Connect with us

Mysore

ಒಂದು ಲಕ್ಷ ರೈತ ಕುಟುಂಬಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 970 ಕೋಟಿ ಸಾಲ ನೀಡಲಾಗಿದೆ – ಹುಣಸೂರು ಶಾಸಕ ಜಿ. ಡಿ. ಹರೀಶ್ ಗೌಡ

Published

on

ಸಾಲಿಗ್ರಾಮ : ಲಕ್ಷ ರೈತ ಕುಟುಂಬಗಳಿಗೆ 970 ಕೋಟಿ ಸಾಲ ಕಳೆದ 5 ವರ್ಷಗಳ ಅವಧಿಯಲ್ಲಿ ಮೈಸೂರು – ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಒಂದು ಲಕ್ಷ ರೈತ ಕುಟುಂಬಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 970 ಕೋಟಿ ಸಾಲ ನೀಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಹುಣಸೂರು ಶಾಸಕ ಜಿ. ಡಿ. ಹರೀಶ್ ಗೌಡ ಹೇಳಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಾಣ ಮಾಡಿರುವ ಆಡಳಿತ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡಿ ರೈತರಿಗೆ ಕೃಷಿ ಸಾಲ ನೀಡಿದ್ದೇನೆ ಎಂದರು.
ಈ ಬ್ಯಾಂಕ್‌ನಲ್ಲಿ ಸುಮಾರು ೨೭ ಕೋಟಿ ರೂ ಭ್ರಷ್ಟಾಚಾರ ನಡೆದು ಬ್ಯಾಂಕ್ ಮುಚ್ಚುವ ಸ್ಥಿತಿಗೆ ಬರುವ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದಂತವ ರ ಶಿಫಾರಸ್ಸಿನ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದ್ಯತೆ ಕೊಟ್ಟು ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಆದೇಶ ಮಾಡಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಮಾಡಿದರೂ ಸಹ ಸರ್ಕಾರಕ್ಕೆ ಮತ್ತು ದೂರು ಕೊಟ್ಟವರಿಗೆ ಲಾಭವಾಗುವುದಿಲ್ಲ, ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಐದು ವರ್ಷದ ಅವಧಿಯಲ್ಲಿ ಲಾಭದತ್ತ ಕೊಂಡ್ಯೂಯಲ್ಲು ಶ್ರಮಿಸಿದ್ದೇನೆ, ಸುಮಾರು ೯೭೭ ಕೋಟಿಯಷ್ಟು ಹಣ ಠೇವಣಿ ಹಿಡಲು ನಮ್ಮ ಆಡಳಿತ ಮಂಡಳಿಯ ಶ್ರಮಯಿದೆ ಎಂದು ಹೇಳಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿರುವ ೨೩ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿoದ ೯೩ ಕೋಟಿ ಸಾಲವನ್ನು ೨೦೯ ಕೋಟಿ ರೂಗೆ ಏರಿಸಲಾಗಿದೆ. ಇದರಿಂದ ರೈತ ಬಾಂಧವರಿಗೆ ಅನುಕೂಲವಾಗಿದ್ದು ಮುಚ್ಚುವ ಹಂತದಲ್ಲಿದ್ದ ಹೆಬ್ಬಾಳು ಸಂಘವನ್ನು ಪ್ರಗತಿಯತ್ತ ಕೊಂಡ್ಯೂಯಲು ಕಾರಣರಾದ ಇಲ್ಲಿನ ಸಿಇಒ ಡಿ.ಎಸ್.ಚಂದ್ರಶೇಖರ್‌ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದೇ ಸಂರ್ಧಭದಲ್ಲಿ ಸಂಘದ ವ್ಯಾಪ್ತಿಯ ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಲಾದ ಸಾಲ ಸೌಲಭ್ಯದ ಚೆಕ್‌ಗಳನ್ನು ವಿತರಿಸಲಾಯಿತು.

ಶಾಸಕ ಡಿ. ರವಿಶಂಕರ್ ಮಾತನಾಡಿ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿರುವ ನಾನು ನನ್ನ ಅಧಿಕಾರವಧಿಯಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣ ಮಾಡದೆ ಉತ್ತಮ ಆಡಳಿತ ನೀಡುವ ಮೂಲಕ ಕ್ಷೇತ್ರದಲ್ಲಿ ಸರ್ವ ಜನಾಂಗದ ತೋಟ ನಿರ್ಮಾಣ ಮಾಡಲಿದ್ದೇನೆ.
ರೈತರಿಗೆ ಅನುಕೂಲ ಕಲ್ಪಿಸುತ್ತಿರುವ ಸಹಕಾರ ಸಂಘಗಳ ಏಳಿಗೆಗೆ ಮತ್ತು ಅವುಗಳ ಆರ್ಥಿಕ ಅಭಿವೃದ್ದಿಗೆ ಶ್ರಮಿಸಲು ಸದಾ ಬದ್ದನಾಗಿದ್ದು ಸರ್ಕಾರದಿಂದ ಬರುವ ಸವಲತ್ತು ಕೊಡಿಸಲಾಗುತ್ತದೆ ಎಂದರು.
ಶೇಕಡ ೭೦ ರಷ್ಟು ರೈತರಿರುವ ದೇಶ ಭಾರತ, ದೇಶದ ಬೆನ್ನೆಲು ರೈತರಾಗಿದ್ದು ಅವರುಗಳ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯ ಇದನ್ನು ಅರಿತಿರುವ ನಾನು ರೈತರ ಉದ್ದಾರಕ್ಕಾಗಿ ಇರುವ ಸಹಕಾರ ಸಂಘಗಳ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಸಂಘಗಳು ವಾಣಿಜ್ಯ ಮಳಿಗೆಗಳು ಸೇರಿದಂತೆ ಆಡಳಿತ ಕಛೇರಿ ನಿರ್ಮಾಣ ಮಾಡಲು ಅವಶ್ಯಕವಿರುವ ಅನುದಾನ ನೀಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಜನತೆಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದಕ್ಕಾಗಿ ೬೦ ಸಾವಿರ ಕೋಟಿ ರೂಗಳನ್ನು ಮೀಸಲಿರಿಸಿದೆ. ಆದ್ದರಿಂದ ಇತರ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ನೀಡಲು ವಿಳಂಭವಾಗುತ್ತಿದ್ದು ಮುಂದಿನ ವರ್ಷದಿಂದ ಅನುದಾನಕ್ಕೆ ಕೊರತೆ ಇಲ್ಲ ಆನಂತರ ಅಭಿವೃದ್ದಿಗೆ ಕಾರ್ಯಗಳ ಪರ್ವ ಆರಂಭವಾಗಲಿದೆ ಎಂದು ತಿಳಿಸಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು ರೈತರು ಬೆಳೆ ನಷ್ಟ ಸೇರಿದಂತೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಬರ ಎದುರಾದರೂ ರೈತ ಬಾಂಧವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯ ಮತ್ತು ಸವಲತ್ತುಗಳು ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮಿತ್.ವಿ.ದೇವರಹಟ್ಟಿ, ಹೆಚ್.ಸುಬ್ಬಯ್ಯ, ಸಂಘದ ಅಧ್ಯಕ್ಷ .ಬಾಲಕೃಷ್ಣ, ಉಪಾಧ್ಯಕ್ಷ ಸಿ.ಎಂ.ರಾಜೇಶ್, ನಿರ್ದೇಶಕರಾದ ಸಿ.ಆರ್.ಶಿವಪ್ರಕಾಶ್, ರಾಮಚಂದ್ರನಾಯಕ, ಎನ್.ಪಿ.ಪ್ರಸನ್ನ ಹೆಚ್.ಹೆಚ್.ನಾಗೇಂದ್ರ ಹೆಚ್.ಕೆ.ಧನಂಜಯ, ಮಂಜುನಾಥ್, ಕೇಬಲ್‌ರವಿ, ಶಶಿಕಲಾ, ರೂಪ, ರವಿಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಲಿಂಗರಾಜು, ಸಂಘದ ಸಿಇಒ ಡಿ.ಎಸ್.ಚಂದ್ರಶೇಖರ್, ಮುಂತಾದವರು ಹಾಜರಿದ್ದರು.

ವರದಿ :ಎಸ್ ಬಿ ಹರೀಶ್ 

Continue Reading
Click to comment

Leave a Reply

Your email address will not be published. Required fields are marked *

Mysore

ಸಂವಿಧಾನದಿಂದ ಸೌಹಾರ್ದ ಜೀವನ: ಪ್ರೊ.ಅಸ್ನಾ ಉರೂಜ್

Published

on

ಮೈಸೂರು: ಕೋಮು ಸಂಘರ್ಷ ರಹಿತವಾದ ಸಮಾಜದಲ್ಲಿ ಸೌಹಾರ್ದ ಜೀವನ ನಡೆಸಲು ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಸ್ನಾ ಉರೂಜ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ ಅಂಗವಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಠಿಯ ಮಹತ್ವ ಈಗ ನಮಗೆ ತಿಳಿಯುತ್ತಿದೆ. ಎಷ್ಟರ ಮಟ್ಟಿಗೆ ಅವರು ಆಲೋಚಿಸಿ ಹಲವಾರು ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ನಾವು ಸಂವಿಧಾನವನ್ನು ಸರಿಯಾಗಿ ಪಾಲಿಸಿದರೆ ದೇಶದಲ್ಲಿ ಯಾವುದೇ ಗಲಭೆಗಳು, ಸಂಘರ್ಷಗಳು ನಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.


ಬೇರೆ ದೇಶಗಳಂತೆ ಭಾರತದಲ್ಲೂ ಅಲ್ಪ ಸಂಖ್ಯಾತರಿದ್ದಾರೆ. ಹಿಂದೆ ಧರ್ಮ ಮುಖ್ಯವಾಗಿರಲಿಲ್ಲ. ರಾಷ್ಟ್ರ ಮುಖ್ಯವಾಗಿರುತ್ತಿತ್ತು. ಅದನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು. ಇದನ್ನು ಕಾಪಾಡಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸಂವಿಧಾನ ನೀಡಿರುವ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಮ್ಮ ದೇಶದಲ್ಲಿ ಸಾಕಷ್ಟು ವೈವಿಧ್ಯತೆಯಲ್ಲಿ ಏಕತೆ ಇದೆ. ಬೇರೆ ಬೇರೆ ಧರ್ಮದವರು, ಬೇರೆ ಬೇರೆ ಭಾಷೆಯನ್ನು ಮಾತನಾಡುವವರು ಇದ್ದಾರೆ. ಇಷ್ಟೆಲ್ಲಾ ವೈವಿದ್ಯತೆ ಇದ್ದರೂ ನಮ್ಮಲ್ಲಿ ಏಕತೆ ಇದೆ. ಇಲ್ಲಿಯವರೆಗೂ ನಾವೆಲ್ಲರೂ ಒಟ್ಟಿಗೆ ಏಕತೆಯಿಂದ ಬದುಕಿದ್ದೇವೆ. ಇದನ್ನೇ ನಾವು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಮಾತನಾಡಿ, ಸಮ ಸಮಾಜವನ್ನು ನಿರ್ಮಿಸಬೇಕಾದರೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಬೇಕು. ಶಿಕ್ಷಣ ಬಹಳ ಮುಖ್ಯ. ಅಲ್ಪ ಸಂಖ್ಯಾತರ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಮಾನತೆಯನ್ನು ಬೆಳೆಯುತ್ತದೆ ಹಾಗೂ ಸಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎನ್.ಕೆ.ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಆನಂದ್ ಕುಮಾರ್, ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಎಂ.ರಾಮನಾಥ ನಾಯುಡು, ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಮೊಹಮ್ಮದ್ ನಸ್ರುಲ್ಲಾ ಖಾನ್, ಡಾ.ಸೈಯದ ಇಶ್ರತ್ ಫಾತಿಮಾ ಹಾಜರಿದ್ದರು.

 

Continue Reading

Mysore

ಮೈಸೂರು ಕೇಂದ್ರ ಕಾರಾಗೃಹದಲ್ಲಿ ದಿಢೀರ್ ತಪಾಸಣೆ: 100ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆ

Published

on

ಮೈಸೂರು : ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ದಿಢೀರ್ ನಡೆಸಿದ ತಪಾಸಣೆ ವೇಳೆ 100ಕ್ಕೂ ಹೆಚ್ಚು ಮೊಬೈಲ್ ಗಳು ಪತ್ತೆ ಆಗಿರುವ ಆತಂಕಕಾರಿ ಸಂಗತಿ ಬೆಳಕಿಗೆ
ಕಳೆದ ರಾತ್ರಿ 10:55 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಕಾರಾಗೃಹದ ವಿವಿಧ ವಿಭಾಗಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಗಿದೆ.

ದಿಢೀರ್ ತಪಾಸಣೆ ನಡೆಸಿದ ವೇಳೆ 109 ಮೊಬೈಲ್, 11 ಸಿಮ್ ಕಾರ್ಡ್ ಗಳು, 2 ಚಾರ್ಜರ್ ಹಾಗೂ ಚಾರ್ಜಿಂಗ್ ಕೇಬಲ್ ಗಳು ಪತ್ತೆ. ಸದರಿ ವಸ್ತುಗಳು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾಗಿರುವದರಿಂದ ಮಂಡಿ ಠಾಣೆ ಪೊಲೀಸರ ವಶಕ್ಕೆ ನೀಡಿ ಪ್ರಕರಣ ದಾಖಲಿಸಲಾಗಿದೆ.

ದಿಢೀರ್ ಕಾರ್ಯಾಚರಣೆ ‌ನಡೆಸಿದ ಕಾರಾಗೃಹದ ಸಿಬ್ಬಂದಿಗಳ ತಂಡಕ್ಕೆ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಶ್ಲಾಘನೀಯ ಎಂದಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗಿಯಾದ ಮೈಸೂರು ಕಾರಾಗೃಹದ ಸಿಬ್ಬಂದಿಗಳಿಗೆ 30 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

Continue Reading

Mysore

ಟಿ.ನರಸೀಪುರ ಕಾರ್ಯಕರ್ತರಿಂದ ಕೇಂದ್ರ ಸಚಿವ ಎಚ್‌ಡಿಕೆ ಹುಟ್ಟುಹಬ್ಬ ಆಚರಣೆ

Published

on

ತಿ.ನರಸೀಪುರ: ಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬವನ್ನು ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇಗುಲದಲ್ಲಿ ಮಂಗಳವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಲ್ಲಿ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಳಿಗೆ ಹಣ್ಣುಹಂಪಲು ವಿತರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಸಿಬಿಹುಂಡಿ ಚಿನ್ನಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ರೈತ ಸಾಲ ಮನ್ನಾ, ಗ್ರಾಮ ವಾಸ್ತವ್ಯ, ಜನತಾ ದರ್ಶನ ಮತ್ತು ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.

ಭವಿಷ್ಯದಲ್ಲಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ರೈತ, ಬಡ ಜನರ ಅಭ್ಯುದಯಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಲಿ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಹೆಮ್ಮಿಗೆ ಹೊನ್ನಯ್ಯ ಜಿಪಂ ಮಾಜಿ ಸದಸ್ಯ ಜಯಪಾಲ್ ಭರಣಿ, ಕರೋಹಟ್ಟಿ ಪ್ರಭುಸ್ವಾಮಿ,ಮಾವಿನಹಳ್ಳಿ ರಾಜೇಶ್, ಕಟ್ಟೆಪುರ ಸಿದ್ದಪ್ಪ, ಸೋಸಲೆ ರಾಜಣ್ಣ, ನಿಲಸೋಗೆ ಮಹೇಶ್, ಗಣೇಶ್,ತಿರುಮಕೂಡಲು ಜಯರಾಮು, ಬನ್ನ ಹಳ್ಳಿಹುಂಡಿ ಶಿವಕುಮಾರ್, ಶೆಟ್ಟಹಳ್ಳಿ ನಾಗರಾಜ ಮೂರ್ತಿ, ಗಣೇಶ್,ಕೆ.ಜಿ. ರಾಜಪ್ಪ, ಜಗಪತಿ ಸೇರಿದಂತೆ ಇತರರು ಹಾಜರಿದ್ದರು.

Continue Reading

Trending

error: Content is protected !!