Mysore
ಸಿದ್ದರಾಮಯ್ಯನವರ ಸರ್ಕಾರ ಪಿಕ್ ಪಾಕೆಟ್ ಸರ್ಕಾರ: ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಸಾಲಿಗ್ರಾಮ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ, ಪಿಕ್ ಪಾಕೇಟ್ ಸರ್ಕಾರ ಆಗಿದೆ, ನಿಮ್ಮ ದುಡ್ಡು ಹೊಡೆದು ನಿಮಗೆ ಗ್ಯಾರಂಟಿ ಮೂಲಕ ಕೊಡುತ್ತಿರುವ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಅವರು ಪಟ್ಟಣದ ರೇಡಿಯೋ ಮೈದಾನದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಸ್, ಬಿಜೆಪಿ ಮೈತ್ರಿ ಪಕ್ಷ ಅಭ್ಯರ್ಥಿ ಮಾಜಿ ಸಿ.ಎಂ. ಹೆಚ್.ಡಿ.ಕುಮಾರಸ್ವಾಮಿ ರವರು ಬಾರಿ ಬಹಿರಂಗ ಸಭೆ ಹಾಗೂ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದ ಜನರ ಹಿತಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದು, ೨೦೦೬ ರಲ್ಲಿ ನಾನು ಮತ್ತು ಬಿ.ಎಸ್.ಯಡಿಯೂರಪ್ಪ ಸೇರಿ ಸರ್ಕಾರ ರಚಿಸಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ರಾಜ್ಯದ ಜನರಿಗೆ ಕೊಟ್ಟಿದ್ದೆವು, ಸಾರಾಯಿ, ಲಾಟರಿ ನಿಷೇದ, ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ,ನೀರಾವರಿ ಯೋಜನೆ ಕೊಟ್ಟೆವು, ಇವಾಗ ಮೈತ್ರಿ ಮಾಡಿ ಕೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶಯದಿಂದ ರಾಜ್ಯದ ಜನರಿಗೆ ಉತ್ತಮ ಆಡಳಿತವನ್ನು ಕೇಂದ್ರ ಸರ್ಕಾರದ ಮೂಲಕ ಮಾಡುವ ಉದ್ದೇಶದಿಂದ ಎಂದು ಹೇಳಿದರು.
ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ, ಬರಗಾಲ ಬಂದಿದೆ, ರೈತರ ಬೆಳೆ ನಷ್ಟವಾಗಿದೆ, ೩೮ ಸಾವಿರ ಕೋಟಿ ಬೆಳೆ ನಷ್ಟವಾಗಿದ್ದರೆ, ರಾಜ್ಯ ಸರ್ಕಾರ ೬೫೪ ಕೋಟಿ ಬಿಡುಗಡೆ ಮಾಡಿದೆ, ಹೆಕ್ಟೇರ್ ಗೆ ಎರಡು ಸಾವಿರ ರೂ ಮಾತ್ರ ಕೊಟ್ಟಿದ್ಸಾರೆ, ಇದರಲ್ಲಿ ಕೇಂದ್ರದ ಪಾಲು ಶೇಕಡ ೭೫% ೪೫೦ ಕೋಟಿ ಸೇರಿದೆ ಎಂದು ತಿಳಿಸಿದರು.
ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಈಗಾಗಲೇ ೧.೫ ಲಕ್ಷ ಕೋಟಿ ಸಾಲ ಮಾಡಿದ್ದಾರೆ, ನಿಮ್ಮ ಕುಟುಂಬದವರ ಮೇಲೆ ೩೬ ಸಾವಿರ ಸಾಲ ಹೊರೆಸಿದ್ದಾರೆ ಎಂದ ಅವರು ಲೋಕಸಭಾ ಚುನಾವಣಾ ಕಳೆದ ಮೇಲೆ ಸರ್ಕಾರ ಇರುತ್ತೊ ಇಲ್ಲವೊ ಗೊತ್ತಿಲ್ಲ, ನಾವು ಹೇಳುತ್ತಿಲ್ಲ, ಅವರ ಶಾಸಕರೇ ಹೇಳುತ್ತಿರುವುದು, ಎಂದರು.

