Mandya
ನನ್ನ ಸ್ಪರ್ಧೆ ಅನಿವಾರ್ಯವಾಗಿತ್ತು, ಎಲ್ಲವೂ ದೈವ ಸಂಕಲ್ಪ – ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ

ಪಾಂಡವಪುರ: ನಾನು ನಿಮ್ಮ ಮನೆಯ ಮಗ ನಾನು. ನನ್ನ ಸ್ಪರ್ದೆ ಅನಿವಾರ್ಯ ಜೊತೆಗೆ ದೈವ ಸಂಕಲ್ಪ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಎನ್ ಡಿಎ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಾಂಡವಪುರದಲ್ಲಿ ಶನಿವಾರ ರಾತ್ರಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಿಮ್ಮೆಲ್ಲರ ಆಶೀರ್ವಾದ ಪಡೆಯೋಕೆ ಈ ಐತಿಹಾಸಿಕ ಸಭೆಗೆ ಬಂದಿದ್ದೇನೆ.
ಈ ಚುನಾವಣೆಯಲ್ಲಿ ನಿಲ್ಲಬೇಕು ಅಂತಾ ಅಂದುಕೊಂಡಿರಲಿಲ್ಲ.
ನನ್ನ , ನಿಖಿಲ್ ಮತ್ತು ದೇವೇಗೌಡರ ತೀರ್ಮಾನ ಇದ್ದದ್ದು ಸಿ.ಎಸ್.ಪುಟ್ಟರಾಜು ಅಭ್ಯರ್ಥಿ ಆಗಬೇಕು ಅನ್ನೋದು.
ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಪುಟ್ಟರಾಜು ಹೆಸರು ಘೋಷಣೆ ಮಾಡಲು ಬಂದಿದ್ದೆ.
ಅಂದಿನ ಸಭೆಯಲ್ಲಿ ಕೆಲವು ಗೊಂದಲ ಬಂತು.
ಕೆಟ್ಟ ಸಂದೇಶ ಹೋಗಬಾರದು ಅಂತಾ ಸಭೆ ಮೊಟಕುಗೊಳಿಸಿದೆ.
ಇವತ್ತು ನಾನಲ್ಲ, ಪುಟ್ಟರಾಜಣ್ಣ ಅಭ್ಯರ್ಥಿಯಾಗಬೇಕಿತ್ತು.
ಆದ್ರೆ ನಾನು ಅಭ್ಯರ್ಥಿ ಆಗಿರೋದು ದೈವ ಇಚ್ಛೆ. ನನಗೆ ತುಮಕೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲಲು ಒತ್ತಡ ಇತ್ತು.
ನಿಖಿಲ್ ಸ್ಪರ್ಧೆಗೂ ಒತ್ತಡ ಇತ್ತು.
ನಿಖಿಲ್ ಕೂಡ ಪುಟ್ಟರಾಜಣ್ಣ ಸ್ಪರ್ಧೆ ಮಾಡಲಿ ಅಂದಿದ್ರು. ಕಳೆದ ಚುನಾವಣೆಯಲ್ಲಿ ಕೆಲವು ಕಾರಣ ನಿಖಿಲ್ ಸೋಲಾಯ್ತು.
ದೇವೇಗೌಡರು ನಿಮ್ಮ ಪರ ಧನಿಯಾಗಿ ಜೀವನ ಮುಡಿಪಾಗಿ ಇಟ್ಟಿದ್ದಾರೆ.
ನಿಖಿಲ್ ಮತಗಳಿಂದ ಸೋತಿರಬಹುದು, ನೈತಿಕವಾಗಿ ಸೋತಿರಲಿಲ್ಲ. ಕುರುಕ್ಷೇತ್ರದ ಯುದ್ಧದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿ ಹತನಾದಂತೆ ನಿಖಿಲ್ ನ ಮಾಡಿದ್ರು.
ಕುತಂತ್ರದಿಂದ ನಿಖಿಲ್ ಸೋಲಾಯ್ತು ವಿನಃ ಮಂಡ್ಯ ಜನ ಸೋಲಿಸಿಲ್ಲ.
ನೀವು ನನ್ನನ್ನ ಎಳೆದು ಚುನಾವಣೆಗೆ ನಿಲ್ಲಿಸಿದ್ದೀರಿ. ಈ ಚುನಾವಣೆಯಲ್ಲೂ ಅಂದಿನ ಕುತಂತ್ರ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯಂತೆ ನಾವು ಹಣಕ್ಕೆ ಸಮನಲ್ಲ. ಹಣದಲ್ಲಿ ಚುನಾವಣೆ ಗೆಲ್ಲೋಕೆ ಎದುರಾಳಿ ನಿಂತಿದ್ದಾರೆ. ಮಂಡ್ಯ ಜನ ಹಣಕ್ಕೆ ಯಾವತ್ತೂ ಮಾರು ಹೋಗಿಲ್ಲ.
ಅದನ್ನ ಎದುರಿಸಲು ನನ್ನನ್ನ ದೈವ ಇಚ್ಛೆಯಂತೆ ಅಭ್ಯರ್ಥಿ ಆಗಿದ್ದೇನೆ.
ನನ್ನ ಬಗ್ಗೆ ಕಾಂಗ್ರೆಸ್ನವರು ಅವಹೇಳನ ಮಾಡಿ ಮಾತಾಡಿದ್ದಾರೆ.
ಅವರ ರೀತಿ ನಾನು ಮಾತಾಡಲ್ಲ.
ಹೆಚ್ಡಿಕೆ ಏನು ಕಿತ್ತು ಗುಡ್ಡೆ ಹಾಕಿದ್ದಾನೆ ಅಂತಾ ಏಕವಚನದಲ್ಲಿ ಪ್ರಶ್ನಿಸಿದ್ದಾರೆ.
ನನಗೆ ಅವರ ಸರ್ಟಿಫಿಕೇಟ್ ಬೇಕಿಲ್ಲ.
ಈ ಜಿಲ್ಲೆಯ ಜನ ನನ್ನ ಕೆಲಸವನ್ನ ನಿಮ್ಮ ಹೃದಯದಲ್ಲಿ ಸ್ಮರಿಸಿಕೊಂಡರೆ ಸಾಕು.
ಅದಕ್ಕಿಂತ ದೊಡ್ಡ ಉಪಕಾರ ಇನ್ನೊಂದು ಬೇಕಿಲ್ಲ.
ದೇವೇಗೌಡರ ಕಾವೇರಿ ಹೋರಾಟಕ್ಕೆ ಆರ್ಥಿಕ ನೆರವು ಕೊಟ್ಟಿದ್ದು ನಾನು.
ಸಕ್ಕರೆನಾಡು, ಹಸಿರುನಾಡಲ್ಲಿ 200ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿತ್ತು. ಆಗ ಈ ಮಹಾನುಭಾವರು ಯಾರು ಹೋಗಿ ಭೇಟಿ ಮಾಡಲಿಲ್ಲ.
ನಾನು ಆ ರೈತ ಕುಟುಂಬಗಳಿಗೆ ಭೇಟಿ ಕೊಟ್ಟು, ಸಣ್ಣ ಸಹಾಯ ಮಾಡಿದ್ದೆ. ಅಂದೇ ಭರವಸೆ ಕೊಟ್ಟಿದ್ದೆ ರೈತರ ಸಾಲಮನ್ನಾ ಮಾಡುವುದಾಗಿ.
ಅದರಂತೆ ಅಧಿಕಾರಕ್ಕೆ ಬಂದಾಗ ರೈತರ ಸಾಲಮನ್ನಾ ಮಾಡಿದೆ.
ಹಿಂದಿನ ಚುನಾವಣೆಯಲ್ಲಿ ಕನಕಪುರದ ಸ್ನೇಹಿತ ಪೆನ್ನು, ಪೇಪರ್ ಕೊಡಿ ಅಂದ್ರು. ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದ್ರು.
ಈಗ ನಮ್ಮ ನೀರು, ತಮಿಳುನಾಡಿನ ಹಕ್ಕು ಅಂತಾರೆ. ಈ ಜಿಲ್ಲೆಯ ಉಸ್ತುವಾರಿ ಸಚಿವ ನನ್ನ ಬಗ್ಗೆ ಮಾತಾಡ್ತಾರೆ.
ಆತನನ್ನ ಮೊದಲು ಮಂತ್ರಿ ಮಾಡಿಸಿದ್ದು ಪುಟ್ಟರಾಜು.
ಇವತ್ತು ರೈತರು ಭತ್ತ, ಬೆಳೆ ಬೆಳೆಯಬೇಡಿ ಅಂತಾರೆ.
75 ವರ್ಷದಲ್ಲಿ ಒಬ್ಬ ಕೃಷಿ ಮಂತ್ರಿ ಈ ರೀತಿ ಹೇಳಿದ್ದು ಇದೇ ಮೊದಲು.
ಇವತ್ತು ಕಬ್ಬು ಬೆಳೆ ಒಣಗಿ, ಬೆಂಕಿಯಲ್ಲಿ ಬೇಯುತ್ತಿದೆ.
ಮಂಡ್ಯ ಜಿಲ್ಲೆಯ ಈ ಪರಿಸ್ಥಿತಿಗೆ ದರಿದ್ರ ಕಾಂಗ್ರೆಸ್ ಸರ್ಕಾರ ಕಾರಣ.
ಈ ಜಿಲ್ಲೆಯ ಜನ ಪುಣ್ಯ ಕೋಟಿ ಕಥೆ ಕೇಳಿ ಬಂದ ಜನ.
ಪ್ರೀತಿಯಿಂದ ಕಂಡರೆ ಪ್ರೀತಿಸುತ್ತೀರಿ.
