Mandya
ಕೃಷಿ ಉತ್ಪನ್ನಗಳಿಗೆ ಸರ್ಕಾರ ಗಳು ವೈಜ್ಞಾನಿಕ ಬೆಲೆ ನಿಗಧಿ ಪಡಿಸಲಿ :ಜಿ. ಧನಂಜಯ ದರಸಗುಪ್ಪೆ ಆಗ್ರಹ

ಶ್ರೀರಂಗಪಟ್ಟಣ : ರೈತರ ಕೃಷಿ ಉತ್ಪನ್ನಗಳಿಗೆ ಸರ್ಕಾರಗಳು ವೈಜ್ಞಾನಿಕ ಬೆಲೆ ನಿಗಧಿಪಡಿಸದಿದ್ದಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿ ಆಹಾರ ಕೊರತೆ ಎದುರಾಗುವುದು ಖಚಿತ ಎಂದು, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿಬಾಲಕಿಯರ ಪ್ರೌಢಶಾಲೆ ಶಾಲೆಯಲ್ಲಿ, ಶ್ರೀರಂಗಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ, ದಿ.ತುಕ್ಕೋಜಿರಾವ್ ಮತ್ತು ಶ್ರೀಮತಿ ಸುಶೀಲಭಾಯಿ ದತ್ತಿ ಹಾಗೂ ಶ್ರೀ ಬಿ. ಸಿ.ಸಿದ್ದಪ್ಪ ಮತ್ತು ಹೆಚ್. ಸರಸ್ವತಮ್ಮ ಸ್ಮಾರಕ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ನೀರಿನ ಕೊರತೆ, ವಾತಾವರಣದ ಏರುಪೇರು,ಬಿತ್ತನೆ ಬೀಜ, ಗೊಬ್ಬರ, ದುಬಾರಿ ಕೂಲಿ,ಸುಧಾರಿಸದ ಮಾರುಕಟ್ಟೆ ವ್ಯವಸ್ಥೆ,ಸಾಗಾಣಿಕೆ ಹಾಗೂ ಶೀತಲಗೃಹಗಳ ಕೊರತೆಯಿಂದ ಜರ್ಜರಿತವಾಗಿರುವ ರೈತರಿಗೆ ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ಸರ್ಕಾರಗಳು ವೈಜ್ಞಾನಿಕ ಬೆಲೆ ನಿಗಧಿಪಡಿಸದಿದ್ದಲ್ಲಿ ಕೃಷಿ ಉದ್ಯೋಗದಿಂದ ರೈತರು ವಿಮುಖವಾಗುವ ದಿನ ದೂರವಿಲ್ಲ. ಹಾಗಾಗಿ ಸರ್ಕಾರಗಳು ಕೃಷಿಯನ್ನು ಉದ್ದಿಮೆಯ ರೀತಿಯಲ್ಲಿ ಪರಿಗಣಿಸಿ ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕೆ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ಸಂಪನ್ಮೂಲ ವ್ಯಕ್ತಿ ಸತ್ಯಮೂರ್ತಿ ಉಪನ್ಯಾಸ ನೀಡುತ್ತಾ, ಭಾರತ ಮೂಲತಃ ಕೃಷಿ ಆಧಾರಿತ ದೇಶ, ಕೃಷಿ ಹಾಗೂ ಸಂಬಂಧಿತ ಕೈಗಾರಿಕೆ ನಂಬಿ ಸಾಕಷ್ಟು ಮಂದಿ ಬದುಕು ದೂಡುತ್ತಿದ್ದಾರೆ. ಈ ಸಂಕಷ್ಟ ದಲ್ಲಿಯೂ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದು, ಸರ್ಕಾರಗಳು ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸದಿದ್ದಲ್ಲಿ ಮುಂದೆ ಗಂಡಾಂತರ ಎದುರಿಸಬೇಕಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಆಶಾಲತ ಪುಟ್ಟೇಗೌಡ, ಸಾಧಕಿ ಸ್ತ್ರೀ ಪ್ರಶಸ್ತಿ ಪುರಸ್ಕೃತ ಸರಸ್ವತಿ ಬಸವರಾಜು ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀರಂಗಪಟ್ಟಣ ತಾಲ್ಲೂಕಿನ ಕ. ಸಾ. ಪ. ಅಧ್ಯಕ್ಷ ಬಿ. ಮಂಜುನಾಥ ಬಲ್ಲೇನಹಳ್ಳಿ,ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತಾಲೂಕಿನಲ್ಲಿರುವ ಸಾಧಕರ ಕುಟುಂಬದವರು ಅವರ ಹೆಸರಿನಲ್ಲಿ ದತ್ತಿ ಇಡುವ ಮೂಲಕ ಮುಂದಿನ ಜನಾಂಗಕ್ಕೆ ಅವರ ಸಾಧನೆ ಬಗ್ಗೆ ತಿಳಿಸುವಂತಾಗಲು ಮುಂದಾಗಬೇಕೆಂದು ಮನವಿ ಮಾಡಿದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ತಾ. ಸ. ನೌ. ಸಂ. ಅಧ್ಯಕ್ಷ ಸಿ. ಜೆ. ಶ್ರೀನಿವಾಸ ಮಾತನಾಡಿದರು , ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶಾಹಿದಾ ಭಾನು ಹಾಗೂ ಕ ಸಾ. ಪ. ಹೋಬಳಿ ಘಟಕದ ಅಧ್ಯಕ್ಷರುಗಳಾದ ಶೇಖರ್ ಪಾಲಹಳ್ಳಿ(ಬೆಳಗೊಳ), ಅರಕೆರೆ ರಾಮಕೃಷ್ಣ (ಅರಕೆರೆ )ಶಂಕರ್ ಚಂದಗಾಲು (ಕಸಬಾ ), ಲೋಕೇಶ್ ದರಸಗುಪ್ಪೆ (ಕೆ. ಶೆಟ್ಟಹಳ್ಳಿ)ಉಪಸ್ಥಿತರಿದ್ದರು.
Mandya
ಜಿಲ್ಲೆಯಲ್ಲಿ ರೈತ ಉತ್ಪಾದಕಾ ಸಂಘಗಳು ಹೆಚ್ಚಾಗಬೇಕು: ಡಾ.ಕುಮಾರ

ಮಂಡ್ಯ : ರೈತರು ತಾವು ಬೆಳೆದ ಬೆಳೆಗಳಿಗೆ ತಾವೇ ಬೆಲೆ ಕಟ್ಟಿ ಮಾರಾಟ ಮಾಡುವ ರೀತಿ ಬದಲಾವಣೆ ಮಾಡಿಕೊಳ್ಳಲು ರೈತ ಉತ್ಪಾದಕ ಸಂಘಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಸಂಪನ್ಮೂಲ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ವ್ಯಾಪಾರ ಮತ್ತು ವ್ಯಾವಹಾರಿ ಅಭಿವೃದ್ಧಿಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ, ಕೃಷಿಯಲ್ಲಿ ತನ್ನದೇ ಆದ ವಿಶೇಷ ಮಹತ್ವವವನ್ನು ಹೊಂದಿದೆ. ರೈತರು ಆರ್ಥಿಕವಾಗಿ ಸದೃಢರಾಗಲು ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆಯಾಗಬೇಕು ರೈತ ಉತ್ಪದಕಾ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ರೈತರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು ಎಂದರು.
ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕೆಂದರೆ, ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಬೇಕು., ರೈತರು ನಿಜವಾಗಿಯೂ ಸ್ವಾವಲಂಬಿಗಳಾಗಬೇಕೆಂದರೆ ರೈತ ಉತ್ಪಾದಕರ ಸಂಸ್ಥೆಗಳ ಅವಶ್ಯಕತೆ ಇದೆ, ಇದರಿಂದ ರೈತರು ಸಹ ಕಂಪನಿಗಳು ಮಾಲೀಕರಾಗಬಹುದು.
