Connect with us

Hassan

ನಾನು ೧೦ ವರ್ಷ ಸೇವೆ ಸಲ್ಲಿಸಿದ್ದು, ಮುಂದಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಈ ಬಾರಿ ಯುವಕರಿಗೆ ಅವಕಾಶ: ಪಟೇಲ್ ಶಿವಪ್ಪ

Published

on

ಹಾಸನ: ನಾನು ಕಳೆದ ೧೦ ವರ್ಷಗಳಿಂದಲೂ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ತೃಪ್ತಿ ಇದ್ದು, ಮುಂದೆ ಏಪ್ರಿಲ್ ನಂತರ ನಡೆಯುವ ಚುನಾವಣೆಗೆ ನಾನಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಯುವಕರಿಗೆ ಹೆಚ್ಚಿನ ಅವಕಾಶ ಕೊಡುವುದಾಗಿ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನನಗೆ ಕೊಟ್ಟ ಅವಕಾಶದಲ್ಲಿ ಶಕ್ತಿ ಮೀರಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದು, ಮುಂದೆ ನಡೆಯುವ ಚುನಾವಣೆಯಲ್ಲಿ ನಾನು ಅಧ್ಯಕ್ಷ ಸ್ಥಾನದ ಮತ್ತು ನಿರ್ದೇಶಕ ಸ್ಥಾನದ ಅಕಾಂಕ್ಷಿಯಲ್ಲ. ೨೦೧೪ ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಕನಕ ವಿದ್ಯಾರ್ಥಿ ನಿಲಯಕ್ಕೆ ಹಣ ನೀಡಿದ್ದರಿಂದ ಉತ್ತಮ ಕಟ್ಟಡ ತಲೆ ಎತ್ತಿದೆ ಎಂದರು. ೫ ವರ್ಷಗಳಿಗೊಮ್ಮೆ ನಡೆಯುವ ಸಂಘದ ಚುನಾವಣೆಯನ್ನು ಮಾಡಬೇಕಾಗಿದೆ.. ಗಡುವಿನೊಳಗೆ ಸಮುದಾಯದ ಜನರು ನೊಂದಣಿ ಮಾಡಿಕೊಂಡರೆ ನಿರ್ದೇಶಕರ ಆಯ್ಕೆಗೆ ಅನುಕೂಲ ಆಗಲಿದೆ ಎಂದರು. ಜಿಲ್ಲೆಯ ಕನಕ ಭವನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಹೊಸ ಸದಸ್ಯತ್ವಕ್ಕೆ ಅವಕಾಶ ನೀಡಲಾಗಿದೆ. ಒಂದು ಸದಸ್ಯತ್ವಕ್ಕೆ ೫೦೦ ರೂಗಳನ್ನು ಕೊಡಬೇಕು. ಒಂದು ಫೋಟೋ ಹಾಗೂ ಇನ್ನಿತರ ದಾಖಲೆ ನೀಡಿ ನೊಂದಣಿ ಮಾಡಿಸಿಕೊಳ್ಳಬಹುದು. ಜಿಲ್ಲೆಯಲ್ಲಿ ೨ ಲಕ್ಷಕ್ಕೂ ಹೆಚ್ಚಿನ ಕುರುಬ ಸಮಾಜದವರು ಇದ್ದು, ಹೆಚ್ಚಿನ ರೀತಿ ಸದಸ್ಯತ್ವಗೊಂಡರೇ ಉತ್ತಮ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದವರು ಮುಂದೆ ಬರಬೇಕೆಂದರು. ನಾನು ಕಳೆದ ೧೦ ವರ್ಷದಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಯುವಕರಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಬೈಲಾಗೆ ಅನುಗುಣವಾಗಿ ಚುನಾವಣೆ ನಡೆಸಿ ಈ ಬಾರಿ ನಿರ್ದೇಶಕರ ಆಯ್ಕೆಗೆ ದಿನಾಂಕ ಘೋಷಣೆ ಮಾಡಲಾಗುವುದು ಎಂದರು. ಕೆಲಸ ಏಪ್ರಿಲ್ ತಿಂಗಳಿಗೆ ನನ್ನ ಅವಧಿ ಮುಗಿಯಲಿದ್ದು, ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ಹಾಗೂ ಇಚ್ಛಾಶಕ್ತಿ ಹೊಂದಿರುವ ಮುಖಂಡರಿಗೆ ಈ ಬಾರಿ ಅವಕಾಶ ನೀಡಲಾಗುವುದು. ಅವರಿಗೆ ಮಾರ್ಗದರ್ಶನ ನೀಡಿ ನಾವು ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕುರುಬರ ಸಂಘದ ಜಾವಗಲ್ ಮೆಡಿಕಲ್ ಸೋಮಣ್ಣ, ಜಿಲ್ಲಾ ಖಜಾಂಚಿ ಬೀರಪ್ಪ, ನಿರ್ದೇಶಕರಾದ ಸಂತೋಷ್, ಮಾಳಪ್ಪ, ಅರಕಲಗೂಡು ನಿರ್ದೇಶಕ ರಾಮೇಗೌಡ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಕೆಐಎಡಿಬಿಯಿಂದ ಭೂಮಿ ಸ್ವಾಧೀನ, ರೈತರಿಗೆ ಯಾವ ಅನುಕೂಲವಿಲ್ಲ