ತಾಯಂದಿರಲ್ಲಿ ಕೈ ಮುಗಿದು ಮನವಿ ಮಾಡ್ತೀನಿ 2 ಸಾವಿರಕ್ಕೆ ಮರುಳಾಗಬೇಡಿ.
ಜಾತಿ ಗಣತಿಯಲ್ಲಿ ಹಲವು ಸಮುದಾಯಗಳಿಗೆ ದೋಖಾ ಮಾಡಲು ಹೋಗ್ತಿದ್ದಾರೆ ಸಿದ್ದರಾಮಯ್ಯ. ದೇಶದ ಆರ್ಥಿಕತೆ ಖಾಲಿ ಚೊಂಬು ಮಾಡಿದ್ದು ಮೋದಿಯಲ್ಲ. ರಾಜ್ಯದ ಖಜಾನೆಯನ್ನ ಖಾಲಿ ಚೊಂಬು ಮಾಡಿದ್ದು ಕಾಂಗ್ರೆಸ್.
ಎಐಸಿಸಿ ನೂತನ ಗ್ಯಾರಂಟಿಗಳ ಬಗ್ಗೆಯೂ ವ್ಯಂಗ್ಯ.
ಹಿಂದೆ ಒಂದು ಟಿಸಿಗೆ 25 ಇತ್ತು ಇವತ್ತು ಲಕ್ಷ ಕೊಡ ಬೇಕು.
ಮಹಿಳೆಯರಿಗೆ ಕೊಡುತ್ತಿರುವ 2 ಸಾವಿರ ನಿಮ್ಮದೇ ದುಡ್ಡು.
ಸಾಲದ ಮೇಲೆ ಸಾಲ ಮಾಡಿ ಹಣ ಕೊಡ್ತಿದ್ದಾರೆ. ಈ ಸಾಲವನ್ನ ಮುಂದೆ ತೀರಿಸಬೇಕಾಗುತ್ತೆ.
ಮಹಿಳೆಯರಿಗೆ 2 ಸಾವಿರ ಕೊಡ್ತೀವಿ ಅಂತಾರೆ. ಸಂಜೆ ಆಯ್ತು ಅಂದ್ರೆ ಯಜಮಾನರ ಜೇಬಿಗೆ ಕತ್ತರಿ ಹಾಕ್ತಾರೆ. ಇದು ಪಿಕ್ ಪಾಕೆಟ್ ಸರ್ಕಾರ. ಇವತ್ತು ಅಭಿವೃದ್ಧಿ ಸಂಪೂರ್ಣ ನಿಂತೋಗಿದೆ.
750 ತೆಗೆದುಕೊಳ್ಳುವುದಕ್ಕೆ ರೈತರೇನು ಭಿಕ್ಷುಕರ?
ರಾಜ್ಯದಲ್ಲಿ ಸಾರಾಯಿ, ಲಾಟರಿ ನಿಷೇಧ ಮಾಡಿದ್ದು ಈ ಕುಮಾರಸ್ವಾಮಿ. ಇವತ್ತು ಮಂಡ್ಯ ಜಿಲ್ಲೆಯಲ್ಲಿ ಬೆಟ್ಟಿಂಗ್, ಪ್ಲೇವಿನ್ ಆಟ ರಾಜಾರೋಷವಾಗಿ ನಡೆಯುತ್ತಿದೆ.
ನೀವೇ ಬೆಳೆಸಿದ ಮಕ್ಕಳು ನಾವು.
ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮ ಬಿಟ್ಟು ಹೋಗಲಿಲ್ಲ.
ಸದಾ ನಿಮ್ಮ ಜೊತೆ ಇರುವವರು ನಾವು. ಖಾಲಿ ಚೊಂಬು ತುಂಬಿಸಿ ಅಂತಾ ಕೇಂದ್ರದ ಮುಂದೆ ಅರ್ಜಿ ಹಾಕಿಕೊಂಡು ನಿಂತಿದ್ದಾರೆ.
ಮಹಿಳೆಯರಿಗೆ ಒಂದು ಲಕ್ಷ ಕೊಡ್ತೀವಿ ಅಂತಾರೆ. ಹಣವೇ ಇಲ್ಲವಲ್ಲ, ಎಲ್ಲಿಂದ ತರ್ತಾರೆ.
ಕೇಂದ್ರದಲ್ಲಿ ಯಾವ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.
ಕಾಂಗ್ರೆಸ್ನ ಗ್ಯಾರಂಟಿಗಳನ್ನ ನಂಬಬೇಡಿ.
ನಿಮ್ಮ ಮನೆಯ ಮಕ್ಕಳು, ಯಜಮಾನರೇ ನಿಮ್ಮ ಶಾಶ್ವತ ಗ್ಯಾರಂಟಿ. ಮೇಕೆದಾಟು, ಕಾವೇರಿ ವಿಚಾರವಾಗಿ ಈಗಾಗಲೇ ದೇವೇಗೌಡರು ಮೋದಿ ಜೊತೆ ಮಾತಾಡಿದ್ದಾರೆ. ಇದಕ್ಕೆ ಐದು ವರ್ಷದೊಳಗೆ ಶಾಶ್ವತ ಪರಿಹಾರ ದೇವೇಗೌಡರು ಕೊಡಿಸ್ತಾರೆ.
