಡ ವಿಭಾಗದ ಮುಖ್ಯಸ್ಥರಾದ
ಶ್ರೀಮತಿ ಪದ್ಮಹಾಗೂ ಅಧ್ಯಾಪಕರಾದ ಪುಷ್ಪ ಕುಮಾರ್ ಕಚೇರಿ ಸಿಬ್ಬಂದಿಗಳು ಎಲ್ಲರೂ ಹಾಜರಿದ್ದರು

Continue Reading

Chamarajanagar

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿಗಳನ್ನು ಸದುಪಯೋಗಪಡಿಸಿಕೊಳ್ಳಿ – ನೋಡಲ್ ಅಧಿಕಾರಿ ಮಲ್ಲಿಕಾರ್ಜುನ

Published

on

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿಗಳ ಸದುಪಯೋಗಪಡಿಸಿಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಯನ್ನು ನಿರ್ಮಾಣ ಮಾಡಬೇಕು ಎಂದು ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.

ಅವರು ಹೊನ್ನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು 15ನೇ ಹಣಕಾಸು ಮತ್ತು 2024- 25 ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ಮಾಹಿತಿಗಳನ್ನು ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ನರೇಗಾ ಸಂಯೋಜಕ ನಾರಾಯಣ ಮಾತನಾಡಿ ಗ್ರಾಮ ಪಂಚಾಯತಿ ವತಿಯಿಂದ ಒಟ್ಟು 233 ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 216 ತೋಟಗಾರಿಕೆ ಇಲಾಖೆ ವತಿಯಿಂದ ಆರು ರೇಷ್ಮೆ ಇಲಾಖೆ ವತಿಯಿಂದ ಒಂದು ಪಿ ಆರ್ ಐ ಡಿ ಇಲಾಖೆ ವತಿಯಿಂದ ಆರು ಕೃಷಿ ಇಲಾಖೆಯಿಂದ 2 ಅರಣ್ಯ ಇಲಾಖೆಯಿಂದ 2 ಕಾಮಗಾರಿಗಳನ್ನು ಮಾಡಲಾಗಿದೆ. ಇದಕ್ಕಾಗಿ ಒಟ್ಟು ಕೂಲಿ ಮೊತ್ತ
78,94,854 ರೂಪಾಯಿಗಳು , ಸಾಮಗ್ರಿ ಮೊತ್ತ 27, 29,412 ರೂಪಾಯಿಗಳು ಸೇರಿದಂತೆ ಒಟ್ಟು 1,06,24,266 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು. ಇದಕ್ಕಾಗಿ 25549 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.

ಕಡತ ನೀಡದೆ ಇರುವುದು, ಅಧಿಕೃತ ವೋಚರ್ಸ್ ಒದಗಿಸದೆ ಇರುವುದು ,ಮಾಸ್ಟರ್ ರೋಲ್ ಇಲ್ಲದಿರುವುದು ,ರಾಜಧನ ಜಮೆ ಮಾಡದೆ ಇರುವುದು ಮತ್ತು ನಾಮಫಲಕ ಇಲ್ಲದಿರುವುದು ಸೇರಿದಂತೆ ಒಟ್ಟು 38 ಪ್ರಕರಣಗಳಿಗೆ ವಸುಲಾತಿ ಮತ್ತು 127 ಪ್ರಕರಣಗಳಿಗೆ ಆಕ್ಷೇಪಣೆ ಸೇರಿದಂತೆ ಒಟ್ಟು 37,43,825 ರೂಪಾಯಿಗಳನ್ನು ಆಕ್ಷೇಪಣ ಮೊತ್ತದಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ರೂಪೇಶ್, ಉಪಾಧ್ಯಕ್ಷ ಎಚ್ ಬಿ ನಾಗರಾಜು, ಸದಸ್ಯರಾದ ರಾಧಾ, ಇಂದಿರಾ, ಆರ್ ಪುಟ್ಟ ಬಸವಯ್ಯ, ನೇತ್ರ, ಭಾಗ್ಯಮ್ಮ, ಕುಮಾರಸ್ವಾಮಿ, ಪಿಡಿಒ ನಿರಂಜನ್, ಸಾಮಾಜಿಕ ಅರಣ್ಯ ಇಲಾಖೆಯ ಸಂಪತ್, ರೇಷ್ಮೆ ಇಲಾಖೆಯ ಸತ್ಯಪಾಲ್, ತೋಟಗಾರಿಕೆ ಇಲಾಖೆಯ ಶಿವರಂಜಿನಿ, ಗ್ರಾಪಂ ಸಿಬ್ಬಂದಿ ಮಹಾದೇವಸ್ವಾಮಿ ,ಮಹದೇವಮ್ಮ ಸೇರಿದಂತೆ ಆಶಾ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು

ವರದಿ : ಸೈಯದ್ ಮುಷರಫ್

Continue Reading

Trending