Published

on

ಹಾಸನ: ತಾಲ್ಲೂಕಿನ ೧೧ ಗ್ರಾಮಗಳ ರೈತರ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಇವರು ಸ್ವಾಧೀನಪಡಿಸಿಕೊಂಡಿದ್ದರಿಂದ ಈಗ ನಮಗೆ ಜಮೀನಿಲ್ಲ. ಪ್ರಸ್ತುತ ರೈತ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ರೈತರಾದ ನಮಗೆ ಯಾವ ಅನುಕೂಲ ಸಿಕ್ಕಿರುವುದಿಲ್ಲ. ರೈತರಿಗೆ ಕನಿಷ್ಠ ಒಂದು ಗುರುತಿನ ಚೀಟಿಯನ್ನಾದರೂ ನೀಡಬೇಕೆಂದು ತಾಲೂಕು ಭೂಸಂತ್ರಸ್ತರ ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಶ್ರೀನಿವಾಸ ಮೂರ್ತಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರೈತರ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊಳೆನರಸೀಪುರ ರಸ್ತೆ ಹಾಸನ ರವರು ಸ್ವಾಧೀನಪಡಿಸಿಕೊಂಡರೂ ಈಗ ನಮಗೆ ಜಮೀನಿಲ್ಲ. ರೈತರಿಗೆ ಯಾವ ಅನುಕೂಲ ಸಿಗಲಿಲ್ಲ. ಹಾಸನ ತಾಲ್ಲೂಕು ಕಸಬಾ ಮತ್ತು ಶಾಂತಿಗ್ರಾಮ ಹೋಬಳಿಗೆ ಸೇರಿದ ಬೊಮ್ಮನಾಯ್ಕನಹಳ್ಳಿ, ಚನ್ನಪಟ್ಟಣ, ಚಿಕ್ಕಬಸವನಹಳ್ಳಿ, ದೊಡ್ಡಬಸವನಹಳ್ಳಿ, ಕೌಶಿಕ, ಸಮುದ್ರವಳ್ಳಿ, ಸಂಕಲಾಪುರ, ಪಿರುಮೇನಹಳ್ಳಿ, ನಾಗತವಳ್ಳಿ, ಕೊಕ್ಕನಘಟ್ಟ, ಹನುಮಂತಪುರ ಸೇರಿ ಒಟ್ಟು ೧೧ ಗ್ರಾಮಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ನೀಡಿರುವ ಜಮೀನಾಗಿದೆ. ಉದ್ಯಮಗಳು ಸ್ಥಾಪಿತವಾಗಿ ಕಾರ್ಯ ಆರಂಭಿಸದೆ ಖಾಲಿ ಜಮೀನಿನಲ್ಲಿ ರೈತರು ನೀಡಿರುವ ಜಮೀನಿನ ಬದಲಾಗಿ ಪ್ರೊರೇಟಾ ದರದಲ್ಲಿ ಅಭಿವೃದ್ಧಿಪಡಿಸಿದ ಜಮೀನನ್ನು ಮಂಜೂರು ಮಾಡುವುದಾಗಿದೆ. ಕೈಗಾರಿಕಾ ಅಭಿವೃದ್ಧಿಗಾಗಿ ಮತ್ತು ಜಮೀನು ನೀಡುವ ಪ್ರತಿ ಮನೆಗೊಬ್ಬ ವ್ಯಕ್ತಿಗೆ ಸ್ಥಾಪಿತವಾಗುವ ಉದ್ಯಮದಲ್ಲಿ ಕೆಲಸ ದೊರಕುತ್ತದೆಂಬ ಆಶ್ವಾಸನೆಗಳ ಮೇರೆಗೆ ನಮ್ಮ ಫಲವತ್ತಾದ ಜಮೀನನ್ನು ಅತ್ಯಂತ ಕಡಿಮೆ ಭೂ ಪರಿಹಾರ ಅಂದರೆ ಎಕರೆ ಒಂದಕ್ಕೆ ರೂ. ೫೦,೦೦೦ ರೂಗಳಿಂದ ರೂ. ೬೦,೦೦೦ ಪಡೆದು ಜಮೀನುಗಳನ್ನು ಭೂಸ್ವಾಧೀನಾಧಿಕಾರಿಗಳ ಮೂಲಕ ಕೈಗಾರಿಕಾ ಅಭಿವೃದ್ದಿ ಪ್ರದೇಶ ಮಂಡಳಿ (ಕೆ.ಐ.ಎ.ಡಿ.ಬಿ) ಇವರಿಗೆ ೧೯೯೦ ರಿಂದ ೧೯೯೩ರ ಅವಧಿಯಲ್ಲಿ ವಹಿಸಿಕೊಟ್ಟಿದ್ದು, ಈರಿ ಸ್ಥಳಗಳಲ್ಲಿ ೧೯೯೩ ರಿಂದ ೨೦೦೮ ಇಸವಿಯವರೆಗೂ ಯಾವುದೇ ಕಾರ್ಖಾನೆಗಳು ಸ್ಥಾಪನೆಯಾಗಿ ಕಾರ್ಯ ಪ್ರಾರಂಭಿಸಿರುವುದಿಲದಿಲ್ಲ. ಕೈಗಾರಿಕೆಯಲ್ಲಿ ರೈತರಿಗೆ ಕೆಲಸ ದೊರಕದೆ ಇದ್ದುದರಿಂದಲೂ ಸ್ಥಳೀಯ ಶಾಸಕರು ರೈತ ಸಂಘಗಳು, ಜನಪ್ರತಿನಿಧಿಗಳ ಮುಖಾಂತರ ಹೋರಾಟ ನಡೆಸಿ ಅದಕ್ಕೆ ಸರ್ಕಾರದಿಂದ ಅನುಕೂಲಕರ ಸ್ಪಂದನೆ ಸಿಗದೆ ಅನಿವಾರ್ಯವಾಗಿ ಕಾನೂನು ರೀತಿ ಹೋರಾಟ ಮುಖಾಂತರ ನಾವು ನೀಡಿದ್ದ ಜಮೀನುಗಳನ್ನು ಹಿಂದಿರುಗಿಸುವಂತೆ ಕಳೆದ ೧೭ ವರ್ಷಗಳಿಂದ ನ್ಯಾಯಾಲಯದಲ್ಲಿ ಮುಂದುವರಿದಿದ್ದೇವೆ. ಹೋರಾಟಕ್ಕೆ ಒಂದು ತಾರ್ತಿಕ ಮತ್ತು ತಾತ್ವಿಕ ಅಂತ್ಯವನ್ನು ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಹೋರಾಟ ಮಾಡುತ್ತಿರುವರವರ ಪರವಾಗಿ ಪರಿಷ್ಕೃತ ಮನವಿಯಂತೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಕೈಗಾರಿಕಾ ಸಚಿವರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು, ಕೈಗಾರಿಕಾ ಇಲಾಖೆ ಕಾರ್ಯನಿರ್ವಾಹಕ ಕಾರ್ಯದರ್ಶಿರವರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಗೌರವಾನ್ವಿತ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಮತ್ತು