ನಾನು ಮತ್ತು ಯಡಿಯೂರಪ್ಪ ಅವರ ಮೈತ್ರಿ ಸರ್ಕಾರದಲ್ಲಿ ರೈತರ ಪಂಪ್ ಸೆಟ್ ಗಳಿಗೆ ಕೇವಲ ೫ ಸಾವಿರದಲ್ಲಿ ಟಿ.ಸಿ ಕೊಡುತ್ತಿದ್ದೆವು, ಇವಾಗ ೨ ಲಕ್ಷ ಕೊಟ್ಟು ರೈತರು ಟಿ.ಸಿ.ಪಡೆಯ ಬೇಕಿದೆ, ಇದು ನೋವಿನ ಸಂಗತಿ ಎಂದು ನುಡಿದರು.
ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ಸಂಪೂರ್ಣವಾಗಿ ದಿವಾಳಿ ಆಗಿದೆ, ಸರ್ಕಾರ ಬದುಕಿದ್ದು ಸತ್ತಂತೆ ಆಗಿದೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನರ ಹಿತ ಮರೆತಿದ್ದಾರೆ, ಗ್ಯಾರಂಟಿ ಯೋಜನೆಗಾಗಿ ನೀರಾವರಿ ಯೋಜನೆಗಳನ್ನು ಕಡೆಗಣಿಸಿದ್ದಾರೆ ಎಂದರು
ನನ್ನ ವೀರೇಶ್ವರ ಸಮಾಜದ ಬಂದುಗಳು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅಲ್ಲ, ನಾನು ನಿಮ್ಮ ಯಡಿಯೂರಪ್ಪ ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಮತಹಾಕಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡಿದಲ್ಲದೆ ಅತ್ಯಂತ ಹೆಚ್ಚಿನ ಮತಗಳನ್ನು ಕೊಟ್ಟು ಮಾಜಿ ಸಿ.ಎಂ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ, ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿ ನಿಮ್ಮಗಳ ಸಂಕಷ್ಟಕ್ಕೆ ನೆರವಾಗಲಿದ್ದಾರೆ ಎಂದು ಹೇಳಿದರು.
ನಮ್ಮ ಸರ್ಕಾರದಲ್ಲಿ ೨೦ ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಗಳನ್ನು ಕೊಡಲಾಗುತ್ತಿತ್ತು ಆದರೆ ಸಿದ್ದರಾಮಯ್ಯನವರು ನಿಲ್ಲಿಸಿದರು. ಕಿಸಾನ್ ಸಮ್ಮಾನ್ ಯೋಜನೆಗ ಕೇಂದ್ರದಿಂದ ೬ ಸಾವಿರ ಮತ್ತು ನಾನು ಸಿ.ಎಂ.ಆಗಿದ್ದಾಗ ೪ ಸಾವಿರ ಸೇರಿ ೧೦ ಸಾವಿರ ರೈತರಿಗೆ ಕೊಡುತ್ತಿದ್ದೆವು ಎಲ್ಲವನ್ನು ನಿಲ್ಲಿಸಿದರು. ಚಿಂತಿಸ ಬೇಡಿ ಎಲ್ಲವನ್ನು ಕುಮಾರಸ್ವಾಮಿ ಅವರು ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿ ಕೊಡುತ್ತಾರೆ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ನಾನು ಭರವಸೆ ಕೊಡುತ್ತೇನೆ ಎಂದರು.

ರಾಜ್ಯ ಜಾ. ದಳ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ ದೇವೇಗೌಡ, ಮಾಜಿ ಸಚಿವರಾದ ಪುಟ್ಟರಾಜು, ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಂಜೇಗೌಡ, ಮಾಜಿ ಸದಸ್ಯ ಶ್ರೀ ಕಂಠೀಗೌಡ, ಮಾಜಿ ಶಾಸಕ ಕೆ. ಮಹದೇವ್, ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಿ, ಮುಖಂಡರುಗಳಾದ ವೈ ಆರ್ ಪ್ರಕಾಶ್, ಹೊಸಳ್ಳಿ ವೆಂಕಟೇಶ್, ಮಿರ್ಲೆ ಶ್ರೀನಿವಾಸಗೌಡ, ಎಂ ಟಿ ಕುಮಾರ್, ಡಾ. ಮೆಹಬೂಬ್ ಖಾನ್, ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ಚಂದ್ರಶೇಖರ, ಮಿರ್ಲೆ ಅಣ್ಣೇಗೌಡ, ಪ್ರಭಾಕರ್ ಜೈನ್ ಮುಂತಾದವರು ಇದ್ದಾರೆ.
