Connect with us

Sports

IND vs AUS: ಕೊನೆ ಪಂದ್ಯ ಸೋತ್ರು ಸಹ ಸರಣಿ ಗೆದ್ದಿರುವ ಭಾರತ !

Published

on

IND vs AUS: ಕೊನೆ ಪಂದ್ಯ ಸೋತ್ರು ಸಹ ಸರಣಿ ಗೆದ್ದಿರುವ ಭಾರತ !

ಭಾರತ ಮತ್ತು ಆಸ್ಟ್ರೇಲಿಯಾ : ರಾಜ್ ಕೌಟ್ ನಲ್ಲಿ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಬುದುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 66 ರನ್ನುಗಳ ಮೂಲಕ ಗೆಲುವು ಸಾಧಿಸಿದೆ.

ಭಾರತದ ವಿರುದ್ಧ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ

Glen Maxwell ಮಾರಕ ಬೌಲಿಂಗ್ ದಾಳಿಗೆ ನಲುಗಿ ಹೋದ ಭಾರತದ ತಂಡ
ಕೊನೆ ಪಂದ್ಯದಲ್ಲಿ ಸೋತರು ಸರಣಿ ಗೆಲುವು ಸಾಧಿಸಿರುವ ನಮ್ಮ ಟೀಮ್ ಇಂಡಿಯಾ

ದೆಹಲಿ : ಆಸ್ಟ್ರೇಲಿಯಾದ ವಿರುದ್ಧ ಮೂರನೇ ಮತ್ತು ಕೊನೆ ಪಂದ್ಯದಲ್ಲಿ ಸೋತಿದ್ದರು ಭಾರತ ತಂಡವು ಸರಣಿ ಗೆಲುವನ್ನು ಸಾಧಿಸಿದೆ

ಟಾಸ್ಕ್ ಗೆದ್ದಿರುವ ಆಸ್ಟ್ರೇಲಿಯಾದ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಾಷ್ಟಕ್ಕೆ ಅವರು 352 ರನ್ನುಗಳ ಬೃಹತ್ ಬಾರಿಸಿದ್ದಾರೆ.
ಆಶಿಶ್ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ 56 ರನ್ ಮಿಚಲ್ ಮಾರ್ಚ್ 96 ರನ್ ಸಿಡಿಲು ಅಬ್ಬರದ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದ್ದಾರೆ.
ನಂತರ ಬಂದಂತಹ ಸ್ಟೀವ್ ಸ್ಮಿತ್ 74 ರನ್ ಹಾಗೂ ಮರಣ 72 ರನ್ನುಗಳ ಸಹ ಭರ್ಜರಿಯಾಗಿ ಅರ್ಧ ಶತಕ ಬಾರಿಸಿದ್ದಾರೆ.
ಈ ನಾಲ್ಕು ಜನರು ಸ್ಪೋಟಕ ಆಟ ಆಡಿದ ಪರಿಣಾಮ ಆಸ್ಟ್ರೇಲಿಯಾ 350 ರನ್ ಗಳ ಗಡಿಯನ್ನು ದಾಟಿ ಭಾರತಕ್ಕೆ ಅತಿ ದೊಡ್ಡ ಟಾರ್ಗೆಟ್ ನೀಡಲು ಸಾಧ್ಯ ಆಯಿತು.
ಭಾರತದ ಪರವಾಗಿ ಬೌಲಿಂಗನಲ್ಲಿ ಜಸ್ಪೃತ್ ಭೂಮ್ರ ಮೂರು ಕುಲದೀಪ ಯಾದವ ಮೂರು ಪ್ರಸಿದ್ ಕೃಷ್ಣ ಒಂದೊಂದು ವಿಕೆಟ್ ಕಬಳಿಸಿದ್ದಾರೆ

ಚೇಸಿಂಗ್‍ನಲ್ಲಿ ಎಡವಿದ ನಮ್ಮ ಭಾರತ..!