ಮಾಜಿ ಪ್ರಧಾನಿ ರವರಿಗೂ ಸನ್ಮಾನ್ಯ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ. ರೇವಣ್ಣ ಮತ್ತು ಜಿಲ್ಲಾಧಿಕಾರಿಯವರು ರವರಿಗೆ ೨೦೧೮ ರಲ್ಲಿ ಮನವಿ ಸಲ್ಲಿಸಲಾಗಿತ್ತು. ನಮ್ಮಗಳ ಕಾನೂನು ಹೋರಾಟ ೨೦೦೮ ಕಂದ ಈವರೆಗೆ ಅಂದರೆ ೧೭ ವರ್ಷ ಆಗಿರುವುದರಿಂದ ಒಂದು ತಾರ್ತಿಕ ಮತ್ತು ತಾತ್ವಿಕ ಅಂತ್ಯವನ್ನು ಕಂಡಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ಅಭಿವೃದ್ಧಿಪಡಿಸುವ ಮತ್ತು ತಮ್ಮ ಸ್ವಾಧೀನದಲ್ಲೇ ಖಾಲಿ ಇರುವ ಜಮೀನಿನಲ್ಲಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿನ ಬದಲು ಅದರ ಶೇ.೨೫ ರಷ್ಟು ಅಭಿವೃದ್ಧಿಪಡಿಸಿದ ಜಮೀನನ್ನು ಪ್ರೊರೇಟಾ ದರದಲ್ಲಿ ಮಂಜೂರು ಮಾಡಬೇಕೆಂತಲೂ ಹಾಗೂ ನಮಗೆ ಮಂಜೂರು ಮಾಡುವ ಜಮೀನಿನ ಕ್ಷೇತ್ರಕ್ಕೆ ಈ ಹಿಂದೆ ನೀಡಿದ ಪರಿಹಾರವನ್ನು ಪ್ರೊರೇಟಾ ದರದಲ್ಲಿ ಹಿಂತಿರುಗಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಹಾಸನದ ಮೇಲೆ ತಿಳಿಸಿದ ಗ್ರಾಮಗಳಿಂದ ಸ್ವಾಧೀನಪಡಿಸಿಕೊಂಡ ಜಮೀನಿನ ವ್ಯಕ್ತಿವಾರು ದಾಖಲೆಗಳನ್ನು ಪ್ರಕಟಿಸಿ ಭೂಮಿ ನೀಡಿದ ರೈತರಿಗೆ ಕನಿಷ್ಠ ಒಂದು ಗುರುತಿನ ಚೀಟಿಯನ್ನಾದರೂ ನೀಡಿದರೆ ಸರ್ಕಾರದಲ್ಲಿ ರೈತರು ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವುದರಿಂದ ಗುರುತಿನ ಚೀಟಿ ನೀಡಲು ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಭೂಸಂತ್ರಸ್ತರ ರೈತ ಹೋರಾಟ ಸಮಿತಿಯ ಸುರೇಶ್, ಕಮಲಮ್ಮ, ಪುಟ್ಟಸ್ವಾಮಿಗೌಡ ಇತರರು ಉಪಸ್ಥಿತರಿದ್ದರು.

