Sports
IND vs AUS: ಕೊನೆ ಪಂದ್ಯ ಸೋತ್ರು ಸಹ ಸರಣಿ ಗೆದ್ದಿರುವ ಭಾರತ !
IND vs AUS: ಕೊನೆ ಪಂದ್ಯ ಸೋತ್ರು ಸಹ ಸರಣಿ ಗೆದ್ದಿರುವ ಭಾರತ !
ಭಾರತ ಮತ್ತು ಆಸ್ಟ್ರೇಲಿಯಾ : ರಾಜ್ ಕೌಟ್ ನಲ್ಲಿ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಬುದುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 66 ರನ್ನುಗಳ ಮೂಲಕ ಗೆಲುವು ಸಾಧಿಸಿದೆ.
ಭಾರತದ ವಿರುದ್ಧ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ
Glen Maxwell ಮಾರಕ ಬೌಲಿಂಗ್ ದಾಳಿಗೆ ನಲುಗಿ ಹೋದ ಭಾರತದ ತಂಡ
ಕೊನೆ ಪಂದ್ಯದಲ್ಲಿ ಸೋತರು ಸರಣಿ ಗೆಲುವು ಸಾಧಿಸಿರುವ ನಮ್ಮ ಟೀಮ್ ಇಂಡಿಯಾ
ದೆಹಲಿ : ಆಸ್ಟ್ರೇಲಿಯಾದ ವಿರುದ್ಧ ಮೂರನೇ ಮತ್ತು ಕೊನೆ ಪಂದ್ಯದಲ್ಲಿ ಸೋತಿದ್ದರು ಭಾರತ ತಂಡವು ಸರಣಿ ಗೆಲುವನ್ನು ಸಾಧಿಸಿದೆ
ಟಾಸ್ಕ್ ಗೆದ್ದಿರುವ ಆಸ್ಟ್ರೇಲಿಯಾದ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಾಷ್ಟಕ್ಕೆ ಅವರು 352 ರನ್ನುಗಳ ಬೃಹತ್ ಬಾರಿಸಿದ್ದಾರೆ.
ಆಶಿಶ್ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ 56 ರನ್ ಮಿಚಲ್ ಮಾರ್ಚ್ 96 ರನ್ ಸಿಡಿಲು ಅಬ್ಬರದ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದ್ದಾರೆ.
ನಂತರ ಬಂದಂತಹ ಸ್ಟೀವ್ ಸ್ಮಿತ್ 74 ರನ್ ಹಾಗೂ ಮರಣ 72 ರನ್ನುಗಳ ಸಹ ಭರ್ಜರಿಯಾಗಿ ಅರ್ಧ ಶತಕ ಬಾರಿಸಿದ್ದಾರೆ.
ಈ ನಾಲ್ಕು ಜನರು ಸ್ಪೋಟಕ ಆಟ ಆಡಿದ ಪರಿಣಾಮ ಆಸ್ಟ್ರೇಲಿಯಾ 350 ರನ್ ಗಳ ಗಡಿಯನ್ನು ದಾಟಿ ಭಾರತಕ್ಕೆ ಅತಿ ದೊಡ್ಡ ಟಾರ್ಗೆಟ್ ನೀಡಲು ಸಾಧ್ಯ ಆಯಿತು.
ಭಾರತದ ಪರವಾಗಿ ಬೌಲಿಂಗನಲ್ಲಿ ಜಸ್ಪೃತ್ ಭೂಮ್ರ ಮೂರು ಕುಲದೀಪ ಯಾದವ ಮೂರು ಪ್ರಸಿದ್ ಕೃಷ್ಣ ಒಂದೊಂದು ವಿಕೆಟ್ ಕಬಳಿಸಿದ್ದಾರೆ
ಚೇಸಿಂಗ್ನಲ್ಲಿ ಎಡವಿದ ನಮ್ಮ ಭಾರತ..!
ಆಸ್ಟ್ರೇಲಿಯಾದ ಅತಿದೊಡ್ಡ ಟಾರ್ಗೆಟನ್ನ ಬೆನ್ನತ್ತಿದ ನಮ್ಮ ಭಾರತ ತಂಡವು ಆರಂಭದಲ್ಲಿ ಉತ್ತಮವಾಗಿ ಪ್ರಾರಂಭಿಸಿ ಚೇಜ್ ಮಾಡಿತು. ನಾಯಕ ರೋಹಿತ್ ಶರ್ಮಾ ರವರು 81 ಭರ್ಜರಿ ಮುಕ್ಕಾಲುಶತಕ ಬಾರಿಸಿದ್ದಾರೆ.
ಹಾಗೂ ನಮ್ಮ ವಿರಾಟ್ ಕೊಹ್ಲಿ ಅರ್ಧಶತಕ 56 ಶ್ರೇಯಸ್ ಅಯ್ಯರ್ 48 ಹಾಗೂ ರವೀಂದ್ರ ಜಡೇಜಾ 35 ಮತ್ತು ಕೆ ಎಲ್ ರಾಹುಲ್ 26 ರನ್ನುಗಳನ್ನು ಗಳಿಸಿದ್ದಾರೆ.
