Cinema
ಬಿಗ್ಬಾಸ್ ಸೀಸನ್ 11: ಮೀಸಲಾತಿ ಮೂಲಕ ಹನುಮಂತು ಫೈನಲ್ಸ್ ತಲುಪಿದ್ದಾರೆ ಎಂದ ನಟಿ ಹಂಸ

ಬೆಂಗಳೂರು: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್-11ರ ಸ್ಪರ್ಧಿಯಾಗಿರುವ ನಟಿ ಹಂಸ ಅವರು ಬಿಗ್ಬಾಸ್ನ ಗ್ರ್ಯಾಂಡ್ ಫಿನಾಲೆ ಅಭ್ಯರ್ಥಿ ಹನುಮಂತು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹನುಮಂತು ಬಿಗ್ಬಾಸ್ ಫಿನಾಲೆಗೆ ತಲುಪಿರುವ ಬಗ್ಗೆ ಕುಹಕವಾಡಿರುವ ಹಂಸ, ಮೀಸಲಾತಿ, ಸಿಂಪತಿ ಮೂಲಕ ಫೈನಲ್ಸ್ ತಲುಪಿದ್ದು, ಹಳ್ಳಿ ಪ್ರತಿಭೆ ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಇರುತ್ತಲ್ಲಾ, ಜನರಲ್ ಕ್ಯಾಟಗರಿ ಅವರು ಪೂರ್ತಿ ಹಣ ಪಾವತಿಸಿ ಶಿಕ್ಷಣ ಪಡೆಯಬೇಕು, ಆದರೆ ಬೇರೆ ಕ್ಯಾಟಗರಿಯವರು ಕಡಿಮೆ ಶುಲ್ಕ ಪಾವತಿಸಿದರೇ ಸಾಕು. ಇಲ್ಲಿ ನಾವು ಎಷ್ಟೆ ಓದಿದರು ಸಹಾ ನೌಕರಿ ವಿಚಾರವಾಗಿ ಮೊದಲ ಆದ್ಯತೆ ಅವರಿಗೆ ಇರುತ್ತದೆ. ಇದರಲ್ಲಿ ನಮ್ಮನ್ನು ಕಡೆಗಣಿಸಲಾಗಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹಾ ಇದೇ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.
ಜೊತೆಗೆ ರಿಯಾಲಿಟಿ ಶೋಗಳಲ್ಲಿ ಸಿಂಪತಿಗಳೆಲ್ಲವೂ ಚೆನ್ನಾಗಿ ವರ್ಕ್ ಆಗುತ್ತದೆ. ಉಳ್ಳವರನ್ನು ಗೆಲ್ಲಿಸುವ ಬದಲು ಹಳ್ಳಿಯಿಂದ ಬಂದವರನ್ನು ಗೆಲ್ಲಿಸೋಣ ಎಂಬ ಮನಸ್ಥಿತಿ ಇಲ್ಲಿ ಹೆಚ್ಚಾಗುತ್ತಿದೆ. ಜನರು ಸಹಾ ಅಂಥವರನ್ನೇ ಗೆಲ್ಲಿಸುತ್ತಾರೆ ಎಂದು ನಟಿ ಹಂಸ ದೂರಿದ್ದಾರೆ.
Cinema
ಡಾಲಿ ಧನಂಜಯ್ ವಿವಾಹ ಮಹೋತ್ಸವ: ಶುಭ ಕೋರಿದ ರಾಜ್ಯಪಾಲ ಗೆಹ್ಲೋಟ್

ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರು ವೈದ್ಯೆ ಧನ್ಯತಾ ಜೊತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ಈ ಕ್ಯೂಟ್ ಕಪಲ್ನ ವಿವಾಹ ಇದೇ ಫೆ.15 ಮತ್ತು 16 ರಂದು ನಡೆಯುತ್ತಿದೆ. ಈ ಅದ್ದೂರಿ ವಿವಾಹ ಮಹೋತ್ಸವ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಪಾರ್ಕಿಂಗ್ ಯಾರ್ಡ್ನಲ್ಲಿ ಆಯೋಜಿಸಲಾಗಿದೆ.
ಈ ಹಿನ್ನೆಯಲ್ಲಿ ಶನಿವಾರ ನಡೆದ ವಿವಾಹ ಮಹೋತ್ಸವದ ಆರತಕ್ಷತೆ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಆಗಮಿಸಿ, ನವ ದಂಪತಿಗಳಿಗೆ ಶುಭ ಕೋರಿದರು.
ಇದಲ್ಲದೇ ಕನ್ನಡದ ಖ್ಯಾತ ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರುಳಿ, ದಿವಂಗತ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಅರುಣ್ ಸಾಗರ್ ಸೇರಿದಂತೆ ಹಲವರು ಭಾಗವಹಿಸಿ ನವ ಜೋಡಿಗೆ ಶುಭ ಕೋರುತ್ತಿದ್ದಾರೆ.
Cinema
ದುನಿಯಾ ವಿಜಯ್ ನಟನೆಯ ʼʼಮಾರುತʼ ಸಿನಿಮಾದ ಡಬ್ಬಿಂಗ್ ಪೂರ್ಣ

ದುನಿಯಾ ವಿಜಯ್ ನಟನೆಯ ʼಮಾರುತʼ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಡಬ್ಬಿಂಗ್ ಕೂಡ ಮುಗಿಸಿದೆ.
ಎಸ್. ನಾರಾಯಣ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಮುಖ್ಯಭೂಮಿಕೆಯಲ್ಲಿದ್ದು, ವಿಜಯ್ಗೆ ನಾಯಕಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಳ್ಳುತ್ತಿದ್ದಾರೆ.
ʼಮಾರುತʼ ಚಿತ್ರವನ್ನು ಈಶಾ ಪ್ರೊಡಕ್ಸನ್ ಲಾಂಛನದಲ್ಲಿ ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ ಮಾಡಿದ್ದಾರೆ.
ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ ತಾರಾಬಳಗದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ರವಿಂಚದ್ರನ್ ನಟಿಸಿದ್ದಾರೆ.
Cinema
ಮುತ್ತುರಾಜ್ ಅಭಿಮಾನಿ ಮನೆಗೆ ಯುವರಾಜ್ ಕುಮಾರ್ ಭೇಟಿ

ಶ್ರೀರಂಗಪಟ್ಟಣ: ಗಂಜಾಮ್ ನಲ್ಲಿರುವ ಡಾ.ರಾಜ್ ಕುಮಾರ್ ಅಭಿಮಾನಿ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜು ರವರ ನೂತನ ಮನೆಗೆ ಯುವ ನಾಯಕನಟ ಯುವರಾಜ್ ಕುಮಾರ್ ಭೇಟಿ ನೀಡಿ ಶುಭ ಹಾರೈಸಿದರು.
ವರನಟರಾದ ನಮ್ಮ ತಾತನ ಅಭಿಮಾನಿಯ ಕುಟುಂಬದ ಕರೆಗೆ ಓಗೊಟ್ಟು ಅವರ ಮನೆಗೆ ಬಂದಿದ್ದು, ತಮ್ಮ ಕುಟುಂಬದ ಮೇಲೆ ಇಟ್ಟಿರೋ ಅಭಿಮಾನಕ್ಕೆ ಚಿರ ಋಣಿಯಾಗಿರುವುದಾಗಿ ತಿಳಿಸುದ್ದಾರೆ.
ಇದೇ ವೇಳೆ ಅಭಿಮಾನಿ ಕುಟುಂಬವು ಯುವರಾಜ್ ಕುಮಾರ್ ರನ್ನು ಆತ್ಮೀಯವಾಗಿ ಸನ್ಮಾನಿಸಿ ತಮ್ಮ ನೂತನ ಮನೆಯ ಗೋಡೆಯ ಮೇಲೆ ಯುವರಾಜ್ ಕುಮಾರ್ ರಿಂದ ಹಸ್ತಾಕ್ಷರ ಪಡೆದು ಸಂತಸ ವ್ಯಕ್ತಪಡಿಸಿದರು.
-
Mysore19 hours ago
ಲೋಕಾಯುಕ್ತ ಬಲೆಗೆ ಬಿದ್ದ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಶಿವಶಂಕರ್
-
Kodagu19 hours ago
ಸುಗ್ರಿವಾಜ್ಞೆ ಅನುಷ್ಠಾನಕ್ಕೂ ಮೊದಲು ಬಡವರ ಸಾಲಮನ್ನಾ ಮಾಡಲಿ: ಯುವ ಜೆಡಿಎಸ್ ಆಗ್ರಹ
-
Kodagu22 hours ago
ಯುವ ಕಾಂಗ್ರೆಸ್ಗೆ ನೀಡಿದ್ದ ರಾಜೀನಾಮೆ ಹಿಂಪಡೆದ ಅನೂಪ್ ಕುಮಾರ್
-
Mysore19 hours ago
ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಕೆ ಮಾಡಬೇಕು: ಪುರುಷೋತ್ತಮ ಬಿಳಿಮಲೆ
-
Mandya19 hours ago
ಮತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವತಿಯರು ಸಾ**ವು
-
Mandya21 hours ago
ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನದೊಳಗಾಗಿ ಹಣ ಪಾವತಿ ಮಾಡಿ: ಡಾ.ಕುಮಾರ
-
Tech12 hours ago
ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ವಿವೋ ಕಂಪನಿಯ Vivo V50 ಹೊಸ ಫೋನ್ ಬಿಡುಗಡೆ : ಬೆಲೆ ಎಷ್ಟು?
-
Hassan17 hours ago
ಹಾಸನ ವಿಮಾನ ನಿಲ್ದಾಣದ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ: ಎಚ್ಡಿ ಕುಮಾರಸ್ವಾಮಿ