Mysore
ಚುನಾವಣಾ ರಾಜಕೀಯಕ್ಕೆ ಎಸ್.ಎ.ರಾಮದಾಸ್ ನಿವೃತ್ತಿ
ಮೈಸೂರು: ನಾನು ಬಿಜೆಪಿ ಬಿಡುವುದಿಲ್ಲ. ಆದರೆ ಚುನಾವಣಾ ರಾಜಕೀಯ ಮಾಡುವುದಿಲ್ಲ. ಪರಿಸರ ಉಳಿಸುವ ನಿಟ್ಟಿನಲ್ಲಿ ಸಮಾಜ ಸೇವೆ ಮುಂದುವರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ವತಿಯಿಂದ ಹೊರತಂದಿರುವ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುತ್ತೂರು ಸ್ವಾಮೀಜಿ ಸೇರಿದಂತೆ ನನ್ನನ್ನು ಹತ್ತಿರದಿಂದ ಬಲ್ಲ ಅನೇಕರು ನೀವು ಮತ್ತೆ ಸಕ್ರಿಯವಾಗಿ ಸಮಾಜದ ಜತೆ ಇರಬೇಕು ಎಂದು ಹೇಳುತ್ತಿದ್ದಾರೆ. ನನಗೆ ಚುನಾವಣಾ ರಾಜಕೀಯ ಸಾಕಾಗಿದೆ ಎಂದರು.

ಶ್ರೀರಾಮನಿಗೆ ನಾಳೆ ಪಟ್ಟಾಭಿಷೇಕ ಆಗಬೇಕಿತ್ತು. ಹಿಂದಿನ ರಾತ್ರಿ ದಶರಥನ ಮೂಲಕ ಕಾಡಿಗೆ ಹೋಗುವಂತೆ ಹೇಳಿಸಲಾಯಿತು. ಅಂತಹ ಶ್ರೀರಾಮಚಂದ್ರನೇ ಮರು ಮಾತನಾಡದೇ ಕಾಡಿಗೆ ಹೊರಟು ಹೋದ. ನಾನು ರಾಮದಾಸ, ನಾನೇನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿ ಬಿಡಲ್ಲ: ಭಾರತೀಯ ಜನತಾ ಪಕ್ಷ ನನಗೆ ತಾಯಿ ಇದ್ದಂತೆ. ಯಾವುದೇ ಕಾರಣಕ್ಕೂ ತಾಯಿಗೆ ದ್ರೋಹ ಮಾಡುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಊಟಕ್ಕೆ ಕುಳಿತಿದ್ದೆ. ನನ್ನನ್ನು ಎಬ್ಬಿಸಿ ಬೇರೆಯವರನ್ನು ತಂದು ಕೂರಿಸಿದರು. ನಾನು ಎಲ್ಲರಿಗೂ ಊಟ ಬಡಿಸಿದ್ದೇನೆ. ಅದ್ಯಾವುದರ ಬಗ್ಗೆಯೂ ನನಗೆ ದುಃಖವಿಲ್ಲ ಎಂದು ನೊಂದು ನುಡಿದರು.