ಆಶಿಶ್ ಭಾವನಗಳ ದಾಳಿಗೆ ನನಗಿ ಹೋದ ಭಾರತ ಅಂತಿಮವಾಗಿ 49 ಪಾಯಿಂಟ್ ನಾಲ್ಕು ಓವರ್ ಗಳಲ್ಲಿ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 286 ರನ್ನುಗಳನ್ನ ಗಳಿಸಿದೆ.
ಆಸ್ಟ್ರೇಲಿಯಾದ ಪರವಾಗಿ ಅತ್ಯುತ್ತಮ ಭಾವನೆ ಪ್ರದರ್ಶಿಸಿರುವ ಮ್ಯಾಕ್ಸ್ವೆಲ್ ನಾಲ್ಕು ವಿಕೆಟ್ ಕಬಳಿಸಿ ಮಿಂಚುತ್ತಿದ್ದಾರೆ.
ಮಿಚೆಲ್ ಸ್ಟಾರ್ ಕ್ಯಾಮೆರಾ.ತನ್ವೀರ್ ಸಂಘ , ಪ್ಯಾಟ್ ಕಮ್ಮಿನ್ಸ್, ಕ್ಯಾಮರೂನ್ ಗ್ರೀನ್ ಮಿಚೆಲ್ ಸ್ಟಾರ್ಕ್ & ಜೋಶ್ ಹ್ಯಾಜಲ್ವುಡ್, ರವರು ತಲಾ ಒಂದು ವಿಕೆಟ್ ಪಡೆದಿದ್ದಾರೆ. ಅಂತಿಮ ಏಕದಿನ ಪಂದ್ಯ ಇಲ್ಲಿ ಸೋತರು ಟೀಮ್ ಇಂಡಿಯಾ ಆಸ್ಟ್ರೇಲಿಯಾದ ವಿರುದ್ಧ ಸರಣಿಯನ್ನ ಗೆದ್ದುಕೊಂಡಿರುತ್ತದೆ ಸಿಕ್ಕಿತ್ತು. ಹಾಗಾಗಿ ಭಾರತ 2-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿರುತ್ತದೆ.
Sports
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
ನವದೆಹಲಿ: ಇದೇ ಫೆಬ್ರವರಿ 19 ರಿಂದ ಪಾಕಿಸ್ತಾನ ಆಯೋಜಕತ್ವದಲ್ಲಿ ಪ್ರಾರಂಭವಾಗಲಿರುವ Champions Trophy 2025ಕ್ಕೆ ಅಂತಿಮವಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ.
ಚಾಂಪಿಯನ್ಸ್ ಟ್ರೋಫಿಗೂ ರೋಹಿತ್ ಶರ್ಮಾ ಅವರನ್ನೇ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅಚ್ಚರಿಯಂಬಂತೆ ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಬದಲಿಗೆ ಶುಭ್ಮನ್ ಗಿಲ್ರನ್ನು ನೇಮಕ ಮಾಡಲಾಗಿದೆ.
ರೋಹಿತ್ ಶರ್ಮಾರ ನಂತರ ಏಕದಿನಕ್ಕೆ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಗಿಲ್ ಅವರು ನಾಯಕರಾಗಿ ಹೊರಹೊಮ್ಮಿದ್ದಾರೆ.
ಇದರೊಂದಿಗೆ ಅನುಭವಿ ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ಕೋಕ್ ನೀಡಲಾಗಿದ್ದು, ಅನುಭವಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿದೆ.
ಹೈಬ್ರೀಡ್ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ ಜೊತೆ ಭಾರತ ತಂಡದ ಆಡಲಿದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ರಿಷಬ್ ಪಂತ್ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಜಸ್ಪ್ರಿತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಶಮಿ
Sports
ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೋಟಕ್ ನೇಮಕ
ನವದೆಹಲಿ: ಇದೇ ಜನವರಿ 22 ರಿಂದ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ 5 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಗೆ ಟೀಂ ಇಂಡಿಯಾ ಕೋಚಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು, ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಸೌರಾಷ್ಟ್ರದ ಮಾಜಿ ದಿಗ್ಗಜ ಸಿತಾಂಶು ಕೋಟಕ್ ನೇಮಕವಾಗಿದ್ದಾರೆ.
ಜನವರಿ 18 ರಂದು ಕೊಲ್ಕತ್ತಾದಲ್ಲಿ ವರದಿ ಮಾಡಲಿದ್ದು, ಮೂರು ದಿನಗಳ ಶಿಬಿರದಲ್ಲಿ ಭಾಗವಹಿಸಿದ ಬಳಿಕ ಭಾರತ ತಂಡದವನ್ನು ಅವರು ಸೇರಲಿದ್ದಾರೆ ಎಂದು ವರದಿಯಾಗಿದೆ.
ದೀರ್ಘಕಾಲದ ಭಾರತ ಎ ತಂಡದ ಬ್ಯಾಟಿಂಗ್ ಕೋಚ್ ಆಗಿ ಕೆಲಸ ನಿರ್ವಹಿಸಿರುವ ಇವರು ಲಿಸ್ಟ್ ಎ ಪಂದ್ಯಗಳಲ್ಲಿ 3083 ರನ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 8000 ಕ್ಕೂ ಅಧಿಕ ರನ್ ಗಳಿಸಿದ ಹಿರಿಮೆ ಅವರಿಗಿದೆ.
ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್, ಸಹಾಯಕ ಕೋಚ್ ಆಗಿ, ಅಭಿಷೇಕ್ ನಾಯರ್ ಹಾಗೂ ರಿಯಾನ್ ಟೆನ್ ಡೊಸ್ಚಾಟ್, ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಟಿ. ದಿಲೀಪ್ ಕಾರ್ಯ ನಿರ್ವಹಿಸುತ್ತಿದ್ದಾರೆ.
Sports
IND W vsIRE W ಮೂರನೇ ಏಕದಿನ ಪಂದ್ಯ: ದಾಖಲೆಯ ಗೆಲುವು ದಾಖಲಿಸಿದ ಟೀಂ ಇಂಡಿಯಾ
ರಾಜ್ಕೋಟ್: ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮಹಿಳಾ ತಂಡ ಹಾಗೂ ಐರ್ಲೆಂಡ್ ಮಹಿಳಾ ತಂಡಗಳ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಬರೋಬ್ಬರಿ 304 ರನ್ಗಳ ಅಂತರದಿಂದ ಗೆಲುವು ದಾಖಲಿಸಿದೆ.
ಆ ಮೂಲಕ ಮಹಿಳಾ ಏಕದಿನ ಪಂದ್ಯವೊಂದರಲ್ಲಿ ಅತೀಹೆಚ್ಚು ಅಂತರದಿಂದ ಗೆಲುವು ದಾಖಲಿಸಿದ ತಂಡ ಎಂಬ ವಿಶ್ವದಾಖಲೆಯನ್ನು ಭಾರತ ಮಹಿಳಾ ತಂಡ ತನ್ನದಾಗಿಸಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಗಳಿಸಿತು. ಈ ಬೃಹತ್ ಸವಾಲಿನ ಮೊತ್ತ ಬೆನ್ನತ್ತಿದ ಐರ್ಲೆಂಡ್ ತಂಡ 31.4 ಓವರ್ಗಳಲ್ಲಿ ಆಲ್ಔಟ್ ಆಗುವ ಮೂಲಕ ಕೇವಲ 131ರನ್ ಗಳಿಸಿ 304 ರನ್ಗಳ ಅಂತರದಿಂದ ಗೆದ್ದು ಬೀಗಿತು.
ಟೀಂ ಇಂಡಿಯಾ ಪರ ಪ್ರತೀಕಾ ರಾವಲ್ 129 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 154 ರನ್ ಗಳಿಸಿದರೇ, ಇತ್ತ ನಾಯಕಿ ಸ್ಮೃತಿ ಮಂದನಾ 80 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಹಿತ 135 ರನ್ ಬಾರಿಸಿ ತಂಡದ ಮೊತ್ತ ನಾಲ್ಕು ನೂರು ರನ್ ಗಡಿ ತಲುಪಲು ಸಹಕರಿಸಿದರು.
ಇತ್ತ ಈ ಬೃಹತ್ ಮೊತ್ತ ಬೆನ್ನತ್ತಿದ ಐರ್ಲೆಂಡ್ಗೆ ದೀಪ್ತಿ ಶರ್ಮಾ ಹಾಗೂ ತನುಜಾ ಕಾಡಿದರು. ಸಾರಾ ಫ್ರೋಬ್ಸ್ 41(44), ರ್ಲಾ ಪ್ರೆಂಡರ್ಗಾಸ್ಟ್ 36(43) ಹೊರತುಪಡಿಸಿ ಬೇರಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ. ಭಾರತ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಐರ್ಲೆಂಡ್ ಹೀನಾಯ ಸೋಲು ಕಂಡಿತು.
ಭಾರತ ತಂಡದ ಪರವಾಗಿ ದೀಪ್ತಿ ಶರ್ಮಾ ಮೂರು, ತನುಜಾ ಎರಡು ವಿಕೆಟ್ ಪಡೆದು ಮಿಂಚಿದರು.
ಪಂದ್ಯ ಶ್ರೇಷ್ಠ: ಪ್ರತೀಕಾ ರಾವಲ್
ಸರಣಿ ಶ್ರೇಷ್ಠ: ಪ್ರತೀಕಾ ರಾವಲ್
-
Kodagu21 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu20 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech17 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports22 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International24 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Mysore21 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore20 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು
-
Hassan23 hours ago
ನ್ಯಾಯಾಲಯದ ತಡೆ ಆಜ್ಞೆ ಇದ್ರೂ ವಿಮಾನ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