ಆಸ್ಟ್ರೇಲಿಯಾದ ಅತಿದೊಡ್ಡ ಟಾರ್ಗೆಟನ್ನ ಬೆನ್ನತ್ತಿದ ನಮ್ಮ ಭಾರತ ತಂಡವು ಆರಂಭದಲ್ಲಿ ಉತ್ತಮವಾಗಿ ಪ್ರಾರಂಭಿಸಿ ಚೇಜ್ ಮಾಡಿತು. ನಾಯಕ ರೋಹಿತ್ ಶರ್ಮಾ ರವರು 81 ಭರ್ಜರಿ ಮುಕ್ಕಾಲುಶತಕ ಬಾರಿಸಿದ್ದಾರೆ.
ಹಾಗೂ ನಮ್ಮ ವಿರಾಟ್ ಕೊಹ್ಲಿ ಅರ್ಧಶತಕ 56 ಶ್ರೇಯಸ್ ಅಯ್ಯರ್ 48 ಹಾಗೂ ರವೀಂದ್ರ ಜಡೇಜಾ 35 ಮತ್ತು ಕೆ ಎಲ್ ರಾಹುಲ್ 26 ರನ್ನುಗಳನ್ನು ಗಳಿಸಿದ್ದಾರೆ.
ಆಶಿಶ್ ಭಾವನಗಳ ದಾಳಿಗೆ ನನಗಿ ಹೋದ ಭಾರತ ಅಂತಿಮವಾಗಿ 49 ಪಾಯಿಂಟ್ ನಾಲ್ಕು ಓವರ್ ಗಳಲ್ಲಿ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 286 ರನ್ನುಗಳನ್ನ ಗಳಿಸಿದೆ.

ಆಸ್ಟ್ರೇಲಿಯಾದ ಪರವಾಗಿ ಅತ್ಯುತ್ತಮ ಭಾವನೆ ಪ್ರದರ್ಶಿಸಿರುವ ಮ್ಯಾಕ್ಸ್ವೆಲ್ ನಾಲ್ಕು ವಿಕೆಟ್ ಕಬಳಿಸಿ ಮಿಂಚುತ್ತಿದ್ದಾರೆ.
ಮಿಚೆಲ್ ಸ್ಟಾರ್ ಕ್ಯಾಮೆರಾ.ತನ್ವೀರ್ ಸಂಘ , ಪ್ಯಾಟ್ ಕಮ್ಮಿನ್ಸ್, ಕ್ಯಾಮರೂನ್ ಗ್ರೀನ್ ಮಿಚೆಲ್ ಸ್ಟಾರ್ಕ್ & ಜೋಶ್ ಹ್ಯಾಜಲ್ವುಡ್, ರವರು ತಲಾ ಒಂದು ವಿಕೆಟ್ ಪಡೆದಿದ್ದಾರೆ. ಅಂತಿಮ ಏಕದಿನ ಪಂದ್ಯ ಇಲ್ಲಿ ಸೋತರು ಟೀಮ್ ಇಂಡಿಯಾ ಆಸ್ಟ್ರೇಲಿಯಾದ ವಿರುದ್ಧ ಸರಣಿಯನ್ನ ಗೆದ್ದುಕೊಂಡಿರುತ್ತದೆ ಸಿಕ್ಕಿತ್ತು. ಹಾಗಾಗಿ ಭಾರತ 2-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿರುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Sports

RCB ಅಭಿಮಾನಿಗಳ ಗಮನಕ್ಕೆ ಇಂದೇ ನಡೆಯಲಿದೆ ವಿಜಯಯಾತ್ರೆ

Published

on

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ ನಡೆಸಲಿದೆ. ಅಹಮದಾಬಾದ್​ನಿಂದ ಆರ್​ಸಿಬಿ ತಂಡವು ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ 1.30 ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಆ ಬಳಿಕ ವಿಜಯಯಾತ್ರೆಗೆ ಸಿದ್ಧತೆಯನ್ನು ನಡೆಸಲಿದೆ.

ಸಂಜೆ 3.30 ಕ್ಕೆ ಬೆಂಗಳೂರಿನ ವಿಧಾನಸೌಧದಿಂದ ಆರ್​​ಸಿಬಿ ತಂಡದ ವಿಜಯಯಾತ್ರೆ ಆರಂಭವಾಗಲಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಈ ಪರೇಡ್ ಮುಂದುವರೆಯಲಿದೆ.

ಇನ್ನು ಈ ವಿಜಯಯಾತ್ರೆ ವೇಳೆ 2024 ರಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್​ಸಿಬಿ ಮಹಿಳಾ ತಂಡವನ್ನು ಸಹ ಕರೆತರುವ ಸಾಧ್ಯತೆಯಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎರಡು ಟ್ರೋಫಿಗಳೊಂದಿಗೆ ವಿಜಯಯಾತ್ರೆ ನಡೆಸುವ ಬಗ್ಗೆ ಚಿಂತಿಸಿದೆ.

ಇದಾಗ್ಯೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ವಿಜಯೋತ್ಸವ ನಡೆಯಲಿದೆಯಾ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಇಂದು ಸಂಜೆ 3.30 ರಿಂದ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಜಯಯಾತ್ರೆ ನಡೆಸುವುದಾಗಿ ಮಾಹಿತಿ ಆರ್​ಸಿಬಿ ಫ್ರಾಂಚೈಸಿ ಹೇಳಿಕೊಂಡಿದೆ. ಇದಾದ ಬಳಿಕ ಆರ್​ಸಿಬಿ ತಂಡವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಿದರೂ ಅಚ್ಚರಿಪಡಬೇಕಿಲ್ಲ.