ಕೈ, ರಕ್ತ ಅಶುದ್ಧ ಮಾಡಿಕೊಂಡಿಲ್ಲ: ನನ್ನ ತಂದೆ ಮಾಜಿ ಸೈನಿಕ. ನಾನೂ ಸೇನೆಗೆ ಸೇರಬೇಕು ಎಂದುಕೊಂಡಿದ್ದೆ. ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ನನಗಿನ್ನೂ ಚನ್ನಾಗಿ ನೆನಪಿದೆ. 1994ರ ನವೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದು ರಾತ್ರಿ ಮನೆಗೆ ಬಂದೆ. ಒಂದೆ ಕಡೆ ತಂದೆ, ಮತ್ತೊಂದು ಕಡೆ ತಾಯಿ ನಿಂತಿದ್ದರು. ಇಬ್ಬರೂ ಹೆಗಲ ಮೇಲೆ ಕೈಹಾಕಿ ರಾಜಕೀಯ ತುಂಬಾ ಕೆಟ್ಟದ್ದು, ನಿನ್ನ ಕೈ ಕೆಸರು ಮಾಡಿಕೊಳ್ಳಬೇಡ, ರಕ್ತ ಅಶುದ್ಧ ಮಾಡಿಕೊಳ್ಳಬೇಡ. 30 ವರ್ಷ ರಾಜಕೀಯ ಮಾಡಿದ್ದೇನೆ. ಈಗಲೂ ನಾನು ಕೈ ಮತ್ತು ರಕ್ತವನ್ನು ಅಶುದ್ಧ ಮಾಡಿಕೊಂಡಿಲ್ಲ ಎಂದರು.
ನನ್ನ ಕುಟುಂಬದವರ ಆಸ್ತಿ ನನ್ನದಲ್ಲ: ರಾಮದಾಸ್ ಅವರಿಗೇನು ಕೊರತೆ, ಅರ್ಧ ಮೈಸೂರು ಅವರದ್ದು ಅಂತೆಲ್ಲ ಹೊರಗೆ ಜನ ಮಾತನಾಡುತ್ತಾರೆ. ನನ್ನ ಕುಟುಂಬದಲ್ಲಿ ಉದ್ಯಮಿಗಳಿದ್ದಾರೆ, ಅದರಲ್ಲಿ ತಪ್ಪೇನು? ಅವರ ಬಳಿ ಇರುವ ಯಾವುದೂ ನನ್ನದಲ್ಲ. 1.50 ಲಕ್ಷ ರೂ. ಪೆನ್ಶನ್ ಹಣ ಬರುತ್ತೆ, ನನ್ನ ಜೀವನಕ್ಕೆ ಅಷ್ಟು ಸಾಕು ಎಂದರು.

ನಾನು ಚುನಾವಣಾ ರಾಜಕೀಯ ಮಾಡುವುದಿಲ್ಲ. ರೋಗ ಬಂದಾಗ ಚಿಕಿತ್ಸೆ ಪಡೆಯುವುದು ಬೇರೆ, ಕಾಯಿಲೆಯೇ ಬಾರದ ರೀತಿಯಲ್ಲಿ ಪರಿಸರ ಉಳಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಒಂದು ವರ್ಷದಿಂದ ಅಧ್ಯಯನ ಮಾಡುತ್ತಿದ್ದು, ಶೀರ್ಘದಲ್ಲೇ ಪರಿಸರ ಸಂರಕ್ಷಣಾ ಕಾರ್ಯದ ಮೂಲಕ ಸಾಮಾಜಿಕವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.
Mysore
ಬಿರ್ಸಾ ಮುಂಡ ಜಯಂತಿ: ಕಪ್ಪನಕಟ್ಟೆ ಹಾಡಿಯಲ್ಲಿ ವಾಲಿಬಾಲ್ ಸ್ಪರ್ಧೆ
ಹುಣಸೂರು: ಹುಣಸೂರು ತಾಲೂಕಿನ ಕಪ್ಪನಕಟ್ಟೆ ಹಾಡಿಯಲ್ಲಿ ಭಗವಾನ್ ಬಿರ್ಸಾ ಮುಂಡ ಅವರ 150ನೇ ಜಯಂತಿಯ ಪ್ರಯುಕ್ತ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ವನವಾಸಿ ಕಲ್ಯಾಣ ಸಂಸ್ಥೆ ಹಾಗೂ ಕಪ್ಪನಕಟ್ಟೆ ಹಾಡಿಯ ಯುವಕರ ಬಳಗದಿಂದ ಆಯೋಜನೆ ಮಾಡಲಾಗಿತ್ತು.