ಸರ್ಕಾರದ ಪಿ.ಎಂ.ಎಫ್. ಇ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು, ರೈತರು ಬೆಳೆದ ಬೆಳೆಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಗ್ರಾಹಕರ ಗಮನ ಸೆಳೆಯುವ ರೀತಿ ಬ್ರ್ಯಾಡಿಂಗ್ ಆಗಬೇಕು. ಇದರಿಂದ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾರುಕೊಟ್ಟೆ ದೊರೆಯುತ್ತದೆ ಎಂದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ , ಇದು ಜಿಲ್ಲೆಯಲ್ಲಿ ಕೃಷಿಯ ಕುರಿತು ನಡೆಸುತ್ತಿರುವ ನನ್ನ ಮೊದಲ ಕಾರ್ಯಕ್ರಮ, ದೇಶದ ಜಿ.ಡಿ.ಪಿ.ಗೆ ಸೇವಾ ವಲಯದ ಕೊಡುಗೆ ಅತಿ ಹೆಚ್ಚು, ಅದರಲ್ಲಿ ಅತಿ ಹೆಚ್ಚು ಜನ ಕೃಷಿಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ, ಶ್ರಮ ಪಟ್ಟು ದುಡಿಯುತ್ತಿರುವ ರೈತರಿಗಿಂತ ಹೆಚ್ಚು ಕೃಷಿಗೆ ಸಂಬಂಧಿಸಿದ ಕಂಪನಿಗಳು ಆದಾಯವನ್ನು ಗಳಿಸುತ್ತಿವೆ, ರೈತರ ಆದಾಯ ಹೆಚ್ಚಬೇಕು ಎಂದರೆ ಇಂತಹಾ ಕಾರ್ಯಾಗಾರಗಳು ಮುಖ್ಯ ಮುಕ್ತ ಮನಸ್ಸಿನಿಂದ ವಿಚಾರಗಳು ವಿನಿಮಯ ಮಾಡಿಕೊಂಡು ಅದನ್ನು ಕಾರ್ಯ ಪ್ರವೃತ್ತಿಯಲ್ಲಿ ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ , ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ, ರೈತ ಉತ್ಪಾದಕ ಸಂಸ್ಥೆಗಳು ಮುಖ್ಯಸ್ಥರುಗಳಾದ ಕರಸವಾಡಿ ಮಹದೇವ್, ಹರೀಶ್, ಹನುಮಂತೇಗೌಡ, ಸುಬ್ರಹ್ಮಣ್ಯ, ಮಾಯಣ್ಣ, ಚಿಕ್ಕೇಗೌಡ, ಜಗದೀಶ್ ಬಾಬು ಮತ್ತು ಇನ್ನಿತರ ಉಪಸ್ಥಿತರಿದ್ದರು.
Mandya
ತಮ್ಮನ ಹ*ತ್ಯೆಗೆ ಅಣ್ಣನಿಂದಲೇ ಸುಫಾರಿ : ಪ್ರಕರಣ ಭೇದಿಸಿದ ಪೋಲೀಸರ

ಮಂಡ್ಯ :- ಲಕ್ಷ್ಮಿ ಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಕೃಷ್ಣೇಗೌಡ ಎಂಬುವವರ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದು, ತಮ್ಮನ ಕೊಲೆಗೆ ಅಣ್ಣನೇ ಸುಫಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಕೆ ಎಂ ದೊಡ್ಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ತಮ್ಮ ಕೃಷ್ಣೇಗೌಡನ ಕೊಲೆಗೆ ಅಣ್ಣ ಗುಡ್ಡಪ್ಪ ಶಿವನಂಜೇಗೌಡ 5 ಲಕ್ಷ ಸುಪಾರಿ ನೀಡಿದ್ದು, ಎಲ್ಲಾ ಸುಪಾರಿ ಹಂತಕರನ್ನು ಬಂದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳವಳ್ಳಿ ತಾಲೂಕು ನಿಟ್ಟೂರು ಗ್ರಾಮದ ಲೇಟ್ ಸ್ವಾಮಿರ ಪುತ್ರ ಚಂದ್ರಶೇಖರ್ ಎನ್ ಎಸ್, ಮದ್ದೂರು ತಾಲೂಕು ಕೊಪ್ಪದ ಬೋರೇಗೌಡರ ಪುತ್ರ ಆಟೋ ಚಾಲಕ ಸುನಿಲ್ ಬಿ, ಹಾಗೂ ಪ್ರಕಾಶ್ ರವರ ಪುತ್ರ ಮರದ ವ್ಯಾಪಾರಿ ಕೆ ಪಿ ಉಲ್ಲಾಸ್ ಗೌಡ, ಆಬಲವಾಡಿ ಗ್ರಾಮದ ಲೇಟ್ ಮರಿಯಯ್ಯರ ಪುತ್ರ ಪ್ರತಾಪ ಎ ಎಂ,ಹಾಗೂ ಲೇಟ್ ಮರಿಯಪ್ಪರ ಪುತ್ರ ಆಟೋ ಚಾಲಕ ಕೆ ಎಂ ಅಭಿಷೇಕ್ ಮತ್ತು ಲೇಟ್ ಕೃಷ್ಣಪ್ಪ ರ ಪುತ್ರ ಕಾರು ಚಾಲಕ ಕೆ ಶ್ರೀನಿವಾಸ್, ರಾಮನಗರ ಜಿಲ್ಲೆಯ ಜಕ್ಕೇಗೌಡನ ದೊಡ್ಡಿ ಗ್ರಾಮದ ಹನುಮೇಗೌಡರ ಪುತ್ರ ಹರ್ಷ ಹಾಗೂ ಕೊಲೆಯಾದ ಕೃಷ್ಣೆಗೌಡನ ಅಣ್ಣ ಶಿವನಂಜೇಗೌಡನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕೆ ಎಂ ದೊಡ್ಡಿ ಪೋಲಿಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಗೌಡನದೊಡ್ಡಿ ಗ್ರಾಮದಮಾದನಹಟ್ಟಿ ಅಮ್ಮನ ದೇವಸ್ಥಾನದ ಪಕ್ಕದಲ್ಲಿರುವ ಜಮೀನಿನಲ್ಲಿ ಅಪರಿಚಿತ ಮೂರು ಜನರು ಮಾರಕಾಸ್ತ್ರಗಳಿಂದ ಕೃಷ್ಣಗೌಡನನ್ನು ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು ಈ ಬಗ್ಗೆ ಶಂಕರೇಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ನಿಟ್ಟೂರು ಗ್ರಾಮದ ಚಂದ್ರಶೇಖರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯಾದ ಕೃಷ್ಣೆಗೌಡ ಸಾಲ ಮಾಡಿಕೊಂಡಿದ್ದು ಸಾಲವನ್ನು ಅಣ್ಣನಾದ ಗುಡ್ಡಪ್ಪ ಶಿವನಂಜೇಗೌಡ ತೀರಿಸಿದ್ದನು, ಇದಕ್ಕೆ ಪ್ರತಿಯಾಗಿ ತನ್ನ ಜಮೀನನ್ನು ಅತ್ತಿಗೆ ಹೆಸರಿಗೆ ಮಾಡಿಕೊಡಲಾಗಿತ್ತು, ಆದರೆ ಜಮೀನನ್ನು ಬಿಟ್ಟುಕೊಡದ ಕೃಷ್ಣೇಗೌಡ ಅಕ್ಕತಂಗಿಯರನ್ನು ಪುಸಲಾಯಿಸಿ ಜಮೀನು ವಿಚಾರದಲ್ಲಿ ಶಿವ ನಂಜೇಗೌಡನ ವಿರುದ್ಧ ಕೇಸು ದಾಖಲಿಸಿದ್ದನು, ಅಷ್ಟೇ ಅಲ್ಲದೆ ಶಿವ ನಂಜೇಗೌಡನ ವಿರುದ್ಧ ಮಾತನಾಡುತ್ತಾ ಅವಮಾನ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದನು ಇದರಿಂದ ರೊಚ್ಚಿಗೆದ್ದ ಅಣ್ಣ ತಮ್ಮನನ್ನೆ ಕೊಲೆ ಮಾಡಲು 5 ಲಕ್ಷ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕೊಲೆ ಪ್ರಕರಣದ ಆರೋಪಿಗಳ ಪತ್ತಗೆ ಜಿಲ್ಲಾ ಅಪರ ಪೋಲೀಸ್ ಅಧೀಕ್ಷಕರುಗಳಾದ .ಸಿ.ಇ ತಿಮ್ಮಯ್ಯ,ಎಸ್.ಇ. ಗಂಗಾಧರಸ್ವಾಮಿ. ಮಾರ್ಗದರ್ಶನದಲ್ಲಿ ಮಳವಳ್ಳಿ ಉಪ-ವಿಭಾಗದ ಡಿವೈಎಸ್.ಪಿ. .ವಿ ಕೃಷ್ಣಪ್ಪ ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಪೊಲೀಸ ಇನ್ ಸ್ಪೆಕ್ಟರ್ ಎಸ್.ಆನಂದ್, ಹೆಡ್ ಕಾನ್ಸ್ ಟೇಬಲ್ ಗಳಾದ ನಟರಾಜು, ಮಹೇಶ್, ರಾಜಶೇಖರ್, ರಾಜೇಂದ್ರ, ಶ್ರೀಕಾಂತ್, ಪೊಲೀಸ್ ಕಾನ್ಸ್ಟೇಬಲ್ಗಳಾದ ವಿಶ್ವಲ್ ಜೆ. ಕರಿಗಾರ, ಅರುಣ್, ಶ್ರೀಕಾಂತ್.ಅನಿಲ್ ಕುಮಾರ್, ಕೌಶಿಕ್, ಚಿರಂಜೀವಿ, ವಿಷ್ಣುವರ್ಧನ, ಕಿರಣ್ ಕುಮಾರ್, ರವಿಕಿರಣ್, ಲೊಕೇಶ್ ಮತ್ತು ವಾಸುದೇವ ರನ್ನು ಒಳಗೊಂಡ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡದ ಅಧಿಕಾರಿಗಳು ಮತ್ತು ಸಿಬ್ಬಂಧಿಯವರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
Mandya
ಮಂಡ್ಯ ತಾಲ್ಲೂಕು ಕಚೇರಿಗೆ ಡಿಸಿ ಅನಿರೀಕ್ಷಿತ ಭೇಟಿ: ಪರಿಶೀಲನೆ

ಮಂಡ್ಯ : ತಾಲ್ಲೂಕು ಕಚೇರಿಗೆ ಡಿಸಿ ಅನಿರೀಕ್ಷಿತ ಭೇಟಿ ನೀಡು ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸಿ ಕಾನೂನು ರೀತ್ಯ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ತಾಲ್ಲೂಕು ಕಚೇರಿಗೆ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಡತ ವಿಲೇವಾರಿ ಕುರಿತು ಮಾಹಿತಿ ಪಡೆದುಕೊಂಡು, ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿಯಾಗಬೇಕು ಎಂದರು. ವಿನಾಕರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು ಎಂದು ಸೂಚನೆ ನೀಡಿದರು.
ಸಹಾಯವಾಣಿ: ಗ್ರಾಮ ಆಡಳಿತಾಧಿಕಾರಿಗಳ ಕೆಲಸ ಪ್ರಮುಖವಾಗಿದ್ದು, ಅವರು ಅನಿರ್ಧಿಷ್ಟ ಅವಧಿ ಮುಷ್ಕರ ಕೈಗೊಂಡಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ತೊಂದರೆಯಾಗುತ್ತಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯನ್ನು ಕಂದಾಯ ನಿರೀಕ್ಷಕರ ಲಾಗ್ ಇನ್ ಗೆ ವರ್ಗಾಯಿಸಲಾಗಿದೆ.
ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುರ್ತಾಗಿ ಆದಾಯ ಅಥವಾ ಜಾತಿ ಪ್ರಮಾಣ ಪತ್ರ ಬೇಕಿದ್ದಲ್ಲಿ ನೀಡಲು ಸಹಾಯವಾಣಿ ಸಹ ತೆರೆಯಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಕಡತಗಳ ಗಣಕೀಕರಣ ಕೆಲಸಗಳನ್ನು ಸಹ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಮುಷ್ಕರ ನಿರತ ಗ್ರಾಮ ಆಡಳಿತಾಧಿಕಾರಿಗಳಿಂದ ಮನವಿ ಸ್ವೀಕರಿಸಿದರು.
-
Mysore10 hours ago
ಲೋಕಾಯುಕ್ತ ಬಲೆಗೆ ಬಿದ್ದ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಶಿವಶಂಕರ್
-
Kodagu13 hours ago
ಯುವ ಕಾಂಗ್ರೆಸ್ಗೆ ನೀಡಿದ್ದ ರಾಜೀನಾಮೆ ಹಿಂಪಡೆದ ಅನೂಪ್ ಕುಮಾರ್
-
Kodagu10 hours ago
ಸುಗ್ರಿವಾಜ್ಞೆ ಅನುಷ್ಠಾನಕ್ಕೂ ಮೊದಲು ಬಡವರ ಸಾಲಮನ್ನಾ ಮಾಡಲಿ: ಯುವ ಜೆಡಿಎಸ್ ಆಗ್ರಹ
-
Mandya10 hours ago
ಮತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವತಿಯರು ಸಾ**ವು
-
Mandya12 hours ago
ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನದೊಳಗಾಗಿ ಹಣ ಪಾವತಿ ಮಾಡಿ: ಡಾ.ಕುಮಾರ
-
Mysore10 hours ago
ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಕೆ ಮಾಡಬೇಕು: ಪುರುಷೋತ್ತಮ ಬಿಳಿಮಲೆ
-
Kodagu10 hours ago
ಮೃ*ತರ ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ ಮಂತರ್ ಗೌಡ
-
Hassan13 hours ago
ರಾಜ್ಯದಲ್ಲಿ ಕ್ಷುಲ್ಲಕ ರಾಜಕಾರಣಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ: ಎಚ್ಡಿಕೆ