Continue Reading

National - International

ಕೊನೆಗೂ ಈ ಸಲ ಕಪ್‌ ನಮ್ದೇ : ಚೊಚ್ಚಲ ಕಪ್‌ ಆರ್‌ಸಿಬಿ ಮುಡಿಗೆ

Published

on

ಅಹಮದಾಬಾದ್‌: 2025-26ನೇ ಆವೃತ್ತಿಯ ಐಪಿಎಲ್‌ನ ಫೈನಾಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಸೋಲಿಸಿ ಆರು ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದು, ಕೊನೆಗೂ ಈ ಸಲ ಕಪ್‌ ನಮ್ದು ಎಂದು ಚೊಚ್ಚಲ ಕಪ್‌ ಅನ್ನು ತನ್ನ ಮುಡಿಗೇರಿಸಿಕೊಂಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ ಇಂದು ರಾತ್ರಿ 7.30 ಗಂಟೆಗೆ ಆರ್‌ಸಿಬಿ v/s ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ತಂಡವೂ 17 ವರ್ಷಗಳ ವನವಾಸವನ್ನು ಅಂತ್ಯಗೊಳಿಸಿ 18ನೇ ವರ್ಷಕ್ಕೆ ಈ ಸಲ ನಮ್ದೇ ಎಂದು ಹೇಳಿ ರಜತ ಮಹೋತ್ಸವವನ್ನು ಆಚರಿಸಿದೆ.

ಇಂದು ನಡೆದ ಪಂದ್ಯದಲ್ಲಿ ಪಂಜಾಬ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡವೂ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಗುರಿಯಾಗಿ ನೀಡಿತ್ತು. ಇದನ್ನು ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳನ್ನು ಗಳಿಸಿದರು. ಹೀಗಾಗಿ ಆರ್‌ಸಿಬಿ ತಂಡವೂ 6 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ 18 ವರ್ಷಗಳ ನಂತರ ಇತಿಹಾಸ ಸೃಷ್ಠಿಸಿದೆ.

 

ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ.   ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ

Continue Reading

Sports

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕನ್ನಡದ ಮೂವರು ಆಟಗಾರರಿಗೆ ಸ್ಥಾನ

Published

on

ಮುಂಬೈ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗಾಗಿ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಕನ್ನಡದ ಮೂವರು ಆಟಗಾರರಿಗೆ ಸ್ಥಾನ ದೊರೆತಿದೆ.

ಬಿಸಿಸಿಐ ಸಂಸ್ಥೆಯೂ ಅಧಿಕೃತವಾಗಿ ಟೆಸ್ಟ್‌ ತಂಡದ 18 ಆಟಗಾರರನ್ನು ಘೋಷಿಸಿದೆ. ಅದರಲ್ಲಿ ಟೆಸ್ಟ್‌ ತಂಡದ ನಾಯಕರಾಗಿ ಶುಭ್‌ಮನ್‌ ಗಿಲ್‌, ಉಪ ನಾಯಕರಾಗಿ ರಿಷಬ್‌ ಪಂತ್‌ ನೇಮಕವಾಗಿದ್ದಾರೆ. ಅಂತೆಯೇ ಕನ್ನಡಿಗರಾದ ಕೆ.ಎಲ್‌.ರಾಹುಲ್‌, ಪ್ರಸಿದ್‌ ಕೃಷ್ಣ ಹಾಗೂ ಕರುಣ್‌ ನಾಯರ್‌ಗೆ ಸ್ಥಾನ ದೊರೆತಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ತಂಡದ ಆಟಗಾರರು

ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್ ಹಾಗೂ ಅರ್ಷದೀಪ್ ಸಿಂಗ್ ಅವರು ಟೀಂ ಇಂಡಿಯಾ ಪರ ಆಡಲಿದ್ದಾರೆ.

ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ

ಮೊದಲ ಟೆಸ್ಟ್: 2025ರ ಜೂನ್‌ 20-24
2ನೇ ಟೆಸ್ಟ್: 2025ರ ಜುಲೈ 2-6
3ನೇ ಟೆಸ್ಟ್: 2025ರ ಜುಲೈ 10-14
4ನೇ ಟೆಸ್ಟ್: 2025ರ ಜುಲೈ 23-27
5ನೇ ಟೆಸ್ಟ್: 2025ರ ಜುಲೈ 31-ಆಗಸ್ಟ್‌ 4

Continue Reading

Trending

error: Content is protected !!