ಕಪ್ಪನಕಟ್ಟೆ ಹಾಡಿಯಲ್ಲಿ ಸಂಪೂರ್ಣವಾಗಿ ಜೇನುಕುರುಬ ಜನಾಂಗ ವಾಸವಾಗಿದ್ದು, ಶೇ. 85ರಷ್ಟು ಕುಟುಂಬಗಳು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದಾರೆ. ಮತಾಂತರವನ್ನು ತಡೆಯುವ ಹಾಗೂ ಮಾತೃ ಧರ್ಮಕ್ಕೆ ಮರಳಿ ಕರೆತರುವ ಉದ್ದೇಶದಿಂದ ಈ ಹಾಡಿಯಲ್ಲಿ ಎರಡ್ಮೂರು ವರ್ಷಕ್ಕೊಮ್ಮೆ ಸಂಸ್ಥೆ ವತಿಯಿಂದ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಾಡಿಸಲಾಗುತ್ತಿದೆ.

ಈ ಪಂದ್ಯಾವಳಿಯನ್ನು ಹುಣಸೂರು ತಾಲೂಕಿನ ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿದ್ದ ಸತ್ಯಕೀರ್ತೀ ಅವರು ಸಂಸ್ಥೆಯ ಸ್ಥಾಪನೆಯ ಉದ್ದೇಶ ಹಾಗೂ ಅದರ ಕಾರ್ಯಕ್ರಮಗಳು ಬಗ್ಗೆ ತಿಳಿಸಿದ್ದರು. ಜೊತೆಗೆ ಬಿರ್ಸಾಮುಂಡರ ಜೀವನದ ಬಗ್ಗೆಯೂ ಕೂಡ ಪರಿಚಯಿಸಿದರು.
ಬಿಜೆಪಿ ಕಾರ್ಯಕರ್ತೆ ಸವಿತಾ ಚೌಹಣ್ ಮಾತನಾಡಿ, ಬಿರ್ಸಾಮುಂಡರ ದೈರ್ಯ, ಶೌರ್ಯ, ಅಪಾರವಾದ ಪರಿಸರ ಜ್ಞಾನ, ದೇಶಭಕ್ತಿ ಮತ್ತು ತನ್ನ ಸಮುದಾಯದ ಬಗ್ಗೆ ಇದ್ದ ಕಾಳಜಿ ಬಗ್ಗೆ ವಿವರಿಸಿದರು.

ನಂತರ ಸ್ವಾಮೀಜಿ ಅವರು ಮಾತನಾಡಿ, ಬಿರ್ಸಾ ಮುಂಡ ಪೋಷಕರು ಕ್ರೈಸ್ತ ಮತಕ್ಕೆ ಮಾತಾತ್ತಂತರ ಗೊಂಡಿದ್ದರು. ಆದರೆ ಬಿರ್ಸಾ ಮುಂಡ ಇವರ ಸ್ವಾಭಿಮಾನ ಮತ್ತು ಪ್ರಕೃತಿ ಧರ್ಮದ ಶ್ರೇಷ್ಠತೆ ಅರ್ಥ ಮಾಡಿಕೊಂಡು ತನ್ನ ಮೂಲ ಧರ್ಮಕ್ಕೆ ಪೋಷಕರನ್ನು ಕರೆ ತಂದು, ತಮ್ಮ ಧರ್ಮದ ಬಗ್ಗೆ ಪ್ರಚಾರ ಕೈಗೊಂಡು ಬ್ರಿಟಿಷರು ಅರಣ್ಯ ಕಬಳಿಸುವ ಕ್ರಮದ ವಿರುದ್ಧ ಸಿಡಿದೆದ್ದರು.
ಬ್ರಿಟಿಷ್ ಆಡಳಿತ ಆದಿವಾಸಿಗಳ ಧರ್ಮಬದಲಿಸಿ, ಕಾಡಿನ ಹಕ್ಕು ಕಿತ್ತುಕೊಂಡು ಸ್ವತಂತ್ರ ಮತ್ತು ಸ್ವಾಭಿಮಾನದ ಬದುಕಿಗೆ ಕೊಳ್ಳಿ ಇಟ್ಟರು. ಇದನ್ನು ಪ್ರತಿಭಟಿಸಿ ಬ್ರಿಟಿಷ್ ರಾಣಿ ಆಡಳಿತದ ವಿರುದ್ಧ ಸಮರ ಸಾರಿದರು.
ಇಂತಹ ನಾಯಕನ ಪರಂಪರೆಯ ಆದಿವಾಸಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ವಾಗುವುದು ಅವಮಾನವಲ್ಲವೇ. ನಿಮ್ಮ ಪ್ರಕೃತಿ ಧರ್ಮವನ್ನೇ ಪಾಲಿಸಿ ಎಂದರು.
Mysore
ಚಾಮುಂಡಿಯ ಸನ್ನಿಧಿಯಲ್ಲಿ ಮೊಳಗಿದ ಲಲಿತ ಸಹಸ್ರನಾಮ: ಸಾವಿರಾರು ಭಕ್ತರಿಂದ ಸಾಮೂಹಿಕ ಪಠಣ
ಮೈಸೂರು: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಲಲಿತ ಸಹಸ್ರನಾಮ ಪಠಣ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮುಜರಾಯಿ ಇಲಾಖೆ, ಶ್ರೀಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮುಂಜಾನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಚುಮುಚುಮು ಚಳಿಯನ್ನೂ ಲೆಕ್ಕಿಸದೆ ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು, ದೇವಾಲಯದ ಆವರಣದಲ್ಲಿ ಕುಳಿತು ಲಲಿತ ಸಹಸ್ರನಾಮ ಪಠಿಸಿದರು. ಸಾಮೂಹಿಕವಾಗಿ ಭಕ್ತಿಭಾವದಿಂದ ದೇವಿ ಸ್ಮರಣೆ ಮಾಡಿ ಭಕ್ತಿಭಾವದಲ್ಲಿ ತಲ್ಲೀನರಾದರು. ಬಳಿಕ ದೇವಾಲಯಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು.
ಶಾಸಕ ಜಿ.ಟಿ.ದೇವೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೂಪಾ, ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ಮುಂತಾದವರು ಭಾಗವಹಿಸಿದ್ದರು.
-
Mysore24 hours agoಸಂಜಯ್ ಕುಮಾರ್ಗೆ ಪಿಎಚ್ಡಿ ಪದವಿ
-
Kodagu3 hours agoಹೊದ್ದೂರು ಗ್ರಾಮ ಪಂಚಾಯಿತಿ ಪಿಡಿಓ ಎ.ಎ ಅಬ್ದುಲ್ಲ ವರ್ಗಾವಣೆ :ಬೀಳ್ಕೊಡುಗೆ ಸಮಾರಂಭದಲ್ಲಿ ಗಣ್ಯರ ಅಭಿಮತ
-
Hassan19 hours agoಬೊಲೆರೋ ಪಿಕಪ್ ಟೈರ್ ಬ್ಲಾಸ್ಟ್: ಸ್ಥಳದಲ್ಲೇ ಮೂವರು ಸಾ*ವು
-
State24 hours agoಜಮೀರ್ಗೆ ದೇಶ, ರಾಜ್ಯ ಬೇಡ, ತಮ್ಮ ಮತದಾರರು ಹೆಚ್ಚಾಗಬೇಕು : ಯತ್ನಾಳ್
-
Mysore24 hours agoಸಹಕಾರ ಸಂಘಗಳಿಂದ ರೈತರು ಸವಲತ್ತುಗಳನ್ನು ಪಡೆದು, ಅಭಿವೃದ್ಧಿಪಡಿಸಿಕೊಳ್ಳಿ : ಸಾರಾ ನಂದೀಶ್
-
State22 hours agoಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲಿದ್ದರೆ ಹೋರಾಟ ಮಾಡಲಾಗುವುದು: ಎಸ್.ಟಿ. ಸೋಮಶೇಖರ್
-
Chikmagalur21 hours agoಸೇವಾಲಾಲ್ ಪ್ರೌಢಶಾಲೆಯಲ್ಲಿ ವಿಶೇಷವಾಗಿ ಹೊಸ ವರ್ಷಾಚರಣೆ
-
Chikmagalur19 hours agoರಾಣಿ ಝರಿ ವ್ಯೂ ಪಾಯಿಂಟ್ಗೆ ಟಿಕೆಟ್: ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ
