Hassan
ಗ್ರಾಮದ ಅನುಕೂಲಕ್ಕೆ ಗೋಮಾಳ ಸರಕಾರಿ ಭೂಮಿ ನೀಡಲಿ

ಜಿಪಂ ಮುಂದೆ ಜಿಲ್ಲಾ ಮಂತ್ರಿಗಾಗಿ ಕಾದು ಕುಳಿತ ಗ್ರಾಮಸ್ಥರು
ಹಾಸನ : ತಾಲೂಕು ಶಾಂತಿಗ್ರಾಮ ಹೋಬಳಿ ಕೌಶಿಕ ಗ್ರಾಮದಲ್ಲಿರುವ ಗೋಮಾಳವಾದ ಸರ್ಕಾರಿ ಜಮೀನನ್ನು ಗ್ರಾಮಸ್ತರುಗಳ ಅನುಬೋಗಕ್ಕೆ ಸಂರಕ್ಷಣೆ ನೀಡುವುದರ ಜೊತೆಗೆ ಈ ಜಮೀನನ್ನು ಯಾವುದೇ ಅನ್ಯ ಉದ್ದೇಶಗಳಿಗೆ ಮಂಜೂರು ಮಾಡದೆ ಗ್ರಾಮಸ್ತರುಗಳು ಜಾನುವಾರಗಳನ್ನು ಮೇಯಿಸಲು ಹಾಗೂ ಗ್ರಾಮದ ಮೂಲ ಭೂತ ಸೌಲಭ್ಯಗಳಿಗೆ ಬಳಸಲು ಅನುಕೂಲ ಮಾಡಿ ಕೊಡಲು ಆಗ್ರಹಿಸಿ ಜಿಲ್ಲಾ ಪಂಚಾಯತಿ ಮುಂದೆ ಕುಳಿತು ಜಿಲ್ಲಾ ಉಸ್ತುವಾರಿ ಸಚಿವರ ಆಗಮನಕ್ಕೆ ಕಾದು ಕುಳಿತರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರು ಜಿಲ್ಲಾ ಪಂಚಾಯತಿ ಸಭೆಯಲ್ಲಿ ಪಾಲ್ಗೊಂಡಿದ್ದು, ವಾಪಸ್ ಬರುವವರೆಗೂ ಹೊರಗೆ ಕಾದು ಕುಳಿತರು. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ ಮತ್ತು ಗ್ರಾಮಸ್ಥರಾದ ರಾಧ ಮಾಧ್ಯಮದೊಂದಿಗೆ ಮಾತನಾಡಿ, ಕೌಶಿಕ ಗ್ರಾಮದ ಗ್ರಾಮಸ್ತರುಗಳಾದ ನಾವು ತಮ್ಮಲ್ಲಿ ಈ ಮೂಲಕ ಬಿನ್ನವಿಸಿಕೊಳ್ಳುವುದೇನೆಂದರೆ, ಹಾಸನ ತಾಲ್ಲೋಕು, ಶಾಂತಿಗ್ರಾಮ ಹೋಬಳಿ. ಕೌಶಿಕ ಗ್ರಾಮದ ಸರ್ವೆ ನಂಬರ್ ೩೨೮ ಮತ್ತು ೩೨೯ ರಲ್ಲಿ ಒಟ್ಟು ೭೨.೨೩ ಎಕರೆ ಗೋಮಾಳದ ಜಮೀನು ಇದ್ದು. ಇದರಿಂದ ಕೌಶಿಕ ಗ್ರಾಮದವರುಗಳಿಗೆ ತುಂಬಾ ಅನುಕೂಲಕರವಾಗಿರುತ್ತೆ. ಈ ಗೋಮಾಳದ ಜಮೀನಿನಿಂದಾಗಿ ಗ್ರಾಮದ ಹಲವಾರು ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿಕೊಂಡು ಜೀವನ ನೆಡೆಯಿಸಿಕೊಂಡು ಬಂದಿದ್ದು, ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಇದಲ್ಲದೆ ಗ್ರಾಮದ ಜಾನುವಾರುಗಳಿಗೆ ಮೇಯಿಸಲು ಈ ಗೋಮಾಳದ ಜಮೀನನ್ನು ಬಿಟ್ಟು ಬೇರೆ ಯಾವುದೇ ಜಮೀನು ಇರುವುದಿಲ್ಲ. ಗೋಮಾಳದ ಜಮೀನಿನಲ್ಲಿ ಪ್ರತಿನಿತ್ಯ ಸಾವಿರಾರು ಜಾನುವಾರುಗಳು ಮೇಯುತ್ತಿದ್ದು, ಇದರಿಂದ ಗ್ರಾಮದವರಿಗೆ ತುಂಬಾ ಪ್ರಯೋಜನವಾಗಿರುತ್ತೆ. ಗೋಮಾಳದ ಜಮೀನಿನಲ್ಲಿ ಒಂದು ಕೆರೆಯು ಸಹಾ ಇದ್ದು, ಇದು ಗ್ರಾಮದ ನೂರಾರು ಎಕರೆ ಜಮೀನಿಗೆ ನೀರಿನ ಆಸರೆಯಾಗಿದ್ದು, ಹಲವಾರು ಕುಟುಂಬದವರಿಗೆ ಜೀವನಾಧಾರವಾಗಿರುತ್ತೆ. ಈ ಗೋಮಾಳದ ಜಮೀನು ಕೌಶಿಕ ಗ್ರಾಮದವರುಗಳಿಗೆ ಅತ್ಯವಶ್ಯಕವಾಗಿ ಬೇಕಾಗಿದ್ದು, ಈ ಗೋಮಾಳವಿಲ್ಲದೆ ಹೋದಲ್ಲಿ ಗ್ರಾಮಸ್ತರುಗಳ ಜೀವನವು ಆತಂತ್ರವಾಗಿ ಬದುಕು ದುಸ್ತರವಾಗುತ್ತೆ ಎಂದರು.
ಈ ಗೋಮಾಳದ ಜಮೀನನ್ನು ಗ್ರಾಮಸ್ತರುಗಳು ತಮ್ಮ ಪೂರ್ವಿಕರ ಕಾಲದಿಂದಲೂ ಶಾಂತಿಯುತವಾಗಿ ಏನೊಂದೂ ಅಡ್ಡಿ ಆತಂಕಗಳಿಲ್ಲದೆ ಅನುಭವಿಸಿಕೊಂಡು ಬರುತ್ತಿರುತ್ತಾರೆ. ಈಗ್ಗೆ ಕೆಲವು ದಿನಗಳ ಹಿಂದೆ ಕೆ.ಐ.ಏ.ಡಿ.ಬಿ. ಸಂಸ್ಥೆಯ ಅಧಿಕಾರಿಗಳು ಗೋಮಾಳದ ಜಮೀನಿನ ಬಳಿ ಬಂದು ಈ ಜಮೀನು ತಮ್ಮ ಸಂಸ್ಥೆಗೆ ಮಂಜೂರಾಗಿರುವುದೆಂದು ಹೇಳಿಕೊಂಡು ಕೌಶಿಕ ಗ್ರಾಮಸ್ತರುಗಳ ಅನುಭೋಗಕ್ಕೆ ಅಡ್ಡಿಪಡಿಸಲು ಮುಂದಾಗಿದ್ದು, ಗ್ರಾಮಸ್ಥರುಗಳೆಲ್ಲರೂ ಸೇರಿಕೊಂಡು ಸಂಸ್ಥೆಯ ಅಧಿಕಾರಿಗಳಿಗೆ ಗ್ರಾಮದವರುಗಳಿಗೆ ಗೋಮಾಳದ ಜಮೀನಿನ ಅಗತ್ಯತೆ ಹಾಗೂ ಅನಿವಾರತೆಯ ಬಗ್ಗೆ ಮನದಟ್ಟು ಮಾಡಿಸಿ .ಗ್ರಾಮಸ್ತರುಗಳು ಅನಾದಿಕಾಲದಿಂದಲೂ ಜಮೀನನ್ನು ಅನುಭವಿಸಿಕೊಂಡು ಬರುತ್ತಿರುವುದರ ಬಗ್ಗೆ ವಿವರವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಗ್ರಾಮದವರಿಗೆ ಈ ಗೋಮಾಳದ ಜಮೀನು ಅತ್ಯಗತ್ಯವಾಗಿ ಬೇಕಾಗಿದ್ದು .ಜಾನುವಾರುಗಳಿಗೆ ಹಾಗೂ ಗ್ರಾಮದ ಮೂಲಭೂತ ಸೌಲಭ್ಯಗಳಿಗೆ ಈ ಜಮೀನು ಅತ್ಯಗತ್ಯವಾಗಿ ಬೇಕಾಗಿರುವುದು ಮಾತ್ರವಲ್ಲದೆ ಗೋಮಾಳದ ಜಮೀನನ್ನು ಕೆ.ಐ.ಏ.ಡಿ.ಬಿ. ಸಂಸ್ಥೆಗೆ ಮಂಜೂರು ಮಾಡಲು ಕಾನೂನು ರೀತ್ಯ ಅವಕಾಶವಿಲ್ಲವೆಂದು ತಿಳಿಸಿದ್ದರ ಮೇರೆಗೆ ಸಂಸ್ಥೆಯ ಅಧಿಕಾರಿಗಳು ಗ್ರಾಮಸ್ತರುಗಳ ಅನುಭೋಗಕ್ಕೆ ಅಡ್ಡಿಪಡಿಸದೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚೆರ್ಚಿಸಿ ಈ ಗೋಮಾಳದ ಜಮೀನಿಗೆ ಬದಲಾಗಿ ತಮ್ಮ ಸಂಸ್ಥೆಗೆ ಬೇರೆ ಕಡೆ ಜಮೀನು ಹೊಂದುವುದಾಗಿ ಭರವಸೆಯನ್ನು ನೀಡಿ ಗೋಮಾಳದ ಜಮೀನಿನ ಗ್ರಾಮಸ್ತರುಗಳ ಅನುಭೋಗಕ್ಕೆ ಯಾವುದೇ ತೊಂದರೆಯನ್ನು ನೀಡದೆ ಹೊರಟು ಹೊಗಿರುತ್ತಾರೆ. ಗ್ರಾಮಸ್ತರುಗಳು ಕೂಡಲೇ ಜಿಲ್ಲಾಧಿಕಾರಿಗಳನ್ನು ಕಂಡು ಗ್ರಾಮದ ಗೋಮಾಳದ ಜಮೀನನನ್ನು ಕೆ.ಐ.ಏ.ಡಿ.ಬಿ. ಸಂಸ್ಥೆಗೆ ಮಂಜೂರು ಮಾಡಿ ಆದೇಶಿಸಿರುವುದನ್ನು ರದ್ದುಪಡಿಸಿ ಗ್ರಾಮಕ್ಕೆ ಗೋಮಾಳವನ್ನು
ಉಳಿಸಿಕೊಡುವಂತೆ ಮನವಿ ಮಾಡಿದರು.
ಇದೆ ವೇಳೆ ಗ್ರಾಮಸ್ಥರಾದ ಅಶೋಕ್, ರಂಗಸ್ವಾಮಿ, ಹನುಮಂತೇಗೌಡ, ನಸಿಂಹ, ಪ್ರಭು, ರಾಣಿ, ಗಂಗಮ್ಮ, ಪದ್ಮಮ್ಮ, ಈರೇಗೌಡ ಇತರರು ಉಪಸ್ಥಿತರಿದ್ದರು.
Hassan
ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ

ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ತಾಲ್ಲೂಕಿನ ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್ಲಾ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕುಮಾರ್ ಅವರು ಅವಿರೋಧ ಆಯ್ಕೆ ಘೋಷಿಸಿದರು.
ಸಾಮಾನ್ಯ ಕ್ಷೇತ್ರದಿಂದ ಕೆ.ಕೆ. ಜಯರಾಮ, ಹೆಚ್.ಎಂ. ನಾರಾಯಣ, ಕೆ.ಟಿ. ಬೋರೇಗೌಡ, ಸುಬ್ಬೇಗೌಡ, ವೆಂಕಟೇಗೌಡ, ಮಹಿಳಾ ಕ್ಷೇತ್ರದಿಂದ ಶಕುಂತಲ, ಪ್ರತಿಮ, ನಂಜಶೆಟ್ಟಿ (ಹಿಂದುಳಿದ ವರ್ಗ ಎ), ಕೆ. ಜಗದೀಶ್ (ಹಿಂದುಳಿದ ವರ್ಗ ಬಿ), ರಂಗಸ್ವಾಮಿ (ಪ.ಜಾ.) ಹಾಗು ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸದ ಹಿನ್ನಲೆಯಲ್ಲಿ ಸ್ಥಾನ ಖಾಲಿಯಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಸಿ. ಸಂತೋಷ್ ಅವರು ಆಯ್ಕೆಯಾದರು. 2030ರ ಫೆ. 9ರ ವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ.
ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕುಮಾರಸ್ವಾಮಿ, ನಂಜೇಶ್ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.
Hassan
ಫೆ.11 ರಿಂದ 13 ವರೆಗೆ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ

ಬೇಲೂರು: ಬೇಲೂರಿನ ಚನ್ನಾಪುರ ರಸ್ತೆಯಲ್ಲಿರುವ ಕೋವಿಪೇಟೆಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ ಫೆ. 11 ರಿಂದ ಫೆ.13ರ ವರೆಗೂ ನಡೆಯಲಿದೆ, ಪ್ರತಿಯೊಬ್ಬ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇಗುಲದ ಪ್ರಧಾನ ಅರ್ಚಕ ರವಿಸ್ವಾಮಿ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಫೆ.11 ಮಂಗಳವಾರ ಸಂಜೆ 6.00 ಗಂಟೆಗೆ ಗಂಗಪೂಜೆ ಮತ್ತು ಕಳಸ ಸ್ಥಾಪನೆ, ಪಂಚಾಮೃತ, ಅಭಿಷೇಕ, ಗಣ ಹೋಮ, ನವಗ್ರಹ ಹೋಮ ಚಂಡಿ ಹೋಮ, ದುರ್ಗಾ ಹೋಮ, ಜಯಾವಿ ಹೋಮಗಳು ನಡೆಯುತ್ತದೆ.
ಫೆ.12 ರ ಬುಧವಾರ ಬೆಳಗ್ಗೆ 8.00 ಗಂಟೆಗೆ 12.30 ವರೆಗೂ ಬೇಲೂರಿನ ವಿಷ್ಣು ಸಮುದ್ರದಲ್ಲಿ (ಅಷ್ಟಮ್ಮನಕೆರೆ) “ಗಂಗಾ ಪೂಜೆ’ ನಂತರ ನಗರದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ನಂದಿ ಧ್ವಜ ಮತ್ತು ಚೌಡಿಕೆ ಪದಗಳೊಂದಿಗೆ ಹಲವು ವಾದ್ಯ ಗೋಷ್ಠಿಯೊಂದಿಗೆ 101 ಕುಂಭಾಷೇಕಗಳೊಂದಿಗೆ ಪ್ರಷಾಲಂಕಾರಗೊಂಡ ಶ್ರೀ ರೇಣುಕಾ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮತ್ತು ಬೆಳಗ್ಗೆ 11.30 ಕ್ಕೆ “ಶ್ರೀ ರೇಣುಕಾ ಯಲ್ಲಮ್ಮನವರ ಕೆಂಡೋತ್ಸವ” ನಡೆಯುತ್ತದೆ. ನಂತರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ಇರುತ್ತದೆ. “ಮದ್ಯಾಹ್ನ 1-00 ಗಂಟೆಗೆ ಅನ್ನ ಸಂತರ್ಪಣೆ” ನಡೆಯುತ್ತದೆ.
ಫೆ.13 ರ ಬೆಳಿಗ್ಗೆ 8.00 ರಿಂದ ಶ್ರೀ ಹುಚ್ಚಂಗಿ ಅಮ್ಮನವರ ಜಾತ್ರಾ ಮಹೋತ್ಸವ ಉತ್ಸವ” ಬೆಳಗ್ಗೆ 10.30 ರಿಂದ ಸಂಜೆ 6.00 ರವರೆಗೆ ದೇವಿಗೆ ಹರಕೆ ಸೇವೆ ಇರುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ತನು, ಮನ, ಧನ ಸಹಾಯದೊಂದಿಗೆ ಸಹಕರಿಸಿ ಶ್ರೀ ದೇವಿಯವರ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Hassan
ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ ಕಂಪನಿಗೆ ಒಂದು ಲಕ್ಷ ರೂ. ದಂಡ

ಚಾಮರಾಜನಗರ, ಫೆ.06:- ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ್ದ ತಮಿಳುನಾಡಿನ ಕಂಪನಿಯೊಂದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ನ್ಯಾಯನಿರ್ಣಾಯಕ ಅಧಿಕಾರಿ ಗೀತ ಹುಡೇದ ಅವರು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಹನೂರು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಸ್ಟೋರ್ ಗೆ ಕಳೆದ 2024ರ ಜುಲೈ 29ರಂದು ಕೊಳ್ಳೇಗಾಲ ತಾಲ್ಲೂಕಿನ ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅಂಗಡಿಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ವಿ.ಕೆ.ಎಸ್.ಟ್ರೂ ಸಾಲ್ಟ್ (VKS TRUE SALT) ಎಂಬ ಹೆಸರಿನ ಉಪ್ಪಿನ ಆಹಾರ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.
ಸದರಿ ಉಪ್ಪಿನ ಮಾದರಿಯು ವಿಶ್ಲೇಷಣಾ ವರದಿಯಿಂದ ಕಳಪೆ ಗುಣಮಟ್ಟ (ಸಬ್ ಸ್ಟ್ಯಾಂಡರ್ಡ್) ಎಂದು ದೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಮೊಕದ್ದಮೆ ಹೂಡಲಾಗಿತ್ತು.
ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಾಯಕ ಅಧಿಕಾರಿಗಳಾದ ಗೀತಾ ಹುಡೇದ ಅವರು ಪ್ರಕರಣದ ವಿಚಾರಣೆ ನಡೆಸಿ ತಯಾರಕರಾದ ತಮಿಳುನಾಡಿನ ತೂತುಕುಡಿಯ ವಿ.ಕೆ.ಎಸ್. ಪುಡ್ ಪ್ರಾಡಕ್ಟ್ಸ್ ಕಂಪನಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮ ನಿಬಂಧನೆ 2011ರ ರಿತ್ಯಾ ಸೆಕ್ಷನ್ 51 ರಡಿಯಲ್ಲಿ ಒಂದು ಲಕ್ಷ ರೂ. ದಂಡ ವಿಧಿಸಿ ಫೆಬ್ರವರಿ 3 ರಂದು ಆದೇಶಿಸಿದ್ದಾರೆ.
-
State13 hours ago
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ
-
Kodagu10 hours ago
ಕೊಡವಾಮೆ ಬಾಳೋ ಪಾದಯಾತ್ರೆ: ಮಧ್ಯ ಮಾರಾಟ ನಿಷೇಧ
-
Chamarajanagar10 hours ago
ಚಿಕ್ಕಮಗಳೂರು: ನಕ್ಸಲ್ ರವೀಂದ್ರಗೆ ಸೇರಿದ್ದು ಎನ್ನಲಾದ ಬಂದೂಕು ಪತ್ತೆ?
-
Kodagu14 hours ago
ಫೆ.7 ರ ಕೊಡವ ಪಾದಯಾತ್ರೆಗೆ ಸಿಎನ್ ಸಿ ಬೆಂಬಲ
-
Kodagu9 hours ago
ಕೊಟ್ಟಮುಡಿ ಝೀನತ್ ಯುವಕ ಸಂಘ ಅಧ್ಯಕ್ಷರಾಗಿ ಸೌಕತ್ ಆಯ್ಕೆ
-
Hassan8 hours ago
ಎಂಸಿಇ ಕಾಲೇಜು ಉಪಾಧ್ಯಕ್ಷರಿಗೆ ವೀರಶೈವ ಲಿಂಗಾಯತ ಮಹಾಸಭಾದಿಂದ ಸನ್ಮಾನ
-
Hassan9 hours ago
ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
-
Sports11 hours ago
ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಆಲ್ರೌಂಡರ್ ಸ್ಟೋಯ್ನಿಸ್