ಕುಮಾರಸ್ವಾಮಿಯ ಹೊರಗಿನವರು, ಈ ಕಾಂಗ್ರೆಸ್ ಅಭ್ಯರ್ಥಿ ಒಳಗಿನವರಂತೆ. ಈ ಕಾಂಗ್ರೆಸ್ ಅಭ್ಯರ್ಥಿ ಎಲ್ಲಿದ್ದ ರೈತರು ಅತ್ಮಹತ್ಯೆ ಮಾಡಿಕೊಂಡಾಗ.
ಎಷ್ಟು ದಿನ ಮಂಡ್ಯಕ್ಕೆ ಬಂದು ಹೋಗಿದ್ದಾರೆ. ನಿತ್ಯವೂ ಹಣದ ಸಮಾರಾಧನೆ ನಡೀತ್ತಿದೆ.
ನಾವು ನಮ್ಮ ಮನೆಗೆ ಶ್ರೀಮಂತರನ್ನ ಎಂದೂ ಬಿಟ್ಟುಕೊಂಡಿಲ್ಲ.
ಬೆಳಿಗ್ಗೆ ಆದ ತಕ್ಷಣ ನಾನು ಮುಖ ನೋಡೋದು ಬಡವರನ್ನ.
ಹಣದ ಮದದಿಂದ ಈ ಕುಮಾರಸ್ವಾಮಿ ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ. ಈ ಮಂಡ್ಯ ಜನ ಹಣಕ್ಕೆ ಯಾವತ್ತೂ ಬೆಲೆ ಕೊಟ್ಟಿಲ್ಲ. ನನ್ನ ಆಸ್ತಿ ರೈತರು ಮತ್ತು ನೀವು. ನಾನು ಹೆಸರಿಗೆ ಮಾತ್ರ ಅಭ್ಯರ್ಥಿ. ಇವತ್ತು ಪುಟ್ಟರಾಜಣ್ಣನ ನೇತೃತ್ವದಲ್ಲೇ ಈ ಚುನಾವಣೆ ನಡೆಯಲಿದೆ. ನನ್ನ ಸೋಲು ಗೆಲುವು ಈ ಜಿಲ್ಲೆಯ ಪುಣ್ಯಾತ್ಮ ತಂದೆ ತಾಯಿಯಂದಿರ ಕೈಲಿದೆ. ಸಿದ್ದರಾಮಯ್ಯ, ಶಿವಕುಮಾರ್ ನಂತಹ ಹತ್ತು ಜನ ಬಂದ್ರು ಅದು ಸಾಧ್ಯವಿಲ್ಲ. ನನಗೆ ಮೂರನೇ ಬಾರಿ ಶಸ್ತ್ರ ಚಿಕಿತ್ಸೆ ಆಗಿದೆ. ನಾನು ಇವತ್ತು ಉಳಿದಿರೋದು ನಿಮ್ಮೆಲ್ಲರ ಹಾರೈಕೆಯಿಂದ. ನನ್ನ ಶಸ್ತ್ರ ಚಿಕಿತ್ಸೆ ಬಗ್ಗೆ ಹಳೇ ಸ್ನೇಹಿತ ಮಾತಾಡ್ತಾನೆ.
25 ಲಕ್ಷ ವೆಚ್ಚ ಮಾಡಿ, ಹೊಸ ಟೆಕ್ನಾಲಜಿಯಡಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇನೆ.
ನನ್ನ ಸ್ವಾರ್ಥ, ಗೆಲುವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿಲ್ಲ.
ಸ್ವತಂತ್ರವಾಗಿ ಜೆಡಿಎಸ್ನ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಿದೆ. ದೇವೇಗೌಡರ ಬಗ್ಗೆ ಮೋದಿಗೆ ಗೌರವ ಇದೆ.
ಅಂತಹ ಗೌರವ ಕೊಡುವ ವ್ಯಕ್ತಿಯ ಕೈಬಲಪಡಿಸಲು ಮೈತ್ರಿ.
ಕಾಂಗ್ರೆಸ್ನವರನ್ನ ನಂಬಿದಕ್ಕೆ ನನ್ನನ್ನ ಹೆಂಗೆ ನಡೆಸಿಕೊಂಡರು.