Continue Reading

Hassan

ಸತ್ಯಮಂಗಲದಲ್ಲಿ ನಮ್ಮ ಕ್ಲಿನಿಕ್ ಗೆ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ

Published

on

ಹಾಸನ: ಹಾಸನ ನಗರದ ಹೋರ ವಲಯದ ಸತ್ಯ ಮಂಗಲ ಬಡಾವಣೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು ನಮ್ಮ ಕ್ಲಿನಿಕ್ ಉದ್ಘಾಟಿಸಿದರು.

ಅದಕ್ಕೂ ಮುನ್ನ ಕ್ಲಿನಿಕ್ ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಆವರಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಅವರು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕ್ಲಿನಿಕ್ ಗೆ ಚಾಲನೆ ನೀಡಿದ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಗ್ರಾಮಸ್ಥರು ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಹಾಸನ ನಗರಸಭೆ ನಗರಪಾಲಿಕೆಯಾಗಿ ಬೆಳೆಯುತ್ತಿವ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳಿಗೆ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಸನಕ್ಕೆ ತರಲಾಗುತ್ತಿದೆ ಎಂದರು.

ಅದರಂತೆ ಸತ್ಯಮಂಗಲಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರು ಒದಗಿಸುವ ಬಹುಮುಖ್ಯ ಕೆಲಸಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಯು ಮುಗಿಯುವ ಹಂತದಲ್ಲಿದೆ. ಅಲ್ಲದೆ ಮನುಷ್ಯನ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಬಹಳ ಮುಖ್ಯ ಇದನ್ನು ಮನಗಂಡು ಅವರ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆಸ್ಪತ್ರೆಗೆ ಅಗತ್ಯ ಇರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತಂದು ಬಡಾವಣೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು .

ಈ ವೇಳೆ ನಗರಸಭೆ ಅಧ್ಯಕ್ಷರು ಸದಸ್ಯರುಗಳು, ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಗ್ರಾಮದ ಮುಖಂಡರು, ಕಾರ್ಯಕರ್ತರು, ಯುವಕರು,ಹಿರಿಯರು, ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು…

Continue Reading

Hassan

ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದಂದು ಮುಸ್ಲಿಂ ಕಾಜಿಯವರಿಂದ ಕುರಾನ್ ಪಟಿಸದಂತೆ ಮನವಿ

Published

on

ಬೇಲೂರು : ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಅಂಗವಾಗಿ ಯಾವುದೇ ರೀತಿಯ ಹಿಂದು ಧರ್ಮಿಯರಿಗೆ ಅವರ ಭಾವನೆಗೆ ದಕ್ಕೆ ಬಾರದಂತೆ ಮುಸ್ಲಿಂ ಕಾಜಿಯವರಿಂದ ಕುರಾನ್ ಪಟ್ಟಣವನ್ನು ನಡೆಸದಂತೆ ಹಿಂದೂ ಸಮಾಜದ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಪೊಲೀಸ್ ಇಲಾಖೆಗೆ ಮತ್ತು ದೇಗುಲದ ಕಾರ್ಯನಿರ್ವಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮುಸ್ಲಿಂ ಕಾಜಿಯವರಿಗೆ ದೇವಾಲಯದ ವತಿಯಿಂದ ಸಂಪ್ರದಾಯದಂತೆ ನೀಡುವ ಕಾಣಿಕೆಯನ್ನು ನೀಡಲಿ ಮತ್ತು ಅವರು ಹಿಂದೆ ನಡೆಯುತ್ತಿದ್ದ ಸಂಪ್ರದಾಯದಂತೆ ದೇವರಿಗೆ ಒಂದನೇ ತಿಳಿಸಿ ಹೋಗಲಿ ಅದನ್ನು ಬಿಟ್ಟು ಕುರಾನ್ ಪಟ್ಟಣವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಹಿಂದೂ ಮುಖಂಡರಾದ ರಘು ಸಕಲೇಶಪುರ ಒತ್ತಾಯಿಸಿದ್ದಾರೆ ಕುರಾನ್ ಪಟ್ಟಣಕ್ಕೆ ಅವಕಾಶ ನೀಡಿದ್ದಾರೆ ಇದಕ್ಕೆ ಸಂಪೂರ್ಣ ಹೊಣೆಯನ್ನ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

Continue Reading

Trending

error: Content is protected !!