ನನಗಲ್ಲ ಅವರು ಮಾಡಿದ ಅವಮಾನ, ಇಡೀ ನಾಡಿನ ಜನರಿಗೆ ಮಾಡಿದ ಅವಮಾನ. ಇಂತಹ ಸಭೆ ಆಯೋಜಿಸಿದ ಪುಟ್ಟಣ್ಣಂಗೆ ಹ್ಯಾಟ್ಸ್ ಆಫ್ ಹೇಳ್ತೀನಿ. ನಿಮ್ಮ ಬದುಕನ್ನ ಒಳ್ಳೆಯ ರೀತಿ ತೆಗೆದುಕೊಂಡು ಹೋಗಲಿಕ್ಕೆ ಇಲ್ಲಿಂದಲೇ ಒಂದು ಸಂದೇಶ ಕೊಡಿ. ನಿಮ್ಮ ದುಡಿಮೆ, ಶ್ರಮದಿಂದ 5 ಲಕ್ಷಕ್ಕೂ ಹೆಚ್ಚು ಮತಗಳಿಂದ ಆಶೀರ್ವಾದ ಮಾಡಿ.
ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಫೋಟೋ ನೋಡಿ ಯಾರೂ ಓಟ್ ಮಾಡಬೇಡಿ ದಯವಿಟ್ಟು.
ನಾವು, ದೇವೇಗೌಡರು ಮುಸ್ಲಿಮರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆ.
ಮುಸ್ಲಿಮರನ್ನ ನಾವು ಯಾವತ್ತೂ ಅಗೌರವದಿಂದ ನೋಡಲ್ಲ, ನಡೆಸಿಕೊಳ್ಳಲ್ಲ ಎಂದರು.
ಮಾಜಿ ಶಾಸಕ ಸಿಎಸ್ ಪುಟ್ಟರಾಜು ಸೇರಿದಂತೆ ಶಾಸಕ ಮಂಜು, ಜಿಲ್ಲೆಯ ಮಾಜಿ ಶಾಸಕರು, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.
Mandya
ಕಡು ಬಡವರಿಗೂ ಗ್ಯಾರಂಟಿಗಳು ತಲುಪಿದಾಗ ಮಾತ್ರ ಯೋಜನೆಗಳು ಯಶಸ್ವಿಯಾದಂತೆ: ಚಿಕ್ಕಲಿಂಗಯ್ಯ

ಮಂಡ್ಯ : ಸರ್ಕಾರದ ಕನಸಿನ ಕೂಸಾದ ಗ್ಯಾರಂಟಿ ಯೋಜನೆಗಳು ರಾಜ್ಯದ ಕಡು ಬಡವರ ಮನೆಯನ್ನು ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾದಂತೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಲು ಪ್ರಾಧಿಕಾರವು ಸಹ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಗ್ಯಾರಂಟಿ ಯೋಜನೆಯ ಪ್ರಮುಖ ಯೋಜನೆ ಗೃಹಲಕ್ಷಿ ಯೋಜನೆ, ಈ ಯೋಜನೆಯಿಂದ ರಾಜ್ಯದ ಅನೇಕ ಕುಟುಂಬಗಳು ಸಬಲವಾಗಿವೆ, ಜಿಲ್ಲೆಯಲ್ಲಿ ಶೇ 100 ರಷ್ಟು ಅರ್ಹ ಮಹಿಳೆಯರಿಗೆ ಯೋಜನೆಗಳನ್ನು ತಲುಪಿಸುವುದು ಅತಿ ಮುಖ್ಯ, ಈಗಾಗಲೇ ಡಿಸೆಂಬರ್ ಮಾಹೆಯವರೆಗೂ ಗೃಹ ಲಕ್ಷ್ಮಿ ಯೋಜನೆಯಡಿ ಅನುದಾನ ಮಂಜೂರು ಮಾಡಲಾಗಿದೆ ಹಾಗೂ ಡಿ ಬಿ ಟಿ ಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರೊಂದಿಗೆ ಚರ್ಚಿಸಿ ಕಾಲ ಕಾಲಕ್ಕೆ ಗೃಹಲಕ್ಷಿ ಹಣವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ 7 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದೂ ಡಿಸೆಂಬರ್ ಮಾಹೆಯವರೆಗೆ ಒಟ್ಟು ರೂ. 402 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ, ಡಿಸೆಂಬರ್ ಮಾಹೆಗೆ ಸಂಬಂಧಿಸಿದಂತೆ ರೂ. 23.06 ಕೋಟಿ ಹಣವನ್ನು ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ, ಸರ್ಕಾರದ ನಿರ್ದೇಶನದಂತೆ ಫೆಬ್ರವರಿ ಮಾಹೆಯಿಂದ ಹಣದ ಬದಲು 15 ಕೆ.ಜಿ ಅಕ್ಕಿಯನ್ನೇ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲೆಡೆ ಈಗಾಗಲೇ ಫೆಬ್ರವರಿ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ವಿತರಿಸಲಾಗುತ್ತಿದೆ, ಪ್ರತಿ ಎರಡು ವರ್ಷಕ್ಕೊಮ್ಮೆ ತೂಕ ಮೌಲ್ಯ ಮಾಪನ ನಡೆಸಲಾಗುವುದು, ತೂಕದಲ್ಲಿ ವ್ಯತ್ಯಾಸ ಕಂಡು ಬಂದ ಅಂಗಡಿಯ ಮಾಲೀಕನ ಮೇಲೆ ಕ್ರಮ ಜರುಗಿಸಲಾಗುವುದು, ಜಿಲ್ಲೆಯಲ್ಲಿ ಅನೇಕ ಕಡೆ ನ್ಯಾಯಬೆಲೆ ಅಂಗಡಿ ಮಾಲೀಕರು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ, ಅಧಿಕಾರಿಗಳು ಈಗಾಗಲೇ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಹಣ ವಸೂಲಿ ಮಾಡದಂತೆ ಸೂಚನೆ ನೀಡಿದ್ದಾರೆ, ಅದನ್ನು ಮೀರಿ ಹಣ ವಸೂಲಿ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಿ,
ಶಕ್ತಿ ಯೋಜನೆಯಡಿ ಫೆಬ್ರವರಿ ಮಾಹೆಯಲ್ಲಿ ಪ್ರತಿದಿನದ ಸರಾಸರಿಯಂತೆ 29 ಸಾವಿರಕ್ಕೂ ಹೆಚ್ಚು ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರ ವಿತರಿಸಲಾಗಿದೆ, ಫೆಬ್ರವರಿ ಮಾಹೆಯಲ್ಲಿ 59.13 ಲಕ್ಷಕ್ಕೂ ಹೆಚ್ಚು ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯಡಿ ನೀಡಲಾಗಿದೆ ಎಂದು ತಿಳಿಸಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5 ಲಕ್ಷದ 49 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳು ಇದ್ದು, ಈವರೆಗೂ ಜಿಲ್ಲೆಗೆ 314 ಕೋಟಿ ಅನುದಾನ ನೀಡಲಾಗಿದೆ, ಜಿಲ್ಲೆಯಲ್ಲಿ ಶೇ 97 ರಷ್ಟು ಪ್ರಮಾಣದಲ್ಲಿ ಗೃಹ ಜ್ಯೋತಿ ಅನ್ನು ಎಲ್ಲಾ ಮನೆಗಳಿಗೂ ತಲುಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ 7 ತಾಲ್ಲೂಕಿನ ಎಲ್ಲಾ ಪದವಿ ಹಾಗೂ ಡಿಪ್ಲೋಮೋ ಕಾಲೇಜುಗಳಲ್ಲಿ ಯುವ ನಿಧಿ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗಿದೆ, 4702 ಅರ್ಹ ಫಲಾನುಭವಿಗಳು ಪ್ರಸ್ತುತ ಜಿಲ್ಲೆಯಲ್ಲಿದ್ದು ಎಲ್ಲರಿಗೂ ಡಿ.ಬಿ.ಟಿ ಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ, ಯುವನಿಧಿ ಯೋಜನೆಯಡಿ 7 ಕೋಟಿ 12 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಪ್ರಶಾಂತ್ ಬಾಬು ಕೆ.ಸಿ. ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ಸದಸ್ಯರಾದ ವೀಣಾ ಶಂಕರ್, ರುದ್ರಪ್ಪ, ಮಹೇಶ್, ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಕೆ.ಎಸ್. ಆರ್. ಟಿ.ಸಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಕೆ.ಆರ್.ಪೇಟೆ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜಾನಪದ ಜಾತ್ರೆ ಹಾಗೂ ಆಹಾರ ಮೇಳ

ಕೆ.ಆರ್.ಪೇಟೆ : ಇಲ್ಲಿನ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜಾನಪದ ಜಾತ್ರೆ ಹಾಗೂ ಗ್ರಾಮೀಣ ಸೊಗಡಿನ ಆಹಾರ ಮೇಳವು ಯಶಸ್ವಿಯಾಗಿ ನಡೆಯಿತು.
ಶಾಸಕ ಹೆಚ್.ಟಿ.ಮಂಜು ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ಜಾನಪಸ ಜಾತ್ರೆಗೆ ಚಾಲನೆ ನೀಡಿ, ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಪೂರ್ವಜರು ಬೇಸಾಯ ಮಾಡುವಾಗ ಮಾಡುತ್ತಿದ್ದ ನೃತ್ಯಗಳು, ಜಾನಪದ ಹಾಡುಗಳು ಇಂದಿಗೂ ಜನಪದರ ಬಾಯಿಂದ ಬಾಯಿಗೆ ಹರಿದಾಡುತ್ತಿವೆ. ಸುಗ್ಗಿ ಯ ಸಂಭ್ರಮದಲ್ಲಿ ಹಾಡುವ ಹಾಡುಗಳು ಇಂದಿಗೂ ನಮ್ಮ ಬದುಕಿನ ಜೀವ ಸೆಲೆಯಾಗಿವೆ. ಮೌಡ್ಯವಿಲ್ಲದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು, ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿ ತವಾಗುತ್ತಿರುವ ಇಂದಿನ ದಿನಮಾನದಲ್ಲಿ ಮರಳಿ ಜಾನಪದ ಸಂಸ್ಕೃತಿಗೆ ಕರೆತರಲು ಇಂತಹ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ಸಹಾಯವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಮಾತನಾಡಿ, ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ. ಜಾನಪದದ ಮೂಲ ಬೇರೆ ಹೆಣ್ಣಾ ಗಿರುವುದರಿಂದ ಹೆಣ್ಣಿಗೂ ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ. ಹೆಣ್ಣು ಮಕ್ಕಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ಹಾಡುವ ಹಾಡುಗಳು ಹಾಗೂ ನೃತ್ಯಗಳು ಜಾನಪದ ಕ್ಷೇತ್ರದ ಶಕ್ತಿಯನ್ನು ಇಮ್ಮಡಿಗೊಳಿಸಿವೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಬಿ. ಪ್ರತಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಇಂದು ವಿಶೇಷವಾಗಿ ಜಾನಪದ ಜಾತ್ರೆ ಹಾಗೂ ಗ್ರಾಮೀಣ ಸೊಗಡಿನ ಆಹಾರ ಮೇಳವನ್ನು ಆಯೋಜಿಸಲಾಗಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾದ ಜಾನಪದಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ಇಂದು ವಿದ್ಯಾರ್ಥಿನಿಯರು ರೇಷ್ಮೆ ಸೀರೆಯನ್ನು ಉಟ್ಟು ಮದುಮಗಳ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಬಂದಿದ್ದಾರೆ. ದನಕರುಗಳು ಹಾಗೂ ಪ್ರಕೃತಿಯೇ ಜನಪದದ ಜೀವಾಳವಾಗಿದೆ. ಮೋಸ, ವಂಚನೆಯ ಬಗ್ಗೆ ತಿಳಿಯದ, ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಯುವ ಸಮುದಾಯವನ್ನು ಜಾಗೃತಿಗೊಳಿಸಿ ಮುನ್ನಡೆಸಲು ಇಂತಹ ಕಾರ್ಯಕ್ರಮಗಳು ವರದಾನವಾಗಿವೆ ಎಂದು ಹೇಳಿದರು.
ಪುರಸಭೆ ಸದಸ್ಯ ಗಿರೀಶ್, ಶಾಮಿಯಾನ ತಿಮ್ಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಚೇತನ್ ಕುಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
Mandya
ಹಾಸನ ಕೃಷಿ ವಿವಿಯನ್ನು ಬೆಂಗಳೂರಿನಲ್ಲೇ ಉಳಿಸಬೇಕೆಂಬುದು ಸರಿಯಲ್ಲ: ಪ್ರೊ. ಜಯಪ್ರಕಾಶ್ ಗೌಡ

ಮಂಡ್ಯ: ಮಂಡ್ಯದ ಕೃಷಿ ವಿಶ್ವವಿದ್ಯಾಲಯವು ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಜಿಲ್ಲೆಗಳನ್ನೊಳಗೊಂಡಂತಿದ್ದು, ಹಾಸನದ ರಾಜಕಾರಣಿಗಳು ಹಾಸನ ಕೃಷಿ ಕಾಲೇಜು ಮಾನ್ಯತೆಯನ್ನು ಬೆಂಗಳೂರಿನ ಕೃಷಿ ವಿವಿಯಲ್ಲೇ ಉಳಿಸಬೇಕೆಂದು ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ, ಹಿರಿಯ ಸಾಹಿತ್ಯ ಚಿಂತಕ ಪ್ರೊ.ಜಯಪ್ರಕಾಶ್ಗೌಡ ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮಂಡ್ಯ ವಿ.ಸಿ ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಮಾಡಿರುವುದು ಅಭಿನಂದನಾರ್ಹ, ಹಾಸನದ ರಾಜಕಾರಣಿಗಳು ಬೆಂಗಳೂರು ವಿವಿಯಲ್ಲೆ ಕೃಷಿ ಕಾಲೇಜು ಮಾನ್ಯತೆ ಮುಂದುವರೆಸಲು ಶಾಸನ ಸಭೆಯಲ್ಲಿ ಪ್ರತಿಪಾದಿಸಿ, ರಾಜ್ಯಪಾಲರಿಗೆ ಮನವಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೃಷಿ ವಿವಿ ಸ್ಥಾಪನೆಗೂ ಮುನ್ನವೇ ಕೋಲ್ಮನ್ ಅವರು ವಿ.ಸಿ.ಫಾರಂ ಅನ್ನು ಸಂಶೋಧನಾ ಕೇಂದ್ರವನ್ನಾಗಿ ರೂಪಿಸಿ ಆಗಲೇ ೬೦೦ ಎಕರೆ ಭೂ ಪ್ರದೇಶ ನೀಡಿದ ಮೈಸೂರು ಅರಸರನ್ನು ಮರೆಯುವಂತಿಲ್ಲ. ಮಂಡ್ಯದ ವಿ.ಸಿ ಫಾರಂನಲ್ಲಿ ನಡೆದಿರವ ಸಂಶೋಧನೆಗೆ ವಿಶ್ವಮಾನ್ಯತೆ ದೊರೆತಿದ್ದು, ಜಾಗತಿಕ ಪೆಟೆಂಟ್ ಕೂಲ ಅಭಿಸಿದೆ ಎಂದು ಹೇಳಿದರು.
ಇಂತಾದರೂ ಹಾಸನ ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿವಿ ವ್ಯಾಪ್ತಿಗೆ ತರದೇ ಹಾಸನ ಜಿಲ್ಲೆಯನ್ನು ಮಂಡ್ಯ ಕೃಷಿ ವಿವಿಯ ಹೊರಗುಳಿಯುವಂತೆ ಮಾಡಲು ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿಯೇ ಮನವಿ ಸಲ್ಲಿಸಲು ಮುಂದಾಗಿರುವುದು ಅಘಾತವನ್ನುಂಟು ಮಾಡಿದೆ ಎಂದರು.
ಹೆಚ್.ಡಿ.ದೇವೇಗೌಡರು, ಮಂಡ್ಯದಿಂದ ಗೆದ್ದು ಕೇಂದ್ರ ಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದ ಬಗ್ಗೆ ಅತ್ಯಂತ ಪ್ರಶಂಸನೀಯವಾಗಿ ಮಾತುಗಳನ್ನಾಡಿದ್ದಾರೆ. ಹಾಸನ ಮತ್ತು ಮಂಡ್ಯ ತಮ್ಮೆರಡು ಕಣ್ಣುಗಳೆಂದು, ರಾಜಕೀಯ ಪುನರ್ಜನ್ಮ ನೀಡಿದ್ದು ಮಂಡ್ಯ ಜಿಲ್ಲೆ ಅಂತಲೂ ಹಾಡಿ ಹೊಗಳಿದ್ದಾರೆ. ಹೀಗಿರುವಾಗಿ ಹಾಸನ ಕೃಷಿ ಕಾಲೇಜು ಮಂಡ್ಯ ಕ್ಕೆ ಬರವುದನ್ನು ತಡೆವುದು ಮಂಡ್ಯಕ್ಕೆ ಮಾಡುವ ಅಪಚಾರ ಎಂದರು.
ರಾಜಕೀಯವಾಗಿ ಮಂಡ್ಯ ಜಿಲ್ಲೆ ದೇವೇಗೌಡರ ಕುಟುಂಬ ಪೋಷಿಸುತ್ತಿದ್ದು, ಈ ಸಂಬಂಧ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರ ನಿಲುವನ್ನು ಪ್ರಶ್ನಿಸಬೇಕಿದೆ. ಶೀಘ್ರವಾಗಿ ಈ ಸಂಬಂಧ ಮಾತನಾಡಿ, ಹಾಸನದ ರಾಜಕಾರಣಿಗಳ ರಾಜಕಾರಣಿಗಳ ಬಾಯಿ ಮುಚ್ಚಿಸಿ, ನಿಲುವು ಘೋಷಿಸುವಂತೆ ಒತ್ತಾಯಿಸಿದರು.
ಮಂಡ್ಯ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ಸರ್ಕಾರದ ಪ್ರಶ್ತಾವನೆಗೆ ವಿರುದ್ಧವಾಗಿ ಶಾಸಕ ರವಿಕುಮಾರ್ಗೌಡ ಬದ್ದತೆ ಹಾಗೂ ಒಲವು ಪ್ರಶಂಸನೀಯ, ಅದನ್ನು ಉಳಿಸಿ ಬೆಳೆಸುವ ಅಗತ್ಯ ಎಲ್ಲರ ಮೇಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎರಡೂ ವಿವಿಗಳನ್ನು ಉಳಿಸಿ ಬೆಳೆಸಲು ತೊಡಗಿಕೊಳ್ಳುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಕೆ.ಆರ್.ಪೇಟೆ ಕಸಾಪ ಮಾಜಿ ಅಧ್ಯಕ್ಷ ಸೋಮಶೇಖರ್ ಇದ್ದರು.
-
State24 hours ago
ಅಕ್ರಮ ಮರ ಕಡಿತಲೆಗೆ ಶಿಕ್ಷೆ ಪ್ರಮಾಣ ಹೆಚ್ಚಳ: ಈಶ್ವರ ಖಂಡ್ರೆ ಖಡಕ್ ಸೂಚನೆ
-
Special11 hours ago
ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ
-
State7 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan7 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
State8 hours ago
ಪತ್ರಿಕೋದ್ಯಮ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಅವರಿಗೆ ಡಿ.ಲಿಟ್ ಪದವಿ
-
State6 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?
-
Kodagu4 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ
-
Hassan5 hours ago
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು